ದೇಶ-ವಿದೇಶ

ಚರ್ನೋಬಿಲ್ ವಶಪಡಿಸಿಕೊಂಡ ರಷ್ಯಾ| ಅಣುಸ್ಥಾವರಗಳೇ ರಷ್ಯಾ ಟಾರ್ಗೆಟ್|

ಸಮಗ್ರ ನ್ಯೂಸ್: ರಷ್ಯಾ ಸೇನೆ ಉಕ್ರೇನ್​ನ ಮತ್ತೊಂದು ಅಣುಸ್ಥಾವರವೊಂದನ್ನು ವಶಕ್ಕೆ ಪಡೆದಿದ್ದು, ಝೆಪೋರಿಝಿಯಾ ಬಳಿಕ ಚೆರ್ನೋಬಿಲ್ ಅಣುಸ್ಥಾವರ ವಶಕ್ಕೆ ಪಡೆದಿದೆ.ಸದ್ಯ ಚೆರ್ನೋಬಿಲ್ ಅಣುಸ್ಥಾವರ ಕಾರ್ಯ ನಿರ್ವಹಿಸುತ್ತಿಲ್ಲ, ಆದರೆ ಅಲ್ಲಿನ್ನೂ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಚೆರ್ನೋಬಿಲ್​ ಬೆನ್ನಲ್ಲೇ ರಷ್ಯಾ ಸೇನೆಯು ಮತ್ತೊಂದು ಅಣುಸ್ಥಾವರ ಮೇಲೆ ಕಣ್ಣು ಇಟ್ಟಿದ್ದು, ಒಂದೊಂದೇ ಅಣುಸ್ಥಾವರ ವಶಕ್ಕೆ ಪಡೆಯುತ್ತಿದೆ. ಇದೇ ವೇಳೆ ಉಕ್ರೇನ್ ಚೆರ್ನೊಬೆಲ್ ನಲ್ಲಿ ಅಣುಬಾಂಬ್ ಉತ್ಪಾದಿಸಲು ಪ್ರಯತ್ನಿಸುತ್ತಿದೆ ಎಂದು ರಷ್ಯಾ ಮಾಧ್ಯಮವೊಂದು ವರದಿ ಮಾಡಿದೆ.

ಚರ್ನೋಬಿಲ್ ವಶಪಡಿಸಿಕೊಂಡ ರಷ್ಯಾ| ಅಣುಸ್ಥಾವರಗಳೇ ರಷ್ಯಾ ಟಾರ್ಗೆಟ್| Read More »

ಮಾಸ್ಕೋ: ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ

ಸಮಗ್ರ ನ್ಯೂಸ್: ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿ ಭಾಗಶಃ ಕೈವಶಪಡಿಸಿಕೊಂಡಿರುವ ರಷ್ಯಾ ಶನಿವಾರ ತಾತ್ಕಾಲಿಕ ಯುದ್ಧ ವಿರಾಮ ಘೋಷಿಸಿದೆ. ಯುದ್ಧ ಘೋಷಣೆ ಮಾಡಿ 11 ದಿನಗಳ ಬಳಿಕ ರಷ್ಯಾ ಈ ನಿರ್ಧಾರವನ್ನು ಇಂದು ಬೆಳಗ್ಗೆ 6 ಗಂಟೆಗೆ ಘೋಷಿಸಿದೆ. ನಾಗರಿಕರನ್ನು ತೆರವುಗೊಳಿಸಲು ಅನುಕೂಲವಾಗುವಂತೆ ಮಾನವೀಯ ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ರಷ್ಯಾ ತಿಳಿಸಿದೆ. ಉಭಯ ದೇಶಗಳ ನಡುವೆ 2 ಸುತ್ತಿನ ಮಾತುಕತೆ ನಡೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಯುದ್ಧದ 10 ದಿನವಾದ ಇಂದು ಬೆಳಗ್ಗೆ 10ರಿಂದ ಕದನ

ಮಾಸ್ಕೋ: ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ Read More »

ಹೊಸದಿಲ್ಲಿ: ಉಕ್ರೇನ್ ನಿಂದ ಮರಳಿದ ವಿದ್ಯಾರ್ಥಿ ಬ್ಯಾಗಲ್ಲಿ ಬುಲೆಟ್

ಸಮಗ್ರ ನ್ಯೂಸ್: ಉಕ್ರೇನ್‌ನಿಂದ ಗುರುವಾರ ದಿಲ್ಲಿಗೆ ವಾಪಸಾದ ಕೇರಳ ಮೂಲದ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಬುಲೆಟ್‌ ಪತ್ತೆಯಾಗಿದೆ. ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಸಿಐಎಸ್‌ಎಫ್ ನ ಸಿಬಂದಿ ವಿದ್ಯಾರ್ಥಿಯ ಬ್ಯಾಗ್‌ ಅನ್ನು ತಪಾಸಣೆ ನಡೆಸಿದ ವೇಳೆ ಗುಂಡು ಪತ್ತೆಯಾಯಿತು. ತತ್‌ಕ್ಷಣ ಸಿಐಎಸ್‌ಎಫ್ ಅಧಿಕಾರಿಗಳು ವಿದ್ಯಾರ್ಥಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ದರು. ದಿಲ್ಲಿಯಿಂದ ಏರ್‌ ಏಷ್ಯಾ ವಿಮಾನ ಮೂಲಕ ಗುರುವಾರವೇ ಈ ವಿದ್ಯಾರ್ಥಿ ಕೇರಳಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಯುದ್ಧಪೀಡಿತ ಪ್ರದೇಶದಿಂದ ತಾಯ್ನಾಡಿಗೆ ವಾಪಸಾದ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಗುಂಡು ಪತ್ತೆಯಾಗಿರುವುದು ಭಾರೀ ಕುತೂಹಲಕ್ಕೆ

ಹೊಸದಿಲ್ಲಿ: ಉಕ್ರೇನ್ ನಿಂದ ಮರಳಿದ ವಿದ್ಯಾರ್ಥಿ ಬ್ಯಾಗಲ್ಲಿ ಬುಲೆಟ್ Read More »

ಕ್ರಿಕೆಟ್ ದಂತ ಕಥೆ ಶೇನ್ ವಾರ್ನ್ ಇನ್ನಿಲ್ಲ

ಸಮಗ್ರ ನ್ಯೂಸ್ : ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. 52 ವರ್ಷದ ಮಾಜಿ ಕ್ರಿಕೆಟಿಗ ಟೆಸ್ಟ್ ಕ್ರಿಕೆಟ್ʼನ ಎರಡನೇ ಅತ್ಯಂತ ಪ್ರಭಾವಶಾಲಿ ವಿಕೆಟ್ ಟೇಕರ್ ಆಗಿದ್ದು, ಶ್ರೇಷ್ಠ ಬೌಲರ್ʼಗಳಲ್ಲಿ ಒಬ್ಬರಾಗಿದ್ದರು. ಶೇನ್ ತಮ್ಮ ನಿವಾಸದಲ್ಲಿ ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರನ್ನ ಉಳಿಸಿಕೊಳ್ಳಲಾಗಿಲ್ಲ ಎಂದು ವಾರ್ನ್ ಅವರ ಆಡಳಿತ ಮಂಡಳಿ ಹೇಳಿಕೆಯಲ್ಲಿ ದೃಢಪಡಿಸಿದೆ.

ಕ್ರಿಕೆಟ್ ದಂತ ಕಥೆ ಶೇನ್ ವಾರ್ನ್ ಇನ್ನಿಲ್ಲ Read More »

ರಷ್ಯಾ- ಉಕ್ರೇನ್ ಮಹಾಯುದ್ಧ| ಪುಟಿನ್ ಹತ್ಯೆಗೆ ಅಮೇರಿಕಾದ ಹಿರಿಯ ಸೆನೆಟರ್ ಕರೆ|

ಸಮಗ್ರ ನ್ಯೂಸ್: ಉಕ್ರೇನ್ʼನಲ್ಲಿ ರಷ್ಯಾದ ಪಡೆಗಳ ದಾಳಿ ಮುಂದುವರಿಯುತ್ತಿದ್ದು ಅಮೆರಿಕದ ಹಿರಿಯ ಸೆನೆಟರ್ ಲಿಂಡ್ಸೆ ಗ್ರಹಾಂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹತ್ಯೆಗೆ ನೇರ ದೂರದರ್ಶನದಲ್ಲಿ ಕರೆ ನೀಡಿದ್ದಾರೆ. ‘ರಷ್ಯಾದಲ್ಲಿ ಯಾರಾದರೂ ಪ್ಲೇಟ್ʼಗೆ ಹೆಜ್ಜೆ ಹಾಕಿ ಈ ವ್ಯಕ್ತಿಯನ್ನ ಹೊರಗೆ ಕರೆದೊಯ್ಯಬೇಕು’ ಎಂದು ಸೆನೆಟರ್ ಹೇಳಿದ್ದಾರೆ. ನಂತರ ಅವರು ಸರಣಿ ಟ್ವೀಟ್ʼಗಳಲ್ಲಿ ಕರೆಯನ್ನು ಪುನರಾವರ್ತಿಸಿದ್ದಾರೆ. ‘ಇದನ್ನ ಸರಿಪಡಿಸಬಲ್ಲವರು ರಷ್ಯನ್ ಜನರು ಮಾತ್ರ. ಹೇಳುವುದು ಸುಲಭ, ಮಾಡಲು ಕಷ್ಟ. ನೀವು ಜೀವನಪರ್ಯಂತ ಕತ್ತಲೆಯಲ್ಲಿ ಬದುಕಲು ಬಯಸದ ಹೊರತು, ಕಡು

ರಷ್ಯಾ- ಉಕ್ರೇನ್ ಮಹಾಯುದ್ಧ| ಪುಟಿನ್ ಹತ್ಯೆಗೆ ಅಮೇರಿಕಾದ ಹಿರಿಯ ಸೆನೆಟರ್ ಕರೆ| Read More »

ಅತಿ ದೊಡ್ಡ ಪರಮಾಣು ಸ್ಥಾವರಕ್ಕೆ ಬೆಂಕಿ| ಮತ್ತೆ ಚರ್ನೋಬಿಲ್ ದುರಂತ ಮತ್ತೆ ಮರುಕಳಿಸುವ ಸಾಧ್ಯತೆ

ಸಮಗ್ರ ನ್ಯೂಸ್: ಉಕ್ರೇನ್‌ನ ಮಹಾ ನಗರಗಳನ್ನು ವಶಪಡಿಸಿಕೊಳ್ಳುವ ರಷ್ಯಾದ ಹರಸಾಹಸ ಯುದ್ಧದ ಮುಂದುವರೆದಿದ್ದು ಈಗ ಪ್ರಮುಖ ಕರಾವಳಿ ನಗರಗಳಿಗೆ ರಷ್ಯಾ ಸೇನೆ ಲಗ್ಗೆ ಇಟ್ಟಿದೆ. ಈ ಮಧ್ಯೆ “ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಜಪೋರಿಝಿಯಾ ಎನ್‌ಪಿಪಿ ಮೇಲೆ ರಷ್ಯಾದ ಸೈನ್ಯವು ಎಲ್ಲಾ ಕಡೆಯಿಂದ ಗುಂಡು ಹಾರಿಸುತ್ತಿದೆ. ಬೆಂಕಿ ಈಗಾಗಲೇ ಭುಗಿಲೆದ್ದಿದೆ. ಅದು ಸ್ಫೋಟಗೊಂಡರೆ, ಅದು ಚೆರ್ನೋಬಿಲ್‌ಗಿಂತ 10 ಪಟ್ಟು ದೊಡ್ಡದಾಗಿರುತ್ತದೆ!” ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌

ಅತಿ ದೊಡ್ಡ ಪರಮಾಣು ಸ್ಥಾವರಕ್ಕೆ ಬೆಂಕಿ| ಮತ್ತೆ ಚರ್ನೋಬಿಲ್ ದುರಂತ ಮತ್ತೆ ಮರುಕಳಿಸುವ ಸಾಧ್ಯತೆ Read More »

ನಟ ಸೋನು ಸೂದ್ ಮತ್ತೆ ರಿಯಲ್ ಹೀರೋ| ಉಕ್ರೇನ್ ಸಂಕಷ್ಟದ ವಿದ್ಯಾರ್ಥಿಗಳಿಗೆ ನೆರವು

ಸಮಗ್ರ ನ್ಯೂಸ್: ಉಕ್ರೇನ್​ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರು ವಾಪಸ್​ ಬರಲು ಹರಸಾಹಸ ಪಡುತ್ತಿದ್ದು, ಅಂಥವರಿಗೆ ಸೋನು ಸೂದ್​ ನೆರವು ನೀಡುತ್ತಾ ರಿಯಲ್ ಹೀರೋ ಎನಿಸಿದ್ದಾರೆ. ಈ ಹಿಂದೆ ಲಾಕ್​ಡೌನ್​ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಸೋನು ಸೂದ್​ ಅವರು ಸಾಕಷ್ಟು ಸಹಾಯ ಮಾಡಿದ್ದರು. ಆ ನಂತರವೂ ಅವರ ಸಮಾಜಮುಖಿ ಕಾರ್ಯ ಮುಂದುವರಿದಿತ್ತು. ಈಗ ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸೋನು ಸೂದ್​ ಸಹಾಯ ಮಾಡಿದ್ದಾರೆ. ಅವರಿಂದ ಸಹಾಯ ಪಡೆದ ಅನೇಕರು ವಿಡಿಯೋ ಮೂಲಕ ಧನ್ಯವಾದ ತಿಳಿಸುತ್ತಿದ್ದಾರೆ. ಈ ವಿಡಿಯೋಗಳು ಸಖತ್​

ನಟ ಸೋನು ಸೂದ್ ಮತ್ತೆ ರಿಯಲ್ ಹೀರೋ| ಉಕ್ರೇನ್ ಸಂಕಷ್ಟದ ವಿದ್ಯಾರ್ಥಿಗಳಿಗೆ ನೆರವು Read More »

ಉಕ್ರೇನ್: ರಾಜಧಾನಿ ಕಿವ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಭಾರತೀಯ ವಿದ್ಯಾರ್ಥಿಗೆ ಗುಂಡೇಟು

ಸಮಗ್ರ‌ ನ್ಯೂಸ್: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದಲ್ಲಿ ಭಾರತೀಯ ವಿದ್ಯಾರ್ಥಿಗಳು ಬಡವಾಗಿದ್ದಾರೆ. ಈಗಾಗಲೇ ಉಕ್ರೇನ್​ನಲ್ಲಿರುವ ಭಾರತೀಯ ರಾಜಭಾರಿ ಕಚೇರಿಯಿಂದ ಖಿವ್ ನಗರವನ್ನು ತೊರೆಯುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ನಗರವನ್ನು ತೊರೆಯಲು ಪ್ರಯತ್ನಿಸಿದ ಭಾರತೀಯ ವಿದ್ಯಾರ್ಥಿಗಳನ್ನು ಗುಂಡಿಕ್ಕಿರುವ ಘಟನೆ ನಡೆದಿದೆ. ಉಕ್ರೇನ್ ರಾಜಧಾನಿ ಕೈವ್‌ನಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ ಎಂದು ಕೇಂದ್ರ ಸಚಿವ ವಿಕೆ ಸಿಂಗ್ ಗುರುವಾರ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ. ಖಾರ್ಕಿವ್ ನಗರದಲ್ಲಿ ರಷ್ಯಾದ ಶೆಲ್

ಉಕ್ರೇನ್: ರಾಜಧಾನಿ ಕಿವ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಭಾರತೀಯ ವಿದ್ಯಾರ್ಥಿಗೆ ಗುಂಡೇಟು Read More »

“ಗಡಿ ತಲುಪಿದವರನ್ನು ಕರೆತಂದು ಶೋ-ಆಪ್ ಮಾಡ್ತಿದಾರೆ, ಉಕ್ರೇನ್ ಗೆ ಭಾರತ ಕಾಲಿಟ್ಟೇ ಇಲ್ಲ” – ಕೇಂದ್ರದ ವಿರುದ್ಧ ಕನ್ನಡಿಗ ವಿದ್ಯಾರ್ಥಿ ಆಕ್ರೋಶ

ಸಮಗ್ರ ನ್ಯೂಸ್: ಉಕ್ರೇನ್ ನಲ್ಲಿ ಸಿಲುಕಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ಅನೀಶ್ ಜಯಂತ್ ಎಂಬವರು ಹಂಗೇರಿ ಗಡಿ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಆಗಮಿಸಿದ್ದಾರೆ. ಸರ್ಕಾರದ ಸಹಾಯವಿಲ್ಲದೇ ಸ್ನೇಹಿತರ ಜೊತೆ ಗಡಿ ತಲುಪಿದ್ದ ಅನೀಶ್ ಇದೀಗ ದೆಹಲಿಗೆ ಆಗಮಿಸಿದ್ದು, ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ವಿದ್ಯಾರ್ಥಿ ಅನೀಶ್ , ಉಕ್ರೇನ್ ನಿಂದ ವಾಪಸ್ ಆಗಿರುವುದು ಖುಷಿ ತಂದಿದೆ ಆದರೆ, ಅಲ್ಲಿಯ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನಾವು ವೆಸ್ಟರ್ನ್ ಸೈಡ್ ಅಲ್ಲಿ ಇರುವುದರಿಂದ ಬಂದಿದ್ದೇವೆ,

“ಗಡಿ ತಲುಪಿದವರನ್ನು ಕರೆತಂದು ಶೋ-ಆಪ್ ಮಾಡ್ತಿದಾರೆ, ಉಕ್ರೇನ್ ಗೆ ಭಾರತ ಕಾಲಿಟ್ಟೇ ಇಲ್ಲ” – ಕೇಂದ್ರದ ವಿರುದ್ಧ ಕನ್ನಡಿಗ ವಿದ್ಯಾರ್ಥಿ ಆಕ್ರೋಶ Read More »

‘ಅಮರಾವತಿಯೇ ಆಂದ್ರದ ರಾಜಧಾನಿ’ ಮಹತ್ವದ ತೀರ್ಪು ನೀಡಿದ ಹೈಕೋರ್ಟ್

ಸಮಗ್ರ‌ ನ್ಯೂಸ್: ಆಂಧ್ರಪ್ರದೇಶ ರಾಜಧಾನಿ ವಿಚಾರದಲ್ಲಿ 3 ರಾಜಧಾನಿಗಳು, ಸಿಆರ್‌ಡಿಎ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತು ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಾಜ್ಯ ಸರ್ಕಾರ ಸಿಆರ್‌ಡಿಎ ಕಾಯ್ದೆ ಪ್ರಕಾರವೇ ನಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ʻಅಮರಾವತಿʼಯನ್ನು ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಆದೇಶಿಸಲಾಗಿದೆ. ರೈತರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ 6 ತಿಂಗಳೊಳಗೆ ಮಾಸ್ಟರ್ ಪ್ಲಾನ್ ಪೂರ್ಣಗೊಳಿಸಬೇಕು. ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕಾಲಕಾಲಕ್ಕೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆಯೂ ಸೂಚಿಸಿದೆ. ಒಪ್ಪಂದದಂತೆ 6 ತಿಂಗಳೊಳಗೆ ಮಾಸ್ಟರ್ ಪ್ಲಾನ್

‘ಅಮರಾವತಿಯೇ ಆಂದ್ರದ ರಾಜಧಾನಿ’ ಮಹತ್ವದ ತೀರ್ಪು ನೀಡಿದ ಹೈಕೋರ್ಟ್ Read More »