ತೊಕ್ಕೊಟ್ಟು:ಮಧ್ಯ ರಾತ್ರಿಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಸೆಕ್ಯುರಿಟಿ ಬೈಕನ್ನೇ ಕಳವಿಗೆ ಯತ್ನಿಸಿದವನಿಗೆ ಧರ್ಮದೇಟು,ಆರೋಪಿ ಪೊಲೀಸ್ ವಶಕ್ಕೆ.
ಉಳ್ಳಾಲ:ಮಧ್ಯರಾತ್ರಿಯಲ್ಲಿ ತೊಕ್ಕೊಟ್ಟಿನ ಕಮರ್ಷಿಯಲ್ ಕಾಂಪ್ಲೆಕ್ಸ್ ಒಂದರ ಮುಂದೆ ನಿಲ್ಲಿಸಿದ್ದ ಸೆಕ್ಯುರಿಟಿ ಗಾರ್ಡ್ ಓರ್ವರ ಬೈಕನ್ನೇ ಕಳವಿಗೆ ಯತ್ನಿಸಿದವನಿಗೆ ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಲಾಗಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಅಂಗಡಿಪದವು ಶಾಂತಿನಗರ ನಿವಾಸಿ ನೌಫಾಲ್(23) ಬೈಕ್ ಕಳವಿಗೆತ್ನಿಸಿದ ಯುವಕ. ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿರುವ ಮಾರುತಿ ಸೆಂಟರ್ ವಾಣಿಜ್ಯ ಕಟ್ಟಡದ ಮುಂಭಾಗದಲ್ಲಿ ನಿನ್ನೆ ರಾತ್ರಿ ಅದೇ ಕಟ್ಟಡದಲ್ಲಿರುವ ಮುತ್ತೂಟು ಫೈನಾನ್ಸ್ ನ ರಾತ್ರಿ ಪಾಳಿ ಸೆಕ್ಯುರಿಟಿ ಗಾರ್ಡ್ ಅವರು ತನ್ನ (ಪಲ್ಸರ್ NS 200)ಬೈಕನ್ನ ನಿಲ್ಲಿಸಿದ್ದರು. […]










