ದೇಶ-ವಿದೇಶ

ಯುಎಇ ಅಧಿಕಾರಿ‌ ಸೋಗಿನಲ್ಲಿ ದೆಹಲಿಯ ಪೈವ್ ಸ್ಟಾರ್ ಹೊಟೇಲ್ ಗೆ ಪಂಗನಾಮ| ಬಿಲ್ ಪಾವತಿಸದೆ ಪರಾರಿಯಾದಾತ ಮಂಗಳೂರಿನಲ್ಲಿ ಅರೆಸ್ಟ್

ಸಮಗ್ರ ನ್ಯೂಸ್: ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಅಧಿಕಾರಿ ಎಂದು ಹೇಳಿಕೊಂಡು 23 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಂಚತಾರಾ ಹೋಟೆಲ್​ಗೆ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಮದ್ ಷರೀಫ್ (41) ಬಂಧಿತ ವ್ಯಕ್ತಿ. ಬಂಧಿತ ಮಹಮ್ಮದ್ ಷರೀಫ್ ಕರ್ನಾಟಕದ ದಕ್ಷಿಣ ಕನ್ನಡ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ. ನಕಲಿ ವ್ಯಾಪಾರ ಕಾರ್ಡ್​​​ನ್ನು ಬಳಸಿಕೊಂಡು ಸುಮಾರು ಮೂರು ತಿಂಗಳ ಕಾಲ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ತಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಹಮ್ಮದ್ ಷರೀಫ್ ಮೂರು […]

ಯುಎಇ ಅಧಿಕಾರಿ‌ ಸೋಗಿನಲ್ಲಿ ದೆಹಲಿಯ ಪೈವ್ ಸ್ಟಾರ್ ಹೊಟೇಲ್ ಗೆ ಪಂಗನಾಮ| ಬಿಲ್ ಪಾವತಿಸದೆ ಪರಾರಿಯಾದಾತ ಮಂಗಳೂರಿನಲ್ಲಿ ಅರೆಸ್ಟ್ Read More »

2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ

ನವದೆಹಲಿ: 2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್-ಸಿಸಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷರನ್ನು ಇದೇ ಮೊದಲ ಬಾರಿಗೆ ಆಹ್ವಾನಿಸಲಾಗಿದೆ. ಅಧ್ಯಕ್ಷ ಅಲ್-ಸಿಸಿ ಜ. 24 ರಿಂದ 26 ರವರೆಗೆ ಭಾರತದಲ್ಲಿರಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈಜಿಪ್ಟ್ ನ ಅಧ್ಯಕ್ಷರೊಂದಿಗೆ ಐವರು ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗ ಇರಲಿದೆ.

2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ Read More »

ಜ.26ಕ್ಕೆ ಭಾರತದಲ್ಲಿ ಇಂಟ್ರಾನಸಲ್ ಕೋವಿಡ್ ಲಸಿಕೆ ಇನ್ ಕೋವ್ಯಾಕ್‌ ಬಿಡುಗಡೆ

ಸಮಗ್ರ ನ್ಯೂಸ್: ಸ್ವದೇಶಿ ಲಸಿಕೆ ತಯಾರಕ ಭಾರತ್ ಬಯೋಟೆಕ್ ತನ್ನ ಇಂಟ್ರಾನಾಸಲ್ ಕೋವಿಡ್ ಲಸಿಕೆ ಇನ್ ಕೊವಾಕ್ ಅನ್ನು ಜ.26ರಂದು ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ ತಿಳಿಸಿದ್ದಾರೆ. ಭೋಪಾಲ್‌ನಲ್ಲಿ ನಡೆದ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಎಲಾ, ಜಾನುವಾರುಗಳಲ್ಲಿನ ಗಡ್ಡೆಯ ಚರ್ಮದ ಕಾಯಿಲೆಗೆ ಸ್ವದೇಶಿ ಲಸಿಕೆ, ಲುಂಪಿ-ಪ್ರೊವಾಕ್‌ಇಂಡ್ ಅನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಜ.26

ಜ.26ಕ್ಕೆ ಭಾರತದಲ್ಲಿ ಇಂಟ್ರಾನಸಲ್ ಕೋವಿಡ್ ಲಸಿಕೆ ಇನ್ ಕೋವ್ಯಾಕ್‌ ಬಿಡುಗಡೆ Read More »

ಕುಲಗೆಟ್ಟ ಆರ್ಥಿಕತೆಗೆ ಪಾಕ್ ಸ್ಥಿತಿ ಅಧೋಗತಿ| ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ!?

ಸಮಗ್ರ ನ್ಯೂಸ್: ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ನೆಲಕಚ್ಚಿದ್ದು, ಅರಾಜಕತೆ ಮುಂದುವರೆದಿದೆ. ಜನ ಹಸಿವಿನಿಂದ ಸಂಕಷ್ಟದಲ್ಲಿದ್ದು, ಜನರು ಸರ್ಕಾರದ ವಿರುದ್ದ ದಂಗೆ ಎದ್ದಿದ್ದಾರೆ. ಪರಿಸ್ಥಿತಿ ತೀರಾ ವಿಷಮಸ್ಥಿತಿ ತಲುಪಿದ್ದು, ಇದರ ಕಾವು ಪ್ರತಿಭಟನೆಯ ರೂಪದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್‌ ಬಾಲ್ಟಿಸ್ತಾನ್‌ ಪ್ರದೇಶದಲ್ಲಿ ನಡೆಯುತ್ತಿದೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ಹಾಳಾಗಿದೆ ಅಂದರೆ ಖುದ್ದು ಅಲ್ಲಿನ ಜನ ತಮ್ಮನ್ನ ಭಾರತಕ್ಕೆ ಸೇರಿಸಿ ಅಂತ ಆಗ್ರಹ ಮಾಡುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪಿಒಕೆ ಜನ ಪಾಕ್‌ ಸರ್ಕಾರ

ಕುಲಗೆಟ್ಟ ಆರ್ಥಿಕತೆಗೆ ಪಾಕ್ ಸ್ಥಿತಿ ಅಧೋಗತಿ| ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ!? Read More »

ಚಿನ್ನದಿಂದ ಪ್ರಧಾನಿ ಮೋದಿ ಪ್ರತಿಮೆ ತಯಾರಿಸಿದ ಜ್ಯುವೆಲ್ಲರಿ ಅಂಗಡಿಯ ಮಾಲೀಕ

ಸೂರತ್‌: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ರಾಜ್ಯದ ಸೂರತ್‌ ನಗರದ ಜ್ಯುವೆಲ್ಲರಿ ಅಂಗಡಿಯ ಮಾಲೀಕರೊಬ್ಬರು 156 ಗ್ರಾಂ ತೂಕದ, 18 ಕ್ಯಾರೆಟ್‌ ಚಿನ್ನದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯನ್ನು ತಯಾರಿಸಿದ್ದಾರೆ. “ಕಳೆದ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಗುಜರಾತ್‌ನ 182 ಸ್ಥಾನಗಳ ಪೈಕಿ 156ರಲ್ಲಿ ಬಿಜೆಪಿ ಗೆಲುವು ಸಾಧಿಸಿತು. ನಾನು ಮೋದಿ ಅವರ ಅಭಿಮಾನಿಯಾಗಿದ್ದೇನೆ. ಅವರಿಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ 156 ಗ್ರಾಂ ತೂಕದ ಅವರ ಪ್ರತಿಮೆಯನ್ನು ತಯಾರಿಸಲಾಗಿದೆ. ನಮ್ಮ ಕಾರ್ಖಾನೆಯಲ್ಲಿ 20

ಚಿನ್ನದಿಂದ ಪ್ರಧಾನಿ ಮೋದಿ ಪ್ರತಿಮೆ ತಯಾರಿಸಿದ ಜ್ಯುವೆಲ್ಲರಿ ಅಂಗಡಿಯ ಮಾಲೀಕ Read More »

ಸೀಟ್‌ಬೆಲ್ಟ್ ಧರಿಸದಿದ್ದಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಾಕ್‌ಗೆ ದಂಡ

ಸಮಗ್ರ ನ್ಯೂಸ್: ಚಲಿಸುತ್ತಿದ್ದ ಕಾರಿನಲ್ಲಿ ಸೀಟ್‌ಬೆಲ್ಟ್ ಧರಿಸದಿದ್ದಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಾಕ್‌ಗೆ ದಂಡ ವಿಧಿಸಲಾಗಿದೆ. ಚಲಿಸುತ್ತಿದ್ದ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದಕ್ಕೆ ರಿಷಿ ಸುನಾಕ್ ಅವರಿಗೆ 100 ಪೌಂಡ್ ದಂಡವನ್ನು ವಿಧಿಸಲಾಗಿದೆ ಎಂದು ಲಂಕಾಶೈರ್ ಪೊಲೀಸರು ತಿಳಿಸಿದ್ದಾರೆ. ಲಂಕಾಶೈರ್‌ನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಸೀಟ್‌ಬೆಲ್ಟ್ ಧರಿಸದೇ ಇರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಬಳಿಕ ನಾವು ಶುಕ್ರವಾರ ಲಂಡನ್‌ನ 42 ವರ್ಷದ ವ್ಯಕ್ತಿಗೆ ಷರತ್ತುಬದ್ಧವಾಗಿ ದಂಡ ವಿಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಸುನಾಕ್ ಇಂಗ್ಲೆಂಡ್‌ನ

ಸೀಟ್‌ಬೆಲ್ಟ್ ಧರಿಸದಿದ್ದಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಾಕ್‌ಗೆ ದಂಡ Read More »

ಎ. 1ರಿಂದ 15 ವರ್ಷ ಹಳೆಯ ವಾಹನಗಳು ಗುಜರಿಗೆ| ಸರ್ಕಾರಿ ವಾಹನಗಳಿಂದಲೇ ‘ವೆಹಿಕಲ್ ಸ್ಕ್ರಾಪ್ ನೀತಿ’ ಜಾರಿಗೆ ತರಲು ನಿರ್ಧಾರ

ಸಮಗ್ರ ನ್ಯೂಸ್: ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ವಾಹನಗಳ ಇಂಧನ ಕ್ಷಮತೆಯನ್ನು ಹೆಚ್ಚಿಸಲು, ಭಾರತ ಸರ್ಕಾರವು ‘ವಾಹನ ಸ್ಕ್ರ್ಯಾಪ್ ನೀತಿ’ಯನ್ನು ಪರಿಚಯಿಸಿದೆ. ಈ ನೀತಿಯಡಿ ದೇಶದಲ್ಲಿ 15 ವರ್ಷ ಹಳೆಯ ನೋಂದಣಿಯನ್ನು ಕಡ್ಡಾಯವಾಗಿ ರದ್ದುಗೊಳಿಸಲಾಗುತ್ತದೆ. ನೋಂದಣಿಯನ್ನು ನವೀಕರಿಸಿದ (15 ವರ್ಷಗಳ ನಂತರ) ವಾಹನಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಎಲ್ಲಾ ಹಳೆಯ ವಾಹನಗಳನ್ನು ನೋಂದಾಯಿತ ಸ್ಕ್ರ್ಯಾಪ್ ಕೇಂದ್ರದಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, 15 ವರ್ಷಕ್ಕಿಂತ

ಎ. 1ರಿಂದ 15 ವರ್ಷ ಹಳೆಯ ವಾಹನಗಳು ಗುಜರಿಗೆ| ಸರ್ಕಾರಿ ವಾಹನಗಳಿಂದಲೇ ‘ವೆಹಿಕಲ್ ಸ್ಕ್ರಾಪ್ ನೀತಿ’ ಜಾರಿಗೆ ತರಲು ನಿರ್ಧಾರ Read More »

ನಿಗದಿತ ಅವಧಿಗಿಂತ 5ಗಂಟೆ ಮೊದಲೇ ಸಿಂಗಾಪುರಕ್ಕೆ ಹಾರಿದ ವಿಮಾನ| ಪ್ರಯಾಣಿಕರು ಏರ್ ಪೋರ್ಟ್ ನಲ್ಲೇ ಬಾಕಿ

ಸಮಗ್ರ ನ್ಯೂಸ್: ವಿಮಾನ ಹತ್ತಲು ಸಿದ್ಧರಾಗಿದ್ದ 35 ಮಂದಿಯನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಸ್ಕೂಟ್ ಏರ್​ಲೈನ್ಸ್​ನ ವಿಮಾನವು ಅಮೃತಸರದಿಂದ ಸಿಂಗಪುರಕ್ಕೆ ಬುಧವಾರ (ಜ 18) ಹಾರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ನಾಗರಿಕ ವಿಮಾನಯಾನದ ಮಹಾ ನಿಯಂತ್ರಕರು ತನಿಖೆಗೆ ಆದೇಶಿಸಿದ್ದಾರೆ. ಬುಧವಾರ ಸಂಜೆ 7.55ಕ್ಕೆ ವಿಮಾನವು ಸಿಂಗಪುರಕ್ಕೆ ಹಾರಬೇಕಿತ್ತು. ಆದರೆ ಸಂಜೆ 3 ಗಂಟೆಗೇ ವಿಮಾನವು ಹಾರಾಟ ಆರಂಭಿಸಿತು. ಇದರಿಂದಾಗಿ ವಿಮಾನ ಹತ್ತಬೇಕಿದ್ದ 35 ಮಂದಿ ವಿಮಾನ ನಿಲ್ದಾಣ ತಲುಪಿದರೂ ಪ್ರಯೋಜನವಾಗಲಿಲ್ಲ. ವಿಮಾನದ ಸಿಬ್ಬಂದಿಯ

ನಿಗದಿತ ಅವಧಿಗಿಂತ 5ಗಂಟೆ ಮೊದಲೇ ಸಿಂಗಾಪುರಕ್ಕೆ ಹಾರಿದ ವಿಮಾನ| ಪ್ರಯಾಣಿಕರು ಏರ್ ಪೋರ್ಟ್ ನಲ್ಲೇ ಬಾಕಿ Read More »

ನೇಪಾಳದಲ್ಲಿ ಭೀಕರ ವಿಮಾನ ಅವಘಡ| 72 ಮಂದಿ ಸಜೀವ ದಹನ

ಸಮಗ್ರ ನ್ಯೂಸ್: ಕಣಿವೆ ರಾಷ್ಟ್ರ ನೇಪಾಳದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದ್ದು, ಸಿಬ್ಬಂದಿ ಸೇರಿ 72 ಮಂದಿ ಸಜೀವ ದಹನವಾಗಿದ್ದಾರೆ. ಲ್ಯಾಂಡಿಂಗ್​​ ಮುನ್ನ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ಲ್ಯಾಂಡಿಂಗ್​​ಗೆ 5 ನಿಮಿಷ ಇರುವಾಗಲೇ ಹೊತ್ತಿಉರಿದಿದೆ. ವಿಮಾನ ನೋಡ-ನೋಡುತ್ತಿದ್ದಂತೆ ನೆಲಕ್ಕಪ್ಪಳಿಸಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 72 ಮಂದಿಯೂ ಸಜೀವ ದಹನವಾಗಿರುವ ಮಾಹಿತಿ ಲಭಿಸಿದೆ. 68 ಪ್ರಯಾಣಿಕರ ಜೊತೆ ನಾಲ್ವರು ಸಿಬ್ಬಂದಿ ಕೂಡಾ ಸಜೀವ ದಹನ, ವಿಮಾನ ಕೆಳಕ್ಕಪ್ಪಳಿಸುತ್ತಿದ್ದಂತೆ ಬಾನೆತ್ತರಕ್ಕೆ ಹೊತ್ತಿ ಬೆಂಕಿ ಉರಿದಿದೆ. ವಿಮಾನ ಕಠ್ಮಂಡುವಿನಿಂದ ಪೋಖರಾಗೆ ತೆರಳುತ್ತಿತು.

ನೇಪಾಳದಲ್ಲಿ ಭೀಕರ ವಿಮಾನ ಅವಘಡ| 72 ಮಂದಿ ಸಜೀವ ದಹನ Read More »

ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಒಡ್ಡಿದ ಪುತ್ತೂರು ಮೂಲದ ಕೈದಿ

ಸಮಗ್ರ ನ್ಯೂಸ್: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕೈದಿ ಎನ್ನುವುದು ತಿಳಿದು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ನಾಗ್ಪುರ ಪೊಲೀಸರು ತನಿಖೆ ಸಚಿವರಿಗೆ ಜೀವ ಬೆದರಿಕೆಯನ್ನು ಹಾಕಿದ್ದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕೈದಿ ದಕ್ಷಿಣ ಕನ್ನಡ ಪುತ್ತೂರು ಮೂಲದ ಜಯೇಶ್ ಕುಮಾರ್ ಎಂದು ತಿಳಿದು ಬಂದಿದೆ. ಜೈಲಿನಲ್ಲಿ ಅಕ್ರಮವಾಗಿ ಫೋನ್‌ ಬಳಸಿ ಜಯೇಶ್‌ ಕುಮಾರ್ ಈ ಕೃತ್ಯವನ್ನು ಎಸಗಿದ್ದಾನೆ. ನಾಗ್ಪುರ

ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಒಡ್ಡಿದ ಪುತ್ತೂರು ಮೂಲದ ಕೈದಿ Read More »