ಕರಾವಳಿ

ಧರ್ಮನಿಂದನೆ ಪ್ರಕರಣ ಪ್ರವೀಣ್ ರಿಂದ ಪೊಲೀಸ್ ‌ಸಮ್ಮುಖದಲ್ಲಿ ಕ್ಷಮೆಯಾಚನೆ, ರಾಜಿಯಲ್ಲಿ ಪ್ರಕರಣ ಇತ್ಯರ್ಥ

ಸುಳ್ಯ: ದೈವಸ್ಥಾನಕ್ಕೆ ಸೇರಿದ ಜಾಗದಲ್ಲಿ ಕ್ರಿಕೆಟ್ ಆಡಲು ಬರುತ್ತಿದ್ದ ಅನ್ಯಧರ್ಮದ ಯುವಕನಿಗೆ ನಿಂದನೆ ಮಾಡಿದ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿದ್ದು, ಅನ್ಯಧರ್ಮೀಯನ ನಿಂದನೆಗೈದ ಆರೋಪ ಎದುರಿಸುತ್ತಿದ್ದ ಪ್ರವೀಣ್ ಕುಮಾರ್ ಜಯನಗರ ಕ್ಷಮೆಯಾಚಿಸಿದ್ದಾರೆ. ಜಯನಗರದ ಆದಿ ಮೊಗೇರ್ಕಳ ದೈವ ಸ್ಥಾನದ ಎದುರಿನ ಜಾಗದಲ್ಲಿ ಊರಿನ ಯುವಕರು ಕಳೆದ ಹಲವು ಸಮಯಗಳಿಂದ ಕ್ರಿಕೆಟ್ ಆಡುತ್ತಿದ್ದರು. ಇತ್ತೀಚೆಗೆ ಅದೇ ಸ್ಥಳದಲ್ಲಿ ದೈವಸ್ಥಾನದ ಪದಾಧಿಕಾರಿಗಳು ಮತ್ತು ಇತರರು ವನಮಹೋತ್ಸವ ಸಲುವಾಗಿ ಗಿಡಗಳನ್ನು ನೆಡಲು ಗುಂಡಿ ತೋಡಿದ್ದರು. ಆಡಲು ಬರುತ್ತಿದ್ದ ಯುವಕರು ಇದನ್ನು ಪ್ರಶ್ನಿಸಿದ್ದರು. ಈ […]

ಧರ್ಮನಿಂದನೆ ಪ್ರಕರಣ ಪ್ರವೀಣ್ ರಿಂದ ಪೊಲೀಸ್ ‌ಸಮ್ಮುಖದಲ್ಲಿ ಕ್ಷಮೆಯಾಚನೆ, ರಾಜಿಯಲ್ಲಿ ಪ್ರಕರಣ ಇತ್ಯರ್ಥ Read More »

ಶಾಸಕರು ಸಚಿವರಾದ್ರೂ ಹೊಳೆ ಈಜೋದು ತಪ್ಪಲಿಲ್ಲ | ಅಂಗಾರರ ಊರಲ್ಲಿ ಜೀವ ಅಂಗೈಯಲ್ಲಿ….! | ಮರಸಂಕದಲ್ಲಿ ಸೇತುವೆ ನಿರ್ಮಾಣ ಯಾವಾಗ…?

ಸುಳ್ಯ: ಈ ಊರಿನ ಹೆಸರು ಮರಸಂಕ. ತಾಲೂಕಿನ ಜಾಲ್ಸೂರು ಗ್ರಾಮಕ್ಕೆ ಒಳಪಡುವ ಈ ಊರಿಗೆ ಅಗತ್ಯ ಮೂಲ ಸೌಕರ್ಯವಾದ ರಸ್ತೆ ಸಂಪರ್ಕವೇ ಇಲ್ಲ. ಇದಕ್ಕೆ ಕಾರಣ ಊರಿಗೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿರುವ ಹಳ್ಳ. ಊರಿನಿಂದ ಜಾಲ್ಸೂರು ಸಂಪರ್ಕಿಸುವ ದಾರಿಯಲ್ಲಿ ಹಳ್ಳವೊಂದಿದೆ. ಬೇಸಿಗೆಯಲ್ಲಿ ಕಷ್ಟವಿಲ್ಲದೆ ಇದನ್ನು ದಾಟಿ ಊರ ಜನ ಸಾಗುತ್ತಾರೆ. ಆದರೆ ಮಳೆಗಾಲದಲ್ಲೂ ಉಕ್ಕಿ ಬರುವ ನೀರಿನಲ್ಲೇ ಜೀವಭಯದಲ್ಲಿ ನದಿ ದಾಟುವ ಅನಿವಾರ್ಯತೆ ಇಲ್ಲಿನ ನಿವಾಸಿಗಳದ್ದು. ಇತ್ತೀಚೆಗೆ ಸ್ಥಳೀಯ ನಿವಾಸಿ ಮಹಿಳೆಯೊಬ್ಬರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಊರಿನ

ಶಾಸಕರು ಸಚಿವರಾದ್ರೂ ಹೊಳೆ ಈಜೋದು ತಪ್ಪಲಿಲ್ಲ | ಅಂಗಾರರ ಊರಲ್ಲಿ ಜೀವ ಅಂಗೈಯಲ್ಲಿ….! | ಮರಸಂಕದಲ್ಲಿ ಸೇತುವೆ ನಿರ್ಮಾಣ ಯಾವಾಗ…? Read More »

ಸುಂದರ ಉದ್ಯಾನವನ ಬೆಳ್ಳಾರೆಯ ತಿರುಮಲೇಶ್ವರ ಭಟ್’ರ ಮನೆಯಂಗಳ | ಇಲ್ಲಿವೆ ನೂರಾರು ಕ್ಯಾಕ್ಟಸ್ ಗಿಡಗಳು ಹಣ್ಣಿನ ಮರಗಳು

ಸುಳ್ಯ: ಹೆಸರು ತಿರುಮಲೇಶ್ವರ ಭಟ್. ಇವರ ಮನೆಯ ಗೇಟಿನ ಒಳಹೊಕ್ಕರೆ ಸಾಕು ಮೈಮನ ಅರಳುತ್ತದೆ. ಮನಸ್ಸು ರೋಮಾಂಚನಗೊಳ್ಳುತ್ತದೆ. ಇದಕ್ಕೆ ಕಾರಣ ಮನೆಯ ಅಂಗಳದಲ್ಲಿರುವ ಬಣ್ಣ ಬಣ್ಣದ ಹೂಗಿಡ-ಬಳ್ಳಿಗಳ, ಕ್ಯಾಕ್ಟಸ್ ಗಿಡಗಳ ಸುಂದರ ದೃಶ್ಯ. ಹೌದು ತಿರುಮಲೇಶ್ವರ ಅವರ ಮನೆ ಇರುವುದು ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕುರಿಯಾಜೆಯಲ್ಲಿ. ವೃತ್ತಿಯಲ್ಲಿ ಕೃಷಿಕರಾಗಿರುವ ಇವರು ಮನೆಯಂಗಳವನ್ನು ಉದ್ಯಾನವನವನ್ನಾಗಿ ಮಾಡಿದ್ದಾರೆ. ಪ್ರಗತಿಪರ ಕೃಷಿಕರಾಗಿರುವ ಕಾರಣ ಇವರು ಆಗಾಗ ಕೃಷಿ ಅಧ್ಯಯನಕ್ಕಾಗಿ ಅಂತರರಾಜ್ಯ ಹಾಗೂ ಅಂತರಾಷ್ಟ್ರೀಯ ಪ್ರವಾಸ ಮಾಡುತ್ತಾರೆ. ಆ ಸಮಯದಲ್ಲಿ ಅಲ್ಲಲ್ಲಿ

ಸುಂದರ ಉದ್ಯಾನವನ ಬೆಳ್ಳಾರೆಯ ತಿರುಮಲೇಶ್ವರ ಭಟ್’ರ ಮನೆಯಂಗಳ | ಇಲ್ಲಿವೆ ನೂರಾರು ಕ್ಯಾಕ್ಟಸ್ ಗಿಡಗಳು ಹಣ್ಣಿನ ಮರಗಳು Read More »

ಮಂಗಳೂರು: ಮುಂಬೈಯಿಂದ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ

ಮಂಗಳೂರು: ಮುಂಬೈಯಿಂದ ಬಂದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಮಹಿಳೆಯನ್ನು ಸೂರಿಂಜೆ ಬಳಿಯ ಪುಚ್ಚಾಡಿ ನಿವಾಸಿ ಪುಷ್ಪ (40) ಎಂದು ಗುರುತಿಸಲಾಗಿದೆ. ಇವರು ಮುಂಬೈಯಿಂದ ಆಗಮಿಸಿದ್ದು ಜು. 13 ರ ಸೋಮವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ಸಂಬಂಧಿಕರು ಹುಡುಕಾಡಿದಾಗ ಇವರ ಪಾದರಕ್ಷೆಗಳು ಮನೆಯ ಬಳಿ ಇರುವ ಶಿಬರೂರು ಹೊಳೆಯ ಪಕ್ಕದಲ್ಲಿ ಪತ್ತೆಯಾಗಿದೆ. ಯಾವುದೋ ಕಾರಣಕ್ಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯದಿಂದ ಅಗ್ನಿಶಾಮಕ ದಳದವರು ನದಿಯಲ್ಲಿ ಶೋಧ ಕಾರ್ಯ

ಮಂಗಳೂರು: ಮುಂಬೈಯಿಂದ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ Read More »

ಬಾಲಕನ ಅಪಹರಣ ಪ್ರಕರಣ : ಆರೋಪಿಗೆ ನ್ಯಾಯಾಂಗ ಬಂಧನ

ಉಡುಪಿ: ಬಾಲಕನ ಅಪಹರಣದ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ದಾಂಡೇಲಿಯ ಪರಶುರಾಮ‌ ಭೀಮಪ್ಪನನ್ನು ಭಾನುವಾರ ಕುಮಟಾದಲ್ಲಿ ಬಂಧಿಸಿದ್ದರು. ಸೋಮವಾರ ಉಡುಪಿಗೆ ಕರೆತರಲಾದ ಪರಶುರಾಮನನ್ನು ಮೂರ್ಚೆ ರೋಗದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ವೈದ್ಯರ ಸಲಹೆಯಂತೆ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಂಗ ಬಂಧನಕ್ಕೆ ಒಳಗಾದ ಈತನನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಈತನಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಅದರಂತೆ ಆತನನ್ನು ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು

ಬಾಲಕನ ಅಪಹರಣ ಪ್ರಕರಣ : ಆರೋಪಿಗೆ ನ್ಯಾಯಾಂಗ ಬಂಧನ Read More »

ಸುಳ್ಯ: ದೈವಸಾನಿಧ್ಯದ ಮೈದಾನದಲ್ಲಿ ಆಡುತ್ತಿದ್ದ ಅನ್ಯಧರ್ಮೀಯನ ಹೊರಗಟ್ಟಿದ ಕಮಿಟಿ ಪ್ರತಿನಿಧಿ | ಸಾಮರಸ್ಯದ ನಡುವೆ ಕೋಮು ಬೀಜ ಬಿತ್ತುವ ಕೆಲಸವೇಕೆ ಮಹಾಸ್ವಾಮಿ…?

ಸುಳ್ಯ: ‘ದೇವಸ್ಥಾನದ ಮೈದಾನದಲ್ಲಿ ಹಿಂದೂಗಳು ಅಲ್ಲದೆ ಬೇರೆ ಧರ್ಮದವರಿಗೆ ಇಲ್ಲಿ ಅವಕಾಶವಿಲ್ಲ, ಇಲ್ಲಿಂದ ಹೊರಗೆ ನಿಂತು ಮಾತನಾಡು, ಇಲ್ಲಿ ನೀನು ಆಡಬಾರದು, ನಿನಗೆ ಚರ್ಚ್ ಆವರಣ ಇಲ್ಲವೇ?’ ಗದರಿದ ದೇವಸ್ಥಾನ ಆಡಳಿತ ಕಮಿಟಿಯ ಪ್ರತಿನಿಧಿಯೋರ್ವ ಹೇಳಿ ಆಟವಾಡುತ್ತಿದ್ದ ಅನ್ಯಕೋಮಿನ ಯುವಕನೋರ್ವನನ್ನು ಮೈದಾನದಿಂದ ಹೊರಗಟ್ಟಿದ ಘಟನೆ ಸುಳ್ಯದ ಜಯನಗರದಲ್ಲಿ ನಡೆದಿದ್ದು ಜಾಲತಾಣಗಳಲ್ಲಿ ವಿಡೀಯೋ ವೈರಲ್ ಆಗಿದೆ. ಹೊರಗಟ್ಟಿದವನನ್ನು ಜಯನಗರ ಕೊರಂಬಡ್ಕದ ಆದಿಮೊಗೇರ್ಕಳ ದೈವಸ್ಥಾನದ ಪದಾಧಿಕಾರಿ ಪ್ರವೀಣ್ ಕುಮಾರ್ ಜಯನಗರ ಎಂದು ತಿಳಿದುಬಂದಿದೆ. ದೈವಸಾನಿಧ್ಯದಲ್ಲಿ ಸುಮಾರು ಎರಡು ವರ್ಷದಿಂದ ಸ್ಥಳೀಯ

ಸುಳ್ಯ: ದೈವಸಾನಿಧ್ಯದ ಮೈದಾನದಲ್ಲಿ ಆಡುತ್ತಿದ್ದ ಅನ್ಯಧರ್ಮೀಯನ ಹೊರಗಟ್ಟಿದ ಕಮಿಟಿ ಪ್ರತಿನಿಧಿ | ಸಾಮರಸ್ಯದ ನಡುವೆ ಕೋಮು ಬೀಜ ಬಿತ್ತುವ ಕೆಲಸವೇಕೆ ಮಹಾಸ್ವಾಮಿ…? Read More »

ಕೋವಿಡ್ ಮೂರನೇ ಅಲೆ ಭೀತಿ | ಕೇಂದ್ರದಿಂದ ಎಚ್ಚರಿಕೆ | ದ ಕ ಸೇರಿದಂತೆ ರಾಜ್ಯದ 10 ಜಿಲ್ಲೆಗಳು ರೆಡ್’ಜೋನ್’ಗೆ

ಬೆಂಗಳೂರು: ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿದ್ದು ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 10 ಜಿಲ್ಲೆಗಳನ್ನು ರೇಡ್’ಝೋನ್ ನಲ್ಲಿರಿಸಿ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ದೇಶದಲ್ಲಿ ಕೋವಿಡ್ ಎರಡನೆಯ ಅಲೆ ಕೊಂಚ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಮೂರನೆ ಅಲೆಯ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವ ಸಲುವಾಗಿ ದೇಶದ ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಕೆಲವು ಜೋನ್ ಗಳಾಗಿ ವಿಂಗಡಿಸಿದೆ. ಇದರಲ್ಲಿ ಎರಡನೆಯ ಅಲೆಯಲ್ಲಿ ತೀವ್ರವಾಗಿ ತತ್ತರಿಸಿರುವ ಜಿಲ್ಲೆಗಳನ್ನು ರೆಡ್’ಜೋನ್’ನಲ್ಲಿ ಗುರುತಿಸಲಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ

ಕೋವಿಡ್ ಮೂರನೇ ಅಲೆ ಭೀತಿ | ಕೇಂದ್ರದಿಂದ ಎಚ್ಚರಿಕೆ | ದ ಕ ಸೇರಿದಂತೆ ರಾಜ್ಯದ 10 ಜಿಲ್ಲೆಗಳು ರೆಡ್’ಜೋನ್’ಗೆ Read More »

ಬಂಟ್ವಾಳ: ಯುವಕನನ್ನು ಉಸಿರುಗಟ್ಟಿಸಿ ಕೊಲೆಗೈದ ಗ್ಯಾಸ್ ಗೀಸರ್..!!!

ಬಂಟ್ವಾಳ: ಯುವಕನನ್ನು ಉಸಿರು ಗಟ್ಟಿಸಿ ಕೊಲೆಗೈದ ಗ್ಯಾಸ್ ಗೀಸರ್..!!!ಬಂಟ್ವಾಳ: ಸ್ನಾನ ಮಾಡುತ್ತಿದ್ದ ವೇಳೆ ಗ್ಯಾಸ್ ಗೀಸರ್‌ನಿಂದ ಬಿಡುಗಡೆಯಾದ ವಿಷ ಅನಿಲ ಯುವಕನ ಪ್ರಾಣಕ್ಕೆ ಕುತ್ತು ತಂದ ಘಟನೆ ಫರಂಗಿಪೇಟೆಯ ಮಾರಿಪಳ್ಳ ಎಂಬಲ್ಲಿ ಜು.12 ರ ಸೋಮವಾರ ಸಂಜೆ ನಡೆದಿದೆ.ಮೃತ ಯುವಕನನ್ನು ಇಸ್ಮಾಯಿಲ್ ಅವರ ಪುತ್ರ ಇಜಾಝ್ ಅಹ್ಮದ್ (23) ಎಂದು ಗುರುತಿಸಲಾಗಿದೆ. ಈತ ಹುಬ್ಬಳ್ಳಿಯ ಅಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ತಂದೆಯ ಅನಾರೋಗ್ಯದ ಹಿನ್ನಲೆಯಲ್ಲಿ ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದು ಸೋಮವಾರ ಸಂಜೆ ಗ್ಯಾಸ್ ಗೀಸರ್ ಬಳಸಿ

ಬಂಟ್ವಾಳ: ಯುವಕನನ್ನು ಉಸಿರುಗಟ್ಟಿಸಿ ಕೊಲೆಗೈದ ಗ್ಯಾಸ್ ಗೀಸರ್..!!! Read More »

ಅಗ್ನಿಕುಂಡದಲ್ಲಿ ಶವ ಹೋಮ ಪ್ರಕರಣ: ರಾಜೇಶ್ವರಿ ಗ್ಯಾಂಗ್’ನಿಂದ ಹೈಕೋರ್ಟ್’ಗೆ ಮೇಲ್ಮನವಿ

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಮಾಡಿ ಹೋಮಕುಂಡದಲ್ಲಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವ ದಿ.ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಪುತ್ರ ನವನೀತ್ ಶೆಟ್ಟಿ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ಕೋರಿ ಹೈ ಕೋರ್ಟ್ ನಲ್ಲಿ ಮೇಲ್ಮನವಿ ಮತ್ತು ಜಾಮೀನು ಅರ್ಜಿ ಸಲ್ಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಐದು ವರ್ಷಗಳ ಹಿಂದೆ ಉಡುಪಿಯ ಇಂದ್ರಾಳಿಯ ಎನ್‌ಆರ್‌ಐ ಉದ್ಯಮಿ ಭಾಸ್ಕರ್ ಶೆಟ್ಟಿ (52)ಯನ್ನು ಅಗ್ನಿಕುಂಡದಲ್ಲಿ ಸುಟ್ಟು ಭಸ್ಮ ಮಾಡಿದ ಅಮಾನುಷ

ಅಗ್ನಿಕುಂಡದಲ್ಲಿ ಶವ ಹೋಮ ಪ್ರಕರಣ: ರಾಜೇಶ್ವರಿ ಗ್ಯಾಂಗ್’ನಿಂದ ಹೈಕೋರ್ಟ್’ಗೆ ಮೇಲ್ಮನವಿ Read More »

ಬ್ರಹ್ಮಾವರ: ಫ್ಲಾಟ್’ನಲ್ಲಿ ವಿದೇಶದಿಂದ ಬಂದ ಮಹಿಳೆಯ ಉಸಿರುಗಟ್ಟಿಸಿ ಕೊಲೆ

ಉಡುಪಿ: ಜಿಲ್ಲೆಯ ಬ್ರಹ್ಮಾವರದ ಫ್ಲಾಟ್ ಒಂದರಲ್ಲಿ ಕೆಲ ದಿನಗಳ ಹಿಂದೆ ವಿದೇಶದಿಂದ ವಾಪಾಸಾಗಿದ್ದ ಮಹಿಳೆಯನ್ನು ಕತ್ತುಹಿಸುಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಂಗೊಳ್ಳಿ ಮೂಲದ ವಿಶಾಲ (35 ವ.) ಕೊಲೆಯಾದ ಮಹಿಳೆ. ಕೆಲವು ದಿನಗಳ ಹಿಂದೆಯಷ್ಟೇ ವಿದೇಶದಿಂದ ಆಗಮಿಸಿದ್ದ ವಿಶಾಲ, ನಗರದಲ್ಲಿ ಕೆಲವು ಅಗತ್ಯ ಕೆಲಸಗಳಿರುವ ಕಾರಣ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದರು. ಕೊಲೆಯಾದ ದಿನ ಸಂಜೆ ವೇಳೆಗೆ ಮನೆಗೆ ಬರುವುದಾಗಿ ಹೇಳಿದ್ದರು. ಆದರೆ, ವಿಶಾಲ ಸಂಜೆಯಾದರೂ ಮನೆಗೆ ಬಾರದ ಕಾರಣ ಅವರ ತಂದೆ ಹುಡುಕಿಕೊಂಡು ನಗರಕ್ಕೆ ಬಂದಾಗ

ಬ್ರಹ್ಮಾವರ: ಫ್ಲಾಟ್’ನಲ್ಲಿ ವಿದೇಶದಿಂದ ಬಂದ ಮಹಿಳೆಯ ಉಸಿರುಗಟ್ಟಿಸಿ ಕೊಲೆ Read More »