ಸಮಗ್ರ ಸಮಾಚಾರ

ಶಬರಿಮಲೆ‌ ಯಾತ್ರೆ ಕೈಗೊಂಡ ಸಂಸದ ಹೆಚ್.ಡಿ ಕುಮಾರಸ್ವಾಮಿ

ಸಮಗ್ರ ನ್ಯೂಸ್: ಕೇಂದ್ರ ಸಚಿವರಾದ ಹೆಚ್‌ಡಿ ಕುಮಾರಸ್ವಾಮಿ ಅವರು ಮಣಿಕಂಠನ ದರ್ಶನಕ್ಕಾಗಿ ಶಬರಿಮಲೆಗೆ ಹೊರಟಿದ್ದಾರೆ. ಇಂದು ಬೆಳಗ್ಗೆ ಕುಮಾರಸ್ವಾಮಿಯವರು ಪಡಿಪೂಜೆ, ಪುಷ್ಪಾಭಿಷೇಕ ಪೂಜೆ ಮಾಡಿಸಿದ್ದಾರೆ. ಪೂಜೆ ಬಳಿಕ ಅಯ್ಯಪ್ಪ ಮಾಲೆ ಹಾಕಿಕೊಂಡು, ಇರಿಮುಡಿ ಹೊತ್ತು ಕುಮಾರಸ್ವಾಮಿ ಶಬರಿಮಲೆ ಯಾತ್ರೆ ಕೈಗೊಳ್ಳಲಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಜೊತೆಯಲ್ಲಿ ಜೆಡಿಎಸ್ ನಾಯಕರು ಸಹ ಮಾಲೆ ಹಾಕಿ ಅಯ್ಯಪ್ಪ ದರ್ಶನಕ್ಕೆ ತೆರಳುತ್ತಿದ್ದಾರೆ. ಸುರೇಶ್ ಬಾಬು, ಬೋಜೇಗೌಡ, ಸಾ ರಾ ಮಹೇಶ್, ಎ ಮಂಜು ಸೇರಿದಂತೆ ಹಲವು ಜೆಡಿಎಸ್ ನಾಯಕರು ಕುಮಾರಸ್ವಾಮಿ ಜೊತೆಯಲ್ಲಿ […]

ಶಬರಿಮಲೆ‌ ಯಾತ್ರೆ ಕೈಗೊಂಡ ಸಂಸದ ಹೆಚ್.ಡಿ ಕುಮಾರಸ್ವಾಮಿ Read More »

ಹತ್ತು ರೂಪಾಯಿ ಕೂಡಾ ಲಂಚ ನೀಡಬೇಡಿ, ಲಂಚ ಕೇಳಿದರೆ ತಕ್ಷಣ ದೂರು ನೀಡಿ – ಸಿಎಂ

ಸಮಗ್ರ ನ್ಯೂಸ್: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಿ ಪಾರದರ್ಶಕ ಆಡಳಿತ ನೀಡಲು ಮುಖ್ಯಮಂತ್ರಿಗಳು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಸಾರ್ವಜನಿಕರಿಗೆ ಕಿರುಕುಳ ನೀಡುವ ಮತ್ತು ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಇನ್ನು ಮುಂದೆ ಯಾವುದೇ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಕೊಡಲು ಅಧಿಕಾರಿಗಳು ಅಥವಾ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟರೆ ಸಾರ್ವಜನಿಕರು ತಕ್ಷಣ ದೂರು ನೀಡಬಹುದು. ಇದಕ್ಕಾಗಿ ಪ್ರತಿ ಕಚೇರಿಯ ಪ್ರಮುಖ ಸ್ಥಳಗಳಲ್ಲಿ

ಹತ್ತು ರೂಪಾಯಿ ಕೂಡಾ ಲಂಚ ನೀಡಬೇಡಿ, ಲಂಚ ಕೇಳಿದರೆ ತಕ್ಷಣ ದೂರು ನೀಡಿ – ಸಿಎಂ Read More »

ದಿನಕ್ಕೆ ಮೂರ್ನಾಲ್ಕು ಬಾಟಲಿ‌ ಸ್ಟಿಂಗ್ ಕುಡಿಯುತ್ತಿದ್ದ ಯುವಕ ಕಿಡ್ನಿ ವೈಫಲ್ಯದಿಂದ ಸಾವು

ಸಮಗ್ರ ನ್ಯೂಸ್: ದಿನಕ್ಕೆ ಮೂರರಿಂದ ನಾಲ್ಕು ಬಾಟಲಿ ಸ್ಟಿಂಗ್ ಜ್ಯೂಸ್ ಕುಡಿಯುತ್ತಿದ್ದ ಯುವಕನೊಬ್ಬ ಕಿಡ್ನಿ ಫೇಲ್ ಆಗಿ ಮೃತಪಟ್ಟಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಬಾಲು ದೇಸಾಯಿ ಮೃತಪಟ್ಟ ದುರ್ದೈವಿ ಯುವಕ. ಮೃತ ಯುವಕ ಬಾಲು ದೇಸಾಯಿ ಕಳೆದ ಕೆಲವು ದಿನಗಳಿಂದ ಪ್ರತಿದಿನ ಸತತವಾಗಿ 3 ರಿಂದ 4 ಬಾಟಲಿ ಸ್ಟಿಂಗ್ ಜ್ಯೂಸ್ ಅನ್ನು ಅತಿಯಾಗಿ ಸೇವಿಸುತ್ತಿದ್ದ ಎಂದು ಹೇಳಲಾಗಿದೆ.ಅಷ್ಟೊಂದು ಪ್ರಮಾಣದಲ್ಲಿ

ದಿನಕ್ಕೆ ಮೂರ್ನಾಲ್ಕು ಬಾಟಲಿ‌ ಸ್ಟಿಂಗ್ ಕುಡಿಯುತ್ತಿದ್ದ ಯುವಕ ಕಿಡ್ನಿ ವೈಫಲ್ಯದಿಂದ ಸಾವು Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ನಿತ್ಯ ಜೀವನದಲ್ಲಿ ರಾಶಿಗಳು ಹಾಗೂ ಗ್ರಹಗಳ ಪ್ರಭಾವ ಮಹತ್ವ ಪಡೆಯುತ್ತದೆ. ರಾಶಿಗಳ ಚಲನೆಯಿಂದ ನಮ್ಮ ಜೀವನದ ಆಗುಹೋಗುಗಳು ನಿರ್ಧರಿತವಾಗುತ್ತವೆ. ಆದ್ದರಿಂದ ರಾಶಿಗಳ ಭವಿಷ್ಯ ತಿಳಿದುಕೊಳ್ಳುವುದು ಅವಶ್ಯಕ. ಈ ವಾರದಲ್ಲಿ (ಜೂ.14ರಿಂದ 20ರವರೆಗೆ) ಯಾವ ರಾಶಿಗೆ ಶುಭ? ಯಾವ ರಾಶಿಯ ಸಮಸ್ಯೆಗಳಿಗೆ ಏನು ಪರಿಹಾರ ಎಂಬುದನ್ನು ತಿಳಿಯೋಣ.. ಮೇಷ: ಅಧಿಕ ಜ್ಯೇಷ್ಠ ಮಾಸವು ಮುಗಿದು ನಿಜ ಜ್ಯೇಷ್ಠ ಮಾಸವು ಜೂನ್ 15ರಿಂದ ಆರಂಭವಾಗುತ್ತದೆ. ಅಂದೇ ಮಿಥುನ ಸಂಕ್ರಮಣವು ಬಂದು ರವಿ ಬುಧರು ಒಂದೇ ಮನೆಯಲ್ಲಿ ಇರುವುದು

ದ್ವಾದಶ ರಾಶಿಗಳ ವಾರಭವಿಷ್ಯ Read More »

ತಮಿಳುನಾಡು ಸಿಎಂ ವಿಜಯ್ ಜೋಸೆಫ್ ಕೊಲ್ಲೂರು ಭೇಟಿ| ದೇವಿಗೆ ಬೆಳ್ಳಿ ಖಡ್ಗ ಕಾಣಿಕೆ

ಸಮಗ್ರ ನ್ಯೂಸ್: ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದ ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ದೇವಿಗೆ ಬೆಳ್ಳಿ ಖಡ್ಗ ಕಾಣಿಕೆ ನೀಡಿದ್ದಾರೆ. ದೇಗುಲದಲ್ಲಿ ಸರಿಸುಮಾರು 30 ನಿಮಿಷಗಳ ಕಾಲ ಕಳೆದ ಜೊಸೆಫ್ ವಿಜಯ್ ಬಳಿಕ ಹೊರಬಂದು ಅಭಿಮಾನಿಗಳತ್ತ ಕೈಬೀಸಿ ತೆರಳಿದ್ದಾರೆ. ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದ ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ದೇವಿಗೆ ಬೆಳ್ಳಿ ಖಡ್ಗ ಕಾಣಿಕೆ ನೀಡಿದ್ದಾರೆ. ದೇಗುಲದಲ್ಲಿ ಸರಿಸುಮಾರು 30 ನಿಮಿಷಗಳ ಕಾಲ ಕಳೆದ ಜೊಸೆಫ್ ವಿಜಯ್ ಬಳಿಕ ಹೊರಬಂದು ಅಭಿಮಾನಿಗಳತ್ತ ಕೈಬೀಸಿ

ತಮಿಳುನಾಡು ಸಿಎಂ ವಿಜಯ್ ಜೋಸೆಫ್ ಕೊಲ್ಲೂರು ಭೇಟಿ| ದೇವಿಗೆ ಬೆಳ್ಳಿ ಖಡ್ಗ ಕಾಣಿಕೆ Read More »

ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಆರೋಪ| ಅಂಚೆವಿತರಕ ಸುರೇಶ್ ಬಂಧನ

ಸಮಗ್ರ ನ್ಯೂಸ್: ವಿವಾಹಿತ ಮಹಿಳೆಯನ್ನು ಬಲವಂತವಾಗಿ ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕುತ್ತೋಡಿ ನಿವಾಸಿ ಪ್ರಸ್ತುತ ಅರಸಿಮಕ್ಕಿ ಗ್ರಾಮೀಣ ಅಂಚೆ ವಿತರಕ ಸುರೇಶ್ (35) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ವಿವಾಹಿತ ಮಹಿಳೆಯನ್ನು 2023ರ ಡಿಸೆಂಬರ್ ನಲ್ಲಿ ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.7 ರಂದು ದೂರು ನೀಡಿದ್ದರು. ಪ್ರಕರಣದ ಬಗ್ಗೆ

ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಆರೋಪ| ಅಂಚೆವಿತರಕ ಸುರೇಶ್ ಬಂಧನ Read More »

ಜಗತ್ತಿನ ಮೊತ್ತಮೊದಲ ಟ್ರಿಲೇನಿಯರ್ ಆದ ಎಲಾನ್ ಮಸ್ಕ್| ಯಾರೂ ಸಾಧಿಸದ ಸಾಧನೆ ತೋರಿದ ಉದ್ಯಮಿ

ಸಮಗ್ರ ನ್ಯೂಸ್: ಜಗತ್ತಿನ ಮಹಾನ್ ಉದ್ಯಮಿ, ಟೆಕ್ ದಂತಕಥೆ ಎಲೋನ್ ಮಸ್ಕ್ ಈಗ ಜಗತ್ತಿನ ಇತಿಹಾಸದಲ್ಲೇ ಮೊದಲ ಟ್ರಿಲಿಯನೇರ್ (ಲಕ್ಷ ಕೋಟಿ ಡಾಲರ್ ಒಡೆಯ) ಎಂಬ ಐತಿಹಾಸಿಕ ಮತ್ತು ಅದ್ಭುತ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಮಸ್ಕ್ ಒಡೆತನದ ಬಾಹ್ಯಾಕಾಶ ಸಂಸ್ಥೆಯಾದ ಸ್ಪೇಸ್‌ಎಕ್ಸ್ ಜಾಗತಿಕ ಷೇರು ಮಾರುಕಟ್ಟೆಗೆ ಲಗ್ಗೆ ಇಟ್ಟ ಬೆನ್ನಲ್ಲೇ, ಅವರ ಆಸ್ತಿ ಮೌಲ್ಯವು ಜಗತ್ತಿನ ಯಾವುದೇ ವ್ಯಕ್ತಿ ಇದುವರೆಗೆ ತಲುಪದ ಅತಿ ದೊಡ್ಡ ಮೈಲಿಗಲ್ಲನ್ನು ದಾಟಿದೆ. ವಾಲ್ ಸ್ಟ್ರೀಟ್‌ನ ನಾಸ್ದಾಕ್ (Nasdaq) ಮಾರುಕಟ್ಟೆಯಲ್ಲಿ SPCX ಹೆಸರಿನಲ್ಲಿ ಸ್ಪೇಸ್‌ಎಕ್ಸ್

ಜಗತ್ತಿನ ಮೊತ್ತಮೊದಲ ಟ್ರಿಲೇನಿಯರ್ ಆದ ಎಲಾನ್ ಮಸ್ಕ್| ಯಾರೂ ಸಾಧಿಸದ ಸಾಧನೆ ತೋರಿದ ಉದ್ಯಮಿ Read More »

ಸರ್ಕಾರಿ ಕಟ್ಟಡದಲ್ಲಿ ಭಾರೀ ಬೆಂಕಿ| ಪ.ಬಂಗಾಳದ ಚುನಾವಣೆಗೆ ಬಳಸಲಾಗಿದ್ದ ೪ ಸಾವಿರ ಇವಿಎಂ ಭಸ್ಮ

ಸಮಗ್ರ ನ್ಯೂಸ್: ಕೊಲ್ಕತ್ತಾದ ಸರ್ಕಾರಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಚುನಾವಣೆಯಲ್ಲಿ ಬಳಸಲಾಗಿದ್ದ ಸುಮಾರು 4,000 ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳು (EVM) ಸುಟ್ಟು ಕರಕಲಾಗಿವೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಕ್ಷಿಣ ಕೊಲ್ಕತ್ತಾದ ಅಲಿಪೋರ್ ಪ್ರದೇಶದಲ್ಲಿರುವ 9 ಅಂತಸ್ತಿನ ಕಟ್ಟಡದಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿತ್ತು. ಈ ಬೃಹತ್ ಕಟ್ಟಡದಲ್ಲಿ ದಕ್ಷಿಣ 24 ಪರಗಣ ಜಿಲ್ಲಾ ಪರಿಷತ್ ಕಚೇರಿ ಸೇರಿದಂತೆ ಇತರ ಇಲಾಖೆಗಳ ಕಚೇರಿಗಳೂ ಕಾರ್ಯನಿರ್ವಹಿಸುತ್ತಿದ್ದವು. ಬೆಂಕಿಗೆ 4,000 ಇವಿಎಂ ಯಂತ್ರಗಳು ನಾಶವಾಗಿವೆ.

ಸರ್ಕಾರಿ ಕಟ್ಟಡದಲ್ಲಿ ಭಾರೀ ಬೆಂಕಿ| ಪ.ಬಂಗಾಳದ ಚುನಾವಣೆಗೆ ಬಳಸಲಾಗಿದ್ದ ೪ ಸಾವಿರ ಇವಿಎಂ ಭಸ್ಮ Read More »

ಫೀಫಾ ವಿಶ್ವಕಪ್| ಆರಂಭಿಕ ಪಂದ್ಯದಲ್ಲೇ ರೆಡ್ ಕಾರ್ಡ್ ಪಡೆದ ಮೂವರು ಆಟಗಾರರು

ಸಮಗ್ರ ನ್ಯೂಸ್: ಫಿಫಾ-2026 ಟೂರ್ನಿಗೆ ಗುರುವಾರ ನಾಟಕೀಯ ಚಾಲನೆ ದೊರಕಿದ್ದು, ಸಹ ಅತಿಥೇಯ ಮೆಕ್ಸಿಕೊ ತಂಡ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 2-0 ಗೋಲುಗಳಿಂದ ಸೋಲಿಸಿದೆ. ಆದರೆ ಆರಂಭಿಕ ಪಂದ್ಯದಲ್ಲೇ ಮೂವರು ಆಟಗಾರರು ರೆಡ್‌ಕಾರ್ಡ್ ಪಡೆದಿರುವುದು ಹೊಸ ದಾಖಲೆ ಎನಿಸಿದೆ. ಫಿಫಾ ವಿಶ್ವಕಪ್-2010ರ ಆರಂಭಿಕ ಪಂದ್ಯದಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ 1-1 ಡ್ರಾ ಮಾಡಿಕೊಂಡ ಹದಿನಾರು ವರ್ಷಗಳ ಬಳಿಕ ಎಸ್ಟಾಡಿಯೊ ಅಝೆಟ್ಕಾದಲ್ಲಿ ತವರಿನ ಪ್ರೇಕ್ಷಕರ ಬೆಂಬಲದ ಪ್ರಯೋಜನ ಪಡೆದ ಮೆಕ್ಸಿಕೋ ತಂಡ, ಜ್ಯೂಲಿಯನ್ ಕ್ವಿನೊನೆಸ್ ಹಾಗೂ ರವೂಲ್ ಜಿಮೆನೆಝ್ ಅವರ

ಫೀಫಾ ವಿಶ್ವಕಪ್| ಆರಂಭಿಕ ಪಂದ್ಯದಲ್ಲೇ ರೆಡ್ ಕಾರ್ಡ್ ಪಡೆದ ಮೂವರು ಆಟಗಾರರು Read More »

ಇನ್ನೆರಡು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ – ಸಚಿವ ಬೈರತಿ

ಸಮಗ್ರ ನ್ಯೂಸ್: ರಾಜ್ಯದ ವಿದ್ಯಾರ್ಥಿಗಳಿಗೆ ಭಾರೀ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಐತಿಹಾಸಿಕ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಇನ್ನೆರಡು ದಿನಗಳೊಳಗೆ ಅದರ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಇದುವರೆಗೆ ಉಚಿತ ಬಸ್ ಪಾಸ್ ಸೌಲಭ್ಯವು ವಿದ್ಯಾರ್ಥಿನಿಯರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಿಗೂ ಈ ಸೌಲಭ್ಯವನ್ನು ವಿಸ್ತರಿಸುವ ಮಹತ್ವದ ನಿರ್ಧಾರ

ಇನ್ನೆರಡು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ – ಸಚಿವ ಬೈರತಿ Read More »