ರಾಜ್ಯ

ಡ್ರಾಮಾ ಜ್ಯೂನಿಯರ್ ಖ್ಯಾತಿಯ ಸೂರಜ್ ನ ಅಜ್ಜಿ ಲಕ್ಷ್ಮಿ ನಾಯ್ಕ್ ಇನ್ನಿಲ್ಲ| ‘ರೀಲ್ಸ್ ಅಜ್ಜಿ’ ಇನ್ನು ನೆನಪು ಮಾತ್ರ

ಸಮಗ್ರ ನ್ಯೂಸ್: ಸಾಮಾನ್ಯವಾಗಿ ವಯಸ್ಸು ತೊಂಬತ್ತು ದಾಟಿದರೆ ಜೀವನದ ಉತ್ಸಾಹ ಕುಂದುತ್ತದೆ ಎನ್ನುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಈ ಅಜ್ಜಿ ಮಾತ್ರ ಇದಕ್ಕೆ ಅಪವಾದವಾಗಿದ್ದರು. ತಮ್ಮ ಮುಗ್ಧ ನಟನೆ ಮತ್ತು ಕಚಗುಳಿ ಇಡುವ ಸಂಭಾಷಣೆಗಳ ಮೂಲಕ ಲಕ್ಷಾಂತರ ಜನರ ಮನಗೆದ್ದಿದ್ದ ‘ರೀಲ್ಸ್ ಅಜ್ಜಿ’ ಲಕ್ಷ್ಮಿ ನಾಯ್ಕ (93) ಇಂದು ನೆನಪು ಮಾತ್ರ. ಲಕ್ಷ್ಮಿ ಅಜ್ಜಿಯ ಸೋಷಿಯಲ್ ಮೀಡಿಯಾ ಜರ್ನಿ ಶುರುವಾಗಿದ್ದು ಅವರ ಮರಿಮೊಮ್ಮಗ, ‘ಡ್ರಾಮಾ ಜ್ಯೂನಿಯರ್ಸ್’ ಖ್ಯಾತಿಯ ಸೂರಜ್ ಆಚಾರಿ ಮೂಲಕ. ಸರಿಯಾಗಿ ಕಿವಿ […]

ಡ್ರಾಮಾ ಜ್ಯೂನಿಯರ್ ಖ್ಯಾತಿಯ ಸೂರಜ್ ನ ಅಜ್ಜಿ ಲಕ್ಷ್ಮಿ ನಾಯ್ಕ್ ಇನ್ನಿಲ್ಲ| ‘ರೀಲ್ಸ್ ಅಜ್ಜಿ’ ಇನ್ನು ನೆನಪು ಮಾತ್ರ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಮಾರ್ಚ್ ತಿಂಗಳ ಕೊನೆಯ ವಾರದಲ್ಲಿದ್ದೇವೆ. ಈ ವಾರ ಯಾವ ರಾಶಿಯ ಫಲ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ 12 ರಾಶಿಗಳ ಸುಖ, ದುಃಖ, ಆರೋಗ್ಯ, ಹಣಕಾಸು, ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ ಹಾಗೂ ವೃತ್ತಿ ಜೀವನ ಸೇರಿದಂತೆ ಎಲ್ಲಾ ವಿಷಯಗಳು ಹೇಗೆ ಇರಲಿವೆ ಎಂದು ತಿಳಿಯೋಣ. ಮೇಷ: ಮೇಷ ರಾಶಿಗೆ ದ್ವಾದಶದಲ್ಲಿ ರವಿ, ಶನಿಯಿದ್ದು ಹಾಗೂ ಶನಿ ಸಂಚಾರ ಕಾಲದಲ್ಲಿ ಸಮಯಕ್ಕೆ ಕೆಲಸಗಳು ಆಗದಿರುವುದು ಚಿಂತೆಗೀಡು ಮಾಡುತ್ತದೆ. ಗುರುವು

ದ್ವಾದಶ ರಾಶಿಗಳ ವಾರಭವಿಷ್ಯ Read More »

ಐಪಿಎಲ್ ಕ್ರಿಕೆಟ್| ಪಡಿಕ್ಕಲ್ ಬ್ಯಾಟಿಂಗ್ ಎದುರು ಮುಗ್ಗರಿಸಿದ ಸನ್ ರೈಸರ್ಸ್| ಶುಭಾರಂಭ ಮಾಡಿದ ಆರ್ ಸಿಬಿ

ಸಮಗ್ರ ನ್ಯೂಸ್: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹನ್ನೊಂದು ತಿಂಗಳ ಬಳಿಕ ಮತ್ತೆ ಕ್ರಿಕೆಟ್ ಹಬ್ಬ ಕಳೆಗಟ್ಟಿದೆ. ಮೈದಾನದೆಲ್ಲೆಡೆ ಕೆಂಪು ಸಾಗರವೇ ಹರಿದುಬಂದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಮ್ಮ ನೆಚ್ಚಿನ ತಂಡಕ್ಕೆ ಜೈಕಾರ ಹಾಕಿದರು. ಡಿಜೆ ಸಂಗೀತದ ಅಬ್ಬರ ಹಾಗೂ ದಿವಂಗತ ಪುನೀತ್ ರಾಜಕುಮಾರ್ ಅವರ ನೆನಪಿನ ಹಾಡುಗಳು ಕ್ರೀಡಾಂಗಣದಲ್ಲಿ ಮಾರ್ದನಿಸಿದವು 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಹಾಲಿ ಚಾಂಪಿಯನ್ ಆರ್ ಸಿ ಬಿ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6

ಐಪಿಎಲ್ ಕ್ರಿಕೆಟ್| ಪಡಿಕ್ಕಲ್ ಬ್ಯಾಟಿಂಗ್ ಎದುರು ಮುಗ್ಗರಿಸಿದ ಸನ್ ರೈಸರ್ಸ್| ಶುಭಾರಂಭ ಮಾಡಿದ ಆರ್ ಸಿಬಿ Read More »

ಇಂದಿನಿಂದ ಐಪಿಎಲ್ ಹಂಗಾಮ| ಬೆಂಗಳೂರಿನಲ್ಲಿ ನಡೆಯಲಿದೆ RCB V/s SRH ನಡುವೆ ಉದ್ಘಾಟನಾ ಪಂದ್ಯ

ಸಮಗ್ರ ನ್ಯೂಸ್: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶನಿವಾರ (ಮಾ.28) ತನ್ನ ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುವ ಮೂಲಕ 2026ರ ಆವೃತ್ತಿಯ ಐಪಿಎಲ್ ಹಬ್ಬಕ್ಕೆ ಚಾಲನೆ ಸಿಗಲಿದೆ. ಚಾಂಪಿಯನ್ಸ್ ತಂಡಗಳು ಹಾಗೂ ಸ್ಟಾರ್ ಆಟಗಾರರು ತಮ್ಮ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಆರ್‌ಸಿಬಿ ತಂಡವು 2026ರ ಐಪಿಎಲ್‌ಗಾಗಿ ಅಬುಧಾಬಿಯಲ್ಲಿ ನಡೆದಿದ್ದ ಮಿನಿ ಹರಾಜಿನ ವೇಳೆ ತನ್ನ 17 ಆಟಗಾರರನ್ನು ಉಳಿಸಿಕೊಂಡಿತ್ತು. ಇದೇ ಮೊದಲ ಬಾರಿ ಹಾಲಿ ಚಾಂಪಿಯನ್ ಆಗಿ ಪ್ರಸಕ್ತ

ಇಂದಿನಿಂದ ಐಪಿಎಲ್ ಹಂಗಾಮ| ಬೆಂಗಳೂರಿನಲ್ಲಿ ನಡೆಯಲಿದೆ RCB V/s SRH ನಡುವೆ ಉದ್ಘಾಟನಾ ಪಂದ್ಯ Read More »

ಬೆಳ್ತಂಗಡಿ: ಬೆಳಾಲು ಸೊಸೈಟಿ ವಂಚನೆ ಪ್ರಕರಣ| ತಲೆ ಮರೆಸಿಕೊಂಡಿದ್ದ ಸಿಬ್ಬಂದಿ ಅರೆಸ್ಟ್

ಸಮಗ್ರ ನ್ಯೂಸ್: ಬೆಳಾಲು ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ನಡೆದ ಸುಮಾರು 2 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿಯನ್ನು ಧರ್ಮಸ್ಥಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಳಾಲು ನಿವಾಸಿ ಪ್ರಶಾಂತ್ ಬಿ. ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸದಾಶಿವ ಯಾನೆ ಸುಜಿತ್ ಅವರನ್ನು ಪೊಲೀಸರು ಬಂಧಿಸಿದ್ದರು. ಇನ್ನೊಬ್ಬ ಆರೋಪಿಯಾಗಿದ್ದ ಪ್ರಶಾಂತ್ ಕಳೆದ ಕೆಲವು ದಿನಗಳಿಂದ ಪರಾರಿಯಾಗಿದ್ದನು. ಪೊಲೀಸರ ಮಾಹಿತಿ ಪ್ರಕಾರ, ಸಹಕಾರಿ ಸಂಘದ ಸಿಬ್ಬಂದಿಗಳಾದ ಸದಾಶಿವ ಯಾನೆ ಸುಜಿತ್ ಹಾಗೂ ಪ್ರಶಾಂತ್

ಬೆಳ್ತಂಗಡಿ: ಬೆಳಾಲು ಸೊಸೈಟಿ ವಂಚನೆ ಪ್ರಕರಣ| ತಲೆ ಮರೆಸಿಕೊಂಡಿದ್ದ ಸಿಬ್ಬಂದಿ ಅರೆಸ್ಟ್ Read More »

‘ಶಿಳ್ಳೆ ಹಾಕಿದ್ದು ಯಾರು? ಇಷ್ಟವಿಲ್ಲದಿದ್ರೆ ಬನ್ಸ್ ತಿಂದು ಹೋಗಿ”| ಯಕ್ಷರಂಗದಿಂದಲೇ ಪ್ರೇಕ್ಷಕರ ವಿರುದ್ಧ ಕಲಾವಿದ ಅಶೋಕ್ ಭಟ್ ಉಜಿರೆ ಗರಂ

ಸಮಗ್ರ ನ್ಯೂಸ್: ಕುಂದಾಪುರದ ಹೆನ್ನಾಬೈಲಿನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನದ ವೇಳೆ ಕಲಾವಿದ ಉಜಿರೆ ಅಶೋಕ್ ಭಟ್ ಪ್ರೇಕ್ಷಕರ ವಿರುದ್ಧ ಗರಂ ಆಗಿದ್ದಾರೆ. ಭಾಗವತರು ಪದ್ಯಗಳೊಂದಿಗೆ ಆಲಾಪನೆ ನಡೆಸುತ್ತಿದ್ದಾಗ, ಕೆಲ ಪ್ರೇಕ್ಷಕರು ಶಿಳ್ಳೆ ಹಾಕಿದಿದ್ದರು. ಪದ್ಯ ಮುಗಿದ ಬಳಿಕ ಕೃಷ್ಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಅಶೋಕ್ ಭಟ್, ವೇದಿಕೆಯಲ್ಲೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗುತ್ತೇನೆ. ಇದು ಯಕ್ಷಗಾನವೋ? ಕಂಬಳವೋ? ನಿಮಗೆ ಈ ಕ್ಷೇತ್ರದ ಮೌಲ್ಯ ಗೊತ್ತಿದೆಯೇ?”

‘ಶಿಳ್ಳೆ ಹಾಕಿದ್ದು ಯಾರು? ಇಷ್ಟವಿಲ್ಲದಿದ್ರೆ ಬನ್ಸ್ ತಿಂದು ಹೋಗಿ”| ಯಕ್ಷರಂಗದಿಂದಲೇ ಪ್ರೇಕ್ಷಕರ ವಿರುದ್ಧ ಕಲಾವಿದ ಅಶೋಕ್ ಭಟ್ ಉಜಿರೆ ಗರಂ Read More »

ಎಸ್ಎಸ್ಎಲ್ ಸಿ ಪರೀಕ್ಷೆ ಅಂಕಗಳಲ್ಲಿ ಭಾರೀ ಬದಲಾವಣೆ| ಹಿಂದಿ ಭಾಷೆಗಿಲ್ಲ ಅಂಕ ಮಾನ್ಯತೆ; ಗ್ರೇಡ್ ಗೆ ಮಾತ್ರ ಸೀಮಿತ

ಸಮಗ್ರ ನ್ಯೂಸ್: ಕರ್ನಾಟಕ ಶಿಕ್ಷಣ ಇಲಾಖೆಯು SSLC ಪರೀಕ್ಷಾ ಪದ್ಧತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ತೃತೀಯ ಭಾಷೆಯನ್ನು ಕೇವಲ ‘ಗ್ರೇಡಿಂಗ್’ ವಿಷಯವನ್ನಾಗಿ ಪರಿವರ್ತಿಸುವ ಮೂಲಕ, ಒಟ್ಟು ಅಂಕಗಳನ್ನು 625 ರಿಂದ 525 ಕ್ಕೆ ಇಳಿಸಿದೆ. ಇದರಿಂದ ವಿದ್ಯಾರ್ಥಿಗಳ ಶೇಕಡಾವಾರು ಅಂಕಗಳ ಲೆಕ್ಕಾಚಾರ ಸುಲಭವಾಗಲಿದ್ದು, ತೃತೀಯ ಭಾಷೆಯ ಅಂಕಗಳ ಆತಂಕ ದೂರವಾಗಲಿದೆ. ರಾಜ್ಯದಲ್ಲಿ ಎಸ್​​ಎಸ್​ಎಲ್​​ಸಿ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಶಿಕ್ಷಣ ಇಲಾಖೆ ಎಸ್​​ಎಸ್​ಎಲ್​​ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗೆ ಮುಂದಾಗಿದೆ. ಇನ್ನು ಮುಂದೆ ತೃತೀಯ ಭಾಷೆಯ (ಹಿಂದಿ, ಅರೇಬಿಕ್, ಉರ್ದು,

ಎಸ್ಎಸ್ಎಲ್ ಸಿ ಪರೀಕ್ಷೆ ಅಂಕಗಳಲ್ಲಿ ಭಾರೀ ಬದಲಾವಣೆ| ಹಿಂದಿ ಭಾಷೆಗಿಲ್ಲ ಅಂಕ ಮಾನ್ಯತೆ; ಗ್ರೇಡ್ ಗೆ ಮಾತ್ರ ಸೀಮಿತ Read More »

ಮಹಾವೀರ ಜಯಂತಿ ರಜೆ ಬದಲಾವಣೆ ಹಿನ್ನೆಲೆ| ಎಸ್ಎಸ್ಎಲ್ ಸಿ ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ

ಸಮಗ್ರ ನ್ಯೂಸ್: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಪರೀಕ್ಷಾ ಬೋರ್ಡ್‌ ಮಾಹಿತಿ ನೀಡಿದೆ. ಮಹಾವೀರ ಜಯಂತಿ ರಜೆ ಹಿಂದೂಡಿಕೆ ಮಾಡಿದ ಹಿನ್ನೆಲೆ ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾ.31ಕ್ಕೆ ಮುಂದೂಡಿಕೆ ಮಾಡಿದೆ. ಈ ಮೊದಲು ಮಾ.31ಕ್ಕೆ ರಜೆಯಿದ್ದ ಹಿನ್ನೆಲೆ ಮಾ.30ಕ್ಕೆ ಹಿಂದಿ ಪರೀಕ್ಷೆ ನಿಗದಿಯಾಗಿತ್ತು. ಇದೀಗ ಸರ್ಕಾರ ಪರಿಷ್ಕರಣೆ ಮಾಡಿ, ಮಾ.31ರ ರಜೆಯನ್ನು ಮಾ.30ಕ್ಕೆ ಘೋಷಿಸಿದೆ. ಹೀಗಾಗಿ ಪರೀಕ್ಷಾ ದಿನಾಂಕವನ್ನು ಬದಲಿಸಿ, ಮಾ.31ಕ್ಕೆ ನಡೆಸಲು ತೀರ್ಮಾನಿಸಿದೆ.ಮಾಧ್ಯಮಗಳಿಗೆ

ಮಹಾವೀರ ಜಯಂತಿ ರಜೆ ಬದಲಾವಣೆ ಹಿನ್ನೆಲೆ| ಎಸ್ಎಸ್ಎಲ್ ಸಿ ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ Read More »

ಮಹಾವೀರ ಜಯಂತಿ ರಜೆ ಮಾ.30ಕ್ಕೆ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರವು 2026ನೇ ಸಾಲಿನ ಮಹಾವೀರ ಜಯಂತಿ ಸಾರ್ವಜನಿಕ ರಜೆಯ ದಿನಾಂಕದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಈ ಮೊದಲು ಮಾರ್ಚ್ 31ರ ಮಂಗಳವಾರ ರಜೆ ಎಂದು ಘೋಷಿಸಲಾಗಿತ್ತು, ಆದರೆ ಈಗ ಅದನ್ನು ಒಂದು ದಿನ ಮುಂಚಿತವಾಗಿ ಅಂದರೆ ಮಾರ್ಚ್ 30ರ ಸೋಮವಾರಕ್ಕೆ ವರ್ಗಾಯಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರದಿಂದ ‘ಮಹಾವೀರ ಜಯಂತಿ’ ರಜೆ ದಿನಾಂಕ ಬದಲಾವಣೆ ; ಮಾ.30ಕ್ಕೆ ರಜೆ ಘೋಷಣೆಜೈನ ಸಮುದಾಯದ ಮುಖಂಡರ ಮನವಿ ಹಾಗೂ ಧಾರ್ಮಿಕ ಪಂಚಾಂಗದ ಲೆಕ್ಕಾಚಾರದಂತೆ ಮಾರ್ಚ್

ಮಹಾವೀರ ಜಯಂತಿ ರಜೆ ಮಾ.30ಕ್ಕೆ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ Read More »

ಭಾರತ‌ ಸೇರಿ ಮಿತ್ರರಾಷ್ಟ್ರಗಳಿಗೆ ಹಾರ್ಮೋಜ್ ಜಲಸಂಧಿ ಮುಕ್ತ – ಇರಾನ್

ಸಮಗ್ರ ನ್ಯೂಸ್: ‘ಚೀನಾ, ರಷ್ಯಾ, ಭಾರತ, ಇರಾಕ್ ಮತ್ತು ಪಾಕಿಸ್ತಾನ ಸೇರಿದಂತೆ ಮಿತ್ರ ರಾಷ್ಟ್ರಗಳ ಹಡುಗುಗಳಿಗೆ ಹೊರ್ಮುಜ್ ಜಲಸಂಧಿಯ ಮೂಲಕ ಸಂಚಾರಕ್ಕೆ ಅನುಮತಿಸಿದ್ದೇವೆ’ಎಂದು ಅರಾಘ್ಚಿ ಹೇಳಿರುವುದಾಗಿ ಮುಂಬೈನಲ್ಲಿರುವ ಇರಾನ್ ಕಾನ್ಸುಲೇಟ್ ಜನರಲ್ ಹಂಚಿಕೊಂಡ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ವಿಶ್ವದ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ(ಎನ್‌ಎನ್‌ಜಿ) ಸುಮಾರು ಶೇ 20ರಷ್ಟು ಸಾಗಾಟವು ಹೊರ್ಮುಜ್ ಜಲಸಂಧಿಯ ಮೂಲಕ ಆಗುತ್ತದೆ. ಇದು ಜಾಗತಿಕ ಇಂಧನ ಪೂರೈಕೆಯಲ್ಲಿ ಅತ್ಯಂತ ನಿರ್ಣಾಯಕ ಮಾರ್ಗಗಳಲ್ಲಿ ಒಂದಾಗಿದೆ. ‘ನಮ್ಮ ದೃಷ್ಟಿಕೋನದಲ್ಲಿ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿಲ್ಲ. .ಶತ್ರುಗಳಿಗೆ

ಭಾರತ‌ ಸೇರಿ ಮಿತ್ರರಾಷ್ಟ್ರಗಳಿಗೆ ಹಾರ್ಮೋಜ್ ಜಲಸಂಧಿ ಮುಕ್ತ – ಇರಾನ್ Read More »