June 2026

ಸಾರ್ವಕಾಲಿಕ ದಾಖಲೆ ಬರೆದ ರಬ್ಬರ್| ಗರಿಷ್ಠ ₹ 263ಕ್ಕೆ ಮಾರಾಟ

ಸಮಗ್ರ ನ್ಯೂಸ್: ರಬ್ಬರ್‌ ಬೆಳೆಗೆ ಬುಧವಾರ ಕೆ.ಜಿ.ಯೊಂದಕ್ಕೆ ಗರಿಷ್ಠ ₹263 ದೊರೆತಿದ್ದು, ಇದು ಸಾರ್ವಕಾಲಿಕ ದಾಖಲಾಗಿದೆ. ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಆರ್‌ಎಸ್‌ಎಸ್‌-4 ದರ್ಜೆಯ ರಬ್ಬರ್‌ಗೆ ಕೆ.ಜಿ.ಯೊಂದಕ್ಕೆ ಕನಿಷ್ಠ ₹252ರಿಂದ ಗರಿಷ್ಠ ₹263ರವರೆಗೆ, ಆರ್‌ಎಸ್‌ಎಸ್‌-5 ದರ್ಜೆಗೆ ₹222ರಿಂದ ಗರಿಷ್ಠ ₹252ರವರೆಗೆ ಧಾರಣೆ ದೊರೆತಿದೆ. ‘ದಶಕದ ಹಿಂದೆ ರಬ್ಬರ್ ಕೆ.ಜಿ.ಗೆ ಗರಿಷ್ಠ ₹245ರವರೆಗೆ ದರ ದೊರೆತಿತ್ತು. ನಂತರದ ವರ್ಷಗಳಲ್ಲಿ ರಬ್ಬರ್ ದರ ಏರಿಳಿತವಾಗುತ್ತಿತ್ತು. ಕಳೆದ ವರ್ಷ ಕೆ.ಜಿ.ಗೆ ₹130ರವರೆಗೆ ಇಳಿಕೆಯಾಗಿ ಬೆಳೆಗಾರರು ಕಂಗಾಲಾಗಿದ್ದರು. ಕೆಲವು ದಿನಗಳಿಂದ ರಬ್ಬರ್ ದರ ಏರುಗತಿಯಲ್ಲಿ ಸಾಗಿದೆ. […]

ಸಾರ್ವಕಾಲಿಕ ದಾಖಲೆ ಬರೆದ ರಬ್ಬರ್| ಗರಿಷ್ಠ ₹ 263ಕ್ಕೆ ಮಾರಾಟ Read More »

ಮಾಣಿ: ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು| ಚಾಲಕ ಸಾವು; ಮೂವರು ಗಂಭೀರ

ಸಮಗ್ರ ನ್ಯೂಸ್: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಬುಧವಾರ ಮಧ್ಯಾಹ್ನ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ (ಡಿವೈಡರ್) ಢಿಕ್ಕಿ ಹೊಡೆದು ಪಲ್ಟಿಯಾದ ಭೀಕರ ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಚಾಲಕ ಜಾಗದಲ್ಲೇ ಮೃತಪಟ್ಟಿದ್ದು, ಮೂವರು ಸಹಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಹಾಸನ ಮೂಲದ ಲಕ್ಷ್ಮೀಕಾಂತ್ ಮೃತಪಟ್ಟ ದುರ್ದೈವಿ ಚಾಲಕ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಸಹಪ್ರಯಾಣಿಕರಾದ ರಂಜಿತ್, ದರ್ಶನ್ ಮತ್ತು ಶೋಭಾ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ

ಮಾಣಿ: ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು| ಚಾಲಕ ಸಾವು; ಮೂವರು ಗಂಭೀರ Read More »

ಪುತ್ತೂರು: ಲವ್, ಸೆಕ್ಸ್ ಮತ್ತು ದೋಖಾ| ಆರೋಪಿ ಕೃಷ್ಣ ಜೆ.ರಾವ್ ಹಾಗೂ ಪೋಷಕರಿಗೆ ಹೈಕೋರ್ಟ್ ‌ತರಾಟೆ

ಸಮಗ್ರ ನ್ಯೂಸ್: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಬಿಜೆಪಿ ಮಾಜಿ ನಾಯಕನ ಪುತ್ರ, ಆರೋಪಿ ಕೃಷ್ಣ ಜೆ. ರಾವ್ ಹಾಗೂ ಆತನ ಪೋಷಕರನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸಂತ್ರಸ್ತೆ ಹಾಗೂ ಆಕೆಯ 10 ತಿಂಗಳ ಮಗುವಿನ ಜೀವನ ನಿರ್ವಹಣೆಗೆ ಹಣ ಠೇವಣಿ ಇಡಬೇಕೆಂಬ ನ್ಯಾಯಾಲಯದ ಹಿಂದಿನ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಕೃಷ್ಣ

ಪುತ್ತೂರು: ಲವ್, ಸೆಕ್ಸ್ ಮತ್ತು ದೋಖಾ| ಆರೋಪಿ ಕೃಷ್ಣ ಜೆ.ರಾವ್ ಹಾಗೂ ಪೋಷಕರಿಗೆ ಹೈಕೋರ್ಟ್ ‌ತರಾಟೆ Read More »

ದೀದಿಗೆ ಸ್ವಪಕ್ಷೀಯರಿಂದ ಶಾಕ್| 20 ಮಂದಿ ಸಂಸದರಿಂದ ಎನ್ ಡಿಎಗೆ ಬೆಂಬಲ ಘೋಷಣೆ

ಸಮಗ್ರ ನ್ಯೂಸ್: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸೋತ ಬಳಿಕ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದ್ದು, 60 ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ತಿರುಗಿಬಿದ್ದ ಬೆನ್ನಲ್ಲೇ ಇದೀಗ 20 ಸಂಸದರು ಬಿಜೆಪಿ ನೇತೃತ್ವದ ಎನ್‌ಡಿಎಗೆ ಬೆಂಬಲ ಸೂಚಿಸಲು ನಿರ್ಧರಿಸಿದ್ದಾರೆ. ಸಂಸದರು ತಮ್ಮ ನಿಲುವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ ಎಂದು ಪಕ್ಷದ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಹೇಳಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು

ದೀದಿಗೆ ಸ್ವಪಕ್ಷೀಯರಿಂದ ಶಾಕ್| 20 ಮಂದಿ ಸಂಸದರಿಂದ ಎನ್ ಡಿಎಗೆ ಬೆಂಬಲ ಘೋಷಣೆ Read More »

ಪಿಒಕೆಯಲ್ಲಿ ಪಾಕಿಸ್ತಾನದ ಹೆಲಿಕಾಪ್ಟರ್ ಪತನ| 21 ಸೈನಿಕರು ದುರ್ಮರಣ

ಸಮಗ್ರ ನ್ಯೂಸ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬುಧವಾರ ಭೀಕರ ದುರಂತವೊಂದು ಸಂಭವಿಸಿದೆ. ಪಾಕಿಸ್ತಾನ ಸೇನಾ ವಿಮಾನಯಾನ ಇಲಾಖೆಗೆ ಸೇರಿದ ಎಂಐ-17 (Mi-17) ಹೆಲಿಕಾಪ್ಟರ್ ಮುಜಾಫರಾಬಾದ್ ಬಳಿ ಪತನಗೊಂಡಿದ್ದು, ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲಾ 21 ಸೇನಾ ಸಿಬ್ಬಂದಿ ದುರ್ಮರಣಕ್ಕೀಡಾಗಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಪಿಒಕೆಯ ನೀಲಂ ಕಣಿವೆ ಸೆಕ್ಟರ್‌ಗೆ ಹೆಚ್ಚುವರಿ ಸೈನಿಕರನ್ನು ಸಾಗಿಸುತ್ತಿದ್ದ ವೇಳೆ ಈ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್ ಟೇಕ್‌ ಆಫ್‌ ಆಗುವ ಸಂದರ್ಭದಲ್ಲಿ ದಿಢೀರನೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ವೇಳೆ ಪೈಲಟ್‌ಗಳು ತುರ್ತು ಭೂಸ್ಪರ್ಶ ಮಾಡಲು

ಪಿಒಕೆಯಲ್ಲಿ ಪಾಕಿಸ್ತಾನದ ಹೆಲಿಕಾಪ್ಟರ್ ಪತನ| 21 ಸೈನಿಕರು ದುರ್ಮರಣ Read More »

ಕೊಟ್ಟಿಯೂರಿನಲ್ಲಿ ಮತ್ತೊಂದು ವಿವಾದ| ಬಾವಲಿಕಟ್ಟು ಕಟ್ಟಿದ ಮುಸ್ಲಿಂ ಮುಖಂಡನ ವಿರುದ್ದ ಆಕ್ರೋಶ

ಸಮಗ್ರ ನ್ಯೂಸ್: ಕೇರಳದ ಕೊಟ್ಟಿಯೂರು ಮಹಾದೇವ ದೇಗುಲ ತೆರೆದಿದ್ದು, ಈ ವರ್ಷ ಬಾರಿ ವಿವಾದವನ್ನೇ ಸೃಷ್ಟಿಸಿದೆ. ಕೊಟ್ಟಿಯೂರಿಗೆ ತೆರಳಿದ ಕನ್ನಡಿಗರಿಗೆ ಅಪಮಾನ ಮಾಡಿದ ಆರೋಪದ ನಡುವೆ ದೇವಸ್ಥಾನದಲ್ಲಿ ಬಾವಲಿಕಟ್ಟು ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಸುಳ್ಯದ ಮೂಲದ ಮುಸ್ಲಿಂ ಮುಖಂಡ ಶಹೀದ್ ತೆಕ್ಕಿಲ್ ಎಂಬುವವರು ವಿವಾದದ ಕಿಡಿ ಹೊತ್ತಿಸಿದ್ದಾರೆ. ಇದು ಮುಸ್ಲಿಮರು ಅಂದಿನಿಂದ ಮಾಡಿಕೊಂಡು ಬಂದಿದ್ದ ಪರಂಪರೆ ಅಂತ ಬಾವಲಿ ನದಿಗೆ ಕಟ್ಟಿದ್ದಾರೆ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ದಿನದಿಂದ ದಿನಕ್ಕೆ ಬಾವಲಿಕಟ್ಟು ವಿವಾದ ತೀವ್ರ

ಕೊಟ್ಟಿಯೂರಿನಲ್ಲಿ ಮತ್ತೊಂದು ವಿವಾದ| ಬಾವಲಿಕಟ್ಟು ಕಟ್ಟಿದ ಮುಸ್ಲಿಂ ಮುಖಂಡನ ವಿರುದ್ದ ಆಕ್ರೋಶ Read More »

ಅಸಮರ್ಥ ಸಚಿವ ಎಂಬ ಟೀಕೆಗೆ ಪ್ರಿಯಾಂಕ್ ಖರ್ಗೆ ಖಾರವಾದ ಉತ್ತರ| RSS ನೋಂದಣಿ ದಾಖಲೆ ರೆಡಿ ಮಾಡಿಟ್ಟುಕೊಳ್ಳಿ ಎಂದು ಕೆಣಕಿದ ಖರ್ಗೆ

ಸಮಗ್ರ ನ್ಯೂಸ್: ಗೃಹ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಕೇವಲ 48 ಗಂಟೆಗಳಲ್ಲೇ ಬಿಜೆಪಿ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ನೇರ ಹಣಾಹಣಿ ಶುರುವಾಗಿದೆ. ಗೃಹ ಇಲಾಖೆಯು ಒಬ್ಬ ಅಸಮರ್ಥ ಸಚಿವರ ಕೈಗೆ ಸಿಲುಕಿದೆ, ಇವರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಟ್ವೀಟ್ ಮೂಲಕ ಲೇವಡಿ ಮಾಡಿತ್ತು. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ನಿಮ್ಮ ಆತಂಕ ಮತ್ತು ಭಯ ನನಗೆ ಅರ್ಥವಾಗುತ್ತಿದೆ. ಮೊದಲು ನಿಮ್ಮ ರಾಜಕೀಯ ಮೇಲಾಧಿಕಾರ ಹೊಂದಿರುವ ಆರ್‌ಎಸ್‌ಎಸ್ ಸಂಘಟನೆಯ ನೋಂದಣಿಗೆ

ಅಸಮರ್ಥ ಸಚಿವ ಎಂಬ ಟೀಕೆಗೆ ಪ್ರಿಯಾಂಕ್ ಖರ್ಗೆ ಖಾರವಾದ ಉತ್ತರ| RSS ನೋಂದಣಿ ದಾಖಲೆ ರೆಡಿ ಮಾಡಿಟ್ಟುಕೊಳ್ಳಿ ಎಂದು ಕೆಣಕಿದ ಖರ್ಗೆ Read More »

ಕೊಟ್ಟ ಚೆಕ್ ಬೌನ್ಸ್ ಆದ್ರೆ ಜೈಲು ಗ್ಯಾರಂಟಿಯಾ? ಕಾನೂನು ಏನು ಹೇಳುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಇಂದಿನ ದಿನಗಳಲ್ಲಿ ಆರ್ಥಿಕ ವಹಿವಾಟುಗಳು ಸಾಮಾನ್ಯ ಸಂಗತಿಯಾಗಿದೆ. ವ್ಯಾಪಾರ, ವ್ಯವಹಾರ ಅಥವಾ ವೈಯಕ್ತಿಕ ಅಗತ್ಯಗಳಿಗಾಗಿ ಅನೇಕರು ಇಂದಿಗೂ ಚೆಕ್‌ಗಳ ಮೂಲಕವೇ ಹಣದ ವಹಿವಾಟು ನಡೆಸುತ್ತಾರೆ. ಆದರೆ, ಒಂದು ವೇಳೆ ನೀವು ನೀಡಿದ ಚೆಕ್ ಬೌನ್ಸ್ ಆದರೆ, ಅದು ಕೇವಲ ಹಣಕಾಸಿನ ಸಮಸ್ಯೆಯಾಗಿ ಉಳಿಯುವುದಿಲ್ಲ. ಬದಲಿಗೆ ಅದು ನಿಮ್ಮನ್ನು ಜೈಲು ಪಾಲಾಗುವಂತೆ ಮಾಡುವ ಗಂಭೀರ ಕಾನೂನು ಸಮಸ್ಯೆಯಾಗಿ ಬದಲಾಗಬಹುದು! ಹಾಗಾದರೆ ಚೆಕ್ ಬೌನ್ಸ್ ಆದರೆ ನಿಜವಾಗಿಯೂ ಜೈಲು ಶಿಕ್ಷೆಯಾಗುತ್ತದೆಯೇ? ಈ ಬಗ್ಗೆ ಕಾನೂನು ಏನು ಹೇಳುತ್ತದೆ?

ಕೊಟ್ಟ ಚೆಕ್ ಬೌನ್ಸ್ ಆದ್ರೆ ಜೈಲು ಗ್ಯಾರಂಟಿಯಾ? ಕಾನೂನು ಏನು ಹೇಳುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಆಭರಣ ಪ್ರಿಯರಿಗೆ ಶುಭಸುದ್ದಿ| ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ

ಸಮಗ್ರ ನ್ಯೂಸ್: ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಬೆಳವಣಿಗೆಗಳ ಪರಿಣಾಮವಾಗಿ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಜೂನ್ 10 ರ ಇಂದಿನ ಮಾರುಕಟ್ಟೆ ವರದಿಗಳ ಪ್ರಕಾರ, ಆಭರಣ ಖರೀದಿಸಲು ಕಾಯುತ್ತಿದ್ದವರಿಗೆ ಇದು ಅತ್ಯುತ್ತಮ ಸಮಯವಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಗಮನಾರ್ಹವಾಗಿ ಇಳಿಕೆಯಾಗಿದ್ದು, ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ. ಎಂಸಿಎಕ್ಸ್ ಮಾರುಕಟ್ಟೆಯಲ್ಲಿನ ಏರಿಳಿತಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಮೌಲ್ಯ ಬಲಗೊಂಡಿರುವುದು ಈ ದಿಢೀರ್ ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಅಮೆರಿಕ

ಆಭರಣ ಪ್ರಿಯರಿಗೆ ಶುಭಸುದ್ದಿ| ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ Read More »

ಇಂದಿನಿಂದ ಖಾಸಗಿ ಬಸ್ ಪ್ರಯಾಣ ದರ ಏರಿಕೆ| ಶೇ. 5 ರಿಂದ 8 ರಷ್ಟು ಹೆಚ್ಚಳ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಖಾಸಗಿ ಬಸ್ ಪ್ರಯಾಣಿಕರಿಗೆ ಇಂದಿನಿಂದ ಟಿಕೆಟ್‌ ದರ ಏರಿಕೆಯ ಬಿಸಿ ತಟ್ಟಲಿದೆ. ಖಾಸಗಿವಾಹನ ಬಸ್‌ಗಳ ಪ್ರಯಾಣ ದರವನ್ನ ಶೇ. 5 ರಿಂದ 8 ರಷ್ಟು ಹೆಚ್ಚಳ ಮಾಡಲಾಗಿದ್ದು, ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. ಡೀಸೆಲ್ ದರ ಏರಿಕೆ, ವಾಹನ ನಿರ್ವಹಣಾ ವೆಚ್ಚ ಹೆಚ್ಚಳ ಹಾಗೂ ನೌಕರರ ವೇತನದ ಒತ್ತಡದಿಂದ ಬೆಲೆ ಏರಿಕೆ ಅನಿವಾರ್ಯ ಅಂತ ಮಾಲೀಕರು ಸ್ಪಷ್ಟಪಡಿಸಿದ್ದಾರೆ. ಸ್ಟೇಜ್ ಕ್ಯಾರಿಯೇಜ್ ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಫೆಡರೇಷನ್ ಆಫ್ ಸ್ಟೇಜ್

ಇಂದಿನಿಂದ ಖಾಸಗಿ ಬಸ್ ಪ್ರಯಾಣ ದರ ಏರಿಕೆ| ಶೇ. 5 ರಿಂದ 8 ರಷ್ಟು ಹೆಚ್ಚಳ Read More »