ಮಂಗಳೂರು: ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಬೈಕ್; ಎಡಮಂಗಲದ ಯುವಕ ಸಾವು
ಸಮಗ್ರ ನ್ಯೂಸ್: ಬಪ್ಪನಾಡು ದೇವಸ್ಥಾನ ಸಮೀಪ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತಪಟ್ಟ ಘಟನೆ ಮಾ.9 ರಂದು ನಡೆದಿದೆ. ಕಡಬ ತಾಲೂಕಿನ ಎಡಮಂಗಲದ ದೋಣಿಮನೆ ನಿವಾಸಿ ಸಚಿನ್ ಎಂಬವರು ಮೃತಪಟ್ಟ ದುರ್ದೈವಿ. ಮಂಗಳೂರಿನಲ್ಲಿ ಸಿವಿಲ್ ಇಂಜನಿಯರ್ ಆಗಿರುವ ಸಚಿನ್ ಮುಲ್ಕಿ ಸಮೀಪದ ದೇವಸ್ಥಾನಕ್ಕೆ ಮಾ.8ರಂದು ಜಾತ್ರೆಗೆ ತೆರಳಿ ಬೆಳಿಗ್ಗೆ ಬರುತಿದ್ದಾಗ ಬಪ್ಪನಾಡು ದೇವಸ್ಥಾನ ಸಮೀಪ ಬ್ಯಾರಿಕೇಡ್ ಗೆ ಬೈಕ್ ಡಿಕ್ಕಿಯಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾ.9 ರಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು: ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಬೈಕ್; ಎಡಮಂಗಲದ ಯುವಕ ಸಾವು Read More »









