ಕರಾವಳಿ

ಬೆಳ್ತಂಗಡಿ: ಮಗಳನ್ನು ಕೊಡಲೊಪ್ಪದ ತಂದೆ | ಕತ್ತಿಯಿಂದ ಕಡಿದ ಸುಬ್ರಮಣ್ಯದ ಯುವಕ

ಬೆಳ್ತಂಗಡಿ: ಮಗಳನ್ನು ವಿವಾಹ ಮಾಡಿ ಕೊಡಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವತಿಯ ತಂದೆಗೆ ಯುವಕನೊಬ್ಬ ಕತ್ತಿಯಿಂದ ಕಡಿದ ಘಟನೆ ತಾಲೂಕಿನ ಲಾಯಿಲ ಗ್ರಾಮದಲ್ಲಿ ನಡೆದಿದೆ. ಲಾಯಿಲ ವಿವೇಕಾನಂದ ನಗರದ ಸೋಮನಾಥ ಕಲಾಲ್ ಗಾಯಗೊಂಡವರು. ಸುಬ್ರಹ್ಮಣ್ಯದ ಕೈಕಂಬ ನಿವಾಸಿ ದಿನೇಶ್ ಆರೋಪಿ. ದಿನೇಶ್ ಹಲವು ದಿನಗಳಿಂದ ಸೋಮನಾಥ ಅವರ ಮಗಳನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಅವರು ಒಪ್ಪದಿದ್ದಾಗ ಹಲವು ಬಾರಿ ಬೆದರಿಕೆಗಳನ್ನು ಒಡ್ಡಿದ್ದ. ಇದ್ಯಾವುದಕ್ಕೂ ಸೋಮನಾಥ ಅವರು ಬಗ್ಗಿರಲಿಲ್ಲ. ಇದರಿಂದ ಕುಪಿತಗೊಂಡ ದಿನೇಶ್ ಮನೆಗೆ ಬಂದು ಸೋಮನಾಥ್ […]

ಬೆಳ್ತಂಗಡಿ: ಮಗಳನ್ನು ಕೊಡಲೊಪ್ಪದ ತಂದೆ | ಕತ್ತಿಯಿಂದ ಕಡಿದ ಸುಬ್ರಮಣ್ಯದ ಯುವಕ Read More »

ಮಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

ಮಂಗಳೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ವಾಮಂಜೂರು ನಿವಾಸಿ ವಿನೋದ್ ರಾಜ್ ಅಮೀನ್ ಎಂಬವರ ಪತ್ನಿ ಪ್ರಿಯಾಂಕ (31) ಎಂದು ಗುರುತಿಸಲಾಗಿದೆ. ಇವರು ದ್ವಿಚಕ್ರ ವಾಹನದಲ್ಲಿ ಜು.10ರ ಶನಿವಾರ ಯೆಯ್ಯಾಡಿ ಹರಿಪದವು ಎಂಬಲ್ಲಿ ತೆರಳುತ್ತಿದ್ದಾಗ ವಿರುದ್ಧ ದಿಕ್ಕಿನಲ್ಲಿ ಬಂದ ಆಲ್ಟೊ ಕಾರು ಢಿಕ್ಕಿಯಾಗಿತ್ತು. ಪರಿಣಾಮ ಪ್ರಿಯಾಂಕ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದ ಬಳಿಕ ಕೋಮಾದಲ್ಲಿದ್ದ ಪ್ರಿಯಾಂಕ ಚಿಕಿತ್ಸೆ ಫಲಕಾರಿಯಾಗದೇ

ಮಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು Read More »

ಮಂಗಳೂರು: ಮಹಿಳೆಗೆ ಹಲ್ಲೆ ನಡೆಸಿ ದರೋಡೆ – ಓರ್ವ ಬಂಧನ

ಮಂಗಳೂರು: ಯುನಿಸೆಕ್ಸ್ ಸಲೂನ್‌ನಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ, ಹಲ್ಲೆ ನಡೆಸಿ ದರೋಡೆ ಮಾಡಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಿ ಘಟನೆ ನಗರದಲ್ಲಿ ನಡೆದಿದೆ. ಆರೋಪಿಯನ್ನು ಅತ್ತಾವರದ ಅಬ್ದುಲ್ ದಾವೂದ್ ಎಂದು ಗುರುತಿಸಲಾಗಿದೆ. ಈತ ಜುಲೈ 1 ರಂದು ಕದ್ರಿಯ ಸಲೂನ್‌ನಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ಮತ್ತು ಹಲ್ಲೆ ನಡೆಸಿ 14,000 ರೂ. ಪಡೆದುಕೊಂಡಿದ್ದಾನೆ ಎಂದು ಆರೋಪಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು: ಮಹಿಳೆಗೆ ಹಲ್ಲೆ ನಡೆಸಿ ದರೋಡೆ – ಓರ್ವ ಬಂಧನ Read More »

ಉಡುಪಿ: ಅಪಹರಣಕ್ಕೊಳಗಾದ ಮಗು ರಕ್ಷಣೆ | ಆರೋಪಿ ಪೊಲೀಸ್ ವಶಕ್ಕೆ

ಉಡುಪಿ: ಕರಾವಳಿ ಬೈಪಾಸ್‌‌ ಬಳಿಯಿಂದ ಭಾನುವಾರ ಬೆಳಗ್ಗೆ ಅಪಹರಣಕ್ಕೊಳಗಾದ ಮಗುವನ್ನು ಉಡುಪಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಆರೋಪಿ ಸಹಿತ ಕುಮುಟಾದಲ್ಲಿ ಪತ್ತೆ ಮಾಡಿದ್ದಾರೆ. ಆರೋಪಿಯನ್ನು ಬಾಗಲಕೋಟೆಯ ಪರಶು ಎಂದು ಗುರುತಿಸಲಾಗಿದೆ. ಕುಮುಟಾದಲ್ಲಿ ರೈಲ್ವೆ ಪೊಲೀಸರ ಸಹಕಾರದೊಂದಿಗೆ ಪತ್ತೆ ಹಚ್ಚಿ, ಮಗು ಶಿವರಾಜ್‌ (2.5 ವರ್ಷ) ಹಾಗೂ ಆರೋಪಿಯನ್ನು ಇಂದು ಬೆಳಗ್ಗೆ ಪೊಲೀಸರು ಉಡುಪಿಗೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಬೆಳಗ್ಗೆ ಪರಶು ಮಗುವನ್ನು ಅಪಹರಿಸಿ ಕರಾವಳಿ ಬೈಪಾಸ್‌ನಿಂದ ಸಿಟಿಬಸ್‌‌ನಲ್ಲಿ ಪ್ರಯಾಣಿಸಿ ಸಂತೆಕಟ್ಟೆಯಲ್ಲಿ ಇಳಿದಿದ್ದನು. ಸಂತೆಕಟ್ಟೆಯಲ್ಲಿ ಆತ

ಉಡುಪಿ: ಅಪಹರಣಕ್ಕೊಳಗಾದ ಮಗು ರಕ್ಷಣೆ | ಆರೋಪಿ ಪೊಲೀಸ್ ವಶಕ್ಕೆ Read More »

ತಲಪಾಡಿ: ಹಠಾತ್ ಬ್ರೇಕ್ ಹಾಕಿದ ಬಸ್ ಚಾಲಕ | ಸಂಪೂರ್ಣ ಬಸ್ಸಿನಡಿ ನುಗ್ಗಿದ ಬೈಕ್ | ಸವಾರ ಗಂಭೀರ

ಮಂಗಳೂರು: ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಗರ ಹೊರವಲಯದ ಉಚ್ಚಿಲ ಎಂಬಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ಸಂಭವಿಸಿದೆ. ಮಂಗಳೂರು ತಲಪಾಡಿ ನಡುವೆ ಸಂಚರಿಸುತ್ತಿದ್ದ ಸಿಟಿ ಬಸ್ ಚಾಲಕ ಹೆದ್ದಾರಿಯಲ್ಲಿ ಒಮ್ಮೆಗೆ ಬಸ್ಸನ್ನು ನಿಲ್ಲಿಸಿದ್ದಾನೆ. ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಸ್ಸಿನ ಹಿಂಬದಿ ಯಿಂದ ಸಂಪೂರ್ಣವಾಗಿ ಒಳಗೆ ನುಗ್ಗಿದೆ. ಬೈಕ್ ಸವಾರರಾದ, ಆಂಧ್ರ ಮೂಲದ

ತಲಪಾಡಿ: ಹಠಾತ್ ಬ್ರೇಕ್ ಹಾಕಿದ ಬಸ್ ಚಾಲಕ | ಸಂಪೂರ್ಣ ಬಸ್ಸಿನಡಿ ನುಗ್ಗಿದ ಬೈಕ್ | ಸವಾರ ಗಂಭೀರ Read More »

ಮಂಗಳೂರು: ಅಪಘಾತ ಕಂಡು ಸಹಾಯಕ್ಕೆ ಧಾವಿಸಿದಾಗ ಬಂದೆರಗಿದ ಟ್ಯಾಂಕರ್ | ಸುಳ್ಯ ಮೂಲದ ಯುವಕ ಸಾವು

ಮಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಉಪಚರಿಸುತ್ತಿದ್ದ ವೇಳೆ ಯುವಕನೊಬ್ಬನಿಗೆ ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಯುವಕ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತಪಟ್ಟವರನ್ನು ಸುಳ್ಯ ತಾಲೂಕಿನ ಮೇರ್ಕಜೆ ಪುರುಷೋತ್ತಮ ಎಂಬವರ ಮಗ ತೇಜಸ್ (28) ಎಂದು ಗುರುತಿಸಲಾಗಿದೆ. ನಗರದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದ ತೇಜಸ್ ನಿನ್ನೆ ಸಂಜೆ ಕೆಲಸ ಮುಗಿಸಿ ರೂಮ್ ಕಡೆ ತೆರಳುತ್ತಿದ್ದರು. ಈ ಸಂದರ್ಭ ನಗರದ ಬೈಕಂಪಾಡಿ ಬಳಿ ತೇಜಸ್ ಗೆ ಬೇರೊಂದು ಬೈಕ್ ಅಪಘಾತ ಗೊಂಡಿರುವುದು ಕಂಡುಬಂದಿದೆ. ತಕ್ಷಣ ಸಹಾಯಕ್ಕೆ

ಮಂಗಳೂರು: ಅಪಘಾತ ಕಂಡು ಸಹಾಯಕ್ಕೆ ಧಾವಿಸಿದಾಗ ಬಂದೆರಗಿದ ಟ್ಯಾಂಕರ್ | ಸುಳ್ಯ ಮೂಲದ ಯುವಕ ಸಾವು Read More »

ಕುಕ್ಕೆ ಕ್ಷೇತ್ರದಲ್ಲಿನ್ನು ಬ್ಯಾಂಕ್ ಸೇವಾ ಕೌಂಟರ್ | ರಾಷ್ಟ್ರೀಕೃತ ಬ್ಯಾಂಕ್’ಗಳ ಬದಲು HDFC ಯನ್ನು ಆಯ್ಕೆ ಮಾಡಿದ್ದೇಕೆ….!?

ಸುಬ್ರಹ್ಮಣ್ಯ: ರಾಜ್ಯ ಸರಕಾರಕ್ಕೆ ಬಹುಕೋಟಿ ಆದಾಯ ತಂದುಕೊಡುವ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಸೇವಾ ಕೌಂಟರ್ ತೆರೆಯಲು ನಿರ್ಧರಿಸಲಾಗಿದೆ. ಇನ್ನು ಈ ಕಂಟ್ರಾಕ್ಟ್’ನ್ನು ರಾಷ್ಟ್ರೀಕೃತ ಬ್ಯಾಂಕ್’ಗಳ ಬದಲು ಖಾಸಗಿ HDFC ಬ್ಯಾಂಕ್ ಗೆ ನೀಡಿರುವುದು ಭಕ್ತರಲ್ಲಿ ಅನುಮಾನ ಹುಟ್ಟುಹಾಕಿದೆ. ಧಾರ್ಮಿಕ ಮತ್ತು ದತ್ತಿ ಇಲಾಖೆ ದೇವಾಲಯದ ಸೇವೆಗಳಲ್ಲಿ ಪಾದರ್ಶಕತೆ ಗಟ್ಟಿಗೊಳಿಸಲು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಈ ಮೂಲಕ ಭಕ್ತರು ಮಾಡಿಸುವ ಸೇವೆಯ ಹಣ ತಕ್ಷಣ ನೇರವಾಗಿ ದೇವಾಲಯದ ಖಾತೆಗೆ ಜಮೆಯಾಗಲಿದೆ. ಕುಕ್ಕೆ ದೇವಾಲಯ ಸೇರಿದಂತೆ, ಘಾಟಿ

ಕುಕ್ಕೆ ಕ್ಷೇತ್ರದಲ್ಲಿನ್ನು ಬ್ಯಾಂಕ್ ಸೇವಾ ಕೌಂಟರ್ | ರಾಷ್ಟ್ರೀಕೃತ ಬ್ಯಾಂಕ್’ಗಳ ಬದಲು HDFC ಯನ್ನು ಆಯ್ಕೆ ಮಾಡಿದ್ದೇಕೆ….!? Read More »

ಕಟಪಾಡಿ: ಬಸ್ ಡಿಕ್ಕಿ – ಬೈಕ್ ಸವಾರ ಸಾವು

ಉಡುಪಿ: ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕಟಪಾಡಿ ಜಂಕ್ಷನ್‌ನಲ್ಲಿ ನಡೆದಿದೆ. ಮೃತರನ್ನು ಕಟಪಾಡಿಯ ಅಚ್ಚಾದ ನಿವಾಸಿ ಯಶೋಧರ ಆಚಾರ್ಯ ಎಂದು ಗುರುತಿಸಲಾಗಿದೆ. ಇವರು ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ಲ್ಲಿ ತನ್ನ ಬೈಕ್ ನಲ್ಲಿ ತೇರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಯಶೋಧರ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ಈ ಸಂಬಂಧ

ಕಟಪಾಡಿ: ಬಸ್ ಡಿಕ್ಕಿ – ಬೈಕ್ ಸವಾರ ಸಾವು Read More »

ಲಂಚ ಸ್ವೀಕಾರ: ಮಂಗಳೂರು ವಿವಿ ಪ್ರೊಫೆಸರ್ ಗೆ ಜೈಲು

ಮಂಗಳೂರು: ವಿದ್ಯಾರ್ಥಿನಿಯಿಂದ ಲಂಚ ಸ್ವೀಕಾರರಿಸಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ ರವಿಶಂಕರ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 2012ರ ಡಿಸೆಂಬರ್ 4ರಂದು ಡಾ.ಅನಿತಾ ರವಿಶಂಕರ್ ಅವರು ಪಿಎಚ್‌ಡಿ ವಿದ್ಯಾರ್ಥಿನಿ ಪ್ರೇಮಾ ಡಿ’ಸೋಜಾ ಅವರಿಂದ ಪ್ರಬಂಧ ಅಂಗೀಕಾರ ಆಗಬೇಕಾದರೆ ಮೈಸೂರಿನಿಂದ ಬರುವ ಬಾಹ್ಯ ಪರಿವೀಕ್ಷಕರ ಖರ್ಚಿಗೆಂದು 16,800 ರೂ.ಗಳನ್ನು ಲಂಚವಾಗಿ ಬೇಡಿಕೆ ಇಟ್ಟಿದ್ದರು. ಇದರ ಮುಂಗಡ ಹಣ ವಾಗಿ 5000 ರೂ. ಸ್ವೀಕರಿಸುತ್ತಿದ್ದಾಗ ಮಂಗಳೂರು ಲೋಕಾಯುಕ್ತ ನಿರೀಕ್ಷಕರಾದ

ಲಂಚ ಸ್ವೀಕಾರ: ಮಂಗಳೂರು ವಿವಿ ಪ್ರೊಫೆಸರ್ ಗೆ ಜೈಲು Read More »

ಸುಳ್ಯ: ಜೀತ ಕಾರ್ಮಿಕ ಪದ್ದತಿ ಇನ್ನೂ ಜೀವಂತ, ಮಕ್ಕಳು, ಮಹಿಳೆಯರಿಂದ ಸಂಬಳವಿಲ್ಲದ ದುಡಿಮೆ; ಅಧಿಕಾರಿಗಳಿಂದ ದಾಳಿ | ಸಾಮಾಜಿಕ ಸೇವೆಯೆಂದ ಮನೆ ಯಜಮಾನ!

ಸುಳ್ಯ: ಮನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸೇರಿದಂತೆ ಹಲವು ಮಂದಿಗೆ ಸಂಬಳ ನೀಡದೆ ದುಡಿಸುತ್ತಿರುವುದು ಕಂಡುಬಂದು, ಅಧಿಕಾರಿಗಳು ದಾಳಿ ನಡೆಸಿದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಗ್ರಾಮದ ಕರಿಕಳದಲ್ಲಿ ನಡೆದಿದೆ. ಪಂಜ ಗ್ರಾಮದ ಕರಿಕಳದ ವಿಶ್ವನಾಥ್ ಭಟ್ ಎಂಬವರ ಮನೆಯಲ್ಲಿ ಈ ಘಟನೆ‌ ನಡೆದಿದ್ದು ಇಲ್ಲಿ ಸುಮಾರು 8-10 ಮಕ್ಕಳು ಹಾಗೂ ಮಹಿಳೆಯರನ್ನು ದುಡಿಯುತ್ತಿದ್ದರು. ಆದರೆ ಇವರ ದುಡಿಮೆಗೆ ಯಾವುದೇ ರೀತಿಯಲ್ಲಿ ಸಂಬಳವನ್ನು ನೀಡಲಾಗುತ್ತಿಲ್ಲ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಪುಟ್ಟ ಪುಟ್ಟ ಮಕ್ಕಳು ದನ

ಸುಳ್ಯ: ಜೀತ ಕಾರ್ಮಿಕ ಪದ್ದತಿ ಇನ್ನೂ ಜೀವಂತ, ಮಕ್ಕಳು, ಮಹಿಳೆಯರಿಂದ ಸಂಬಳವಿಲ್ಲದ ದುಡಿಮೆ; ಅಧಿಕಾರಿಗಳಿಂದ ದಾಳಿ | ಸಾಮಾಜಿಕ ಸೇವೆಯೆಂದ ಮನೆ ಯಜಮಾನ! Read More »