ಡಿ.16: ಸೌಜನ್ಯಳ ನ್ಯಾಯಕ್ಕಾಗಿ ಗುತ್ತಿಗಾರಿನಲ್ಲಿ ಬೃಹತ್ ಪ್ರತಿಭಟನೆ ಸಭೆ| ಬ್ಯಾನರ್ಗಳ ಪೈಪೋಟಿ, ನಿರೀಕ್ಷೆಗೂ ಮೀರಿದ ಸ್ಪಂದನೆ, ಸಾವಿರಾರು ಜನರ ಭಾಗಿ ನಿರೀಕ್ಷೆ
ಸಮಗ್ರ ನ್ಯೂಸ್: ಸೌಜನ್ಯ ಹೋರಾಟ ಸಮಿತಿ ಗುತ್ತಿಗಾರು, ಇದರ ವತಿಯಿಂದ ಡಿ.16 ರಂದು ಸುಳ್ಯ ತಾಲೂಕಿನ ಗುತ್ತಿಗಾರು ದೇವಿಸಿಟಿ ಆವರಣದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಸಭೆ ಯಶಸ್ಸಿನ ಸಿದ್ಧತಾ ಕಾರ್ಯಗಳು ಹುರುಪಿನಿಂದ ನಡೆಯುತ್ತಿದ್ದು ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ದ.ಕ.ಜಿಲ್ಲೆಯ ಗಡಿಯಂಚಿನ ಗ್ರಾಮವಾದ ಕಲ್ಮಕಾರು ನಿಂದ ಹಿಡಿದು ಮರ್ಕಂಜದವರೆಗೆ ಮಡಪ್ಪಾಡಿಯಿಂದ , ಪಂಜ, ಬಳ್ಪ ಪರಿಸರದವರೆಗೆ ಕಾರ್ಯಕ್ರಕ್ಕೆ ಶುಭಕೋರಿ ನೂರಾರು ಬ್ಯಾನರ್ಗಳು, ಸಮಿತಿ ಮುಖಂಡರ ಗ್ರಾಮ ಭೇಟಿ, ಕಾರ್ಯಕ್ರಮಕ್ಕೆ ಅನುಮತಿ ಮತ್ತಿತರ ಚಟುವಟಿಕೆಗಳು ಮುಕ್ತಾಯ ಹಂತದಲ್ಲಿದೆ. ಕೊನೆಯ










