ಕರಾವಳಿ

ಬಂಟ್ವಾಳ: ಗುತ್ತಿನ ಮನೆಯ ಗತ್ತು‌ ಕಸಿಯಿತೇ ದೈವಸ್ಥಾನ ಆಡಳಿತ ಮಂಡಳಿ| ಕಾಂಪ್ರಬೈಲು ಉಳ್ಳಾಲ್ತಿ ಭಂಡಾರವೀಗ ಹೈಕೋರ್ಟ್ ಅಂಗಳದಲ್ಲಿ..!?

ಮಂಗಳೂರು: ಕರಾವಳಿಯಲ್ಲಿ ದೇವಸ್ಥಾನಗಳಷ್ಟೇ ಪ್ರಾಧಾನ್ಯತೆ ದೈವಸ್ಥಾನಗಳಿಗೂ ಇದೆ. ಇಲ್ಲಿನ ಜನ ದೈವ, ದೇವರುಗಳನ್ನು ಭಯ ಭಕ್ತಿಯಿಂದ ಆರಾಧನೆ ಮಾಡುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ದೈವಸ್ಥಾನವೊಂದರ ವಿವಾದ ಈಗ ಹೈಕೋರ್ಟ್‌ಗೆ ಅಂಗಳದಲ್ಲಿ ನಿಂತುಕೊಂಡಿದೆ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾಂಪ್ರಬೈಲು ಉಳ್ಳಾಲ್ತಿ ಮತ್ತು ಅಜ್ವಾರ ದೈವಸ್ಥಾನದಲ್ಲಿ ಇದೀಗ ವ್ಯವಸ್ಥಾಪನಾ ಸಮಿತಿ ಮತ್ತು ಗುತ್ತಿನ ಮನೆಯವರ ನಡುವೆ ಜಟಾಪಟಿ ಶುರುವಾಗಿದೆ. ದೈವಗಳ ಮೊಗ ಮೂರ್ತಿ ಭಂಡಾರವನ್ನು ನೀಡುವ ವಿಚಾರದಲ್ಲಿನ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಸರ್ಕಾರವಿದ್ದರೂ, ಆಚರಣೆಗಳ ವಿಚಾರಗಳಿಗೆ

ಬಂಟ್ವಾಳ: ಗುತ್ತಿನ ಮನೆಯ ಗತ್ತು‌ ಕಸಿಯಿತೇ ದೈವಸ್ಥಾನ ಆಡಳಿತ ಮಂಡಳಿ| ಕಾಂಪ್ರಬೈಲು ಉಳ್ಳಾಲ್ತಿ ಭಂಡಾರವೀಗ ಹೈಕೋರ್ಟ್ ಅಂಗಳದಲ್ಲಿ..!? Read More »

ದೀಪಾವಳಿ ದಿನ ರಾಜ್ಯದ ಎಲ್ಲಾ ‌ಮುಜುರಾಯಿ ದೇವಾಲಯಗಳಲ್ಲಿ ಗೋಪೂಜೆ‌ ನಡೆಸಲು ಆದೇಶಿಸಿದ ರಾಜ್ಯ‌ಸರ್ಕಾರ

ಬೆಂಗಳೂರು: ದೀಪಾವಳಿ ಹಬ್ಬದಂದು ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಮುಜರಾಯಿ ಇಲಾಖೆಯ ಎಲ್ಲಾ ದೇವಸ್ಥಾನದಲ್ಲಿ ಗೋಪೂಜೆ ಮಾಡಲು ರಾಜ್ಯ ಸರ್ಕಾರದಿಂದ ಆದೇಶ ನೀಡಿದೆ. ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ದೇವಸ್ಥಾನಗಳಲ್ಲಿ ನವೆಂಬರ್‌ 5ರಂದು ಆಚರಣೆ ಮಾಡುವ ಬಲಿಪಾಡ್ಯಮಿಯಂದು ಗೋವಿನ ಪೂಜೆಯನ್ನು ಅಂದು ಸಂಜೆ 5.30ರಿಂದ 6.30ರ ಗೋಧೂಳಿ ಲಗ್ನದಲ್ಲಿ ಪೂಜೆ ಮಾಡುವಂತೆ ಆದೇಶ ನೀಡಲಾಗಿದೆ.

ದೀಪಾವಳಿ ದಿನ ರಾಜ್ಯದ ಎಲ್ಲಾ ‌ಮುಜುರಾಯಿ ದೇವಾಲಯಗಳಲ್ಲಿ ಗೋಪೂಜೆ‌ ನಡೆಸಲು ಆದೇಶಿಸಿದ ರಾಜ್ಯ‌ಸರ್ಕಾರ Read More »

ಮಂಗಳೂರು: ಬಲೆಗೆ ಬಿದ್ದ 1,500 ಕ್ಕೂ ಹೆಚ್ಚು ತೂಕದ ಬೃಹತ್ ಮೀನು ಮರಳಿ ಕಡಲಿಗೆ.!

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭ ಬೃಹತ್ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಾಗರ್ ಹೆಸರಿನ ಬೋಟ್ ನ ಮೀನುಗಾರರಿಗೆ ಈ ಮೀನು ದೊರಕಿದೆ. ಶಾರ್ಕ್ ಜಾತಿಗೆ ಸೇರಿದ ಮೀನು ಇದಾಗಿದ್ದು ಈ ಮೀನು ಹಿಡಿಯುವುದು ನಿಷೇಧವಿದೆ. ಹೀಗಾಗಿ ಬಲೆಗೆ ಸಿಕ್ಕ‌ ಮೀನನ್ನು ಮೀನುಗಾರರು ಬಲೆಯಿಂದ ಬಿಡಿಸಿ ಕ್ರೇನ್ ಬಳಸಿ ಮರಳಿ ಸಮುದ್ರಕ್ಕೆ ಸೇರಿಸಿದ್ದಾರೆ.ಸುಮಾರು 1,500 ಕ್ಕೂ ಹೆಚ್ಚು

ಮಂಗಳೂರು: ಬಲೆಗೆ ಬಿದ್ದ 1,500 ಕ್ಕೂ ಹೆಚ್ಚು ತೂಕದ ಬೃಹತ್ ಮೀನು ಮರಳಿ ಕಡಲಿಗೆ.! Read More »

“ಸಚಿವ ಅಂಗಾರ ಚುನಾವಣಾ ರೋಡ್ ಶೋನಲ್ಲಿ ಬ್ಯುಸಿ| ಸಚಿವರೂರಲ್ಲಿ ಮಕ್ಕಳು ರಸ್ತೆ ಸರಿಮಾಡುವಲ್ಲಿ ಬ್ಯುಸಿ| ಹಾರೆ ಹಿಡಿದ ಮಕ್ಕಳ ಕಂಡು ಗ್ರಾ.ಪಂ ಅಧ್ಯಕ್ಷ, ಪಿಡಿಒ ಹಾಗೂ ಶಿಕ್ಷಕರ ಮೇಲೆ ಗರಂ ಆದ ಸುಳ್ಯ ನ್ಯಾಯಾಧೀಶರು| “ಸುಳ್ಯದಲ್ಲೇಕೆ ಹೀಗೆ?”

ಸುಳ್ಯ: ಸಚಿವ ಎಸ್.ಅಂಗಾರರ ತಾಲೂಕಿನಲ್ಲಿ ಪುಟಾಣಿ ಮಕ್ಕಳು ರಸ್ತೆ ದುರಸ್ಥಿ ಮಾಡಲು ಹಾರೆ ಹಿಡಿದಿದ್ದರೆ ಇತ್ತ‌ ಸಚಿವರು ಹಾನಗಲ್ ಉಪ ಚುನಾವಣಾ ರೋಡ್‌ಶೋನಲ್ಲಿ ಬ್ಯುಸಿಯಾಗಿದ್ದಾರೆ. ಮಕ್ಕಳ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನಲೆ ಹಾಳಾದ ರಸ್ತೆಯ ಪ್ರದೇಶಕ್ಕೆ ಸುಳ್ಯ ಹಿರಿಯ ಸಿವಿಲ್ ನ್ಯಾಯಾಲಯ ನ್ಯಾಯಾಧೀಶ ಸೋಮಶೇಖರ್ ನೀಡಿ ಪರಿಶೀಲಿಸಿ, ರಸ್ತೆ ಸಮಸ್ಯೆ ನಿವಾರಿಸಬೇಕು ಎಂದು ಅದೇಶಿಸಿದ್ದಾರೆ. ಸಚಿವರ ಊರಲ್ಲಿ ಮಾತ್ರ ಯಾಕೆ ಹೀಗೆ? ಎಂದು ಸುಳ್ಯ ಕ್ಷೇತ್ರದ ಜನರು ಆಡಿಕೊಳ್ತಿದ್ದಾರೆ. ಸುಳ್ಯ ತಾಲೂಕಿನ ಬೆಳ್ಳಾರೆಯ ಮಂಡೇಪು

“ಸಚಿವ ಅಂಗಾರ ಚುನಾವಣಾ ರೋಡ್ ಶೋನಲ್ಲಿ ಬ್ಯುಸಿ| ಸಚಿವರೂರಲ್ಲಿ ಮಕ್ಕಳು ರಸ್ತೆ ಸರಿಮಾಡುವಲ್ಲಿ ಬ್ಯುಸಿ| ಹಾರೆ ಹಿಡಿದ ಮಕ್ಕಳ ಕಂಡು ಗ್ರಾ.ಪಂ ಅಧ್ಯಕ್ಷ, ಪಿಡಿಒ ಹಾಗೂ ಶಿಕ್ಷಕರ ಮೇಲೆ ಗರಂ ಆದ ಸುಳ್ಯ ನ್ಯಾಯಾಧೀಶರು| “ಸುಳ್ಯದಲ್ಲೇಕೆ ಹೀಗೆ?” Read More »

ಮಂಗಳೂರು: `ರಸ್ತೆ ಅಭಿವೃದ್ಧಿ ಕಾಮಗಾರಿ’ ಡಿ. 23ರ ವರೆಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚನೆ

ಮಂಗಳೂರು: ನಗರದ ಶರವು ಮಹಾಗಣಪತಿ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡ ಪ್ರಯುಕ್ತ ಮುಂಬರುವ ಡಿ. 23ರ ವರೆಗೆ ಆ ರಸ್ತೆಯಲ್ಲಿ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಬೇಕಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.ಶರವು ವಿಮಲೇಶ್ ಜಂಕ್ಷನ್ ನಿಂದ ಕೆ.ಎಸ್.ಆರ್. ಜಂಕ್ಷನ್ ವರೆಗಿನ ರಸ್ತೆಯಲ್ಲಿ ಶರವು ಮಹಾಗಣಪತಿ ದೇವಸ್ಥಾನ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.ಕೆ.ಎಸ್.ಆರ್ ರಸ್ತೆಯಿಂದ ಪಿ.ಎಂ. ರಾವ್ ರಸ್ತೆ ಮೂಲಕ ಗಣಪತಿ ಹೈಸ್ಕೂಲ್ ರಸ್ತೆ ಕಡೆಗೆ ಸಂಚರಿಸುವ ಎಲ್ಲಾ ತರಹದ

ಮಂಗಳೂರು: `ರಸ್ತೆ ಅಭಿವೃದ್ಧಿ ಕಾಮಗಾರಿ’ ಡಿ. 23ರ ವರೆಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚನೆ Read More »

ಸುಬ್ರಹ್ಮಣ್ಯ: ತಪ್ಪಿದ ರೈಲು ದುರಂತ – ಅರ್ಲಟಾಗಿದ್ದ ಚಾಲಕನಿಗೆ ವ್ಯಾಪಕ ಪ್ರಶಂಸೆ

ಸುಬ್ರಹ್ಮಣ್ಯ: ಸುಬ್ರಮಣ್ಯ-ಮಂಗಳೂರು ರೈಲ್ವೆಯ ಸುಬ್ರಹ್ಮಣ್ಯ ಸಮೀಪ ಸೋಮವಾರ ಹಳಿ ಬಿರುಕು ಬಿಟ್ಟಿದ್ದು, ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅವಘಡ ತಪ್ಪಿದೆ ಘಟನೆ ನಡೆದಿದೆ.ಮುಂಜಾನೆ ಸಂಚರಿಸುವ ಬೆಂಗಳೂರು-ಕಾರವಾರ ರೈಲು ನೆಟ್ಟಣದಿಂದ ಮುಂದಕ್ಕೆ ಎಡಮಂಗಲ ಸಮೀಪ ತಲುಪಿದಾಗ ಹಳಿ ಬಿರುಕು ಬಿಟ್ಟಿರುವುದು ರೈಲಿನ ಒಂದು ಭೋಗಿ ಚಲಿಸಿದ ಬಳಿಕ ಚಾಲಕನ ಗಮನಕ್ಕೆ ಬಂದಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಚಾಲಕ ರೈಲನ್ನು ನಿಯಂತ್ರಿಸಿ ನಿಲುಗಡೆ ಮಾಡಿ ಘಟನೆಯನ್ನು ಇಲಾಖೆಯ ಗಮನಕ್ಕೆ ತಂದಿದ್ದಾರೆ.ಆ ಬಳಿಕ ಕಾರ್ಯಾಚರಣೆ ನಡೆಸಿ ದುರಸ್ತಿ ನಡೆಸಿ ಸಂಚರಿಸಲು

ಸುಬ್ರಹ್ಮಣ್ಯ: ತಪ್ಪಿದ ರೈಲು ದುರಂತ – ಅರ್ಲಟಾಗಿದ್ದ ಚಾಲಕನಿಗೆ ವ್ಯಾಪಕ ಪ್ರಶಂಸೆ Read More »

ಪುತ್ತೂರು: ಅಪ್ರಾಪ್ತೆಗೆ ಕಿರುಕುಳ ನೀಡಿದ ಅನ್ಯಕೋಮಿನ ವ್ಯಕ್ತಿ, ಫೋಕ್ಸೋ ದಾಖಲು.

ಪುತ್ತೂರು : ತಾಲೂಕಿನ ಬಡಗನ್ನೂರು ಗ್ರಾಮದ ಮೈಂದಿನಡ್ಕ ಸಮೀಪ ಅನ್ಯಕೋಮಿನ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ವ್ಯಕ್ತಿಯೋರ್ವನ ವಿರುದ್ದ ಪೊಕ್ಸೋ ಪ್ರಕರಣ ದಾಖಲಾಗಿದೆ. ಸ್ಥಳೀಯ ನಿವಾಸಿ ಆದಂ (56) ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯಾಗಿದ್ದು, ಬಾಲಕಿ ಬೀಡಿ ಬ್ರಾಂಚಿಗೆ ತೆರಳುತ್ತಿದ್ದ ಸಮಯದಲ್ಲಿ ಆಕೆಯ ಮೇಲೆ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.

ಪುತ್ತೂರು: ಅಪ್ರಾಪ್ತೆಗೆ ಕಿರುಕುಳ ನೀಡಿದ ಅನ್ಯಕೋಮಿನ ವ್ಯಕ್ತಿ, ಫೋಕ್ಸೋ ದಾಖಲು. Read More »

ಸುಳ್ಯ: ಶಾಲಾ ಮಕ್ಕಳಿಂದ ಹದಗೆಟ್ಟ ರಸ್ತೆ ದುರಸ್ತಿ| ಜಾಲತಾಣದಲ್ಲಿ ಫೋಟೋ ವೈರಲ್|

ಸುಳ್ಯ: ಶಾಲಾ ಕಾಲೇಜುಗಳು ಕೊನೆಗೂ ಪ್ರಾರಂಭವಾಗಿವೆ.ಆದರೆ ಅದಕ್ಕೆ ತಕ್ಕಂತೆ ನಮ್ಮೂರಿನ ಜನಪ್ರತಿನಿಧಿಗಳು ತಯಾರಾಗಿಲ್ಲ ಎನ್ನೋದಕ್ಕೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿ‌ನ ಬೆಳ್ಳಾರೆಯ ಮಂಡೇಪು ಎಂಬಲ್ಲಿ ಶಾಲಾ ಮಕ್ಕಳಿಬ್ಬರು ಮಾಡಿದ ಕೆಲಸವೇ ಸಾಕ್ಷಿ. ಈ ಪುಟ್ಟ ಮಕ್ಕಳು ಶಾಲೆಗೆ ತೆರಳುವ ಹಾದಿಯ ಹದಗೆಟ್ಟ ರಸ್ತೆಯನ್ನು ತಾವೇ ಹಾರೆ ಹಿಡಿದು ಸರಿಪಡಿಸಿದ್ದು, ಈ ಫೋಟೋಗಳು ವೈರಲ್ ಆಗಿದೆ. ಏನಿದು ಘಟನೆ? ಸೋಮವಾರ ಶಾಲೆ ಆರಂಭವಾಗಿದೆ. ಎಲ್ಲ ಮಕ್ಕಳು ಸರಿ ಸುಮಾರು ಎರಡು ವರ್ಷದ ನಂತರ ಶಾಲೆಗಳಿಗೆ ತೆರಳುತ್ತಿದ್ದಾರೆ. ಹೀಗೆ ಖುಷಿಯಲ್ಲಿದ್ದ

ಸುಳ್ಯ: ಶಾಲಾ ಮಕ್ಕಳಿಂದ ಹದಗೆಟ್ಟ ರಸ್ತೆ ದುರಸ್ತಿ| ಜಾಲತಾಣದಲ್ಲಿ ಫೋಟೋ ವೈರಲ್| Read More »

ಮಂಗಳೂರು: ಬೆಳಿಗ್ಗೆ ಆಟವಾಡುತ್ತಿದ್ದ ಬಾಲಕಿ ಮಧ್ಯಾಹ್ನ ಶವವಾಗಿ ಪತ್ತೆ!!

ಮಂಗಳೂರು: ಭಾನುವಾರ ಕುದ್ರೋಳಿಯ ಹೈದರಾಲಿ ರಸ್ತೆಯಲ್ಲಿದ್ದ ಮನೆಯೊಂದರಿಂದ ಏಕಾಏಕಿ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಮನೆ ಸಮೀಪದ ನದಿಯಲ್ಲಿ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ.ಹೈದರಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಮಗಳು ಮುಫೀದಾ(11) ಮೃತಪಟ್ಟ ಬಾಲಕಿ. ಭಾನುವಾರ ಬೆಳಗ್ಗೆ ಎಂದಿನಂತೆ ಎಲ್ಲರ ಜೊತೆ ಖುಷಿಯಲ್ಲಿ ಆಟವಾಡಿತ್ತಿದ್ದಳು, ಬಳಿಕ ಮನೆಯಿಂದ ದಿಢೀರ್ ನಾಪತ್ತೆಯಾಗಿದ್ದಳು. ಈ ಹಿನ್ನಲೆ ಆಕೆಗಾಗಿ ಸ್ಥಳೀಯರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು.ಬಳಿಕ ಮನೆ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಮನೆಯಿಂದ ಸುಮಾರು 200

ಮಂಗಳೂರು: ಬೆಳಿಗ್ಗೆ ಆಟವಾಡುತ್ತಿದ್ದ ಬಾಲಕಿ ಮಧ್ಯಾಹ್ನ ಶವವಾಗಿ ಪತ್ತೆ!! Read More »

ವಕೀಲ ರಾಜೇಶ್ ಭಟ್ ನಿಂದ ಲೈಂಗಿಕ ದೌರ್ಜನ್ಯ| ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಸಂತ್ರಸ್ತೆ| ಘಟನೆ ಕುರಿತಂತೆ ಎಲ್ಲವನ್ನೂ ಬಿಚ್ಚಿಟ್ಟ ಯುವತಿ|

ಮಂಗಳೂರು: ಮಂಗಳೂರಿನ ಖ್ಯಾತ ವಕೀಲ ರಾಜೇಶ್ ಭಟ್ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿ ವಾರ ಕಳೆದಿದೆ. ಆದರೂ ಈವರೆಗೂ ರಾಜೇಶ್ ಭಟ್ ಬಂಧನ ಆಗಿಲ್ಲ. ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ, ರಾಜೇಶ್ ಭಟ್ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ನಡುವೆ ಸಂತ್ರಸ್ತ ಯುವತಿ ಮಾಧ್ಯಮಗಳ ಮುಂದೆ ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದಾಳೆ.ಮಾಧ್ಯಮಗಳ ಜೊತೆ ಮಾತನಾಡಿದ ಯುವತಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ಮಂಗಳೂರಿನ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ಯುವತಿ ತರಬೇತಿಗೆಂದು

ವಕೀಲ ರಾಜೇಶ್ ಭಟ್ ನಿಂದ ಲೈಂಗಿಕ ದೌರ್ಜನ್ಯ| ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಸಂತ್ರಸ್ತೆ| ಘಟನೆ ಕುರಿತಂತೆ ಎಲ್ಲವನ್ನೂ ಬಿಚ್ಚಿಟ್ಟ ಯುವತಿ| Read More »