ರಾಜ್ಯ

ಕುಕ್ಕೆ ಸುಬ್ರಹ್ಮಣ್ಯ: ಒಂದೇ ದಿನ 2.5 ಸಾವಿರಕ್ಕೂ ಮಿಕ್ಕಿ ಆಶ್ಲೇಷ ಬಲಿ‌ ಸೇವೆ

ಸಮಗ್ರ ನ್ಯೂಸ್: ಆಶ್ಲೇಷ ನಕ್ಷತ್ರದ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ರಾಜ್ಯ, ಹೊರರಾಜ್ಯಗಳಿಂದ ಬಂದ ಸಾವಿರಾರು ಭಕ್ತರು ‘ಆಶ್ಲೇಷ ಬಲಿ’ ಸೇವೆ ಸಲ್ಲಿಸಿದರು. ಈ ಬಾರಿ ದಾಖಲೆಯ 2,540ಕ್ಕೂ ಅಧಿಕ ಸೇವೆ ನಡೆದಿವೆ. ಕುಕ್ಕೆ ಸುಬ್ರಹ್ಮಣ್ಯ ದೇವರ ನಕ್ಷತ್ರವು ಆಶ್ಲೇಷ ಆಗಿರುವುದರಿಂದ ತಿಂಗಳಿನಲ್ಲಿ ಬರುವ ಆಶ್ಲೇಷ ನಕ್ಷತ್ರದಂದು ಹೆಚ್ಚಿನ ಭಕ್ತರು ಬಂದು ಸೇವೆ ಸಲ್ಲಿಸುವುದು ವಾಡಿಕೆ. ಆಶ್ಲೇಷ ಬಲಿ ಸೇವೆಯು ಪ್ರತಿದಿನ ಬೆಳಿಗ್ಗೆ 6.30ಕ್ಕೆ ಆರಂಭವಾಗಿ 3 ಬ್ಯಾಚ್ ಹಾಗೂ ಸಂಜೆ 5ಕ್ಕೆ ಒಂದು ಬ್ಯಾಚ್‌ನಲ್ಲಿ […]

ಕುಕ್ಕೆ ಸುಬ್ರಹ್ಮಣ್ಯ: ಒಂದೇ ದಿನ 2.5 ಸಾವಿರಕ್ಕೂ ಮಿಕ್ಕಿ ಆಶ್ಲೇಷ ಬಲಿ‌ ಸೇವೆ Read More »

ಚುರುಕುಗೊಂಡ ಪೂರ್ವ ಮುಂಗಾರು| ದ. ಒಳನಾಡಿನಲ್ಲಿ ಭಾರಿ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಪ್ರೀ-ಮಾನ್ಸೂನ್ ವಾತಾವರಣ ತೀವ್ರಗೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ವಿಶೇಷವಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಚಾಮರಾಜನಗರದಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಎಲ್ಲೋ ಅಲರ್ಟ್

ಚುರುಕುಗೊಂಡ ಪೂರ್ವ ಮುಂಗಾರು| ದ. ಒಳನಾಡಿನಲ್ಲಿ ಭಾರಿ ಮಳೆ ಸಾಧ್ಯತೆ Read More »

ಅಮೆರಿಕದ ಗುಪ್ತಚರ ವಿಭಾಗದ ನಿರ್ದೇಶಕ ಸ್ಥಾನಕ್ಕೆ ತುಳಸಿ ಗಬ್ಬಾರ್ಡ್ ರಾಜೀನಾಮೆ

ಸಮಗ್ರ ನ್ಯೂಸ್: ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಭಾವಿ ನಾಯಕಿ ತುಳಸಿ ಗಬ್ಬಾರ್ಡ್ ತಮ್ಮ ಉನ್ನತ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಪತಿಯ ಆರೈಕೆ ಹಾಗೂ ಸದ್ಯದ ಕೌಟುಂಬಿಕ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ತಾವು ಈ ಕಠಿಣ ನಿರ್ಧಾರ ಕೈಗೊಂಡಿರುವುದಾಗಿ ಅವರು ಪ್ರಕಟಿಸಿದ್ದಾರೆ. ​ವಿಶ್ವದ ಅತ್ಯಂತ ಶಕ್ತಿಶಾಲಿ ಗುಪ್ತಚರ ಸಂಸ್ಥೆಯ ಮುಖ್ಯಸ್ಥೆಯಾಗಿದ್ದ ತುಳಸಿ ಅವರ ಈ ನಡೆ ಅಂತರರಾಷ್ಟ್ರೀಯ ರಾಜತಾಂತ್ರಿಕ ಮತ್ತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಅಮೆರಿಕದ ಗುಪ್ತಚರ ವಿಭಾಗದ ನಿರ್ದೇಶಕ ಸ್ಥಾನಕ್ಕೆ ತುಳಸಿ ಗಬ್ಬಾರ್ಡ್ ರಾಜೀನಾಮೆ Read More »

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಗೆ ತಲೆನೋವಾದ ಕಾಕ್ರೋಚ್| ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ರಾಜೀನಾಮೆ ಆಗ್ರಹಿಸಿ ಅಭಿಯಾನ

ಸಮಗ್ರ ನ್ಯೂಸ್: ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಮ್ಮ ಪಕ್ಷದ ಮೊದಲ ಪ್ರಮುಖ ಸಾರ್ವಜನಿಕ ಅಭಿಯಾನವನ್ನು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ. ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಈ ಆನ್‌ಲೈನ್ ಅರ್ಜಿಯ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಈ ರಾಜಕೀಯ ಪಕ್ಷವು ಆರಂಭವಾದ ಕೆಲವೇ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿದ್ದು, ಫಾಲೋವರ್ಸ್ ಸಂಖ್ಯೆಯಲ್ಲಿ ರಾಷ್ಟ್ರೀಯ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಗೆ ತಲೆನೋವಾದ ಕಾಕ್ರೋಚ್| ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ರಾಜೀನಾಮೆ ಆಗ್ರಹಿಸಿ ಅಭಿಯಾನ Read More »

ತೈಲ ಗ್ರಾಹಕರಿಗೆ ಬಿಗ್ ಶಾಕ್| ಮತ್ತೆ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ

ಸಮಗ್ರ ನ್ಯೂಸ್: ಭಾರತದಾದ್ಯಂತ ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆಯಾಗಿದೆ. ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 87 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 91 ಪೈಸೆ ಹೆಚ್ಚಳವಾಗಿದೆ. ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಗಣನೀಯ ಏರಿಕೆ ಮಾಡಲಾಗಿದ್ದು, ವಾಹನ ಸವಾರರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಂತಾಗಿದೆ. ಇಂದಿನ ಪರಿಷ್ಕೃತ ದರಗಳ ಪ್ರಕಾರ, ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 87 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 91 ಪೈಸೆ

ತೈಲ ಗ್ರಾಹಕರಿಗೆ ಬಿಗ್ ಶಾಕ್| ಮತ್ತೆ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ Read More »

24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ನಿಗದಿ

ಸಮಗ್ರ ನ್ಯೂಸ್: ಕೇಂದ್ರ ಚುನಾವಣಾ ಆಯೋಗ ರಾಜ್ಯಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಜೂನ್ 18ರಂದು ರಾಜ್ಯಸಭೆಯ 24 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದೆ. ಜೂನ್ 1ರಂದು ರಾಜ್ಯಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಜೂನ್ 8ರಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆ ದಿನ. ಜೂನ್ 9 ರಂದು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 11ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಜೂನ್ 18ರಂದು ರಾಅಜ್ಯಸಭೆಯ 24 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ

24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ನಿಗದಿ Read More »

ಬೆಳ್ಳಾರೆ ಮೂಲದ ಸಾಪ್ಟ್ ವೇರ್ ಉದ್ಯೋಗಿ ಬೆಂಗಳೂರಿನಲ್ಲಿ ಅಪಘಾತದಲ್ಲಿ ಸಾವು

ಬೆಳ್ಳಾರೆ: ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಬೆಳ್ಳಾರೆಯ ಯುವಕ ಸೂರಜ್ ರೈ (27) ಅವರು ರಸ್ತೆ ಅಪಘಾತದಲ್ಲಿ ಸಂಭವಿಸಿದ ತೀವ್ರ ಗಾಯಗಳಿಂದಾಗಿ ಇಂದು (ಮೇ 22) ಮುಂಜಾನೆ ಚಿಕಿತ್ಸೆ ಫಲಿಸದೆ ನಿಧನರಾದರು. ಬೆಳ್ಳಾರೆಯ ನಿವಾಸಿ, ಖ್ಯಾತ ಯಕ್ಷಗುರು ವಾಸುದೇವ ರೈ ಮತ್ತು ಶರ್ಮಿಳಾ ವಿ. ರೈ ದಂಪತಿಯ ಪುತ್ರರಾಗಿರುವ ಸೂರಜ್ ರೈ ಅವರು ಮೇ 15ರಂದು ರಾತ್ರಿ ತಮ್ಮ ಬೈಕ್‌ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕುಣಿಗಲ್ ಬಳಿ ಇವರ ಬೈಕ್ ಮತ್ತು ಕೋಳಿ ಸಾಗಾಟದ ವಾಹನದ ನಡುವೆ

ಬೆಳ್ಳಾರೆ ಮೂಲದ ಸಾಪ್ಟ್ ವೇರ್ ಉದ್ಯೋಗಿ ಬೆಂಗಳೂರಿನಲ್ಲಿ ಅಪಘಾತದಲ್ಲಿ ಸಾವು Read More »

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮಹಾತಿರುವು| ಮರು ತನಿಖೆ ನಿರ್ಧಾರ ಸಿಬಿಐ ವಿವೇಚನೆಗೆ ಬಿಟ್ಟ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ಧರ್ಮಸ್ಥಳದ ಉಜಿರೆಯ SDM ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ಹಳೆಯ ಪ್ರಕರಣದ ಮರು ತನಿಖೆ ಕುರಿತು ಕೇಂದ್ರ ತನಿಖಾ ಸಂಸ್ಥೆ ಅಥವಾ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿದೆ. ಮುಂದಿನ ವಾರ ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದ್ದು, ಅಷ್ಟರೊಳಗೆ ಸರ್ಕಾರ ತನ್ನ ಈ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮಹಾತಿರುವು| ಮರು ತನಿಖೆ ನಿರ್ಧಾರ ಸಿಬಿಐ ವಿವೇಚನೆಗೆ ಬಿಟ್ಟ ರಾಜ್ಯ ಸರ್ಕಾರ Read More »

ಪುತ್ತೂರು: ಇಲಿ ಹಿಡಿಯಲು ಹೋಗಿ ಕಾರೊಳಗೆ ಸಿಕ್ಕಿಹಾಕಿಕೊಂಡ ಹಾವು

ಸಮಗ್ರ ನ್ಯೂಸ್: ಇಲಿಯನ್ನು ಬೇಟೆಯಾಡಲು ಹೋಗಿ ಹಾವೊಂದು ಕಾರಿನ ಇಂಜಿನ್ ಅಡಿಭಾಗದ ರಂಧ್ರದಲ್ಲಿ ಸಿಲುಕಿಕೊಂಡ ಅಪರೂಪದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ. ಕೊನೆಗೆ ಉರಗತಜ್ಞರ ಸಕಾಲಿಕ ಭೇಟಿ ಹಾಗೂ ಹರಸಾಹಸದಿಂದ ಹಾವನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಪುತ್ತೂರು ನಗರದ ನಿವಾಸಿಯೊಬ್ಬರು ತಮ್ಮ ಕಾರನ್ನು ಎಂದಿನಂತೆ ಮನೆಯ ಶೆಡ್‌ನಲ್ಲಿ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಕಾರಿನ ಬಳಿ ಬಂದ ಇಲಿಯನ್ನು ಬೆನ್ನಟ್ಟಿದ ಹಾವೊಂದು, ಕಾರಿನ ಅಡಿಭಾಗದಲ್ಲಿದ್ದ ಸಣ್ಣ ರಂಧ್ರದ ಮೂಲಕ ಒಳನುಗ್ಗಿದೆ. ಒಳಗೆ ನುಗ್ಗಿ ಇಲಿಯನ್ನು ಹಿಡಿದ ಹಾವಿಗೆ, ತಿಂದ ಬಳಿಕ

ಪುತ್ತೂರು: ಇಲಿ ಹಿಡಿಯಲು ಹೋಗಿ ಕಾರೊಳಗೆ ಸಿಕ್ಕಿಹಾಕಿಕೊಂಡ ಹಾವು Read More »

ನಮ್ಮನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ| ಖಾತೆ ಬ್ಯಾನ್ ಬೆನ್ನಲ್ಲೇ ಹೊಸ ಸಂದೇಶ ನೀಡಿದ ಕಾಕ್ರೋಚ್

ಸಮಗ್ರ ನ್ಯೂಸ್: ಕಾಕ್ರೋಚ್ ಜನತಾ ಪಾರ್ಟಿ ಸದ್ದು ಜೋರಾಗಿ ಕೇಳಿಬರುತ್ತಿದೆ. ಚೀಫ್ ಜಸ್ಟೀಸ್ ಆಫ್ ಇಂಡಿಯಾ ಸೂರ್ಯ ಕಾಂತ್ ಜಿರೆಳೆ ಹೇಳಿಕೆಗೆ ಪ್ರತಿಭಟನಾ ರೂಪವಾಗಿ ಹುಟ್ಟಿಕೊಂಡ ಸೋಶಿಯಲ್ ಮೀಡಿಯಾ ಪಾರ್ಟಿ ಕಾಕ್ರೋಚ್ ಜನತಾ ಪಾರ್ಟಿ. ನಾಲ್ಕೇ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿದೆ. 10 ಮಿಲಿಯನ್ ಫಾಲೋವರ್ಸ್ ಮೂಲಕ ಬಿಜೆಪಿ ಇನ್‌ಸ್ಟಾಗ್ರಾಂ ಖಾತೆ ಹಿಂದಿಕ್ಕಿದ ಬೆನ್ನಲ್ಲೇ ಇತ್ತ ಕಾಕ್ರೋಚ್ ಪಾರ್ಟಿಯ ಎಕ್ಸ್ ಖಾತೆ ಬ್ಲಾಕ್ ಆಗಿದೆ. ಇದೀಗ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹೊಸ

ನಮ್ಮನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ| ಖಾತೆ ಬ್ಯಾನ್ ಬೆನ್ನಲ್ಲೇ ಹೊಸ ಸಂದೇಶ ನೀಡಿದ ಕಾಕ್ರೋಚ್ Read More »