ಕರಾವಳಿ

ಉಳ್ಳಾಲ: ಹಿಟ್ & ರನ್ ಗೆ ಕೂಲಿ ಕಾರ್ಮಿಕ ಬಲಿ

ಉಳ್ಳಾಲ: ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾ.ಹೆ.66 ರ ಬೀರಿ ಎಂಬಲ್ಲಿ ನಡೆದಿದೆ. ಧಾರವಾಡ ಮೂಲದ ವಲಸೆ ಕಾರ್ಮಿಕ ಆನಂದ್ ಅಲಿಯಾಸ್ ಸಾಗರ್(28)ಸಾವನಪ್ಪಿದ ಯುವಕ. ಈತ ಸಂಕೋಳಿಗೆಯ ಎ.ಕೆ ಟ್ರೇಡರ್ಸ್ ಎಂಬ ಸಿಮೆಂಟ್ ಅಂಗಡಿಯಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಅವರು ಶನಿವಾರ ರಾತ್ರಿ ಸ್ನೇಹಿತನ ಜೊತೆ ಬೀರಿಯ ಹೆದ್ದಾರಿ ಬದಿಯಲ್ಲಿರುವ ಠಿಕ್ಕ ಪಾಯಿಂಟ್ ಎಂಬ ರೆಸ್ಟೋರಂಟಿಗೆ ತೆರಳಿದ್ದರು. ಅಲ್ಲಿ ಠಿಕ್ಕ ಸವಿದು ಹಿಂತಿರುಗುತ್ತಿದ್ದ ವೇಳೆ ಅಪರಿಚಿತ

ಉಳ್ಳಾಲ: ಹಿಟ್ & ರನ್ ಗೆ ಕೂಲಿ ಕಾರ್ಮಿಕ ಬಲಿ Read More »

ಸಮುದ್ರದಲ್ಲೆ ಹೊತ್ತಿ ಉರಿದ ಮಲ್ಪೆ ಮೂಲದ ಬೋಟ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸನಿಹ ಅರಬ್ಬಿ ಸಮುದ್ರದಲ್ಲಿ ಬೋಟ್ ಗೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಬೋಟ್ ನಲ್ಲಿದ್ದ 7 ಮಂದಿ ಮೀನುಗಾರರನ್ನು ಭಾರತೀಯ ಕರಾವಳಿ ಪಡೆ ರಕ್ಷಿಸಿದೆ. ಅರಬ್ಬಿ ಸಮುದ್ರದಲ್ಲಿ ಮಲ್ಪೆ ಮೂಲದ “ವರದ ವಿನಾಯಕ ” ಎಂಬ ಹೆಸರಿನ ಬೋಟ್ ಮೀನುಗಾರಿಕೆ ನಡೆಸುತಿತ್ತು. ಈ ವೇಳೆ ಬೋಟ್ ನ ಇಂಜಿನ್ ರೂಮ್ ನಲ್ಲಾದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಮಾಹಿತಿ ಪಡೆದ ಭಾರತೀಯ ಕರಾವಳಿ ಪಡೆ

ಸಮುದ್ರದಲ್ಲೆ ಹೊತ್ತಿ ಉರಿದ ಮಲ್ಪೆ ಮೂಲದ ಬೋಟ್ Read More »

“ಐಡಿಯಲ್ ಐಸ್ ಕ್ರೀಂ” ಸಂಸ್ಥಾಪಕ ಪ್ರಭಾಕರ ಕಾಮತ್ ವಿಧಿವಶ

ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ಖ್ಯಾತ ಐಡಿಯಲ್ ಐಸ್ ಕ್ರೀಮ್ ನ ಸಂಸ್ಥಾಪಕ ಪ್ರಭಾಕರ್ ಕಾಮತ್ ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ನಗರದಲ್ಲಿ ‘ಪಬ್ಬ ಮಾಮ್’ ಎಂದೇ ಕರೆಯಲ್ಪಡುತ್ತಿದ್ದ ಪ್ರಭಾಕರ್ ಕಾಮತ್ ಅವರು ಮೊದಲ ಐಡಿಯಲ್ ಐಸ್ ಕ್ರೀಮ್ ಮಳಿಗೆಯನ್ನು 1975ರಲ್ಲಿ ಮಂಗಳೂರಿನಲ್ಲಿ ಆರಂಭಿಸಿದ್ದರು. 14 ಫ್ಲೇವರ್ ಗಳೊಂದಿಗೆ ಮೊದಲ ಬಾರಿಗೆ ಐಡಿಯಲ್ ಐಸ್ ಕ್ರೀಮ್ ಮಳಿಗೆಯನ್ನು ಪ್ರಾರಂಭಿಸಿದ್ದ ಪ್ರಭಾಕರ್ ಕಾಮತ್ ಅವರು ಸ್ವತಃ ಐಸ್ ಕ್ರೀಮ್ ತಯಾರಿ ನಡೆಸುತ್ತಿದ್ದರು. ಐಡಿಯಲ್ ಐಸ್ ಕ್ರೀಮ್ ಕರಾವಳಿ ಭಾಗದಲ್ಲಿ

“ಐಡಿಯಲ್ ಐಸ್ ಕ್ರೀಂ” ಸಂಸ್ಥಾಪಕ ಪ್ರಭಾಕರ ಕಾಮತ್ ವಿಧಿವಶ Read More »

ಸುಳ್ಯ| ಹಣತೆಗಳಿಂದ ಕಂಗೊಳಿಸಿತು ಗ್ರಾಮಸ್ಥರ “ಗ್ರಾಮಸೇತು”

ಸುಳ್ಯ: ದೀಪಗಳ ಮಹತ್ವ ದೀಪಾವಳಿಯಂದು ಅರಿವಾಗುತ್ತದೆ. ದೀಪಗಳ ಬೆಳಕು ಅಂದರೆ ಸುಜ್ಞಾನದ ಬೆಳಕು. ಈ ಬೆಳಕಿನ ಮೂಲಕ ಅಸುರೀ ಶಕ್ತಿಗಳು ದೂರವಾಗಲಿ , ಗ್ರಾಮಗಳಲ್ಲಿ ಸುಜ್ಞಾನದ ಬೆಳಕು ಹರಿಯಲಿ ಎಂದು ಸಾಮಾಜಿಕ ಕಾರ್ಯಕರ್ತ, ಜೇಸೀ ಸದಸ್ಯ ಶಶಿಧರ ಪಳಂಗಾಯ ಹೇಳಿದರು. ಅವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಜನರಿಂದಲೇ ನಿರ್ಮಾಣವಾದ ಕಾಲುಸಂಕ “ಗ್ರಾಮಸೇತು” ಮೇಲೆ ಹಣತೆ ಬೆಳಗಿ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಬೆಳಕಿನ ಮಹತ್ವ ದೀಪಾವಳಿಯಂದು ತಿಳಿಯುತ್ತದೆ. ಈ ದಿನ ಬೆಳಕಿನ ಮಹತ್ವ

ಸುಳ್ಯ| ಹಣತೆಗಳಿಂದ ಕಂಗೊಳಿಸಿತು ಗ್ರಾಮಸ್ಥರ “ಗ್ರಾಮಸೇತು” Read More »

ದೀಪದ ಬತ್ತಿಯಂತೆ ಉರಿಯುತ್ತೆ ಈ ಎಲೆ ಚಿಗುರು| ಪಂಜದಲ್ಲೊಂದು ವಿಚಿತ್ರ ಗಿಡ ಪತ್ತೆ|

ಸುಳ್ಯ: ನಾಗರಿಕ ಸಮಾಜಕ್ಕೆ ಹೊಂದಿಕೊಳ್ಳುವ ಮೊದಲು‌ ಮನುಷ್ಯ ಕಲ್ಲಿನಿಂದ ಉಜ್ಜಿ ಬೆಂಕಿ ತಯಾರಿಸುತ್ತಿದ್ದ ಎಂಬ ಬಗ್ಗೆ ಇತಿಹಾಸದಲ್ಲಿ ತಿಳಿದಿದ್ದು, ಹೀಗೆ ತಯಾರಿಸಿದ ಬೆಂಕಿಯನ್ನು ಬೆಳಕಾಗಿ ಉಪಯೋಗಿಸಲು ಬಳಸುತ್ತಿದ್ದ. ಆದರೆ ಪ್ರಕೃತಿಯ ಮಡಿಲಲ್ಲಿಯೂ ಇಂತದ್ದೇ ಒಂದು ಅಪರೂಪದ ಗಿಡವೊಂದು ಇದೀಗ ಪತ್ತೆಯಾಗಿದೆ. ತಾಲೂಕಿನ ಪಂಜ ಎಂಬಲ್ಲಿ ಈ ಅಪರೂಪದ ಗಿಡ ಪತ್ತೆಯಾಗಿದೆ. ಇಲ್ಲಿನ ಅಳ್ಪೆ ನಿವಾಸಿ ಜಿನ್ನಪ್ಪ ಎನ್ನುವವರ ರಬ್ಬರ್ ತೋಟದಲ್ಲಿ ಈ ಗಿಡ ಪತ್ತೆಯಾಗಿದ್ದು, ಈ ಗಿಡ ಜಿನ್ನಪ್ಪ ಅವರ ಗಮನಕ್ಕೆ ಬರಲೂ ಒಂದು ಕಾರಣವಿದೆ. ಬೆಳದಿಂಗಳ

ದೀಪದ ಬತ್ತಿಯಂತೆ ಉರಿಯುತ್ತೆ ಈ ಎಲೆ ಚಿಗುರು| ಪಂಜದಲ್ಲೊಂದು ವಿಚಿತ್ರ ಗಿಡ ಪತ್ತೆ| Read More »

ಮಂಗಳೂರು| ಮೋಗರ್ನ್ ಗೇಟ್ ಶೂಟೌಟ್ ಪ್ರಕರಣ| ಮಗನ ಸಾವಿಗೆ ಕಾರಣನಾದ ರಾಜೇಶ್ ಪ್ರಭುಗೆ ಜಾಮೀನು|

ಮಂಗಳೂರು: ಅಕ್ಟೋಬರ್ 5ರಂದು ನಡೆದ ಮೋರ್ಗನ್ಸ್ ಗೇಟ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೇಶ್ ಪ್ರಭುಗೆ ಷರತ್ತು ಬದ್ಧ ಜಾಮೀನನ್ನು ಮಂಗಳೂರು 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಂಜೂರುಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಲಿಸಿದ ಕೋರ್ಟ್ ಆರೋಪಿಯಿಂದ ಐದು ಲಕ್ಷ ರೂ. ಬಾಂಡ್ ಪಡೆದಿದ್ದು, ಆಕಸ್ಮಿಕವಾಗಿ ಗುಂಡು ಹಾರಲ್ಪಟ್ಟಿದೆ ಹಾಗೂ ಸ್ವಂತ ಮಗ ಎನ್ನುವ ಕಾರಣಕ್ಕೆ ಜಾಮೀನು ನೀಡಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಅಕ್ಟೋಬರ್ 5ರಂದು ನಡೆದ ಈ ಶೂಟೌಟ್ ಪ್ರಕರಣದಲ್ಲಿ, ಸಿಬ್ಬಂದಿಗಳಿಬ್ಬರ

ಮಂಗಳೂರು| ಮೋಗರ್ನ್ ಗೇಟ್ ಶೂಟೌಟ್ ಪ್ರಕರಣ| ಮಗನ ಸಾವಿಗೆ ಕಾರಣನಾದ ರಾಜೇಶ್ ಪ್ರಭುಗೆ ಜಾಮೀನು| Read More »

ಬಂಟ್ವಾಳ: ಕಾರಿಂಜೇಶ್ವರ ಸನ್ನಿಧಿಯಲ್ಲಿ ವಿಕೃತಿ ಮೆರೆದ ಅನ್ಯಮತೀಯರು| ಚಪ್ಪಲಿ ಧರಿಸಿ ದೇಗುಲ ಪ್ರವೇಶಿಸಿ ಪುಂಡಾಟ| ಕಾನೂನು ಹೋರಾಟ ನಡೆಸಲು ಹಿಂದೂ ಪರ ಸಂಘಟನೆಗಳ ನಿರ್ಧಾರ|

ಬಂಟ್ವಾಳ: ಇಲ್ಲಿನ ಪುರಾಣ ಪ್ರಸಿದ್ಧ ಕಾರಿಂಜೇಶ್ವರ ದೇವಸ್ಥಾನದ ಒಳಗಡೆ ಪಾದರಕ್ಷೆ ಧರಿಸಿ ಅಕ್ರಮವಾಗಿ ದೇಗುಲ ಪ್ರವೇಶಿಸಿ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ಪೋಟೊ, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇವಾಲಯದ ಭಕ್ತರಿಂದ ಹಾಗೂ ಹಿಂದೂ ಪರ ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬಂಟ್ವಾಳ ತಾಲ್ಲೂಕು ಹಿಂದು ಜಾಗರಣ ವೇದಿಕೆ ಘಟನೆಯನ್ನು ಖಂಡಿಸಿದ್ದು, ಕಾನೂನು ಸಮರಕ್ಕೆ ಸಿದ್ಧವಾಗುವ ಸೂಚನೆ ನೀಡಿದೆ. ಏನಿದು ವಿವಾದ?.ಶ್ರೀಕಾರಿಂಜೇಶ್ವರ ದೇವಸ್ಥಾನ ಬಂಟ್ವಾಳ ತಾಲೂಕಿನ ಕಾರಿಂಜ ಎಂಬ ಸ್ಥಳದಲ್ಲಿ ನೆಲೆಗೊಂಡಿರುವ ಪುರಾಣ ಪ್ರಸಿದ್ಧ

ಬಂಟ್ವಾಳ: ಕಾರಿಂಜೇಶ್ವರ ಸನ್ನಿಧಿಯಲ್ಲಿ ವಿಕೃತಿ ಮೆರೆದ ಅನ್ಯಮತೀಯರು| ಚಪ್ಪಲಿ ಧರಿಸಿ ದೇಗುಲ ಪ್ರವೇಶಿಸಿ ಪುಂಡಾಟ| ಕಾನೂನು ಹೋರಾಟ ನಡೆಸಲು ಹಿಂದೂ ಪರ ಸಂಘಟನೆಗಳ ನಿರ್ಧಾರ| Read More »

ಮಂಗಳೂರು | ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ಆರೋಪಿಯನ್ನು ತಲೆಬೋಳಿಸಿ, ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಕಾರ್ಮಿಕರು

ಮಂಗಳೂರು: ಎರಡು ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ನೀರಿನ ಹೊಂಡಕ್ಕೆ ಎಸೆದು ಹೋದ ದುಷ್ಕೃತ್ಯ ನಗರದಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬಿಹಾರ ಮೂಲದ ಚಂದನ್(33) ಎಂದು ಗುರುತಿಸಲಾಗಿದೆ. ಬಂದರಿನಲ್ಲಿ ಫಿಶ್ ಮಿಲ್ ಒಂದರಲ್ಲಿ ಬಿಹಾರ, ಉತ್ತರ ಪ್ರದೇಶ ಮೂಲದ 40ಕ್ಕೂ ಹೆಚ್ಚು ಕುಟುಂಬಗಳು ಕೆಲಸಕ್ಕಿದ್ದು, ಹೊಯ್ಗೆಬಜಾರ್ ನಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದಾರೆ. ಅಲ್ಲಿನ ಕುಟುಂಬಗಳ ಮಕ್ಕಳು ಒಂದೇ ಕಡೆ ಆಟವಾಡಿಕೊಂಡು ಇದ್ದರು. ಈ ವೇಳೆ, ನಿನ್ನೆ ಸಂಜೆ ಹೆಣ್ಣು ಮಗುವೊಂದನ್ನು

ಮಂಗಳೂರು | ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ಆರೋಪಿಯನ್ನು ತಲೆಬೋಳಿಸಿ, ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಕಾರ್ಮಿಕರು Read More »

ಡಿಜೆ ಆಪರೇಟ್ ಮಾಡಿದ “ಮಹಿಷಾಸುರ”- ಕ್ಷಮೆಗೆ ಆಗ್ರಹ

ಮಂಗಳೂರು : ಕರಾವಳಿಯ ಗಂಡುಕಲೆ ಯಕ್ಷಗಾನದ ವೇಷ ಧರಿಸಿದ ಯುವಕನೊಬ್ಬ ಪಬ್‌ನಲ್ಲಿ ಡಿಜೆ ಅಪರೇಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ. ಉಡುಪಿಯ ಮಣಿಪಾಲದ ಪಬ್‌ಯೊಂದರಲ್ಲಿ, “ದೇವಿ ಮಹಾತ್ಮೆ” ಪ್ರಸಂಗದಲ್ಲಿ ಬರುವ ಮಹಿಷಾಸುರನ ವೇಷ ಧರಿಸಿದ ಯುವಕ ಡಿಜೆ ಅಪರೆಟ್ ಮಾಡುತ್ತಿದ್ದ, ಇದನ್ನು ಪಬ್ ಹೋದವರು ವಿಡಿಯೋ ಮಾಡಿ ಸಾಮಾಜಿಕವಾಗಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಯಕ್ಷಗಾನ ವೇಷದಾರಿ ಪಬ್‌ನಲ್ಲಿ ಡಿಜೆ ಅಪರೇಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿ ಯಕ್ಷಗಾನ ಅಭಿಮಾನಿಗಳಿಂದ ಬಾರೀ

ಡಿಜೆ ಆಪರೇಟ್ ಮಾಡಿದ “ಮಹಿಷಾಸುರ”- ಕ್ಷಮೆಗೆ ಆಗ್ರಹ Read More »

ಸುಳ್ಯ| ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಸುಳ್ಯ: ಕಳೆದೊಂದು ವಾರದ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ ಅರಂತೋಡು ಗ್ರಾಮದ ಉಳುವಾರು ದೇವಣ್ಣ ಗೌಡ ಎಂಬವರ ಶವ ಇಂದು ಪತ್ತೆಯಾಗಿದೆ. ಅ.24 ರ ತಡರಾತ್ರಿ ಶೌಚಾಲಯಕ್ಕೆಂದು‌ ಮನೆಯಿಂದ ಹೊರಟಿದ್ದ ದೇವಣ್ಣ ಗೌಡರು ಯಾರ ಕಣ್ಣಿಗೂ ಕಾಣದೆ‌ ನಿಗೂಢವಾಗಿ ಕಣ್ಮರೆಯಾಗಿದ್ದರು. ಬಳಿಕ ಮನೆಯವರು ಹಾಗೂ ಊರವರು‌ ಪಯಸ್ವಿನಿ ನದಿಯ ಉದ್ದಗಲಕ್ಕೂ ಹಾಗೂ ವಿವಿಧ ಕಡೆ ಹುಡುಕಾಡಿದ್ದರು.‌ ಇಂದು ಮುಂಜಾನೆ ಅರಂತೋಡು‌- ತೊಡಿಕಾನ ರಸ್ತೆಯಲ್ಲಿನ ಸೇತುವೆ ಪಕ್ಕ ಕಾಡಿನಲ್ಲಿ ದೇವಣ್ಣ ಗೌಡರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೆ ನಿಖರ

ಸುಳ್ಯ| ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ Read More »