ದೇಶ-ವಿದೇಶ

ಕಾಕ್ರೋಚ್ ದೆಹಲಿ ದಂಗೆ| ನಿನ್ನೆ ಏನೇನಾಯ್ತು? ಫುಲ್ ಡೀಟೈಲ್ಸ್ ನೋಡಿ…

ಸಮಗ್ರ ನ್ಯೂಸ್: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಶಿಕ್ಷಣ ವ್ಯವಸ್ಥೆಯ ಸಮಗ್ರ ಸುಧಾರಣೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸೋಮವಾರ ಆಯೋಜಿಸಿದ್ದ ‘ಸಂಸದ್ ಚಲೋ’ ಪ್ರತಿಭಟನೆಯು ಆರಂಭದಲ್ಲಿ ಶಾಂತಿಯುತವಾಗಿ ನಡೆದರೂ, ನಂತರದಲ್ಲಿ ಹಿಂಸಾಚಾರಕ್ಕೆ ತಿರುಗಿತು. ಕೆಲವು ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ 50ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಕೆಲವು ಪ್ರತಿಭಟನಾಕಾರರಿಗೂ ಗಾಯಗಳಾಗಿವೆ. ಘರ್ಷಣೆ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ಮಂದಿಯನ್ನು […]

ಕಾಕ್ರೋಚ್ ದೆಹಲಿ ದಂಗೆ| ನಿನ್ನೆ ಏನೇನಾಯ್ತು? ಫುಲ್ ಡೀಟೈಲ್ಸ್ ನೋಡಿ… Read More »

ಇಂದಿನಿಂದ ಕೇಂದ್ರ ಮುಂಗಾರು ಅಧಿವೇಶನ| ಪ್ರಮುಖ ಮಸೂದೆಗಳ ಮಂಡನೆಗೆ ಸಿದ್ಧತೆ| ಸರ್ಕಾರದ ತರಾಟೆಗೆ ವಿರೋಧ ಪಕ್ಷಗಳಿಂದ ವ್ಯೂಹ

ಸಮಗ್ರ ನ್ಯೂಸ್: ಸಂಸತ್ತಿನ ಮುಂಗಾರು ಅಧಿವೇಶನವು ಇಂದಿನಿಂದ (ಜು.20) ಆರಂಭವಾಗುತ್ತಿದ್ದು, ಈ ಬಾರಿಯ ರಾಜಕೀಯ ಲೆಕ್ಕಾಚಾರಗಳು ಸಂಪೂರ್ಣವಾಗಿ ಭಿನ್ನವಾಗಿವೆ. ಒಂದೆಡೆ ಕೇಂದ್ರ ಸರ್ಕಾರವು ಕೆಲವು ಪ್ರಮುಖ ಕಾನೂನುಗಳನ್ನು ಜಾರಿಗೆ ತರಲು ಮಸೂದೆಗಳನ್ನು ಮಂಡಿಸಲು ಸಿದ್ಧತೆ ನಡೆಸಿದ್ದರೆ, ಇನ್ನೊಂದೆಡೆ ಪ್ರತಿಪಕ್ಷಗಳು ಹತ್ತಾರು ಪ್ರಮುಖ ಜನಪರ ಹಾಗೂ ವಿವಾದಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವ್ಯೂಹ ರಚಿಸಿವೆ. ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿರುವ 6 ಪ್ರಮುಖ ಮಸೂದೆಗಳಲ್ಲಿ ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆ (FCRA) ಮತ್ತು ಆದಾಯ ತೆರಿಗೆ

ಇಂದಿನಿಂದ ಕೇಂದ್ರ ಮುಂಗಾರು ಅಧಿವೇಶನ| ಪ್ರಮುಖ ಮಸೂದೆಗಳ ಮಂಡನೆಗೆ ಸಿದ್ಧತೆ| ಸರ್ಕಾರದ ತರಾಟೆಗೆ ವಿರೋಧ ಪಕ್ಷಗಳಿಂದ ವ್ಯೂಹ Read More »

ಮಾಜಿ ಪ್ರಧಾನಿ ಹೆಚ್.ಡಿ‌ ದೇವೇಗೌಡರ ಪತ್ನಿ ಚೆನ್ನಮ್ಮ ಇನ್ನಿಲ್ಲ

ಸಮಗ್ರ ನ್ಯೂಸ್: ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚನ್ನಮ್ಮ (89) ಅವರು ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ, ಜುಲೈ 15ರಂದು ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ಕೊನೆಯುಸಿರೆಳೆದಿದ್ದಾರೆ. ದೇವೇಗೌಡರ ದೀರ್ಘ ಹಾಗೂ ಸುದೀರ್ಘ ರಾಜಕೀಯ ಪಯಣದಲ್ಲಿ ಸದಾ ನೆರಳಾಗಿ, ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸಿದ್ದ ಗಟ್ಟಿಗಿತ್ತಿ ಚನ್ನಮ್ಮ ಅವರ ಅಗಲಿಕೆ

ಮಾಜಿ ಪ್ರಧಾನಿ ಹೆಚ್.ಡಿ‌ ದೇವೇಗೌಡರ ಪತ್ನಿ ಚೆನ್ನಮ್ಮ ಇನ್ನಿಲ್ಲ Read More »

20 ದಿನ ಪೂರೈಸಿದ ಸೋನಂ ವಾಂಗ್ಚುಕ್ ನಿರಶನ

ಸಮಗ್ರ ನ್ಯೂಸ್: ದೇಶದಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಇತ್ತೀಚೆಗೆ ನಡೆದ ನೀಟ್‌ ಯುಜಿ-2026 ಮೊದಲ ಪರೀಕ್ಷೆಯಲ್ಲಿ ನಡೆದ ಪ್ರಶ್ನೆ ಪತ್ರಿಕೆಸೋರಿಕೆ ವಿಚಾರಕ್ಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ವಜಾಗೊಳಿಸುವಂತೆ ಆಗ್ರಹಿಸಿ ಪರಿಸರ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಮ್‌ ವಾಂಗ್ಚುಕ್‌ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆಸುತ್ತಿರುವ ನಿರಶನ ಶುಕ್ರವಾರಕ್ಕೆ 20 ದಿನ ಪೂರೈಸಿದೆ. ಈಗಾಗಲೇ 20ದಿನಗಳ ಆಮರಣ ಉಪವಾಸ ಸತ್ಯಾಗ್ರಹದಿಂದ ಬರೋಬ್ಬರಿ 9ಕೆ.ಜಿಗೂ ಅಧಿಕ ತೂಕ ಇಳಿಕೆಯಾಗಿ, ಆರೋಗ್ಯ ಕ್ಷೀಣಿಸುತ್ತಿರುವ ಹೊತ್ತಿನಲ್ಲೇ

20 ದಿನ ಪೂರೈಸಿದ ಸೋನಂ ವಾಂಗ್ಚುಕ್ ನಿರಶನ Read More »

ಇರಾನ್ – ಅಮೇರಿಕಾ ಯುದ್ಧಕ್ಕೆ ಅಧಿಕೃತ ಎಂಟ್ರಿ ಕೊಟ್ಟ ಗಲ್ಫ್ ರಾಷ್ಟ್ರ| ಟೆಹ್ರಾನ್ ಮೇಲೆ‌ ಭೀಕರ ದಾಳಿ ನಡೆಸಿದ ಯುಎಇ

ಸಮಗ್ರ ನ್ಯೂಸ್: ಅಮೇರಿಕ ಇರಾನ್ ಮೇಲೆ ತನ್ನ ಭೀಕರ ದಾಳಿಗಳನ್ನು ಮುಂದುವರೆಸಿದೆ. ಆದರೆ ಮೊದಲ ಬಾರಿಗೆ ಇರಾನ್ ಮೇಲೆ ಯುಎಇ ದಾಳಿ ನಡೆಸಿ ಅಚ್ಚರಿ ಮೂಡಿಸಿದೆ. ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಭಯಾನಕ ದಾಳಿಗಳನ್ನು ನಡೆಸಿದೆ. ಚಬಹಾರ್ ಬಂದರು, ಬುಶೆಹರ್ ಪರಮಾಣು ಸಂಕೀರ್ಣ, ಇರಾನಿಶಾಹರ್ ವಿಮಾನ ನಿಲ್ದಾಣದಲ್ಲಿ ಪ್ರಬಲ ಸ್ಫೋಟಗಳು ಸಂಭವಿಸಿವೆ. ರೈಲ್ವೆ ಸೇತುವೆಗಳು ಮತ್ತು ರಸ್ತೆಗಳು ಸೇರಿದಂತೆ ಇರಾನ್‌ನ ಮೂಲಸೌಕರ್ಯಗಳನ್ನು ಅಮೆರಿಕ ಪ್ರಮುಖ ಗುರಿಯಾಗಿಸಿಕೊಂಡಿದೆ. ಈ ದಾಳಿಗಳಿಂದ ರೈಲ್ವೆ ಮತ್ತು ರಸ್ತೆಗಳು

ಇರಾನ್ – ಅಮೇರಿಕಾ ಯುದ್ಧಕ್ಕೆ ಅಧಿಕೃತ ಎಂಟ್ರಿ ಕೊಟ್ಟ ಗಲ್ಫ್ ರಾಷ್ಟ್ರ| ಟೆಹ್ರಾನ್ ಮೇಲೆ‌ ಭೀಕರ ದಾಳಿ ನಡೆಸಿದ ಯುಎಇ Read More »

ದೇಶದ ಮೊದಲ ‘ಹೈಡ್ರೋಜನ್’ ಚಾಲಿತ ರೈಲಿಗೆ ಪ್ರಧಾನಿ ಚಾಲನೆ

ಸಮಗ್ರ ನ್ಯೂಸ್: ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಈ ರೈಲು ಉತ್ತರ ರೈಲ್ವೆಯಡಿಯಲ್ಲಿ ಹರಿಯಾಣದ 89 ಕಿ.ಮೀ ಜಿಂದ್-ಸೋನಿಪತ್ ಮಾರ್ಗದಲ್ಲಿ ಚಲಿಸಲಿದೆ. ದೇಶದ ಈ ಪ್ರಥಮ ಹೈಡ್ರೋಜನ್ ರೈಲು ಆರಂಭದಲ್ಲಿ ಉತ್ತರ ರೈಲ್ವೆ ವಲಯದ ಅಡಿಯಲ್ಲಿ ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವಿನ 89 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದೆ. ಈ ರೈಲು ಜಿಂದ್ ಜಂಕ್ಷನ್, ಗೋಹಾನಾ ಜಂಕ್ಷನ್ ಹಾಗೂ ಸೋನಿಪತ್ ಮಾರ್ಗವಾಗಿ ಸಂಚರಿಸಲಿದ್ದು, ಈ ಕಾರಿಡಾರ್‌ನಲ್ಲಿ

ದೇಶದ ಮೊದಲ ‘ಹೈಡ್ರೋಜನ್’ ಚಾಲಿತ ರೈಲಿಗೆ ಪ್ರಧಾನಿ ಚಾಲನೆ Read More »

ನೀಟ್ – ಯುಜಿ ಫಲಿತಾಂಶ ಪ್ರಕಟ| 11.21 ಲಕ್ಷ ಅಭ್ಯರ್ಥಿಗಳು ತೇರ್ಗಡೆ

ಸಮಗ್ರ ನ್ಯೂಸ್: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಗುರುವಾರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ NEET-UG 2026ರ ಫಲಿತಾಂಶವನ್ನು ಪ್ರಕಟಿಸಿದೆ. ದೇಶದಾದ್ಯಂತ MBBS, BDS, ಆಯುಷ್ ಹಾಗೂ ಇತರ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆಯಲು 11.21 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ವೈದ್ಯಕೀಯ ಪ್ರವೇಶ ಮತ್ತು ಕೌನ್ಸೆಲಿಂಗ್ ವೇಳಾಪಟ್ಟಿಗೆ ಯಾವುದೇ ವಿಳಂಬವಾಗದಂತೆ ಫಲಿತಾಂಶವನ್ನು ಸಕಾಲದಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಯನ್ನು ಅಧಿಕೃತ ವೆಬ್ಸೈಟ್ neet.nta.nic.in ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಅಖಿಲ ಭಾರತ ಶ್ರೇಯಾಂಕ (AIR), ರಾಜ್ಯವಾರು

ನೀಟ್ – ಯುಜಿ ಫಲಿತಾಂಶ ಪ್ರಕಟ| 11.21 ಲಕ್ಷ ಅಭ್ಯರ್ಥಿಗಳು ತೇರ್ಗಡೆ Read More »

ಬಂಗಾಳಕೊಲ್ಲಿಯಲ್ಲಿ ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ಹಡಗು ಮುಳುಗಡೆ| ಕನಿಷ್ಠ 500 ರಷ್ಟು ಜನ ಸಾವನ್ನಪ್ಪಿರುವ ಶಂಕೆ

ಸಮಗ್ರ ನ್ಯೂಸ್: ಮ್ಯಾನ್ಮಾರ್‌ನ ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ 2 ದೋಣಿಗಳು ಬಂಗಾಳಕೊಲ್ಲಿಯಲ್ಲಿ ಮಗುಚಿ ಬಿದ್ದು ಅದರಲ್ಲಿರುವ ನೂರಾರು ಜನ ನೀರಿನಲ್ಲಿ ಮುಳುಗಿರುವ ಭೀಕರ ಘಟನೆ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಕನಿಷ್ಠ 500 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್(UNHCR) ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ. ಇದರ ಪ್ರಕಾರ, “2 ದೋಣಿಗಳು ಜೂನ್ ಅಂತ್ಯದಲ್ಲಿ ಮ್ಯಾನ್ಮಾರ್‌ನ ಸಂಘರ್ಷ ಪೀಡಿತ ರಾಖೈನ್ ರಾಜ್ಯದಿಂದ ಹೊರಟಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೋಹಿಂಗ್ಯಾ

ಬಂಗಾಳಕೊಲ್ಲಿಯಲ್ಲಿ ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ಹಡಗು ಮುಳುಗಡೆ| ಕನಿಷ್ಠ 500 ರಷ್ಟು ಜನ ಸಾವನ್ನಪ್ಪಿರುವ ಶಂಕೆ Read More »

ಇರಾನ್ ನ ಚಾಬಹಾರ್ ಬಂದರು ಮೇಲೆ ಅಮೇರಿಕಾ ದಾಳಿ

ಸಮಗ್ರ ನ್ಯೂಸ್: ಅಮೆರಿಕ ಬುಧವಾರ ಇರಾನ್ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಆಗ್ನೇಯ ಬಂದರು ನಗರವಾದ ಚಬಹಾರ್ ಅನ್ನು ಗುರಿಯಾಗಿಸಿಕೊಂಡು ಹೊಸ ದಾಳಿಗಳನ್ನು ನಡೆಸಿದೆ. ಇಲ್ಲಿನ ಆಯಕಟ್ಟಿನ ಶಾಹಿದ್ ಕಲಾಂತರಿ ಬಂದರಿನಲ್ಲಿರುವ ಕಾವಲುಗೋಪುರಕ್ಕೆ ಕ್ಷಿಪಣಿ ಅಪ್ಪಳಿಸಿದ್ದು, ಬೃಹತ್ ಪ್ರಮಾಣದ ಹೊಗೆ ಮತ್ತು ಜ್ವಾಲೆ ಆಕಾಶಕ್ಕೆ ಚಿಮ್ಮಿವೆ. ಒಮಾನ್ ಗಲ್ಫ್ ತೀರದ ಸಿಸ್ತಾನ್ ಮತ್ತು ಬಲುಚೆಸ್ತಾನ್ ಪ್ರಾಂತದಲ್ಲಿರುವ ಚಬಹಾರ್ ಕಾವಲುಗೋಪುರದ ಮೇಲೆ ಅಮೆರಿಕ ನಡೆಸಿದ ಎರಡನೇ ಕ್ಷಿಪಣಿ ದಾಳಿ ಇದಾಗಿದೆ. ಈ ಗೋಪುರವು ಕಡಲ ಭದ್ರತೆ ಮತ್ತು

ಇರಾನ್ ನ ಚಾಬಹಾರ್ ಬಂದರು ಮೇಲೆ ಅಮೇರಿಕಾ ದಾಳಿ Read More »

ಅಮೇರಿಕಾ – ಇರಾನ್ ನಡುವೆ ಸಂಘರ್ಷ| ಕಚ್ಚಾ ತೈಲ ದರ ದಿಢೀರ್ ಏರಿಕೆ

ಸಮಗ್ರ ನ್ಯೂಸ್: ಜಾಗತಿಕ ಇಂಧನ ಸಾಗಣೆಯ ಅತ್ಯಂತ ಪ್ರಮುಖ ಕೊಂಡಿಯಾಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸುವ ಜಿದ್ದಾಜಿದ್ದಿನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸೇನಾ ಸಂಘರ್ಷ ತಾರಕಕ್ಕೇರಿದೆ. ವಿರುದ್ಧ ಪರಸ್ಪರ ಭೀಕರ ದಾಳಿಗಳು ತೀವ್ರಗೊಂಡ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸೋಮವಾರ ಶೇಕಡಾ 4 ಕ್ಕಿಂತಲೂ ಹೆಚ್ಚು ಜಿಗಿತ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಮುಖ ಸೂಚ್ಯಂಕವಾದ ಬ್ರೆಂಟ್ ಕಚ್ಚಾ ತೈಲದ ಸೆಪ್ಟೆಂಬರ್ ಡೆಲಿವರಿ ಭವಿಷ್ಯದ ವಹಿವಾಟು ದರವು ಸೋಮವಾರ ಮುಂಜಾನೆ (ಜಿಎಂಟಿ 03:00

ಅಮೇರಿಕಾ – ಇರಾನ್ ನಡುವೆ ಸಂಘರ್ಷ| ಕಚ್ಚಾ ತೈಲ ದರ ದಿಢೀರ್ ಏರಿಕೆ Read More »