ರಾಜ್ಯ

ರಾಜ್ಯದಲ್ಲಿ ಮತ್ತೊಂದು ಹೇಯ ಕೃತ್ಯ| ಟಿವಿ ತೋರಿಸುವ ನೆಪದಲ್ಲಿ 3 ವರ್ಷದ ಕಂದಮ್ಮನ ಅತ್ಯಾಚಾರ|

ಶಿವಮೊಗ್ಗ: 3 ವರ್ಷದ ಕಂದಮ್ಮನ ಮೇಲೆ ಪಕ್ಕದ ಮನೆಯ ಯುವಕನೇ ಅತ್ಯಾಚಾರವೆಸಗಿರುವ ಘೋರ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ. ಮಗುವಿಗೆ ಟಿವಿ ತೋರಿಸುವ ಆಮಿಷವೊಡ್ಡಿ ಕರೆದೊಯ್ದ ನೆರೆಮನೆ ಯುವಕ ಬಳಿಕ ನೀಚ ಕೃತ್ಯವೆಸಗಿದ್ದಾನೆ. ಮಗುವಿಗೆ ರಕ್ತಸ್ರಾವವಾಗುತ್ತಿರುವುದನ್ನು ಕಂಡ ಪೋಷಕರು ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಕೃತ್ಯದ ಬಗ್ಗೆ ಗೊತ್ತಾಗಿದೆ. ಆರೋಪಿ ಯುವಕನನ್ನು ಹಿಡಿದು ಪೋಷಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಮತ್ತೊಂದು ಹೇಯ ಕೃತ್ಯ| ಟಿವಿ ತೋರಿಸುವ ನೆಪದಲ್ಲಿ 3 ವರ್ಷದ ಕಂದಮ್ಮನ ಅತ್ಯಾಚಾರ| Read More »

ಧಾರವಾಡ: ಖ್ಯಾತ ತಬಲಾ ಕಲಾವಿದ ಪಂ. ಷಡಾಕ್ಷರಯ್ಯ ಗುಡ್ಡದಮಠ ನಿಧನ

ಧಾರವಾಡ: ಉತ್ತರ ಕರ್ನಾಟಕದ ಪ್ರಸಿದ್ಧ ತಬಲಾ ಕಲಾವಿದ ಪಂ. ಷಡಾಕ್ಷರಯ್ಯ ಗುಡ್ಡದಮಠ (74) ಇಂದು (ಗುರುವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಪಂ.ಷಡಕ್ಷರಯ್ಯ ಅವರು ಪತ್ನಿ, ಪುತ್ರ, ಪುತ್ರಿ, ಅಪಾರ ಬಂದು ಬಳಗ ಹಾಗೂ ಶಿಷ್ಯ ವೃಂದವನ್ನು ಅಗಲಿದ್ದಾರೆ. ಪಂ.ಷಡಕ್ಷರಯ್ಯ ಅವರು ರಾಜ್ಯ ಹಾಗೂ ದೇಶದ ವಿವಿಧ ಭಾಗದಲ್ಲಿ ತಬಲಾ ಕಾರ್ಯಕ್ರಮ ನೀಡಿದ್ದರು. ಅವರ ತಬಲಾ ಸೇವೆಗೆ ವಿವಿಧ ಪ್ರಶಸ್ತಿ, ಪುರಸ್ಕಾರ ಒಲಿದು ಬಂದಿವೆ. ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.

ಧಾರವಾಡ: ಖ್ಯಾತ ತಬಲಾ ಕಲಾವಿದ ಪಂ. ಷಡಾಕ್ಷರಯ್ಯ ಗುಡ್ಡದಮಠ ನಿಧನ Read More »

ವಿಧಾನ ಪರಿಷತ್ ಚುನಾವಣೆ| ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರಕುಮಾರ್| ಬಿಜೆಪಿ-ಕಾಂಗ್ರೇಸ್ ಗೆ ಬಿಸಿ ತುಪ್ಪವಾಗುವುದೇ ಈ ಬೆಳವಣಿಗೆ?

ಉಡುಪಿ: ಸ್ಥಳೀಯಾಡಳಿತ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣಾ ಕಣಕ್ಕೆ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸಹಕಾರಿ ಧುರೀಣ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಬಗ್ಗೆ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ರಾಜಕೀಯ ಪಕ್ಷಗಳಿಗೆ ಹೊಸ ತಲೆನೋವು ಶುರುವಾಗಿದೆ. ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರೂ ಆಗಿರುವ ರಾಜೇಂದ್ರ ಕುಮಾರ್, ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ‌ಆದರೆ ಯಾವುದೇ ಒಂದು ಪಕ್ಷದಿಂದ ಸ್ಪರ್ಧಿಸಲ್ಲ. ಸ್ಪರ್ಧಿಸಿದರೆ ಪಕ್ಷೇತರ ಅಭ್ಯರ್ಥಿಯಾಗಿ

ವಿಧಾನ ಪರಿಷತ್ ಚುನಾವಣೆ| ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರಕುಮಾರ್| ಬಿಜೆಪಿ-ಕಾಂಗ್ರೇಸ್ ಗೆ ಬಿಸಿ ತುಪ್ಪವಾಗುವುದೇ ಈ ಬೆಳವಣಿಗೆ? Read More »

ದುಬೈ ಶೇಖ್..! ಟಿಪ್ಪು ಸುಲ್ತಾನ್..! ನಾನಾ ವೇಷದಲ್ಲಿ ಮೆರೆದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೊನ್ನೆಯಷ್ಟೇ ದುಬೈ ಶೇಖ್​ ರೀತಿ ಕಾಣಿಸಿಕೊಂಡಿದ್ದರು. ಇಂದು ಟಿಪ್ಪು ಜಯಂತಿಯ ಅಂಗವಾಗಿ ಟಿಪ್ಪು ಟೋಪಿ, ಶಾಲು ಧರಿಸಿ ಕಾಣಿಸಿಕೊಂಡರು. ಸಿದ್ದರಾಮಯ್ಯ ಅವರ ಈ ವಿಭಿನ್ನ ವೇಷಗಳು ಸಾಕಷ್ಟು ಮಂದಿಯನ್ನು ಆಕರ್ಷಿಸಿದ್ದರೆ, ಬಿಜೆಪಿ ಹಾಗೂ ಸಂಘಪರಿವಾರದಲ್ಲಿ ಸಿದ್ದು ವೇಷ ಟ್ರೋಲ್ ಆಗಿದೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ, “ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ವೀರ ಮರಣ ಅಪ್ಪಿದ್ದರು. ಇಂತಹ ತ್ಯಾಗ ಮಾಡಿದ

ದುಬೈ ಶೇಖ್..! ಟಿಪ್ಪು ಸುಲ್ತಾನ್..! ನಾನಾ ವೇಷದಲ್ಲಿ ಮೆರೆದ ಮಾಜಿ ಸಿಎಂ ಸಿದ್ದರಾಮಯ್ಯ Read More »

‘ದೇಹ ಕೊಟ್ಟು ಉಪಕಾರ ಮಾಡಬಲ್ಲೆ, ನಾನೊಬ್ಬ ಮುಸ್ಲಿಂ’ ಎಂದು ಮಹಿಳೆ ಕೈಗೆ ಮಗು ಕೊಟ್ಟು ಪರಾರಿಯಾದ ಬಳ್ಳಾರಿ ಸಬ್ ರಿಜಿಸ್ಟ್ರಾರ್

ಬಳ್ಳಾರಿ: ತಾನೊಬ್ಬ ಮುಸ್ಲಿಂ, ಅವಿವಾಹಿತ ಎಂದು ಮುಸ್ಲಿಂ ಹೆಸರು ಹೇಳಿಕೊಂಡು ಮುಸ್ಲಿಂ ಯುವತಿಯನ್ನು ನಂಬಿಸಿ ದೈಹಿಕ ಸಂಪರ್ಕ ನಡೆಸಿ, ಮದುವೆಯನ್ನೂ ಆಗಿ ನಂತರ ಮಗುವಾದ ಮೇಲೆ ಬಳ್ಳಾರಿ ಸಬ್ ರಿಜಿಸ್ಟ್ರಾರ್ ಪರಾರಿಯಾಗಿರುವುದಾಗಿ ಯುವತಿ ದೂರಿದ್ದಾರೆ. ಮಗುವನ್ನು ಹಿಡಿದುಕೊಂಡು ತನಗೆ ನ್ಯಾಯ ಕೊಡಿಸಿ ಎಂದು ಯುವತಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ‘ಬಳ್ಳಾರಿ ಸಬ್ ರಿಸ್ಟ್ರಾರ್ ಉಮೇಶ್ ತಮ್ಮ ಹೆಸರನ್ನು ರೆಹಾನ್ ಅಹಮದ್ ಎಂದು ಹೇಳಿಕೊಂಡು ನನ್ನನ್ನು ನಂಬಿಸಿದರು. ತಾವು ಮೊದಲೇ ಮದುವೆಯಾಗಿರುವ ವಿಷಯ ಕೂಡ ಹೇಳಿರಲಿಲ್ಲ. ಅವರನ್ನು ನಾನು

‘ದೇಹ ಕೊಟ್ಟು ಉಪಕಾರ ಮಾಡಬಲ್ಲೆ, ನಾನೊಬ್ಬ ಮುಸ್ಲಿಂ’ ಎಂದು ಮಹಿಳೆ ಕೈಗೆ ಮಗು ಕೊಟ್ಟು ಪರಾರಿಯಾದ ಬಳ್ಳಾರಿ ಸಬ್ ರಿಜಿಸ್ಟ್ರಾರ್ Read More »

ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ ನಡೆಸಲು ಉದ್ದೇಶಿಸಿದ್ದ ವಿಎಚ್ ಪಿ| ಹಲವರನ್ನು ಬಂಧಿಸಿದ ಪೊಲೀಸರು|

ಮಡಿಕೇರಿ: ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ ನಡೆಸಲು ಉದ್ದೇಶಿಸಿದ್ದ ವಿಶ್ವ ಹಿಂದೂ ಕಾರ್ಯಾಧ್ಯಕ್ಷ ಸೇರಿದಂತೆ ಹಿಂದೂ ಜಾಗರಣ ವೇದಿಕೆಯ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಓಂಕಾರೇಶ್ವರ ದೇಗುಲದಲ್ಲಿ ಶಾಂತಿಪೂಜೆ ನೆರವೇರಿಸಿ ಹೊರಬರುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮವಾಗಿ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಕೃಷ್ಣಮೂರ್ತಿ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಬಂಧನ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಹಾಗೂ ವಿಎಚ್‌ಪಿ ಮುಖಂಡರು ಆಕ್ರೋಶ ಹೊರಹಾಕಿದರು. 2015ರ ನವೆಂಬರ್ 10ರಂದು ನಗರದಲ್ಲಿ ನಡೆದಿದ್ದ ಟಿಪ್ಪು ಜಯಂತಿ ವೇಳೆ ಮೃತಪಟ್ಟಿದ್ದ ದೇವಪ್ಪಂಡ

ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ ನಡೆಸಲು ಉದ್ದೇಶಿಸಿದ್ದ ವಿಎಚ್ ಪಿ| ಹಲವರನ್ನು ಬಂಧಿಸಿದ ಪೊಲೀಸರು| Read More »

ಬೆಂಗಳೂರಿಗರೇ ನಾಯಿ ಸಾಕ್ತಿದೀರಾ? ಹಾಗಿದ್ದಲ್ಲಿ ಈ ಸ್ಟೋರಿ ಓದ್ಲೇಬೇಕು.

ಬೆಂಗಳೂರು; ಬೀದಿನಾಯಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಆಗಾಗ ಸುದ್ದಿಯಾಗುತ್ತದೆ. ಈಗ ಸಾಕುನಾಯಿಗಳ ವಿಚಾರಕ್ಕೆ ಸುದ್ದಿಯಾಗಿದೆ. ಬಿಬಿಎಂಪಿ ಜಾರಿಗೆ ತರಲಿರುವ ನಿಯಮ ಶ್ವಾನ ಪ್ರಿಯರ ನಡುವೆ ಚರ್ಚೆ ಹುಟ್ಟುಹಾಕಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾಯಿಗಳನ್ನು ಸಾಕಲು ಲೈಸೆನ್ಸ್ ಕಡ್ಡಾಯಗೊಳಿಸಲಿದೆ ಮತ್ತು ನಾಯಿಯ ಮಾಲೀಕರು ಸಹ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದೆ. ಈ ನಿಯಮದ ಕರಡು ಪ್ರತಿ ಸಿದ್ಧವಾಗಿದೆ. ಬಿಬಿಎಂಪಿ ಕಾಯ್ದೆಗಳು 2020ರ ಅನ್ವಯ ನಾಯಿ ಸಾಕಲು ಲೈಸೆನ್ಸ್, ನಾಯಿ ಮಾಲೀಕರ ನೋಂದಣಿ ನಿಯಮ ಜಾರಿಗೊಳಿಸಲಾಗುತ್ತಿದೆ. ಲೈಸೆನ್ಸ್‌ ಪಡೆದಿರುವ ನಾಯಿಗಳಿಗೆ

ಬೆಂಗಳೂರಿಗರೇ ನಾಯಿ ಸಾಕ್ತಿದೀರಾ? ಹಾಗಿದ್ದಲ್ಲಿ ಈ ಸ್ಟೋರಿ ಓದ್ಲೇಬೇಕು. Read More »

ಮಲೆಯಾಳಂ ಹಿರಿಯ ನಟಿ‌ ಲಲಿತಾ ಆಸ್ಪತ್ರೆಗೆ ದಾಖಲು

ಕೊಚ್ಚಿ: ಮಲಯಾಳಂನ ಹಿರಿಯ ನಟಿ ಕೆಪಿಎಸಿ ಲಲಿತಾ ಅವರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೇರಳ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆಯೂ ಆಗಿರುವ 74 ವರ್ಷದ ನಟಿ ಕೆಲವು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ತ್ರಿಶೂರ್‌ನ ಆಸ್ಪತ್ರೆಗೆ ದಾಖಲಾಗಿದ್ದಾರೆ . ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿ ಎಡವೇಲಾ ಬಾಬು ಮಾಹಿತಿ ನೀಡಿದ್ದು ‘ಅವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದರು. ಅವರು ಈಗ ಕೊಚ್ಚಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಇಂದು ಅವರ ಸ್ಥಿತಿ ಉತ್ತಮವಾಗಿದೆ. ಅವರು ಮಧುಮೇಹಿ ಮತ್ತು

ಮಲೆಯಾಳಂ ಹಿರಿಯ ನಟಿ‌ ಲಲಿತಾ ಆಸ್ಪತ್ರೆಗೆ ದಾಖಲು Read More »

ಮುಂದಿನ ವಾರದಿಂದ ಮಕ್ಕಳಿಗೂ ಕೋವಿಡ್ ಲಸಿಕೆ ಹಂಚಿಕೆ, ಕೇಂದ್ರದಿಂದ ಲಸಿಕೆ ಪೂರೈಕೆ ನಿರೀಕ್ಷೆ – ಸಚಿವ ಡಾ.ಸುಧಾಕರ್

ಬೆಂಗಳೂರು : ಮುಂದಿನ ವಾರದಿಂದ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಝೈಡಸ್ ಕ್ಯಾಡಿಲಾ ಕಂಪನಿಯು ಅಭಿವೃದ್ಧಿಪಡಿಸಿರುವ ಝೈಕೋವ್ ಡಿ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಒಂದು ಕೋಟಿ ಡೋಸ್ ಲಸಿಕೆ ಖರೀದಿಗೆ ತೀರ್ಮಾನಿಸಲಾಗಿದ್ದು,ಕೇಂದ್ರ ಸರ್ಕಾರದಿಂದ ಲಸಿಕೆ ಪೂರೈಕೆಯಾಗುತ್ತಲೇ ರಾಜ್ಯಾದ್ಯಂತ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಶೇ. 89 ರಷ್ಟು ಜನರಿಗೆ ಕೊರೊನಾ ಮೊದಲ ಡೋಸ್ ನೀಡಲಾಗಿದೆ. ಶೇ. 48 ರಷ್ಟು

ಮುಂದಿನ ವಾರದಿಂದ ಮಕ್ಕಳಿಗೂ ಕೋವಿಡ್ ಲಸಿಕೆ ಹಂಚಿಕೆ, ಕೇಂದ್ರದಿಂದ ಲಸಿಕೆ ಪೂರೈಕೆ ನಿರೀಕ್ಷೆ – ಸಚಿವ ಡಾ.ಸುಧಾಕರ್ Read More »

ಇಂದು ‘ಅಪ್ಪು’ ಪುಣ್ಯತಿಥಿ, ಆಟೋರಾಜ ‘ಶಂಕರ್ ನಾಗ್’ ಜನ್ಮದಿನ| ಕನ್ನಡ ಜನತೆಯ ಮನದಲ್ಲಿ ಮರೆಯದ ಮಾಣಿಕ್ಯಗಳು

ಬೆಂಗಳೂರು: ನಟ, ನಿರ್ದೇಶಕ ಶಂಕರ್​ನಾಗ್​ ಜನ್ಮದಿನ ಇಂದು. ಅವರು ಅಭಿಮಾನಿಗಳಿಂದ ಭೌತಿಕವಾಗಿ ದೂರಾಗಿ 31 ವರ್ಷ ಕಳೆದರೂ ಇನ್ನು ಅವರ ನೆನಪು ಅಜರಾಮರ. ರಾಷ್ಟ್ರಮಟ್ಟದಲ್ಲಿ ತಮ್ಮ ಅದ್ಬುತ ನಿರ್ದೇಶನ, ದೂರದೃಷ್ಟಿಗಳಿಂದ ಜನಮನ್ನಣೆ ಪಡೆದವರು ಶಂಕರ್​. ಕನ್ನಡಿಗರ ಮನದ ರಾಜರತ್ನನಾಗಿದ್ದ ಪುನೀತ್​ ರಾಜ್​ಕುಮಾರ್​ ಅಗಲಿ 12 ದಿನ ಕಳೆದಿದ್ದರೂ ಅಭಿಮಾನಿಗಳ ನೋವು ಮಾತ್ರ ಕಡಿಮೆಯಾಗುತ್ತಲೇ ಇಲ್ಲ. 46 ಪ್ರಾಯದಲ್ಲೇ ಹೃದಯಾಘಾತದಿಂದ ಅಭಿಮಾನಿಗಳಿಂದ ದೂರಾದ ಪ್ರೀತಿಯ ಅಪ್ಪು ಕಳೆದುಕೊಂಡ ನೋವು ಪ್ರತಿಮನೆಯಲ್ಲೂ ಕುಟುಂಬದ ಸದಸ್ಯನ ಕಳೆದುಕೊಂಡ ನೋವಿನಂತೆ ಆಗಿದೆ. ಇರುವುದೊಂದು

ಇಂದು ‘ಅಪ್ಪು’ ಪುಣ್ಯತಿಥಿ, ಆಟೋರಾಜ ‘ಶಂಕರ್ ನಾಗ್’ ಜನ್ಮದಿನ| ಕನ್ನಡ ಜನತೆಯ ಮನದಲ್ಲಿ ಮರೆಯದ ಮಾಣಿಕ್ಯಗಳು Read More »