ಕರಾವಳಿ

ಸುಳ್ಯ: ಹೋರಿ ತಿವಿದು ವ್ಯಕ್ತಿ ಸಾವು

ಸುಳ್ಯ: ಹೋರಿಯೊಂದು ತಿವಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮುರುಳ್ಯದ ಕೋಡಿಯಡ್ಕದಲ್ಲಿ ನಡೆದಿದೆ.ಮುರುಳ್ಯ ಗ್ರಾಮದ ಪೂದೆಯ ಕಿಟ್ಟಣ್ಣ ಗೌಡ ಕೋಡಿಯಡ್ಕ ಎಂಬವರು ಮೃತಪಟ್ಟ ವ್ಯಕ್ತಿ. ತಾನು ಸಾಕಿರುವ ಹೋರಿಯನ್ನು ತೋಟದಲ್ಲಿ ಮೇಯಲು ಕಟ್ಟಿದ್ದು ಸಂಜೆ ವೇಳೆಗೆ ಹೋರಿಯನ್ನು ಹಟ್ಟಿಗೆ ತರಲು ಕಿಟ್ಟಣ್ಣ ಗೌಡರು ತೆರಳಿದ್ದರು ಎನ್ನಲಾಗಿದೆ. ಅಲ್ಲಿ ಹೋರಿ ತಿವಿದು ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಆ ದಾರಿಯಲ್ಲಿ ಬಂದ ವ್ಯಕ್ತಿಯೋರ್ವರಿಗೆ ಕಿಟ್ಟಣ್ಣ ಗೌಡರು ಬಿದ್ದುಕೊಂಡಿರುವುದು ಕಂಡುಬಂದಿದ್ದು, ಅಲ್ಲೇ ಪಕ್ಕದಲ್ಲಿ ಹೋರಿ ಕಟ್ಟಿ ಹಾಕಿರುವುದನ್ನು ನೋಡಿದ್ದಾರೆ.

ಸುಳ್ಯ: ಹೋರಿ ತಿವಿದು ವ್ಯಕ್ತಿ ಸಾವು Read More »

ಮಂಗಳೂರು; ಚಪ್ಪಲಿ‌ ಅಂಗಡಿ ಮಾಲೀಕನಿಂದ ಗ್ರಾಹಕಿ ಜೊತೆ ಅಸಭ್ಯ ವರ್ತನೆ| ಆರೋಪಿಯ ಬಂಧನ|

ಮಂಗಳೂರು: ಚಪ್ಪಲಿ ಖರೀದಿಗೆ ಅಂಗಡಿಗೆ ಬಂದ ಮಹಿಳೆಯ ಮೈಮೇಲೆ ಕೈ ಹಾಕಿ‌ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಅಂಗಡಿಯ ಮಾಲೀಕನನ್ನು ಬಂಧಿಸಿರುವ ಘಟನೆ ಮಂಗಳೂರು ಹೊರವಲಯದ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಮುಲ್ಕಿ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಎಂಬಲ್ಲಿರುವ ಚಪ್ಪಲಿ ಅಂಗಡಿಯೊಂದಕ್ಕೆ ಗ್ರಾಹಕಿಯೊಬ್ಬರು ಚಪ್ಪಲಿ ಖರೀದಿಗಾಗಿ ತೆರಳಿದ್ದರು. ಈ ವೇಳೆ ಅಂಗಡಿಯಲ್ಲಿದ್ದ ಅಂಗಡಿ ಮಾಲಿಕ ಗ್ರಾಹಕಿಗೆ ವಿವಿಧ ಚಪ್ಪಲಿಗಳನ್ನು ತೋರಿಸಿದ್ದು, ಗ್ರಾಹಕಿಗೆ ಆತ ತೋರಿಸಿದ ಚಪ್ಪಲಿ ಇಷ್ಟವಾಗಿರಲಿಲ್ಲ‌. ಆದರೆ ಅಂಗಡಿ ಮಾಲಕ

ಮಂಗಳೂರು; ಚಪ್ಪಲಿ‌ ಅಂಗಡಿ ಮಾಲೀಕನಿಂದ ಗ್ರಾಹಕಿ ಜೊತೆ ಅಸಭ್ಯ ವರ್ತನೆ| ಆರೋಪಿಯ ಬಂಧನ| Read More »

ಮಂಗಳೂರು: ತಡೆಗೋಡೆ ಕುಸಿದು ಮಣ್ಣಿನಡಿ ಹೂತು ಹೋದ ಮಹಿಳೆ ಗಂಭೀರ, ಮಗು ಪಾರು

ಮಂಗಳೂರು: ನಗರದ ಹೊರವಲಯದ ಬೊಂದೇಲ್ ಕೃಷ್ಣ ನಗರದಲ್ಲಿ ತಡೆಗೋಡೆ ಕುಸಿದು ಮಗು ಹಾಗೂ ಮಹಿಳೆ ಮಣ್ಣಿನಡಿಗೆ ಸಿಲುಕಿದ ಘಟನೆ ಸಂಭವಿಸಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ್ದರಿಂದ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಕೃಷ್ಣನಗರದಲ್ಲಿ ಮನಪಾದಿಂದ ನಡೆಯುತ್ತಿದ್ದ ಜಲ ಸಿರಿ ಯೋಜನೆ ಕಾಮಗಾರಿ ವೇಳೆ ತಡೆಗೋಡೆ ಕುಸಿದು ಬಿದ್ದಿದೆ. ಪರಿಣಾಮ ಉತ್ತರ ಕನ್ನಡ ಮೂಲದ ಕಾರ್ಮಿಕ ಮಹಿಳೆ ಹಾಗೂ ಮಗು ಮಣ್ಣಿನಡಿ ಹೂತು ಹೋಗಿದ್ದರು. ಸ್ಥಳದಲ್ಲಿದ್ದ ಜೆಸಿಬಿ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಮಣ್ಣಿನಡಿಯಿಂದ

ಮಂಗಳೂರು: ತಡೆಗೋಡೆ ಕುಸಿದು ಮಣ್ಣಿನಡಿ ಹೂತು ಹೋದ ಮಹಿಳೆ ಗಂಭೀರ, ಮಗು ಪಾರು Read More »

ಮತಾಂತರ ಯತ್ನವೇ ಒಂದೇ ಕುಟುಂಬದ ಸಾವಿಗೆ ಕಾರಣ!!, ಪೊಲೀಸ್ ಕಮಿಷನರ್ ಆಘಾತಕಾರಿ ಮಾಹಿತಿ|

ಮಂಗಳೂರು: ಜಿಲ್ಲೆಯನ್ನು ಬೆಚ್ಚಿ ಬಿಳಿಸಿದ್ದ ಒಂದು ಇಡೀ ಕುಟುಂಬದ ಆತ್ಮಹತ್ಯೆ ಪ್ರಕರಣಕ್ಕೆ ಮತಾಂತರವೇ ಪ್ರಮುಖ ಕಾರಣ ಎಂದು ದೃಢಪಟ್ಟಿದೆ. ಈ ಪ್ರಕರಣದಲ್ಲಿ ಬಂಧತಳಾಗಿರುವ ಆರೋಪಿ ನೂರ್‌ಜಹಾನ್‌ ಎಂಬಾಕೆ ಮತಾಂತರಕ್ಕೆ ಯತ್ನಿಸಿದ್ದು ಸಾಕ್ಷಿಗಳಿಂದ ಸಾಭೀತಾಗಿದೆ ಎಂದು ಪೊಲೀಸ್‌ ಕಮೀಷನರ್‌ ಶಶಿಕುಮಾರ್ ತಿಳಿಸಿದ್ದಾರೆ. ಡಿಸೆಂಬರ್ 8 ರಂದು ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದರು. ಮೃತ ನಾಗೇಶ್ ಪತ್ನಿ ವಿಜಯಲಕ್ಷ್ಮೀಯನ್ನು ಮದುವೆ ಬ್ರೋಕರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನೂರ್‌ಜಹಾನ್‌ ಡೈವೋರ್ಸ್‌ ನೀಡು, ಮುಸ್ಲಿಂ ಹುಡುಗನೊಂದಿಗೆ ನಿನ್ನ ವಿವಾಹ ಮಾಡಿಸುತ್ತೇನೆ ಎಂದು ಹೇಳಿದ್ದಳು. ವಿಜಯಲಕ್ಷ್ಮೀ

ಮತಾಂತರ ಯತ್ನವೇ ಒಂದೇ ಕುಟುಂಬದ ಸಾವಿಗೆ ಕಾರಣ!!, ಪೊಲೀಸ್ ಕಮಿಷನರ್ ಆಘಾತಕಾರಿ ಮಾಹಿತಿ| Read More »

ಮಂಗಳೂರು: ಬಸ್ಸ್ ನಲ್ಲಿ ಅನ್ಯಕೋಮಿನ ಜೋಡಿಯಿಂದ “ಪ್ರೇಮಸಲ್ಲಾಪ” | ಸಾರ್ವಜನಿಕರಿಂದ ಬುದ್ದಿಮಾತು

ಉಡುಪಿ :ಮಂಗಳೂರಿನಿಂದ ಉಡುಪಿ ಕಡೆಗೆ ಬಸ್ಸಿನಲ್ಲಿ ಹೋಗುತ್ತಿದ್ದ ಯುವಜೋಡಿಯೊಂದು ಮೈಮರೆತು ಸರಸ‌ ಸಲ್ಲಾಪದಲ್ಲಿ ತೊಡಗಿದ ಘಟನೆ ನಡೆದಿದೆ. ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯನ್ನು ಉಡುಪಿಯಲ್ಲಿ ಸಾರ್ವಜನಿಕರು ಹಿಡಿದು ಬುದ್ಧಿಮಾತು ಹೇಳುವ ವೀಡಿಯೋ ವೈರಲ್ ಆಗುತ್ತಿದೆ. ಇಂದು ಬೆಳಗ್ಗೆ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಬಸ್ಸಿನಲ್ಲಿ ಸರಸದಲ್ಲಿ ತೊಡಗಿದ್ದ ವೇಳೆ ಸಾರ್ವಜನಿಕರು ಬಸ್ಸಿನ ನಿರ್ವಾಹಕರ ಗಮನಕ್ಕೆ ತಂದಿದ್ದು ಉಡುಪಿಯಲ್ಲಿ ಇಬ್ಬರನ್ನೂ ವಿಚಾರಣೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿತ್ತು.

ಮಂಗಳೂರು: ಬಸ್ಸ್ ನಲ್ಲಿ ಅನ್ಯಕೋಮಿನ ಜೋಡಿಯಿಂದ “ಪ್ರೇಮಸಲ್ಲಾಪ” | ಸಾರ್ವಜನಿಕರಿಂದ ಬುದ್ದಿಮಾತು Read More »

ಕುಕ್ಕೆ ಚಂಪಾಷಷ್ಟಿ ಮಹೋತ್ಸವ ‌ನೇರಪ್ರಸಾರ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಮಹೋತ್ಸವ ಅಂಗವಾಗಿ ಪಂಚಮಿ ರಥೋತ್ಸವ ನೇರಪ್ರಸಾರ ಇಲ್ಲಿ ಕ್ಲಿಕ್ ಮಾಡಿ

ಕುಕ್ಕೆ ಚಂಪಾಷಷ್ಟಿ ಮಹೋತ್ಸವ ‌ನೇರಪ್ರಸಾರ Read More »

ಕುಕ್ಕೆಯಲ್ಲಿಂದು‌ ಪಂಚಮಿ ರಥೋತ್ಸವ ಸಂಭ್ರಮ| ನಾಳೆ ಬ್ರಹ್ಮರಥದಲ್ಲಿ ವಿರಾಜಿಸಲಿದ್ದಾನೆ ಸುಬ್ರಹ್ಮಣ್ಯ| ಭಕ್ತಿ ಪರಾಕಾಷ್ಠೆಯಲ್ಲಿ ಭಕ್ತಗಣ|

ಕುಕ್ಕೆ ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ದ ನಾಗಸನ್ನಿದಿ ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಪ್ರಯುಕ್ತ ಮಾರ್ಗಶಿರ ಶುದ್ದ ಪಂಚಮಿಯ ದಿನವಾದ ಇಂದು(ಡಿ.8)ತೈಲಾಭ್ಯಂಜನ ಮತ್ತು ಪಂಚಮಿ ರಥೋತ್ಸವ ನೆರವೇರಲಿದೆ. ರಾತ್ರಿ ವಿಶೇಷ ಪಾಲಕಿ ಉತ್ಸವ ಮತ್ತು ಬಂಡಿ ಉತ್ಸವ ದೇವಳದ ಹೊರಾಂಗಣದಲ್ಲಿ ಜರುಗಲಿದೆ. ರಾತ್ರಿ ಪಂಚಮಿ ರಥೋತ್ಸವದ ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ಮತ್ತು ಆಕರ್ಷಣೀಯ “ಕುಕ್ಕೆಬೆಡಿ” ಪ್ರದರ್ಶಿತವಾಗಲಿದೆ. ನಾಳೆ (ಡಿ.9) ಪ್ರಾತಃಕಾಲ 6.58ರ ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ವೈಭವದ ಚಂಪಾಷಷ್ಟಿ ಮಹಾರಥೋತ್ಸವ ನೆರವೇರಲಿದ್ದು,

ಕುಕ್ಕೆಯಲ್ಲಿಂದು‌ ಪಂಚಮಿ ರಥೋತ್ಸವ ಸಂಭ್ರಮ| ನಾಳೆ ಬ್ರಹ್ಮರಥದಲ್ಲಿ ವಿರಾಜಿಸಲಿದ್ದಾನೆ ಸುಬ್ರಹ್ಮಣ್ಯ| ಭಕ್ತಿ ಪರಾಕಾಷ್ಠೆಯಲ್ಲಿ ಭಕ್ತಗಣ| Read More »

ಚಂಪಾಷಷ್ಟಿ ಹಿನ್ನಲೆ| ಕುಕ್ಕೆಯಲ್ಲಿ ಎರಡು ದಿನ‌ ಮದ್ಯ ಮಾರಾಟ ಬಂದ್ ಗೆ ಡೀಸಿ ಆದೇಶ|

ಮಂಗಳೂರು: ಪ್ರಸಿದ್ದ ಯಾತ್ರಾ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ ಮಹೋತ್ಸವ ಪ್ರಯುಕ್ತ ಡಿ. 10ರ ವರೆಗೆ ನಡೆಯಲಿರುವ ರಥೋತ್ಸವಗಳ ಸಮಯದಲ್ಲಿ ಅಪಾರ ಭಕ್ತಾದಿಗಳು ಸೇರಲಿದ್ದಾರೆ. ಈ ಹಿನ್ನಲೆಯಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯದ ಪರಿಸರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಆದೇಶಿಸಿದ್ದಾರೆ. ಜಿಲ್ಲಾಧಿಕಾರಿಯವರು ಕರ್ನಾಟಕ ಅಬಕಾರಿ ಕಾಯಿದೆ 1965 ರ ಸೆಕ್ಷನ್ 21 (1) ರ ಅಡಿಯಲ್ಲಿ ದತ್ತವಾದ

ಚಂಪಾಷಷ್ಟಿ ಹಿನ್ನಲೆ| ಕುಕ್ಕೆಯಲ್ಲಿ ಎರಡು ದಿನ‌ ಮದ್ಯ ಮಾರಾಟ ಬಂದ್ ಗೆ ಡೀಸಿ ಆದೇಶ| Read More »

ಪುತ್ತೂರು: ಹಿರಿಯ ಬಿಜೆಪಿ ನೇತಾರ ಉರಿಮಜಲು ರಾಮಭಟ್ ಇನ್ನಿಲ್ಲ

ಪುತ್ತೂರು: ಕರಾವಳಿಯ ಹಿರಿಯ ರಾಜಕಾರಣಿ, ಬಿಜೆಪಿ ನೇತಾರ, ಮಾಜಿ ಶಾಸಕ 92 ರ ಹರೆಯದ ಉರಿಮಜಲು ರಾಮ್‌ ಭಟ್ ಅಸ್ತಂಗತರಾಗಿದ್ದಾರೆ. ಅವರ ಆರೋಗ್ಯದಲ್ಲಿ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಮ್ ಭಟ್ ಅವರು ಕಳೆದ ಕೆಲವು ವರ್ಷಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರ ಆರೋಗ್ಯವು ಸ್ಥಿರವಾಗಿತ್ತು‌ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದರೂ, ಇಂದು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಕೆಲವು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಕೊಂಚ ಚೇತರಿಸಿಕೊಂಡು

ಪುತ್ತೂರು: ಹಿರಿಯ ಬಿಜೆಪಿ ನೇತಾರ ಉರಿಮಜಲು ರಾಮಭಟ್ ಇನ್ನಿಲ್ಲ Read More »

ಮಂಗಳೂರಿನಲ್ಲಿ ಮತ್ತೆ ಕೊರೊನಾ ಕೇಸ್ ಹೆಚ್ಚಳ| ಒಂದೇ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಸೋಂಕು

ಮಂಗಳೂರು: ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಮತ್ತೊಮ್ಮೆ ಕೊರೋನ ಅಲೆ ಆತಂಕ ಹೆಚ್ಚಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಮಂಗಳೂರಿನ ಎಂ.ವಿ. ಶೆಟ್ಟಿ ಕಾಲೇಜಿನಲ್ಲಿ 15 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಬಂದಿರುವುದು ದೃಢಪಟ್ಟಿದೆ. ಹಾಗಾಗಿ ಕಾಲೇಜನ್ನು ಆರೋಗ್ಯ ಇಲಾಖೆ ಕಂಟೇನ್ಮೆಂಟ್ ಮಾಡಿದೆ. 10 ದಿನದಲ್ಲಿ 21 ಜನ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಡಪಟ್ಟಿದೆ.

ಮಂಗಳೂರಿನಲ್ಲಿ ಮತ್ತೆ ಕೊರೊನಾ ಕೇಸ್ ಹೆಚ್ಚಳ| ಒಂದೇ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಸೋಂಕು Read More »