ಕರಾವಳಿ

ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತ

ಉಳ್ಳಾಲ, ಕ್ಷುಲ್ಲಕ ವಿಚಾರ ವೊಂದಕ್ಕೆ ಸಂಬಂಧಿಸಿ ದಂತೆ ವ್ಯಕ್ತಿ ಯೊಬ್ಬನಿಗೆ ತಂಡವೊಂದು ಚೂರಿ ಯಿಂದ ಇರಿದು ಗಾಯಗೊಳಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಜ್ಜಿನಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.ಚೂರಿ ಇರಿತಕ್ಕೊಳಗಾದ ವ್ಯಕ್ತಿಯನ್ನು ಅಜ್ಜಿ ನಡ್ಕ ನಿವಾಸಿ ಇಕ್ಬಾಲ್ (32)ಎಂದು ಗುರುತಿಸಲಾಗಿದೆ.ಅವರು ಕೆಲಸ ಮುಗಿಸಿ ಮನೆಗೆ ತನ್ನ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ತಡೆದು ನಿಲ್ಲಿಸಿ ಚೂರಿ ಯಿಂದ ಇರಿಯಲಾಗಿದೆ . ಹಳೇ ದ್ವೇಷದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.ಗಾಯಗೊಂಡ ಇಕ್ಬಾಲ್ ಅವರನ್ನು ತೊಕ್ಕೋಟ್ಟು […]

ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತ Read More »

ಮಂಗಳೂರು: ನಿಲ್ಲಿಸಿದ ಕಾರಿನೊಳಗೆ ಶವ ಪತ್ತೆ

ಮಂಗಳೂರು: ನಗರದ ಕಂಕನಾಡಿ ಬಳಿ ನಿಲ್ಲಿಸಿದ ಕಾರಿನೊಳಗೆ ವ್ಯಕ್ತಿಯೊಬ್ಬರ ಮೃತದೇಹ ನವೆಂಬರ್ 12ರ ಶುಕ್ರವಾರ ಪತ್ತೆಯಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಮೃತ ವ್ಯಕ್ತಿಯನ್ನು ಪ್ರಶಾಂತ್ ಕೊಟ್ಟಾರಿ(44) ಎಂದು ಗುರುತಿಸಲಾಗಿದೆ. ಮೃತರು ಬರ್ಕೆ ಠಾಣೆ ವ್ಯಾಪ್ತಿಯ ಮಣ್ಣಗುಡ್ಡೆಯಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ. ಸಾವಿಗೆ ಕಾರಣ ಇನ್ನೂ ಖಚಿತವಾಗಿಲ್ಲ ಗುರುವಾರ ರಾತ್ರಿಯಿಂದಲೇ ಕಾರು ಅದೇ ಸ್ಥಳದಲ್ಲಿ ಪಾರ್ಕಿಂಗ್ ಮಾಡಲಾಗಿತ್ತು ಎಂದು ಸಾರ್ವಜನಿಕರು ತಿಳಿಸಿದ್ದು ,ಶುಕ್ರವಾರ ಮಧ್ಯಾಹ್ನದವರೆಗೆ ಕಾರು ಅದೇ ಸ್ಥಳದಲ್ಲಿ ನಿಂತಿರುವುದು ಅನುಮಾನ ಬಂದು ಪರಿಶೀಲಿಸಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬರು

ಮಂಗಳೂರು: ನಿಲ್ಲಿಸಿದ ಕಾರಿನೊಳಗೆ ಶವ ಪತ್ತೆ Read More »

ಸುಳ್ಯ: ಅವೈಜ್ಞಾನಿಕ ಸ್ಲಾಬ್ ಅಳವಡಿಕೆ| ಪಾದಾಚಾರಿಗಳ ಪ್ರಾಣ ಹಿಂಡುತ್ತಿವೆ ಚರಂಡಿಗಳು|

ಸುಳ್ಯ: ನಗರದ ಮುಖ್ಯರಸ್ತೆಯ ಎರಡು ಭಾಗಗಳಲ್ಲಿ ಅಳವಡಿಸಲಾಗಿರುವ ಚರಂಡಿಯ ಸ್ಲ್ಯಾಬ್ ಗಳ ಅವೈಜ್ಞಾನಿಕತೆಯ ಕಾಮಗಾರಿಯಿಂದ ಹಲವಾರು ಮಂದಿ ಪಾದಚಾರಿಗಳು ಬಿದ್ದು ಗಾಯಗೊಂಡಿದ್ದಾರೆ. ಪ್ರತೀದಿನ ಒಂದಿಲ್ಲೊಂದು ಘಟನೆಗಳು ನಡೆಯುತ್ತಿದ್ದು, ಇದರಿಂದ ನಾಗರೀಕರು ಕಂಗೆಟ್ಟಿದ್ದಾರೆ. ನಿನ್ನೆ ನಗರದ ಗಾಂಧಿನಗರದಲ್ಲಿ ಪತ್ರಕರ್ತರೊಬ್ಬರು ಈ ಪಾದಾಚಾರಿ ರಸ್ತೆಮೇಲೆ ನಡೆದುಕೊಂಡು ಹೋಗುತ್ತಿದ್ದ‌ ವೇಳೆ ಸ್ಲ್ಯಾಬ್ ಕುಸಿದು ಬಿದ್ದು ಅವರ ಕಾಲಿಗೆ ಬಲವಾದ ಗಾಯ ಉಂಟಾಗಿದೆ. ಘಟನೆಯನ್ನು ನೋಡಿದ ಸ್ಥಳೀಯರು ವರದಿಗಾರರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ದಿದ್ದಾರೆ. ಘಟನೆಯಿಂದ ಅವರ ಮೊಣಕಾಲಿಗೆ ಗಾಯವಾಗಿದ್ದು ಚಿಕಿತ್ಸೆ

ಸುಳ್ಯ: ಅವೈಜ್ಞಾನಿಕ ಸ್ಲಾಬ್ ಅಳವಡಿಕೆ| ಪಾದಾಚಾರಿಗಳ ಪ್ರಾಣ ಹಿಂಡುತ್ತಿವೆ ಚರಂಡಿಗಳು| Read More »

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರಿಗೆ ಸೂರು ಕಟ್ಟಿಕೊಳ್ಳಲು ಎಂ.ಆರ್.ಜಿ ಗ್ರೂಪಿನ ಕೆ. ಪ್ರಕಾಶ್ ಶೆಟ್ಟಿ ಅವರಿಂದ ನೆರವು

ಮಂಗಳೂರು: ಪ್ರಖ್ಯಾತ ಪರಿಸರವಾದಿ ಹಾಗು 2019 ರ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರಿಗೆ ಸೂರು ಕಟ್ಟಿಕೊಳ್ಳಲು ಎಂ.ಆರ್.ಜಿ. ಗುಂಪಿನಿಂದ 5 ಲಕ್ಷ ರೂಪಾಯಿಗಳ ನೆರವನ್ನು ನೀಡಲಾಗಿದೆ. ಸಾಲು ಮರದ ತಿಮ್ಮಕ್ಕ ಅವರ ವೃಕ್ಷ ಪ್ರೇಮ, ಗಿಡಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಲಾಲನೆ ಪಾಲನೆ ಮಾಡುವಲ್ಲಿ ತೋರುವ ಅರ್ಪಣಾಭಾವಕ್ಕೆ ಪರ್ಯಾಯವಾದ ಹೋಲಿಕೆ ಇಲ್ಲ. ಅವರಿಗೆ ಈ ನೆರವನ್ನು ಅತ್ಯಂತ ಗೌರವದಿಂದ ಕೊಡಮಾಡಲಾಗಿದೆ ಎಂದು ಎಂ.ಆರ್.ಜಿ. ಗುಂಪಿನ ಸ್ಥಾಪಕಾಧ್ಯಕ್ಷ ಕೆ. ಪ್ರಕಾಶ ಶೆಟ್ಟಿ ಹೇಳಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರಿಗೆ ಸೂರು ಕಟ್ಟಿಕೊಳ್ಳಲು ಎಂ.ಆರ್.ಜಿ ಗ್ರೂಪಿನ ಕೆ. ಪ್ರಕಾಶ್ ಶೆಟ್ಟಿ ಅವರಿಂದ ನೆರವು Read More »

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಿ. ಎಸ್. ಕುಲಾಲ್ ವರಿಗೆ ಗೌರವಾರ್ಪಣೆ

ಮಂಗಳೂರು :ದ. ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ದ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಿ. ಎಸ್. ಕುಲಾಲ್ ಅವರನ್ನು ನ.7ರಂದು ಸಂಘದ ಅಧ್ಯಕ್ಷರಾಗಿರುವ ಮಯೂರ್ ಉಳ್ಳಾಲ್ ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಬಿ.ಎಸ್ ಕುಲಾಲ್ ಮಾತನಾಡುತ್ತಾ ಪತ್ರಿಕೋದ್ಯಮದಲ್ಲಿ ನನ್ನ ಕರ್ತವ್ಯದ ಸೇವೆಯನ್ನು ಮಾಡಿದ್ದೇನೆ ಪ್ರಶಸ್ತಿಗಾಗಿ ಯಾವುದೇ ರೀತಿಯ ಶಿಫಾರಸನ್ನು ಮಾಡಿಲ್ಲ ಮತ್ತು ಅರ್ಜಿಯನ್ನು ನೀಡಿಲ್ಲ ನನ್ನ ಪತ್ರಿಕಾ ಮಾಧ್ಯಮದ ಸೇವೆಯನ್ನು ಜಿಲ್ಲಾಡಳಿತ ಗುರುತಿಸಿದೆ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಿ. ಎಸ್. ಕುಲಾಲ್ ವರಿಗೆ ಗೌರವಾರ್ಪಣೆ Read More »

ಮಂಗಳೂರು : ಭೀಕರ ಅಪಘಾತಕ್ಕೆ ಫಸ್ಟ್‌ನ್ಯೂರೋ ಆಸ್ಪತ್ರೆ ಸಿಬ್ಬಂದಿ ಬಲಿ|

ಮಂಗಳೂರು: ನಗರದ ಮರೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ನಡೆದಿದ್ದು ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿಯಾಗಿ ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಮೃತ ಮಹಿಳೆಯನ್ನು ಪೂರ್ಣಿಮಾ(34) ಎಂದು ಗುರುತಿಸಲಾಗಿದೆ. ಇವರು ಫಸ್ಟ್ ನ್ಯೂರೋ ಆಸ್ಪತ್ರೆಯ ಸಿಬ್ಬಂದಿಯಾಗಿದ್ದು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಪೂರ್ಣಿಮಾ ಕಾವೂರು ನಿವಾಸಿಯಾಗಿದ್ದು ಪಡೀಲಿನಿಂದ ಮರೋಳಿ ದಾರಿಯಾಗಿ ಮನೆಯತ್ತ ಸಾಗುತ್ತಿದ್ದರು.‌ ಡಿಕ್ಕಿಯ ರಭಸಕ್ಕೆ ಮಹಿಳೆ ಡಾಮರು ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮೊದಲೇ ಸಾವು ಕಂಡಿದ್ದಾರೆ. ‌ಸಂಜೆ

ಮಂಗಳೂರು : ಭೀಕರ ಅಪಘಾತಕ್ಕೆ ಫಸ್ಟ್‌ನ್ಯೂರೋ ಆಸ್ಪತ್ರೆ ಸಿಬ್ಬಂದಿ ಬಲಿ| Read More »

ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ| ದೂರು ದಾಖಲು

ಭಟ್ಕಳ: ತನ್ನ ಮನೆಯಿಂದ ಕುಂದಾಪುರಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದ ಯುವತಿಯೋರ್ವಳು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಯುವತಿಯ ತಂದೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ನಾಪತ್ತೆಯಾದ ಯುವತಿಯನ್ನು ಮಂಕಿಯ ಯತ್ನಳ್ಳಿ, ಆಡುಕಾಲ್ ನಿವಾಸಿ, ತಾರಾ ನಾರಾಯಣ ಮರಾಠಿ (19) ಎಂದು ಗುರುತಿಸಲಾಗಿದೆ. ಈಕೆ ನವೆಂಬರ್ 5 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕುಂದಾಪುರಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವಳು, ಅಲ್ಲಿಗೂ ಹೋಗದೇ ಈವರೆಗೂ

ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ| ದೂರು ದಾಖಲು Read More »

ಪುತ್ತೂರು :ಬೈಕ್ ಮತ್ತು ಟಿಪ್ಪರ್ ಢಿಕ್ಕಿ- ಸವಾರರು ಗಂಭೀರ

ಪುತ್ತೂರು: ಮೊಟ್ಟೆತ್ತಡ್ಕ ಎನ್ ಆರ್ ಸಿ ಸಿ ಬಳಿ ಇಂದು ಸಂಜೆ 6.30 ರ ಸುಮಾರಿಗೆ ಟಿಪ್ಪರ್ ಹಾಗೂ ದ್ವಿಚಕ್ರ ವಾಹನವು ಡಿಕ್ಕಿಯಾಗಿರುವುದು ವರದಿಯಾಗಿದೆ. ಮುಂಡೂರು ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಟಿಪ್ಪರ್ ಹಾಗೂ ಪುತ್ತೂರು ಕಡೆಯಿಂದ ತನ್ನ ಕೆಲಸ ಮುಗಿಸಿ ಮನೆಯ ಕಡೆ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರಾದ ಕುರಿಯ ನಿವಾಸಿ ನಾರಾಯಣ ಹಾಗೂ ವಸಂತ ರವರಿಗೆ ಗಂಭೀರ ಗಾಯಗೊಂಡು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದಿದೆ.

ಪುತ್ತೂರು :ಬೈಕ್ ಮತ್ತು ಟಿಪ್ಪರ್ ಢಿಕ್ಕಿ- ಸವಾರರು ಗಂಭೀರ Read More »

ಸುಳ್ಯ| ಹೊಳೆ ದಾಟುತ್ತಿದ್ದ ವೃದ್ದ ನೀರುಪಾಲು| ಕೈಗೆ ಸಿಕ್ಕಿದ ಬಳ್ಳಿಯಿಂದ ಉಳಿದ ಪ್ರಾಣ|

ಸುಳ್ಯ: ನಿರ್ಮಾಣದ ಹಂತದ ಸೇತುವೆಯ ಪಕ್ಕ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಲ್ಲಿ ಹೊಳೆ ದಾಟಲು ಯತ್ನಿಸಿದ ವೃದ್ದರೋರ್ವರು ಹೊಳೆಯಲ್ಲಿ ಕೊಚ್ಚಿ ಹೋದ ಘಟನೆ ಎಲಿಮಲೆ- ಮರ್ಕಂಜ ರಸ್ತೆಯ ಸೇವಾಜೆ ಎಂಬಲ್ಲಿ ನಡೆದಿದೆ. ವೃದ್ಧರ ಅದೃಷ್ಟದಿಂದ ಕೊಚ್ಚಿಹೋಗುತ್ತಿದ್ದ ಅವರ ಕೈಗೆ ಸಿಕ್ಕಿದ ಬಳ್ಳಿ ಅವರ ಪ್ರಾಣ ಉಳಿಸಿದೆ. ಎಲಿಮಲೆ – ಮರ್ಕಂಜ ರಸ್ತೆಯ ಸೇವಾಜೆ ನದಿಯನ್ನು ಅಲ್ಲಿನ ವೃದ್ಧ ಗೋಪಾಲ ಎಂಬವರು ಸಂಜೆ ದಾಟಲು ಪ್ರಯತ್ನಿಸಿದ್ದರು. ಅದಾಗಲೇ ಮಳೆ ಆರಂಭಗೊಂಡ ಕಾರಣ ಹೊಳೆಯಲ್ಲಿ ನೀರಿನ ಮಟ್ಟವೂ ಏರಿಕೆಯಾಗಿತ್ತು. ಈ ವೇಳೆ

ಸುಳ್ಯ| ಹೊಳೆ ದಾಟುತ್ತಿದ್ದ ವೃದ್ದ ನೀರುಪಾಲು| ಕೈಗೆ ಸಿಕ್ಕಿದ ಬಳ್ಳಿಯಿಂದ ಉಳಿದ ಪ್ರಾಣ| Read More »

ಪೊಲೀಸ್ ಇಲಾಖೆ ಬಲವರ್ಧನೆಗೆ ಕ್ರಮ| ರಾಜ್ಯದಲ್ಲಿ ಶೀಘ್ರದಲ್ಲೇ 100 ಪೊಲೀಸ್ ಠಾಣೆಗಳ ನಿರ್ಮಾಣ – ಗೃಹಸಚಿವ ಅರಗ‌ ಜ್ಞಾನೇಂದ್ರ

ಸುಬ್ರಹ್ಮಣ್ಯ: ರಾಜ್ಯದಲ್ಲಿ ಪೊಲೀಸ್ ಇಲಾಖೆ ಬಲವರ್ಧನೆಗೆ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದ್ದು ಸದ್ಯದಲ್ಲಿಯೇ ಸುಮಾರು 100 ಪೊಲೀಸ್ ಠಾಣೆಗಳ ಹೊಸ ಕಟ್ಟಡ ಕಾಮಗಾರಿಯನ್ನು ₹ 200 ಕೋಟಿ ವೆಚ್ಚದಲ್ಲಿ ನಡೆಸಲಾಗುವುದು. ಸುಬ್ರಹ್ಮಣ್ಯ ಪೊಲೀಸ್ ಠಾಣೆ ಕಟ್ಟಡಕ್ಕೆ ₹ 1 ಕೋಟಿ ಅನುದಾನ ನಿಗದಿಪಡಿಸಲಾಗಿದ್ದು, ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೊಲೀಸ್ ಇಲಾಖೆಯಲ್ಲಿ ವಾರ್ಷಿಕ 4

ಪೊಲೀಸ್ ಇಲಾಖೆ ಬಲವರ್ಧನೆಗೆ ಕ್ರಮ| ರಾಜ್ಯದಲ್ಲಿ ಶೀಘ್ರದಲ್ಲೇ 100 ಪೊಲೀಸ್ ಠಾಣೆಗಳ ನಿರ್ಮಾಣ – ಗೃಹಸಚಿವ ಅರಗ‌ ಜ್ಞಾನೇಂದ್ರ Read More »