ದೇಶ-ವಿದೇಶ

ದೇಶದಲ್ಲಿ ಒಂದೇ ದಿನ 1.2 ಲಕ್ಷ ಕೋವಿಡ್ ಸೋಂಕು ಪ್ರಕರಣ ಪತ್ತೆ

ನವದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಕೊಂಚ ಕೊಂಚವಾಗಿ ಇಳಿಕೆಯಾಗುತ್ತಿದೆ. ಇದೀಗ ಕಳೆದ 24 ಗಂಟೆಗಳಲ್ಲಿ, ಭಾರತವು ಕೋವಿಡ್-19 ರ 1.2 ಲಕ್ಷ ಹೊಸ ಪ್ರಕರಣಗಳನ್ನು ದಾಖಲಿಸಿದೆ, ಇದು ಕಳೆದ 58 ದಿನಗಳಲ್ಲಿ ಪ್ರಕರಣಗಳ ಕನಿಷ್ಠ ಏಕ ದಿನದ ಹೆಚ್ಚಳವಾಗಿದೆ. ದೇಶದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು 15,55,248. ದೇಶಾದ್ಯಂತ ಕೋವಿಡ್ ಸೋಂಕಿನಿಂದ ಈವರೆಗೆ ೨.೬೭ ಕೋಟಿಗೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ, ಕಳೆದ ೨೪ ಗಂಟೆಗಳಲ್ಲಿ 1,97,894 ಜನರು ಚೇತರಿಸಿಕೊಂಡಿದ್ದಾರೆ.ದೈನಂದಿನ ಪಾಸಿಟಿವಿಟಿ ದರವು ಶೇಕಡಾ 5.78 ಕ್ಕೆ […]

ದೇಶದಲ್ಲಿ ಒಂದೇ ದಿನ 1.2 ಲಕ್ಷ ಕೋವಿಡ್ ಸೋಂಕು ಪ್ರಕರಣ ಪತ್ತೆ Read More »

ಲಸಿಕೆ ಪಡೆಯಲು ಹಿಂಜರಿಯುವವರಿಗೆ ಇವರೇ ಸ್ಫೂರ್ತಿ | ಮೊದಲ ಡೋಸ್ ಪಡೆದು ಆರೋಗ್ಯವಾಗಿದ್ದಾರೆ 124 ವರ್ಷದ ಅಜ್ಜಿ

ಶ್ರೀನಗರ: ಜಗತ್ತನ್ನೇ ನಡುಗಿಸಿ ಕ್ರೌರ್ಯ ಮೆರೆಯುತ್ತಿರುವ ಕೊರೋನ ಕಂಡರೆ, ಕೇಳಿದರೆ ಹಲವರಿಗೆ ಭಯ. ಕಳೆದೆರಡು ವರ್ಷದಲ್ಲಿ ತಾಂಡವವಾಡುತ್ತಿರುವ ಕೊರೋನ ಜೀವ-ಜಗತ್ತನ್ನೇ ನಡುಗಿಸಿದ ಬಿಟ್ಟಿದೆ. ಕೊರೋನ ಹೆಸರು ಕೇಳಿ ಭಯ ಪಡುವುದರಲ್ಲಿ ತಪ್ಪಿಲ್ಲ ಆದರೆ ಕೆಲ ಜನರು ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳಲು ಭಯಪಟ್ಟು ಹಿಂಜರಿಯುತ್ತಿರುವುದು ಅಚ್ಚರಿಯ ವಿಷಯ. ಆದರೆ ಇಲ್ಲೊಬ್ಬ ಬರೋಬ್ಬರಿ 124 ವರ್ಷದ ವೃದ್ಧರೊಬ್ಬರು ಮೊದಲ ಡೋಸ್ ಲಸಿಕೆ ಪಡೆದು ವ್ಯಾಕ್ಸಿನ್ ಪಡೆಯಲು ಹಿಂಜರಿಕೆ ಉಳ್ಳವರಿಗೆ ಸ್ಪೂರ್ತಿ ಎನಿಸಿದ್ದಾರೆ. ಇವರ ಹೆಸರು ರೆಹತಿ ಬೇಗಂ. ಜಮ್ಮು ಕಾಶ್ಮೀರದ

ಲಸಿಕೆ ಪಡೆಯಲು ಹಿಂಜರಿಯುವವರಿಗೆ ಇವರೇ ಸ್ಫೂರ್ತಿ | ಮೊದಲ ಡೋಸ್ ಪಡೆದು ಆರೋಗ್ಯವಾಗಿದ್ದಾರೆ 124 ವರ್ಷದ ಅಜ್ಜಿ Read More »

ಮರುಕಳಿಸಿದ ಎರಡು ವರ್ಷದ ಹಿಂದಿನ ದುರಂತ | ವಿದ್ಯುತ್ ಶಾಕ್ ತಗುಲಿ ಮಹಿಳೆ ಸಾವು

ಕಾಸರಗೋಡು : ವಿದ್ಯುತ್ ಶಾಕ್ ತಗಲಿ ಮಹಿಳೆ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಏತಡ್ಕದ ಪುತ್ರಕಳ ರಸ್ತೆಯ ಅಳಕ್ಕೆ ಎಂಬಲ್ಲಿ ನಿನ್ನೆ ನಡೆದಿದೆ. ಏತಡ್ಕ ಸಮೀಪ ಉದ್ಯೋಗ ಖಾತರಿ ಕೆಲಸ ಮುಗಿಸಿ ಸಂಜೆ ಮನೆಗೆ ಹಿಂತಿರುಗುವ ದಾರಿ ಮಧ್ಯೆ ಈ ಅನಾಹುತ ಸಂಭವಿಸಿದೆ. ಏತಡ್ಕ ಅಳಕ್ಕೆ ನಿವಾಸಿ ರಾಮಚಂದ್ರ ಮಣಿಯಾಣಿ ಅವರ ಪತ್ನಿ ಸುಜಾತಾ (50) ಮೃತ ದುರ್ದೈವಿ. ಏತಡ್ಕ ಸುತ್ತಮುತ್ತ ರಸ್ತೆ ಬದಿ ಕಾಡು ಬಳ್ಳಿಗಳು ಎಚ್ ಟಿ ತಂತಿಯನ್ನು ಆವರಿಸಿದ್ದು ಹಸಿರು ಪೊದೆಯನ್ನು ಅರಿವಿಲ್ಲದೇ

ಮರುಕಳಿಸಿದ ಎರಡು ವರ್ಷದ ಹಿಂದಿನ ದುರಂತ | ವಿದ್ಯುತ್ ಶಾಕ್ ತಗುಲಿ ಮಹಿಳೆ ಸಾವು Read More »

ಹೀಗೂ ಉಂಟು: ನಾಯಿಯನ್ನು‌ ವರಿಸಿದ ಯುವತಿ: ನಂತರ ಏನಾಯ್ತು ಗೊತ್ತಾ?

ಎಂಥ ಅಚ್ಚರಿಯಲ್ಲವೇ! ಎಲ್ಲಾದರೂ ಉಂಟೇ? ನಮಗೆ ತಿಳಿದಿರುವ ಹಾಗೆ ಮದುವೆ ಎಂದರೆ ಮನುಷ್ಯರ ನಡುವೆ ಆಗುತ್ತದೆ. ಆದರೆ ಇಲ್ಲೊಂದು ವಿಶೇಷ ಸುದ್ದಿ ಇದೆ. ಪ್ರಪಂಚದಲ್ಲಿ ಈ ರೀತಿಯ ವಿಚಿತ್ರಗಳು ನಡೆಯುತ್ತಿರುತ್ತವೆ .ಇಂತಹ ಅನಿರೀಕ್ಷಿತ ಸನ್ನಿವೇಶಗಳು ಸಾಮಾನ್ಯ ಜನರಿಗೆ ಪ್ರೇರೇಪಿಸುತ್ತಿರುತ್ತವೆ. ಇಂತಹ ಸುದ್ದಿ ಗಳನ್ನು ಓದಿದಾಗ ಇಂತಹದ್ದೂ ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಸಂಗತಿ ಓದಿದರೇ ನಿಜಕ್ಕೂ ಆಶ್ಚರ್ಯವೆನಿಸಬಹುದು. ಈ ಘಟನೆ ಜಾರ್ಖಂಡ್ ನಲ್ಲಿ ಮಂಗಳಿ ಮುಂಡ ಎಂಬ 18 ವರ್ಷದ ಯುವತಿ ನಾಯಿಯೊಂದನ್ನು ಮದುವೆಯಾದ ವಿಚಿತ್ರ

ಹೀಗೂ ಉಂಟು: ನಾಯಿಯನ್ನು‌ ವರಿಸಿದ ಯುವತಿ: ನಂತರ ಏನಾಯ್ತು ಗೊತ್ತಾ? Read More »

ಲಸಿಕೆ ಖರೀದಿಗೆ ಮೀಸಲಿಟ್ಟ ಹಣ ಏನಾಯ್ತ? ಕೇಂದ್ರದ ಕಿವಿ ಹಿಂಡಿದ ಸುಪ್ರೀಂ

ನವದೆಹಲಿ: ಡಿಸೆಂಬರ್ ಹೊತ್ತಿಗೆ ದೇಶದ ಎಲ್ಲರಿಗೂ ವ್ಯಾಕ್ಸಿನ್ ಸಿಗಲಿದೆ ಅಂತ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಲೇ ಇದೆ. ಈ ಮಧ್ಯೆ ಲಸಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕಿವಿ ಹಿಂಡಿದೆ. ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ ಅನುದಾನ ಏನಾಯಿತು ಅಂತ ಲೆಕ್ಕ ಪರಿಶೋಧನೆಗೆ ಸೂಚಿಸಿದೆ. ಬಜೆಟ್‍ನಲ್ಲಿ ಮೀಸಲಿಟ್ಟಿದ್ದ 35 ಸಾವಿರ ಕೋಟಿ ರೂ. ಏನಾಯಿತು? ಇದುವರೆಗೂ ಎಷ್ಟು ಮೊತ್ತದ ವ್ಯಾಕ್ಸಿನ್ ಖರೀದಿಗೆ ಆದೇಶ ನೀಡಲಾಗಿದೆ. 3 ಲಸಿಕೆಗಳ ಖರೀದಿಗೆ ಯಾವಾಗ ಆದೇಶ ಕೊಡಲಾಯಿತು ಮತ್ತು ಎಷ್ಟು ಬೆಲೆ? ಕೋವಿಶೀಲ್ಡ್, ಕೋವ್ಯಾಕ್ಸಿನ್,

ಲಸಿಕೆ ಖರೀದಿಗೆ ಮೀಸಲಿಟ್ಟ ಹಣ ಏನಾಯ್ತ? ಕೇಂದ್ರದ ಕಿವಿ ಹಿಂಡಿದ ಸುಪ್ರೀಂ Read More »

ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಮುಸ್ಲಿಮ್ ಒಕ್ಕೂಟ

ನವದೆಹಲಿ: ಕೇಂದ್ರ ಸರ್ಕಾರ ಕಳೆದ ಶುಕ್ರವಾರ ಹೊರಡಿಸಿದ್ದ ಪೌರತ್ವ ಅಧಿಸೂಚನೆ ವಿರುದ್ಧ ಐಯುಎಂಎಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮುಸ್ಲಿಮೇತರರಿಗೆ ಪೌರತ್ವ ನೀಡುವ ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆಯನ್ನು ತಡೆಹಿಡಿಯುವಂತೆ ಒತ್ತಾಯಿಸಿ ಭಾರತೀಯ ಮುಸ್ಲಿಂ ಲೀಗ್ ಒಕ್ಕೂಟ ಸುಪ್ರೀಂಕೋರ್ಟ್ನಲ್ಲಿ ಇಂದು ಅರ್ಜಿ ಸಲ್ಲಿಸಿದೆ. ಕಳೆದ ಶುಕ್ರವಾರ ಕೇಂದ್ರ ಗೃಹ ಸಚಿವಾಲಯ, ಭಾರತದಲ್ಲಿ ವಾಸವಿರುವ, ಬಾಂಗ್ಲಾದೇಶ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಸೇರಿದ ನಿರಾಶ್ರಿತ ಮುಸ್ಲಿಮೇತರ ಧರ್ಮದವರಿಂದ ಭಾರತದ ಪೌರತ್ವಕ್ಕಾಗಿ ಅರ್ಜಿ ಆಹ್ವಾನಿಸಿತ್ತು. ಧರ್ಮದ ಆಧಾರದಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಜಿದಾರನ

ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಮುಸ್ಲಿಮ್ ಒಕ್ಕೂಟ Read More »

ಕೇಂದ್ರ ಸಚಿವ ರಮೇಶ್ ಪೋಖ್ರಿಯಾಳ್ ಆರೋಗ್ಯದಲ್ಲಿ ವ್ಯತ್ಯಯ: ಆಸ್ಪತ್ರೆಗೆ ದಾಖಲು

ದೆಹಲಿ : ಕೊರೋನಾ ಸೋಂಕಿನ ನಂತರ ಉಂಟಾದಂತ ತೊಂದರೆಯಿಂದಾಗಿ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಳ್ ನಿಶಾಂಕ್ ಅವರು, ಅನಾರೋಗ್ಯಕ್ಕೆ ಒಳಗಾಗಿ, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತಂತೆ ದೆಹಲಿಯ ಏಮ್ಸ್ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, ಕೋವಿಡ್-19 ರ ನಂತರದ ತೊಡಕುಗಳಿಂದಾಗಿ ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರನ್ನು ಮಂಗಳವಾರ ಏಮ್ಸ್ ಗೆ ದಾಖಲಿಸಲಾಗಿದೆ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.ಸಚಿವ ರಮೇಶ್ ಪೋಖ್ರಿಯಾಳ್ ಇತ್ತೀಚೆಗೆ ಕೊರೋನಾ

ಕೇಂದ್ರ ಸಚಿವ ರಮೇಶ್ ಪೋಖ್ರಿಯಾಳ್ ಆರೋಗ್ಯದಲ್ಲಿ ವ್ಯತ್ಯಯ: ಆಸ್ಪತ್ರೆಗೆ ದಾಖಲು Read More »

‘ತಂಬಾಕಿಗೆ ಹೇಳಬೇಕು ನೀನಿನ್ನು ಸಾಕು’ ತಂಬಾಕಿನ ವಿಷಪಾನದಿಂದ ಮುಕ್ತರಾಗೋಣ

ಮೇ 31 ವಿಶ್ವ ತಂಬಾಕು ರಹಿತ ದಿನ. ‘ಜೀವನ ಜಯಿಸಲು ತಂಬಾಕು ತ್ಯಜಿಸಿ’ (quit tobacco to be a winner) ಈ ಬಾರಿಯ ಘೋಷವಾಕ್ಯ. ಹಿಂದೆಂದಿಗಿಂತಲೂ ಈ ಬಾರಿಯ ಘೋಷವಾಕ್ಯ ಹೆಚ್ಚು ಅರ್ಥಪೂರ್ಣವಾಗಿದೆ. ಇಂದಿನ ಕೋವಿಡ್‌ ಸನ್ನಿವೇಶದಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಮುಕ್ತಿ ಪಡೆಯುವುದು ಬಹಳ ಅಗತ್ಯ ಮತ್ತು ಅನಿವಾರ್ಯ ಕ್ರಮವಾಗಿದೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಅಷ್ಟೆ ಅಲ್ಲ, ಧೂಮಪಾನ ಮತ್ತು ತಂಬಾಕು ಸೇವನೆಯನ್ನು ತ್ಯಜಿಸಲು ನೂರಾರು ಕಾರಣ, ಅಂತಹ ಹಲವು ಕಾರಣಗಳನ್ನು

‘ತಂಬಾಕಿಗೆ ಹೇಳಬೇಕು ನೀನಿನ್ನು ಸಾಕು’ ತಂಬಾಕಿನ ವಿಷಪಾನದಿಂದ ಮುಕ್ತರಾಗೋಣ Read More »

ಕೊರೋನಾದಿಂದ ರಕ್ಷಿಸಿಕೊಳ್ಳಲು ಬೈಕಿಗೆ ಬಬಲ್ | ಇಲ್ಲಿದೆ ವೈರಲ್ ವೀಡಿಯೋ

ನವದೆಹಲಿ: ಕರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಅನೇಕ ರೀತಿಯ ಪ್ಲ್ಯಾನ್‌ ಮಾಡುವಲ್ಲಿ ಕೆಲವರು ನಿರತರಾಗಿದ್ದಾರೆ. ಅಂಥದ್ದೇ ಒಂದು ಕುತೂಹಲ ಎನ್ನುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲರ ಮನಸ್ಸನ್ನು ಗೆದ್ದಿದೆ. ವೈರಸ್‌ನಿಂದ ರಕ್ಷಿಸಿಕೊಳ್ಳಲು ವ್ಯಕ್ತಿಯೊಬ್ಬ ಬೈಕ್‌ಗೆ ಟಾರ್ಪಲ್ ಮಾದರಿ ವೈಟ್‌ಶೀಟ್‌ ಹಾಕಿದ್ದಾನೆ. ಇಡೀ ಬೈಕ್‌ ಅನ್ನು ಇದರಿಂದ ಮುಚ್ಚಿದ್ದಾನೆ. ವ್ಯಕ್ತಿಯು ಬೈಕ್‍ನಲ್ಲಿ ಕಬ್ಬಿಣದ ರಾಡ್‍ಗಳನ್ನು ಬೈಕ್ ಸುತ್ತಲೂ ಅಳವಡಿಸಿದ್ದು, ಅದಕ್ಕೆ ಬಿಳಿ ಪ್ಲಾಸ್ಟಿಕ್ ಶೀಟ್‍ ಹೊದಿಸಿದ್ದಾನೆ. ಇದನ್ನು ಗುಳ್ಳೆ ಆಕಾರದಲ್ಲಿ ಇರುವ ಕಾರಣ ಬಬಲ್‌ ಮಾದರಿ

ಕೊರೋನಾದಿಂದ ರಕ್ಷಿಸಿಕೊಳ್ಳಲು ಬೈಕಿಗೆ ಬಬಲ್ | ಇಲ್ಲಿದೆ ವೈರಲ್ ವೀಡಿಯೋ Read More »

ನೈಟ್ರೋಜನ್ ಆಕ್ಸೈಡ್ ಲೀಕೇಜ್ ಪರಿಣಾಮ: ಆ್ಯಸಿಡ್ ಮಳೆ ಭೀತಿಯಲ್ಲಿ ಕೊಲಂಬೋ

ಕೊಲಂಬೋ,ಮೇ.29-ಕಳೆದ ವಾರ ಕೊಲಂಬೊ ಸಮುದ್ರ ತೀರದಲ್ಲಿ ಸಿಂಗಾಪೂರ್ ನ ಸರಕು ಸಾಗಾಣೆ ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ನೈಟ್ರೋಜನ್ ಡೈ ಆಕ್ಸೆಡ್ ಹೊರಸೂಸಿರುವುದರಿಂದ ಸಮೀಪದ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದ ಆಸಿಡ್ ಮಳೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹೀಗಾಗಿ ಕೊಲಂಬೊ ಸುತ್ತಮುತ್ತಲಿನ ಜನ ಎಚ್ಚರಿಕೆ ವಹಿಸಬೇಕು ಎಂದು ಶ್ರೀಲಂಕಾ ಪರಿಸರ ಇಲಾಖೆ ಕರೆ ನೀಡಿದೆ.ಗುಜರಾತ್‍ನ ಹಜೀರಾದಿಂದ ಕೆಮಿಕಲ್ ಹಾಗೂ ಕಾಸ್ಮೇಟಿಕ್ ಕಚ್ಚಾ ವಸ್ತುಗಳನ್ನು ಕೊಲಂಬೊ ತರುತ್ತಿದ್ದ ಸಿಂಗಾಪೂರ್‍ನ ಎಂವಿ ಎಕ್ಸ್‍ಪ್ರೆಸ್ ಪರ್ಲ್ ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಹಡಗಿನ ಟ್ಯಾಂಕಿನಲ್ಲಿ

ನೈಟ್ರೋಜನ್ ಆಕ್ಸೈಡ್ ಲೀಕೇಜ್ ಪರಿಣಾಮ: ಆ್ಯಸಿಡ್ ಮಳೆ ಭೀತಿಯಲ್ಲಿ ಕೊಲಂಬೋ Read More »