ಕರಾವಳಿ

ಆಟೋ ಚಾಲಕರಿಗೆ ಶಾಕ್‌ : ಎಲ್‌ಪಿಜಿ ದರ ಏರಿಕೆ

ನವದೆಹಲಿ : ಕೊರೊನಾ ಸಂಕಷ್ಟದಿಂದ ಆಟೋ ಚಾಲಕರು ಸೇರಿದಂತೆ ಟ್ಯಾಕ್ಸಿ ಚಾಲಕರು ತತ್ತರಿಸಿದ್ದಾರೆ. ಈ ನಡುವಲ್ಲೇ ಎಲ್‌ಪಿಜಿ ಗ್ಯಾಸ್‌ ದರದಲ್ಲಿ ಭಾರೀ ಏರಿಕೆ ಕಂಡಿದ್ದು ಈ ಮೂಲಕ ಎಲ್‌ಪಿಜಿ ಗ್ಯಾಸ್‌ ಆಟೋ ಚಾಲಕರಿಗೆ ಶಾಕ್‌ ಕೊಟ್ಟಿದೆ. ಕಳೆದ ಎರಡು ವರ್ಷಗಳಿಂದಲೂ ದೇಶದಲ್ಲಿ ಕೊರೊನಾ ಹೆಮ್ಮಾರಿಯ ಆರ್ಭಟದ ಹಿನ್ನೆಲೆಯಲ್ಲಿ ಹೇರಿಕೆಯಾಗಿದ್ದ ಲಾಕ್‌ಡೌನ್‌ ಆಟೋ ಚಾಲಕರನ್ನು ಹಿಂಡಿ ಹಿಪ್ಪೆಯನ್ನಾಗಿಸಿತ್ತು. ಒಂದೆಡೆ ಆಟೋಗಳನ್ನು ರಸ್ತೆಗೆ ಇಳಿಸದೆ, ಇನ್ನೊಂದೆಡೆ ಸಾಲದ ಹೊರೆಯ ನಡುವಲ್ಲೇ ಕಳೆದೊಂದು ತಿಂಗಳಿನಿಂದ ಚಾಲಕರು ದುಡಿಮೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ […]

ಆಟೋ ಚಾಲಕರಿಗೆ ಶಾಕ್‌ : ಎಲ್‌ಪಿಜಿ ದರ ಏರಿಕೆ Read More »

ದ.ಕ : ಅಗಸ್ಟ್ 10 ರವರೆಗೆ ಎಲ್ಲಾ ಸಭೆ ಸಮಾರಂಭಗಳಿಗೆ ನಿಷೇಧ ಹೇರಿದ ಜಿಲ್ಲಾಡಳಿತ

ಮಂಗಳೂರು: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾದ ಹಿನ್ನಲೆ, ಜಿಲ್ಲೆಯಲ್ಲಿ ಎಲ್ಲಾ ಸಭೆ ಸಮಾರಂಭಗಳು ಸೇರಿದಂತೆ ಇತರ ಚಟುವಟಿಕೆಗಳಿಗೆ ಕಠಿಣ ನಿಯಮ ವನ್ನು ಜಿಲ್ಲಾಡಳಿತ ಹೊರಡಿಸದೆ. ಕೇರಳದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಅಗಸ್ಟ್ 10 ರವರೆಗೆ ಜಿಲ್ಲೆಯಲ್ಲಿ ಯಾವುದೇ ಸಭೆ ಸಮಾರಂಭ ನಡೆಸದಂತೆ ನಿಷೇಧ ಹೇರಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ. ಸಭೆ-ಸಮಾರಂಭಗಳು, ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಗಸ್ಟ್ 10 ರವರೆಗೆ ನಡೆಸದಂತೆ

ದ.ಕ : ಅಗಸ್ಟ್ 10 ರವರೆಗೆ ಎಲ್ಲಾ ಸಭೆ ಸಮಾರಂಭಗಳಿಗೆ ನಿಷೇಧ ಹೇರಿದ ಜಿಲ್ಲಾಡಳಿತ Read More »

ಮಂಗಳೂರು: ಪದವಿ ಪರೀಕ್ಷೆ ಬಗ್ಗೆ ಗೊಂದಲದಲ್ಲಿ ಇರುವ ವಿದ್ಯಾರ್ಥಿಗಳಿಗೆ ಸ್ಪಷ್ಟನೆ ನೀಡಿದ ವಿ.ವಿ

ಮಂಗಳೂರು: ಕೋವಿಡ್ ಸೋಂಕು ಹಿನ್ನಲೆ ಮುಂದೂಡಲ್ಪಟ್ಟ ಪರೀಕ್ಷೆಗಳು ಆ. 2ರಿಂದ 14ವರೆಗೆ ಎಂದಿನಂತೆ ನಡೆಯಲಿದೆ ಎಂದು ಗೊಂದಲದಲ್ಲಿ ಇರುವ ವಿದ್ಯಾರ್ಥಿಗಳಿಗೆ ವಿವಿ ಸ್ಪಷ್ಟನೆ ನೀಡಿದೆ. ಕೊರೊನಾ ಸೋಂಕು ಹಿನ್ನಲೆಯಲ್ಲಿ ರದ್ದುಗೊಂಡಿದ್ದ ಪರೀಕ್ಷೆಗಳು ವೇಳಾ ಪಟ್ಟಿಯಂತೆ ಯಥಾಪ್ರಕಾರವಾಗಿ ನಡೆಯಲಿದೆ” ಎಂದು ಮಾಧ್ಯಮಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್‌. ಧರ್ಮ ಹೇಳಿಕೆ ನೀಡಿದ್ದಾರೆ. ಇನ್ನು ಕೇರಳದ ವಿದ್ಯಾರ್ಥಿಗಳು ಸೇರಿದಂತೆ ಯಾರೂ ಕೂಡ ಆತಂಕ ಪಡಬೇಕಿಲ್ಲ. ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ಇರುವವರಿಗೆ ಪ್ರತ್ಯೇಕ ಪರೀಕ್ಷೆ ನಡೆಸಲಾಗುವುದು, ಅದಕ್ಕೆ ದಿನಾಂಕವನ್ನು

ಮಂಗಳೂರು: ಪದವಿ ಪರೀಕ್ಷೆ ಬಗ್ಗೆ ಗೊಂದಲದಲ್ಲಿ ಇರುವ ವಿದ್ಯಾರ್ಥಿಗಳಿಗೆ ಸ್ಪಷ್ಟನೆ ನೀಡಿದ ವಿ.ವಿ Read More »

ಕೇರಳದಲ್ಲಿ ಕೊರೊನಾ ಸೋಂಕು ಏರಿಕೆ: ಇಂದಿನಿಂದ ಕರ್ನಾಟಕದಿಂದ ಸರ್ಕಾರಿ, ಖಾಸಗಿ ಬಸ್ ಸಂಚಾರ ಸ್ಥಗಿತ

ಮಂಗಳೂರು: ನೆರೆಯ ರಾಜ್ಯವಾದ ಕೆರಳದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ತೀವ್ರಗೊಂಡಿರುವ ಹಿನ್ನಲೆಯಲ್ಲಿ ಜಿಲ್ಲೆಯಿಂದ ಕಾಸರಗೋಡುಗೆ ಸಂಚರಿಸುವ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳನ್ನು ಇಂದಿನಿಂದ ಒಂದು ವಾರದ ಕಾಲ ಸ್ಥಗಿತಗೊಳಿಸಲಾಗುವುದು ಎಂದು ಸಂಸದರಾದ ನಳೀನ್ ಕುಮಾರ್ ಕಟೀಲು ಅವರು ತಿಳಿಸಿದರು. ಅವರು ಜುಲೈ 31ರ ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೊನಾ ಪಾಸಿಟಿವಿಟಿ ಪ್ರಕರಣಗಳು ಕಳೆದ ಕೆಲವು ದಿನಗಳಿಂದ

ಕೇರಳದಲ್ಲಿ ಕೊರೊನಾ ಸೋಂಕು ಏರಿಕೆ: ಇಂದಿನಿಂದ ಕರ್ನಾಟಕದಿಂದ ಸರ್ಕಾರಿ, ಖಾಸಗಿ ಬಸ್ ಸಂಚಾರ ಸ್ಥಗಿತ Read More »

ಮಂಗಳೂರು: 20 ಅಡಿ ಆಳದಲ್ಲಿದ್ದ ಪೆಟ್ರೋಲಿಯಂ ಪೈಪ್ ಲೈನ್‍ಗೆ ಕನ್ನ ಹಾಕಿದ ಖದೀಮರು

ಮಂಗಳೂರು: 20 ಅಡಿ ಆಳದಲ್ಲಿದ್ದ ಪೆಟ್ರೋಲಿಯಂ ಪೈಪ್ ಲೈನ್‍ಗೆ ಖದೀಮರು ಕನ್ನ ಹಾಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೋರ್ನಾಡು ಅರ್ಬಿ ಎಂಬಲ್ಲಿ ಬೆಳಕಿಗೆ ಬಂದಿದೆ. ಕೃತ್ಯ ಎಸಗಿದವನನ್ನು ಐವಾನ್ ಎಂದು ಗುರುತಿಸಲಾಗಿದೆ. ಈತನ ಜಮೀನಿನಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್‍ಲೈನ್ ಹಾದು ಹೋಗಿತ್ತು. ಈ ಪೈಪ್ ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್ ಪೂರೈಕೆ ಮಾಡಲಾಗಿತ್ತು. ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಾಗ ಕಂಪನಿಯವರು ಹುಡುಕಾಟ ನಡೆಸಿದಾಗ ಐವಾನ್ ಕೃತ್ಯ ಬೆಳಕಿಗೆ ಬಂದಿದೆ. 20

ಮಂಗಳೂರು: 20 ಅಡಿ ಆಳದಲ್ಲಿದ್ದ ಪೆಟ್ರೋಲಿಯಂ ಪೈಪ್ ಲೈನ್‍ಗೆ ಕನ್ನ ಹಾಕಿದ ಖದೀಮರು Read More »

ಮತ್ತೆ ಏರಿಕೆ ಕಾಣುತ್ತಿರುವ ಕೋವಿಡ್| ದ.ಕ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಾದರೂ ಅಚ್ಚರಿಯಿಲ್ಲ- ಡಿ.ಸಿ ಎಚ್ಚರಿಕೆ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸೋಂಕು ಹೆಚ್ಚಾದಲ್ಲಿ ಮತ್ತೆ ಲಾಕ್‌ಡೌನ್ ಮಾಡಬೇಕಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮಾತಾನಾಡಿರುವ ಅವರು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಒಂದು ವೇಳೆ ಸೋಂಕು ಹೆಚ್ಚದಲ್ಲಿ ಮತ್ತೆ ಲಾಕ್ಡೌನ್, ವೀಕೆಂಡ್ ಕರ್ಪ್ಯೂ ನಿಯಮಗಳನ್ನು ಕೂಡಾ ಜಾರಿ ಮಾಡಬೇಕಾಗುತ್ತದೆ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸುವ ಸಲುವಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಾದ ಕ್ರಮಗಳನ್ನು

ಮತ್ತೆ ಏರಿಕೆ ಕಾಣುತ್ತಿರುವ ಕೋವಿಡ್| ದ.ಕ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಾದರೂ ಅಚ್ಚರಿಯಿಲ್ಲ- ಡಿ.ಸಿ ಎಚ್ಚರಿಕೆ Read More »

ಸುಬ್ರಹ್ಮಣ್ಯ: ಶ್ರೀ ಹೋಮ್’ಕೇರ್ ಕ್ಲಿನಿಕ್’ನಲ್ಲಿ ಇನ್ನು ಮದ್ಯಾಹ್ನದ ಬಳಿಕವೂ ವೈದ್ಯಕೀಯ ಸೇವೆ ಲಭ್ಯ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹೋಮ್’ಕೇರ್ ಕ್ಲಿನಿಕ್ ನಲ್ಲಿ ಇನ್ನು ಅಪರಾಹ್ನವೂ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಲಭ್ಯವಿದೆ ಎಂದು ಕ್ಲಿನಿಕ್ ನ ವೈದ್ಯರು ತಿಳಿಸಿದ್ದಾರೆ. ಸುಬ್ರಹ್ಮಣ್ಯದ ಕಾರ್ತಿಕೇಯ ಬಿಲ್ಡಿಂಗ್ ನಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಸ್ಥಳೀಯ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿದ್ದ ಹೋಮಿಯೋ ಕ್ಲಿನಿಕ್ ಇದುವರೆಗೆ ಬೆಳಿಗ್ಗೆ 9:00 ಗಂಟೆಯಿಂದ ಮದ್ಯಾಹ್ನ 1:00 ರ ವರೆಗೆ ಕ್ಲಿನಿಕ್ ತೆರೆದಿರುತ್ತಿತ್ತು. ಇದೀಗ ಜನತೆಯ ಅನುಕೂಲಕ್ಕಾಗಿ ಕ್ಲಿನಿಕ್ ನ್ನು ಅಪರಾಹ್ನವೂ ತೆರೆಯಲು ನಿರ್ಧರಿಸಲಾಗಿದೆ. ಕ್ಲಿನಿಕ್ ಇನ್ನು ಬೆಳಗಿನ

ಸುಬ್ರಹ್ಮಣ್ಯ: ಶ್ರೀ ಹೋಮ್’ಕೇರ್ ಕ್ಲಿನಿಕ್’ನಲ್ಲಿ ಇನ್ನು ಮದ್ಯಾಹ್ನದ ಬಳಿಕವೂ ವೈದ್ಯಕೀಯ ಸೇವೆ ಲಭ್ಯ Read More »

ಸೌತಡ್ಕ‌ ಗಣಪನ ಸನ್ನಿದಿಯಿಂದ ಮಣ್ಣು ತೆಗೆದುಕೊಂಡು ಹೋದ ಮುಸ್ಲಿಂ ಯುವಕ – ಶಂಕಾಸ್ಪದ ಘಟನೆ ಸಿಸಿ ಟಿವಿಯಲ್ಲಿ ಸೆರೆ- ದೂರು ದಾಖಲು

ಧರ್ಮಸ್ಥಳ: ಹಿಂದೂಗಳ ಪ್ರಸಿದ್ಧ ಯಾತ್ರಾಸ್ಥಳ, ಬಯಲು ಆಲಯವೆಂದೇ ಪ್ರಸಿದ್ಧಿ ಪಡೆದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವಠಾರದಿಂದ ಮುಸ್ಲಿಂ ಯುವಕನೊಬ್ಬ ಮಣ್ಣು ಅಗೆದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಕೊಂಡು ಹೋಗಿ ಸಂಶಯಾಸ್ಪದವಾಗಿ ವರ್ತಿಸಿದ ದೃಶ್ಯ ದೇವಸ್ಥಾನದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿ ಟಿವಿ ದೃಶ್ಯಾವಳಿಯಿಂದ ಯುವಕನ ಚಹರೆ ಪತ್ತೆಯಾಗಿದ್ದು, ಈತ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ ಕಲಂದರ್ ಎಂದು ಗುರುತಿಸಲಾಗಿದೆ. ಈತ ಸೌತಡ್ಕ ಕ್ಷೇತ್ರದ ಆವರಣದಿಂದ ಮಣ್ಣು ಅಗೆದು ಪ್ಲಾಸ್ಟಿಕ್ ಚೀಲವೊಂದರಲ್ಲಿ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿದ್ದು, ಜು.24

ಸೌತಡ್ಕ‌ ಗಣಪನ ಸನ್ನಿದಿಯಿಂದ ಮಣ್ಣು ತೆಗೆದುಕೊಂಡು ಹೋದ ಮುಸ್ಲಿಂ ಯುವಕ – ಶಂಕಾಸ್ಪದ ಘಟನೆ ಸಿಸಿ ಟಿವಿಯಲ್ಲಿ ಸೆರೆ- ದೂರು ದಾಖಲು Read More »

ದಲಿತ ಕುಟುಂಬದ ಮನೆ ನೆಲಸಮ| ನೊಂದ ಯಜಮಾನ ಆತ್ಮಹತ್ಯೆಗೆ ಯತ್ನ| ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಮಿನಿ ವಿಧಾನಸೌಧದೆದರು ಪ್ರತಿಭಟನೆ

ದಲಿತ ಕುಟುಂಬದ ಮನೆ ನೆಲಸಮ| ನೊಂದ ಯಜಮಾನ ಆತ್ಮಹತ್ಯೆಗೆ ಯತ್ನ| ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಮಿನಿ ವಿಧಾನಸೌಧದೆದರು ಪ್ರತಿಭಟನೆ ಪುತ್ತೂರು: ಇಲ್ಲಿನ ಒಳಗ್ರಾಮ ಗ್ರಾಮದ ದರ್ಭೆತ್ತಡ್ಕ ಶಾಲೆಯ ಸಮೀಪ 11 ವರ್ಷಗಳಿಂದ ವಾಸಿಸುತ್ತಿದ್ದ ದಲಿತ ಕುಟುಂಬದ ಮನೆಯನ್ನು ಅಕ್ರಮ ಕಟ್ಟಡ ನೆಪದಲ್ಲಿ ನೆಲ ಸಮ ಮಾಡಲಾಗಿದ್ದು, ಘಟನೆಯಿಂದ ಮನೆ ಮಾಲೀಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆ ಖಂಡಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ಪದಾಧಿಕಾರಿಗಳು ಪುತ್ತೂರು ಮಿನಿವಿಧಾನ ಸೌಧದೆದರು ಪ್ರತಿಭಟನೆ ನಡೆಸಿದ್ದಾರೆ. ಮನೆಯವರು ಕೆಲಸಕ್ಕೆ ಹೋಸ ಸಂದರ್ಭದಲ್ಲಿ

ದಲಿತ ಕುಟುಂಬದ ಮನೆ ನೆಲಸಮ| ನೊಂದ ಯಜಮಾನ ಆತ್ಮಹತ್ಯೆಗೆ ಯತ್ನ| ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಮಿನಿ ವಿಧಾನಸೌಧದೆದರು ಪ್ರತಿಭಟನೆ Read More »

ಕುಂದಾಪುರ: ಕಾರು ಢಿಕ್ಕಿ ಹೊಡೆದು ಸೈಕಲ್ ಸವಾರ ಮೃತ್ಯು

ಕುಂದಾಪುರ: ಕಾರು ಡಿಕ್ಕಿ ಹೊಡೆದು ಸೈಕಲ್ ಸವಾರರೊಬ್ಬರು ಮೃತಪಟ್ಟ ಘಟನೆ ಹೆಮ್ಮಾಡಿ ಹಾಗೂ ತಲ್ಲೂರು ನಡುವಿನ ಜಾಲಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಸ್ಥಳೀಯ ಸಂತೋಷ್ ನಗರದ ನಿವಾಸಿ ರಾಮ ಕುಲಾಲ್(೫೨) ಮೃತಪಟ್ಟವರು. ಅಪಘಾತದಲ್ಲಿ ಗಂಭೀರ ಗಾಯಗೊಂಡ ರಾಮ ಕುಲಾಲ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಕಾರು ಢಿಕ್ಕಿ ಹೊಡೆದು ಸೈಕಲ್ ಸವಾರ ಮೃತ್ಯು Read More »