ಕರಾವಳಿ

ಕನ್ನಡ ಡ್ರಾಮ ಜ್ಯೂನಿಯರ್ ಸೀಸನ್-5 ಮೆಗಾ ಆಡಿಷನ್‌ನಲ್ಲಿ ತೀಕ್ಷಾ ಪಿ ಆಯ್ಕೆ

ಸಮಗ್ರ ನ್ಯೂಸ್: ಝೀ ಕನ್ನಡ ವತಿಯಿಂದ ಪರ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ.1 ರಂದು ಝೀ ಕನ್ನಡದ ಡ್ರಾಮ ಜ್ಯೂನಿಯರ್ ಸೀಸನ್-5 ಮೆಗಾ ಆಡಿಷನ್‌ ನಡೆಯಿತು. ಇದರಲ್ಲಿ ಕೆ.ಪಿ.ಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಆಂಗ್ಲಮಾಧ್ಯಮದ 4ನೇ ತರಗತಿ ವಿದ್ಯಾರ್ಥಿನಿ ತೀಕ್ಷಾ ಪಿ ಇವರು ಆಯ್ಕೆಯಾಗಿದ್ದಾರೆ. ಇವರು ಪಾಲ್ತಾಡಿ ಪುರುಷೋತ್ತಮ ಮತ್ತು ಪುಷ್ಪಾವತಿ ದಂಪತಿಯ ಪುತ್ರಿ.

ಕನ್ನಡ ಡ್ರಾಮ ಜ್ಯೂನಿಯರ್ ಸೀಸನ್-5 ಮೆಗಾ ಆಡಿಷನ್‌ನಲ್ಲಿ ತೀಕ್ಷಾ ಪಿ ಆಯ್ಕೆ Read More »

ಹವಾಮಾನ ವರದಿ| ಕರಾವಳಿ ಜಿಲ್ಲೆಗಳಲ್ಲಿ ಎರಡು ದಿನ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಡಿಸೆಂಬರ್​ 7ರ ವರೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡಿಸೆಂಬರ್​ 4 ಮತ್ತು 5 ರಂದು ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಹವಾಮಾನ ವರದಿ| ಕರಾವಳಿ ಜಿಲ್ಲೆಗಳಲ್ಲಿ ಎರಡು ದಿನ ಮಳೆ ಮುನ್ಸೂಚನೆ Read More »

ಸುಳ್ಯ: ಕನಕದಾಸ ಜಯಂತಿ ಆಚರಣೆಯ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಗೆ ಚಾಟಿ ಬೀಸಿದ ಎಂ ವೆಂಕಪ್ಪ ಗೌಡ

ಸಮಗ್ರ ನ್ಯೂಸ್: ರಾಷ್ಟೀಯ ಹಬ್ಬಗಳ ದಿನಾಚರಣಾ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಶ್ರೀ ಕನಕದಾಸ ಜಯಂತಿ ಆಚರಣೆಯನ್ನು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನ.30 ರಂದು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ನಗರ ಪಂಚಾಯತ್ ಸದಸ್ಯ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ವೆಂಕಪ್ಪ ಗೌಡರು ಮಾತನಾಡಿ ಸರಕಾರಿ ಕಾರ್ಯಕ್ರಮಗಳನ್ನು ಆಚರಿಸಲು ಕೆಲವೊಂದು ನಿಯಮಗಳಿವೆ. ಸ್ಥಳೀಯ ಜನಪ್ರತಿನಿಧಿಗಳನ್ನು, ಸಾಮಾಜಿಕ ಮುಖಂಡರುಗಳನ್ನು ಕರೆದು ಕಾರ್ಯಕ್ರಮ ನಡೆಸಬೇಕು. ಅಲ್ಲದೆ ಸರಕಾರಿ ಕಚೇರಿಗಳು, ಸಭಾಭವನ ಇದೆ ಅದರಲ್ಲಿ ಮಾಡಬೇಕು. ಆದರೆ ಇಂದಿನ

ಸುಳ್ಯ: ಕನಕದಾಸ ಜಯಂತಿ ಆಚರಣೆಯ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಗೆ ಚಾಟಿ ಬೀಸಿದ ಎಂ ವೆಂಕಪ್ಪ ಗೌಡ Read More »

ಪುತ್ತೂರು: ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಯೋಗ ಪಟು ಮೇಘನಾ ರೈ ಹೆಸರು ದಾಖಲು

ಸಮಗ್ರ ನ್ಯೂಸ್: ನಿರಂತರ ಯೋಗ ಕೇಂದ್ರ ಪುತ್ತೂರು ತಾಲೂಕು ಇದರ ಯೋಗ ಪಟು ಮೇಘನಾ ರೈ ಪರಿವೃತ್ತ ಪದ್ಮಸಾನದಲ್ಲಿ 01 ಗಂಟೆ 08 ನಿಮಿಷ ಒಂದೇ ಸ್ಥಿತಿ ಯಲ್ಲಿ ಇರುವ ಮೂಲಕ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ. ಇವರು ಪುತ್ತೂರು ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಪುತ್ತೂರು ಕಂಬಳ ಕೊಡಿ ವಿಜಯ ಕುಮಾರ್ ರೈ ಮತ್ತು ಸಂಧ್ಯಾ. ಕೆ. ಆರ್. ಅವರು ಪುತ್ರಿ. ಯೋಗ ಗುರು

ಪುತ್ತೂರು: ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಯೋಗ ಪಟು ಮೇಘನಾ ರೈ ಹೆಸರು ದಾಖಲು Read More »

ಸುಳ್ಯ: ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

ಸಮಗ್ರ ನ್ಯೂಸ್: ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಮಡಿಕೇರಿ ಮೂಲದ ವ್ಯಕ್ತಿಯೋರ್ವರು ಸುಳ್ಯ ಸಮೀಪದ ಅರಂಬೂರಿನ ಹೊಳೆಯಲ್ಲಿ ವ್ಯಕ್ತಿಯು ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಮೃತರನ್ನು ಮೊಣ್ಣಂಗೇರಿಯ ವೆಂಕಟರಮಣ ಎಂದು ಗುರುತಿಸಲಾಗಿದೆ. ಅರಂಬೂರು ಸಮೀಪ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಎರಡನೇ ಮೊಣ್ಣಂಗೇರಿಯ ನಿವಾಸಿಯಾಗಿರುವ ವೆಂಕಟರಮಣ ಎಂಬವರು ಹೊಳೆಯಲ್ಲಿ ನಾಪತ್ತೆಯಾಗಿದ್ದರು. ಇವರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ತೀವ್ರ ಹುಡುಕಾಟದ ಬಳಿಕವೂ ಪತ್ತೆಯಾಗದ ಕಾರಣ ಸುಳ್ಯದ ಪೈಚಾರ್ ನ ಮುಳುಗು ತಜ್ಞರ ತಂಡ ಆಗಮಿಸಿದ್ದು, ಮುಳುಗಿದ್ದ ವ್ಯಕ್ತಿಯ ಮೃತದೇಹವನ್ನು ಹೊರ ತೆಗೆಯುವಲ್ಲಿ

ಸುಳ್ಯ: ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು Read More »

ಕಡಬ: ಸಿನಿಮೀಯ ರೀತಿಯಲ್ಲಿ ಹಾಸನದಿಂದ ಶಿಕ್ಷಕಿಯ ಅಪಹರಣ| ಅತ್ತೆ ಮಗಳ ಕಿಡ್ನಾಪ್ ಮಾಡಿದ ಅಳಿಯನ ಮಾವನ ಮನೆಗೆ ಕಳುಹಿಸಿದ ಪೊಲೀಸರು

ಸಮಗ್ರ ನ್ಯೂಸ್: ಮದುವೆಗೆ ಒಪ್ಪದ ಶಿಕ್ಷಕಿಯನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಯುವತಿ ಅಪಹರಿಸಿದ್ದ ಆರೋಪಿಗಳನ್ನು ಪೊಲೀಸರು ದಕ್ಷಿಣ ಕನ್ನಡ ನೆಲ್ಯಾಡಿ ಬಳಿ ವಶಕ್ಕೆ ಪಡೆದುಕೊಂಡಿದ್ದು, ಹಾಸನಕ್ಕೆ ಆರೋಪಿಗಳು ಹಾಗೂ ಶಿಕ್ಷಕಿಯನ್ನು ಕರೆತಂದಿದ್ದಾರೆ. ಘಟನೆ ಸಂಬಂಧ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿ ಸಂಬಂಧಿ ರಾಮು ಹಾಗೂ ಆತನ ಸ್ನೇಹಿತರನ್ನು ಬಂಧನ ಮಾಡಿರುವ ಪೊಲೀಸರು ಆರೋಪಿಗಳ ವಿಚಾರಣೆಯನ್ನು ನಡೆಸಿದ್ದಾರೆ. ಏನಿದು ಪ್ರಕರಣ?ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ

ಕಡಬ: ಸಿನಿಮೀಯ ರೀತಿಯಲ್ಲಿ ಹಾಸನದಿಂದ ಶಿಕ್ಷಕಿಯ ಅಪಹರಣ| ಅತ್ತೆ ಮಗಳ ಕಿಡ್ನಾಪ್ ಮಾಡಿದ ಅಳಿಯನ ಮಾವನ ಮನೆಗೆ ಕಳುಹಿಸಿದ ಪೊಲೀಸರು Read More »

ಸುಳ್ಯ: ಪಡಿತರ ಅಕ್ಕಿಯಲ್ಲಿ ಪತ್ತೆಯಾದ ವಿಚಿತ್ರ ಕಾಳು| ಇದು ಪ್ಲಾಸ್ಟಿಕ್ ಅಕ್ಕಿಯೇ!?

ಸಮಗ್ರ ನ್ಯೂಸ್: ಸರ್ಕಾರದಿಂದ ವಿತರಿಸಲಾದ ಪಡಿತರ ಅಕ್ಕಿಯಲ್ಲಿ ಅಕ್ಕಿ ರೂಪದ ವಿಚಿತ್ರ ಕಾಳುಗಳು ಪತ್ತೆಯಾಗಿದ್ದು ನಕಲಿ ಅಕ್ಕಿಯೇ ಎಂಬ ಅನುಮಾನ ಮೂಡಿದೆ. ಸುಳ್ಯ ತಾಲೂಕಿನ ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಅಕ್ಕಿ ಪತ್ತೆಯಾಗಿದ್ದು, ಇಲ್ಲಿನ ಗ್ರಾ.ಪಂ ಸದಸ್ಯೆ ಸುಶೀಲ ಎಂಬವರು ಈ ಕುರಿತು ಮಾಹಿತಿ ನೀಡಿದ್ದಾರೆ. ಬಾಳಿಲ ಪ್ರಾ.ಕೃ.ಪ ಸಂಘದಿಂದ ವಿತರಿಸಲಾದ ಅಕ್ಕಿಯನ್ನು ಅನ್ನಮಾಡಲೆಂದು ಬಿಸಿಲಿಗೆ ಒಣಹಾಕಿದ್ದ ವೇಳೆ ಈ ಅಕ್ಕಿ ಪತ್ತೆಯಾಗಿದೆ. ವಿತರಿಸಲಾದ ಅಕ್ಕಿಯ ನಡುವೆ ಈ ವಿಚಿತ್ರ ಅಕ್ಕಿ ಪತ್ತೆಯಾಗಿದ್ದು, ನೀರಿಗೆ ಹಾಕಿದಾಗ

ಸುಳ್ಯ: ಪಡಿತರ ಅಕ್ಕಿಯಲ್ಲಿ ಪತ್ತೆಯಾದ ವಿಚಿತ್ರ ಕಾಳು| ಇದು ಪ್ಲಾಸ್ಟಿಕ್ ಅಕ್ಕಿಯೇ!? Read More »

ಕದ್ರಿ ಮಂಜುನಾಥ ದೇವಸ್ಥಾನ ಸ್ಪೋಟಿಸಲು ಸಂಚು| ಉಗ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ

ಸಮಗ್ರ ನ್ಯೂಸ್: ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಸ್ಫೋಟಿಸಲು ಸಂಚು ರೂಪಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಇಬ್ಬರು ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ನಗರದ ಎನ್‌ಐಎ ವಿಶೇಷ ಕೋರ್ಟ್‌ಗೆ ಬುಧವಾರ ಆರೋಪಪಟ್ಟಿ ಸಲ್ಲಿಸಿದೆ. ಶಿವಮೊಗ್ಗದ ಮೊಹಮ್ಮದ್ ಶಾರೀಕ್ ಮತ್ತು ಸೈಯದ್ ಶಾರೀಕ್ ಬಂಧಿತರು. ಉಗ್ರ ಸಂಘಟನೆ ಮುಖಂಡರ ಜತೆ ಆನ್‌ಲೈನ್‌ನಲ್ಲಿ ಸಂಪರ್ಕ ಹೊಂದಿದ್ದ ಇವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. ಮಂಜುನಾಥ ದೇವಸ್ಥಾನದಲ್ಲಿ ಐಇಡಿ ಬಾಂಬ್ ಸ್ಫೋಟಿಸಿ ಜನರಲ್ಲಿ

ಕದ್ರಿ ಮಂಜುನಾಥ ದೇವಸ್ಥಾನ ಸ್ಪೋಟಿಸಲು ಸಂಚು| ಉಗ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ Read More »

ಬಂದಡ್ಕ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹಾಸಭೆ| ಅಧ್ಯಕ್ಷರಾಗಿ ಸುಭಾಶ್ಚಂದ್ರ ರೈ ತೋಟ, ಪ್ರ.ಕಾರ್ಯದರ್ಶಿಯಾಗಿ ಪುರುಷೋತ್ತಮ ಬೊಡ್ಡನಕೊಚ್ಚಿ ಆಯ್ಕೆ

ಸಮಗ್ರ ನ್ಯೂಸ್: ಕೇರಳ ಗಡಿಭಾಗ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹಾಸಭೆಯು ಮೊಕ್ತೇಸರ ಬಿ.ಸದಾನಂದ ರೈ ಯವರ ಅಧ್ಯಕ್ಷತೆಯಲ್ಲಿ ನ.28 ರಂದು ನಡೆಯಿತು. ಸಭೆಯ ಆರಂಭದಲ್ಲಿ ವಾರ್ಷಿಕ ವರದಿವಾಚನ ಮತ್ತು ಲೆಕ್ಕಪತ್ರವನ್ನು ಮಂಡಿಸಲಾಯಿತು. ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.ಕ್ಷೇತ್ರದ ಮೊಕ್ತೇಸರರಾಗಿ ಬಿ. ಸದಾನಂದ ರೈ, ಅಧ್ಯಕ್ಷ ಬಿ. ಸುಭಾಶ್ಚಂದ್ರ ರೈ ತೋಟ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬೊಡ್ಡನಕೊಚ್ಚಿ, ಕೋಶಾಧಿಕಾರಿ ಐ.ಮೋನಪ್ಪ ಗೌಡ ರವರನ್ನು ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರುಗಳನ್ನಾಗಿ ಪಿ.

ಬಂದಡ್ಕ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹಾಸಭೆ| ಅಧ್ಯಕ್ಷರಾಗಿ ಸುಭಾಶ್ಚಂದ್ರ ರೈ ತೋಟ, ಪ್ರ.ಕಾರ್ಯದರ್ಶಿಯಾಗಿ ಪುರುಷೋತ್ತಮ ಬೊಡ್ಡನಕೊಚ್ಚಿ ಆಯ್ಕೆ Read More »

ಬಂಟ್ವಾಳ: ಒಂದೇ ದಿನ ನಾಪತ್ತೆಯಾದ ಯುವ ಜೋಡಿ ಕಾಂಞಗಾಡ್ ನಲ್ಲಿ ಪತ್ತೆ

ಸಮಗ್ರ ನ್ಯೂಸ್: ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯಲ್ಲಿದ್ದ ಯುವಕ ಹಾಗೂ ಯುವತಿ ಕೇರಳದಲ್ಲಿ ಪತ್ತೆಯಾಗಿದ್ದು ಅವರನ್ನು ಹುಡುಕಿದ ಪೊಲೀಸರು ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ್ದಾರೆ. ನವೆಂಬರ್ 24 ರಂದು ಶುಕ್ರವಾರ ಮುಂಜಾನೆ ಮನೆಯವರಿಗೆ ಗೊತ್ತಿಲ್ಲದಂತೆ ಪರಾರಿಯಾಗಿದ್ದ ನವಜೋಡಿಗಳು ಕೇರಳ ರಾಜ್ಯದ ಕಾಂಞಗಾಡ್ ಎಂಬಲ್ಲಿ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ಉದ್ದೋಟ್ಟು ನಿವಾಸಿ ಅಬ್ದುಲ್ ಹಮೀದ್ ಅವರ ಮಗಳು ಆಯಿಸತ್ ರಸ್ಮಾ (18) ಹಾಗೂ ಹೈದರ್ ಎಂಬವರ ಮಗ ಮಹಮ್ಮದ್ ಸಿನಾನ್ (

ಬಂಟ್ವಾಳ: ಒಂದೇ ದಿನ ನಾಪತ್ತೆಯಾದ ಯುವ ಜೋಡಿ ಕಾಂಞಗಾಡ್ ನಲ್ಲಿ ಪತ್ತೆ Read More »