ಕರಾವಳಿ

ಮಂಗಳೂರು: ನ್ಯಾಪ್ಟಾಲ್ ಸಂಸ್ಥೆ ಹೆಸರಿನಲ್ಲಿ ಲಕ್ಷ ಲಕ್ಷ ಪಂಗನಾಮ | ಈ ಬಹುಮಾನದ ರಿಜಿಸ್ಟರ್ ಪೋಸ್ಟ್ ನಿಮ್ಮ ಮನೆಗೂ ಬರಬಹುದು ಎಚ್ಚರ…..!!

ಮಂಗಳೂರು: ನ್ಯಾಪ್ಟಾಲ್ ಸಂಸ್ಥೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಅಂಚೆ ಮೂಲಕ ಸ್ಕ್ರ‍್ಯಾಚ್ ಕಾರ್ಡ್ ಕಳುಹಿಸಿ 12 ಲಕ್ಷ. ರೂ ಬಂದಿದೆ ಎಂದು ಹೇಳಿ ಲಕ್ಷ ಲಕ್ಷ ರೂ. ಪಡೆದು ವಂಚನೆ ಎಸಗಿರುವ ಘಟನೆ ನಡೆದಿದೆ. ಮಂಗಳೂರು ಮೂಲದ ವ್ಯಕ್ತಿಯೋರ್ವರಿಗೆ ನ್ಯಾಪ್ಟಾಲ್ ಸಂಸ್ಥೆಯಿಂದದ ರಿಜಿಸ್ಟರ್ ಪೋಸ್ಟ್ ಬಂದಿತ್ತು. ಅದನ್ನು ತೆರೆದು ನೋಡಿದ ವೇಳೆ ಅದರಲ್ಲಿ ಸ್ಕ್ರ‍್ಯಾಚ್ ಕಾರ್ಡ್ ಹಾಗೂ ಪತ್ರ ಇತ್ತು. ಅಲ್ಲದೇ, 12 ಲಕ್ಷ ರೂ. ಬಹುಮಾನ ಬಂದಿರುವುದಾಗಿ ನಮೂದಿಸಲಾಗಿತ್ತು. ರಿಜಿಸ್ಟರ್ ಪೋಸ್ಟ್ನಲ್ಲಿದ್ದ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ […]

ಮಂಗಳೂರು: ನ್ಯಾಪ್ಟಾಲ್ ಸಂಸ್ಥೆ ಹೆಸರಿನಲ್ಲಿ ಲಕ್ಷ ಲಕ್ಷ ಪಂಗನಾಮ | ಈ ಬಹುಮಾನದ ರಿಜಿಸ್ಟರ್ ಪೋಸ್ಟ್ ನಿಮ್ಮ ಮನೆಗೂ ಬರಬಹುದು ಎಚ್ಚರ…..!! Read More »

ದೇರಳಕಟ್ಟೆಯಲ್ಲಿ ಗಾಂಜಾ ಘಾಟು | ಕೋಟಿಗಟ್ಟಲೆ ಮೌಲ್ಯದ ಮರಿಜುವನ ಸಹಿತ ಯುವಕ-ಯುವತಿ ಪೊಲೀಸ್ ವಶ | ಬಂಧಿತ ಆರೋಪಿಗಳೆಲ್ಲರು ವೈದ್ಯರು

ಮಂಗಳೂರು: ನಗರ ಹೊರವಲಯದ ದೇರಳಕಟ್ಟೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಕೋಟ್ಯಾಂತರ ರೂ. ಮೌಲ್ಯದ ಗಾಂಜಾ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ತಮಿಳುನಾಡು ಮೂಲದ ವೈದ್ಯ ವಿದ್ಯಾರ್ಥಿನಿ ವಿನು ರಶ್ಮಿ (27) ಮತ್ತು ಕಾಸರಗೋಡು ಮೂಲದ ಅಜ್ಮಲ್ (24) ಎಂದು ಗುರುತಿಸಲಾಗಿದೆ. ವಿನು ರಶ್ಮಿ ಸುರತ್ಕಲ್ ನಲ್ಲಿ ವಾಸ್ತವ್ಯ ಹೂಡಿದ್ದು ನಗರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾಳೆ. ವ್ಯಾಸಂಗದ ಜೊತೆ ಈಕೆ ಕಾಸರಗೋಡಿನಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದು ಅಲ್ಲಿ ಪರಿಚಿತನಾದ ವೈದ್ಯ ಡಾ.

ದೇರಳಕಟ್ಟೆಯಲ್ಲಿ ಗಾಂಜಾ ಘಾಟು | ಕೋಟಿಗಟ್ಟಲೆ ಮೌಲ್ಯದ ಮರಿಜುವನ ಸಹಿತ ಯುವಕ-ಯುವತಿ ಪೊಲೀಸ್ ವಶ | ಬಂಧಿತ ಆರೋಪಿಗಳೆಲ್ಲರು ವೈದ್ಯರು Read More »

ಮಂಗಳೂರು: ರಾತ್ರೋರಾತ್ರಿ ಮಹಿಳೆಯರ ಸಾಗಾಟ ಪ್ರಕರಣಕ್ಕೆ ತಿರುವು ; ಮೆಡಿಕಲ್ ಕಾಲೇಜ್‌ಗಳ ಕಳ್ಳಾಟದ ಸತ್ಯ ಬಯಲು ; ಇಲ್ಲಿರೋದು ನಕಲಿ ವೈದ್ಯರಲ್ಲ, ನಕಲಿ ರೋಗಿಗಳು..!

ಮಂಗಳೂರು: ಕೊರೊನಾ ಲಸಿಕೆ ಕೊಡಿಸುವುದಾಗಿ ಹೇಳಿ ರಾತ್ರೋರಾತ್ರಿ ಮಹಿಳೆಯರನ್ನು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಖಾಲಿ ಇರುವ ಬೆಡ್‌ಗಳ ಭರ್ತಿಗಾಗಿ ನಕಲಿ ರೋಗಿಗಳನ್ನು ಕರೆತರುವ ಮೆಡಿಕಲ್ ಕಾಲೇಜ್‌ಗಳ ಕಳ್ಳಾಟದ ಸತ್ಯ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಇನ್ನೂ ಈ ಘಟನೆ ಮೂಡಬಿದ್ರೆ ತಾಲೂಕಿನ ಕುರ್ನಾಡು ಗ್ರಾಮದಲ್ಲಿ ನಡೆದಿದ್ದು, ಮಂಗಳೂರು ಹೊರವಲಯದ ಕಣಚೂರು ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಕೊಡಿಸುವುದಾಗಿ ಹೇಳಿ ಸುಮಾರು 85 ಮಹಿಳೆಯರನ್ನು ತಡರಾತ್ರಿ ಕಾಲೇಜು ಬಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಪೊಲೀಸರ ತನಿಖೆ ವೇಳೆ

ಮಂಗಳೂರು: ರಾತ್ರೋರಾತ್ರಿ ಮಹಿಳೆಯರ ಸಾಗಾಟ ಪ್ರಕರಣಕ್ಕೆ ತಿರುವು ; ಮೆಡಿಕಲ್ ಕಾಲೇಜ್‌ಗಳ ಕಳ್ಳಾಟದ ಸತ್ಯ ಬಯಲು ; ಇಲ್ಲಿರೋದು ನಕಲಿ ವೈದ್ಯರಲ್ಲ, ನಕಲಿ ರೋಗಿಗಳು..! Read More »

ಅತಿ ದೊಡ್ಡ ಎಣ್ಣೆ ಮಾಫಿಯಾ ಜಾಲ ಭೇಧಿಸಿದ ದ.ಕ ಪೊಲೀಸ್, ನಾಲ್ಕು ‌ಮಂದಿ ಅರೆಸ್ಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್ ಆಯಿಲ್ ದಂಧೆಯೊಂದನ್ನು ಪೊಲೀಸರು ಭೇದಿಸಿದ್ದಾರೆ. ಟ್ಯಾಂಕರ್ ಚಾಲಕರೊಂದಿಗೆ ಒಪ್ಪಂದ ಮಾಡಿಕೊಂಡು ಆಯಿಲ್ ದಂಧೆ ನಡೆಸುತ್ತಿದ್ದ ಘಟಕದ ಮೇಲೆ ಪೊಲೀಸ್ ದಾಳಿ ನಡೆಸಿದ್ದಾರೆ. ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಬಳಿ ಸೋಮವಾರ ಪುತ್ತೂರು ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಡಾ. ಗಾನ ಪಿ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಎಸ್.ದಾಸ್, ಸಿಂಗರಾಜ್, ಎಸ್.ಕಾರ್ತಿ ಮತ್ತು ಸೆಲ್ವ ರಾಜ್ ಎಂಬುವರನ್ನು ಬಂಧಿಸಲಾಗಿದೆ.ಪೊಲೀಸ್ ದಾಳಿಯ ವೇಳೆ ಮನೆಯ ಒಳಗೆ ಭಾರೀ ಗಾತ್ರದ

ಅತಿ ದೊಡ್ಡ ಎಣ್ಣೆ ಮಾಫಿಯಾ ಜಾಲ ಭೇಧಿಸಿದ ದ.ಕ ಪೊಲೀಸ್, ನಾಲ್ಕು ‌ಮಂದಿ ಅರೆಸ್ಟ್ Read More »

ಮೂಡಬಿದಿರೆ: ಗ್ರಾಹಕನ ಎಡವಟ್ಟಿನಿಂದ ಹೋಟೆಲ್ ಟಿ.ವಿಯಲ್ಲಿ ಸೆಕ್ಸ್ ಆಡಿಯೋ; ನೌಕರನಿಂದ ಗ್ರಾಹಕನಿಗೆ ಹಲ್ಲೆ

ಸಾಂದರ್ಭಿಕ ಚಿತ್ರ ಮೂಡಬಿದಿರೆ: ಹೊಟೇಲೊಂದರಲ್ಲಿ ಗ್ರಾಹಕನೋರ್ವ ಯೂಟ್ಯೂಬ್ ಮೂಲಕ ವಿಡಿಯೋ ನೋಡುತ್ತಿರುವಾಗ ಅದರಲ್ಲಿನ ಸೆಕ್ಸ್ ಧ್ವನನಿ ಹೊರಗಡೆ ಜೋರಾಗಿ ಕೇಳಿರುವ ಪರಿಣಾಮ ಕೆರಳಿದ ಹೊಟೇಲ್ ನೌಕರ ಗ್ರಾಹಕನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಜೂನ್ 28ರಂದು ಸಂಜೆ ಮುನೀರ್ ಎಂಬವರು ಶೊರ್ಮವಾಲಾ ಹೋಟೆಲ್‌ಗೆ ಆರ್ಡರ್ ಮಾಡಲು ಬಂದಿದ್ದರು. ಈ ಸಂದರ್ಭ ಅಲ್ಲಿನ ಟಿ.ಎಸ್.ಕೆಫೆಯ ವೈಫೈ ಮುನೀರ್ ಮೊಬೈಲ್‌ಗೆ ಕನೆಕ್ಟ್ ಆಗಿದೆ. ಇದರಿಂದ ಮುನೀರ್ ಅವರು ಮೊಬೈಲ್‌ನಲ್ಲಿರು ಯುಟ್ಯೂಬ್‌ನಲ್ಲಿ ವೀಡಿಯೋ ನೋಡುತ್ತಿದ್ದರು. ಈ ಸಂದರ್ಭ ಸೆಕ್ಸ್ ವಾಯ್ಸ್ ಕೇಳಿಸಿದೆ.

ಮೂಡಬಿದಿರೆ: ಗ್ರಾಹಕನ ಎಡವಟ್ಟಿನಿಂದ ಹೋಟೆಲ್ ಟಿ.ವಿಯಲ್ಲಿ ಸೆಕ್ಸ್ ಆಡಿಯೋ; ನೌಕರನಿಂದ ಗ್ರಾಹಕನಿಗೆ ಹಲ್ಲೆ Read More »

ರಾತ್ರೋರಾತ್ರಿ ಕಣಚೂರು ಆಸ್ಪತ್ರೆ ಬಸ್ಸಿನಲ್ಲಿ ಮಹಿಳೆಯರ ಸಾಗಣೆ | ಬೆಚ್ಚಿಬಿದ್ದ ಮಂಗಳೂರಿನ ನಾಗರಿಕರು

ಮಂಗಳೂರು: ಮೂಡಬಿದಿರೆಯ ಕಾರ್ನಾಡು ಗ್ರಾಮದಿಂದ ಬರೋಬ್ಬರಿ 85 ಮಹಿಳೆಯರನ್ನು ಮಂಗಳೂರು ಹೊರವಲಯದ ನಾಟೆಕಲ್ ಖಾಸಗಿ ಆಸ್ಪತ್ರೆ ಬಸ್ಸಿನಲ್ಲಿ ಕರೆದೊಯ್ದ ಘಟನೆ ನಡೆದಿದೆ. ಈ ಬಗ್ಗೆ ಸ್ಥಳೀಯರು ಬಸ್ ಚಾಲಕ ಮತ್ತು ಜೊತೆಗಿದ್ದ ಆಸ್ಪತ್ರೆ ಮ್ಯಾನೇಜರ್ ನನ್ನು ತಡೆದು ವಿಚಾರಿಸಿದಾಗ ಆರೋಗ್ಯ ತಪಾಸಣೆ ನಡೆಸಲು ಮತ್ತು ವ್ಯಾಕ್ಸಿನೇಷನ್ ನೀಡಲು ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾನೆ. ಸ್ಥಳೀಯರು ಯಾವ ಕಾರಣಕ್ಕಾಗಿ ತಡರಾತ್ರಿ ವ್ಯಾಕ್ಸಿನೇಷನ್ ನೀಡುತ್ತೀರಿ ಎಂದು ವಿಚಾರಿಸಿದಾಗ ಆತ ತಬ್ಬಿಬ್ಬಾಗಿದ್ದಾನೆ. ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಪೊಲೀಸರು ದೇರಳಕಟ್ಟೆ ಕಣಚೂರು ಆಸ್ಪತ್ರೆ

ರಾತ್ರೋರಾತ್ರಿ ಕಣಚೂರು ಆಸ್ಪತ್ರೆ ಬಸ್ಸಿನಲ್ಲಿ ಮಹಿಳೆಯರ ಸಾಗಣೆ | ಬೆಚ್ಚಿಬಿದ್ದ ಮಂಗಳೂರಿನ ನಾಗರಿಕರು Read More »

ಮುಲ್ಕಿ: ಕಾರು ಲಾರಿ ಡಿಕ್ಕಿ ಗೃಹ ರಕ್ಷಕ ದಳ ಸಿಬ್ಬಂದಿ ಗಂಭೀರ

ಮಲ್ಕಿ: ಕಾರು ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಉದ್ಯಾವರದಲ್ಲಿ ನಡೆದಿದೆ. ಗಾಯಗೊಂಡವರನ್ನು ಮುಲ್ಕಿ ಠಾಣೆಯಲ್ಲಿ ಗೃಹರಕ್ಷಕ ದಳ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಕೇಶ್ (27) ಎಂದು ತಿಳಿದುಬಂದಿದೆ. ಇವರು ನಿನ್ನೆ ರಾತ್ರಿ ಕೆಲಸ ಮುಗಿಸಿ ಇಂದು ಬೆಳಗಿನ ಜಾವ ಉಡುಪಿ ಕಡೆ ತೆರಳುತ್ತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಮಂಗಳೂರು ಕಡೆ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಗೆ ಇವರ ಕಾರ್ ಡಿಕ್ಕಿ ಹೊಡೆದಿದೆ. ತಲೆ ಹಾಗೂ ಕಾಲಿಗೆ

ಮುಲ್ಕಿ: ಕಾರು ಲಾರಿ ಡಿಕ್ಕಿ ಗೃಹ ರಕ್ಷಕ ದಳ ಸಿಬ್ಬಂದಿ ಗಂಭೀರ Read More »

ಮೀನು ಸಾಗಾಟದ ಕಂಟೈನರ್ ನಲ್ಲಿ 3 ಟನ್ ಗೋಮಾಂಸ ಪತ್ತೆ

ಕುಮಟಾ: ಮೀನಿನ ಬಾಕ್ಸ್’ಗಳಲ್ಲಿ ಇರಿಸಿ ಬರೋಬ್ಬರಿ ಮೂರು ಟನ್ ಗಿಂತಲೂ ಹೆಚ್ಚು ಗೋಮಾಂಸ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕುಮಟಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಮಟದ ಹೊಳೆಗದ್ದೆ ಟೋಲ್ ಗೇಟ್ ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವಾಗ ಅಕ್ರಮ ಗೋ ಮಾಂಸ ಸಾಗಟ ಮಾಡುತ್ತಿರುವುದು ಕಂಡು ಬಂದಿದೆ. ಕಂಟೈನರ್ ಚಾಲಕ ಮಹಮ್ಮದ್ ಶಾಹಿದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಾನಗಲ್ ನಿಂದ ಮಂಗಳೂರಿಗೆ ಗೋ ಮಾಂಸ ಸಾಗಿಸುತ್ತಿರುವುದಾಗಿ ಆತ ಹೇಳಿದ್ದಾನೆ. ಆತನ ಹೇಳಿಕೆಯಿಂದ ಮಂಗಳೂರಿನಲ್ಲಿ ಗೋ ಮಾಂಸ ಮಾರಾಟದ

ಮೀನು ಸಾಗಾಟದ ಕಂಟೈನರ್ ನಲ್ಲಿ 3 ಟನ್ ಗೋಮಾಂಸ ಪತ್ತೆ Read More »

ಪುತ್ತೂರು: ಎಸ್ಎಸ್ಎಲ್ಸಿ ಪರೀಕ್ಷೆ ನಿಗದಿಯಾದ ದಿನವೇ ಕುಸಿಯಿತು ಮನೆ | ಈ ಪರಿಸ್ಥಿತಿಯಲ್ಲಿ ನಾನು ಹೇಗೆ ಓದಲಿ | ವಿದ್ಯಾರ್ಥಿನಿಯ ಅಳಲು

ಪುತ್ತೂರು: ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡ ದಿನವೇ ಪುತ್ತೂರಿನ ಎಸೆಸೆಲ್ಸಿ ವಿದ್ಯಾರ್ಥಿನಿಯೋರ್ವಳ ಮನೆ ಕುಸಿದಿದ್ದು, ಪರೀಕ್ಷೆ ಸಿದ್ಧತೆ ನಡೆಸಲು ಸಂಕಷ್ಟ ಎದುರಾಗಿದೆ. ತಾಲೂಕಿನ ಚಿಕ್ಕಮುಂಡ್ಲೂರು ಗ್ರಾಮದ ನಿವಾಸಿ ಗೋಪಾಲ ಶೆಟ್ಟಿ ಎಂಬವರ ಮನೆ ಸೋಮವಾರ ಸಂಜೆ ಮಳೆಗೆ ಶಿಥಿಲಗೊಂಡು ಕುಸಿದಿದೆ. ಬಡವರಾದ ಗೋಪಾಲ ಶೆಟ್ಟಿ ಅವರು ಕಾಲು ನೋವಿನಿಂದ ದುಡಿಯಲು ಸಾಧ್ಯವಿಲ್ಲದೆ ಮನೆಯಲ್ಲೇ ಇದ್ದಾರೆ. ಇವರ ಪತ್ನಿ ಬೀಡಿಕಟ್ಟಿ ಕೂಲಿ ಕೆಲಸ ಮಾಡಿ ಸಿಗುವ ಅಲ್ಪ ಸ್ವಲ್ಪ ಸಂಪಾದನೆಯಲ್ಲಿ ಪತಿಯ ಆರೋಗ್ಯವನ್ನು ನೋಡಿಕೊಂಡು ಮಕ್ಕಳನ್ನು ಸಾಕುತ್ತಿದ್ದಾರೆ. ಇಬ್ಬರು ಮಕ್ಕಳಲ್ಲಿ

ಪುತ್ತೂರು: ಎಸ್ಎಸ್ಎಲ್ಸಿ ಪರೀಕ್ಷೆ ನಿಗದಿಯಾದ ದಿನವೇ ಕುಸಿಯಿತು ಮನೆ | ಈ ಪರಿಸ್ಥಿತಿಯಲ್ಲಿ ನಾನು ಹೇಗೆ ಓದಲಿ | ವಿದ್ಯಾರ್ಥಿನಿಯ ಅಳಲು Read More »

ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಗೂಡ್ಸ್‌ಗಾಡಿ, ಸವಾರ ಸ್ಥಳದಲ್ಲೇ ಸಾವು, ಪೊಲೀಸ್ ಶೆಡ್ ಧ್ವಂಸ. ಆತೂರು ಉದ್ವಿಗ್ನ

ಉಪ್ಪಿನಂಗಡಿ: ವಾಹನ ತಪಾಸಣೆಯ ವೇಳೆ ಗೂಡ್ಸ್ ವಾಹನ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಆತೂರು ಎಂಬಲ್ಲಿ ಮಂಗಳವಾರದಂದು ನಡೆದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮೃತ ಸವಾರನನ್ನು ಆತೂರು ಬೈಲು ನಿವಾಸಿ ಹಾರಿಸ್(33) ಎಂದು ಗುರುತಿಸಲಾಗಿದೆ. ಮೃತರು ತನ್ನ ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿದ್ದ ತೆರಳುತ್ತಿದ್ದ ವೇಳೆ ಆತೂರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಾಹನವನ್ನು ತಡೆದಿದ್ದಾರೆ.

ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಗೂಡ್ಸ್‌ಗಾಡಿ, ಸವಾರ ಸ್ಥಳದಲ್ಲೇ ಸಾವು, ಪೊಲೀಸ್ ಶೆಡ್ ಧ್ವಂಸ. ಆತೂರು ಉದ್ವಿಗ್ನ Read More »