ಕರಾವಳಿ

ಮಂಗಳೂರು ವಿ.ವಿ ಗ್ರೂಪ್ ನಲ್ಲಿ ಹರಿದಾಡಿತು ಹಸಿಬಿಸಿ ವಿಡಿಯೋ, ಪ್ರೊಫೆಸರ್ ನ ಎಡವಟ್ಟಿಗೆ ಎಲ್ಲೆಡೆ ಆಕ್ರೋಶ

ಮಂಗಳೂರು: ಇಲ್ಲಿನ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಿವಿಧ ಕಾಲೇಜುಗಳ ಪ್ರೊಫೆಸರ್ ಮತ್ತು ಉಪನ್ಯಾಸಕರನ್ನು ಒಳಗೊಂಡ ಟೆಲಿಗ್ರಾಮ್ ಗ್ರೂಪಿನಲ್ಲಿ ಕೊಡಗು ಮೂಲದ ಪ್ರೊಫೆಸರ್ ಒಬ್ಬರು ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿರುವ ಘಟನೆ ನಡೆದಿದ್ದು, ವಿವಿಯಿಂದ ತನಿಖೆಗೆ ಆದೇಶ ಮಾಡಲಾಗಿದೆ. ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ವಿಚಾರದಲ್ಲಿ ಮಂಗಳೂರು ವಿವಿಯಿಂದ ಗ್ರೂಪ್ ರಚಿಸಲಾಗಿತ್ತು. ವಾಟ್ಸಪ್ ಮಾದರಿಯದ್ದೇ ಟೆಲಿಗ್ರಾಮ್ ನಲ್ಲಿ ಗ್ರೂಪ್ ರಚಿಸಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ವ್ಯಾಪ್ತಿಯ ವಿವಿಧ ಕಾಲೇಜುಗಳ ಸಾವಿರಕ್ಕಿಂತಲೂ ಹೆಚ್ಚು ಸದಸ್ಯರನ್ನು ಸೇರಿಸಲಾಗಿತ್ತು. […]

ಮಂಗಳೂರು ವಿ.ವಿ ಗ್ರೂಪ್ ನಲ್ಲಿ ಹರಿದಾಡಿತು ಹಸಿಬಿಸಿ ವಿಡಿಯೋ, ಪ್ರೊಫೆಸರ್ ನ ಎಡವಟ್ಟಿಗೆ ಎಲ್ಲೆಡೆ ಆಕ್ರೋಶ Read More »

ಬೆಳ್ತಂಗಡಿ: ಹೆಂಡತಿಯ ಕೈಗೆ ಚೊಂಬು ಕೊಟ್ಟು ನಾದಿನಿಯನ್ನು ಹಾರಿಸಿಕೊಂಡು ಹೋದ ಗಂಡ

ಬೆಳ್ತಂಗಡಿ: ನವ ವಿವಾಹಿತ ಓರ್ವ ತನ್ನ ಹೆಂಡತಿಯನ್ನು ಬಿಟ್ಟು ನಾದಿನಿಯ ಜೊತೆ ಪರಾರಿಯಾದ ಘಟನೆ ಘಟನೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಕೈಕಂಬ ಎಂಬಲ್ಲಿ ನಡೆದಿದೆ. ಪರಾರಿಯಾದವರನ್ನು ಮುಸ್ತಾಫ್ ಮತ್ತು ರೈಹಾನಳ ಎಂದು ಹೇಳಲಾಗಿದೆ. ಮುಸ್ತಫಾ 9 ತಿಂಗಳ ಹಿಂದೆ ಮುಹಮ್ಮದ್ ಅವರ ಪುತ್ರಿ ಸೌಧಾ ಎಂಬಾಕೆಯನ್ನು ವಿವಾಹ ವಾಗಿದ್ದನು. ಅನಂತರ ಆತ ಮತ್ತು ಪತ್ನಿ ಸೌದ ಮಾವನ ಮನೆಗೆ ಬಂದು ಹೋಗುತ್ತಿದ್ದರು. ಈ ಸಂದರ್ಭ ನಾದಿನಿ ರೈಹಾನಳ ಜೊತೆಗೆ ಅಳಿಯ ಮುಸ್ತಫಾ ಸಲುಗೆಯಿಂದ ಇದ್ದುದ್ದಲ್ಲದೇ ಪೋನ್

ಬೆಳ್ತಂಗಡಿ: ಹೆಂಡತಿಯ ಕೈಗೆ ಚೊಂಬು ಕೊಟ್ಟು ನಾದಿನಿಯನ್ನು ಹಾರಿಸಿಕೊಂಡು ಹೋದ ಗಂಡ Read More »

ಕರಾವಳಿಯಲ್ಲಿ ಮತ್ತೆ ತಳವಾರ ಝಳಪಿಸಿದ ದುಷ್ಕರ್ಮಿಗಳು, ಗ್ರಾ.ಪಂ ಅಧ್ಯಕ್ಷನ ಕೊಲೆ ಯತ್ನ

ಕಾಪು: ಮಜೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಶೆಟ್ಟಿ ಹೇರೂರು ಇವರ ಕೊಲೆ ಯತ್ನ ನಡೆದ ಬಗ್ಗೆ ವರದಿಯಾಗಿದೆ. ಬಂಟಕಲ್ಲು ಹೇರೂರಿನಲ್ಲಿ ತನ್ನ ಅಂಗಡಿ ಬಾಗಿಲು ಮುಚ್ಚುವ ಸಮಯದಲ್ಲಿ ಸ್ಥಳಕಾಗಮಿಸಿದ ತಲವಾರು ಸಮೇತವಾಗಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗಣೇಶ್ ಶೆಟ್ಟಿಯ ಮೇಲೆ ಹಲ್ಲೆ ನಡೆಸಿ ಕೊಲೆಯತ್ನ ನಡೆಸಲು ಪ್ರಯತ್ನಿಸಿದರು ಈ ಸಮಯದಲ್ಲಿ ಬೊಬ್ಬೆ ಹಾಕಿದ ಶೆಟ್ಟಿ ಪಾರಾಗಲು ಯತ್ನಿಸಿದರು ಈ ಸಂಧರ್ಭದಲ್ಲಿ ಬೊಬ್ಬೆ ಕೇಳಿದ ಸ್ಥಳೀಯರು ಜಮಾವಣೆಯಾಗಿ ದುಷ್ಕರ್ಮಿಗಳಿಗೆ ಗೂಸ ನೀಡಿದ್ದಾರೆ. ಗಣೇಶ್ ಶೆಟ್ಟಿ ಹೆರೂರು

ಕರಾವಳಿಯಲ್ಲಿ ಮತ್ತೆ ತಳವಾರ ಝಳಪಿಸಿದ ದುಷ್ಕರ್ಮಿಗಳು, ಗ್ರಾ.ಪಂ ಅಧ್ಯಕ್ಷನ ಕೊಲೆ ಯತ್ನ Read More »

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

ಮಂಗಳೂರು : ನಿನ್ನೆ ತಡರಾತ್ರಿ ಹಳೆಯ ವಿಮಾನ ನಿಲ್ದಾಣದ ಎಟಿಎಸ್ ವಿಭಾಗದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ಅಕ್ರಮ ಪ್ರವೇಶ ಆರೋಪದಡಿ ಪ್ರಕರಣ ದಾಖಲಾಗಿದೆ. ವಶಕ್ಕೊಳಗಾದ ವ್ಯಕ್ತಿಯನ್ನು ಪಶ್ಚಿಮ ಬಂಗಾಳದ ಮುರ್ಸಿದಾಬಾದ್‌ನ ಬಧುಹಾ ಗ್ರಾಮದ ರಾಕೇಶ್ ಎಂದು ಗುರುತಿಸಲಾಗಿದೆ. ರಾತ್ರಿ ಸಿಐಎಸ್‌ಎಫ್ ಸಿಬ್ಬಂದಿಯು ಗಸ್ತು ತಿರುಗುತ್ತಿದ್ದಾಗ ರನ್‌ವೇ ಕಾಮಗಾರಿ ನಡೆಯುತ್ತಿದ್ದ ಹಳೆಯ ವಿಮಾನ ನಿಲ್ದಾಣದ ಎಟಿಎಸ್ ವಿಭಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಂಡುಬAದಿದ್ದನು. ಕೂಡಲೇ ಆತನನ್ನು ಹಿಡಿದು ವಿಚಾರಿಸಿದಾಗ ತಾನು ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ Read More »

ಪುತ್ತೂರು: ಬಿನ್ನ ಕೋಮಿನ ಯುವಕರ ನಡುವೆ ಜಗಳ- ತಲವಾರು ದಾಳಿ

ಪುತ್ತೂರು: ಬಿನ್ನ ಕೋಮಿನ ಯುವಕರ ನಡುವೆ ಜಗಳ ನಡೆದು ಬಳಿಕ ಸ್ಥಳೀಯ ಅಂಗಡಿಯಲ್ಲಿದ್ದ ಯುವಕರ ಮೇಲೆ ಇಬ್ಬರು ಯುವಕರು ತಲವಾರಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ಜು.6ರಂದು ಪುತ್ತೂರಿನ ಹೊರವಲಯ ಬನ್ನೂರು ಜೈನರಗುರಿ ಸಮೀಪ ನಡೆದಿದೆ. ಫಯಾಝ್ ಎಂಬವರು ದೂರು ನೀಡಿದ್ದೂ ಅಭಿಜಿತ್ ಮತ್ತು ಶರತ್ ತಲವಾರು ಪ್ರದರ್ಶಿಸುತ್ತಾ ಬೆದರಿಕೆಯೊಡ್ಡಿದ್ದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ದೂರು ಸ್ವೀಕರಿಸಿರುವ ಪುತ್ತೂರು ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ನಿನ್ನೆ ರಾತ್ರಿ ಒಂದು ಕೋಮಿಗೆ ಸೇರಿದ ಯುವಕರ ಗುಂಪೊAದು ಬನ್ನೂರು

ಪುತ್ತೂರು: ಬಿನ್ನ ಕೋಮಿನ ಯುವಕರ ನಡುವೆ ಜಗಳ- ತಲವಾರು ದಾಳಿ Read More »

ದ.ಕ.: ಮೊದಲ ಕೊರೊನಾ `ಮಿಸ್ – ಸಿ’ ಪ್ರಕರಣ: ಬಾಲಕಿಗೆ ಯಶಸ್ವಿ ಚಿಕಿತ್ಸೆ

ಮಂಗಳೂರು: ಕೊರೊನಾ ಭಾದಿತ ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಬರುವ ಮಿಸ್- ಸಿ (ಮಲ್ಟಿ ಸಿಸ್ಟಂ ಇನ್ ಪ್ಲೋ ಮ್ಯಾಟರಿ ಸಿಂಡ್ರೋಮ್ ) ಪ್ರಕರಣದ ಕಾಣಿಸಿಕೊಂಡ ೧೬ ವರ್ಷದ ಬಾಲಕಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಜಿಲ್ಲೆಯಲ್ಲಿ ಕಾಣಿಸಿಕೊಂಡ ಮಿಸ್ – ಸಿ ಮೊದಲ ಪ್ರಕರಣವಿದು ಎನ್ನಲಾಗಿದೆ. ಬಾಲಕಿ ಶ್ವಾಸಕೋಶದ ಸಮಸ್ಯೆಯಿಂದಾಗಿ ಜೂ.16 ರಂದು ವೆನ್ಲಾಕ್‌ಗೆ ದಾಖಲಾಗಿದ್ದಳು. ಕೋವೀಡ್ ಚಿಕಿತ್ಸೆ ನೀಡಿದ ಅನಂತರ ನ್ಯುಮೋನಿಯ, ಶ್ವಾಸಕೋಶದ ಸಮಸ್ಯೆ, ಮೆದುಳಿನಲ್ಲಿ ಸಮಸ್ಯೆ, ಹಿಮೋಗ್ಲೋಬೀನ್ ಸಮಸ್ಯೆ ಸೇರಿದಂತೆ ಕೆಲವೊಂದು ಸಮಸ್ಯೆ ಕಾಣಿಸಿಕೊಂಡಿತ್ತು.

ದ.ಕ.: ಮೊದಲ ಕೊರೊನಾ `ಮಿಸ್ – ಸಿ’ ಪ್ರಕರಣ: ಬಾಲಕಿಗೆ ಯಶಸ್ವಿ ಚಿಕಿತ್ಸೆ Read More »

ದ ಕ: ಖಾಸಗಿ ಬಸ್ ದರ ಏರಿಕೆಗೆ ಜಿಲ್ಲಾಧಿಕಾರಿ ತಡೆ

ಮಂಗಳೂರು: ಜಿಲ್ಲೆಯಲ್ಲಿ ಏರಿಕೆಯಾಗಿದ್ದ ಖಾಸಗಿ ಬಸ್ ಪ್ರಯಾಣ ದರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಾತ್ಕಾಲಿಕ ತಡೆ ಹಿಡಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘವು ಪ್ರಯಾಣದರವನ್ನು ಏರಿಕೆ ಮಾಡಿದ್ದವು. ಕೋವಿಡ್ ಕಾರಣದಿಂದ ಪ್ರಯಾಣಿಕರಿಗೆ ಹೇರಲಾದ ಮಿತಿ ಮತ್ತು ಡೀಸೆಲ್ ಬೆಲೆ ಏರಿಕೆ ಇದಕ್ಕೆ ಕಾರಣವಾಗಿತ್ತು. ಬಸ್ ಮಾಲೀಕರ ಸಂಘದ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸಭೆ ನಡೆ ಸಿದ ಬಳಿಕ ಈ ಮಾಹಿತಿ ನೀಡಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ಜಾರಿಯಲ್ಲಿದ್ದ ಪ್ರಯಾಣ ದರವನ್ನು

ದ ಕ: ಖಾಸಗಿ ಬಸ್ ದರ ಏರಿಕೆಗೆ ಜಿಲ್ಲಾಧಿಕಾರಿ ತಡೆ Read More »

ಸುಳ್ಯ | ರಿಕ್ಷಾ ಡಿಕ್ಕಿ – ಬೈಕ್ ಸವಾರನಿಗೆ ಗಾಯ

ಸುಳ್ಯ: ತಾಲೂಕಿನ ಬೆಳ್ಳಾರೆಯ ನೆಟ್ಟಾರು ಎಂಬಲ್ಲಿ ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡಿದ್ದಾರೆ. ಬಾಯಂಬಾಡಿಯಿಂದ ಬರುತ್ತಿದ್ದ ಬೈಕ್ ಗೆ ಬೆಳ್ಳಾರೆ ಕಡೆಯಿಂದ ಹೋಗುತ್ತಿದ್ದ ರಿಕ್ಷಾ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರನ ತಲೆಗೆ ಗಾಯಗಳಾಗಿವೆ. ಬಾಯಂಬಾಡಿ ನಿವಾಸಿ ಇಂದ್ರೇಶ್ ತನ್ನ ಬೈಕ್ ನಲ್ಲಿ ಬಸ್ಸನ್ನು ಓವರ್ ಟೆಕ್ ಮಾಡುವ ವೇಳೆ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ್ದಾರೆ. ಗಾಯಗೊಂಡ ಅವರನ್ನು ಪುತ್ತೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾದಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಾಗಿವೆ.

ಸುಳ್ಯ | ರಿಕ್ಷಾ ಡಿಕ್ಕಿ – ಬೈಕ್ ಸವಾರನಿಗೆ ಗಾಯ Read More »

ಕಾಸರಗೋಡು: ನಾಪತ್ತೆಯಾಗಿದ್ದ ಮೀನುಗಾರರ ಮೃತದೇಹ ಬೇಕಲಕೋಟೆ ಬಳಿ ಪತ್ತೆ

ಕಾಸರಗೋಡು: ನಿನ್ನೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮಗುಚಿ ನಾಪತ್ತೆಯಾಗಿದ್ದ ಮೂರು ಜನ ಮೀನುಗಾರರ ಶವ ಪತ್ತೆಯಾಗಿದೆ. ಕಾಸರಗೋಡು: ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆ ನಿನ್ನೆ ಬೆಳಿಗ್ಗೆ ತಳಂಗರೆ ಸಮೀಪದ ಕಸಬಾ ಕಡಪ್ಪುರ ಬಳಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿತ್ತು. ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿದ್ದರು. ಇಂದು ನಾಪತ್ತೆಯಾಗಿದ್ದ ಕಡಪ್ಪುರ ನಿವಾಸಿಗಳಾದ ಸಂದೀಪ್ (33), ರತೀಶನ್ (30) ಮತ್ತು ಕಾರ್ತಿಕ್ (29 ) ಮೃತದೇಹಗಳು ಬೇಕಲ ಕೋಟೆ ಬಳಿ ಪತ್ತೆಯಾಗಿದೆ.

ಕಾಸರಗೋಡು: ನಾಪತ್ತೆಯಾಗಿದ್ದ ಮೀನುಗಾರರ ಮೃತದೇಹ ಬೇಕಲಕೋಟೆ ಬಳಿ ಪತ್ತೆ Read More »

ಕಾಸರಗೋಡು: ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆ

ಕಾಸರಗೋಡು: ಮೀನುಗಾರಿಕೆಗೆ ತೆರಲಿದ್ದ ದೋಣಿ ಮಗುಚಿ ಮೂವರು ನಾಪತ್ತೆಯಾದ ಘಟನೆ ಕಾಸರಗೋಡು ಸಮುದ್ರದಲ್ಲಿ ಇಂದು ಬೆಳಗ್ಗೆ ನಡೆದಿದ್ದು, ನಾಲ್ವರು ಪಾರಾಗಿದ್ದಾರೆ. ಕಸಬಾ ಕಡಪ್ಪುರದ ಸಂದೀಪ್ (33), ರತೀಶ್ (30) ಮತ್ತು ಕಾರ್ತಿಕ್ (29) ನಾಪತ್ತೆಯಾದವರು. ಇನ್ನೂ ರವಿ (40), ಶಿಬಿನ್ (30), ಮನಿಕುಟ್ಟನ್ (35) ಈಜಿ ದಡಸೇರಿದ್ದಾರೆ. ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮುದ್ರದ ಅಲೆಗಳ ರಭಸಕ್ಕೆ ಫೈಬರ್ ದೋಣಿ ಮಗುಚಿ ಬಿದ್ದು ಈ ಅನಾಹುತ ನಡೆದಿದೆ. ದೋಣಿ ಭಾಗಶಃ ಹಾನಿಗೊಂಡಿದೆ.ನಾಪತ್ತೆಯಾದವರಿಗಾಗಿ ಕರಾವಳಿ ಪೊಲೀಸರು, ಅಗ್ನಿಶಾಮಕ

ಕಾಸರಗೋಡು: ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆ Read More »