ಕ್ರೈಂ

ಸುಳ್ಯ: ಯುವ ಉದ್ಯಮಿ ನವೀನ್ ಮಲ್ಲಾರ ಅಪಹರಣ ಪ್ರಕರಣ| ಅಂಬ್ಯುಲೆನ್ಸ್ ನಲ್ಲಿ ಅಳಿಯನನ್ನೇ ಕಿಡ್ನಾಪ್ ಮಾಡಿಸಿದ್ರಾ ಕೈ ನಾಯಕಿ ದಿವ್ಯಪ್ರಭಾ ಚಿಲ್ತಡ್ಕ? ಸುಂಟಿಕೊಪ್ಪದಲ್ಲಿ ಹೈಡ್ರಾಮಾ…!

ಸಮಗ್ರ ನ್ಯೂಸ್: ತೀವ್ರ ಕುತೂಹಲ ಕೆರಳಿಸಿದ ಬೆಳ್ಳಾರೆಯ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಕಾಮಧೇನು ಅವರನ್ನು ಕಿಡ್ನಾಪ್ ಮಾಡಿರುವ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಡಿ.19ರ ಮಧ್ಯಾಹ್ನ ಬೆಳ್ಳಾರೆಯ ಕಾವಿನಮೂಲೆಯಲ್ಲಿರುವ ನವೀನ್ ರ ಮನೆಗೆ ಬಂದ ತಂಡವೊಂದು ಮನೆಯಲ್ಲಿದ್ದ ನವೀನ್ ಅವರನ್ನು ಬಲವಂತವಾಗಿ ಕೊಂಡೊಯ್ದಿದ್ದು, ತಡೆದ ತಾಯಿಯ ಮೇಲೆ ಹಲ್ಲೆ ನಡೆಸಿ ಅಂಬ್ಯುಲೆನ್ಸ್ ನಲ್ಲಿ ಪರಾರಿಯಾಗಿದ್ದರು. ಇವರನ್ನು ಆಂಬ್ಯುಲೆನ್ಸ್ ನಲ್ಲಿ‌ ಅಪಹರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಶಿವ ಆಂಬ್ಯುಲೆನ್ಸ್ ನವರು ತಮ್ಮ ಗ್ರೂಪ್ ಗಳಿಗೆ ಮಾಹಿತಿ […]

ಸುಳ್ಯ: ಯುವ ಉದ್ಯಮಿ ನವೀನ್ ಮಲ್ಲಾರ ಅಪಹರಣ ಪ್ರಕರಣ| ಅಂಬ್ಯುಲೆನ್ಸ್ ನಲ್ಲಿ ಅಳಿಯನನ್ನೇ ಕಿಡ್ನಾಪ್ ಮಾಡಿಸಿದ್ರಾ ಕೈ ನಾಯಕಿ ದಿವ್ಯಪ್ರಭಾ ಚಿಲ್ತಡ್ಕ? ಸುಂಟಿಕೊಪ್ಪದಲ್ಲಿ ಹೈಡ್ರಾಮಾ…! Read More »

ಸುಳ್ಯ: ಯುವ ಉದ್ಯಮಿ ನವೀನ್ ಮಲ್ಲಾರ ಅಪಹರಣ| ಸುಂಟಿಕೊಪ್ಪದಲ್ಲಿ ಕಿಡ್ನಾಪರ್ಸ್ ಗಳ ವಾಹನಕ್ಕೆ ತಡೆ; ಪೊಲೀಸರಿಗೆ ಹಸ್ತಾಂತರ

ಸಮಗ್ರ ನ್ಯೂಸ್: ಬೆಳ್ಳಾರೆಯ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಕಾಮಧೇನು ಅವರನ್ನು ಅಪರಿಚಿತ ತಂಡವೊಂದು ಬಂದು ಬಲವಂತವಾಗಿ ಆಂಬ್ಯುಲೆನ್ಸ್ ನಲ್ಲಿ ಅಪಹರಣ ಮಾಡಿದ್ದು, ಕಿಡ್ನಾಪರ್ ಗಳ ವಾಹನಕ್ಕೆ ಸುಂಟಿಕೊಪ್ಪದಲ್ಲಿ ತಡೆಯೊಡ್ಡಲಾಗಿದೆ. ಮನೆಗೆ ಬಂದ ತಂಡವೊಂದು ಮನೆಯಲ್ಲಿದ್ದ ನವೀನ್ ಅವರನ್ನು ಬಲವಂತವಾಗಿ ಕೊಂಡೊಯ್ದಿದ್ದು, ತಡೆದ ತಾಯಿಯ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿತ್ತು. ಇತ್ತೀಚಿನ ಮಾಹಿತಿಯಂತೆ, ಇವರನ್ನು ಆಂಬ್ಯುಲೆನ್ಸ್ ನಲ್ಲಿ‌ ಅಪಹರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಶಿವ ಆಂಬ್ಯುಲೆನ್ಸ್ ನವರು ತಮ್ಮ ಗ್ರೂಪ್ ಗಳಿಗೆ ಮಾಹಿತಿ ರವಾನಿಸಿದ

ಸುಳ್ಯ: ಯುವ ಉದ್ಯಮಿ ನವೀನ್ ಮಲ್ಲಾರ ಅಪಹರಣ| ಸುಂಟಿಕೊಪ್ಪದಲ್ಲಿ ಕಿಡ್ನಾಪರ್ಸ್ ಗಳ ವಾಹನಕ್ಕೆ ತಡೆ; ಪೊಲೀಸರಿಗೆ ಹಸ್ತಾಂತರ Read More »

ಸುಳ್ಯ: ಯುವ ಉದ್ಯಮಿಯ ಕಿಡ್ನಾಪ್?

ಸಮಗ್ರ ನ್ಯೂಸ್: ಬೆಳ್ಳಾರೆಯ ಯುವ ಉದ್ಯಮಿಯೋರ್ವರನ್ನು ಅಪರಿಚಿತ ತಂಡವೊಂದು ಕಿಡ್ನಾಪ್ ಮಾಡಿರುವ ಬಗ್ಗೆ ವರದಿಯಾಗಿದೆ. ಮನೆಗೆ ಬಂದ ಅಪರಿಚಿತ ತಂಡವೊಂದು ಕಾಮಧೇನು ಜ್ಯುವೆಲ್ಲರ್ ನ ಮಾಲೀಕ ಉದ್ಯಮಿ ನವೀನ್ ಮಲ್ಲಾರರನ್ನು ಕಿಡ್ನಾಪ್ ಮಾಡಿದ್ದು, ಅವರ ತಾಯಿಯನ್ನು ತಳ್ಳಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕೇರಳ ಮೂಲದ ಅಂಬ್ಯುಲೆನ್ಸ್ ನಲ್ಲಿ ದುಷ್ಕರ್ಮಿಗಳು ಬಂದಿರುವುದಾಗಿ ಹೇಳಲಾಗುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಉದ್ಯಮಿ ನವೀನ್ ಅವರ ತಾಯಿ ನೀರಜಾರವರು ಪ್ರತಿಕ್ರಿಯೆ ನೀಡಿದ್ದು, ”ಮಗನನ್ನು ನನ್ನ ಕಣ್ಣೆದುರೇ ಎಳೆದೊಯ್ಯಲಾಗಿದೆ. ನನಗೆ ಮಗ ಬೇಕು”

ಸುಳ್ಯ: ಯುವ ಉದ್ಯಮಿಯ ಕಿಡ್ನಾಪ್? Read More »

ನಾಲ್ವರನ್ನು ಮದ್ವೆಯಾಗಿ ಇಬ್ಬರೊಟ್ಟಿಗೆ ಎಂಗೇಜ್ ಆಗಿದ್ದ ಚಪಲ ಚೆನ್ನಿಗರಾಯ|

ಸಮಗ್ರ ನ್ಯೂಸ್: ನಾಲ್ವರನ್ನು ಮದುವೆಯಾಗಿ, ಇನ್ನೂ ಇಬ್ಬರನ್ನು ಎಂಗೇಜ್‌ಮೆಂಟ್‌ ಮಾಡಿಕೊಂಡು ಎಲ್ಲರನ್ನೂ ಪರಸ್ಪರ ಗೊತ್ತೇ ಆಗದಂತೆ ಮೇಂಟೇನ್‌ ಮಾಡುತ್ತಿದ್ದ ಚಪಲ ಚೆನ್ನಿಗರಾಯನನ್ನು ಪೊಲೀಸರು ಬಂಧಿಸಿದ್ದಾರೆ. ಶೇಖ್ ಫಾರೂಕ್ ಎಂಬಾತನೇ ನಾಲ್ವರು ಹೆಂಡಿರ ಗಂಡ. ಈತ ನಾಲ್ಕು ಮಂದಿ ಹೆಣ್ಣು ಮಕ್ಕಳನ್ನು ಮದುವೆಯಾಗಿ, ಇನ್ನೂ ಇಬ್ಬರ ಜತೆಗೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದ. ನಾಲ್ವರೂ ಕೂಡ ಈತ ತನಗೊಬ್ಬಳಿಗೇ ಪತಿ ಅಂದುಕೊಂಡಿದ್ದರು. ನಾಲ್ಕು ಜನ ಹೆಂಡತಿಯರಿಗೂ ಅನುಮಾನ ಬಾರದ ರೀತಿಯಲ್ಲಿ ನೋಡಿಕೊಂಡಿದ್ದ. ಪ್ರತೀ ಪತ್ನಿಯ ಕಡೆಯಿಂದಲೂ ನಯವಾಗಿ ಹಣ, ಚಿನ್ನಾಭರಣ ಲಪಟಾಯಿಸುತ್ತಿದ್ದ.

ನಾಲ್ವರನ್ನು ಮದ್ವೆಯಾಗಿ ಇಬ್ಬರೊಟ್ಟಿಗೆ ಎಂಗೇಜ್ ಆಗಿದ್ದ ಚಪಲ ಚೆನ್ನಿಗರಾಯ| Read More »

ತಾಲಿಬಾನ್ ಉಗ್ರರರ ವಶವಾದ ಪಾಕಿಸ್ತಾನದ ಪೊಲೀಸ್ ಠಾಣೆ

ಇಸ್ಲಾಮಾಬಾದ್: ತಾಲಿಬಾನ್ ಉಗ್ರರು ಭಾನುವಾರ ಪಾಕಿಸ್ತಾನದ ವಾಯುವ್ಯ ಪ್ರದೇಶದ ಖೈಬರ್ ಪಖ್ತುಂಖ್ವಾದಲ್ಲಿ ಪೊಲೀಸ್ ಠಾಣೆಯನ್ನು ವಶಪಡಿಸಿಕೊಂಡಿದ್ದಾರೆ. ಇದು ಮಾತ್ರವಲ್ಲದೇ ಹಲವಾರು ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಉಗ್ರರು ಪ್ರದೇಶದ ಬನ್ನು ಕಂಟೋನ್ಮೆಂಟ್ ಅನ್ನು ನುಸುಳಿ, ಜೈಲಿನಲ್ಲಿದ್ದ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ಕಾಂಪೌಂಡ್‌ನ ಒಂದು ಭಾಗವನ್ನು ವಶಕ್ಕೆ ಪಡೆದು, ಭಯೋತ್ಪಾದನಾ ನಿಗ್ರಹ ಇಲಾಖೆಗೆ ಸೇರಿದ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ಪಾಕಿಸ್ತಾನದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಯೋತ್ಪಾದಕರು ಹೊರಗಿನಿಂದ

ತಾಲಿಬಾನ್ ಉಗ್ರರರ ವಶವಾದ ಪಾಕಿಸ್ತಾನದ ಪೊಲೀಸ್ ಠಾಣೆ Read More »

ದಟ್ಟ ಮಂಜಿನಿಂದ 22 ವಾಹನಗಳು ಸರಣಿ ಅಪಘಾತ

ಚಂಡೀಗಢ: ದಟ್ಟ ಮಂಜಿನಿಂದಾಗಿ ರಸ್ತೆ ಕಾಣದಂತಾಗಿ 22 ವಾಹನಗಳು ಸರಣಿ ಅಪಘಾತಕ್ಕೀಡಾಗಿರುವ ಘಟನೆ ಹರಿಯಾಣದಿಂದ ವರದಿಯಾಗಿದೆ. ಭಾನುವಾರ ಯಮುನಾ ನಗರದ ಬಳಿ ಅಂಬಲಾ-ಸಹಾರಪುರ ಹೆದ್ದಾರಿಯಲ್ಲಿ ಒಟ್ಟು 22 ವಾಹನಗಳು ಅಪಘಾತಕ್ಕೀಡಾಗಿವೆ. ಘಟಯಲ್ಲಿ 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರದೇಶದಲ್ಲಿ ದಟ್ಟವಾದ ಮಂಜು ಕವಿದಿದ್ದ ಕಾರಣ ರಸ್ತೆ ಸ್ಪಷ್ಟವಾಗಿ ಕಾಣಿಸದೇ ಅಪಘಾತಗಳು ಸಂಭವಿಸಿವೆ. ಘಟನೆಯಲ್ಲಿ ಹಲವು ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿ ವಾಹನಗಳನ್ನು ತೆರವುಗೊಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಟ್ರಾಫಿಕ್ ಎಸ್‌ಹೆಸ್‌ಒ

ದಟ್ಟ ಮಂಜಿನಿಂದ 22 ವಾಹನಗಳು ಸರಣಿ ಅಪಘಾತ Read More »

ನಟ ದರ್ಶನ್ ಗೆ ‘ಪವರ್’ ತೋರಿಸಿದ ಪುನೀತ್ ಅಭಿಮಾನಿಗಳು| ಶೂ ಎಸೆದು ‘ದಾಸ’ನಿಗೆ ಅವಮಾನ!!

ಸಮಗ್ರ ನ್ಯೂಸ್: ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ದರ್ಶನ್ ಅವರು ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್‌ ವಿರುದ್ಧ ಮಾತನಾಡಿ, ಆರೋಪ ಹಿನ್ನೆಲೆ ನಿನ್ನೆ ತಡರಾತ್ರಿ ವಿಜಯನಗರ ಹೊಸಪೇಟೆಯ ವಾಲ್ಮೀಕಿ ವೃತ್ತದಲ್ಲಿ ನಟ ದರ್ಶನ್ ಮೇಲೆ ಶೂ ಎಸೆದು ಅಪಮಾನ ಮಾಡಿದ್ದಾರೆ. ‘ಕ್ರಾಂತಿ’ ಸಿನಿಮಾದ ಹಾಡು ಬಿಡುಗಡೆ ಸಮಾರಂಭದಲ್ಲಿ ನಟಿ ರಚಿತಾ ರಾಮ್ ಮಾತನಾಡುವಾಗ ಅವರ ಬಳಿ ನಿಂತಿದ್ದ‌ ನಟ ದರ್ಶನ್ ಮೇಲೆ ಜನರ ಗುಂಪಿನಿಂದ ವ್ಯಕ್ತಿಯೊಬ್ಬರು ಅವರ ಮೇಲೆ ಶೂ ಎಸೆದು, ಪೋಸ್ಟರ್ ಹರಿದು ಹಾಕುವ ಮೂಲಕ

ನಟ ದರ್ಶನ್ ಗೆ ‘ಪವರ್’ ತೋರಿಸಿದ ಪುನೀತ್ ಅಭಿಮಾನಿಗಳು| ಶೂ ಎಸೆದು ‘ದಾಸ’ನಿಗೆ ಅವಮಾನ!! Read More »

ಸುಳ್ಯ:ಮತ್ತೆ ಅಕ್ರಮ ಮರಳು ಅಡ್ಡೆಗಳ ಮೇಲೆ ದಿಢೀರ್ ದಾಳಿ| ಸುಮಾರು ನೂರಕ್ಕೂ ಹೆಚ್ಚು ಅನಾಥ ಮರಳು ಲೋಡ್ ಗಳ ವಶ !

ಸಮಗ್ರ ನ್ಯೂಸ್ : ಚುನಾವಣೆ ಸಮೀಪಿಸುತ್ತಿದ್ದಂತೆ ಒಂದಿಲ್ಲಾ ಒಂದು ವಿಚಾರಗಳು ಸುಳ್ಯ ತಾಲೂಕಿನಲ್ಲಿ ಬಹಳ ಸದ್ದು ಮಾಡುತ್ತಿದ್ದು ಇದೀಗ ಒಂದು ವಾರಗಳಿಂದ ನಿರಂತರವಾಗಿ ಅಕ್ರಮಗಳ ವಿರುದ್ದ ಸಮರ ಸಾರಿರುವ ಅಧಿಕಾರಿಗಳು ನಿನ್ನೆ ಧೀಡೀರ್ ಆಗಿ ಮತ್ತೆ ಅಕ್ರಮವಾಗಿ ನೂರು ಲೋಡ್ ಮರಳುಗಳನ್ನು ವಶಪಡಿಸಿಕೊಂಡ ಬಗ್ಗೆ ವರದಿಯಾಗಿದೆ. ಕೆಲ ದಿನಗಳ ಹಿಂದೆ ಒಬ್ಬ ರಾಜಕೀಯ ನಾಯಕರ ಲಾರಿ ಮತ್ತು ಗಣಿಗಾರಿಕೆ ಪ್ರದೇಶಗಳಿಗೆ ದಾಳಿ ನಡೆಸಿ ಸುಮಾರು ಎರಡು ಲಕ್ಷಗಳಷ್ಟು ಬೃಹತ್ ಮೊತ್ತವನ್ನು ಗಣಿ ಇಲಾಖೆ ಪಾವತಿಸಲು ಆದೇಶ ನೀಡಿ

ಸುಳ್ಯ:ಮತ್ತೆ ಅಕ್ರಮ ಮರಳು ಅಡ್ಡೆಗಳ ಮೇಲೆ ದಿಢೀರ್ ದಾಳಿ| ಸುಮಾರು ನೂರಕ್ಕೂ ಹೆಚ್ಚು ಅನಾಥ ಮರಳು ಲೋಡ್ ಗಳ ವಶ ! Read More »

ಉದ್ಘಾಟನೆಗೆ ಮೊದಲೇ ಕುಸಿಯಿತು ಸೇತುವೆ| 13 ಕೋಟಿ ನೀರುಪಾಲು

ಸಮಗ್ರ ನ್ಯೂಸ್: ಗುಜರಾತ್‌ನ ಮೊರ್ಬಿಯಲ್ಲಿ ಉದ್ಘಾಟನೆಯಾದ ಒಂದೇ ವಾರದಲ್ಲಿ ಸೇತುವೆ ಕುಸಿದು 141 ಜನ ಮೃತಪಟ್ಟ ಪ್ರಕರಣ ಜನರ ಮನಸ್ಸಿಂದ ಮರೆಮಾಚುವ ಮುನ್ನವೇ ಬಿಹಾರದಲ್ಲಿ ಉದ್ಘಾಟನೆಗೆ ಮೊದಲೇ ಸೇತುವೆಯೊಂದು ಕುಸಿದಿದೆ. ಬೆಗುಸರಾಯ್‌ನ ಗಂಡಕ್‌ ನದಿಗೆ ಅಡ್ಡಲಾಗಿ 206 ಮೀಟರ್‌ ಉದ್ದದ ಸೇತುವೆಯನ್ನು ಮುಖ್ಯಮಂತ್ರಿ ನಬಾರ್ಡ್‌ ಯೋಜನೆ ಅಡಿಯಲ್ಲಿ 13 ಕೋಟಿ ರೂ. ವ್ಯಯಿಸಿ ನಿರ್ಮಿಸಲಾಗಿತ್ತು. 2016ರಲ್ಲಿ ಆರಂಭವಾದ ಸೇತುವೆ ನಿರ್ಮಾಣ ಕಾಮಗಾರಿಯು 2017ರಲ್ಲಿ ಮುಕ್ತಾಯಗೊಂಡಿತ್ತು. ಆದರೆ, ಇದನ್ನು ಲೋಕಾರ್ಪಣೆ ಮಾಡಿರಲಿಲ್ಲ. ಡಿಸೆಂಬರ್‌ 15ರಂದೇ ಸೇತುವೆಯ ಮುಂಭಾಗದಲ್ಲಿ ಬಿರುಕು

ಉದ್ಘಾಟನೆಗೆ ಮೊದಲೇ ಕುಸಿಯಿತು ಸೇತುವೆ| 13 ಕೋಟಿ ನೀರುಪಾಲು Read More »

ಕೋಳಿ ಕೂಗಿದ್ರೆ ಬೆಳಗಾಗೋದು ಮಾತ್ರವಲ್ಲ, ಪೊಲೀಸ್ ಠಾಣೆಗೂ ಹೋಗ್ಬೇಕಾಗುತ್ತೆ!! ಬೆಂಗಳೂರಿನಲ್ಲೊಂದು ‘ಕೋಳಿಜಗಳ’

ಸಮಗ್ರ ನ್ಯೂಸ್: ಮುಂಜಾನೆ ಕೋಳಿ ಕೂಗಿದ್ರೆ ಮಾತ್ರ ಬೆಳಕಾಯ್ತು ಅಂತ ಎದ್ದೇಳ್ತಿದ್ರು. ಆದರೆ ಈಗ ಕಾಲ ಬದಲಾಗಿದೇ ಕೋಳಿಗಳು ಮುಂಜಾನೆ ಕೂಗೋದಕ್ಕಿಂತ ಕುಕ್ಕರ್​ನಲ್ಲಿ ಕೂಗೋದೇ ಜಾಸ್ತಿ ಆಗಿದೆ. ಆದ್ರೆ ಇದೇ ಕೋಳಿ ಗ್ಯಾಂಗ್​ ಒಂದು ಮುಂಜಾನೆ ಕೊ ಕೊ ಕೋ ಅಂತ ಕೂಗಿ ನಮಗೆ ನಿದ್ದೇ ಮಾಡೋಕೆ ಬಿಡ್ತಿಲ್ಲ ಅಂತ ಬೆಂಗಳೂರಿನ ಜೆ.ಪಿ ನಗರದ 8ನೇ ಹಂತದಲ್ಲಿ ವಾಸವಿರುವ ಕುಟುಂಬವೊಂದು ಪೊಲೀಸರ ಮೊರೆ ಹೋಗಿದೆ. ಕೋಳಿಯ ಕೂಗಿನಿಂದ ನಮಗೆ ಮುಕ್ತಿ ನೀಡಿ ಅಂತ ಮನವಿ ಸಹ ಮಾಡಿದೆ.

ಕೋಳಿ ಕೂಗಿದ್ರೆ ಬೆಳಗಾಗೋದು ಮಾತ್ರವಲ್ಲ, ಪೊಲೀಸ್ ಠಾಣೆಗೂ ಹೋಗ್ಬೇಕಾಗುತ್ತೆ!! ಬೆಂಗಳೂರಿನಲ್ಲೊಂದು ‘ಕೋಳಿಜಗಳ’ Read More »