ಕರಾವಳಿ

ಮಂಗಳೂರು | ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ಆರೋಪಿಯನ್ನು ತಲೆಬೋಳಿಸಿ, ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಕಾರ್ಮಿಕರು

ಮಂಗಳೂರು: ಎರಡು ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ನೀರಿನ ಹೊಂಡಕ್ಕೆ ಎಸೆದು ಹೋದ ದುಷ್ಕೃತ್ಯ ನಗರದಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬಿಹಾರ ಮೂಲದ ಚಂದನ್(33) ಎಂದು ಗುರುತಿಸಲಾಗಿದೆ. ಬಂದರಿನಲ್ಲಿ ಫಿಶ್ ಮಿಲ್ ಒಂದರಲ್ಲಿ ಬಿಹಾರ, ಉತ್ತರ ಪ್ರದೇಶ ಮೂಲದ 40ಕ್ಕೂ ಹೆಚ್ಚು ಕುಟುಂಬಗಳು ಕೆಲಸಕ್ಕಿದ್ದು, ಹೊಯ್ಗೆಬಜಾರ್ ನಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದಾರೆ. ಅಲ್ಲಿನ ಕುಟುಂಬಗಳ ಮಕ್ಕಳು ಒಂದೇ ಕಡೆ ಆಟವಾಡಿಕೊಂಡು ಇದ್ದರು. ಈ ವೇಳೆ, ನಿನ್ನೆ ಸಂಜೆ ಹೆಣ್ಣು ಮಗುವೊಂದನ್ನು […]

ಮಂಗಳೂರು | ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ಆರೋಪಿಯನ್ನು ತಲೆಬೋಳಿಸಿ, ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಕಾರ್ಮಿಕರು Read More »

ಡಿಜೆ ಆಪರೇಟ್ ಮಾಡಿದ “ಮಹಿಷಾಸುರ”- ಕ್ಷಮೆಗೆ ಆಗ್ರಹ

ಮಂಗಳೂರು : ಕರಾವಳಿಯ ಗಂಡುಕಲೆ ಯಕ್ಷಗಾನದ ವೇಷ ಧರಿಸಿದ ಯುವಕನೊಬ್ಬ ಪಬ್‌ನಲ್ಲಿ ಡಿಜೆ ಅಪರೇಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ. ಉಡುಪಿಯ ಮಣಿಪಾಲದ ಪಬ್‌ಯೊಂದರಲ್ಲಿ, “ದೇವಿ ಮಹಾತ್ಮೆ” ಪ್ರಸಂಗದಲ್ಲಿ ಬರುವ ಮಹಿಷಾಸುರನ ವೇಷ ಧರಿಸಿದ ಯುವಕ ಡಿಜೆ ಅಪರೆಟ್ ಮಾಡುತ್ತಿದ್ದ, ಇದನ್ನು ಪಬ್ ಹೋದವರು ವಿಡಿಯೋ ಮಾಡಿ ಸಾಮಾಜಿಕವಾಗಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಯಕ್ಷಗಾನ ವೇಷದಾರಿ ಪಬ್‌ನಲ್ಲಿ ಡಿಜೆ ಅಪರೇಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿ ಯಕ್ಷಗಾನ ಅಭಿಮಾನಿಗಳಿಂದ ಬಾರೀ

ಡಿಜೆ ಆಪರೇಟ್ ಮಾಡಿದ “ಮಹಿಷಾಸುರ”- ಕ್ಷಮೆಗೆ ಆಗ್ರಹ Read More »

ಸುಳ್ಯ| ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಸುಳ್ಯ: ಕಳೆದೊಂದು ವಾರದ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ ಅರಂತೋಡು ಗ್ರಾಮದ ಉಳುವಾರು ದೇವಣ್ಣ ಗೌಡ ಎಂಬವರ ಶವ ಇಂದು ಪತ್ತೆಯಾಗಿದೆ. ಅ.24 ರ ತಡರಾತ್ರಿ ಶೌಚಾಲಯಕ್ಕೆಂದು‌ ಮನೆಯಿಂದ ಹೊರಟಿದ್ದ ದೇವಣ್ಣ ಗೌಡರು ಯಾರ ಕಣ್ಣಿಗೂ ಕಾಣದೆ‌ ನಿಗೂಢವಾಗಿ ಕಣ್ಮರೆಯಾಗಿದ್ದರು. ಬಳಿಕ ಮನೆಯವರು ಹಾಗೂ ಊರವರು‌ ಪಯಸ್ವಿನಿ ನದಿಯ ಉದ್ದಗಲಕ್ಕೂ ಹಾಗೂ ವಿವಿಧ ಕಡೆ ಹುಡುಕಾಡಿದ್ದರು.‌ ಇಂದು ಮುಂಜಾನೆ ಅರಂತೋಡು‌- ತೊಡಿಕಾನ ರಸ್ತೆಯಲ್ಲಿನ ಸೇತುವೆ ಪಕ್ಕ ಕಾಡಿನಲ್ಲಿ ದೇವಣ್ಣ ಗೌಡರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೆ ನಿಖರ

ಸುಳ್ಯ| ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ Read More »

ಮಂಗಳೂರು- ಕುವೈಟ್ ವಿಮಾನಯಾನ| ಊಟಕ್ಕಿಲ್ಲದ ಉಪ್ಪಿನಕಾಯಿ

ಮಂಗಳೂರು: ಇಲ್ಲಿಂದ ಕುವೈತ್‌ಗೆ ತೆರಳುವ ಏರ್‌ ಇಂಡಿಯಾ ವಿಮಾನಗಳ ವೇಳಾಪಟ್ಟಿಯನ್ನು ನವೆಂಬರ್‌ನಿಂದ ಪರಿಷ್ಕರಿಸಲಾಗಿದ್ದು, ಈ ಬಾರಿಯೂ ಅನುಕೂಲ ಕಲ್ಪಿಸಿಲ್ಲ ಎನ್ನುವ ಆರೋಪ ಕುವೈತ್‌ನ ಅನಿವಾಸಿ ಕರಾವಳಿಗರಿಂದ ಕೇಳಿಬಂದಿದೆ. ಕೋವಿಡ್‌-19 ಮೊದಲ ಅಲೆಯವರೆಗೆ ಸಮರ್ಪಕವಾಗಿದ್ದ ಮಂಗಳೂರು-ಕುವೈತ್‌ ವಿಮಾನದ ವೇಳಾಪಟ್ಟಿ, ಬಳಿಕ ದಿಢೀರನೆ ಬದಲಾಗಿದೆ.ಗುರುವಾರ ಕುವೈತ್‌ನಿಂದ ಹೊರಟು ಮಂಗಳೂರಿಗೆ ಬರುವವರಿಗೆ ಮೊದಲಿನ ವೇಳಾಪಟ್ಟಿ ಅನುಕೂಲವಾಗಿತ್ತು. ಕುವೈತ್‌ನಲ್ಲಿ ಶುಕ್ರವಾರ ಮತ್ತು ಶನಿವಾರ ವಾರಾಂತ್ಯ ರಜೆ ಇರುವುದರಿಂದ, ಕರಾವಳಿ ಜನರು ಊರಿಗೆ ಬಂದು ಹೋಗಲು ಪ್ರಯೋಜನವಾಗುತ್ತಿತ್ತು. ರಜೆ ಇಲ್ಲದೆ ಭಾನುವಾರ ಮತ್ತೆ ಕೆಲಸಕ್ಕೆ

ಮಂಗಳೂರು- ಕುವೈಟ್ ವಿಮಾನಯಾನ| ಊಟಕ್ಕಿಲ್ಲದ ಉಪ್ಪಿನಕಾಯಿ Read More »

ಮೂಡುಬಿದ್ರೆ ಪೊಲೀಸರ ಬಲೆಗೆ ಬಿದ್ದ ಅಂಡರ್ ವರ್ಲ್ಡ್ ಡಾನ್ ಸುರೇಶ ಪುಜಾರಿಯ ಬಂಟ

ಮಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಬಂಧನಕ್ಕೀಡಾಗಿರುವ ಅಂಡರ್ ವರ್ಲ್ಡ್ ಡಾನ್ ಸುರೇಶ ಪುಜಾರಿಯ ಬಂಟ ಪ್ರವೀಣ್ ಕುಮಾರ್ ಎಂಬತಾನನ್ನು ಮೂಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ. ಹತ್ತು ವರ್ಷಗಳ ಹಿಂದೆ ಮುಂಬೈನಲ್ಲಿ ಛೋಟಾ ರಾಜನ್, ಆಬಳಿಕ ರವಿ ಪೂಜಾರಿ ಜೊತೆಗೆ ಖಾಸಾ ಬಂಟನಾಗಿ ಗುರುತಿಸಲ್ಪಟ್ಟಿದ್ದ ಸುರೇಶ ಪೂಜಾರಿ ಆನಂತರ ತಾನೇ ಅಂಡರ್ ವರ್ಲ್ಡ್ ಡಾನ್ ಎಂದು ಹೇಳಿ ವಿದೇಶದಲ್ಲಿದ್ದುಕೊಂಡು ಮುಂಬೈನಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದ. ಈತನ ವಿರುದ್ಧ ಹಲವಾರು ಪ್ರಕರಣಗಳು ಮುಂಬೈ ಮತ್ತು ಥಾಣೆಯಲ್ಲಿ ದಾಖಲಾಗಿದ್ದವು. ಈತನ ಸಹಚರರ ಮೂಲಕ

ಮೂಡುಬಿದ್ರೆ ಪೊಲೀಸರ ಬಲೆಗೆ ಬಿದ್ದ ಅಂಡರ್ ವರ್ಲ್ಡ್ ಡಾನ್ ಸುರೇಶ ಪುಜಾರಿಯ ಬಂಟ Read More »

ಪುತ್ತೂರು: ಕಾರು‌ ಮತ್ತು ಆ್ಯಕ್ಟಿವಾ ನಡುವೆ ಅಪಘಾತ| ಸವಾರ ಸಾವು

ಪುತ್ತೂರು: ಇಲ್ಲಿನ ಪುತ್ತೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನರಿಮೊಗರು ಬಳಿಯ ಕೊಡನೀರು ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ನ .1 ರಂದು ನಡೆದಿದೆ. ಪೆರಮೊಗರಿನ ಕೋಳಿ ಅಂಗಡಿಯ ಸೋಮಶೇಖರ್ ರೈ ಮೃತಪಟ್ಟವರು.ಮಾರುತಿ ಡಿಸೈರ್ ಕಾರು ಹಾಗೂ ಅಕ್ಟಿವಾ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಅಕ್ಟಿವಾ ಸವಾರ ಗಂಭೀರವಾಗಿ ಗಾಯಗೊಂಡಿದ್ದು ,ಕೂಡಲೇ ಸ್ಥಳೀಯರ ನೆರವಿನಿಂದ ಅರುಣ್ ಕುಮಾರ್ ಪುತ್ತಿಲರವರು ತಮ್ಮ ಕಾರಿನಲ್ಲಿ ಗಾಯಾಳುವನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ

ಪುತ್ತೂರು: ಕಾರು‌ ಮತ್ತು ಆ್ಯಕ್ಟಿವಾ ನಡುವೆ ಅಪಘಾತ| ಸವಾರ ಸಾವು Read More »

2ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಉಪ್ಪು ನೀರಿನ ಟ್ಯಾಂಕ್ ಗೆ ಬಿಸಾಕಿದ ಕಿರಾತಕ

ಮಂಗಳೂರು: ಲೈಂಗಿಕ ಕಿರುಕುಳ ನೀಡಲು 2 ವರ್ಷದ ಬಾಲಕಿಯನ್ನು ದುಷ್ಕರ್ಮಿಯೊಬ್ಬ ಹೊತ್ತೊಯ್ದಿದ್ದು, ಬಳಿಕ ಮಗುವನ್ನು ಉಪ್ಪು ನೀರಿನ ಟ್ಯಾಂಕ್ ಎಸೆದು ಹೋಗಿರುವ ಹೀನಾತಿಹೀನ ಕೃತ್ಯ ನಡೆದಿದೆ. ಭಾನುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುಕೃತ್ಯ ನಡೆದಿದೆ. ಫಿಶ್ ಕಟ್ಟಿಂಗ್ ಮಾಡುವ ಫ್ಯಾಕ್ಟರಿ ಬಳಿ ಬಿಹಾರ ಮೂಲದ ಕಾರ್ಮಿಕರು ನೆಲೆಸಿದ್ದಾರೆ. ಕಾರ್ಮಿಕರೆಲ್ಲರ ಮಕ್ಕಳನ್ನ ನೋಡಿಕೊಳ್ಳಲು ಒಂದು ಕ್ಯಾಂಪ್ ಇದೆ. ಆ ಶಿಬಿರದಿಂದ ಹೆಣ್ಣು ಮಗುವನ್ನು ಚಂದನ್ ಎಂಬ ಆರೋಪಿ ಹೊತ್ತೊಯ್ದಿದ್ದಾನೆ.

2ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಉಪ್ಪು ನೀರಿನ ಟ್ಯಾಂಕ್ ಗೆ ಬಿಸಾಕಿದ ಕಿರಾತಕ Read More »

ಮಂಗಳೂರು: ರಾಷ್ಟ್ರ ಧ್ವಜ ಉಲ್ಟಾಪಲ್ಟಾ

ಮಂಗಳೂರು : ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಮಂಗಳೂರಿನಲ್ಲಿ ನಡೆದ ರಾಷ್ಟ್ರ ಧ್ವಜಾರೋಹಣ ಸಂದರ್ಭ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿದ ಘಟನೆ ನ.1 ರ ಸೋಮವಾರ ನಡೆದಿದೆ. ನಗರದ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವದಲ್ಲಿ ಸಚಿವ ಅಂಗಾರ ಅವರು ರಾಷ್ಟ್ರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿಸಲ್ಪಟ್ಟಿತು. ಸಿಬ್ಬಂದಿಗಳ ಎಡವಟ್ಟಿನಿಂದ ಬಾವುಟವೂ ಉಲ್ಟಾ ಆಗಿ ಹಾರಿತು. ತಕ್ಷಣ ಅಧಿಕಾರಿಗಳು ಗಮನಿಸಿ ರಾಷ್ಟ್ರ ಧ್ವಜವನ್ನು ಸರಿಪಡಿಸಲಾಯಿತು.

ಮಂಗಳೂರು: ರಾಷ್ಟ್ರ ಧ್ವಜ ಉಲ್ಟಾಪಲ್ಟಾ Read More »

ಮಂಗಳೂರು: ಗುಂಪುಗಳ ನಡುವೆ ಘರ್ಷಣೆ – ಏಳು ಮಂದಿಯ ಅಂದರ್

ಮಂಗಳೂರು: ನಗರದ ಬಳ್ಳಾಲ್‌ಬಾಗ್‌ನಲ್ಲಿ ಶನಿವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಭಾಗಿಯಾಗಿದ್ದ ಏಳು ಮಂದಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದ ದ್ವೇಷದಿಂದ ಮಾತಿಗೆ ಮಾತು ಬೆಳೆದು ಘರ್ಷಣೆಯಾಗಿದ್ದು, ಘರ್ಷಣೆಯ ವೇಳೆ ಏಳು ವಾಹನಗಳಿಗೆ ಹಾನಿ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿಯನ್ನು ಬಂಧಿಸಿ, ಸ್ವಯಂ ಪ್ರೇರಿತ ದೂರು ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ. ಬರ್ಕೆ

ಮಂಗಳೂರು: ಗುಂಪುಗಳ ನಡುವೆ ಘರ್ಷಣೆ – ಏಳು ಮಂದಿಯ ಅಂದರ್ Read More »

ಪುತ್ತೂರು: ಜವುಳಿ ಮಳಿಗೆಯಲ್ಲಿ ಮಂಗಳಮುಖಿಯರ ದಾಂಧಲೆ| ಮ್ಹಾಲಕರಿಂದ ದೂರು

ಪುತ್ತೂರು: ನಗರದಲ್ಲಿ ಮಂಗಳಮುಖಿಯರಿಂದ ತೊಂದರೆಯಾಗುತ್ತಿದೆ ಎಂದು ಪ್ರತಿಷ್ಠಿತ ಜವುಳಿ ಮಳಿಗೆಯ ಮಾಲೀಕರು ಕೈಗಾರಿಕೆ ಸಂಘದ ಅಧ್ಯಕ್ಷರಿಗೆ ಹಾಗೂ ಪುತ್ತೂರು ನಗರ ಠಾಣಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ. ಪುತ್ತೂರು ನಗರದಲ್ಲಿ ಮಂಗಳಮುಖಿಯರಿಂದ ತೊಂದರೆ ಹೆಚ್ಚಾಗುತ್ತಿದೆ. ಅವರಿಗೆ ಮಾನವೀಯ ನೆಲೆಯಿಂದ ನಾವು ಕೊಡುವ ಹಣವು, ಅವರ ನಿರೀಕ್ಷೆಯ ಮಟ್ಟದಲ್ಲಿ ಇಲ್ಲವಾದಾಗ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುತ್ತಾರೆ. ಅವರ ಬೇಡಿಕೆಯ ಮೊತ್ತ ಸಿಗದಿದ್ದರೇ ಕೊಟ್ಟ ಹಣವನ್ನು ಸ್ವೀಕರಿಸದೆ. ಆವಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸಿರುತ್ತಾರೆ ಹಾಗೂ ನಮ್ಮನ್ನು ಅವರಾಗಿ ಸ್ಪರ್ಶಿಸಿ ಹೀನಾಯವಾಗಿ,

ಪುತ್ತೂರು: ಜವುಳಿ ಮಳಿಗೆಯಲ್ಲಿ ಮಂಗಳಮುಖಿಯರ ದಾಂಧಲೆ| ಮ್ಹಾಲಕರಿಂದ ದೂರು Read More »