ಕರಾವಳಿ

ಡಿ.16: ಸೌಜನ್ಯಳ‌ ನ್ಯಾಯಕ್ಕಾಗಿ ಗುತ್ತಿಗಾರಿನಲ್ಲಿ ಬೃಹತ್ ಪ್ರತಿಭಟನೆ ಸಭೆ| ಬ್ಯಾನರ್ಗಳ ಪೈಪೋಟಿ, ನಿರೀಕ್ಷೆಗೂ ಮೀರಿದ ಸ್ಪಂದನೆ, ಸಾವಿರಾರು ಜನರ ಭಾಗಿ ನಿರೀಕ್ಷೆ

ಸಮಗ್ರ ನ್ಯೂಸ್: ಸೌಜನ್ಯ ಹೋರಾಟ ಸಮಿತಿ ಗುತ್ತಿಗಾರು, ಇದರ ವತಿಯಿಂದ ಡಿ.16 ರಂದು ಸುಳ್ಯ ತಾಲೂಕಿನ ಗುತ್ತಿಗಾರು ದೇವಿಸಿಟಿ ಆವರಣದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಸಭೆ ಯಶಸ್ಸಿನ ಸಿದ್ಧತಾ ಕಾರ್ಯಗಳು ಹುರುಪಿನಿಂದ ನಡೆಯುತ್ತಿದ್ದು ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ದ.ಕ.ಜಿಲ್ಲೆಯ ಗಡಿಯಂಚಿನ ಗ್ರಾಮವಾದ ಕಲ್ಮಕಾರು ನಿಂದ ಹಿಡಿದು ಮರ್ಕಂಜದವರೆಗೆ ಮಡಪ್ಪಾಡಿಯಿಂದ , ಪಂಜ, ಬಳ್ಪ ಪರಿಸರದವರೆಗೆ ಕಾರ್ಯಕ್ರಕ್ಕೆ ಶುಭಕೋರಿ ನೂರಾರು ಬ್ಯಾನರ್ಗಳು, ಸಮಿತಿ ಮುಖಂಡರ ಗ್ರಾಮ ಭೇಟಿ, ಕಾರ್ಯಕ್ರಮಕ್ಕೆ ಅನುಮತಿ ಮತ್ತಿತರ ಚಟುವಟಿಕೆಗಳು ಮುಕ್ತಾಯ ಹಂತದಲ್ಲಿದೆ. ಕೊನೆಯ

ಡಿ.16: ಸೌಜನ್ಯಳ‌ ನ್ಯಾಯಕ್ಕಾಗಿ ಗುತ್ತಿಗಾರಿನಲ್ಲಿ ಬೃಹತ್ ಪ್ರತಿಭಟನೆ ಸಭೆ| ಬ್ಯಾನರ್ಗಳ ಪೈಪೋಟಿ, ನಿರೀಕ್ಷೆಗೂ ಮೀರಿದ ಸ್ಪಂದನೆ, ಸಾವಿರಾರು ಜನರ ಭಾಗಿ ನಿರೀಕ್ಷೆ Read More »

ಸುಳ್ಯ: ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಪಶು ಆಸ್ಪತ್ರೆಯಲ್ಲಿ ಉಚಿತ ಮೇವಿನ ಬೀಜಗಳು ಲಭ್ಯ

ಸಮಗ್ರ ನ್ಯೂಸ್ : 2023-24ನೇ ಸಾಲಿನ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದು ರೈತರ ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಆಸಕ್ತ ರೈತರು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವಿವಿಧ ಪಶು ಆಸ್ಪತ್ರೆ ಮತ್ತು ಪಶು ಚಿಕಿತ್ಸಾಲಯ ಗಳನ್ನು ಸಂಪರ್ಕಿಸಿ ಉಚಿತವಾಗಿ ಮೇವಿನ ಬೀಜಗಳನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯಕ್ಕೆ ಇಲಾಖೆಯ ವಿವಿಧ ಸಂಸ್ಥೆಗಳಲ್ಲಿ ಆಫ್ರಿಕನ್ ಉದ್ದ ತಳಿಯ ಜೋಳ, ಹೈಬ್ರಿಡ್ ಜೋವಾರ್,ಮೇವಿನ ಅಲಸಂಡೆ ಮತ್ತು ಬಹುವಾರ್ಷಿಕ ಮೇವಿನ ಬಾಜ್ರ ಬೀಜಗಳು ಲಭ್ಯವಿವೆ. ಆಸಕ್ತರು ತಮ್ಮ ಆಧಾರ್ ಕಾರ್ಡ್

ಸುಳ್ಯ: ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಪಶು ಆಸ್ಪತ್ರೆಯಲ್ಲಿ ಉಚಿತ ಮೇವಿನ ಬೀಜಗಳು ಲಭ್ಯ Read More »

ಸುಳ್ಯ ಮೂಲದ ಅನನ್ಯ ಶೆಟ್ಟಿ ಗೆ ಬೆಸ್ಟ್ ಐಸ್ ಆಫ್ ಕರ್ನಾಟಕ ಟೈಟಲ್ ಪ್ರಶಸ್ತಿ

ಸಮಗ್ರ ನ್ಯೂಸ್ : ಈಚೆಗೆ ಬೆಂಗಳೂರಿನಲ್ಲಿ ನಿಷಿತ ಸುವರ್ಣ ಇಮೇಜ್ ಕಂಸಲ್ವೆಂಟ್ ಆಯೋಜಿಸಿದ್ದ ಮಿಸ್ಟ‌ರ್, ಮಿಸ್ ಹಾಗೂ ಮಿಸಸ್‌ ಕರ್ನಾಟಕ ಸ್ಪರ್ಧೆಯ ಕರ್ನಾಟಕ ಸ್ಟೈಲ್ ಐಕಾನ್ -2023 ರಲ್ಲಿ ಮಂಗಳೂರಿನ ಅನನ್ಯ ಶೆಟ್ಟಿ ಅವರು ಬೆಸ್ಟ್ ಐಸ್ ಆಫ್‌ ಕರ್ನಾಟಕ ಟೈಟಲ್ ಮುಡಿಗೇರಿಸಿಕೊಂಡಿದ್ದಾರೆ. ಅನನ್ಯ ಶೆಟ್ಟಿ ಅವರು ಮಂಗಳೂರಿನ ಅಡ್ಯಾರಿನವರು. ಇವರು ಮಂಗಳೂರು ನಗರದ ಪ್ರತಿಷ್ಠಿತ ಬಂಟ್ಸ್ ಹಾಸ್ಟೆಲ್‌ ಶಾಲೆ ಹಾಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಉದ್ಯಾವರ ಉಡುಪಿಯ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್‌ ಕಾಲೇಜಿನಲ್ಲಿ ದ್ವಿತೀಯ ವರ್ಷದ

ಸುಳ್ಯ ಮೂಲದ ಅನನ್ಯ ಶೆಟ್ಟಿ ಗೆ ಬೆಸ್ಟ್ ಐಸ್ ಆಫ್ ಕರ್ನಾಟಕ ಟೈಟಲ್ ಪ್ರಶಸ್ತಿ Read More »

ಸುಳ್ಯ ತಾ. ಬಂಟರ ಸಮಾವೇಶದ ಆಮಂತ್ರಣ ಬಿಡುಗಡೆ

ಸಮಗ್ರ ನ್ಯೂಸ್ : ಸುಳ್ಯ ತಾಲೂಕು ಬಂಟರ ಸಮಾವೇಶ ಡಿ.31 ರಂದು ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ನಡೆಯಲಿದ್ದು ಆಮಂತ್ರಣವನ್ನು ಅಧ್ಯಕ್ಷರಾದ ಜಯಪ್ರಕಾಶ್ ರೈ ಯವರು ಬಿಡುಗಡೆಗೊಳಿಸಿದರು. ಬಳಿಕ ಕಾರ್ಯಕ್ರಮ ದ ವಿವರ ನೀಡಿ ಎಲ್ಲಾ ಸದಸ್ಯರು ಸಕ್ರಿಯರಾಗಿ ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದರು.ಈ ಕಾರ್ಯಕ್ರಮದಲ್ಲಿ ಸುಭಾಸ್ ಚಂದ್ರ ರೈ ಸ್ವಾಗತಿಸಿ ಮೀರಾಮುರಳೀಧರ ರೈ ವಂದಿಸಿದರು, ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಬಂಟರ ಸಂಘದ ಪ್ರಧಾನಕಾರ್ಯದರ್ಶಿ ಶುಭಾಸಚಂದ್ರ ರೈ, ಖಜಾಂಜಿ ಗಂಗಾಧರ ರೈ, ಆರಂತೋಡು ವಲಯಾ ಧ್ಯಕ್ಷ

ಸುಳ್ಯ ತಾ. ಬಂಟರ ಸಮಾವೇಶದ ಆಮಂತ್ರಣ ಬಿಡುಗಡೆ Read More »

ಸುಳ್ಯ: ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ. ಇದರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

ಸಮಗ್ರ ನ್ಯೂಸ್: ಸುಳ್ಯ ರಥಬೀದಿಯ ವಿನಾಯಕ ಬಿಲ್ಡಿಂಗಿನ ಮೊದಲನೇ ಮಹಡಿಯಲ್ಲಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ. ಇದರ ವತಿಯಿಂದ 2024ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಅನ್ನು ಸಂಘದ ಕಛೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷ ಜನಾರ್ದನ ದೋಳ, ಉಪಾಧ್ಯಕ್ಷ ಸತ್ಯನಾರಾಯಣ ಅಚ್ರಪ್ಪಾಡಿ, ಮುಖ್ಯ ಕಾರ್ಯನಿರ್ವಾಣಾಧಿಕಾರಿ ಅಶ್ವತ್ ಬಿಳಿಮಲೆ ನಿರ್ದೇಶಕ ಮಹೇಶ್ ಮೇರ್ಕಜೆ, ಡಾ. ಪುರುಷೋತ್ತಮ ಕಟ್ಟೆಮನೆ, ಪ್ರಕಾಶ್ ಕೇರ್ಪಳ ಮತ್ತು ಸಿಬ್ಬಂದಿ ಲಿಖಿತಾ ಉಪಸ್ಥಿತರಿದ್ದರು.

ಸುಳ್ಯ: ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ. ಇದರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ Read More »

ಮಂಗಳೂರಿನ ಆಶಿಕ್ ಗೆ ಮಾಸ್ಟರ್ ಶೆಫ್ ಗರಿ

ಸಮಗ್ರ ನ್ಯೂಸ್: ಮುಂಬಯಿಯಲ್ಲಿ ಸೋನಿ ಲೈವ್ ಒಟಿಟಿ ವೇದಿಕೆ ಆಯೋಜಿಸಿದ ಮಾಸ್ಟರ್ ಶೆಫ್ ಇಂಡಿಯಾ ಸ್ಪರ್ದೇಯ ಫೈನಲ್ ಸ್ಪರ್ಧೆಯಲ್ಲಿ ಮಂಗಳೂರಿನ ಯುವಕ ಮುಹಮ್ಮದ್ ಆಶಿಕ್ ಅವರು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಅಂತಿಮ ಸುತ್ತು ತಲುಪಿದ ರುಖ್ಸಾರ್ ಸಯೀದ್, ಸೂರಜ್ ಥಾಪಾ, ನಂಬಿ ಜೆಸ್ಸಿಕಾ ಮರಕ್ ಸೇರಿದಂತೆ ನಾಲ್ವರಲ್ಲಿ ಮುಹಮ್ಮದ್ ಆಶಿಕ್ ಒಬ್ಬರಾಗಿದ್ದರು. ಶುಕ್ರವಾರ ಸ್ಪರ್ಧೆಯ ಫೈನಲ್ ಸಂಚಿಕೆ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಅಲ್ಲದೆ ಈ ಸ್ಪರ್ಧೆಯನ್ನು ಗೆದ್ದ ದಕ್ಷಿಣ ಭಾರತದ ಪ್ರಥಮ ಸ್ಪರ್ಧಿ ಎಂಬ ಹೆಗ್ಗಳಿಯನ್ನು

ಮಂಗಳೂರಿನ ಆಶಿಕ್ ಗೆ ಮಾಸ್ಟರ್ ಶೆಫ್ ಗರಿ Read More »

ಕುಕ್ಕೆ ಸುಬ್ರಹ್ಮಣ್ಯ: ಇಂದು(ಡಿ.12) ಲಕ್ಷ ದೀಪೋತ್ಸವ, ಕುಣಿತ ಭಜನೆ| ಬೀದಿಯಲ್ಲಿ ಉರುಳುಸೇವೆಗೆ ಚಾಲನೆ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.12ರಂದು ದೇವರ ಲಕ್ಷದೀಪೋತ್ಸವ ನಡೆಯಲಿದ್ದು, ರಥಬೀದಿಯಲ್ಲಿ ದೇವರ ರಥೋತ್ಸವ, ರಾತ್ರಿ ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲೋತ್ಸವ ನೆರವೇರಲಿದೆ. ಸಂಜೆ ದೇವಳದಲ್ಲಿ ಅಂಕುರಪೂಜೆ ನಡೆದ ಬಳಿಕ ಆದಿ ಸುಬ್ರಹ್ಮಣ್ಯದಲ್ಲಿ ರಂಗಪೂಜೆ ಬಳಿಕ ದೇವರ ರಥೋತ್ಸವ ನೆರವೇರಲಿದೆ. ರಥದಲ್ಲಿ ಕಾಶಿಕಟ್ಟೆಗೆ ತೆರಳಿ ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ದೇವರ ಗುರ್ಜಿಪೂಜೆ ನಡೆಯಲಿದೆ. ರಥೋತ್ಸವದ ಸಂದರ್ಭ ರಥ ಬೀದಿಯಲ್ಲಿ ಲಕ್ಷ ಹಣತೆ ಉರಿಸಲಾಗುತ್ತದೆ. ಮಣ್ಣಿನ ಹಣತೆಯ ಲಕ್ಷ ದೀಪಗಳನ್ನು ರಥಬೀದಿಯಿಂದ ಕಾಶಿಕಟ್ಟೆ ಗಣಪತಿ ದೇವಸ್ಥಾನ, ಸವಾರಿ ಮಂಟಪ, ಅಭಯ

ಕುಕ್ಕೆ ಸುಬ್ರಹ್ಮಣ್ಯ: ಇಂದು(ಡಿ.12) ಲಕ್ಷ ದೀಪೋತ್ಸವ, ಕುಣಿತ ಭಜನೆ| ಬೀದಿಯಲ್ಲಿ ಉರುಳುಸೇವೆಗೆ ಚಾಲನೆ Read More »

ಬುರ್ಖಾ ತೆಗೆದು ಒಳಗೆ ಬನ್ನಿ ಆಸ್ಪತ್ರೆಯಲ್ಲಿ ವಿವಾದಕ್ಕೀಡಾದ ಸೂಚನಾ ಫಲಕ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಾಕಲಾಗಿದ್ದ ಸೂಚನಾ ಫಲಕವೊಂದು ವಿವಾದಕ್ಕೀಡಾಗಿದೆ. ‘ಬುರ್ಖಾ ತೆಗೆದು ಒಳಗೆ ಬನ್ನಿ’ ಎಂದು ಬರೆದಿರುವ ಫಲಕ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಒಂದು ವರ್ಷದ ಹಿಂದೆಯೇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಈ ಸೂಚನಾ ಫಲಕ ಹಾಕಲಾಗಿತ್ತು. ರೋಗಿಗಳ ಇಸಿಜಿ ತೆಗೆಯುವ ರೂಮ್ ಬಾಗಿಲಿನಲ್ಲಿ ಈ ಸೂಚನಾ ಫಲಕ ಹಾಕಲಾಗಿತ್ತು. ಆದರೆ ಈ ಸೂಚನಾ ಫಲಕದ ಫೋಟೋವನ್ನು ತೆಗೆದು

ಬುರ್ಖಾ ತೆಗೆದು ಒಳಗೆ ಬನ್ನಿ ಆಸ್ಪತ್ರೆಯಲ್ಲಿ ವಿವಾದಕ್ಕೀಡಾದ ಸೂಚನಾ ಫಲಕ Read More »

ರಾಜ್ಯ ಮಟ್ಟದ ಯೋಗಾಸನ| ಸ್ಪರ್ಧೆಯಲ್ಲಿ ತರುಣ್ ಎ. ಬೆಳ್ಳಿ ಪದಕ|ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಸಮಗ್ರ ನ್ಯೂಸ್: ವಿಶ್ವ ಫಿಟ್ನೆಸ್ ಫೆಡರೇಷನ್ ಆಫ್ ಯೋಗಾಸನ ಸ್ಪೋರ್ಟ್ಸ್ WFF ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ 2023 ಡಿ.10ರಂದು ಬೆಂಗಳೂರಿನಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ನಿರಂತರ ಯೋಗ ಕೇಂದ್ರ ಪಂಜದ ವಿದ್ಯಾರ್ಥಿ ತರುಣ್ ಎ. ದ್ವಿತೀಯ ಸ್ಥಾನಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ಇವರು ಐವತ್ತೊಕ್ಲು ಗ್ರಾಮದ ಅಳ್ಪೆ ಮೇಲ್ಮನೆ ಸೀತಾರಾಮ ಗೌಡ ಮತ್ತು ಪೂರ್ಣಿಮಾ ದಂಪತಿಗಳ ಪುತ್ರ. ಕರಿಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ

ರಾಜ್ಯ ಮಟ್ಟದ ಯೋಗಾಸನ| ಸ್ಪರ್ಧೆಯಲ್ಲಿ ತರುಣ್ ಎ. ಬೆಳ್ಳಿ ಪದಕ|ರಾಷ್ಟ್ರ ಮಟ್ಟಕ್ಕೆ ಆಯ್ಕೆ Read More »

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ರಾತ್ರಿ ಯಕ್ಷಗಾನ ಮೇಳ/ ಅನುಮತಿ ನೀಡಿದ ಹೈ ಕೋರ್ಟ್

ಸಮಗ್ರ ನ್ಯೂಸ್: ಕೋವಿಡ್ ಪೂರ್ವದಲ್ಲಿ ಚಾಲ್ತಿಯಲ್ಲಿದ್ದ ರೀತಿಯಲ್ಲಿ ಯಕ್ಷಗಾನ ನಡೆಸಲು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳಗಳಿಗೆ ಹೈಕೋರ್ಟ್ ಅನುಮತಿ ನೀಡಿದೆ.ಯಕ್ಷಗಾನವು ರಾತ್ರಿ 12.30ರ ವರೆಗೆ ಮಾತ್ರ ನಡೆಸಬೇಕು ಮತ್ತು ನಿಗದಿತ ಶಬ್ದ ಪ್ರಮಾಣ (ಡೆಸಿಬಲ್) ಮೀರಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಕಟೀಲು ದೇವಸ್ಥಾನದ ಭಕ್ತ ಕೃಷ್ಣಕುಮಾರ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಯಕ್ಷಗಾನ ಮೇಳಗಳು ಸಂಜೆಯಿಂದ ಬೆಳಿಗ್ಗಿನವರೆಗೆ ಪ್ರದರ್ಶನಗಳನ್ನು ನೀಡುತ್ತವೆ. ಚೌಕಿ ಪೂಜೆ, ಪ್ರಾರ್ಥನೆ, ಆರತಿಯನ್ನು ಸಲ್ಲಿಸಿದ ನಂತರ ಯಕ್ಷಗಾನ

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ರಾತ್ರಿ ಯಕ್ಷಗಾನ ಮೇಳ/ ಅನುಮತಿ ನೀಡಿದ ಹೈ ಕೋರ್ಟ್ Read More »