ಕರಾವಳಿ

ಮುಜುರಾಯಿ ಇಲಾಖೆಯ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿ. 13 ವರ್ಷಗಳಿಂದ ಮಳೆನೀರಿಗೆ ಮೈಯೊಡ್ಡುತ್ತಿದ್ದಾನೆ ಕುಕ್ಕೆ ಪುರದೊಡೆಯ ಶ್ರೀಸುಬ್ರಹ್ಮಣ್ಯ

ಮಂಗಳೂರು, ಜುಲೈ 3: ನಂಬಿದವರ ಇಷ್ಟಾರ್ಥವನ್ನು ಸಿದ್ಧಿಗೊಳಿಸುವ, ಅಭೀಷ್ಠೆಗಳನ್ನು ಪೂರೈಸುವ ದಕ್ಷಿಣ ಭಾರತದ ಪರಮ ಪವಿತ್ರ ಪುಣ್ಯಕ್ಷೇತ್ರ ಸುಬ್ರಹ್ಮಣ್ಯ ದೇವರು ಮಳೆಗೆ ಮೈ ಒಡ್ಡಿ 13 ವರ್ಷಗಳೇ ಕಳೆದುಹೋಗಿದೆ. ಅಧಿಕಾರಿಗಳ ಬೇಜವಾಬ್ದಾರಿ, ಮುಜುರಾಯಿ‌ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ರಾಜ್ಯದ ಪ್ರಸಿದ್ಧ ಯಾತ್ರಾಕ್ಷೇತ್ರಕ್ಕೆ ಪ್ರತೀವರ್ಷ ಪ್ಲಾಸ್ಟಿಕ್ ಹೊದಿಕೆ ಹಾಕಲಾಗುತ್ತಿದೆ. ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಹಾಗೂ ರಾಜ್ಯದ ಅತೀ ಶ್ರೀಮಂತ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ದೇವರ ಸನ್ನಿಧಿ ಮಳೆಗಾಲದಲ್ಲಿ ಸೋರಲಾರಂಭಿಸಿ ಹದಿಮೂರು ವರ್ಷಗಳಾಗಿವೆ. ಸುಬ್ರಹ್ಮಣ್ಯ ಸ್ವಾಮಿಯ ದೇವರ […]

ಮುಜುರಾಯಿ ಇಲಾಖೆಯ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿ. 13 ವರ್ಷಗಳಿಂದ ಮಳೆನೀರಿಗೆ ಮೈಯೊಡ್ಡುತ್ತಿದ್ದಾನೆ ಕುಕ್ಕೆ ಪುರದೊಡೆಯ ಶ್ರೀಸುಬ್ರಹ್ಮಣ್ಯ Read More »

ಸುಳ್ಯ ಮಾಜಿ ಜಿ. ಪಂ. ಸದಸ್ಯ ಕೆಎಸ್ ದೇವರಾಜ್ ನಿಧನ

ಸುಳ್ಯ: ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆಎಸ್ ದೇವರಾಜ್ (55) ಅವರು ಇಂದು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಸುಬ್ರಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಸೇವೆ ಸಲ್ಲಿಸಿದ್ದ ಅವರು ಏನೆಕಲ್ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿದ್ದರು.

ಸುಳ್ಯ ಮಾಜಿ ಜಿ. ಪಂ. ಸದಸ್ಯ ಕೆಎಸ್ ದೇವರಾಜ್ ನಿಧನ Read More »

ಸುಳ್ಯದ ನಾಗರಿಕರೇ ಎಚ್ಚರ | ವ್ಯಾಕ್ಸಿನ್ ಸೆಂಟರ್’ನಲ್ಲಿ ರಾಜಕಾರಣಿಗಳದ್ದೇ ದರ್ಬಾರ್ | ಅಳಲು ತೋಡಿಕೊಂಡ ಜನಸಾಮಾನ್ಯರು

ಸುಳ್ಯ: ಸುಳ್ಯದ ಪುರಭವನದ ಕೋವಿಡ್ ಲಸಿಕಾ ಕೇಂದ್ರದಲ್ಲಿ ರಾಜಕಾರಣಿಗಳು ದರ್ಬಾರ್ ನಡೆಸುತ್ತಿದ್ದಾರೆ. ಆಗಾಗ ತಮ್ಮ ಪ್ರಭಾವ ಬಳಸಿ ತಮ್ಮ ಜೊತೆ ಬಂದವರಿಗೆ ಲಸಿಕೆ ಹಾಕಿಸುತ್ತಿದ್ದಾರೆ. ಈ ಬಗ್ಗೆ ಜನಸಾಮಾನ್ಯರು ಅಳಲು ತೋಡಿಕೊಂಡಿದ್ದಾರೆ. ಇಂದು ಶುಕ್ರವಾರ ನಗರದ ಪುರಭನದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದ ನಾಗರಿಕರು ಈ ಬಗ್ಗೆ ಹೇಳಿಕೊಂಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ಜನಸಾಮಾನ್ಯ ರೊಂದಿಗೆ ಎಚ್ಚರಿಕೆಯಿಂದ ಇರುವಂತೆ ಆಗಾಗ ಸೂಚಿಸಿದ್ದಾರೆ. ಆದರೆ ಇದರ ನಡುವೆ ಆಗಾಗ ಒಬ್ಬೊಬ್ಬ ರಾಜಕಾರಣಿಗಳು ಇತರರನ್ನು ಕರೆದುಕೊಂಡು ಬಂದು ಬೆಳಗ್ಗಿನಿಂದ ಕಾಯುತ್ತಿರುವ ಜನಸಾಮಾನ್ಯರನ್ನು

ಸುಳ್ಯದ ನಾಗರಿಕರೇ ಎಚ್ಚರ | ವ್ಯಾಕ್ಸಿನ್ ಸೆಂಟರ್’ನಲ್ಲಿ ರಾಜಕಾರಣಿಗಳದ್ದೇ ದರ್ಬಾರ್ | ಅಳಲು ತೋಡಿಕೊಂಡ ಜನಸಾಮಾನ್ಯರು Read More »

ಮಂಗಳೂರಿನಲ್ಲಿ ಮತ್ತೆ ಮರುಕಳಿಸಿತು ಅಮಾನವೀಯ ಘಟನೆ | ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿ

ಮಂಗಳೂರು: ನಗರದಲ್ಲಿ ಬೀದಿ ನಾಯಿಗಳ ಮೇಲೆ ಮಾನವನ ಅಟ್ಟಹಾಸ ಮುಂದುವರೆದಿದ್ದು, ನಾಯಿ ಒಂದಕ್ಕೆ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ನಗರದ ಶಿವಭಾಗ್ ನ ಆಭರಣ ಜುವೆಲ್ಲರ್ಸ್ ಹಿಂಭಾಗ ಇಂದು ಮುಂಜಾನೆ ನಾಯಿ ಮೃತದೇಹ ಪತ್ತೆಯಾಗಿದೆ. ಅನಿಮಲ್ ಕೇರ್ ಟ್ರಸ್ಟ್ ಕಾರ್ಯಕರ್ತರು ಅದನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದಾಗ ನಾಯಿ ದೇಹದೊಳಗೆ ಬುಲೆಟ್ ಪತ್ತೆಯಾಗಿದೆ. ಶಿವಭಾಗ್ ಪ್ರದೇಶದಲ್ಲಿ ನಿತ್ಯ ಓಡಾಡುತ್ತಿದ್ದ ಬೀದಿನಾಯಿ ಇದಾಗಿದೆ. ನಾಯಿಗೆ ಗುಂಡಿಕ್ಕಿ ಕೊಂದ ವಿಷಯ

ಮಂಗಳೂರಿನಲ್ಲಿ ಮತ್ತೆ ಮರುಕಳಿಸಿತು ಅಮಾನವೀಯ ಘಟನೆ | ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿ Read More »

ದ.ಕ ದಲ್ಲಿ ಇಂದು‌ ಸಂಜೆಯಿಂದ‌ ವೀಕೆಂಡ್ ಕರ್ಪ್ಯೂ ಜಾರಿ: ನಾಳೆ, ನಾಡಿದ್ದು‌ ಏನಿರುತ್ತೆ? ಏನಿರಲ್ಲ? ಫುಲ್ ಡೀಟೈಲ್ ಇಲ್ಲಿದೆ.

ಮಂಗಳೂರು : ಕಳೆದವಾರ ದ.ಕ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದ ವಾರಾಂತ್ಯ ಕರ್ಫ್ಯೂ ಇದೀಗ ಸಡಿಲಗೊಳಿಸಲಾಗಿದೆ. ವೀಕೆಂಡ್ ನಲ್ಲಿ ಕೊಂಚ ರಿಲೀಫ್ ನೀಡಲಾಗಿದ್ದು, ರಾತ್ರಿ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ವಾರಾಂತ್ಯದಲ್ಲಿ ಯಾವೆಲ್ಲ ಚಟುವಟಿಕೆಗಳಿಗೆ ಅವಕಾಶ? ಜಿಲ್ಲಾಡಳಿತದ ಮಾರ್ಗಸೂಚಿ ಏನು? ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ. ವಾರಾಂತ್ಯ ಕರ್ಫ್ಯೂ ಸಮಯದಲ್ಲಿ ದ.ಕ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳಿಗೆ ಅವಕಾಶ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತುಗಳ

ದ.ಕ ದಲ್ಲಿ ಇಂದು‌ ಸಂಜೆಯಿಂದ‌ ವೀಕೆಂಡ್ ಕರ್ಪ್ಯೂ ಜಾರಿ: ನಾಳೆ, ನಾಡಿದ್ದು‌ ಏನಿರುತ್ತೆ? ಏನಿರಲ್ಲ? ಫುಲ್ ಡೀಟೈಲ್ ಇಲ್ಲಿದೆ. Read More »

ಮಂಗಳೂರು: ವಾಟ್ಸಪ್ ಖಾತೆ ಹ್ಯಾಕ್- ಒಂದು ಲಕ್ಷ ರೂ. ವಂಚನೆ

ಮಂಗಳೂರು: ವಾಟ್ಸಪ್ ಖಾತೆ ಹ್ಯಾಕ್ ಮಾಡಿ, ಕರೆ ಮಾಡಿ ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ. ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಮಂಗಳೂರಿನಲ್ಲಿ ನಡೆದಿದೆ. ದೂರುದಾರರ ಸ್ನೇಹಿತರೊಬ್ಬರು ಯುಎಸ್‌ಎಯಲ್ಲಿ ವಾಸ್ತವ್ಯವಿದ್ದು, ಜೂನ್ 29ರಂದು ಅವರ ವಾಟ್ಸಪ್ ಮೂಲಕ ಕರೆ ಮಾಡಿ ಸಂಬಂಧಿಕರಿಗೆ ಕೊರೊನಾ ಬಂದಿದ್ದು ಚಿಕಿತ್ಸೆಗಾಗಿ ಹಣವನ್ನು ಕಳಿಸಿಕೊಡುವಂತೆ ಕೇಳಿದ್ದು ಇದನ್ನು ನಂಬಿ ಆತ ನೀಡಿದ ನಂಬರ್‌ಗೆ ಗೂಗಲ್ ಪೇ ಮೂಲಕ ಹಂತಹAತವಾಗಿ 1 ಲಕ್ಷ ವರ್ಗಾವಣೆ ಮಾಡಿದ್ದಾರೆ. ಬಳಿಕ ಸ್ನೇಹಿತನಿಗೆ ಕರೆ ಮಾಡಿ ಕೇಳಿದಾಗ ವಾಟ್ಸಪ್

ಮಂಗಳೂರು: ವಾಟ್ಸಪ್ ಖಾತೆ ಹ್ಯಾಕ್- ಒಂದು ಲಕ್ಷ ರೂ. ವಂಚನೆ Read More »

ಬಂಟ್ವಾಳ: ಕಾಲೇಜ್ ಬಸ್, ಬೈಕ್ ಅಪಘಾತ- ತಪ್ಪಿದ ಅನಾಹುತ

ಬಂಟ್ವಾಳ: ಮೆಡಿಕಲ್ ಕಾಲೇಜಿನ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬಸ್‌ನಲ್ಲಿದ್ದ ಮಹಿಳಾ ಸಿಬ್ಬಂದಿ ಹಾಗೂ ಬೈಕ್ ಸವಾರ ಗಾಯಗೊಂಡ ಘಟನೆ ಮಂಗಳಪದವು ಅನಂತಾಡಿ ರಸ್ತೆಯ ಸುರುಳಿಮೂಲೆ ಎಂಬಲ್ಲಿ ಜು.2ರಂದು ಬೆಳಗ್ಗೆ ನಡೆದಿದೆ. ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಗೆ ಸೇರಿದ ಬಸ್‌ನಲ್ಲಿ ವೆನ್ಲಾಕ್, ಕೆಎಂಸಿ, ಮತ್ತು ಲೇಡಿಗೋಶನ್ ಆಸ್ಪತ್ರೆಗೆ ಸೇರಿದ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದ ಬಸ್ ರಸ್ತೆ ಬದಿಯ ಪ್ರಪಾತದ ಬಳಿ ಸಿಕ್ಕಿಹಾಕಿಕೊಂಡಿದೆ.

ಬಂಟ್ವಾಳ: ಕಾಲೇಜ್ ಬಸ್, ಬೈಕ್ ಅಪಘಾತ- ತಪ್ಪಿದ ಅನಾಹುತ Read More »

ನಾಳೆಯಿಂದ ದ.ಕ ಜಿಲ್ಲೆಗೆ ರಿಲ್ಯಾಕ್ಸ್, ಸಂಜೆ 5 ಗಂಟೆವರೆಗೂ ಅಂಗಡಿಗಳು ಓಪನ್

ಮಂಗಳೂರು: ಕೋವಿಡ್ ಪಾಸಿಟಿವಿಟಿ ದರ ಕಡಿಮೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಕೊಂಚ ರಿಲ್ಯಾಕ್ಸ್ ಸಿಕ್ಕಿದೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಗಣನೀಯವಾಗಿ ಕಡಿಮಯಾಗಿದೆ. ಈ ಹಿನ್ನೆಲೆ ಇಂದು ನೂತನ ಮಾರ್ಗಸೂಚಿ ಹೊರಡಿಸಲಾಗಿದ್ದು, ನಾಳೆಯಿಂದ ಅನ್ವಯವಾಗುವಂತೆ ಪ್ರತಿ ದಿನ ಸಂಜೆ 5 ಗಂಟೆಯವರಿಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಹಾಗೂ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಾರಾಂತ್ಯ ಕರ್ಪ್ಯೂ ಈ ವಾರವೂ ಜಾರಿಯಲ್ಲಿರಲಿದ್ದು, ಶುಕ್ರವಾರ ಸಂಜೆವರೆಗೂ ಸಂಚಾರಕ್ಕೆ ಅವಕಾಶವಿದೆ. ಶುಕ್ರವಾರ ಸಂಜೆ 7ರಿಂದ

ನಾಳೆಯಿಂದ ದ.ಕ ಜಿಲ್ಲೆಗೆ ರಿಲ್ಯಾಕ್ಸ್, ಸಂಜೆ 5 ಗಂಟೆವರೆಗೂ ಅಂಗಡಿಗಳು ಓಪನ್ Read More »

ದನ ಕಟ್ಟುವ ವಿಚಾರದಲ್ಲಿ ತಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ | ಗಂಭೀರ ಗಾಯಗೊಂಡಿದ್ದ ಮಗ ಸಾವು

ಮಂಗಳೂರು: ದನ ಕಟ್ಟುವ ವಿಚಾರದಲ್ಲಿ ತಂದೆ-ಮಗನ ನಡುವೆ ಜಗಳ ನಡೆದು ತಂದೆಯಿಂದ ಬೆಂಕಿ ದಾಳಿಗೊಳಗಾಗಿದ್ದ ಮಗ ಇಂದು ಮೃತಪಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ತಾಲೂಕಿನ ಜಪ್ಪಿನಮೊಗರು ತಾರ್ದೋಲ್ಯ ಎಂಬಲ್ಲಿ ದನ ಮತ್ತು ಕೋಳಿಗಳನ್ನು ಹೊರಗಡೆ ಕಟ್ಟಿಹಾಕಿದ ವಿಚಾರದಲ್ಲಿ ತಂದೆ ಮತ್ತು ಮಗನ ನಡುವೆ ಜಗಳ ನಡೆದಿತ್ತು. ಕೊನೆಗೆ ಕುಪಿತಗೊಂಡ ತಂದೆ ವಿಶ್ವನಾಥ ಶೆಟ್ಟಿ, ಮಗ ಸಾನ್ವಿತ್ ಶೆಟ್ಟಿ ಮಲಗಿದ್ದಲ್ಲಿ ಗೆ ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಪರಿಣಾಮ ಗಂಭೀರ ಗಾಯಗೊಂಡ ಮಗನನ್ನು ನಗರದ ಆಸ್ಪತ್ರೆಗೆ

ದನ ಕಟ್ಟುವ ವಿಚಾರದಲ್ಲಿ ತಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ | ಗಂಭೀರ ಗಾಯಗೊಂಡಿದ್ದ ಮಗ ಸಾವು Read More »

ಮಂಗಳೂರು: ಹುಕ್ಕಾ ಕೆಫೆಗೆ ದಾಳಿ | ಇಬ್ಬರ ಬಂಧನ

ಮಂಗಳೂರು: ನಿಯಮ ಉಲ್ಲಂಘಿಸಿ ಹುಕ್ಕಾ ಕೆಫೆಯನ್ನು ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ನಗರದ ವೆಲೆನ್ಸಿಯಾದಲ್ಲಿ ಘಟನೆ ನಡೆದಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಒಳಗೆ ಕುಳಿತು ಪಾರ್ಟಿ ಮಾಡುವಂತಿಲ್ಲ. ಅಲ್ಲದೆ ಕೋಲ್ಡ್ ಡ್ರಿಂಕ್ಸ್ ಆಗಲೀ, ಹುಕ್ಕಾವನ್ನಾಗಲೀ ಸರ್ವ್ ಮಾಡುವಂತಿಲ್ಲ. ಹುಕ್ಕಾ ಕೆಫೆಯಲ್ಲಿ ಗ್ರಾಹಕರು ಕುಳಿತು ಹುಕ್ಕಾ ಸೇವಿಸುತ್ತಿದ್ದರು. ಕೋಲ್ಡ್ ಡ್ರಿಂಕ್ಸ್ ಇನ್ನಿತರ ಸ್ನಾಕ್ಸ್ ಸೇವನೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪಾಂಡೇಶ್ವರ ಪೊಲೀಸರು ದಾಳಿ ನಡೆಸಿದ್ದು ೧೭ ಮಂದಿಯ ವಿರುದ್ಧ ಲಾಕ್‌ಡೌನ್ ನಿಯಮ

ಮಂಗಳೂರು: ಹುಕ್ಕಾ ಕೆಫೆಗೆ ದಾಳಿ | ಇಬ್ಬರ ಬಂಧನ Read More »