ಕರಾವಳಿ

ರಾಜ್ಯ ಕರಾವಳಿಯಲ್ಲಿ ಸ್ಲೀಪರ್‌ಸೆಲ್ ಗಳು ಚುರುಕು| ಗುಪ್ತಚರ ಇಲಾಖೆಯಿಂದ ಹೈ ಅಲರ್ಟ್.

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಕೇಂದ್ರ ಗುಪ್ತಚರ ಎಜೆನ್ಸಿಗಳು ಹೈ ಅಲರ್ಟ್ ಆಗಿವೆ. ರಾಜ್ಯ ಕರಾವಳಿಯಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆದಿರುವ ಬಗ್ಗೆ ಮಾಹಿತಿ ಕಲೆಹಾಕಿರುವ ಕೇಂದ್ರ ಬೇಹುಗಾರಿಕಾ ಸಂಸ್ಥೆಗಳು, ರಾಜ್ಯದಲ್ಲಿ ಸೈಲೆಂಟ್ ಆಗಿದ್ದ ಸ್ಯಾಟಲೈಟ್ ಫೋನ್​ಗಳು ಮತ್ತೆ ಆಯಕ್ಟಿವ್ ಆಗಿರುವ ಬಗ್ಗೆ ಚುರುಕುಗೊಂಡಿದ್ದು ತನಿಖೆ ನಡೆಸುತ್ತಿವೆ. ಬೇಹುಗಾರಿಕಾ ಅಧಿಕಾರಿಗಳು ರಾಜ್ಯದ 4 ಕಡೆ ಸ್ಯಾಟಲೈಟ್ ಫೋನ್ ಇಂಟರ್ ಸೆಪ್ಟ್ ಮಾಡಿದ್ದವು. ನಿಗೂಢ ವ್ಯಕ್ತಿಗಳು ಕರಾವಳಿ ಹಾಗು ಮಲೆನಾಡು ಭಾಗದ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸುತ್ತಿರುವ […]

ರಾಜ್ಯ ಕರಾವಳಿಯಲ್ಲಿ ಸ್ಲೀಪರ್‌ಸೆಲ್ ಗಳು ಚುರುಕು| ಗುಪ್ತಚರ ಇಲಾಖೆಯಿಂದ ಹೈ ಅಲರ್ಟ್. Read More »

ಮಂಗಳೂರು: ಸೆ.20ರಿಂದ 6 ಹಾಗೂ 7ನೇ ತರಗತಿ ಆರಂಭ

ಮಂಗಳೂರು : ದ.ಕ ಜಿಲ್ಲೆ ಸೆ.20ರಿಂದ 6 ಹಾಗೂ 7ನೇ ತರಗತಿ ಆರಂಭವಾಗಲಿದೆ. ಸೆ.17ರಿಂದ 8, 9 ಹಾಗೂ 10ನೇ ಭೌತಿಕ ತರಗತಿಗ ಆರಂಭವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 586 ಶಾಲೆಗಳಲ್ಲಿ ತರಗತಿ ಆರಂಭವಾಗಿದೆ. 9 ಹಾಗೂ 10ನೇ ತರಗತಿ ಬೆಳಗ್ಗೆ 9ರಿಂದ ಅಪರಾಹ್ನ 1.30ರವರೆಗೆ ಹಾಗೂ 8ನೇ ತರಗತಿ ಅಪರಾಹ್ನ 2ರಿಂದ ಸಂಜೆ 4.30ರವರೆಗೆ ನಡೆಯುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ದ.ಕ ಡಿಡಿಪಿಐ ಮಲ್ಲೇಸ್ವಾಮಿ, ಪ್ರೌಢಶಾಲೆ ಆರಂಭವಾಗುವು ಹಿನ್ನೆಲೆ ಶಾಲಾ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು

ಮಂಗಳೂರು: ಸೆ.20ರಿಂದ 6 ಹಾಗೂ 7ನೇ ತರಗತಿ ಆರಂಭ Read More »

ನಾಲ್ಕು ತಿಂಗಳಿನಿಂದ ಸಂಬಳ ನೀಡದೇ ದ್ವೇಷ ಸಾಧಿಸುತ್ತಿರುವ ಹಿರಿಯ ಅಧಿಕಾರಿಗಳು ….!!

ಪುತ್ತೂರು: ಅರಣ್ಯಾಧಿಕಾರಿ ಕಳೆದ 4 ತಿಂಗಳಿನಿಂದ ಸಂಬಳ ಇಲ್ಲದೆ ಕೆಲಸ ಮಾಡುತ್ತಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಹಿರಿಯ ಅಧಿಕಾರಿಗಳ ವೈಯುಕ್ತಿಕ ದ್ವೇಷದಿಂದಾಗಿ ಸಂಬಳ ಸಿಗುತ್ತಿಲ್ಲ ಎಂದು ಅರಣ್ಯಾಧಿಕಾರಿ ಆರೋಪಿಸಿದ್ದಾರೆ. ಪುತ್ತೂರು ಉಪ ವಲಯ ಸಂರಕ್ಷಣಾಧಿಕಾರಿ ಸಂಜೀವ ಪೂಜಾರಿ ಸಂಬಳವಿಲ್ಲದೆ ದುಡಿಯುತ್ತಿರುವ ಅಧಿಕಾರಿಯಾಗಿದ್ದು, ಈ ಹಿಂದೆ ಇವರನ್ನು ಸಕಾರಣವಿಲ್ಲದೆ ಹಿರಿಯ ಅಧಿಕಾರಿಗಳು ಸಸ್ಪೆಂಡ್ ಮಾಡಿದ್ದರು ಎಂದು ಆರೋಪಿಸಲಾಗಿದ್ದು, ಹಿರಿಯ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಸಂಜೀವ ಪೂಜಾರಿಯವರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧೀಕರಣದ ಮೊರೆ ಹೋಗಿದ್ದರು. ಅಲ್ಲಿ ಉಪ ವಲಯಾಧಿಕಾಧಿಕಾರಿ

ನಾಲ್ಕು ತಿಂಗಳಿನಿಂದ ಸಂಬಳ ನೀಡದೇ ದ್ವೇಷ ಸಾಧಿಸುತ್ತಿರುವ ಹಿರಿಯ ಅಧಿಕಾರಿಗಳು ….!! Read More »

ಮೀನು ಪ್ರೀಯರೇ ಮಂಗಳೂರಿಗೆ ಹೊರಡಿ| ಅಗ್ಗವಾಗಿದೆ ಮೀನು ರೇಟ್, ಗ್ರಾಹಕ ಫುಲ್ ಖುಷ್|

ಮಂಗಳೂರು: ಕರಾವಳಿಗೆ ಹೋಗಿ ಸಖತ್ತಾಗಿ ಮೀನೂಟ ಮಾಡಬೇಕು ಅಂತಾ ನೀವೇನಾದರೂ ಪ್ಲ್ಯಾನ್ ಮಾಡಿದ್ರೆ ಇದುವೇ ರೈಟ್ ಟೈಮ್. ಮೀನೂಟ ಪ್ರಿಯರಿಗೆ ಸಂತಸದ ಸುದ್ದಿ ಮಂಗಳೂರಿನಲ್ಲಿ ಕಾಯುತ್ತಿದೆ.ಇಷ್ಟು ದಿನ ಗಗನೆಕ್ಕೆರಿದ ತಾಜಾ ಮೀನಿನ ದರದಲ್ಲಿ ಸದ್ಯ ಭಾರೀ ಇಳಿಕೆಯಾಗಿದೆ.ತಾಜಾ ಮೀನುಗಳು ಅಗ್ಗದ ದರದಲ್ಲಿ ಮಂಗಳೂರಿನಲ್ಲಿ ದೊರಕುತ್ತಿದೆ. ಮೀನು ಪ್ರಿಯರ ಜೊತೆಗೆ, ಮೀನು ಮಾರಾಟಗಾರರು, ಮೀನು ಖರೀದಿದಾರರು ಫುಲ್ ಖುಷ್ ಆಗಿದ್ದಾರೆ. ಮೀನು ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣವಿದೆ. ‘ಅಂಜಲ್, ಮಾಂಜಿ, ಮದಿಮಾಲ್, ಡಿಸ್ಕೋ, ಬಂಗುಡೆ. ಭಲೇ ಅಣ್ಣ, ಭಲೇ ಅಕ್ಕ.

ಮೀನು ಪ್ರೀಯರೇ ಮಂಗಳೂರಿಗೆ ಹೊರಡಿ| ಅಗ್ಗವಾಗಿದೆ ಮೀನು ರೇಟ್, ಗ್ರಾಹಕ ಫುಲ್ ಖುಷ್| Read More »

ಉಪ್ಪಿನಂಗಡಿ: ಮನೆಗೆ ನುಗ್ಗಿ ನಗ-ನಗದು ದೋಚಿದ ಕಳ್ಳರು

ಉಪ್ಪಿನಂಗಡಿ: ಸರಳಿಕಟ್ಟೆ ಮನೆಯೊಂದಕ್ಕೆ ಕಳ್ಳರು ನುಗ್ಗಿದ್ದು ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ಮತ್ತು ಹತ್ತು ಪವನ್ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ. ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದ್ದು ಉಪ್ಪಿನಂಗಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಉಪ್ಪಿನಂಗಡಿ ಸಮೀಪದ ಬಾರ್ಯ ಗ್ರಾಮದ ಸರಳಿಕಟ್ಟೆ ಬೇನಪ್ಪು ನಿವಾಸಿ ಅಬೂಬಕ್ಕರ್ ಮದನಿ ರವರ ಮನೆಗೆ ಕಳ್ಳರು ನುಗ್ಗಿದ್ದು ಇಂದು ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನ .ಪಿ.ಕುಮಾರ್, ಪುತ್ತೂರು ಗ್ರಾಮಾಂತ ವೃತ್ತ ನಿರೀಕ್ಷಕ ಉಮೇಶ್

ಉಪ್ಪಿನಂಗಡಿ: ಮನೆಗೆ ನುಗ್ಗಿ ನಗ-ನಗದು ದೋಚಿದ ಕಳ್ಳರು Read More »

ಕರಾವಳಿ ‌ಜಿಲ್ಲೆಗಳಲ್ಲಿ ನಾಳೆ‌ ಮಹಾ ಲಸಿಕೆ‌ ಅಭಿಯಾನ

ಮಂಗಳೂರು: ಸರಕಾರದ ಸೂಚನೆಯಂತೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸೆ.17ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬೃಹತ್‌ ಲಸಿಕಾಕರಣ ಅಭಿಯಾನ ನಡೆಯಲಿದೆ. ದ.ಕ.ದಲ್ಲಿ 533 ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 300 ಕೇಂದ್ರಗಳಲ್ಲಿ ಲಸಿಕೆ ನೀಡಲು ಕ್ರಮಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಭಯ ಜಿಲ್ಲಾಧಿಕಾರಿಗಳಾದ ಡಾ| ರಾಜೇಂದ್ರ ಕೆ.ವಿ.ಮತ್ತು ಕೂರ್ಮಾ ರಾವ್‌ ಎಂ. ಅವರು ಹೇಳಿದರು. ಮೆಗಾ ಲಸಿಕೆ ಮೇಳದಲ್ಲಿ 1.5 ಲಕ್ಷ ಡೋಸ್‌ ಕೋವಿಡ್‌ ಲಸಿಕೆ ನೀಡುವ ಗುರಿಯನ್ನು ಹೊಂದಿದ್ದು,

ಕರಾವಳಿ ‌ಜಿಲ್ಲೆಗಳಲ್ಲಿ ನಾಳೆ‌ ಮಹಾ ಲಸಿಕೆ‌ ಅಭಿಯಾನ Read More »

ಅಬ್ಬಾ…! ನಿಫಾ ನೆಗೆಟಿವ್, ನಿಟ್ಟುಸಿರು ಬಿಟ್ಟ ಕರಾವಳಿ

ಮಂಗಳೂರು: ನಿಫಾ ಸೋಂಕಿನ ಭಯದಿಂದ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ವರದಿ ನೆಗೆಟಿವ್‌ ಬಂದಿದ್ದು ಈ ಹಿನ್ನಲೆಯಲ್ಲಿ ಕರಾವಳಿ ನಿಟ್ಟುಸಿರು ಬಿಟ್ಟಿದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಈ ಮಾಹಿತಿ ನೀಡಿದ್ದು ಮಂಗಳೂರು ಮತ್ತು ರಾಜ್ಯದ ಜನತೆ ಸದ್ಯಕ್ಕೆ ನಿಫಾ ಆತಂಕದಿಂದ ನಿರಾಳರಾಗಿದ್ದಾರೆ. ಕಾರವಾರ ಮೂಲದ ಈ ವ್ಯಕ್ತಿ ಗೋವಾದ ನಿಫಾ ಟೆಸ್ಟ್ ಕಿಟ್​​ ಲ್ಯಾಬ್​ನಲ್ಲಿ ಕೆಲಸ ಮಾಡ್ತಿದ್ದರು. ರಜೆ ಮೇಲೆ ಊರಿಗೆ ಬಂದಿದ್ದ ಇವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ನಿಫಾ ತಗುಲಿರಬಹುದು ಅಂತ ಆತಂಕಗೊಂಡು

ಅಬ್ಬಾ…! ನಿಫಾ ನೆಗೆಟಿವ್, ನಿಟ್ಟುಸಿರು ಬಿಟ್ಟ ಕರಾವಳಿ Read More »

ಪುತ್ತೂರು: ದೇವಸ್ಥಾನ ತೆರವು, ತಾಲಿಬಾನ್ ಪ್ರೇರಿತ ಅಧಿಕಾರಿಗಳ ಕೆಲಸ – ಶರಣ್ ಪಂಪ್ ವೆಲ್

ಪುತ್ತೂರು: ಮೈಸೂರಿನಲ್ಲಿ ದೇವಸ್ಥಾನ ಧ್ವಂಸಗೊಳಿಸಿರುವುದು ರಾಜ್ಯ ಸರಕಾರದಲ್ಲಿರುವ ಕೆಲವು ತಾಲಿಬಾನ್ ಪ್ರೇರಿತ ಅಧಿಕಾರಿಗಳ ಕೆಲಸ ಎಂದು ಪುತ್ತೂರಿನಲ್ಲಿ ಮಾತನಾಡಿದ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಆರೋಪಿಸಿದ್ದಾರೆ. ರಾಜ್ಯ ಸರಕಾರದಲ್ಲಿ ತಾಲೀಬಾನ್ ಪ್ರೇರಿತ ಅಧಿಕಾರಿಗಳಿಂದ ದೇವಸ್ಥಾನ ದ್ವಂಸಗೊಳಿಸುವ ಕೆಲಸ ನಡೆಯುತ್ತಿದೆ. ರಾಜ್ಯ ಸರಕಾರ ತಕ್ಷಣವೇ ಅಂತಹ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ ಮೈಸೂರಿನಲ್ಲಿ ತೆರವುಗೊಳಿಸಿದ ದೇವಸ್ಥಾನವನ್ನು ಮತ್ತೆ ಮರು ನಿರ್ಮಿಸಬೇಕು, ಇನ್ನು ತೆರವುಗೊಳಿಸಲು ಉದ್ಧೇಶಿಸಿರುವ ದೇವಸ್ಥಾನಗಳ ಪಟ್ಟಿಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.

ಪುತ್ತೂರು: ದೇವಸ್ಥಾನ ತೆರವು, ತಾಲಿಬಾನ್ ಪ್ರೇರಿತ ಅಧಿಕಾರಿಗಳ ಕೆಲಸ – ಶರಣ್ ಪಂಪ್ ವೆಲ್ Read More »

ದ.ಕ ಜಿಲ್ಲೆಯಲ್ಲೂ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಪಟ್ಟಿ ರೆಡಿ ಮಾಡಿದ ಜಿಲ್ಲಾಡಳಿತ| ಲಿಸ್ಟ್ ನಲ್ಲಿವೆ ಬರೋಬ್ಬರಿ 902 ಶ್ರದ್ಧಾ ಕೇಂದ್ರಗಳು

ಮಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವಿಗೆ ಆಡಳಿತ ಮುಂದಾಗಿದ್ದು, ಪ್ರತೀ ಜಿಲ್ಲೆಗಳಲ್ಲೂ ಜಿಲ್ಲಾಡಳಿತಗಳು ಪಟ್ಟಿ ರೆಡಿಮಾಡಿಕೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಜಿಲ್ಲಾಡಳಿತ ಪಟ್ಟಿ ತಯಾರಿಸಿದ್ದು ಪಟ್ಟಿಯಲ್ಲಿ 902 ಶ್ರದ್ಧಾ ಕೇಂದ್ರಗಳಿವೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ತಯಾರು ಮಾಡಿರುವ ಪಟ್ಟಿಯಲ್ಲಿ ಒಟ್ಟು 902 ಅನಧಿಕೃತ ಕಟ್ಟಡಗಳಿದ್ದು, ಇದರಲ್ಲಿ ದೇವಸ್ಥಾನಗಳದ್ದೇ ಅಗ್ರಪಾಲಾಗಿದೆ. ಈ ಪಟ್ಟಿಯಲ್ಲಿ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಮಂಗಳೂರು ನಗರದ ಶಕ್ತಿನಗರದ ಶ್ರೀವೈದ್ಯನಾಥ ದೇವಸ್ಥಾನವೂ

ದ.ಕ ಜಿಲ್ಲೆಯಲ್ಲೂ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಪಟ್ಟಿ ರೆಡಿ ಮಾಡಿದ ಜಿಲ್ಲಾಡಳಿತ| ಲಿಸ್ಟ್ ನಲ್ಲಿವೆ ಬರೋಬ್ಬರಿ 902 ಶ್ರದ್ಧಾ ಕೇಂದ್ರಗಳು Read More »

ರಾಜ್ಯಕ್ಕೆ ಕಾಲಿಟ್ಟ ನಿಫಾ| ಮಂಗಳೂರಿನಲ್ಲಿ ಮೊದಲ‌ ಕೇಸ್ ಪತ್ತೆ…!

ಮಂಗಳೂರು: ಕೇರಳದಲ್ಲಿ ಕೊರೊನಾ ಹಾವಳಿಯ ನಡುವೆ ನಿಫಾ ಆತಂಕವೂ ಹೆಚ್ಚಾಗುತ್ತಿರುವ ಕಾರಣ ಕರ್ನಾಟಕದ ಗಡಿ ಭಾಗಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನ ವಹಿಸಲಾಗಿದೆ. ತೀವ್ರ ಮುನ್ನೆಚ್ಚರಿಕೆ ನಡುವೆಯೂ ಇದೀಗ ರಾಜ್ಯಕ್ಕೆ ನಿಫಾ ಕಾಲಿಟ್ಟಿರುವುದು ಆತಂಕ ಸೃಷ್ಟಿಸುವಂತೆ‌ ಮಾಡಿದೆ. ಇಂದು ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕನಲ್ಲಿ ಇದೀಗ ನಿಫಾ ವೈರಸ್ ನ ಲಕ್ಷಣಗಳು ಪತ್ತೆಯಾಗಿದ್ದು, ಜನರನ್ನ ಆತಂಕಕ್ಕೆ ದೂಡಿದೆ. ಈತ ಜಿಲ್ಲಾ ಆರೋಗ್ಯ ಇಲಾಖೆಯ ವ್ಯಕ್ತಿಯಾಗಿದ್ದು, ಸ್ವ್ಯಾಬ್ ಹಾಗೂ ರಕ್ತದ ಮಾದರಿಯನ್ನ ಪುಣೆ ಲ್ಯಾಬ್ ಗೆ ರವಾನೆ ಮಾಡಲಾಗಿದೆ. ಕೇರಳದಲ್ಲಿ

ರಾಜ್ಯಕ್ಕೆ ಕಾಲಿಟ್ಟ ನಿಫಾ| ಮಂಗಳೂರಿನಲ್ಲಿ ಮೊದಲ‌ ಕೇಸ್ ಪತ್ತೆ…! Read More »