ಬಂಟ್ವಾಳ: ಗುತ್ತಿನ ಮನೆಯ ಗತ್ತು ಕಸಿಯಿತೇ ದೈವಸ್ಥಾನ ಆಡಳಿತ ಮಂಡಳಿ| ಕಾಂಪ್ರಬೈಲು ಉಳ್ಳಾಲ್ತಿ ಭಂಡಾರವೀಗ ಹೈಕೋರ್ಟ್ ಅಂಗಳದಲ್ಲಿ..!?
ಮಂಗಳೂರು: ಕರಾವಳಿಯಲ್ಲಿ ದೇವಸ್ಥಾನಗಳಷ್ಟೇ ಪ್ರಾಧಾನ್ಯತೆ ದೈವಸ್ಥಾನಗಳಿಗೂ ಇದೆ. ಇಲ್ಲಿನ ಜನ ದೈವ, ದೇವರುಗಳನ್ನು ಭಯ ಭಕ್ತಿಯಿಂದ ಆರಾಧನೆ ಮಾಡುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ದೈವಸ್ಥಾನವೊಂದರ ವಿವಾದ ಈಗ ಹೈಕೋರ್ಟ್ಗೆ ಅಂಗಳದಲ್ಲಿ ನಿಂತುಕೊಂಡಿದೆ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾಂಪ್ರಬೈಲು ಉಳ್ಳಾಲ್ತಿ ಮತ್ತು ಅಜ್ವಾರ ದೈವಸ್ಥಾನದಲ್ಲಿ ಇದೀಗ ವ್ಯವಸ್ಥಾಪನಾ ಸಮಿತಿ ಮತ್ತು ಗುತ್ತಿನ ಮನೆಯವರ ನಡುವೆ ಜಟಾಪಟಿ ಶುರುವಾಗಿದೆ. ದೈವಗಳ ಮೊಗ ಮೂರ್ತಿ ಭಂಡಾರವನ್ನು ನೀಡುವ ವಿಚಾರದಲ್ಲಿನ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಸರ್ಕಾರವಿದ್ದರೂ, ಆಚರಣೆಗಳ ವಿಚಾರಗಳಿಗೆ








