ಕರಾವಳಿ

ಪುತ್ತೂರು: ‘ಹಿಟ್ ಅ್ಯಂಡ್ ರನ್’|ಸ್ಕೂಟಿ ಸವಾರ ದುರ್ಮರಣ

ಪುತ್ತೂರು: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ದ್ವಿಚಕ್ರ ಸವಾರ ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿಮಧ್ಯೆ ಮೃತಪಟ್ಟ ಘಟನೆ ಅ.12 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ಮಿತ್ತೂರು ಮಸೀದಿ ಸಮೀಪ ನಡೆದಿದೆ. ನಿಡ್ಪಳ್ಳಿ ಗ್ರಾಮದ ವಾಲ್ತಾಜೆ‌ ನಾರಾಯಣ ನಾಯ್ಕ್ ರವರ ಪುತ್ರ, ರಿಬ್ಕೋ ಟ್ರೇಡಿಂಗ್ ಕಂಪೆನಿಯ ನೌಕರ ಸುರೇಶ್ ನಾಯ್ಕ್ ಮೃತ ದುರ್ದೈವಿ. ಅ.12ರ ಬೆಳಿಗ್ಗೆ ಸ್ಥಳೀಯ ನಿವಾಸಿಯೋರ್ವರು ಆಟೋ ರಿಕ್ಷಾವೊಂದರಲ್ಲಿ ಮಿತ್ತೂರಿಗೆ ಹಾಲು ತರುತ್ತಿದ್ದವೇಳೆ ಮಿತ್ತೂರು ಮಸೀದಿ ಸಮೀಪದದ ಹೆದ್ದಾರಿಯಲ್ಲಿ […]

ಪುತ್ತೂರು: ‘ಹಿಟ್ ಅ್ಯಂಡ್ ರನ್’|ಸ್ಕೂಟಿ ಸವಾರ ದುರ್ಮರಣ Read More »

ಉಪ್ಪಿನಂಗಡಿ: ಭೀಕರ ರಸ್ತೆ ದುರಂತ| ಸಾರಿಗೆ ಬಸ್‌ ಹರಿದು ತಾಯಿ‌- ಮಗು ಸಾವು|

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ತಾಯಿ ಮಗು ಮೇಲೆ ಕೆಎಸ್ ಆರ್ ಟಿ ಸಿ ಬಸ್ಸು ಹರಿದ ಪರಿಣಾಮ ಅವರಿಬ್ಬರೂ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಶಿರ್ಲಾಲು ನಿವಾಸಿಗಳಾದ ಶಾಹಿದಾ (25), ಮತ್ತು ಅವರ ಪುತ್ರ ಶಾಹೀನ್ (1) ಮೃತಪಟ್ಟವರು. ಬಸ್ಸುಗಳ ನಡುವಿನ ಪೈಪೋಟಿಯೇ ಈ ಘಟನೆಗೆ ಕಾರಣವೆಂದು ಸಾರ್ವಜನಿಕರು ಪ್ರತಿಭಟಿಸಿದ್ದು, ಬಸ್ಸು ನಿಲ್ದಾಣದ ಒಳಗೆ ಯಾವ ಬಸ್ಸುಗಳೂ ಪ್ರವೇಶಿಸದಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು

ಉಪ್ಪಿನಂಗಡಿ: ಭೀಕರ ರಸ್ತೆ ದುರಂತ| ಸಾರಿಗೆ ಬಸ್‌ ಹರಿದು ತಾಯಿ‌- ಮಗು ಸಾವು| Read More »

ಕುಕ್ಕೆ ದೇಗುಲದಲ್ಲಿ ಕೋವಿಡ್ ನೆಗೆಟಿವ್ ವರದಿ ಇದ್ದರಷ್ಟೇ ಸೇವೆಗೆ ಅವಕಾಶ|

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ದರ್ಶನ ಮತ್ತು ಸೇವೆಗಳನ್ನು ನೆರವೇರಿಸಲು ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ. 2 ಡೋಸ್‌ ಲಸಿಕೆ ಪಡೆದ ಮತ್ತು 72 ಗಂಟೆ ಮುಂಚಿತವಾಗಿ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಹೊಂದಿದ್ದರೆ ಮಾತ್ರ ಸೇವೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಸೇವೆ ಮತ್ತು ದರ್ಶನ ಸಂದರ್ಭ ಕಡ್ಡಾಯವಾಗಿ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಲ್ಲಲ್ಲಿ ಭದ್ರತಾ ಸಿಬಂದಿ ನಿಯೋಜಿಸಲಾಗಿದೆ ಮಾತ್ರವಲ್ಲದೇ ಈ ಸಿಬಂದಿ ಭಕ್ತರಿಗೆ ಕೋವಿಡ್‌ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. 100

ಕುಕ್ಕೆ ದೇಗುಲದಲ್ಲಿ ಕೋವಿಡ್ ನೆಗೆಟಿವ್ ವರದಿ ಇದ್ದರಷ್ಟೇ ಸೇವೆಗೆ ಅವಕಾಶ| Read More »

ಕಳಚಿದ ಯಕ್ಷರಂಗದ ಕೊಂಡಿ| ಪ್ರಸಿದ್ದ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ ವಿಧಿವಶ

ಸುಳ್ಯ: ಯಕ್ಷರಂಗದ ಮೇರು ಪ್ರತಿಭೆ, ಕಂಚಿನ ಕಂಠದ ಭಾಗವತ ಪದ್ಯಾಣ ಗಣಪತಿ ಭಟ್ ಇಂದು(ಅ.11) ಬೆಳಿಗ್ಗೆ ನಿಧನರಾಗಿದ್ದಾರೆ.ತೆಂಕು ತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ತನ್ನ ಕಂಠದಿಂದ ಪ್ರಸಿದ್ಧಿಯನ್ನು ಹೊಂದಿದ ಪದ್ಯಾಣ ಗಣಪತಿ ಭಟ್ ರವರು ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಪದ್ಯಾಣದವರು. ಹಲವು ದಶಕಗಳಿಂದ ಹಲವು ಯಕ್ಷಗಾನ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಕಲಾ ಸೇವೆ ಮಾಡಿದ್ದಾರೆ. ಪದ್ಯಾಣ’ ಪದವೇ ಸಂಗೀತ ಶೋತೃಗಳಲ್ಲಿ ಸಂಚಲನೆಯನ್ನುಂಟು ಮಾಡುವಂಥದ್ದು, ಪದ್ಯಾಣ ಕುಟುಂಬ ದಲ್ಲಿ ಜನಿಸಿದವರೆಲ್ಲರೂ ಸಂಗೀತ ಅಥವಾ ಯಕ್ಷಗಾನ ಕಲಾವಿದರೆಂಬುದು ವಾಸ್ತವ ಸಂಗತಿ.

ಕಳಚಿದ ಯಕ್ಷರಂಗದ ಕೊಂಡಿ| ಪ್ರಸಿದ್ದ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ ವಿಧಿವಶ Read More »

ಸುಳ್ಯ: ಉಪನ್ಯಾಸಕಿಯ ಪೇಸ್ ಬುಕ್ ವಾಲ್ ನಲ್ಲಿ ಹಿಂದೂ ವಿರೋಧಿ ಕಮೆಂಟ್: ನೆಟ್ಟಿಗರು ಗರಂ

ಮಂಗಳೂರು: ಉಪನ್ಯಾಸಕಿಯೊಬ್ಬರು ತನ್ನ ಫೇಸ್‌ಬುಕ್‌ ವಾಲ್ ನಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವ ಮೂಲಕ ಅವರು ಮಾಡಿಕೊಂಡು ಬರುತ್ತಿರುವ ಪೂಜೆ ಪುನಸ್ಕಾರಗಳನ್ನು ಲಘುವಾಗಿ ಚಿತ್ರಿಸಿದ ರೀತಿ ಬರೆದುಕೊಂಡಿರುವ ಆರೋಪ ಕೇಳಿಬಂದಿದ್ದು, ಇದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಸುಳ್ಯದ ಪದವಿ ಕಾಲೇಜೊಂದರ ಅತಿಥಿ ಉಪನ್ಯಾಸಕಿಯೋರ್ವರು ಮಾಡಿದ ಅವಹೇಳನಕಾರಿ ಕಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಹಿಂದೂ ವಿರೋದಿ ಪೋಸ್ಟ್ ಹಾಕಿದ್ದು ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವರ ಪೂಜೆ ಮಾಡುವ ಬ್ರಾಹ್ಮಣರ ಫೋಟೋವನ್ನು ಮುಂದಿಟ್ಟುಕೊಂಡು, ಈ ಸೋಂಬೇರಿಗಳು

ಸುಳ್ಯ: ಉಪನ್ಯಾಸಕಿಯ ಪೇಸ್ ಬುಕ್ ವಾಲ್ ನಲ್ಲಿ ಹಿಂದೂ ವಿರೋಧಿ ಕಮೆಂಟ್: ನೆಟ್ಟಿಗರು ಗರಂ Read More »

ಸುಳ್ಯ:ಶಾಂತಿಜೂಬಿಯ ಮನಃಶಾಂತಿ ಕದಡಿದ ಲವ್ ಜಿಹಾದ್ ಭೂತ| ಸಂತ್ರಸ್ತೆಯ ಬೆನ್ನಿಗೆ ನಿಂತ ಹಿಂದೂ ಮಹಾಸಭಾ

ಸುಳ್ಯ: ಲವ್ ಜಿಹಾದ್ ಬಲೆಯೊಳಗೆ ಬಿದ್ದ ಹಿಂದೂ ಯುವತಿ ಇದೀಗ ಅದರಿಂದ ಹೊರಬರಲಾರದೆ ಮತ್ತೆ ಪ್ರತಿಭಟನೆಗೆ ಮುಖ ಮಾಡಿರುವ ಘಟನೆ ನಡೆದಿದ್ದು, ಪ್ರಕರಣ ಹೊಸ ರೂಪಕ್ಕೆ ತಿರುಗಿದೆ.ಲವ್ ಜಿಹಾದ್ ನಲ್ಲಿ ಸಿಲುಕಿಸಿ, ಮದುವೆಯಾಗಿ ಬಳಿಕ ಮತಾಂತರಗೊಳಿಸಿ ಲಕ್ಷಾಂತರ ರೂಪಾಯಿ ದೋಚಿದ ನಂತರ ನಾಪತ್ತೆಯಾಗಿರುವ ತನ್ನ ‌ಗಂಡನಿಗಾಗಿ‌ ಕಾದು ಕುಳಿತಿರುವ ಆಸಿಯಾ ಅಲಿಯಾಸ್ ಶಾಂತಿಜೂಬಿ ನ್ಯಾಯಕ್ಕಾಗಿ ಮತ್ತೆ ಪ್ರತಿಭಟನೆ ‌ದಾರಿ ಹಿಡಿದಿದ್ದು, ಇದರ ಬೆನ್ನಲ್ಲೇ ಹಿಂದೂ ಮಹಾಸಭಾ ಕರ್ನಾಟಕ ಸಂತ್ರಸ್ತ ಮಹಿಳೆಯ ಬೆನ್ನಿಗೆ ನಿಂತಿದೆ. ಏನಿದು ಪ್ರಕರಣ?ದಕ್ಷಿಣ ಕನ್ನಡ

ಸುಳ್ಯ:ಶಾಂತಿಜೂಬಿಯ ಮನಃಶಾಂತಿ ಕದಡಿದ ಲವ್ ಜಿಹಾದ್ ಭೂತ| ಸಂತ್ರಸ್ತೆಯ ಬೆನ್ನಿಗೆ ನಿಂತ ಹಿಂದೂ ಮಹಾಸಭಾ Read More »

ಕೆರೆಗೆ ಹಾರಿ‌ ಯುವತಿ ಆತ್ಮಹತ್ಯೆ

ವಿಟ್ಲ: ಯುವತಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ಇಂದು ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ನಿವಾಸಿ ಬಾಬು ನಾಯ್ಕರವರ ಮಗಳು ನಿಶ್ಮಿತಾ(22) ಎಂದು ಗುರುತಿಸಲಾಗಿದೆ. ಈಕೆ ಡೆಂಟಲ್ ಕ್ಲಿನಿಕ್’ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಿನ್ನೆ ಸಂಜೆಯಿಂದ ನಿಶ್ಮಿತಾ ಕಾಣೆಯಾಗಿದ್ದರು. ಇಂದು ಮುಂಜಾನೆ ಕೆರೆಯಲ್ಲಿ ನಿಶ್ಮಿತಾ ರವರ ಮೃತದೇಹ ಪತ್ತೆಯಾಗಿದ್ದು, ಡೆತ್ ನೋಟ್ ಮತ್ತು ಮೊಬೈಲ್ ಕೂಡ ಮೃತದೇಹ ದೊರೆತ ಸ್ಥಳದಲ್ಲಿ ಪತ್ತೆಯಾಗಿದೆ.ಇನ್ನು ಡೆತ್ ನೋಟ್’ನಲ್ಲಿ ಕೆಲವರ ಹೆಸರು ಉಲ್ಲೇಖವಿದೆ ಅಂತ

ಕೆರೆಗೆ ಹಾರಿ‌ ಯುವತಿ ಆತ್ಮಹತ್ಯೆ Read More »

ಯಕ್ಷಗಾನ ಅಧ್ಬುತ ಕಲೆ, ಅದನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿ- ಎಡಪಡಿತ್ತಾಯ

ಮಂಗಳೂರು: ಯಕ್ಷಗಾನ ಒಂದು ಅದ್ಭುತ ಕಲೆ.ನಮ್ಮ ನಾಡಿನ ಸುವಿಧತೆಯನ್ನು ಎತ್ತಿ ಹಿಡಿಯುವ ಕಲೆ . ಇದು ಖಾಲಿ ಪ್ರದರ್ಶನ ಮಾಡಿದರೆ ಸಾಕು.ಈ ಯಕ್ಷಗಾನ ಅಧ್ಯಯನ ಕೇಂದ್ರದ ಮೂಲಕ ತರಬೇತಿ ನೀಡುವುದು ವಿದ್ಯಾರ್ಥಿಗಳನ್ನು ತಯಾರು ಮಾಡುವಂತಹ ಆಸಕ್ತರನ್ನು ಕೇಂದ್ರಕ್ಕೆ ಆಕರ್ಷಿಸಿ ಪೂರಕ ವಾತಾವರಣ ಸೃಷ್ಟಿ ಮಾಡುವಂತದ್ದು ಮಂಗಳೂರು ವಿಶ್ವವಿದ್ಯಾನಿಲಯದ ಆದ್ಯ ಕರ್ತವ್ಯ. ಎಂದು ಮಂಗಳೂರು ವಿವಿಯ ಮಾನ್ಯ ಕುಲಪತಿಗಳಾದ ಶ್ರೀ ಪಿ ಸುಬ್ರಹ್ಮಣ್ಯ ಎಡಪಡಿತ್ತಾಯ ರವರು ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ದಯಾನಂದ ಪೈ ಮತ್ತು ಸತೀಶ್ ಪೈ

ಯಕ್ಷಗಾನ ಅಧ್ಬುತ ಕಲೆ, ಅದನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿ- ಎಡಪಡಿತ್ತಾಯ Read More »

ಬಂಟ್ವಾಳ: ಅಪ್ರಾಪ್ತೆಯ ಅತ್ಯಾಚಾರಕ್ಕೂ ಮುನ್ನ ನಡೆದಿತ್ತು ಪ್ಲ್ಯಾನ್| ಫೇಸ್ಬುಕ್ ಪರಿಚಯ ತಂದ ಎಡವಟ್ಟು| ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಬಂಟ್ವಾಳ: ನಗರ ಠಾಣೆಯಲ್ಲಿ ಶನಿವಾರ ದಾಖಲಾದ ಅಪ್ರಾಪ್ತ ಬಾಲಕಿಯ ಮೇಲಿನ ಗ್ಯಾಂಗ್ ರೇಪ್ ಪ್ರಕರಣ, ಆರೋಪಿಗಳ ಬಂಧನವಾಗುತ್ತಿದ್ದಂತೆಯೇ ರೋಚಕ ತಿರುವು ಪಡೆದುಕೊಂಡಿದೆ. ಅಮ್ಟಾಡಿಯ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಸಾಮೂಹಿಕ ಅತ್ಯಾಚಾರ ನಡೆದಿರುವುದು ಮಂಗಳೂರಿನ ಖಾಸಗಿ ಲಾಡ್ಜ್ ನಲ್ಲಿ ಎನ್ನುವುದು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಾದ ಕಾಪು ನಿವಾಸಿ ಕೆ. ಎಸ್ ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್, ಹಾಗೂ

ಬಂಟ್ವಾಳ: ಅಪ್ರಾಪ್ತೆಯ ಅತ್ಯಾಚಾರಕ್ಕೂ ಮುನ್ನ ನಡೆದಿತ್ತು ಪ್ಲ್ಯಾನ್| ಫೇಸ್ಬುಕ್ ಪರಿಚಯ ತಂದ ಎಡವಟ್ಟು| ಕಂಪ್ಲೀಟ್ ಸ್ಟೋರಿ ಇಲ್ಲಿದೆ. Read More »

ಬಂಟ್ವಾಳ: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ| ಇಬ್ಬರು ಅರೆಸ್ಟ್, ಮುಂದುವರಿದ ತನಿಖೆ

ಬಂಟ್ವಾಳ : ಅಪ್ರಾಪ್ತ ವಯಸ್ಸಿನ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ದ.ಕ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ ಖಚಿತಪಡಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮಾಡಿ ಎಂಬಲ್ಲಿ ಈ ಪ್ರಕರಣ ನಡೆದಿದ್ದು, ಸದ್ಯ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆಂದು ಎಂದು ಅವರು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಶಾಲೆಗೆಂದು ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಕಾರಿನಲ್ಲಿ ಬಂದ ಪರಿಚಿತನೋರ್ವ ಸೇರಿದಂತೆ ಆರೋಪಿಗಳು ಅಪಹರಿಸಿ ಅತ್ಯಾಚಾರ ಎಸಗಿರುವುದಾಗಿ ದೂರಲಾಗಿದೆ.

ಬಂಟ್ವಾಳ: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ| ಇಬ್ಬರು ಅರೆಸ್ಟ್, ಮುಂದುವರಿದ ತನಿಖೆ Read More »