ದೇಶ-ವಿದೇಶ

ವಯಸ್ಸಾದಂತೆ ಇಲ್ಲಿ ಅವಳು ಅವನಾಗುತ್ತಾನೆ: ಲಾ ಸಲಿನಾಸ್ ಎಂಬ ವಿಚಿತ್ರ ಗ್ರಾಮ

ವಯಸ್ಸಾದಂತೆ ಜನರ ಲಿಂಗ ಬದಲಾಗುವ ಸ್ಥಳದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ! ಡೊಮಿನಿಕನ್ ರಿಪಬ್ಲಿಕ್ನಲ್ಲಿ ಹುಡುಗಿಯರು ಹುಡುಗರಾಗಿ ಬೆಳೆಯುವ ಗ್ರಾಮವೊಂದಿದೆ. ಲಾ ಸಲಿನಾಸ್ ಹೆಸರಿನ ಈ ಗ್ರಾಮವನ್ನು ಜನರು ಶಾಪಗ್ರಸ್ತ ಗ್ರಾಮವೆಂದು ಪರಿಗಣಿಸುತ್ತಾರೆ. ಲಾ ಸೆಲಿನಾಸ್ (La Salinas) ಹೆಸರಿನ ಈ ಗ್ರಾಮದ ಹುಡುಗಿಯರು ತನ್ನ ವಯಸ್ಸಿನ 12 ವರ್ಷಕ್ಕೆ ತಿರುಗುತ್ತಿದ್ದಂತೆ ಯುವಕರಾಗಿ ಪರಿವರ್ತನೆಯಾಗುತ್ತಾರಂತೆ. (Girls to turn into Boys). ಈ ಗ್ರಾಮದ ಜನಸಂಖ್ಯೆ ಕೇವಲ 6 ಸಾವಿರ ಮಾತ್ರ. ಆದರೂ ಕೂಡ ಈ ಚಿಕ್ಕ […]

ವಯಸ್ಸಾದಂತೆ ಇಲ್ಲಿ ಅವಳು ಅವನಾಗುತ್ತಾನೆ: ಲಾ ಸಲಿನಾಸ್ ಎಂಬ ವಿಚಿತ್ರ ಗ್ರಾಮ Read More »

ಅಪ್ಪಿಕೋ ಚಳುವಳಿ ನೇತಾರ ಬಹುಗುಣ ಕೊರೊನಾಗೆ ಬಲಿ

ಪರಿಸರವಾದಿ ಹಾಗೂ ಅಪ್ಪಿಕೊ (ಚಿಪ್ಕೊ) ಚಳವಳಿಯ ನೇತಾರ ಸುಂದರಲಾಲ್ ಬಹುಗುಣ (94) ಅವರು ಶುಕ್ರವಾರ ವಿಧಿವಶರಾಗಿದ್ದಾರೆ. ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ಸುಂದರಲಾಲ್ ಬಹುಗುಣ ಅವರು ಮೇ 8ರಂದು ರಿಷಿಕೇಶದ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಥಳೀಯ ವರದಿಗಳ ಪ್ರಕಾರ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು ಮತ್ತು ಮಧುಮೇಹವನ್ನು ಹೊಂದಿದ್ದರು. ಇದನ್ನು ಕೊರೋನಾ ವೈರಸ್ ಪ್ರಕರಣಗಳಲ್ಲಿ ಕೊಮೊರ್ಬಿಡಿಟಿ ಎಂದು ಪರಿಗಣಿಸಲಾಗುತ್ತದೆ. ತಜ್ಞ ವೈದ್ಯರ ತಂಡ ಬಹುಗುಣ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಎಲೆಕ್ಟ್ರೋಲೈಟ್‌ಗಳು ಮತ್ತು ಯಕೃತ್ತಿನ ಕಾರ್ಯವನ್ನು ಒಳಗೊಂಡಂತೆ ರಕ್ತದಲ್ಲಿನ ಸಕ್ಕರೆ

ಅಪ್ಪಿಕೋ ಚಳುವಳಿ ನೇತಾರ ಬಹುಗುಣ ಕೊರೊನಾಗೆ ಬಲಿ Read More »

ಮಹಾರಾಷ್ಟ್ರ: 13 ನಕ್ಸಲರ ಎನ್ಕೌಂಟರ್

ಮಹಾರಾಷ್ಟ್ರ: ರಾಜ್ಯದ ಗಡಚಿರೋಲಿ ಜಿಲ್ಲೆಯ ಕೊಟ್ಮಿ ಅರಣ್ಯ ಪ್ರದೇಶದಲ್ಲಿ ಸಿ-60 ಕಮಾಂಡೋ ಪೊಲೀಸರು ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ 13 ನಕ್ಸಲರು ಹತ್ಯೆಯಾದ ಘಟನೆ ಇಂದು ಮುಂಜಾನೆ ನಡೆದಿದೆ. ಮುಂಜಾನೆ ಐದು ಮೂವತ್ತರ ಸುಮಾರಿಗೆ ಮಾವೋವಾದಿಗಳು ಅರಣ್ಯದ ನಡುವೆ ಒಟ್ಟು ಸೇರಿರುವುದಾಗಿ ಖಚಿತ ಮಾಹಿತಿ ಪಡೆದ ಪೊಲೀಸರು ಸುಸಜ್ಜಿತ ದಾಳಿ ನಡೆಸಿ ನಕ್ಸಲರನ್ನು ಎನ್ಕೌಂಟರ್ ಮಾಡಿದ್ದಾರೆ. ಪೊಲೀಸರನ್ನು ಕಂಡ ನಕ್ಸಲರು ತೀವ್ರ ಪ್ರತಿದಾಳಿ ನಡೆಸಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಒಟ್ಟು

ಮಹಾರಾಷ್ಟ್ರ: 13 ನಕ್ಸಲರ ಎನ್ಕೌಂಟರ್ Read More »

ಭಾರತೀಯ ವಾಯುಪಡೆಯ ಮಿಗ್ -21 ವಿಮಾನ ಪತನ

ಪಂಜಾಬ್‌: ಶುಕ್ರವಾರ ಮುಂಜಾನೆ ಪಂಜಾಬ್‌ನ ಮೊಗಾ ಬಳಿ ನಡೆದ ಮಿಗ್ -21 ವಿಮಾನ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಮಾರಣಾಂತಿಕ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಶುಕ್ರವಾರ ಮುಂಜಾನೆ 1 ಗಂಟೆ ಸುಮಾರಿಗೆ ಮೊಗಾದ ಬಾಗಾಪುರಾನದ ಲ್ಯಾಂಗಿಯಾನಾ ಖುರ್ದ್ ಗ್ರಾಮದಲ್ಲಿ ಐಎಎಫ್‌ನ ಮಿಗ್ -21 ಅಪಘಾತಕ್ಕೀಡಾಗಿದೆ. ಘಟನೆಯು ವಾಡಿಕೆಯ ತರಬೇತಿ ಹಂತದಲ್ಲಿ ನಡೆದಿದೆ ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಅಪಘಾತದಲ್ಲಿ ಪೈಲೇಟ್ ವಿಮಾನದಿಂದ ಹೊರಗೆಸೆಯಲ್ಪಟ್ಟಿದ್ದು, ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.

ಭಾರತೀಯ ವಾಯುಪಡೆಯ ಮಿಗ್ -21 ವಿಮಾನ ಪತನ Read More »

ಕೋವಿಡ್ ನಿಂದ ಅನಾಥರಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ: ಕೇಂದ್ರಕ್ಕೆ ಸೋನಿಯಾ ಸಲಹೆ

ನವದೆಹಲಿ: ಕೊರೋನಾ ಸೋಂಕಿಗೆ ಒಳಗಾಗಿ ದುಡಿದು ಸಾಕುವ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕೆಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ, ಪತ್ರವೊಂದನ್ನು ಬರೆದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿನಂತಿಸಿಕೊಂಡಿದ್ದಾರೆ. ಇದಕ್ಕಾಗಿ ದೇಶವ್ಯಾಪಿ ಇರುವ ನವೋದಯ ವಿದ್ಯಾಲಯಗಳನ್ನು ಬಳಸಿಕೊಳ್ಳಬಹುದೆಂಬ ಸಲಹೆಯನ್ನೂ ಅವರು ನೀಡಿದ್ದಾರೆ.ಇದರೊಂದಿಗೆ ತಮ್ಮ ದಿವಂಗತ ಪತಿ ಮತ್ತು ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಮಹತ್ತರ ಕೊಡುಗೆಯನ್ನು ಮತ್ತೆ ಸ್ಮರಿಸಿಕೊಂಡಾಗುತ್ತದೆ ಎಂದು ಪತ್ರದಲ್ಲಿ ಸೋನಿಯಾ ಉಲ್ಲೇಖಿಸಿದ್ದಾರೆ ಕೋವಿಡ್ ಕಾರಣದಿಂದ ಅನಾಥರಾದ ಮಕ್ಕಳಿಗೆ ನೆರವಾಗಿ,

ಕೋವಿಡ್ ನಿಂದ ಅನಾಥರಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ: ಕೇಂದ್ರಕ್ಕೆ ಸೋನಿಯಾ ಸಲಹೆ Read More »

ಬ್ಲ್ಯಾಕ್ ಫಂಗಸ್ ನಿರ್ಲಕ್ಷ್ಡಿಸಬೇಡಿ ಏಮ್ಸ್ ಮಾರ್ಗಸೂಚಿ ಸಲಹೆ, ಪತ್ತೆ ಕ್ರಮ ಮತ್ತು ಆರೈಕೆ ಸಲಹೆಗಳು ಇಲ್ಲಿವೆ

ನವದೆಹಲಿ.ಮೇ.20: ಕೊರೋನಾ ಎರಡನೇ ಅಲೆ ಅಬ್ಬರದ ನಡುವೆಯೇ ಬ್ಲ್ಯಾಕ್ ಫಂಗಸ್ ವೈದ್ಯರ ಹಾಗೂ ಜನಸಾಮಾನ್ಯರ ಆತಂಕವನ್ನು ಹೆಚ್ಚಿಸಿದೆ. ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಅಥವಾ ಮ್ಯುಕೋರ್ಮೈಕೋಸಿಸ್ಗೆ ಸಂಬಂಧಿಸಿದಂತೆ ದೆಹಲಿಯ ಪ್ರತಿಷ್ಠಿತ ವೈದ್ಯ ವಿಜ್ಞಾನ ಸಂಸ್ಥೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಬ್ಲ್ಯಾಕ್ ಫಂಗಸ್ ಅನ್ನು ಹೇಗೆ ಗುರುತಿಸಬೇಕು ಮತ್ತು ಅದಕ್ಕೆ ಏನೇನು ಕ್ರಮ ಕೈಗೊಳ್ಳಬೇಕು ಎಂಬುವುದನ್ನು ಮಾರ್ಗಸೂಚಿಯಲ್ಲಿ ವಿವರಿಸಿದೆ. ಅನಿಯಂತ್ರಿತ ಮಧುಮೇಹ ಹೊಂದಿರುವವರು ಹಾಗೂ ಅತಿ ಹೆಚ್ಚು ಸ್ಟಿರಾಯ್ಡ್ ಬಳಕೆ ಮಾಡುವವರು ಬ್ಲ್ಯಾಕ್ ಫಂಗಸ್ ಸೋಂಕಿಗೆ ಬಲುಬೇಗ ತುತ್ತಾಗುತ್ತಾರೆ.

ಬ್ಲ್ಯಾಕ್ ಫಂಗಸ್ ನಿರ್ಲಕ್ಷ್ಡಿಸಬೇಡಿ ಏಮ್ಸ್ ಮಾರ್ಗಸೂಚಿ ಸಲಹೆ, ಪತ್ತೆ ಕ್ರಮ ಮತ್ತು ಆರೈಕೆ ಸಲಹೆಗಳು ಇಲ್ಲಿವೆ Read More »

ತನ್ನ‌ ಬಾಲಕ್ಕೇ ಬೆಂಕಿಇಟ್ಟುಕೊಂಡ ದೊಡ್ಡಣ್ಣ: ಅಮೇರಿಕಾವನ್ನು ಒಂಟಿಯಾಗಿರಿಸಿದ ಇಸ್ರೇಲ್ ಪ್ರೇಮ

ವಿಶ್ವ ಕೊರೊನಾ ಬೆಂಕಿಯಲ್ಲಿ ಬಸವಳಿಯುತ್ತಿದ್ದರೆ, ಇತ್ತ ಕಡೆ ಇಸ್ರೇಲ್​​- ಪ್ಯಾಲೆಸ್ತೇನ್​​ ಸಂಘರ್ಷ 11ನೇ ದಿನಕ್ಕೆ ಕಾಲಿಟ್ಟಿದ್ದು, ಗಾಜಾಪಟ್ಟಿ ಮೇಲೆ ಇಸ್ರೇಲ್ ಬಾಂಬ್ ದಾಳಿ ಮುಂದುವರಿದಿದೆ. ಪ್ಯಾಲೆಸ್ತೇನ್​​ನಲ್ಲಿ ಮೃತರ ಸಂಖ್ಯೆ 227ಕ್ಕೆ ಏರಿಕೆಯಾದ್ರೆ, ಇಸ್ರೇಲ್ ಕಡೆ 12 ಮಂದಿ ಸಾವನ್ನಪ್ಪಿದ್ಧಾರೆ. ಈ ನಡುವೆ ಇಸ್ರೇಲ್ ಪ್ರಧಾನಿಗೆ ಕರೆ ಮಾಡಿರೋ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕದನ ವಿರಾಮದ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದ್ರೆ ನಂತರ ಮಾತನಾಡಿರೋ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್​ ತನ್ನ ಗುರಿ ತಲುಪುವವರೆಗೂ ಬಾಂಬ್

ತನ್ನ‌ ಬಾಲಕ್ಕೇ ಬೆಂಕಿಇಟ್ಟುಕೊಂಡ ದೊಡ್ಡಣ್ಣ: ಅಮೇರಿಕಾವನ್ನು ಒಂಟಿಯಾಗಿರಿಸಿದ ಇಸ್ರೇಲ್ ಪ್ರೇಮ Read More »

ಶಿಕ್ಷಣ ಮುಗಿಸಿದ ಕೂಡಲೇ ಮೈಕ್ರೋಸಾಪ್ಟ್ ನಿಂದ 2 ಕೋಟಿ ಸಂಭಾವನೆಯ ಜಾಬ್ ಆಫರ್ ಪಡೆದ ಯುವತಿ

ಹೈದರಾಬಾದ್: ಕೊರೊನಾ ಬಂದ ನಂತರ ಕೆಲಸ ಗಿಟ್ಟಿಸಿಕೊಳ್ಳುವುದು ಮೊದಲಿನಷ್ಟು ಸುಲಭವಿಲ್ಲ. ಎಷ್ಟೇ ಬುದ್ಧಿವಂತಿಕೆಯಿದ್ದರೂ ಅವಕಾಶದ ಬಾಗಿಲುಗಳು ತೆರೆಯದೇ ಅನೇಕರು ನಿರುದ್ಯೋಗಿಗಳಾಗಿ ಉಳಿದಿದ್ದಾರೆ. ಇನ್ನು ಕೆಲವರು ಕೈ ತುಂಬಾ ಸಂಬಳ ನೀಡುವ ಒಳ್ಳೆಯ ಕೆಲಸವನ್ನು ಕಳೆದುಕೊಂಡು ಅನಿವಾರ್ಯವಾಗಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಇಂತಹ ಕಾಲದಲ್ಲಿ ಹೈದರಾಬಾದ್​ನ ಯುವತಿಯೊಬ್ಬಳಿಗೆ ಸಾಫ್ಟ್​ವೇರ್ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ ವಾರ್ಷಿಕ 2ಕೋಟಿ ರೂಪಾಯಿ ಸಂಬಳ ನೀಡುವುದಾಗಿ ಹೇಳಿ ಕೆಲಸ ನೀಡಿದೆ. ಹೈದರಾಬಾದ್ ಮೂಲದ ದೀಪ್ತಿ ನಾರ್ಕುತಿ ಎಂಬ ಯುವತಿಗೆ ಇಷ್ಟು ದೊಡ್ಡ ಮಟ್ಟದ ಕೆಲಸ

ಶಿಕ್ಷಣ ಮುಗಿಸಿದ ಕೂಡಲೇ ಮೈಕ್ರೋಸಾಪ್ಟ್ ನಿಂದ 2 ಕೋಟಿ ಸಂಭಾವನೆಯ ಜಾಬ್ ಆಫರ್ ಪಡೆದ ಯುವತಿ Read More »

ಇತಿಹಾಸ ಸೃಷ್ಟಿಸಿದ ಕೇರಳ ಸರ್ಕಾರ: ದಲಿತ ಶಾಸಕನಿಗೆ ಸಿಕ್ತು ಮಹತ್ವದ ಖಾತೆ

ತಿರುವನಂತಪುರ.ಮೇ.18: ಇತ್ತೀಚೆಗೆ ಕೇರಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಒಕ್ಕೂಟ ಭರ್ಜರಿ ವಿಜಯ ಸಾಧಿಸಿದೆ. ಇದೀಗ ರಾಜ್ಯದಲ್ಲಿ ಎಡಪಂಥೀಯವ ಸರ್ಕಾರ ಸತತವಾಗಿ ಎರಡನೆ ಬಾರಿಗೆ ಅಧಿಕಾರಕ್ಕೆ ಹಿಡಿಯುತ್ತಿದೆ. ಪಿಣರಾಯಿ ವಿಜಯನ್ ಅವರ ಎರಡನೇ ಅವಧಿಯ ಸರ್ಕಾರವು ದೇವಸ್ವಂ ಇಲಾಖೆ (ಮುಜರಾಯಿ ಇಲಾಖೆ)ಗೆ ಚೆಲಕ್ಕರ ಕ್ಷೇತ್ರದ ಶಾಸಕರಾಗಿರುವ ದಲಿತ ನಾಯಕ ಕೆ. ರಾಧಾಕೃಷ್ಣನ್ ಅವರನ್ನು ಸಚಿವರನ್ನಾಗಿ ನೇಮಿಸುವ ಮೂಲಕ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. 1996 ರಲ್ಲಿ ಇ.ಕೆ.ನಯನಾರ್ ಅವರ ಸಂಪುಟದಲ್ಲಿ ಎಸ್‌ಸಿ/ಎಸ್‌ಟಿ ಅಭಿವೃದ್ಧಿ ಸಚಿವರಾಗಿದ್ದ ಪರಿಶಿಷ್ಟ

ಇತಿಹಾಸ ಸೃಷ್ಟಿಸಿದ ಕೇರಳ ಸರ್ಕಾರ: ದಲಿತ ಶಾಸಕನಿಗೆ ಸಿಕ್ತು ಮಹತ್ವದ ಖಾತೆ Read More »

ರಷ್ಯಾ ಪ್ರವಾಸದೊಂದಿಗೆ ಲಸಿಕೆ!! ಈ ಟೂರಿಸಂ ಬೆಲೆ ಎಷ್ಟು?

ನವದೆಹಲಿ: ದೇಶದಲ್ಲಿ ಲಸಿಕೆ ಕೊರತೆ ಬೆನ್ನಲ್ಲೇ ಹಲವು ಭಾರತೀಯರು ವಿದೇಶದಲ್ಲಿ ಲಸಿಕೆ ಹಾಕಿಸಿಕೊಂಡು ಬರಲು ಯೋಜನೆ ರೂಪಿಸುತ್ತಿರುವಾಗ, ದೆಹಲಿಯ ಟ್ರಾವೆಲ್ ಏಜೆನ್ಸಿಯೊಂದು ರಷ್ಯಾ ಲಸಿಕೆ ಪ್ರವಾಸವೆಂಬ ಭರ್ಜರಿ ಆಫರ್ ಘೋಷಿಸಿದೆ. ಈ ಆಫರ್‌ನಲ್ಲಿ 24 ದಿನಗಳ ರಷ್ಯಾ ಪ್ರವಾಸ ಸೇರಿದಂತೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಳ್ಳಬಹುದಾಗಿದೆ. ಎರಡೂ ಡೋಸ್ ವ್ಯಾಕ್ಸಿನ್ ಪಡೆಯಲು 21 ದಿನಗಳ ಅಂತರವಿದ್ದು, ಈ ಸಮಯದಲ್ಲಿ ಪ್ರಯಾಣಿಕರು ರಷ್ಯಾ ಪ್ರವಾಸ ಮಾಡಬಹುದಾಗಿದೆ. 24 ದಿನಗಳ ಈ ಪ್ರವಾಸಕ್ಕೆ 1.29 ಲಕ್ಷ ರೂ.

ರಷ್ಯಾ ಪ್ರವಾಸದೊಂದಿಗೆ ಲಸಿಕೆ!! ಈ ಟೂರಿಸಂ ಬೆಲೆ ಎಷ್ಟು? Read More »