ಉಪ್ಪಿನಂಗಡಿ ಲಾಠಿ ಚಾರ್ಜ್ ಪ್ರಕರಣಕ್ಕೆ ಪಿಎಫ್ಐ ಖಂಡನೆ| ಡಿ.17ಕ್ಕೆ ‘ಎಸ್.ಪಿ. ಆಫೀಸ್ ಮಾರ್ಚ್’ ಗೆ ನಿರ್ಧಾರ|
ಮಂಗಳೂರು : ಉಪ್ಪಿನಂಗಡಿ ಪೋಲೀಸರ ಲಾಠಿ ಚಾರ್ಜ್ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಬಲವಾಗಿ ಖಂಡಿಸಿದೆ. ಸಂಘಟನೆಯ ಪ್ರಮುಖರಾದ ಅವರು ಎ.ಕೆ.ಅಶ್ರಫ್, ಇಜಾಜ್ ಅಹ್ಮದ್, ಖಾದರ್ ಕುಳಾಯಿ ಮತ್ತು ಜಾಬೀರ್ ಅರಿಯಡ್ಕ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಕ್ರಮವಾಗಿ ಬಂಧಿಸಿದ ಮೂವರು ಕಾರ್ಯಕರತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೆವು. ಈ ವೇಳೆ ಪೊಲೀಸರು ಯದ್ವಾ ತದ್ವಾ ಲಾಠಿ ಬೀಸಿದ್ದಾರೆ. ನಮ್ಮ ಧಾರ್ಮಿಕ ಗುರುವಿಗೂ ಗಂಭೀರ ಗಾಯವಾಗಿದ್ದು, ಓರ್ವ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ. […]









