ಕರಾವಳಿ

ಮುಸ್ಲಿಂಮರ ಹಣ‌ ಶರಣ್ ಪಂಪ್ವೆಲ್ ಗೆ ಆಗುತ್ತೆ,! ಮುಸ್ಲಿಂ ಯುವಕರು ಮಾತ್ರ ‌ಬೇಡ ಅಲ್ವೇ?- ಬಿರುವೆರ್ ಕುಡ್ಲ ಕಿಡಿ

ಮಂಗಳೂರು: ಬಜರಂಗ ದಳದ ಮುಖಂಡ ಶರಣ್ ಪಂಪ್‌ವೆಲ್‌ಗೆ ಮುಸ್ಲಿಮರ ಹಣ ಆಗುತ್ತದೆ. ಆದರೆ ಮುಸ್ಲಿಂ ಯುವಕರು ಯಾಕೆ ಆಗುವುದಿಲ್ಲ, ಎಂದು ಬಿರುವೆರ್ ಕುಡ್ಲ ಮಂಗಳೂರು ಪ್ರಶ್ನಿಸಿದೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುವೆರ್ ಕುಡ್ಲದ ಸಂಚಾಲಕ ಲಕ್ಷ್ಮೀಶ್ ಈ ಹಿಂದೆ ನಡೆದ ಸಭೆಯೊಂದರಲ್ಲಿ ಶರಣ್ ಪಂಪ್‌ವೆಲ್ ಬಿರುವೆರ್ ಕುಡ್ಲ ಒಂದು ಜಾತಿಗೆ ಸೀಮಿತವಾಗಿದೆ ಎಂದಿದ್ದರು. ಬಿರುವೆರ್ ಕುಡ್ಲ ಸಮಾಜ ಸೇವೆಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಏಳು ವರ್ಷಗಳಿಂದ ಸಂಸ್ಥೆಯು ಬಡವರಿಗೆ ಜಾತಿ ಭೇದ ನೋಡದೆ ಮೂರೂವರೆ ಕೋಟಿ ರೂ.ಗಳ

ಮುಸ್ಲಿಂಮರ ಹಣ‌ ಶರಣ್ ಪಂಪ್ವೆಲ್ ಗೆ ಆಗುತ್ತೆ,! ಮುಸ್ಲಿಂ ಯುವಕರು ಮಾತ್ರ ‌ಬೇಡ ಅಲ್ವೇ?- ಬಿರುವೆರ್ ಕುಡ್ಲ ಕಿಡಿ Read More »

ಕುಕ್ಕೆ ಸುಬ್ರಹ್ಮಣ್ಯ ದೇವಳದ ಹಿರಿಯ ಹಸು ಕೆಂಪಿ ಇನ್ನಿಲ್ಲ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ನಿತ್ಯ ಗೋಪೂಜೆ ಪಡೆಯುತ್ತಿದ್ದ ಹಿರಿಯ ಹಸು ಕೆಂಪಿ ವಯೋಸಹಜತೆಯಿಂದ ರವಿವಾರ ಸಾವನ್ನಪ್ಪಿದೆ. ಹಸು ಸುಮಾರು 20 – 22 ವರ್ಷದಿಂದ ಕ್ಷೇತ್ರದಲ್ಲಿ ನಿತ್ಯ ಗೋಪೂಜೆ ಭಾಗ್ಯವನ್ನು ಪಡೆದಿತ್ತು. ಈ ವರ್ಷವು ದೀಪಾವಳಿಯಂದು ಈ ಹಸುವಿಗೆ ಪೂಜೆ ನೆರವೇರಿಸಲಾಗಿತ್ತು. ಇದೇ ಇದರ ಕೊನೆಯ ದೀಪಾವಳಿಯ ಪೂಜೆ ಆಗಿದೆ ಎಂಬ ಮಾತು ಕೇಳಿಬಂದಿದೆ. ಈ ಹಸು ಸುಮಾರು 13 ಕರುಗಳನ್ನು ಈವರೆಗೆ ಹಾಕಿತ್ತು ಎಂದು ದೇವಳದವರು ಮಾಹಿತಿ ನೀಡಿದ್ದಾರೆ. ಪ್ರೀತಿಯ ಕೆಂಪಿ;ಕೆಂಪಿ ಕಳೆದ 22

ಕುಕ್ಕೆ ಸುಬ್ರಹ್ಮಣ್ಯ ದೇವಳದ ಹಿರಿಯ ಹಸು ಕೆಂಪಿ ಇನ್ನಿಲ್ಲ Read More »

ನೆಲ್ಯಾಡಿ : ತಾವರೆಗಾಗಿ ಪ್ರಾಣ ಕಳೆದುಕೊಂಡ ವಿಧ್ಯಾರ್ಥಿನಿ

ನೆಲ್ಯಾಡಿ: ಕೆರೆಗೆ ತಾವರೆ ಹೂವನ್ನು ಕೀಳಲು ಹೋಗಿ ವಿಧ್ಯಾರ್ಥಿನಿಯೊಬ್ಬಳು ಸಾವನಪ್ಪಿರುವ ಘಟನೆ ಕೊಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ನಡೆದಿದೆ. ಮೃತ ವಿಧ್ಯಾರ್ಥಿನಿಯನ್ನು ಅಂಬರ್ಜೆ ನಿವಾಸಿ ಮೋಹನ ಎಂಬವರ ಪುತ್ರಿ ಶ್ರೇಯಾ (18) ಎಂದು ಗುರುತಿಸಲಾಗಿದೆ. ಈಕೆ ರಾಮಕುಂಜೇಶ್ವರ ಪ.ಪೂ. ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದಳು. ಶ್ರೇಯಾ ಇಂದು ಬೆಳಗ್ಗೆ ತಮ್ಮ ಮನೆ ಸಮೀಪದ ಕೆರೆಗೆ ತಾವರೆ ಹೂ ಬಿಡಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮನೆಯಿಂದ

ನೆಲ್ಯಾಡಿ : ತಾವರೆಗಾಗಿ ಪ್ರಾಣ ಕಳೆದುಕೊಂಡ ವಿಧ್ಯಾರ್ಥಿನಿ Read More »

ದುಬೈನಲ್ಲಿ ಮಿಂಚುತ್ತಿರುವ ತುಳುನಾಡಿನ ಕಿಶೋರ್ ಶೆಟ್ಟಿ

ಮಂಗಳೂರು: ಕರ್ನಾಟಕದಿಂದ ಅದರಲ್ಲೂ ತುಳುನಾಡಿನ ಅನೇಕರು ಉದ್ಯೋಗ ಶಿಕ್ಷಣ ವ್ಯಾಪಾರ ಹೀಗೆ ಅನೇಕ ಉದ್ದೇಶಗಳಿಗಾಗಿ ಗಲ್ಫ್ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಹೂಡಿದ್ದಾರೆ. ಹೀಗೆ ಅನೇಕರು ತಮ್ಮ ದುಡಿಮೆಯ ಮೂಲಕ ಯಶಸ್ಸನ್ನು ಸಂಪಾದಿಸಿ ತಮ್ಮ ಊರಿನಲ್ಲಿ ಅವಶ್ಯಕತೆ ಇರುವವರಿಗೆ ಸಹಾಯ ವನ್ನು ಮಾಡುತ್ತಿದ್ದಾರೆ. ಹೀಗೆ ತೆರೆ ಮರೆಯಲ್ಲಿ ನಿಂತು ತನ್ನಿಂದ ಆದಷ್ಟು ಸಮಾಜ ಸೇವೆಯನ್ನು ಮಾಡುತ್ತಿರುವವರಲ್ಲಿ ಕಾರ್ಕಳ ಕುಂಟಾಡಿ ಮೂಲದ ಇದೀಗ ದುಬೈನಲ್ಲಿ ಕಳೆದ ಹತ್ತು ವರ್ಷದಿಂದ ವಾಸವಾಗಿರುವ ಕಿಶೋರ್ ಶಿವರಾಮ್ ಶೆಟ್ಟಿ ಕೂಡ ಒಬ್ಬರು. ಉಡುಪಿಯ ಕಾರ್ಕಳ ಮೂಲದ

ದುಬೈನಲ್ಲಿ ಮಿಂಚುತ್ತಿರುವ ತುಳುನಾಡಿನ ಕಿಶೋರ್ ಶೆಟ್ಟಿ Read More »

ಬಂಟ್ವಾಳ: ಭೀಕರ ಅಪಘಾತಕ್ಕೆ ಇಬ್ಬರು ಯುವಕರು ಬಲಿ| ಮತ್ತಿಬ್ಬರು ಗಂಭೀರ

ಬಂಟ್ವಾಳ : ರಾ.ಹೆ.75ರ ತುಂಬೆ ರಾಮಲಕಟ್ಟೆಯ ಬಳಿ ಕ್ಯಾಟರಿಂಗ್ ವೊಂದರ ಆಹಾರ ಸಾಗಾಟದ ಪಿಕ್ ಅಪ್ ಮರಕ್ಕೆ ಢಿಕ್ಕಿ ಹೊಡೆದು ಅದರಲ್ಲಿದ್ದ ಇಬ್ಬರು ಯುವಕರು ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ಉಪ್ಪಿನಂಗಡಿ ನಿವಾಸಿಗಳಾದ ಚೇತನ್ (25) ಹಾಗೂ ಆಶಿತ್ (21) ಮೃತಪಟ್ಟಿದ್ದಾರೆ. ಸಿಂಚನ್ ಹಾಗೂ ಸುದೀಪ್ ಗಾಯಗೊಂಡಿದ್ದಾರೆ. ಕಾರ್ಯಕ್ರಮ ಮುಗಿಸಿ ಮಂಗಳೂರು ಕಡೆಯಿಂದ ಆಗಮಿಸುತ್ತಿದ್ದ ಪಿಕ್ ಅಪ್ ಮರಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡವರನ್ನು ತುಂಬೆ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಇಬ್ಬರು ಅದಾಗಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ

ಬಂಟ್ವಾಳ: ಭೀಕರ ಅಪಘಾತಕ್ಕೆ ಇಬ್ಬರು ಯುವಕರು ಬಲಿ| ಮತ್ತಿಬ್ಬರು ಗಂಭೀರ Read More »

ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್‌ ಬಿದ್ದು ಯುವಕ ಮೃತ್ಯು

ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್‌ ಆಕಸ್ಮಿಕವಾಗಿ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ನ.13ರ ಶನಿವಾರದಂದು ಅತ್ತಾವರದಲ್ಲಿ ನಡೆದಿದೆ. ಮೃತರನ್ನು ಜೆಪ್ಪು ನಿವಾಸಿ ಹಮೀದ್‌ ಎಂಬವರ ಪುತ್ರ ಅಬ್ದರ್ರಹ್ಮಾನ್‌ ರಿಲ್ವಾನ್‌ (30) ಎಂದು ಗುರುತಿಸಲಾಗಿದೆ. ಶನಿವಾರ ರಾಜಸ್ಥಾನದಿಂದ ಅತ್ತಾವರಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ಲಾರಿ ಬಂದಿತ್ತು. ಈ ಸಂದರ್ಭ ಕಟ್ಟಡದ ರೈಟರ್‌ ಆಗಿದ್ದ ರಿಲ್ವಾನ್‌ ಅವರಲ್ಲಿ ಗ್ರಾನೈಟ್‌‌‌‌‌ನ ಫೋಟೋ ತೆಗೆಯಲು ಕಟ್ಟಡದ ಸೂಪರ್‌‌ ವೈಸರ್‌‌‌ ಸೂಚಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ರಿಲ್ವಾನ್‌ ಫೋಟೋ ತೆಗೆಯಲು ಲಾರಿಯ ಹಿಂಬದಿಗೆ ತೆರಳಿದ್ದಾರೆ ಎನ್ನಲಾಗಿದೆ. ಈ

ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್‌ ಬಿದ್ದು ಯುವಕ ಮೃತ್ಯು Read More »

ಬಿಸ್ಲೆ ಘಾಟ್ ನಲ್ಲಿ ಮರಕ್ಕೆ ಢಿಕ್ಕಿ ಹೊಡೆದ‌ ಕಾರು| ಚಾಲಕ‌ ಗಂಭೀರ

ಸುಬ್ರಹ್ಮಣ್ಯ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಜೆ ಬಿಸ್ಲೆ ಘಾಟ್ ನಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿರುವ ಗಾಯಾಳುವನ್ನು ಮಂಗಳೂರು ನಿವಾಸಿ ರವಿ ಎಂದು ಗುರುತಿಸಲಾಗಿದೆ. ಬಿಸಿಲೆ ಘಾಟ್ ನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕ ರವಿಯವರ ಕಾಲು ಮುರಿತಕ್ಕೆ ಒಳಗಾಗಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ

ಬಿಸ್ಲೆ ಘಾಟ್ ನಲ್ಲಿ ಮರಕ್ಕೆ ಢಿಕ್ಕಿ ಹೊಡೆದ‌ ಕಾರು| ಚಾಲಕ‌ ಗಂಭೀರ Read More »

ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತ

ಉಳ್ಳಾಲ, ಕ್ಷುಲ್ಲಕ ವಿಚಾರ ವೊಂದಕ್ಕೆ ಸಂಬಂಧಿಸಿ ದಂತೆ ವ್ಯಕ್ತಿ ಯೊಬ್ಬನಿಗೆ ತಂಡವೊಂದು ಚೂರಿ ಯಿಂದ ಇರಿದು ಗಾಯಗೊಳಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಜ್ಜಿನಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.ಚೂರಿ ಇರಿತಕ್ಕೊಳಗಾದ ವ್ಯಕ್ತಿಯನ್ನು ಅಜ್ಜಿ ನಡ್ಕ ನಿವಾಸಿ ಇಕ್ಬಾಲ್ (32)ಎಂದು ಗುರುತಿಸಲಾಗಿದೆ.ಅವರು ಕೆಲಸ ಮುಗಿಸಿ ಮನೆಗೆ ತನ್ನ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ತಡೆದು ನಿಲ್ಲಿಸಿ ಚೂರಿ ಯಿಂದ ಇರಿಯಲಾಗಿದೆ . ಹಳೇ ದ್ವೇಷದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.ಗಾಯಗೊಂಡ ಇಕ್ಬಾಲ್ ಅವರನ್ನು ತೊಕ್ಕೋಟ್ಟು

ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತ Read More »

ಮಂಗಳೂರು: ನಿಲ್ಲಿಸಿದ ಕಾರಿನೊಳಗೆ ಶವ ಪತ್ತೆ

ಮಂಗಳೂರು: ನಗರದ ಕಂಕನಾಡಿ ಬಳಿ ನಿಲ್ಲಿಸಿದ ಕಾರಿನೊಳಗೆ ವ್ಯಕ್ತಿಯೊಬ್ಬರ ಮೃತದೇಹ ನವೆಂಬರ್ 12ರ ಶುಕ್ರವಾರ ಪತ್ತೆಯಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಮೃತ ವ್ಯಕ್ತಿಯನ್ನು ಪ್ರಶಾಂತ್ ಕೊಟ್ಟಾರಿ(44) ಎಂದು ಗುರುತಿಸಲಾಗಿದೆ. ಮೃತರು ಬರ್ಕೆ ಠಾಣೆ ವ್ಯಾಪ್ತಿಯ ಮಣ್ಣಗುಡ್ಡೆಯಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ. ಸಾವಿಗೆ ಕಾರಣ ಇನ್ನೂ ಖಚಿತವಾಗಿಲ್ಲ ಗುರುವಾರ ರಾತ್ರಿಯಿಂದಲೇ ಕಾರು ಅದೇ ಸ್ಥಳದಲ್ಲಿ ಪಾರ್ಕಿಂಗ್ ಮಾಡಲಾಗಿತ್ತು ಎಂದು ಸಾರ್ವಜನಿಕರು ತಿಳಿಸಿದ್ದು ,ಶುಕ್ರವಾರ ಮಧ್ಯಾಹ್ನದವರೆಗೆ ಕಾರು ಅದೇ ಸ್ಥಳದಲ್ಲಿ ನಿಂತಿರುವುದು ಅನುಮಾನ ಬಂದು ಪರಿಶೀಲಿಸಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬರು

ಮಂಗಳೂರು: ನಿಲ್ಲಿಸಿದ ಕಾರಿನೊಳಗೆ ಶವ ಪತ್ತೆ Read More »

ಸುಳ್ಯ: ಅವೈಜ್ಞಾನಿಕ ಸ್ಲಾಬ್ ಅಳವಡಿಕೆ| ಪಾದಾಚಾರಿಗಳ ಪ್ರಾಣ ಹಿಂಡುತ್ತಿವೆ ಚರಂಡಿಗಳು|

ಸುಳ್ಯ: ನಗರದ ಮುಖ್ಯರಸ್ತೆಯ ಎರಡು ಭಾಗಗಳಲ್ಲಿ ಅಳವಡಿಸಲಾಗಿರುವ ಚರಂಡಿಯ ಸ್ಲ್ಯಾಬ್ ಗಳ ಅವೈಜ್ಞಾನಿಕತೆಯ ಕಾಮಗಾರಿಯಿಂದ ಹಲವಾರು ಮಂದಿ ಪಾದಚಾರಿಗಳು ಬಿದ್ದು ಗಾಯಗೊಂಡಿದ್ದಾರೆ. ಪ್ರತೀದಿನ ಒಂದಿಲ್ಲೊಂದು ಘಟನೆಗಳು ನಡೆಯುತ್ತಿದ್ದು, ಇದರಿಂದ ನಾಗರೀಕರು ಕಂಗೆಟ್ಟಿದ್ದಾರೆ. ನಿನ್ನೆ ನಗರದ ಗಾಂಧಿನಗರದಲ್ಲಿ ಪತ್ರಕರ್ತರೊಬ್ಬರು ಈ ಪಾದಾಚಾರಿ ರಸ್ತೆಮೇಲೆ ನಡೆದುಕೊಂಡು ಹೋಗುತ್ತಿದ್ದ‌ ವೇಳೆ ಸ್ಲ್ಯಾಬ್ ಕುಸಿದು ಬಿದ್ದು ಅವರ ಕಾಲಿಗೆ ಬಲವಾದ ಗಾಯ ಉಂಟಾಗಿದೆ. ಘಟನೆಯನ್ನು ನೋಡಿದ ಸ್ಥಳೀಯರು ವರದಿಗಾರರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ದಿದ್ದಾರೆ. ಘಟನೆಯಿಂದ ಅವರ ಮೊಣಕಾಲಿಗೆ ಗಾಯವಾಗಿದ್ದು ಚಿಕಿತ್ಸೆ

ಸುಳ್ಯ: ಅವೈಜ್ಞಾನಿಕ ಸ್ಲಾಬ್ ಅಳವಡಿಕೆ| ಪಾದಾಚಾರಿಗಳ ಪ್ರಾಣ ಹಿಂಡುತ್ತಿವೆ ಚರಂಡಿಗಳು| Read More »