ಕ್ರೈಂ

ಮದುವೆ ಮನೆ ಬಳಿ ಬಾಂಬ್ ಸ್ಪೋಟ| ಓರ್ವ ದುರ್ಮರಣ, ಇಬ್ಬರು ಗಂಭೀರ| Dj ಪಾರ್ಟಿ ಗಲಾಟೆ ತಂದಿಟ್ಟಿತೇ ಕುತ್ತು?

ಸಮಗ್ರ ನ್ಯೂಸ್ ಡೆಸ್ಕ್: ಮದುವೆ ಮನೆ ಸಮೀಪ ಬಾಂಬ್ ಸ್ಪೋಟಗೊಂಡು ಓರ್ವ ಯುವಕ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆಕೇರಳದ ಕಣ್ಣೂರಿನಲ್ಲಿ ನಡೆದಿದೆ‌ ಏಚೂರು ನಿವಾಸಿ ಜಿಷ್ಣು( 26) ಮೃತ ದುರ್ದೈವಿ. ಹೇಮಂತ್ ಹಾಗೂ ಅರವಿಂದ್ ಗೆ ಗಂಭೀರ ಗಾಯಗಳಾಗಿದೆ. ತೊಟ್ಟಡ ಎಂಬಲ್ಲಿರುವ ವಧುವಿನ ಮನೆಯಲ್ಲಿ ತಡರಾತ್ರಿಯವರೆಗೆ DJ ಪಾರ್ಟಿ ಆಯೋಜಿಸಲಾಗಿತ್ತು. ಈ ವಿಚಾರದಲ್ಲಿ ಪಕ್ಕದ ಮನೆಯವರಿಗೆ ಜಗಳ ಕೂಡ ನಡೆದಿತ್ತು. ಬಳಿಕ ಸಮಾಧಾನ ವಾಗಿತ್ತು. ಆದರೆ ಇಂದು ವರನ ಮನೆಯಲ್ಲಿ ವಿವಾಹ ಕಾರ್ಯಕ್ರಮ ಮುಗಿಸಿ ಮರಳುವಾಗ […]

ಮದುವೆ ಮನೆ ಬಳಿ ಬಾಂಬ್ ಸ್ಪೋಟ| ಓರ್ವ ದುರ್ಮರಣ, ಇಬ್ಬರು ಗಂಭೀರ| Dj ಪಾರ್ಟಿ ಗಲಾಟೆ ತಂದಿಟ್ಟಿತೇ ಕುತ್ತು? Read More »

ನಾಲ್ಕು ವರ್ಷದ ಮಗುವಿನ ಮೇಲೆ ಹಂದಿಗಳು ದಾಳಿ

ಸಮಗ್ರ ನ್ಯೂಸ್ ಡೆಸ್ಕ್: ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವಿನ ಮೇಲೆ ಹಂದಿಗಳು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ‌ ಕುಷ್ಟಗಿ ತಾಲೂಕಿನ ದೋಣಿಹಳ್ಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವನ್ನೂರ್ ಅಲಿ ತಂದಿ ಹುಸೇನಸಾಬ್ ಬಲಕುಂದಿ ಎಂಬ ನಾಲ್ಕು ವರ್ಷದ ಮಗು ಆಟವಾಡುವ ವೇಳೆ ಹಂದಿಗಳು ದಾಳಿ ಮಾಡಿ ಮಗುವಿನ ಕಿವಿ, ಮುಖವನ್ನು ಕಚ್ಚಿದ ಹಂದಿಗಳು ಆತನನ್ನು ಎಳೆದೊಯ್ಯುವ ಪ್ರಯತ್ನವನ್ನು ಮಾಡಿವೆ. ಕೂಡಲೇ ಘಟನೆಯನ್ನು ನೋಡಿದ ಗ್ರಾಮಸ್ಥರು ಹಂದಿಗಳಿಂದ ಮಗುವನ್ನು ಪಾರು ಮಾಡಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ನಿವಾಸಿಗಳು

ನಾಲ್ಕು ವರ್ಷದ ಮಗುವಿನ ಮೇಲೆ ಹಂದಿಗಳು ದಾಳಿ Read More »

ಕೋರ್ಟ್ ಆವರಣದಲ್ಲಿ ದುರ್ವರ್ತನೆ| ವಕೀಲ ಜಗದೀಶ್ ಗೆ 14 ದಿನ ನ್ಯಾಯಾಂಗ ಬಂಧನ

ಸಮಗ್ರ ನ್ಯೂಸ್ ಡೆಸ್ಕ್: ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ವಕೀಲ ಜಗದೀಶ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೋರ್ಟ್ ಆವರಣದಲ್ಲಿ ದುರ್ವರ್ತನೆ ತೋರಿರುವುದಾಗಿ‌ ಆರೋಪಿಸಿ ಶನಿವಾರ ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ನೇತೃತ್ವದ ನಿಯೋಗವು ಪೊಲೀಸ್ ಕಮೀಷನರ್ ಕಮಲ್ ಪಂತ್​​ಗೆ ದೂರು ನೀಡಿದ್ದರು. ವಕೀಲ ಜಗದೀಶ್ ರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನ ಮಾಡುವುದಕ್ಕೆ ಒಂದನೇ ಎಸಿಎಂಎಂ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ತನಿಖೆ ಮಾಡುವಂತೆ ಕೇಂದ್ರ

ಕೋರ್ಟ್ ಆವರಣದಲ್ಲಿ ದುರ್ವರ್ತನೆ| ವಕೀಲ ಜಗದೀಶ್ ಗೆ 14 ದಿನ ನ್ಯಾಯಾಂಗ ಬಂಧನ Read More »

ಬಜಾಜ್ ಗ್ರೂಪ್ಸ್ ಚೇರ್ಮೆನ್ ರಾಹುಲ್ ಬಜಾಜ್ ನಿಧನ

ಸಮಗ್ರ ನ್ಯೂಸ್ ಡೆಸ್ಕ್: ಬಜಾಜ್ ಸಮೂಹ ಸಂಸ್ಥೆಗಳ ಚೇರ್ಮನ್ ರಾಹುಲ್ ಬಜಾಜ್(83) ಶನಿವಾರ(ಫೆ.12) ನಿಧನರಾಗಿದ್ದಾರೆ. ರಾಹುಲ್ ಬಜಾಜ್ ಅವರಿಗೆ ನ್ಯುಮೋನಿಯಾ ಮತ್ತು ಹೃದಯ ಸಮಸ್ಯೆಯೂ ಇತ್ತು. ಕಳೆದ ಒಂದು ತಿಂಗಳಿನಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ರೂಬಿ ಹಾಲ್ ಕ್ಲಿನಿಕ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಪುರವೇಜ್ ಗ್ರಾಂಟ್ ಹೇಳಿದ್ದಾರೆ. ರಾಹುಲ್ ಬಜಾಜ್ ಸಾವನ್ನಪ್ಪುವಾಗ ಅವರ ಆಪ್ತ ಕುಟುಂಬಸ್ಥರು ಪಕ್ಕದಲ್ಲೇ ಇದ್ದರು ಎಂದು ಬಜಾಜ್ ಗ್ರೂಪ್‌ನ ಪ್ರಕಟಣೆ ತಿಳಿಸಿದೆ. ರಾಹುಲ್ ಬಜಾಜ್ ಕಳೆದ ವರ್ಷ ಏಪ್ರಿಲ್‌ನಲ್ಲಿ ಬಜಾಜ್

ಬಜಾಜ್ ಗ್ರೂಪ್ಸ್ ಚೇರ್ಮೆನ್ ರಾಹುಲ್ ಬಜಾಜ್ ನಿಧನ Read More »

ಭೀಕರ ಅಪಘಾತದಲ್ಲಿ ಮಾಜಿ ಶಾಸಕ ಎಸ್. ಬಾಲರಾಜು ಪ್ರಾಣಾಪಾಯದಿಂದ ಪಾರು

ಸಮಗ್ರ ನ್ಯೂಸ್ ಡೆಸ್ಕ್: ತಡರಾತ್ರಿ ನಡೆದ ಕಾರು ಮತ್ತು ಅಶೋಕ್ ಲೈಲ್ಯಾಂಡ್ ಲಾರಿಯ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ಚಿಕ್ಕಬಳ್ಳಾಪುರ ಮಾಜಿ ಶಾಸಕ ಎಸ್.ಬಾಲರಾಜು ಸೇರಿ ಮೂವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಚಾಮರಾಜನಗರ ತಾಲೂಕಿನ ಬಾಣಳ್ಳಿ ಗೇಟ್ ಬಳಿಯಲ್ಲಿ ಕಳೆದ ರಾತ್ರಿ ಕೊಳ್ಳೇಗಾಲದ ಮಾಜಿ ಶಾಸಕ ಎಸ್ ಬಾಲರಾಜು ಅವರ ಕಾರು ಹಾಗೂ ಅಶೋಕ್ ಲೈಲ್ಯಾಂಡ್ ಲಾರಿಯ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಪರಿಣಾಮದಿಂದಾಗಿ ಮಾಜಿ ಶಾಸಕ ಬಾಲರಾಜು ಹಾಗೂ ಕಾರು ಚಾಲಕ ಮೋಹನ್ ಮತ್ತು

ಭೀಕರ ಅಪಘಾತದಲ್ಲಿ ಮಾಜಿ ಶಾಸಕ ಎಸ್. ಬಾಲರಾಜು ಪ್ರಾಣಾಪಾಯದಿಂದ ಪಾರು Read More »

ಮಂಗಳೂರು : ಅಪ್ರಾಪ್ತ ಬಾಲಕಿಯರನ್ನು ಬಳಸಿ ವೇಶ್ಯಾವಾಟಿಕೆ ಪ್ರಕರಣ| ಮಂಜೇಶ್ವರದ ಎಸ್ ಡಿ ಪಿ ಐ ನಾಯಕ ಜೈಲಿಗೆ

ಸಮಗ್ರ ನ್ಯೂಸ್ ಡೆಸ್ಕ್ : ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿಕೊಂಡು ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಹಚ್ಚಿದ ಪೊಲೀಸರು ಇದೀಗ‌ ಮಂಜೇಶ್ವರದ SDPI ಮುಖಂಡ ಶರೀಫ್ ಹೊಸಂಗಡಿಯನ್ನು ಬಂಧಿಸಿದ್ಧಾರೆ. ಮಂಗಳೂರಿನ ನಂದಿಗುಡ್ಡೆಯ ಬಳಿಯ ಪ್ಲ್ಯಾಟ್​​ನಲ್ಲಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರನ್ನು ಬಳಸಿಕೊಂಡು ನಡೆಯುತ್ತಿದ್ದ ವೇಶ್ಯಾವಾಟಿಕೆಯನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈ ಪ್ರಕರಣದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷನನ್ನು ಎರಡು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಆರೋಪಿಗಳ‌ ಮೇಲೆ‌ ಪೋಕ್ಸೋ ಕೇಸು‌ದಾಖಲಿಸಿಲಾಗಿದೆ. ಆರೋಪಿಗಳು ನಗರದ ಪ್ರತಿಷ್ಠಿತ

ಮಂಗಳೂರು : ಅಪ್ರಾಪ್ತ ಬಾಲಕಿಯರನ್ನು ಬಳಸಿ ವೇಶ್ಯಾವಾಟಿಕೆ ಪ್ರಕರಣ| ಮಂಜೇಶ್ವರದ ಎಸ್ ಡಿ ಪಿ ಐ ನಾಯಕ ಜೈಲಿಗೆ Read More »

ಕಡಬ: ಅಪ್ರಾಪ್ತ ಸೊಸೆಯನ್ನೇ ಮೋಹಿಸಿದ ಮಾವ; ಆರೋಪಿಯ ಬಂಧನ

ಸಮಗ್ರ ಕ್ರೈಂ ಡೆಸ್ಕ್: ಸ್ವಂತ ತಂಗಿಯ ಮಗಳಿಗೆ ನಿರಂತರ ಕಿರುಕುಳ ಹಾಗೂ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಮಾವನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಠಾಣೆಯಲ್ಲಿ ಪೊಕ್ಸೊ ಪ್ರಕರಣ ಸೇರಿದಂತೆ ಇತರ ಪ್ರಕರಣಗಳು ದಾಖಲಾಗಿದೆ. ಜಾನ್ ಬಂಧಿತ ಆರೋಪಿ. ಅಜ್ಜಿಯ ಜೊತೆಯಲ್ಲಿ ವಾಸವಾಗಿರುವ ತಾಯಿ ಕಳೆದುಕೊಂಡ ಅಪ್ರಾಪ್ತ ಬಾಲಕಿ ತನ್ನ ತೋಟದಲ್ಲಿ ನೀರು ಹಾಯಿಸುತ್ತಿರುವ ಸ್ಪಿಂಕ್ಲರ್ ಸೆಟ್ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ಸ್ವಂತ ಮಾವ ಜಾನ್ ಎಂಬಾತನು ಬಂದು ಬಾಲಕಿಯ ಮಾನಭಂಗಕ್ಕೆ ಯತ್ನಿಸಿ, ಹಲ್ಲೆ ನಡೆಸಿರುವ ಬಗ್ಗೆ

ಕಡಬ: ಅಪ್ರಾಪ್ತ ಸೊಸೆಯನ್ನೇ ಮೋಹಿಸಿದ ಮಾವ; ಆರೋಪಿಯ ಬಂಧನ Read More »

ಪುತ್ತೂರು: ಮರದ ಕೊಂಬೆ ಬಿದ್ದು ಯುವಕ ದುರ್ಮರಣ

ಸಮಗ್ರ ಕ್ರೈ ಡೆಸ್ಕ್: ಮರ ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕೊಂಬೆ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ದಾರುಣ ಮೃತಪಟ್ಟ ಘಟನೆ ಪುತ್ತೂರು ಸಮೀಪದ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ. ತಿಂಗಳಾಡಿ ಸಮೀಪದ ರೆಂಜಲಾಡಿ ನಿವಾಸಿ ಬಾತಿಷ್ ಸುಲ್ತಾನ್ (32) ಮೃತ ದುರ್ದೈವಿ. ಪುತ್ತೂರು ಸಮೀಪದ ಪುರುಷರಕಟ್ಟೆ ಎಂಬಲ್ಲಿ ಮರ ಕಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತ ಯುವಕ ಬಾತಿಷ್ ಚಿರಪರಿಚಿತರಾಗಿದ್ದು, ಕೂಡುರಸ್ತೆ SKSSF ಸಕ್ರಿಯ ಸದಸ್ಯರಾಗಿದ್ದ. ಎಲ್ಲರೊಂದಿಗೆ ಆತ್ಮೀಯವಾಗಿರುತ್ತಿದ್ದ ಈತನ ದಾರುಣ ಸಾವು ಕುಟುಂಬ

ಪುತ್ತೂರು: ಮರದ ಕೊಂಬೆ ಬಿದ್ದು ಯುವಕ ದುರ್ಮರಣ Read More »

ಮಂಡ್ಯ: ಭಾವನ ಮೇಲಿನ ಮೋಹಕ್ಕೆ ತಂಗಿ ಕುಟುಂಬದ ನೆತ್ತರು ಬಸಿದ ಹಂತಕಿ| ನಡುರಾತ್ರಿ ರಕ್ತ ಹರಿಸಿದವರ ಬಂಧನ

ಸಮಗ್ರ ನ್ಯೂಸ್ ಡೆಸ್ಕ್: ಮಂಡ್ಯವನ್ನು ಬೆಚ್ಚಿಬೀಳಿಸಿದ ನಾಲ್ವರು ಮಕ್ಕಳು ಸೇರಿ ಐವರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದೊಡ್ಡಪ್ಪನ ಮಗಳಿಂದಲೇ ರಣಭೀಕರ ಕೃತ್ಯ ನಡೆದಿದೆ ಎಂದು ತಿಳಿದುಬಂದಿದ್ದು‌ ಮಂಡ್ಯ ಜನತೆಗೆ ಆಘಾತ ತಂದಿದೆ ‌ ಭಾವನ ಮೇಲಿನ ವ್ಯಾಮೋಹಕ್ಕೆ ತಂಗಿಯನ್ನು ಕೊಲೆ ಮಾಡಿದ್ದಲ್ಲದೆ, ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಉಳಿದ ನಾಲ್ವರು ಮಕ್ಕಳನ್ನು ಪಾತಕಿ ಹತ್ಯೆಗೈದಿದ್ದಾಳೆ. ಆರೋಪಿ ಲಕ್ಷ್ಮಿ (30) ಹಾಗೂ ಕೊಲೆಯಾದ ಲಕ್ಷ್ಮಿ (26) ಗಂಡ ಗಂಗಾರಾಮ್ ಜತೆ ವಿವಾಹೇತರ ಸಂಬಂಧವಿತ್ತು. ಮದುವೆಯಾಗಿ ಎರಡು ಮಕ್ಕಳ

ಮಂಡ್ಯ: ಭಾವನ ಮೇಲಿನ ಮೋಹಕ್ಕೆ ತಂಗಿ ಕುಟುಂಬದ ನೆತ್ತರು ಬಸಿದ ಹಂತಕಿ| ನಡುರಾತ್ರಿ ರಕ್ತ ಹರಿಸಿದವರ ಬಂಧನ Read More »

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ| ವಕೀಲ ರಾಜೇಶ್ ಭಟ್ ಗೆ ಜಾಮೀನು

ಸಮಗ್ರ ನ್ಯೂಸ್ ಡೆಸ್ಕ್: ಇಂಟರ್ನ್​​ಶಿಪ್​ಗೆಂದು ಬಂದಿದ್ದ ಕಾನೂನು ಪದವಿ ವಿದ್ಯಾರ್ಥಿನಿಯೊಬ್ಬರ ಮೇಲೆ ತನ್ನ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಹಿರಿಯ ವಕೀಲ ಕೆ.ಎಸ್​.ಎನ್​. ರಾಜೇಶ್​ ಭಟ್​ಗೆ ಹೈಕೋರ್ಟ್​ ಷರತ್ತುಬದ್ಧ ಜಾಮೀನು ನೀಡಿದೆ. ಸೋಮವಾರ ಜಾಮೀನು ಮಂಜೂರಾಗಿದ್ದು, ಜಾಮೀನು ಪ್ರಕ್ರಿಯೆ ಮುಗಿಸಿ ಇನ್ನೆರಡು ದಿನದಲ್ಲಿ ರಾಜೇಶ್​ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಕೆ.ಎಸ್​.ಎನ್​. ರಾಜೇಶ್ ಭಟ್​ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿನಿ 2021ರ ಅಕ್ಟೋಬರ್​ನಲ್ಲಿ ದೂರು ದಾಖಲಿಸಿದ್ದರು. ಕಚೇರಿಯಲ್ಲಿ ಕಚೇರಿಯಲ್ಲೇ

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ| ವಕೀಲ ರಾಜೇಶ್ ಭಟ್ ಗೆ ಜಾಮೀನು Read More »