ಕ್ರೈಂ

ದಾರಿಬಿಡಿ ಎಂದು‌ ಗದರಿದ್ದಕ್ಕೆ ಯುವಕನಿಗೆ ಸಾವಿನ ದಾರಿ‌ ತೋರಿದ ಅಪ್ರಾಪ್ತ ಬಾಲಕರು|

ಸಮಗ್ರ ನ್ಯೂಸ್: ಆರು ಮಂದಿ ಅಪ್ರಾಪ್ತ ಬಾಲಕರು 22 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಮುಖ್ಯ ರಸ್ತೆಯಲ್ಲಿ ಜನಸಂದಣಿಯಲ್ಲಿ ಜಗಳವಾಡಿ ಚಾಕುವಿನಿಂದ ಇರಿದಿದ್ದಾರೆ. ಚಿಕಿತ್ಸೆ ವೇಳೆ ಯುವಕ ಸಾವನ್ನಪ್ಪಿದ್ದು, ಎಲ್ಲಾ ಅಪ್ರಾಪ್ತರು ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ ಇಬ್ಬರು ಒಂಬತ್ತನೇ ತರಗತಿ ವಿದ್ಯಾರ್ಥಿಗಳೆಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯು ನಗರದ ಭನ್ವಾರ್ಕುವಾನ್ ಪ್ರದೇಶದಲ್ಲಿ ಸಂಭವಿಸಿದೆ. ಆಯುಷ್ ಎಂಬ ಯುವಕ ಬೈಕ್​ನಲ್ಲಿ ಹೋಗುತ್ತಿದ್ದ. ಬಾಲಕರ ಗುಂಪು ರಸ್ತೆಯ ಮೇಲೆ ಇದ್ದುದರಿಂದ ಆಯುಷ್​ ಹಾರ್ನ್ ಮಾಡಿ ಹುಡುಗರನ್ನು ಸರಿಯುವಂತೆ […]

ದಾರಿಬಿಡಿ ಎಂದು‌ ಗದರಿದ್ದಕ್ಕೆ ಯುವಕನಿಗೆ ಸಾವಿನ ದಾರಿ‌ ತೋರಿದ ಅಪ್ರಾಪ್ತ ಬಾಲಕರು| Read More »

ಮಡಿಕೇರಿ: ಆಟೋ ರಿಕ್ಷಾಕ್ಕೆ ಬೆಂಕಿ‌ಹಚ್ಚಿದ ಪ್ರಕರಣದ ಆರೋಪಿಗೆ ಚಾಕು ಇರಿತ

ಸಮಗ್ರ ನ್ಯೂಸ್: ಮಡಿಕೇರಿಯಲ್ಲಿ ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗೆ ಚಾಕು ಇರಿದಿರುವ ಘಟನೆ ನಡೆದಿದೆ. ಮಡಿಕೇರಿ ನಗರದ ತ್ಯಾಗರಾಜ ಕಾಲೋನಿ ನಿವಾಸಿ ಹ್ಯಾರಿಸ್​ ಚಾಕು ಇರಿತಕ್ಕೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ. ಮಡಿಕೇರಿ ನಗರದ ರಾಣಿಪೇಟೆ ನಿವಾಸಿ ಅಬ್ದುಲ್ ರೆಹಮಾನ್ ಹಾಗೂ ತ್ಯಾಗರಾಜ ಕಾಲೋನಿ ನಿವಾಸಿ ಹ್ಯಾರಿಸ್ ಎಂಬವರ ನಡುವೆ ಕಳೆದ 10 ವರ್ಷಗಳಿಂದ ವೈಯಕ್ತಿಕ ದ್ವೇಷವಿತ್ತು. ಇವರಿಬ್ಬರಿಗೆ ವಾಟ್ಸಾಪ್ ಮೂಲಕ ದಿನಾ ಜಗಳವಾಗುತ್ತಿತ್ತು ಎನ್ನಲಾಗಿದೆ. ಅದೇ ವಿಚಾರವಾಗಿ ಕೋಪಗೊಂಡಿದ್ದ ಹ್ಯಾರಿಸ್, ಕಳೆದ ಡಿ.29 ರಂದು

ಮಡಿಕೇರಿ: ಆಟೋ ರಿಕ್ಷಾಕ್ಕೆ ಬೆಂಕಿ‌ಹಚ್ಚಿದ ಪ್ರಕರಣದ ಆರೋಪಿಗೆ ಚಾಕು ಇರಿತ Read More »

ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಇನ್ನಿಲ್ಲ| ನಡೆದಾಡುವ ದೇವರು ಲಿಂಗೈಕ್ಯ

ಸಮಗ್ರ ನ್ಯೂಸ್: ಖ್ಯಾತ ಪ್ರವಚನಕಾರರು, ನಡೆದಾಡುವ ದೇವರೆಂದೇ ಇಡೀ ಖ್ಯಾತರಾಗಿದ್ದ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಗಳು, ಸುಮಾರು 1 ತಿಂಗಳಿಂದ ದ್ರವಾಹಾರವನ್ನೇ ಸೇವಿಸುತ್ತಿದ್ದರು. ಹೆಚ್ಚಿನ ಚಿಕಿತ್ಸೆ ಪಡೆಯಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೈ ಮುಗಿದು ಬೇಡಿಕೊಂಡರೂ ಶ್ರೀಗಳು ನಿರಾಕರಿಸಿದ್ದರು. ನಿನ್ನೆ ಬೆಳಗ್ಗೆ ಪ್ರಧಾನಿ ಮೋದಿ ಸಹ ದೂರವಾಣಿ ಕರೆ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದರು. ಇಂದು ಮಧ್ಯಾಹ್ನದವರೆಗೆ ಆರೋಗ್ಯ ವಿಚಾರಿಸಿದ ಗಣ್ಯರೆಲ್ಲರೂ ಶ್ರೀಗಳ ಆರೋಗ್ಯ ಸ್ಥಿರವಾಗಿದೆ

ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಇನ್ನಿಲ್ಲ| ನಡೆದಾಡುವ ದೇವರು ಲಿಂಗೈಕ್ಯ Read More »

ಪಿರಿಯಾಪಟ್ಟಣ ಚರ್ಚ್ ದಾಳಿಗೆ ಬಿಗ್ ಟ್ವಿಸ್ಟ್| ಬಂಧಿತ ಬಾಯ್ಬಿಟ್ಟ ಅಸಲಿ ಸತ್ಯ ಏನು?

ಸಮಗ್ರ ನ್ಯೂಸ್: ಕ್ರಿಸ್ ಮಸ್ ನ ಮರುದಿನ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಬಾಲಯೇಸು ಪ್ರತಿಮೆ ಧ್ವಂಸಗೈದ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ವರದಿಯಾಗಿತ್ತು. ಪ್ರಕರಣ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಸಂಬಳ ನೀಡದಿದ್ದಕ್ಕೆ ಕಳ್ಳತನ ಮಾಡಲಾಗಿದೆ ಎಂದು ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹೇಳಿಕೆ ನೀಡಿದ್ದು, ವಿಶ್ವ ಎಂಬ ಪೌರ ಕಾರ್ಮಿಕನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಎರಡು ತಿಂಗಳಿನಿಂದ ಚರ್ಚ್ನಲ್ಲಿ ಸಂಬಳ

ಪಿರಿಯಾಪಟ್ಟಣ ಚರ್ಚ್ ದಾಳಿಗೆ ಬಿಗ್ ಟ್ವಿಸ್ಟ್| ಬಂಧಿತ ಬಾಯ್ಬಿಟ್ಟ ಅಸಲಿ ಸತ್ಯ ಏನು? Read More »

ಪ್ರೀತಿಸಲು ಒಲ್ಲೆ ಎಂದವಳ ಕತ್ತುಕೊಯ್ದು ತಾನೂ ಇರಿದುಕೊಂಡ ಭಗ್ನ ಪ್ರೇಮಿ| ಒನ್ ವೇ ಲವ್ ಗೆ ಬಲಿಯಾದ ಯುವತಿ

ಸಮಗ್ರ ನ್ಯೂಸ್: ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಪ್ರೀತಿ ಒಪ್ಪದ ಸಹಪಾಠಿ ವಿದ್ಯಾರ್ಥಿನಿಯ ಕತ್ತು ಕೊಯ್ದು ಕೊಂದಿದ್ದಲ್ಲದೆ, ತನಗೂ ಚಾಕುವಿನಿಂದ ಇರಿದುಕೊಂಡಿರುವ ಆಘಾತಕಾರಿ ಘಟನೆ ಸಂಭವಿಸಿದೆ. ಬೆಂಗಳೂರಿನ ರಾಜಾನುಕುಂಟೆಯಲ್ಲಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಈ ಘಟನೆ ಜರುಗಿದ್ದು, ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವನಪ್ಪಿದ್ದಾಳೆ. ತೀವ್ರ ಗಾಯಗೊಂಡಿರುವ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಟೆಕ್ ಓದುತ್ತಿದ್ದ ಲಯಸ್ಮಿತಾ ಎಂಬ ವಿದ್ಯಾರ್ಥಿನಿಗೆ ನೃಪತುಂಗ ಕಾಲೇಜಿನಲ್ಲಿ ಓದುತ್ತಿದ್ದ ಪವನ್ ಕಲ್ಯಾಣ್ ಎಂಬ ವಿದ್ಯಾರ್ಥಿ ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಅಲ್ಲದೇ

ಪ್ರೀತಿಸಲು ಒಲ್ಲೆ ಎಂದವಳ ಕತ್ತುಕೊಯ್ದು ತಾನೂ ಇರಿದುಕೊಂಡ ಭಗ್ನ ಪ್ರೇಮಿ| ಒನ್ ವೇ ಲವ್ ಗೆ ಬಲಿಯಾದ ಯುವತಿ Read More »

ಕಾರ್ಕಳದಲ್ಲಿ ವಿಜಯನಗರ ಶಾಲಾ ಮಕ್ಕಳ ಪ್ರವಾಸದ ಬಸ್ ಪಲ್ಟಿ| ಶಿಕ್ಷಕರು, ವಿದ್ಯಾರ್ಥಿಗಳಿಗೆ ಗಾಯ

ಸಮಗ್ರ ನ್ಯೂಸ್: ಕಾರ್ಕಳ ತಾಲೂಕಿನ ನಲ್ಲೂರಿನ ರಸ್ತೆ ತಿರುವಿನಲ್ಲಿ ಶಾಲಾ ಪ್ರವಾಸದ ಬಸ್‌ ಒಂದು ಉರುಳಿಬಿದ್ದು ಮೂವರು ಶಿಕ್ಷಕಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಘಟನೆಯಲ್ಲಿ ಒಟ್ಟು 15 ಜನಕ್ಕೆ ಸಣ್ಣಪುಟ್ಟ ತರಚಿದ ಗಾಯಗಳಾಗಿವೆ. ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಬಸವೇಶ್ವರ ಪ್ರೌಢಶಾಲೆಯ ವಾರ್ಷಿಕ ಪ್ರವಾಸದ ಬಸ್‌ ಇದಾಗಿದೆ. ಉಡುಪಿಯಿಂದ ಕಾರ್ಕಳದ ಕಡೆಗೆ ಸಾಗುತ್ತಿದ್ದ ಬಸ್‌ ನಲ್ಲೂರು ತಿರುವಿನಲ್ಲಿ ಒಮ್ಮೆಗೇ ನಿಯಂತ್ರಣ ತಪ್ಪಿ ಉರುಳಿದ್ದು, ಒಂದು ಭಾಗಕ್ಕೆ ಸಂಪೂರ್ಣ ಪಲ್ಟಿಯಾಗಿದೆ. ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಇಲ್ಲ ಎಂದು

ಕಾರ್ಕಳದಲ್ಲಿ ವಿಜಯನಗರ ಶಾಲಾ ಮಕ್ಕಳ ಪ್ರವಾಸದ ಬಸ್ ಪಲ್ಟಿ| ಶಿಕ್ಷಕರು, ವಿದ್ಯಾರ್ಥಿಗಳಿಗೆ ಗಾಯ Read More »

ಜೈಲಿನ ಮೇಲೆ ಬಂದೂಕು ದಾಳಿ| 10 ಭದ್ರತಾ ಸಿಬ್ಬಂದಿ ‌4 ಮಂದಿ ಕೈದಿಗಳು ಸಾವು

ಸಮಗ್ರ ನ್ಯೂಸ್: ಕಾರಾಗೃಹದ ಮೇಲೆ ಬಂದೂಕುಧಾರಿಗಳಿಂದ ಭೀಕರ ದಾಳಿ ನಡೆದ ಪರಿಣಾಮ 10 ಭದ್ರತಾ ಸಿಬ್ಬಂದಿ ಮತ್ತು ನಾಲ್ವರು ಕೈದಿಗಳು ದುರ್ಮರಣಕ್ಕೀಡಾದ ಘಟನೆ ಅಮೆರಿಕಾದ ಮೆಕ್ಸಿಕೊದಲ್ಲಿ ನಡೆದಿದೆ. ಟಕ್ಸಾಸ್‍ನ ಎಲ್‍ಪಾಸೋ ಪ್ರಾಂತ್ಯದ ಗಡಿಯಾಚೆಗಿನ ಸಿಯುಡಾಡ್, ಜುರೇಜ್ ಎಂಬಲಿರುವ ಮೆಕ್ಸಿಕೋದ ಕಾರಾಗೃಹದ ಮೇಲೆ ಬಂದೂಕುಧಾರಿಗಳು ಏಕಾಏಕಿ ದಾಳಿ ಮಾಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಹಲವು ಶಸ್ತ್ರಸಜ್ಜಿತ ವಾಹನಗಳೊಂದಿಗೆ ಬಂದ ಬಂದೂಕುಧಾರಿಗಳು ಕಾವಲುಗಾರರ ಮೇಲೆ ಗುಂಡಿನ ಮಳೆಗೆರೆದರು ಎಂದು ಚಿವಾಹೊ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ. ಈ ಘಟನೆಯಲ್ಲಿ 13

ಜೈಲಿನ ಮೇಲೆ ಬಂದೂಕು ದಾಳಿ| 10 ಭದ್ರತಾ ಸಿಬ್ಬಂದಿ ‌4 ಮಂದಿ ಕೈದಿಗಳು ಸಾವು Read More »

ಕರುವಿನ ಮೇಲೆ ಕಾಮುಕನ ಅಟ್ಟಹಾಸ| ಕಟ್ಟಿಹಾಕಿ ಅತ್ಯಾಚಾರ ನಡೆಸಿ ವಿಕೃತಿ

ಸಮಗ್ರ ನ್ಯೂಸ್: ಆಕಳ ಕರುವಿನ ಮೇಲೆ ಅತ್ಯಾಚಾರ ಎಸಗಿದ ಯುವಕನನ್ನು ಬಂಧಿಸಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ನಡೆದಿದೆ. 24 ವರ್ಷದ ಇಮ್ತಿಯಾಜ್ ಹುಸೇನ್ ಬಂಧಿತ ಆರೋಪಿ. ಭಾನುವಾರ ಲಿಂಗಸುಗೂರು ಪಟ್ಟಣದ ಕಸಬಾ ಲಿಂಗಸುಗೂರು ರಸ್ತೆಯ ಅಮೀನ್ ದರ್ಗಾ ಸಮೀಪ ಹೊಲದಲ್ಲಿ ಆಕಳ ಕರುವನ್ನು ಕಟ್ಟಿ ಹಾಕಿ ಅದರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂಧು ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಈತನ ಕಾಮದಾಹಕ್ಕೆ

ಕರುವಿನ ಮೇಲೆ ಕಾಮುಕನ ಅಟ್ಟಹಾಸ| ಕಟ್ಟಿಹಾಕಿ ಅತ್ಯಾಚಾರ ನಡೆಸಿ ವಿಕೃತಿ Read More »

ನ್ಯೂ ಇಯರ್ ಪಾರ್ಟಿ ವೇಳೆ ಒತ್ತಿದ ಟ್ರಿಗರ್‌ಗೆ ಯುವಕ ಬಲಿ| ಶೂಟ್ ಮಾಡಿದಾತನೂ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಹೊಸ ವರ್ಷವನ್ನು ಸಂಭ್ರಮ, ಸಡಗರದಿಂದ ಸ್ವಾಗತಿಸಿದ್ದಾರೆ. ಆದರೆ ಈ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂದರ್ಭದಲ್ಲಿ ಗುಂಡು ತಗುಲಿ ಓರ್ವ ಯುವಕ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿ ನಡೆದಿದೆ. ಶಿವಮೊಗ್ಗದ ಪಿಡ್ಲ್ಯೂಡಿ ಕ್ವಾರ್ಟರ್ಸ್​ನಲ್ಲಿ ವಾಸವಾಗಿದ್ದ ವಿನಯ್ ಮೃತ ದುರ್ದೈವಿ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕನ್ನಡ ಪಿಎಚ್​​ಡಿ ಮಾಡುತ್ತಿದ್ದ. ನಿನ್ನೆ ರಾತ್ರಿ ಮಂಜುನಾಥ್ ಒಲೇಕಾರ್ ಎಂಬುವವರ ಮನೆಯಲ್ಲಿ ನ್ಯೂ ಇಯರ್ ಪಾರ್ಟಿಗೆಂದು ಬಂದಿದ್ದ. ಈ ವೇಳೆ ಮಂಜುನಾಥ್ ಒಲೇಕಾರ್ ರಾತ್ರಿ 12ಕ್ಕೆ ನ್ಯೂ ಇಯರ್

ನ್ಯೂ ಇಯರ್ ಪಾರ್ಟಿ ವೇಳೆ ಒತ್ತಿದ ಟ್ರಿಗರ್‌ಗೆ ಯುವಕ ಬಲಿ| ಶೂಟ್ ಮಾಡಿದಾತನೂ ಹೃದಯಾಘಾತದಿಂದ ಸಾವು Read More »

ಬೆಳ್ತಂಗಡಿ: ಭೀಕರ ಅಪಘಾತ| ಮುಸ್ಲಿಂ ಧಾರ್ಮಿಕ ಮುಖಂಡ ಸೇರಿ ಇಬ್ಬರು ಸ್ಪಾಟ್ ಡೆತ್

ಸಮಗ್ರ ನ್ಯೂಸ್: ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮುಸ್ಲಿಂ ಸಾಮಾಜಿಕ, ಧಾರ್ಮಿಕ ಮುಖಂಡ ನೌಶಾದ್ ಹಾಜಿ ಸೂರಲ್ಪಾಡಿ ಹಾಗೂ ಅವರ ಕಾರು ಚಾಲಕ ಮುಷರಫ್ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ವೇಣೂರು ರಸ್ತೆಯ ಗರ್ಡಾಡಿ ಸಮೀಪ ನಡೆದಿದೆ. ಕಾರು ಹಾಗೂ ಬಸ್ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ವರ್ಷಾರಂಭದಲ್ಲೇ ನಡೆದ ಈ ಭೀಕರ ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಸೂರಲ್ಪಾಡಿ ನೌಷಾದ್ ಹಾಜಿಯವರು ಇತ್ತೀಚೆಗಷ್ಟೇ

ಬೆಳ್ತಂಗಡಿ: ಭೀಕರ ಅಪಘಾತ| ಮುಸ್ಲಿಂ ಧಾರ್ಮಿಕ ಮುಖಂಡ ಸೇರಿ ಇಬ್ಬರು ಸ್ಪಾಟ್ ಡೆತ್ Read More »