ಕರಾವಳಿ

ನಿವೃತ್ತಿ ಬಳಿಕವೂ ಸೇವೆ ಸಲ್ಲಿಸುವ ತುಡಿತ ಹೊತ್ತಿದ್ದ ಬೆಳ್ತಂಗಡಿಯ ಏಕನಾಥ್ ಶೆಟ್ಟಿ | 29 ಯೋಧರ ಸಹಿತ ವಾಯುಪಡೆ ವಿಮಾನ ಕಣ್ಮರೆಯಾಗಿ ಇಂದಿಗೆ 5 ವರ್ಷ | ಇನ್ನೂ ಪತ್ತೆಯಾಗಿಲ್ಲ ಎನ್-32 ಅವಶೇಷ….!

ಮಂಗಳೂರು: ಭಾರತೀಯ ವಾಯುಪಡೆಯ ಎನ್-32 ವಿಮಾನ 29 ಯೋಧರ ಸಹಿತ ಕಣ್ಮರೆಯಾಗಿ ಇಂದಿಗೆ 5 ವರ್ಷ ಕಳೆದಿದೆ. ಅದಾದ ಬಳಿಕ, ವಿಮಾನದ ಒಂದೇ ಒಂದು ಅಥವಾ ಯಾವೊಬ್ಬ ಯೋಧರ ಮೃತದೇಹವೂ ಸಿಗದೇ ಪ್ರಕರಣ ಇಂದಿಗೂ ನಿಗೂಢವಾಗಿ ಉಳಿದಿದೆ. ಭಾರತೀಯ ವಾಯುಸೇನೆಯ ಎನ್-32 ವಿಮಾನ, 2016 ಜುಲೈ 22ರಂದು ಚೆನೈನ ತಂಬಾರಮ್ ಏರ್‌ಬೇಸ್‌ನಿಂದ ಅಂಡಮಾನಿನ ಫೋರ್ಟ್‌ಬ್ಲೇರ್ ನೆಲೆಗೆ ತೆರಳುತ್ತಿತ್ತು. ವಾಯುಸೇನೆಯ 29 ಯೋಧರಿದ್ದ ವಿಮಾನ ಹೊರಟು ಕೆಲವೇ ಸಮಯದಲ್ಲಿ ಸಂಪರ್ಕ ಕಡಿತವಾಗಿತ್ತು. ಬಳಿಕ ನಾಪತ್ತೆ ಯಾಗಿತ್ತು. ಕಣ್ಮರೆಯಾದ ಬಳಿಕ […]

ನಿವೃತ್ತಿ ಬಳಿಕವೂ ಸೇವೆ ಸಲ್ಲಿಸುವ ತುಡಿತ ಹೊತ್ತಿದ್ದ ಬೆಳ್ತಂಗಡಿಯ ಏಕನಾಥ್ ಶೆಟ್ಟಿ | 29 ಯೋಧರ ಸಹಿತ ವಾಯುಪಡೆ ವಿಮಾನ ಕಣ್ಮರೆಯಾಗಿ ಇಂದಿಗೆ 5 ವರ್ಷ | ಇನ್ನೂ ಪತ್ತೆಯಾಗಿಲ್ಲ ಎನ್-32 ಅವಶೇಷ….! Read More »

ಸುಳ್ಯ : ಪಕ್ಕದ ಮನೆ ಅಜ್ಜಿಯ ಯಾಮಾರಿಸಿ ಸಾಲ ಮಾಡಿ ಮೊಬೈಲ್ ಖರೀದಿಸಿದ | ಮನೆಯವರ ಜೊತೆ ಯುವಕನೂ ನಾಪತ್ತೆ

ಸುಳ್ಯ: ಅಂಗಡಿಯಲ್ಲಿ ಪಕ್ಕದ ಮನೆ ಅಜ್ಜಿ ಹೆಸರಿನಲ್ಲಿ ಸಾಲ ಮಾಡಿ ಮೊಬೈಲ್ ಖರೀದಿಸಿ ಕಂತು ಪಾವತಿಸದೆ ಯುವಕ ನಾಪತ್ತೆಯಾದ ಘಟನೆ ಸುಳ್ಯದಲ್ಲಿ ನಡೆದಿದೆ. ನಗರದ ನಾವೂರು ನಿವಾಸಿ ಹ್ಯಾರಿಸ್ ಎಂಬ ಯುವಕ ಅಜ್ಜಿಯನ್ನು ಯಾಮಾರಿಸಿದವ. ಈತ ತನ್ನ ಮನೆಯ ಪಕ್ಕದಲ್ಲೇ ವಾಸವಾಗಿದ್ದ ಕದೀಜ ಎಂಬ ಅಜ್ಜಿಯನ್ನು ನಂಬಿಸಿ ನಗರದ ಮೊಬೈಲ್ ಅಂಗಡಿ ಕರೆದೊಯ್ದಿದ್ದಾನೆ. ಅಲ್ಲಿ ಅಜ್ಜಿಯಿಂದ ಬ್ಯಾಂಕ್ ಅಕೌಂಟ್ ಬುಕ್, ಆಧಾರ್ ಕಾರ್ಡ್, ಫೋಟೋ ಇನ್ನಿತರ ದಾಖಲೆ ಪತ್ರಗಳನ್ನು ನೀಡಿ, ಅಜ್ಜಿಯನ್ನು ತನ್ನ ತಾಯಿಯೆಂದು ಮೊಬೈಲ್ ಅಂಗಡಿಯವರಿಗೆ

ಸುಳ್ಯ : ಪಕ್ಕದ ಮನೆ ಅಜ್ಜಿಯ ಯಾಮಾರಿಸಿ ಸಾಲ ಮಾಡಿ ಮೊಬೈಲ್ ಖರೀದಿಸಿದ | ಮನೆಯವರ ಜೊತೆ ಯುವಕನೂ ನಾಪತ್ತೆ Read More »

ಕರಾವಳಿಯಲ್ಲಿಂದು ಬಕ್ರೀದ್ ಸಂಭ್ರಮ| ಕೋವಿಡ್ ಮಾರ್ಗಸೂಚಿಯೊಂದಿಗೆ ಸರಳವಾಗಿ ಹಬ್ಬ ಆಚರಿಸುತ್ತಿರುವ ಮುಸ್ಲಿಂ ಬಾಂಧವರು

ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಬುಧವಾರ ಕರಾವಳಿಯಲ್ಲಿ ಆಚರಿಸಲಾಗುತ್ತದೆ. ಸರಕಾರದ ಹೊಸ ಮಾರ್ಗಸೂಚಿಯಂತೆ ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲ ಮಸೀದಿ ಗಳಲ್ಲಿ ಹಬ್ಬ ಆಚರಿಸಲು ಸಿದ್ಧತೆ ನಡಸಲಾಗಿದೆ. ಆಯಾ ಮಸೀದಿಗಳಲ್ಲಿ ಸೇರುವ ಜನರ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ. 50ನ್ನು ಮೀರದಂತೆ ಹಂತ ಹಂತವಾಗಿ ಸಾಮೂಹಿಕ ನಮಾಝ್, ಈದ್‌ ಖುತಾº ನೆರವೇರಲಿದೆ. ಮಾಸ್ಕ್ ಧಾರಣೆ ಕಡ್ಡಾಯ, 65 ವರ್ಷ ಪ್ರಾಯ ಮೇಲ್ಪಟ್ಟವರು ಮತ್ತು 10 ವರ್ಷ ಕ್ಕಿಂತ ಕೆಳಗಿನವರು ಮಸೀದಿಗೆ ತೆರಳಬಾರದು. ನಮಾಝ್ ನಿರ್ವಹಿಸುವವರ ಮಧ್ಯೆ ಕನಿಷ್ಠ

ಕರಾವಳಿಯಲ್ಲಿಂದು ಬಕ್ರೀದ್ ಸಂಭ್ರಮ| ಕೋವಿಡ್ ಮಾರ್ಗಸೂಚಿಯೊಂದಿಗೆ ಸರಳವಾಗಿ ಹಬ್ಬ ಆಚರಿಸುತ್ತಿರುವ ಮುಸ್ಲಿಂ ಬಾಂಧವರು Read More »

ಸುಳ್ಯ: ಪಯಸ್ವಿನಿ ನದಿಯಲ್ಲಿ ಅಪರಿಚಿತ ಶವ ಪತ್ತೆ

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಪಂಜಿಕಲ್ಲು ತೂಗುಸೇತುವೆ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಸ್ಥಳೀಯ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಮತ್ತು ನಾಗರಿಕರು ಶವವನ್ನು ಮೇಲಕ್ಕೆತ್ತಿದ್ದಾರೆ. ಇಂದು ತೂಗುಸೇತುವೆಯ ಬಳಿ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯರಿಗೆ ನೀರಿನ ಮೇಲೆ ಪೊದೆಯಲ್ಲಿ ಶವವೊಂದು ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿದೆ. ಶವ ಕಂಡವರು ತಕ್ಷಣ ಸ್ಥಳೀಯ ಜನರಿಗೆ ಮಾಹಿತಿ ನೀಡಿದ್ದಾರೆ. ನಂತರ ಶವವನ್ನು ಮೇಲಕ್ಕೆತ್ತಲಾಗಿದೆ. ಅಪರಿಚಿತ ಗಂಡಸಿನ ಶವ ಇದಾಗಿದ್ದು ಸದ್ಯ ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.

ಸುಳ್ಯ: ಪಯಸ್ವಿನಿ ನದಿಯಲ್ಲಿ ಅಪರಿಚಿತ ಶವ ಪತ್ತೆ Read More »

ಪುತ್ತೂರು: ಕಾರಿನಲ್ಲಿ ಬಾಲಕಿಯ ಅತ್ಯಾಚಾರಕ್ಕೆ ಯತ್ನ | ಆರೋಪಿಯ ಬಂಧನ

ಪುತ್ತೂರು : ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಇಳಂತಿಲ ದಲ್ಲಿ ನಡೆದಿದೆ. ಕೃತ್ಯ ಎಸಗಿದವನನ್ನು ಬೆಳ್ತಂಗಡಿ ತಾಲೂಕಿನ ಕೊಕ್ಕಡದ ರುಕ್ಮಯ್ಯ ಮಡಿವಾಳ (42) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇರದ ಸಂದರ್ಭದಲ್ಲಿ ರುಕ್ಮಯ್ಯ ಮಡಿವಾಳ ಕಾರಿನಲ್ಲಿ ಬಂದು 16 ವರ್ಷದ ಬಾಲಕಿಯನ್ನು ಕಾರಿನಲ್ಲಿ ಬರಬೇಕು ಎಂದು ಬಲವಂತ ಮಾಡಿದ್ದಾನೆ. ಬಾಲಕಿ ಒಪ್ಪದಿದ್ದಾಗ ಕೊನೆಗೆ ಬೆದರಿಸಿ ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಹಿಂಸೆ ನೀಡಲು

ಪುತ್ತೂರು: ಕಾರಿನಲ್ಲಿ ಬಾಲಕಿಯ ಅತ್ಯಾಚಾರಕ್ಕೆ ಯತ್ನ | ಆರೋಪಿಯ ಬಂಧನ Read More »

ಈಗಲ್ಲ, ನಾಲ್ಕು ವರ್ಷದ ಹಿಂದೆಯೇ ರೋಗಿಯನ್ನು ಹೊತ್ತೊಯ್ಯಲಾಗಿತ್ತು…! ಮರಸಂಕದ ಪರಿಸ್ಥಿತಿ ಗೊತ್ತಿದ್ದರೂ ಶಾಸಕರೇನು ಮಾಡ್ತಿದ್ರು…?

ಮಂಗಳೂರು: ಹೌದು, ಕಳೆದ ವಾರ ಸುಳ್ಯದ ಜಾಲ್ಸೂರು ಗ್ರಾಮದ ಮರಸಂಕದ ವೃದ್ದೆಯೊಬ್ಬರನ್ನು ತುಂಬಿದ ಹೊಳೆಯಲ್ಲಿ ಹೊತ್ತೊಯ್ದು ಆಸ್ಪತ್ರೆ ಸೇರಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಜ್ಯದ ಎಲ್ಲಾ ಮಾಧ್ಯಮಗಳು ಇದನ್ನು ಸುದ್ದಿ ಮಾಡಿದ್ದು, ಕ್ಷೇತ್ರದ ಶಾಸಕರೂ, ಸದ್ಯ ಬಂದರು ಹಾಗೂ ಮೀನುಗಾರಿಕಾ ಸಚಿವರಾಗಿರುವ ಎಸ್.ಅಂಗಾರರನ್ನು ತರಾಟೆಗೆ ತೆಗೆದುಕೊಂಡಿದ್ದವು. ಜನಪ್ರತಿನಿಧಿಗಳಿಗೆ ಜನರು ಹಿಡಿಶಾಪ ಹಾಕಿದ್ದರು. ಆದರೆ ಈ ಘಟನೆ ಇದೇ ಮೊದಲಲ್ಲ. ಈ ಹಿಂದೆಯೂ ಈ ಭಾಗದ ರೋಗಿಯೊಬ್ಬರು ಬಿದ್ದಾಗ‌ ಚಯರ್ ಮೂಲಕ ಎತ್ತಿಕೊಂಡು ಹೋದ

ಈಗಲ್ಲ, ನಾಲ್ಕು ವರ್ಷದ ಹಿಂದೆಯೇ ರೋಗಿಯನ್ನು ಹೊತ್ತೊಯ್ಯಲಾಗಿತ್ತು…! ಮರಸಂಕದ ಪರಿಸ್ಥಿತಿ ಗೊತ್ತಿದ್ದರೂ ಶಾಸಕರೇನು ಮಾಡ್ತಿದ್ರು…? Read More »

ಬೆಳ್ತಂಗಡಿ | ಏಕಾಏಕಿ ಅಂಗಡಿಗೆ ನುಗ್ಗಿದ ಕಾರು | ತಪ್ಪಿದ ಅನಾಹುತ |ಪೋಷಕರೇ ಮಕ್ಕಳನ್ನು ವಾಹನದಲ್ಲಿ ಬಿಟ್ಟು ಹೋಗುವಾಗ ಇರಲಿ ಎಚ್ಚರ

ಬೆಳ್ತಂಗಡಿ: ಅಂಗಡಿಯ ಮುಂದೆ ನಿಲ್ಲಿಸಿದ್ದ ಓಮ್ನಿಯೊಂದು ಏಕಾಏಕಿ ಮುಂದೆ ಇದ್ದ ಅಂಗಡಿಗೆ ಅಪ್ಪಳಿಸಿದ ಘಟನೆ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಅಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಉಜಿರೆಯ ಶಾರ್ವರಿ ಕಾಂಪ್ಲೆಕ್ಸ್ ಮುಂಭಾಗ ಓಮ್ನಿ ನಿಲ್ಲಿಸಿ ಚಾಲಕ ಹೊರಹೋಗಿದ್ದಾನೆ. ಜೊತೆಗೆ ಮಗುವನ್ನು ಕರೆದೊಯ್ಯದೆ ವಾಹನದೊಳಗೆ ಬಿಟ್ಟು ತೆರಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಓಮ್ನಿ ಸಡನ್ ಮುಂದೆ ಚಲಿಸಿದೆ. ಮುಂದೆ ಇದ್ದ ತರಕಾರಿ ಅಂಗಡಿಗೆ ಅಪ್ಪಳಿಸಿದೆ. ಅದೇ ಜಾಗದಲ್ಲಿ ಇಬ್ಬರು ಹುಡುಗಿಯರು ನಿಂತಿದ್ದರು. ಆದರೆ ಚಾಲಕನಿಲ್ಲದೆ ವಾಹನ ತಮ್ಮೆಡೆಗೆ ಬರುತ್ತಿರುವುದನ್ನು

ಬೆಳ್ತಂಗಡಿ | ಏಕಾಏಕಿ ಅಂಗಡಿಗೆ ನುಗ್ಗಿದ ಕಾರು | ತಪ್ಪಿದ ಅನಾಹುತ |ಪೋಷಕರೇ ಮಕ್ಕಳನ್ನು ವಾಹನದಲ್ಲಿ ಬಿಟ್ಟು ಹೋಗುವಾಗ ಇರಲಿ ಎಚ್ಚರ Read More »

6 ತಿಂಗಳ ಮಗುವಿನ ಕೋವಿಡ್ ರಿಪೋರ್ಟ್ ಕೇಳಿದ ಏರ್ಪೋರ್ಟ್ ಸಿಬ್ಬಂದಿ | ತಕ್ಷಣ ಸ್ಪಂದಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ | 20 ನಿಮಿಷ ತಡವಾಗಿ ಹೊರಟ ಏರ್ ಇಂಡಿಯಾ

ಮಂಗಳೂರು: ವಿಮಾನ ನಿಲ್ದಾಣ ಸಿಬ್ಬಂದಿ, ತಾಯಿಯೊಂದಿಗೆ ತವರಿಗೆ ಹೊರಟ ಆರು ತಿಂಗಳ ಮಗುವಿನ ನೆಗೆಟಿವ್ ರಿಪೋರ್ಟ್ ಕೇಳಿ ಗೊಂದಲ ಉಂಟಾದ ಘಟನೆ ಕುವೈತ್ ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಭಾರತೀಯ ವಿದೇಶಾಂಗ ಇಲಾಖೆ ತಾಯಿ-ಮಗುವಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ. ಕುವೈತ್ ನಲ್ಲಿದ್ದ ಮಂಗಳೂರು ಮೂಲದ ಅದಿತಿ ಸುದೇಶ್ ಎಂಬ ಮಹಿಳೆ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ತುರ್ತಾಗಿ ಮಂಗಳೂರಿಗೆ ಆಗಮಿಸುವವರಿದ್ದರು. ಇದಕ್ಕಾಗಿ ತನ್ನ ಕೋವಿಡ್ ನೆಗೆಟಿವ್ ರಿಪೋರ್ಟ್ ತಂದಿದ್ದರು. ಆದರೆ ಜೊತೆಗಿದ್ದ ತನ್ನ

6 ತಿಂಗಳ ಮಗುವಿನ ಕೋವಿಡ್ ರಿಪೋರ್ಟ್ ಕೇಳಿದ ಏರ್ಪೋರ್ಟ್ ಸಿಬ್ಬಂದಿ | ತಕ್ಷಣ ಸ್ಪಂದಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ | 20 ನಿಮಿಷ ತಡವಾಗಿ ಹೊರಟ ಏರ್ ಇಂಡಿಯಾ Read More »

ಪುತ್ತೂರು: ವಿಸ್ಟಾಡೋಂ ರೈಲಿನ ಮೇಲೆ ಕುಸಿದ ಧರೆ, ಗಾರ್ಡ್ ಗೆ ಹಾನಿ

ಪುತ್ತೂರು ಜುಲೈ 18: ಚಲಿಸುತ್ತಿದ್ದ ರೈಲಿನ ಮೇಲೆ ಧರೆ ಕುಸಿದು ರೈಲಿನ ಎದುರಿನ ಗಾರ್ಡ್ ಗೆ ಹಾನಿಯಾಗಿರುವ ಘಟನೆ ಪುತ್ತೂರು ಕಬಕ -ಸುಬ್ರಹ್ಮಣ್ಯ ರೈಲ್ವೇ ಹಳಿಯ ನಡುವೆ ವೀರಮಂಗಲ ಗಡಿಪಿಲ ಸಮೀಪದಲ್ಲಿ ನಡೆದಿದೆ. ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಂಗಳೂರು-ಬೆಂಗಳೂರು ರೈಲು ಈ ಹಳಿಯಲ್ಲಿ ಹಾದು ಹೋಗುತ್ತಿದ್ದಾಗ ಏಕಾ ಏಕಿ ಧರೆ ಕುಸಿದಿದ್ದು,ಮಣ್ಣು ರೈಲು ಎಂಜಿನ್ ನ ಮುಂಭಾಗಕ್ಕೆ ಕುಸಿದಿದ್ದು,ರೈಲಿನ ಗಾರ್ಡ್ ಗೆ ಹಾನಿಯಾಗಿದೆ. ರೈಲು ಈಗ ಹಳಿಯಲ್ಲಿ ಬಾಕಿಯಾಗಿದ್ದು,ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು,ಮಣ್ಣು ತೆರವು ಕಾರ್ಯಾಚರಣೆ

ಪುತ್ತೂರು: ವಿಸ್ಟಾಡೋಂ ರೈಲಿನ ಮೇಲೆ ಕುಸಿದ ಧರೆ, ಗಾರ್ಡ್ ಗೆ ಹಾನಿ Read More »

ಪುತ್ತೂರು: ಎಸ್ಸೆಸೆಲ್ಸಿ ಪರೀಕ್ಷೆಗೆ ಸಕಲ ಸಿದ್ದತೆ

ಪುತ್ತೂರು: ಕುತೂಹಲ ಕೆರಳಿಸಿದ್ದ SSLC ಪರೀಕ್ಷೆ ಸೋಮವಾರದಿಂದ ರಾಜ್ಯಾದ್ಯಂತ ನಡೆಯುತ್ತಿದೆ. ಕೊರೋನ ರಣಕೇಕೆಯ ಕಾರಣ ಪರೀಕ್ಷೆ ನಡೆಸಲು ಸರಕಾರ ಒಪ್ಪಿಗೆ ಸೂಚಿಸಿರಲಿಲ್ಲ. ವರ್ಷಂಪ್ರತಿ ಏಪ್ರೀಲ್ ಅಥವಾ ಮಾರ್ಚ್ ತಿಂಗಳಿನಲ್ಲಿ ರಾಜ್ಯದ್ಯಾಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ ಈ ಸಲ ಜುಲೈನಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದ್ದು ಇದಕ್ಕೆ ನ್ಯಾಯಾಲವು ಒಪ್ಪಿಗೆ ಸೂಚಿಸಿದೆ. ಅದರಂತೆ ಪುತ್ತೂರು ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇಲ್ಲಿ ಇಲಾಖೆಯ ಆದೇಶದಂತೆ ಎಲ್ಲಾ ಮುಂಜಾಗ್ರತಾ ಸಿದ್ದತೆಗಳನ್ನು ಮಾಡಲಾಗಿದೆ.

ಪುತ್ತೂರು: ಎಸ್ಸೆಸೆಲ್ಸಿ ಪರೀಕ್ಷೆಗೆ ಸಕಲ ಸಿದ್ದತೆ Read More »