ಕರಾವಳಿ

ಉಪ್ಪಿನಂಗಡಿ ಲಾಠಿ ಚಾರ್ಜ್ ಪ್ರಕರಣಕ್ಕೆ ಪಿಎಫ್ಐ ಖಂಡನೆ| ಡಿ.17ಕ್ಕೆ ‘ಎಸ್.ಪಿ. ಆಫೀಸ್ ಮಾರ್ಚ್’ ಗೆ ನಿರ್ಧಾರ|

ಮಂಗಳೂರು : ಉಪ್ಪಿನಂಗಡಿ ಪೋಲೀಸರ ಲಾಠಿ ಚಾರ್ಜ್ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಬಲವಾಗಿ ಖಂಡಿಸಿದೆ. ಸಂಘಟನೆಯ ಪ್ರಮುಖರಾದ ಅವರು ಎ.ಕೆ.ಅಶ್ರಫ್, ಇಜಾಜ್ ಅಹ್ಮದ್, ಖಾದರ್ ಕುಳಾಯಿ ಮತ್ತು ಜಾಬೀರ್ ಅರಿಯಡ್ಕ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಕ್ರಮವಾಗಿ ಬಂಧಿಸಿದ ಮೂವರು ಕಾರ್ಯಕರತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೆವು. ಈ ವೇಳೆ ಪೊಲೀಸರು ಯದ್ವಾ ತದ್ವಾ ಲಾಠಿ ಬೀಸಿದ್ದಾರೆ. ನಮ್ಮ ಧಾರ್ಮಿಕ ಗುರುವಿಗೂ ಗಂಭೀರ ಗಾಯವಾಗಿದ್ದು, ಓರ್ವ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ. […]

ಉಪ್ಪಿನಂಗಡಿ ಲಾಠಿ ಚಾರ್ಜ್ ಪ್ರಕರಣಕ್ಕೆ ಪಿಎಫ್ಐ ಖಂಡನೆ| ಡಿ.17ಕ್ಕೆ ‘ಎಸ್.ಪಿ. ಆಫೀಸ್ ಮಾರ್ಚ್’ ಗೆ ನಿರ್ಧಾರ| Read More »

ಸುಳ್ಯಲಿ ನಡ್ತ್ ವಿಶ್ವ ಅರೆಭಾಷೆ ದಿನಾಚರಣೆ| ‘ದೇಶದ ಮೌಖಿಕ ಜಾನಪದ ಸಂಗತಿಗಳ ಬರ್ದ್ ಇಸೊಕು’ – ಡಾ.ಕರುಣಾಕರ ನಿಡಿಂಜಿ

ಸುಳ್ಯ: ಭಾರತಲಿ ಸುಮಾರ್9500 ಭಾಸೆಗ ಒಳ. ಅಷ್ಟೇ ಸಂಸ್ಕೃತಿಗ ಕೂಡಾ ಉಟ್ಟು. ಹೀಂಗೆ ವೈವಿಧ್ಯ ಸಂಸ್ಕೃತಿ ಇರುವ ಭಾರತ ಪ್ರಪಂಚಕ್ಕೆ ಗುರುಸ್ಥಾನಲಿ ಉಟ್ಟು. ನಮ್ಮ ದೇಶಲಿ ಇರುವ ವೈವಿಧ್ಯಮಯ ಮೌಖಿಕ ಜಾನಪದ ಸಂಸ್ಕೃತಿ ಸಾಹಿತ್ಯನ ಬರ್ದ್ ಇಸಿಕಣಕು, ಇದರ ಉಳ್ಸಕಂಬ ಕೆಲ್ಸ ಆಕು,’ ಅಂತ ಮಡಿಕೇರಿನ ಎಫ್. ಎಂ. ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ. ಕರುಣಾಕರ ನಿಡಿಂಜಿ ಹೇಳ್ಯೊಳ. ಅವ್ ಅರೆಭಾಷೆ ಅಕಾಡೆಮಿ ಲೆಕ್ಕಲಿ ಸುಳ್ಯ ಕನ್ನಡ ಭವನದಲ್ಲಿ ಬುಧವಾರ ನಡ್ದ ಅರೆಭಾಷೆ ದಿನಾಚರಣೆಲಿ ಮುಖ್ಯ ಭಾಷಣಗಾರ‌ನಾಗಿಮಾತಾಡ್ದೊ.

ಸುಳ್ಯಲಿ ನಡ್ತ್ ವಿಶ್ವ ಅರೆಭಾಷೆ ದಿನಾಚರಣೆ| ‘ದೇಶದ ಮೌಖಿಕ ಜಾನಪದ ಸಂಗತಿಗಳ ಬರ್ದ್ ಇಸೊಕು’ – ಡಾ.ಕರುಣಾಕರ ನಿಡಿಂಜಿ Read More »

ಸುಳ್ಯ: ವಿದ್ಯುತ್ ಸ್ಪರ್ಶಿಸಿ ಕೃಷಿಕ ಸಾವು

ಸುಳ್ಯ: ತಮ್ಮ ತೋಟದಲ್ಲಿನ ಕಾಳುಮೆಣಸು ಬಳ್ಳಿಯಿಂದ ಕಾಳುಮೆಣಸು ಕೊಯ್ಯುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಕೃಷಿಕರೋರ್ವರು ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಗ್ರಾಮದ ದಾಸಪ್ಪ ಎಂದು ಗುರುತಿಸಲಾಗಿದೆ. ಇವರು ಕಾಳುಮೆಣಸು ಕೊಯ್ಯಲು ಅಲ್ಯುಮಿನಿಯಮ್ ಏಣಿ ಬಳಸಿದ್ದು ಏಣಿಯು ಪಕ್ಕದಲ್ಲಿ ಹಾದು ಹೋಗುತ್ತಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ಈ ವೇಳೆ ದಾಸಪ್ಪರಿಗೆ ವಿದ್ಯುತ್ ಆಘಾತ ಉಂಟಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ: ವಿದ್ಯುತ್ ಸ್ಪರ್ಶಿಸಿ ಕೃಷಿಕ ಸಾವು Read More »

ಒಕ್ಕಲಿಗರ ಸಂಘದ ಚುನಾವಣೆ| ಡಾ. ರೇಣುಕಾಪ್ರಸಾದ್ ಗೆ ಗೆಲುವು

ಮಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಹುದ್ಧೆಗೆ ನಡೆದ ಚುನಾವಣೆಯಲ್ಲಿ ದಿ. ಕುರುಂಜಿ ವೆಂಕಟರಮಣ ಗೌಡರ ಕಿರಿಯ ಮಗ ಡಾ.ರೇಣುಕಾ ಪ್ರಸಾದ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ರೇಣುಕಾ ಪ್ರಸಾದ್ 3295 ಮತಗಳನ್ನು ಪಡೆದುಕೊಂಡರೆ ಅವರ ಹಿರಿಯ ಸಹೋದರ ಡಾ ಚಿದಾನಂದ ಕೆವಿ 1741 ಮತ ಪಡೆದು ಸೋಲು ಅನುಭವಿಸಿದರು. ಕಣದಲ್ಲಿದ್ದ ಮತ್ತೋರ್ವ ಸ್ಪರ್ಧಿ ಹೇಮಚಂದ್ರ ಹಲ್ದಡ್ಕ 346 ಮತ ಪಡೆಯಲಷ್ಟೇ ಶಕ್ತರಾದರು.

ಒಕ್ಕಲಿಗರ ಸಂಘದ ಚುನಾವಣೆ| ಡಾ. ರೇಣುಕಾಪ್ರಸಾದ್ ಗೆ ಗೆಲುವು Read More »

ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣಾ ಫಲಿತಾಂಶ| 221 ಅಭ್ಯರ್ಥಿಗಳ‌ ಭವಿಷ್ಯ ನಿರ್ಧಾರ

ಬೆಂಗಳೂರು: ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಡಿ.12ರಂದು ನಡೆದಿದ್ದ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಮತ ಎಣಿಕೆ ನಡೆಯಲಿದ್ದು, ಜಿದ್ದಾಜಿದ್ದಿನ ಫೈಟ್​ನಲ್ಲಿ ಗೆಲ್ಲುವರು ಯಾರು ಎಂಬ ಕುತೂಹಲ ಕೆರಳಿಸಿದೆ. ಇಂದು (ಡಿ.15) ಫಲಿತಾಂಶ ಹೊರಬೀಳಲಿದ್ದು, ರಾಜ್ಯ ಒಕ್ಕಲಿಗ ಸಂಘದ ಆಡಳಿತ ಚುಕ್ಕಾಣಿ ಯಾರ ಕೈ ಸೇರಲಿದೆ ಅಂತ ಕಾದು ನೋಡಬೇಕಿದೆ. ಏಕ ಕಾಲದಲ್ಲಿ ಸುಮಾರು 389 ಬೂತ್ ಗಳ ಮತ ಎಣಿಕೆ ನಡೆಯುತ್ತದೆ. ಮತ ಎಣಿಕೆಗೆ

ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣಾ ಫಲಿತಾಂಶ| 221 ಅಭ್ಯರ್ಥಿಗಳ‌ ಭವಿಷ್ಯ ನಿರ್ಧಾರ Read More »

ಡಿ.15,ಅರೆಭಾಷೆ ಅಕಾಡೆಮಿಗೆ ದಶಮಾನೋತ್ಸವ ಸಂಭ್ರಮ| ಊರುಲಿ ಪೊರ್ಲುನ ಕಾರ್ಯಕ್ರಮದ ಗೌಜಿ|

ಮಂಗಳೂರು: ‘ಹೇಂಗೊಳಯಾ ಬಾವ, ಮನೆಯವು ಏನ್ ಮಾಡ್ವೆ?ನೀವ್ ಉಸಾರ್ ಒಳರಿಯಾ…? ಮಲೆನಾಡು- ಕರಾವಳಿಯ ಪ್ರದೇಶಗಳಲ್ಲಿ ನಮಗೆ ನಿತ್ಯ ಕೇಳಿಬರುವ ಉಭಯ ಕುಶಲೋಪರಿಯ ನಿನಾದವಿದು. ಅಂದ ಹಾಗೆ ಈ ಭಾಷೆ ಅರೆಭಾಷೆ. ಡಿ. 15ರಂದು ಅರೆಭಾಷೆ ದಿನ ಆಚರಿಸಲಾಗುತ್ತಿದ್ದು, ಈಗ ಅದಕ್ಕೆ ದಶಮಾನೋತ್ಸವ ಸಂಭ್ರಮ. ‘ಅರೆಭಾಷೆ ಎಂದರೆ ಇತರ ಜನರಿಗೆ ಈ ಮಾತನ್ನು ಕೇಳುವಾಗ ಅರ್ಧಂಬರ್ಧ ಅರ್ಥವಾಗುವಂತೆ ಇದ್ದುದರಿಂದ ಇದನ್ನು ಅರೆಭಾಷೆ, ಅರೆಗನ್ನಡ ಎಂದು ಗುರುತಿಸಬಹುದು’ ಎಂದು ಸಂಶೋಧಕರು ಹೇಳಿದ್ದಾರೆ. ಅರೆಭಾಷೆ ಮತ್ತು ಸಂಸ್ಕೃತಿಯ ಅಭ್ಯುದಯಕ್ಕೆ ರಾಜ್ಯ ಸರ್ಕಾರವು

ಡಿ.15,ಅರೆಭಾಷೆ ಅಕಾಡೆಮಿಗೆ ದಶಮಾನೋತ್ಸವ ಸಂಭ್ರಮ| ಊರುಲಿ ಪೊರ್ಲುನ ಕಾರ್ಯಕ್ರಮದ ಗೌಜಿ| Read More »

ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಮೂವರ ಬಂಧನ

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಮೂವರು ಅತ್ಯಾಚಾರ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಮಂಗಳೂರು ಮೂಲದ ಇಬ್ಬರು ಹಾಗೂ ಕೇರಳ ಮೂಲದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಮುಡಿಪು ಹತ್ತಿರದ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ಗೊಂದಲಮಯ ವಾತಾವರಣ ನಿರ್ಮಾಣವಾಗಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಬಾಲಕಿಯ ತಾಯಿ ನೀಡಿರು ದೂರಿನಂತೆ ಪ್ರಕರಣ ದಾಖಲಾಗಿದೆ. ”ಅಪ್ರಾಪ್ತ ವಯಸ್ಸಿನವಳಾಗಿರುವ ಮಗಳಿಗೆ ಆಲ್ಕೋಹಾಲ್ ಕುಡಿಸಿ ಮತ್ತು

ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಮೂವರ ಬಂಧನ Read More »

ಪರಿಷತ್ ಫಲಿತಾಂಶ| ಕೋಟ ಶ್ರೀನಿವಾಸ ಪೂಜಾರಿ ಪ್ರಥಮ ಪ್ರಾಶಸ್ತ್ಯದಲ್ಲಿ ಗೆಲುವು

ಮಂಗಳೂರು: ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ತಲಾ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ವಿಧಾನ ಪರಿಷತ್‍ನ ಏಕೈಕ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು 3,693 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪ್ರಥಮ ಪ್ರಾಶಸ್ತ್ಯದ ಮತಗಳಿಂದಲೇ ಅವರು ಆಯ್ಕೆಯಾಗಿದ್ದಾರೆ. ಇನ್ನು ಕಾಂಗ್ರೆಸ್‍ನ ಅಭ್ಯರ್ಥಿ ಮಂಜುನಾಥ ಭಂಡಾರಿ 2,077 ಮತಗಳನ್ನು ಪಡೆದಿದ್ದಾರೆ.‌ ಎಸ್‍ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ 203 ಮತಗಳನ್ನಷ್ಟೇ ಪಡೆದಿದ್ದಾರೆ. 39 ಮತಗಳು ತಿರಸ್ಕೃತಗೊಂಡಿವೆ

ಪರಿಷತ್ ಫಲಿತಾಂಶ| ಕೋಟ ಶ್ರೀನಿವಾಸ ಪೂಜಾರಿ ಪ್ರಥಮ ಪ್ರಾಶಸ್ತ್ಯದಲ್ಲಿ ಗೆಲುವು Read More »

ಸುಳ್ಯ: ಅವಿನಾಶ್ ಬಸ್ ಮಾಲಕ ನಾರಾಯಣ ರೈ ಆತ್ಮಹತ್ಯೆಗೆ ಶರಣು

ಸುಳ್ಯ: ತಾಲೂಕಿನಲ್ಲಿ ಸಂಚಾರ ವ್ಯವಸ್ಥೆಗೆ ಮುನ್ನುಡಿ ಬರೆದು ಹೆಸರಾದ ಅವಿನಾಶ್ ಖಾಸಗಿ ಬಸ್ ನ ಮಾಲಕರಾದ ನಾರಾಯಣ ರೈ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಬಸ್ಸು ವ್ಯವಸ್ಥೆ ಇಲ್ಲದಿದ್ದ ಕಾಲದಲ್ಲಿ ಗ್ರಾಮೀಣ ರಸ್ತೆಗೆ ಖಾಸಗಿ ಬಸ್ ಇಳಿಸಿದ್ದರು. ಅವರ ಈ ಸಾಹಸ ಸುಳ್ಯದ ಸಂಚಾರಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿತ್ತು. ಕಳೆದ ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದರು ಎನ್ನಲಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

ಸುಳ್ಯ: ಅವಿನಾಶ್ ಬಸ್ ಮಾಲಕ ನಾರಾಯಣ ರೈ ಆತ್ಮಹತ್ಯೆಗೆ ಶರಣು Read More »

ನೆಲ್ಯಾಡಿ: ಲಾರಿ ಮತ್ತು‌ ಬೈಕ್ ನಡುವೆ ಅಪಘಾತ, ಓರ್ವ ಸಾವು, ಮತ್ತೊಬ್ಬ ಗಂಭೀರ

ಉಪ್ಪಿನಂಗಡಿ: ಲಾರಿ ಹಾಗೂ ಬೈಕ್ ಹಾಗೂ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್‌ನಲ್ಲಿದ್ದ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೊಳಿತ್ತೊಟ್ಟು ಸಮೀಪದ ಸಣ್ಣಂಪಾಡಿಯಲ್ಲಿ ನಡೆದಿದೆ. ಮೃತ ಯುವಕನನ್ನು ಇಚ್ಲಂಪಾಡಿ ಗ್ರಾಮದ ಮಾನಡ್ಕ ನಿವಾಸಿ ಜಾರ್ಜ್ ಹಾಗೂ ಝಾನ್ಸಿ ದಂಪತಿ ಪುತ್ರ ಅಲ್ವಿನ್ (23) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡವರನ್ನು ನೆಲ್ಯಾಡಿ ಗ್ರಾಮದ ಪಡಡ್ಕ ನಿವಾಸಿ ಸೆಬಿನ್ ಎನ್ನಲಾಗಿದೆ. ಕೊರಿಯರ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಸೆಬಿನ್ ಸೋಮವಾರದಂದು ರಾತ್ರಿ ಸೆಬಿನ್

ನೆಲ್ಯಾಡಿ: ಲಾರಿ ಮತ್ತು‌ ಬೈಕ್ ನಡುವೆ ಅಪಘಾತ, ಓರ್ವ ಸಾವು, ಮತ್ತೊಬ್ಬ ಗಂಭೀರ Read More »