ಕರಾವಳಿ

ಪುತ್ತೂರು: ವಿಸ್ಟಾಡೋಂ ರೈಲಿನ ಮೇಲೆ ಕುಸಿದ ಧರೆ, ಗಾರ್ಡ್ ಗೆ ಹಾನಿ

ಪುತ್ತೂರು ಜುಲೈ 18: ಚಲಿಸುತ್ತಿದ್ದ ರೈಲಿನ ಮೇಲೆ ಧರೆ ಕುಸಿದು ರೈಲಿನ ಎದುರಿನ ಗಾರ್ಡ್ ಗೆ ಹಾನಿಯಾಗಿರುವ ಘಟನೆ ಪುತ್ತೂರು ಕಬಕ -ಸುಬ್ರಹ್ಮಣ್ಯ ರೈಲ್ವೇ ಹಳಿಯ ನಡುವೆ ವೀರಮಂಗಲ ಗಡಿಪಿಲ ಸಮೀಪದಲ್ಲಿ ನಡೆದಿದೆ. ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಂಗಳೂರು-ಬೆಂಗಳೂರು ರೈಲು ಈ ಹಳಿಯಲ್ಲಿ ಹಾದು ಹೋಗುತ್ತಿದ್ದಾಗ ಏಕಾ ಏಕಿ ಧರೆ ಕುಸಿದಿದ್ದು,ಮಣ್ಣು ರೈಲು ಎಂಜಿನ್ ನ ಮುಂಭಾಗಕ್ಕೆ ಕುಸಿದಿದ್ದು,ರೈಲಿನ ಗಾರ್ಡ್ ಗೆ ಹಾನಿಯಾಗಿದೆ. ರೈಲು ಈಗ ಹಳಿಯಲ್ಲಿ ಬಾಕಿಯಾಗಿದ್ದು,ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು,ಮಣ್ಣು ತೆರವು ಕಾರ್ಯಾಚರಣೆ […]

ಪುತ್ತೂರು: ವಿಸ್ಟಾಡೋಂ ರೈಲಿನ ಮೇಲೆ ಕುಸಿದ ಧರೆ, ಗಾರ್ಡ್ ಗೆ ಹಾನಿ Read More »

ಪುತ್ತೂರು: ಎಸ್ಸೆಸೆಲ್ಸಿ ಪರೀಕ್ಷೆಗೆ ಸಕಲ ಸಿದ್ದತೆ

ಪುತ್ತೂರು: ಕುತೂಹಲ ಕೆರಳಿಸಿದ್ದ SSLC ಪರೀಕ್ಷೆ ಸೋಮವಾರದಿಂದ ರಾಜ್ಯಾದ್ಯಂತ ನಡೆಯುತ್ತಿದೆ. ಕೊರೋನ ರಣಕೇಕೆಯ ಕಾರಣ ಪರೀಕ್ಷೆ ನಡೆಸಲು ಸರಕಾರ ಒಪ್ಪಿಗೆ ಸೂಚಿಸಿರಲಿಲ್ಲ. ವರ್ಷಂಪ್ರತಿ ಏಪ್ರೀಲ್ ಅಥವಾ ಮಾರ್ಚ್ ತಿಂಗಳಿನಲ್ಲಿ ರಾಜ್ಯದ್ಯಾಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ ಈ ಸಲ ಜುಲೈನಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದ್ದು ಇದಕ್ಕೆ ನ್ಯಾಯಾಲವು ಒಪ್ಪಿಗೆ ಸೂಚಿಸಿದೆ. ಅದರಂತೆ ಪುತ್ತೂರು ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇಲ್ಲಿ ಇಲಾಖೆಯ ಆದೇಶದಂತೆ ಎಲ್ಲಾ ಮುಂಜಾಗ್ರತಾ ಸಿದ್ದತೆಗಳನ್ನು ಮಾಡಲಾಗಿದೆ.

ಪುತ್ತೂರು: ಎಸ್ಸೆಸೆಲ್ಸಿ ಪರೀಕ್ಷೆಗೆ ಸಕಲ ಸಿದ್ದತೆ Read More »

ಕಂಬಳದ ಉಸೇನ್ ಬೋಲ್ಟ್ ಗೆ ಪ್ರಾಣ ಬೆದರಿಕೆ, ‘ಬೆನ್ನಿಗೆ ಹಾಳೆ ಕಟ್ಟಿಕೊಂಡು‌ ಬಾ’ ಎಂದವರಾರು?

ಮಂಗಳೂರು: ಕಂಬಳದ ಗದ್ದೆಯಲ್ಲಿ ಅತಿವೇಗವಾಗಿ ಓಡಿ ಕಂಬಳದ ಉಸೇನ್ ಬೋಲ್ಟ್ ಎಂದೇ ಪ್ರಸಿದ್ಧ ಪಡೆದ, ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರಿಗೆ ವ್ಯಕ್ತಿಯೊಬ್ಬರು ಮೊಬೈಲ್‌ ಫೋನ್ ಕರೆ ಮಾಡಿ, ಬೆದರಿಕೆ ಹಾಕಿ ನಿಂದಿಸಿದ್ದು, ಇದರ ಧ್ವನಿಮುದ್ರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆದರಿಕೆ ಒಡ್ಡಿದ ವ್ಯಕ್ತಿ ಕರೆ ಮಾಡಿ, ‘ನಾನು ಪ್ರಶಾಂತ್ ಬಂಗೇರ, ಶ್ರೀರಾಮ ಸೇನೆಯಲ್ಲಿದ್ದೇನೆ ಎಂದು ಪರಿಚಯಿಸಿಕೊಂಡು ಮಂಗಳೂರು ಕಾರ್ ಸ್ಟ್ರೀಟ್‌ನಲ್ಲಿ ರಿಯಲ್ ಎಸ್ಟೇಟ್ ಕಚೇರಿ ಇದೆ ಅಲ್ಲಿಗೆ ಬನ್ನಿ ಕಂಬಳದ ಇತಿಹಾಸ

ಕಂಬಳದ ಉಸೇನ್ ಬೋಲ್ಟ್ ಗೆ ಪ್ರಾಣ ಬೆದರಿಕೆ, ‘ಬೆನ್ನಿಗೆ ಹಾಳೆ ಕಟ್ಟಿಕೊಂಡು‌ ಬಾ’ ಎಂದವರಾರು? Read More »

ನೆಲ್ಯಾಡಿ: ಅಪರಿಚಿತ ವಾಹನ ಡಿಕ್ಕಿ | ಬೈಕ್ ಸವಾರ ಸಾವು ಸಹಸವಾರ ಗಂಭೀರ

ಬೆಳ್ತಂಗಡಿ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಓರ್ವ ಬೈಕ್ ಸವಾರ ಮೃತಪಟ್ಟು ಸಹಸವಾರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ, ತಾಲೂಕಿನ ನೆಲ್ಯಾಡಿಯಲ್ಲಿ ನಡೆದಿದೆ. ಗುಂಡ್ಯದಿಂದ ನೆಲ್ಯಾಡಿ ಕಡೆ ತೆರಳುತ್ತಿದ್ದ ಬೈಕ್ ಗೆ ನೆಲ್ಯಾಡಿ ಕಡೆಯಿಂದ ಬಂದ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಗಂಭೀರ ಗಾಯಗೊಂಡ ಸಹಸವಾರನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ವ್ಯಕ್ತಿಯ ಗುರುತು ಇನ್ನಷ್ಟೇ ಪತ್ತೇಯಾಗಬೇಕಿದೆ. ಗಾಯಗೊಂಡವರನ್ನು ಸಕಲೇಶಪುರದ ಮೋಹನ್ ಎಂದು ಗುರುತಿಸಲಾಗಿದೆ. ಡಿಕ್ಕಿ ಹೊಡೆದ ವಾಹನ ಪರಾರಿಯಾಗಿದ್ದು,

ನೆಲ್ಯಾಡಿ: ಅಪರಿಚಿತ ವಾಹನ ಡಿಕ್ಕಿ | ಬೈಕ್ ಸವಾರ ಸಾವು ಸಹಸವಾರ ಗಂಭೀರ Read More »

ಬೆಳ್ತಂಗಡಿ: ಪತಿ-ಪತ್ನಿಯನ್ನು ಒಂದೇ ದಿನ ಬಲಿ ತೆಗೆದುಕೊಂಡ ಕೊರೊನಾ

ಬೆಳ್ತಂಗಡಿ: ಗಂಡ ಹೆಂಡತಿ ಇಬ್ಬರೂ ಒಂದೇ ದಿನ ಕೊರೊನಾ ಹೆಮ್ಮಾರಿಗೆ ತುತ್ತಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ. ಗ್ರಾಮದ ದಂಪತಿ ನಿನ್ನೆ ಒಂದೇ ದಿನ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುನ್ನತ್ ನಾಥ್ ನಿವಾಸಿ ವಗೀ೯ಸ್ (74ವ) ಹಾಗೂ ಅವರ ಪತ್ನಿ ಮೇರಿ ವಗೀ೯ಸ್ (73ವ) ಮೃತ ಪಟ್ಟ ದುದೈ೯ವಿಗಳು. ಮೃತ ದಂಪತಿಗೆ ಕಳೆದ ತಿಂಗಳು ಜ್ವರ ಕಾಣಿಸಿಕೊಂಡಿತ್ತು. ಅವರು ಔಷದಿ ತೆಗೆದುಕೊಂಡು ಗುಣಮುಖರಾಗಿದ್ದರು. ಬಳಿಕ ಮನೆಯಲ್ಲಿದ್ದ ದಂಪತಿಗೆ ಕೆಲ ದಿನಗಳ ಹಿಂದೆ ತೀವ್ರ ಜ್ವರ ಕಾಣಿಸಿಕೊಂಡಿದೆ.

ಬೆಳ್ತಂಗಡಿ: ಪತಿ-ಪತ್ನಿಯನ್ನು ಒಂದೇ ದಿನ ಬಲಿ ತೆಗೆದುಕೊಂಡ ಕೊರೊನಾ Read More »

ಪುತ್ತೂರು: ಮಾಜಿ ಪ್ರಿಯಕರ ಕಳಿಸಿದ ಬೆಡ್ ರೂಂ ವಿಡಿಯೋದಿಂದ ಒಡೆದ ಸಂಸಾರ | ಅಂದು ಸುಖ ಪಡೆದವಳಿಂದ ಈಗ ಅತ್ಯಾಚಾರದ ದೂರು…!

ಪುತ್ತೂರು: ಮಾಜಿ ಪ್ರಿಯಕರನೋರ್ವ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ ಹಳೆಯ ವೀಡಿಯೊವೊಂದನ್ನು ಆಕೆಯ ಪತಿಯ ಮೊಬೈಲ್ ಫೋನ್ ಗೆ ರವಾನಿಸಿದ್ದಾನೆ. ವೀಡಿಯೋ ನೋಡಿದ ಪತಿ ವಿಚ್ಛೇದನಕ್ಕೆ ಮುಂದಾದಾಗ ಯುವತಿ ಅದು ಅತ್ಯಾಚಾರವೆಂದು ಯೂ ಟರ್ನ ಹೊಡೆದ ಪ್ರಕರಣಯೊಂದು ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ವಿಜೇಶ್ ಹಾಗೂ ಸುಬ್ರಹ್ಮಣ್ಯದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ ಉತ್ಕಟಕ್ಕೆ ಏರಿದ್ದು ಪರಿಣಾಮ ದೈಹಿಕ ಸಂಪರ್ಕ ನಡೆಸಿದ್ದಾರೆ. ಹಾಗಾಗಿ 2016ರ ನವೆಂಬರ್‌ನಲ್ಲಿ ಆಕೆ ಪುತ್ತೂರಿನ ದರ್ಬೆಯಲ್ಲಿ ಕೆಲಸ ಮಾಡುತ್ತಿದ್ದು, ಒಂದು ದಿನ ಚಹಾ

ಪುತ್ತೂರು: ಮಾಜಿ ಪ್ರಿಯಕರ ಕಳಿಸಿದ ಬೆಡ್ ರೂಂ ವಿಡಿಯೋದಿಂದ ಒಡೆದ ಸಂಸಾರ | ಅಂದು ಸುಖ ಪಡೆದವಳಿಂದ ಈಗ ಅತ್ಯಾಚಾರದ ದೂರು…! Read More »

ಮಂಗಳೂರು: ಮಹಿಳೆಗೆ ಹಲ್ಲೆ ಮಾಡಿ ಹಣ ಎಗರಿಸಿದ ಪ್ರಕರಣ | ಪೊಲೀಸರಿಂದ ಸಿಸಿಟಿವಿ ದೃಶ್ಯ ಬಿಡುಗಡೆ

ಮಂಗಳೂರು: ನಗರದ ಯೂನಿಸೆಕ್ಸ್ ಸಲೂನ್ ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ ಹಣ ಹೊತ್ತೊಯ್ದ ಪ್ರಕರಣಕ್ಕೆ ಸಂಭಂದಿಸಿದ ಸಿಸಿಟಿವಿ ದೃಶ್ಯವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಜುಲೈ 1 ರಂದು ಸಂಜೆ ಸಲೂನ್ ಗೆ ನುಗ್ಗಿದ ಆರೋಪಿ ಅಬ್ದುಲ್ ದಾವೂದ್ ಎಂಬಾತ ಮಹಿಳೆಗೆ ಹಲ್ಲೆ ನಡೆಸಿ, 14,000 ರೂ. ದರೋಡೆ ಮಾಡಿದ್ದ. ಈ ಸಂಬಂಧ ಮಹಿಳೆ ನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.ಇದೀಗ

ಮಂಗಳೂರು: ಮಹಿಳೆಗೆ ಹಲ್ಲೆ ಮಾಡಿ ಹಣ ಎಗರಿಸಿದ ಪ್ರಕರಣ | ಪೊಲೀಸರಿಂದ ಸಿಸಿಟಿವಿ ದೃಶ್ಯ ಬಿಡುಗಡೆ Read More »

ಕುಂದಾಪುರ: ಗಾಳಿ-ಮಳೆ |ಮನೆ ಮೇಲೆ ಮರ ಬಿದ್ದು ದಂಪತಿಗೆ ಗಾಯ

ಉಡುಪಿ: ಭಾರಿ ಗಾಳಿ ಮಳೆಯಿಂದ ಮನೆ ಮೇಲೆ ಮರ ಬಿದ್ದು ಮನೆಯೊಳಗಿದ್ದ ದಂಪತಿಗೆ ಗಂಭೀರ ಗಾಯವಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾದ ಘಟನೆ ಕುಂದಾಪುರದಲ್ಲಿ ನಡೆದಿದೆ. ಬಸ್ರೂರು ಮಕ್ಕಿಮನೆ ಗಣಪಯ್ಯ ಗಾಣಿಗರಿಗೆ ಸೇರಿದ ಮನೆ ಇದಾಗಿದ್ದು, ಗಣಪಯ್ಯ ಗಾಣಿಗ ಮತ್ತು ಪತ್ನಿ ವಾರಿಜ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು ಮನೆಯ ಪಕ್ಕದಲ್ಲಿದ್ದ ತೆಂಗಿನ ಮರ ಮತ್ತು ಬೃಹತ್ ಗಾತ್ರದ ಧೂಪದ ಮರ ಬಿದ್ದು ಮನೆ ಹಾನಿಯಾಗಿದೆ. ಮನೆಯಲ್ಲಿ ಇದ್ದ ಮಕ್ಕಳಿಗೆ

ಕುಂದಾಪುರ: ಗಾಳಿ-ಮಳೆ |ಮನೆ ಮೇಲೆ ಮರ ಬಿದ್ದು ದಂಪತಿಗೆ ಗಾಯ Read More »

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ | ಅಂದಾಜು ಮುಕ್ಕಾಲು ಕೆಜಿ ಚಿನ್ನ ವಶ

ಮಂಗಳೂರು: ಇಂದು ವಿದೇಶದಿಂದ ಅಕ್ರಮವಾಗಿ ಚಿನ್ನ ತರುತ್ತಿದ್ದ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 703 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದರು. ಕೇರಳ ಮೂಲದ ಮೊಹ್ಮದ್ ಅನ್ಸಾರ್ ಹಾಗೂ ಮೊಹಮ್ಮದ್ ಮೂಸಾ ಮಿಯಾಸ್ ಬಂಧಿತರು. ಅವರಿಬ್ಬರು ಜೊತೆಗಿದ್ದ ಸೂಟ್‌ಕೇಸ್‌ನ ತಳಭಾಗದಲ್ಲಿ ಚಿನ್ನವನ್ನು ಅಡಗಿಸಿ ಇಟ್ಟು ಸಾಗಿಸುತ್ತಿದ್ದರು. ದುಬೈನಿಂದ ತರಲಾಗುತ್ತಿದ್ದ ಒಟ್ಟು ₹ 34,46,464 ಮೌಲ್ಯದ 703 ಗ್ರಾಂ‌ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ | ಅಂದಾಜು ಮುಕ್ಕಾಲು ಕೆಜಿ ಚಿನ್ನ ವಶ Read More »

ಸುಳ್ಯ: ಬೇರೊಬ್ಬರ ಖಾತೆಗೆ ಜಮೆಯಾಯ್ತು ವಸತಿ ಯೋಜನೆಯ ಒಂದು ಕಂತು | ಇನ್ನೊಂದು ಕಂತು ಮಾಯ | ಕೊಡಿಯಾಲ ಗ್ರಾ.ಪಂ., ಇಲಾಖೆ ಎಡವಟ್ಟಿಗೆ ಬಡ ಮಹಿಳೆಯ ಪರದಾಟ

ಸುಳ್ಯ: ವಸತಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರ ಕಂತಿನ ಹಣ ಅಧಿಕಾರಿಗಳ ಎಡವಟ್ಟಿನಿಂದ ಬೇರೊಬ್ಬರ ಖಾತೆಗೆ ಜಮೆಯಾಗಿದೆ. ಇದರಿಂದ ಬಡ ಮಹಿಳೆ ಮನೆ ಪೂರ್ಣಗೊಳ್ಳದೆ ಪರದಾಡುವಂತಾಗಿದೆ. ಈ ಬಗ್ಗೆ ವಿಚಾರಿಸಿದರೆ ಪಂಚಾಯತ್ ಮತ್ತು ಇಲಾಖೆ ಅಧಿಕಾರಿಗಳು ಇದು ನಮ್ಮ ತಪ್ಪಲ್ಲ ಎಂದು ಪರಸ್ಪರ ದೂರಿಕೊಂಡು ಸುಮ್ಮನಾಗುತ್ತಿದ್ದಾರೆ. ಇತ್ತ ಫಲಾನುಭವಿ ಮಹಿಳೆಗೆ ದಿಕ್ಕುತೋಚದಂತಾಗಿದೆ. 2015-16 ನೇ ಸಾಲಿನ ಡಾ. ಬಿ ಆರ್ ಅಂಬೇಡ್ಕರ್ ಗ್ರಾಮೀಣ ವಸತಿ ಯೋಜನೆಯಡಿಯಲ್ಲಿ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಪನೆಯ ಪರಿಶಿಷ್ಟ ಜಾತಿಯ ಶ್ರೀಮತಿ ರಾಜೀವಿ

ಸುಳ್ಯ: ಬೇರೊಬ್ಬರ ಖಾತೆಗೆ ಜಮೆಯಾಯ್ತು ವಸತಿ ಯೋಜನೆಯ ಒಂದು ಕಂತು | ಇನ್ನೊಂದು ಕಂತು ಮಾಯ | ಕೊಡಿಯಾಲ ಗ್ರಾ.ಪಂ., ಇಲಾಖೆ ಎಡವಟ್ಟಿಗೆ ಬಡ ಮಹಿಳೆಯ ಪರದಾಟ Read More »