ಕ್ರೈಂ

ಹಾಡುಹಗಲೇ ಗುಂಡಿಕ್ಕಿ ನಟಿಯ ಹತ್ಯೆಗೈದ ಆಗಂತುಕರು| ಪತಿಯ ಮೇಲೆ ಪೊಲೀಸ್ ಕಣ್ಣು!!

ಸಮಗ್ರ ನ್ಯೂಸ್: ನಟಿಯೊಬ್ಬರನ್ನು ಹಾಡ ಹಗಲೆ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಜಾರ್ಖಂಡ್‌ ರಾಜ್ಯದ ಜನಪ್ರಿಯ ನಟಿ ರಿಯಾ ಕುಮಾರಿ ಎಂಬುವರನ್ನು ಅಗಂತುಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆದರೆ ಈ ಘಟನೆಯ ಹಿಂದೆ ರಿಯಾಳ ಪತಿ ಪ್ರಕಾಶ್ ಕುಮಾರ್‌ ನ ಕೈವಾಡವಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ರಿಯಾ ಕುಮಾರಿ ತಮ್ಮ ಎರಡು ವರ್ಷದ ಪುತ್ರಿ ಹಾಗೂ ನಟಿ ರಿಯಾ ಕುಮಾರಿ ಒಟ್ಟಿಗೆ ರಾಂಚಿಯಿಂದ ಕೊಲ್ಕತ್ತಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಗೆ […]

ಹಾಡುಹಗಲೇ ಗುಂಡಿಕ್ಕಿ ನಟಿಯ ಹತ್ಯೆಗೈದ ಆಗಂತುಕರು| ಪತಿಯ ಮೇಲೆ ಪೊಲೀಸ್ ಕಣ್ಣು!! Read More »

ಶಾಲಾ ಬಾಲಕಿಯೊಂದಿಗೆ ಓಡಿಹೋದ ಪಿಎಸ್ಐ!!

ಸಮಗ್ರ ನ್ಯೂಸ್: ಪೊಲೀಸ್ ಸಬ್ ಇನ್ಸ್‌ಪೆಕ್ಟರ್​​ವೊಬ್ಬರು ಶಾಲಾ ಬಾಲಕಿಯೊಂದಿಗೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ತಂದೆ ರಾಜಧಾನಿ ಲಖನೌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಜೋಗೇಂದ್ರ ಸಿಂಗ್ ಎಂಬುವವರೇ ಬಾಲಕಿಯೊಂದಿಗೆ ಪಲಾಯನ ಮಾಡಿರುವ ಎಸ್​ಐ. ಈ ಘಟನೆಯು ಬಾಲಕಿಯ ಕುಟುಂಬಸ್ಥರು, ಸಂಬಂಧಿಕರೂ ಸೇರಿದಂತೆ ಇಡೀ ಪ್ರದೇಶದಲ್ಲಿ ಆಘಾತ ಉಂಟುಮಾಡಿದೆ. ಇಲ್ಲಿನ ಪಲಿಯಾ ಚೌಕಿ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜೋಗೇಂದ್ರ ಸಿಂಗ್ ಎರಡು ದಿನಗಳ ಹಿಂದೆ ಬಾಲಕಿಯೊಂದಿಗೆ ನಾಪತ್ತೆಯಾಗಿದ್ದಾರೆ ಎಂದು

ಶಾಲಾ ಬಾಲಕಿಯೊಂದಿಗೆ ಓಡಿಹೋದ ಪಿಎಸ್ಐ!! Read More »

ಅಯ್ಯಪ್ಪ ವೃತಧಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ| ಇಕ್ಬಾಲ್ ವಿರುದ್ಧ ದೂರು ದಾಖಲು

ಸಮಗ್ರ ನ್ಯೂಸ್: ಪಾರ್ಸೆಲ್ ನೀಡಲು ಬಂದಿದ್ದ ಅಯ್ಯಪ್ಪ ವೃತಧಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿ.ಮೂಡ ಗ್ರಾಮದ ಗೂಡಿನಬಳಿ ನಿವಾಸಿ, ಮೀನು ವ್ಯಾಪಾರಿ ಇಕ್ಬಾಲ್ ಎಂಬಾತನ ಮೇಲೆ ನಗರ ಪೊಲೀಸ್ ‌ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಯಶ್ವಿತ್ ಎಂಬಾತ ಮಾಲಾಧಾರಿಯಾಗಿದ್ದು, ಸ್ನೇಹಿತನ ಜೊತೆ ರಿಕ್ಷಾ ಟೆಂಪೋದಲ್ಲಿ ಪಾರ್ಸೆಲ್ ಸರ್ವೀಸ್ ಮಾಡುವ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗೂಡಿನ

ಅಯ್ಯಪ್ಪ ವೃತಧಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ| ಇಕ್ಬಾಲ್ ವಿರುದ್ಧ ದೂರು ದಾಖಲು Read More »

ಸಾಗರದಲ್ಲಿ ಭೀಕರ ಅಪಘಾತ| ವಿದ್ಯಾರ್ಥಿನಿಯರ ಮೇಲೆ‌ ಹರಿದ ಜಲ್ಲಿ ಲಾರಿ

ಸಮಗ್ರ ನ್ಯೂಸ್: ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹಾಸ್ಟೆಲ್​ ವಿದ್ಯಾರ್ಥಿನಿಯರ ಮೇಲೆ ಜಲ್ಲಿ ಲಾರಿಯೊಂದು ಹರಿದಿದೆ. ಅಪಘಾತಕ್ಕೊಳಗಾದ ಮೂವರಿಗೆ ಭಾರಿ ಪೆಟ್ಟಾಗಿದ್ದು, ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ. ಸಾಗರದ ಸಣ್ಣಮನೆ ಬಳಿ ನಡೆದ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಸಾಗರ ಟೌನ್ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ವಿದ್ಯಾರ್ಥಿನಿಯರನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಇವರಾಗಿದ್ದು, ಅಂಕಿತಾ, ಪ್ರತಿಮಾ, ಐಶ್ವರ್ಯ ಗಾಯಗೊಂಡವರಾಗಿದ್ದಾರೆ. ಇವರಲ್ಲಿ

ಸಾಗರದಲ್ಲಿ ಭೀಕರ ಅಪಘಾತ| ವಿದ್ಯಾರ್ಥಿನಿಯರ ಮೇಲೆ‌ ಹರಿದ ಜಲ್ಲಿ ಲಾರಿ Read More »

ಚಿಕ್ಕಮಗಳೂರು: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ಹಿಡಿದುಕೊಂಡು ಬಂದ ಭೂಪ

ಸಮಗ್ರ ನ್ಯೂಸ್: ತನ್ನನ್ನು ಕಚ್ಚಿದ ಹಾವನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಬಂದ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ಸಂಭವಿಸಿದೆ. ಕೊಲ್ಕತ್ತಾ ಮೂಲದ ಆಸೀಫ್ ಹಾವಿನ ಸಮೇತ ಆಸ್ಪತ್ರೆಗೆ ಬಂದ ವ್ಯಕ್ತಿ. ತರೀಕೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸಕ್ಕೆಂದು ಬಂದಿದ್ದ ಆಸೀಫ್, ಊರಿಗೆ ಹೋಗಲು ರೈಲ್ವೆ ನಿಲ್ದಾಣದ ಬಳಿ ತೆರಳಿದ್ದ. ಈ ವೇಳೆ ಆಸೀಫ್​ಗೆ ಹಾವು ಕಚ್ಚಿದೆ. ಚಿಕಿತ್ಸೆ ಪಡೆಯಲು ಅನುಕೂಲವಾಗಲೆಂದು ಹಾಗೂ ತನಗೆ ಕಚ್ಚಿದ ಯಾವು ಯಾವುದೆಂದು ವೈದ್ಯರಿಗೆ ಗೊತ್ತಾಗಲೆಂದು ಆ ಹಾವನ್ನೇ ಕೈಯಲ್ಲಿ ಹಿಡಿದುಕೊಂದು ನೇರವಾಗಿ ಆಸ್ಪತ್ರೆಗೆ ತೆರಳಿದ್ದಾನೆ.

ಚಿಕ್ಕಮಗಳೂರು: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ಹಿಡಿದುಕೊಂಡು ಬಂದ ಭೂಪ Read More »

ಬೆಳ್ತಂಗಡಿ: ಬಸ್‌ಗಳ ನಡುವೆ ಅಪಘಾತ – ಇಬ್ಬರು ಗಂಭೀರ

ಬೆಳ್ತಂಗಡಿ: ಮಕ್ಕಳ ಪ್ರವಾಸದ ಬಸ್‌ ಹಾಗೂ ಕೆಎಸ್‌‌ಆರ್‌‌ಟಿಸಿ ಬಸ್‌ ನಡುವೆ ಅಪಘಾತದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಿಡ್ಲೆ ಗ್ರಾಮದ ಬೂಡುಜಾಲು ಸಮೀಪ ಸಂಭವಿಸಿದೆ ಟೂರಿಸ್ಟ್‌ ಬಸ್‌ ಚಾಲಕ ಅಭಿಷೇಕ್‌ ಹಾಗೂ ಬಸ್‌ ಪ್ರಯಾಣಿಕ ದುಗೇಶ್‌ ಗಂಭೀರ ಗಾಯಗೊಂಡವರು. ಸಿಂಧನೂರಿನ ಕಾಲೇಜು ವಿದ್ಯಾರ್ಥಿಗಳ ಪ್ರವಾಸದ ಟೂರಿಸ್ಟ್‌ ಬಸ್‌ ಧರ್ಮಸ್ಥಳ ಕಡೆಗೆ ಪ್ರಯಾಣಿಸುತ್ತಿದ್ದಾಗ ಕೊಕ್ಕಡ ಕಡೆಗೆ ಹೋಗುವ ಕೆಎಸ್ಸಾರ್ಟಿಸಿ ಬಸ್‌ ಢಿಕ್ಕಿ ಹೊಡೆದಿದೆ. ಇನ್ನು ಚಾಲಕರ ಸಹಿತ ಬಸ್‌ನಲ್ಲಿದ್ದ ಮಕ್ಕಳು ಹಾಗೂ ಪ್ರಯಾಣಿಕರು ಗಾಯಗೊಂಡಿದ್ದು ಗಾಯಾಳುಗಳನ್ನು ಸ್ಥಳೀಯ

ಬೆಳ್ತಂಗಡಿ: ಬಸ್‌ಗಳ ನಡುವೆ ಅಪಘಾತ – ಇಬ್ಬರು ಗಂಭೀರ Read More »

ಚರ್ಚ್ ಗೆ ನುಗ್ಗಿ ಬಾಲಯೇಸು ಪ್ರತಿಮೆ ಭಗ್ನಗೊಳಿಸಿದ ದುಷ್ಕರ್ಮಿಗಳು| ದೂರು ದಾಖಲು

ಸಮಗ್ರ ನ್ಯೂಸ್: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಗೋಣಿಕೊಪ್ಪ ರಸ್ತೆಯಲ್ಲಿರುವ ಸಂತ ಮರಿಯಮ್ಮ ಚರ್ಚ್‌ಗೆ ಅಪರಿಚಿತರು ನುಗ್ಗಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ರೂಪಿಸಲಾಗಿದ್ದ ಬಾಲ ಯೇಸು ಪ್ರತಿಮೆಯನ್ನು ಭಗ್ನಗೊಳಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಪ್ರಾರ್ಥನೆ ಮುಗಿಸಿ ಚರ್ಚಿನ ಬಾಗಿಲು ಹಾಕಿಕೊಂಡು ತೆರಳಿದ್ದರು. ಸಂಜೆ ೬ ಗಂಟೆ ವೇಳೆ ಪ್ರಾರ್ಥನೆಗೆ ಬಂದ ಫಾದರ್ ಜಾನ್‌ಪಾಲ್ ಚರ್ಚಿನ ಬಾಗಿಲು ಮುರಿದು, ಬಾಲ ಯೇಸು ಪ್ರತಿಮೆ ಭಗ್ನಗೊಂಡಿರುವುದು, ಕಾಣಿಕೆ ಹುಂಡಿಯನ್ನು ಒಡೆದು ಹಣವನ್ನು ದೋಚಿರುವುದು

ಚರ್ಚ್ ಗೆ ನುಗ್ಗಿ ಬಾಲಯೇಸು ಪ್ರತಿಮೆ ಭಗ್ನಗೊಳಿಸಿದ ದುಷ್ಕರ್ಮಿಗಳು| ದೂರು ದಾಖಲು Read More »

ಹಾವೇರಿಯಲ್ಲಿ ಭೀಕರ ಅಪಘಾತ| ಕಾಸರಗೋಡು ಮೂಲದ ಇಬ್ಬರು ಸ್ಪಾಟೌಟ್

ಸಮಗ್ರ ನ್ಯೂಸ್: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೆಳಗಲಪೇಟೆ ಬಳಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತರನ್ನು ಕಾಸರಗೋಡು ಜಿಲ್ಲೆಯ ತಳಂಗರೆ ನುಸ್ರ ತ್ ನಗರದ ಮುಹಮ್ಮದ್ (65) ಪತ್ನಿ ಆಯಿಷಾ (62) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೃತರ ಪುತ್ರ ಝಿಯಾದ್, ಸೊಸೆ ಹಾಗೂ ಮೊಮ್ಮಕ್ಕಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಸ್ಥಳೀಯರು ಕಾರಿನಲ್ಲಿ ಸಿಲುಕಿದವರನ್ನು ಹೊರತೆಗೆದು ಆಸ್ಪತ್ರೆಗೆ

ಹಾವೇರಿಯಲ್ಲಿ ಭೀಕರ ಅಪಘಾತ| ಕಾಸರಗೋಡು ಮೂಲದ ಇಬ್ಬರು ಸ್ಪಾಟೌಟ್ Read More »

ಚಾಲಕನ ಅಜಾಗ್ರತೆಗೆ ಅಮಾಯಕ ಬಾಲಕ ಬಲಿ| ಮಂಗಳೂರು ಹೊರವಲಯದಲ್ಲಿ ದಾರುಣ ಘಟನೆ

ಸಮಗ್ರ ನ್ಯೂಸ್: ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳೂರು ನಗರದ ಹೊರವಲಯದ ಮುಡಿಪು ಕಾಲೇಜು ಬಳಿ ಮಂಗಳವಾರ ಸಂಜೆ ಸಂಭವಿಸಿದೆ. ಮೃತ ಬಾಲಕನನ್ನು ಪಜೀರ್ ನಿವಾಸಿ ಕಾರ್ತಿಕ್ (12) ಎನ್ನಲಾಗಿದೆ. ಕಾರ್ತಿಕ್ ಸಂಜೆ ಶಾಲೆ ಬಿಟ್ಟು ಮನೆಗೆ ತೆರಳಲು ರಸ್ತೆ ಬದಿ ಬಸ್ಸು ಕಾಯುತ್ತಿದ್ದ ವೇಳೆ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಕಾರು ಚಾಲಕ ರಸ್ತೆಯಲ್ಲಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಬಳಿಕ

ಚಾಲಕನ ಅಜಾಗ್ರತೆಗೆ ಅಮಾಯಕ ಬಾಲಕ ಬಲಿ| ಮಂಗಳೂರು ಹೊರವಲಯದಲ್ಲಿ ದಾರುಣ ಘಟನೆ Read More »

ಮೈಸೂರು: ಮೋದಿ ಸಹೋದರನ ಕಾರು ಅಪಘಾತ

ಸಮಗ್ರ ನ್ಯೂಸ್: ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರ ಕಾರು ಅಪಘಾತಗೊಂಡಿರುವ ಘಟನೆ ಮೈಸೂರು ತಾಲೂಕಿನ ಕಡಕೊಳ ಬಳಿ ನಡೆದಿದೆ. ಮರ್ಸಿಡಿಸ್ ಬೆಂಜ್ ಕಾರಿನಲ್ಲಿದ್ದ ಪ್ರಹ್ಲಾದ್ ಮೋದಿ ಪುತ್ರ ಹಾಗೂ ಸೊಸೆಗೆ ಗಂಭೀರ ಗಾಯಗಳಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದ ಮೈಸೂರು ಎಸ್​ಪಿ ಸೀಮಾ ಲಾಟ್ಕರ್, ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿಯವರ ಕಾರ್ಯಾಲಯಕ್ಕೆ ಮಾಹಿತಿ ನೀಡಿದ್ದಾರೆ

ಮೈಸೂರು: ಮೋದಿ ಸಹೋದರನ ಕಾರು ಅಪಘಾತ Read More »