ಸುಂದರ ಉದ್ಯಾನವನ ಬೆಳ್ಳಾರೆಯ ತಿರುಮಲೇಶ್ವರ ಭಟ್’ರ ಮನೆಯಂಗಳ | ಇಲ್ಲಿವೆ ನೂರಾರು ಕ್ಯಾಕ್ಟಸ್ ಗಿಡಗಳು ಹಣ್ಣಿನ ಮರಗಳು
ಸುಳ್ಯ: ಹೆಸರು ತಿರುಮಲೇಶ್ವರ ಭಟ್. ಇವರ ಮನೆಯ ಗೇಟಿನ ಒಳಹೊಕ್ಕರೆ ಸಾಕು ಮೈಮನ ಅರಳುತ್ತದೆ. ಮನಸ್ಸು ರೋಮಾಂಚನಗೊಳ್ಳುತ್ತದೆ. ಇದಕ್ಕೆ ಕಾರಣ ಮನೆಯ ಅಂಗಳದಲ್ಲಿರುವ ಬಣ್ಣ ಬಣ್ಣದ ಹೂಗಿಡ-ಬಳ್ಳಿಗಳ, ಕ್ಯಾಕ್ಟಸ್ ಗಿಡಗಳ ಸುಂದರ ದೃಶ್ಯ. ಹೌದು ತಿರುಮಲೇಶ್ವರ ಅವರ ಮನೆ ಇರುವುದು ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕುರಿಯಾಜೆಯಲ್ಲಿ. ವೃತ್ತಿಯಲ್ಲಿ ಕೃಷಿಕರಾಗಿರುವ ಇವರು ಮನೆಯಂಗಳವನ್ನು ಉದ್ಯಾನವನವನ್ನಾಗಿ ಮಾಡಿದ್ದಾರೆ. ಪ್ರಗತಿಪರ ಕೃಷಿಕರಾಗಿರುವ ಕಾರಣ ಇವರು ಆಗಾಗ ಕೃಷಿ ಅಧ್ಯಯನಕ್ಕಾಗಿ ಅಂತರರಾಜ್ಯ ಹಾಗೂ ಅಂತರಾಷ್ಟ್ರೀಯ ಪ್ರವಾಸ ಮಾಡುತ್ತಾರೆ. ಆ ಸಮಯದಲ್ಲಿ ಅಲ್ಲಲ್ಲಿ […]










