ರಾಷ್ಟ್ರೀಯ

ತ್ರಿಶೂರ್ ನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಪೋಟ| 13 ಮಂದಿ ಸಾವು

ಸಮಗ್ರ ನ್ಯೂಸ್: ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತ್ತಿಕೋಡ್ ಬಳಿ ಮಂಗಳವಾರ ಮಧ್ಯಾಹ್ನ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಮತ್ತು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.​ಪ್ರಸಿದ್ಧ ‘ತ್ರಿಶೂರ್ ಪೂರಂ’ ಹಬ್ಬಕ್ಕಾಗಿ ಪಟಾಕಿಗಳನ್ನು ಸಿದ್ಧಪಡಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮಧ್ಯಾಹ್ನ ಸುಮಾರು 3:30ರ ಸುಮಾರಿಗೆ ಎರಡು ಬಾರಿ ದೊಡ್ಡ ಮಟ್ಟದ ಸ್ಫೋಟಗಳು ಕೇಳಿಬಂದಿದ್ದು, ಇದರ ತೀವ್ರತೆಗೆ ಸುತ್ತಮುತ್ತಲ ಪ್ರದೇಶದ ನಿವಾಸಿಗಳು ಭೂಕಂಪ ಸಂಭವಿಸಿದೆ ಎಂದು ಬೆಚ್ಚಿಬಿದ್ದಿದ್ದರು. ಕೇರಳ ರಾಜ್ಯ ವಿಪತ್ತು […]

ತ್ರಿಶೂರ್ ನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಪೋಟ| 13 ಮಂದಿ ಸಾವು Read More »

ಬರೋಬ್ಬರಿ 14 ಭಾರತೀಯ ಹಡಗುಗಳ ಮೇಲೆ‌ ಗುಂಡಿನ ದಾಳಿ ನಡೆಸಿದ ಇರಾನ್

ಸಮಗ್ರ ನ್ಯೂಸ್: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ನೌಕಾಪಡೆ (IRGC) ಬರೊಬ್ಬರಿ 14 ಭಾರತೀಯ ಹಡಗುಗಳ ಮೇಲೆ ಗುಂಡು ಹಾರಿಸಿದ್ದು, ಈ ಪೈಕಿ ಒಂದು ಹಡಗಿಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಕಚ್ಚಾ ತೈಲ ಮತ್ತು ಅನಿಲವನ್ನು ಸಾಗಿಸುತ್ತಿದ್ದ ಭಾರತಕ್ಕೆ ಹೋಗುತ್ತಿದ್ದ 14 ಹಡಗುಗಳ ಬೆಂಗಾವಲು ಪಡೆಯನ್ನು ಇರಾನಿನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಹಾರ್ಮುಜ್ ಜಲಸಂಧಿಯನ್ನು ಸಾಗಿಸುತ್ತಿದ್ದಾಗ ಅವುಗಳಲ್ಲಿ ಎರಡು ಹಡಗುಗಳ ಮೇಲೆ ಗುಂಡು ಹಾರಿಸುವ ಮೂಲಕ ತಡೆದಿದೆ. ಇದರಿಂದಾಗಿ 13 ಹಡಗುಗಳು ಪರ್ಷಿಯನ್ ಕೊಲ್ಲಿಯ ವಿವಿಧ

ಬರೋಬ್ಬರಿ 14 ಭಾರತೀಯ ಹಡಗುಗಳ ಮೇಲೆ‌ ಗುಂಡಿನ ದಾಳಿ ನಡೆಸಿದ ಇರಾನ್ Read More »

ಅಮೇರಿಕಾ ನಡೆ ವಿರೋಧಿಸಿ ಮತ್ತೆ ಹಾರ್ಮೋಜ್ ಬಂದ್ ಮಾಡಿದ ಇರಾನ್

ಸಮಗ್ರ ನ್ಯೂಸ್: ಅಮೆರಿಕ ಜೊತೆಗಿನ ಮಾತುಕತೆ ಭಾಗವಾಗಿ ಹೊರ್ಮುಜ್‌ ಜಲಸಂಧಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದ ಇರಾನ್‌, ತನ್ನ ನಿರ್ಧಾರವನ್ನು ಹಿಂಪಡೆಯುತ್ತಿರುವುದಾಗಿ ಶನಿವಾರ ಘೋಷಿಸಿದೆ. ‘ಇರಾನ್‌ ಬಂದರುಗಳಿಗೆ ಬರುವ ಹಾಗೂ ಅಲ್ಲಿಂದ ತೆರಳುವ ಹಡಗುಗಳ ಮೇಲೆ ನಿರ್ಬಂಧ ಹೇರುವ ಕ್ರಮವನ್ನು ಅಮೆರಿಕ ಮುಂದುವರಿಸಿದೆ. ಆ ಮೂಲಕ ಶಾಂತಿ ಮಾತುಕತೆ ವೇಳೆ ತಾನು ನೀಡಿದ್ದ ಭರವಸೆಯನ್ನು ಮುರಿದಿದೆ’ ಎಂದು ಇರಾನ್‌ನ ಕೇಂದ್ರ ಮಿಲಿಟರಿ ಕಮಾಂಡ್‌ ಪ್ರಕಟಿಸಿದೆ. ಇರಾನ್‌ ಬಂದರುಗಳಿಗೆ ಬರುವ ಎಲ್ಲ ಹಡಗುಗಳ ಮುಕ್ತ ಸಂಚಾರವನ್ನು ಅಮೆರಿಕ ಖಾತ್ರಿ

ಅಮೇರಿಕಾ ನಡೆ ವಿರೋಧಿಸಿ ಮತ್ತೆ ಹಾರ್ಮೋಜ್ ಬಂದ್ ಮಾಡಿದ ಇರಾನ್ Read More »

ಕೊನೆಗೂ ಓಪನ್ ಆಯ್ತು ಹಾರ್ಮೋಜ್ ಜಲಸಂಧಿ| ಮುಕ್ತಗೊಂಡ ಅಂತರಾಷ್ಟ್ರೀಯ ತೈಲ ವ್ಯಾಪಾರ ಮಾರುಕಟ್ಟೆ

ಸಮಗ್ರ ನ್ಯೂಸ್: ಇರಾನ್, ಲೆಬನಾನ್‌ನಲ್ಲಿ ಜಾರಿಗೆ ಬಂದ ಯುದ್ಧ ವಿರಾಮದ ಬಳಿಕ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹಾರ್ಮುಝ್ ಮಾರ್ಗವನ್ನು ಮತ್ತೆ ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರಕ್ಕೆ ತೆರೆಯಲಾಗಿದೆ ಎಂದು ತಿಳಿಸಿದೆ. ಇದರಿಂದ ಇಂಧನ ಮಾರುಕಟ್ಟೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ದೊಡ್ಡ ಮಟ್ಟದ ಸಮಾಧಾನ ತಂದಿದೆ. ಈಗ ಲೆಬನಾನ್ ಪ್ರದೇಶದಲ್ಲಿ ಪರಿಸ್ಥಿತಿ ಶಾಂತವಾಗುತ್ತಿರುವ ಹಿನ್ನೆಲೆ, ಹಡಗುಗಳ ಸಂಚಾರ ಸುಗಮವಾಗಿಸಲು ಇರಾನ್ ಈ ಕ್ರಮ ಕೈಗೊಂಡಿದೆ. ಈ ನಿರ್ಧಾರದಿಂದ ಜಾಗತಿಕ ತೈಲ ಸರಬರಾಜು ಮತ್ತು ಸಾಗಣೆ ವ್ಯವಸ್ಥೆಯಲ್ಲಿ ಸುಧಾರಣೆ ಕಾಣುವ

ಕೊನೆಗೂ ಓಪನ್ ಆಯ್ತು ಹಾರ್ಮೋಜ್ ಜಲಸಂಧಿ| ಮುಕ್ತಗೊಂಡ ಅಂತರಾಷ್ಟ್ರೀಯ ತೈಲ ವ್ಯಾಪಾರ ಮಾರುಕಟ್ಟೆ Read More »

ಲೋಕಸಭೆಯಲ್ಲಿ ಮಹಿಳಾ‌ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲು

ಸಮಗ್ರ ನ್ಯೂಸ್: ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲಾಗಿದೆ. ಶುಕ್ರವಾರ ಲೋಕಸಭೆಯಲ್ಲಿ ನಡೆದ ಮತದಾನದಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಮತದಾನಕ್ಕೆ ಇಳಿಸಿದಾಗ 540 ಸಂಸದರ ಪೈಕಿ 526 ಮಂದಿ ಸಂಸದರ ಮತದಾನ ಮಾಡಿದರು. ತಿದ್ದುಪಡಿಯ ಪರವಾಗಿ 298 ಮಂದಿ ಮತ ಚಲಾಯಿಸಿದ್ದರೆ, ಮೀಸಲಾತಿಯ ವಿರುದ್ಧವಾಗಿ 230 ಮಂದಿ ಮತ ಚಲಾಯಿಸಿದರು. ಇದು ಪ್ರಮುಖವಾದ ಸಂವಿಧಾನ ತಿದ್ದುಪಡಿಯಾಗಿದ್ದ ಕಾರಣ ಮೂರನೇ ಎರಡರಷ್ಟು ಮತದಾನ ಪಡೆಯುವುದು ಅಗತ್ಯವಾಗಿತ್ತು. ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸಲು ಮತ್ತು

ಲೋಕಸಭೆಯಲ್ಲಿ ಮಹಿಳಾ‌ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲು Read More »

‘ಇರಾನ್ ತನ್ನೆಲ್ಲಾ‌ ಯುರೇನಿಯಂ ಹಸ್ತಾಂತರಿಸಲು ಒಪ್ಪಿಕೊಂಡಿದೆ’ – ಟ್ರಂಪ್

ಸಮಗ್ರ ನ್ಯೂಸ್: ಜಾಗತಿಕ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಹೇಳಿಕೆಯೊಂದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಇರಾನ್ ತನ್ನ ಬಳಿ ಇರುವ ಎಲ್ಲಾ ಸಂವರ್ಧಿತ ಯುರೇನಿಯಂ ಅನ್ನು ಅಮೆರಿಕಕ್ಕೆ ಹಸ್ತಾಂತರಿಸಲು ಒಪ್ಪಿಕೊಂಡಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಒಂದು ವೇಳೆ ಇದು ನಿಜವಾದಲ್ಲಿ, ಮಧ್ಯಪ್ರಾಚ್ಯದಲ್ಲಿ ಅಣ್ವಸ್ತ್ರ ಪೈಪೋಟಿಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ. ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ಕೈಬಿಡಲು ಸಿದ್ಧವಾಗಿದೆ ಮತ್ತು ತನ್ನಲ್ಲಿರುವ ಅಪಾಯಕಾರಿ ಯುರೇನಿಯಂ ಅನ್ನು ನಮಗೆ ಒಪ್ಪಿಸಲು ಒಪ್ಪಿಕೊಂಡಿದೆ

‘ಇರಾನ್ ತನ್ನೆಲ್ಲಾ‌ ಯುರೇನಿಯಂ ಹಸ್ತಾಂತರಿಸಲು ಒಪ್ಪಿಕೊಂಡಿದೆ’ – ಟ್ರಂಪ್ Read More »

ಇಸ್ರೇಲ್- ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಘೋಷಣೆ

ಸಮಗ್ರ ನ್ಯೂಸ್: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಮತ್ತು ಲೆಬನಾನ್ ನಡುವೆ 10 ದಿನಗಳ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದ್ದಾರೆ. ದೀರ್ಘಕಾಲದ ಸಂಘರ್ಷಕ್ಕೆ ಅಂತ್ಯ ಹಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಈ ಕುರಿತು ಮಾತನಾಡಿದ ಟ್ರಂಪ್, “ಈ ಪ್ರಕ್ರಿಯೆಯ ಭಾಗವಾಗಿರುವುದು ನನ್ನ ಪಾಲಿನ ಗೌರವವಾಗಿದೆ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರುವುದು ನಮ್ಮ ಪ್ರಮುಖ ಗುರಿ,” ಎಂದು ತಿಳಿಸಿದ್ದಾರೆ. ಟ್ರಂಪ್ ಅವರ ಈ

ಇಸ್ರೇಲ್- ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಘೋಷಣೆ Read More »

ಗಲಾಟೆ, ಗೊಂದಲದ ನಡುವೆಯೇ ಸಂಸತ್ತಿನಲ್ಲಿ ಪ್ರಮುಖ 3 ಮಸೂದೆಗಳ ಮಂಡನೆ

ಸಮಗ್ರ ನ್ಯೂಸ್: ದೇಶದ ರಾಜಕೀಯ ದಿಕ್ಕನ್ನು ಬದಲಾಯಿಸಬಹುದಾದ ಮಹತ್ವದ ಬೆಳವಣಿಗೆಯಾಗಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಹಾಗೂ ಗಡಿ ನಿರ್ಣಯ ಮಸೂದೆ ಮಂಡನೆಯಾಗಿದೆ. ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ನೀಡುವ ಉದ್ದೇಶದಜೊತೆಗೆ, ಲೋಕಸಭೆಯ ಪ್ರಸ್ತುತ 543 ಸ್ಥಾನಗಳನ್ನು 850ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರ ಮುಂದಿಟ್ಟಿದೆ. ಇದೇ ಮಾದರಿಯಲ್ಲಿ ರಾಜ್ಯ ವಿಧಾನಸಭೆಗಳ ಸದಸ್ಯರ ಸಂಖ್ಯೆಯನ್ನೂ ವಿಸ್ತರಿಸುವ ಯೋಜನೆಗೆ ಸರ್ಕಾರ ಕೈಹಾಕಿದೆ. ಇವುಗಳ ಜೊತೆಗೆ 2026ರ ಗಡಿ ನಿರ್ಣಯ (ಡಿಲಿಮಿಟೇಶನ್) ಮಸೂದೆ, 2002ರ ಹಳೆಯ ಡಿಲಿಮಿಟೇಶನ್ ಕಾಯ್ದೆಯನ್ನು ರದ್ದುಗೊಳಿಸಿ ಅದರ ಬದಲಿಗೆ

ಗಲಾಟೆ, ಗೊಂದಲದ ನಡುವೆಯೇ ಸಂಸತ್ತಿನಲ್ಲಿ ಪ್ರಮುಖ 3 ಮಸೂದೆಗಳ ಮಂಡನೆ Read More »

ಇರಾನ್ ಗೆ ಸಂಪೂರ್ಣ ಬೆಂಬಲ ಸೂಚಿಸಿದ ಚೀನಾ| ಆಮೇರಿಕಾಕ್ಕೆ ತಿರುಗೇಟು ನೀಡಿದ ಡ್ರ್ಯಾಗನ್

ಸಮಗ್ರ ನ್ಯೂಸ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ ಜಾಗತಿಕ ರಾಜಕೀಯ ಸಮೀಕರಣಗಳು ವೇಗವಾಗಿ ಬದಲಾಗುತ್ತಿವೆ. ಆಯಕಟ್ಟಿನ ಪ್ರದೇಶವಾದ ಹೋರ್ಮಝ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಲು ಅಮೆರಿಕ ನಡೆಸುತ್ತಿರುವ ಪ್ರಯತ್ನಗಳಿಗೆ ಈಗ ಚೀನಾ ಬ್ರೇಕ್ ಹಾಕಲು ಮುಂದಾಗಿದೆ. ಇರಾನ್ಗೆ ತನ್ನ ಸಂಪೂರ್ಣ ಬೆಂಬಲ ಘೋಷಿಸುವ ಮೂಲಕ ಚೀನಾ, ಅಮೆರಿಕಕ್ಕೆ ನೇರ ಎಚ್ಚರಿಕೆ ನೀಡಿದೆ. ವಿಶ್ವದ ಒಟ್ಟು ತೈಲ ವ್ಯಾಪಾರದ ಬಹುಪಾಲು ನಡೆಯುವ ಹೋರ್ಮಝ್ ಜಲಸಂಧಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಮೆರಿಕ ನೌಕಾಪಡೆ ಸಜ್ಜಾಗುತ್ತಿದೆ ಎಂಬ ವರದಿಗಳಿದ್ದವು. ಇರಾನ್

ಇರಾನ್ ಗೆ ಸಂಪೂರ್ಣ ಬೆಂಬಲ ಸೂಚಿಸಿದ ಚೀನಾ| ಆಮೇರಿಕಾಕ್ಕೆ ತಿರುಗೇಟು ನೀಡಿದ ಡ್ರ್ಯಾಗನ್ Read More »

ವಿಫಲವಾದ ಶಾಂತಿ ಮಾತುಕತೆ| ಹಾರ್ಮೋಜ್ ಜಲಸಂಧಿಗೆ ನೌಕಾ ದಿಗ್ಭಂಧನ

ಸಮಗ್ರ ನ್ಯೂಸ್: ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಮತ್ತೊಮ್ಮೆ ಕಠಿಣ ನಿಲುವು ತಾಳಿದ್ದು, ಜಾಗತಿಕವಾಗಿ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾಗಿರುವ ಹಾರ್ಮುಜ್ ಮೇಲೆ ನೌಕಾ ದಿಗ್ಭಂಧನ ಹೇರಿದ್ದಾರೆ. ಪ್ರಮುಖ ಸಮುದ್ರ ಮಾರ್ಗವಾಗಿರುವ ಹಾರ್ಮುಜ್ ಜಗತ್ತಿನ ಒಟ್ಟು ಕಚ್ಚಾ ತೈಲ ಸಾಗಣೆಯ ಸುಮಾರು 20 ಶೇಕಡಾ ಪಾಲನ್ನು ಹೊತ್ತಿರುತ್ತದೆ. ಇಂತಹ ಪ್ರಮುಖ ಮಾರ್ಗದಲ್ಲಿ ಅಮೆರಿಕಾ ನೌಕಾಪಡೆ ತಡೆಗಟ್ಟುವಿಕೆ ಆರಂಭಿಸುವ ನಿರ್ಧಾರ ಕೈಗೊಂಡಿರುವುದು, ಜಾಗತಿಕ ಇಂಧನ ಸರಬರಾಜು

ವಿಫಲವಾದ ಶಾಂತಿ ಮಾತುಕತೆ| ಹಾರ್ಮೋಜ್ ಜಲಸಂಧಿಗೆ ನೌಕಾ ದಿಗ್ಭಂಧನ Read More »