ಕರಾವಳಿ

ಮಂಗಳೂರಿಗೂ ಕಾಲಿಟ್ಟ ಓಮಿಕ್ರಾನ್| ಐದು ಮಂದಿಯಲ್ಲಿ ಒಂದೇ ದಿನ ಪತ್ತೆಯಾಯ್ತು ರೂಪಾಂತರಿ ವೈರಸ್|

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಮಂದಿಗೆ ಒಂದೇ ದಿನದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ಪತ್ತೆಯಾಗಿದ್ದು, ಕರಾವಳಿಯಲ್ಲಿ ಭೀತಿ ಆವರಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಓಮಿಕ್ರಾನ್ ಪೀಡಿತರ ಸಂಖ್ಯೆ 13ಕ್ಕೇರಿದೆ. ಮಂಗಳೂರು ಹೊರವಲಯದ ವಸತಿ ಶಾಲೆಯ ನಾಲ್ವರು ಮಕ್ಕಳಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿರುವ ಬಗ್ಗೆ ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಇನ್ನೊಬ್ಬ ಕೇರಳ ಮೂಲದ ಮೆಡಿಕಲ್ ವಿದ್ಯಾರ್ಥಿನಿಯಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಆದವರನ್ನು ಪ್ರತಿ ದಿನವೂ ಓಮಿಕ್ರಾನ್ ವೈರಸ್ ಪತ್ತೆಗಾಗಿ […]

ಮಂಗಳೂರಿಗೂ ಕಾಲಿಟ್ಟ ಓಮಿಕ್ರಾನ್| ಐದು ಮಂದಿಯಲ್ಲಿ ಒಂದೇ ದಿನ ಪತ್ತೆಯಾಯ್ತು ರೂಪಾಂತರಿ ವೈರಸ್| Read More »

ಕಡಬ: ಮಲಗಿದ್ದಲ್ಲೇ ಶವವಾದ ನಿವೃತ್ತ ಯೋದ

ಕಡಬ: ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕುದುಂಬೂರು ಸಮೀಪ ನಿವೃತ್ತ ಸೈನಿಕರೋರ್ವರು ಮನೆಯೊಳಗಡೆ ಮಲಗಿದಲ್ಲೆ ಮೃತಪಟ್ಟಿರುವ ಘಟನೆ ಡಿ.17ರಂದು ನಡೆದಿದೆ. ಮೃತರನ್ನು ಮೂಲತ: ನೂಜಿಬಾಳ್ತಿಲ ಕನ್ವರೆ ಸಮೀಪದ ವೇಳಿಕಲ್ ನಿವಾಸಿ ನಿವೃತ್ತ ಸೈನಿಕ ಯೋಹನ್ನಾನ್(50) ಎಂದು ಗುರುತಿಸಲಾಗಿದೆ. ಯೋಹನ್ನಾನ್ ಅವರು ಕಳೆದ ರಾತ್ರಿಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇವರು ಮನೆಯಲ್ಲಿ ಒಬ್ಬರೇ ಇದ್ದು ಮನೆಯ ಎದುರಿನ ಲೈಟ್ ಹಾಕಲಾಗಿದೆ. ಹಗಲು ವೇಳೆ ಲೈಟ್ ಉರಿಯುತ್ತಿದ್ದು ಚಿಲಕ ಹಾಕಿದ್ದರಿಂದ ಸ್ಥಳೀಯರಿಗೆ ಸಂಶಯ ಬಂದು ಬಾಗಿಲು ತೆಗೆದು ನೋಡಿದಾಗ ಮೃತಪಟ್ಟಿರುವುದು

ಕಡಬ: ಮಲಗಿದ್ದಲ್ಲೇ ಶವವಾದ ನಿವೃತ್ತ ಯೋದ Read More »

ಕರಾವಳಿಗೆ ಕಾಲಿಡ್ತಾ ಒಮಿಕ್ರಾನ್? ಘಾನಾದಿಂದ ಮರಳಿದಾತನಿಗೆ ಕೊರೊನಾ ಪಾಸಿಟಿವ್

ಮಂಗಳೂರು: ಘಾನಾದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಒಮಿಕ್ರಾನ್ ಕರಾವಳಿ ಕರ್ನಾಟಕಕ್ಕೆ ತಲುಪುವ ಆತಂಕ ಎದುರಾಗಿದೆ. ಘಾನಾವನ್ನು ಒಮಿಕ್ರಾನ್‌ಗೆ ‘ಹೈ ರಿಸ್ಕ್’ ದೇಶವೆಂದು ಘೋಷಿಸಲಾಗಿದೆ. ಆಗಮನದ ನಂತರ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಲಾದ ಕ್ಷಿಪ್ರ RTPCR ಮಾದರಿಯು ಪಾಸಿಟಿವ್ ಎಂದು ಕಂಡುಬಂದಿದೆ. ನಂತರ, ದಕ್ಷಿಣ ಕನ್ನಡ ಡೆಪ್ಯೂಟಿ ಕಮಿಷನರ್ ಡಾ. ರಾಜೇಂದ್ರ ಕೆ.ವಿ ಅವರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ವಿಮಾನ ನಿಲ್ದಾಣ ಅಧಿಕಾರಿ, ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿ

ಕರಾವಳಿಗೆ ಕಾಲಿಡ್ತಾ ಒಮಿಕ್ರಾನ್? ಘಾನಾದಿಂದ ಮರಳಿದಾತನಿಗೆ ಕೊರೊನಾ ಪಾಸಿಟಿವ್ Read More »

ರಾಜ್ಯದಲ್ಲಿ ಜೋರಾಗ್ತಿದೆ ಒಮೆಕ್ರಾನ್ ಹವಾ| ಕ್ರಿಸ್ಮಸ್‌, ಹೊಸವರ್ಷ ಸಂಭ್ರಮಾಚರಣೆಗೆ ಬ್ರೇಕ್ ಸಾಧ್ಯತೆ| ಮತ್ತೆ ಟೈಟ್ ರೂಲ್ಸ್ ಗೆ ಚಿಂತನೆ?

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಆರ್ಭಟ ಮುಂದುವರೆದಿದೆ. ನಿನ್ನೆ ಹೊಸದಾಗಿ ಐವರಿಗೆ ಓಮಿಕ್ರಾನ್ ವೈರಸ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕೊರೋನಾದಂತೆ ಒಮಿಕ್ರಾನ್ ವೈರಸ್ ಸೋಂಕು ಕಂಟಕವಾಗುವ ಆತಂಕ ಶುರುವಾಗಿದೆ. ನಿನ್ನೆ ಯುಕೆ ಸೇರಿದಂತೆ ವಿವಿಧ ದೇಶಗಳಲ್ಲಿ ಕರ್ನಾಟಕಕ್ಕೆ ಆಗಮಿಸಿದ್ದಂತ ಐವರು ವಿದೇಶಿಗರಿಗೆ ಓಮಿಕ್ರಾನ್ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ಒಮೆಕ್ರಾನ್ ನಿಂದಾಗಿ ಸಾರ್ವಜನಿಕ ಪ್ರದೇಶಗಳ ಪ್ರವೇಶಕ್ಕೆ ಸರ್ಕಾರ ಪಾಸ್ ವಿತರಣೆ ಮಾಡುವ ಚಿಂತನೆ ನಡೆಸಿದೆ ಎನ್ನಲಾಗಿದೆ. ಕೋವಿಡ್ ಲಸಿಕೆ

ರಾಜ್ಯದಲ್ಲಿ ಜೋರಾಗ್ತಿದೆ ಒಮೆಕ್ರಾನ್ ಹವಾ| ಕ್ರಿಸ್ಮಸ್‌, ಹೊಸವರ್ಷ ಸಂಭ್ರಮಾಚರಣೆಗೆ ಬ್ರೇಕ್ ಸಾಧ್ಯತೆ| ಮತ್ತೆ ಟೈಟ್ ರೂಲ್ಸ್ ಗೆ ಚಿಂತನೆ? Read More »

”ಪುತ್ತೂರು ಕಾಲೇಜಿನ ವಿದ್ಯಾರ್ಥಿನಿಯರೇ ಎಚ್ಚರಿಕೆ” ”ಬ್ಯಾರಿಗಳ ಜೊತೆ ಪೆರ್ಚಿ ಕಟ್ಟುವುದು ಗಮನಿಸುತ್ತಿದ್ದೇವೆ”.. ಕಾಲೇಜು ವಿದ್ಯಾರ್ಥಿಗಳ ಗುರಿಯಾಗಿಸಿ ವಾರ್ನಿಂಗ್ |

ಪುತ್ತೂರು : ಇತ್ತೀಚಿನ ದಿನಗಳಲ್ಲಿ ಹಿಂದೂ ವಿದ್ಯಾರ್ಥಿನಿಯರು ಮುಸ್ಲಿಂ ಯುವಕರ ಜೊತೆ ಸುತ್ತಾಡಲು, ಮಾತನಾಡಲು ಹೋಗಿ ಸಿಕ್ಕಿ ಹಾಕಿಕೊಂಡು ಹಿಂದೂ ಸಂಘಟಕರಿಂದ ಹೊಡೆಸಿಕೊಂಡ ಘಟನೆಗಳು ನಡೆದಿವೆ. ಇಂಥಹ ಪರಿಸ್ಥಿತಿಗಳು ಬಾರದಿರಲು ಹಿಂದೂ ಸಂಘಟನೆಯೊಂದರ ಇನ್ಸ್ಟಾಗ್ರಾಂ ಪೇಜ್ ನಲ್ಲಿ ವಿದ್ಯಾರ್ಥಿನಿಯರಿಗೆ ಎಚ್ಚರಿಕೆಯ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ. “ಪುತ್ತೂರು ಕಾಲೇಜಿನ ಹಿಂದೂ ವಿದ್ಯಾರ್ಥಿನಿಯರ ಬಸ್ ಸ್ಟಾಂಡ್ ನಲ್ಲಿ ಬ್ಯಾರಿಗಳ ಅಂಗಡಿಯಲ್ಲಿ ಅವರ ಜೊತೆ ಮಾತಾಡುವುದು, ಪೆರ್ಚಿ ಕಟ್ಟುವುದು ಗಮನಿಸುತಿದ್ದೇವೆ. ನೀವಾಗಿಯೆ ಬದಲಾಗುತ್ತೀರಾ ? ಅಥವಾ ನಾವೇ ನಿಮ್ಮನ್ನು ಬದಲಾಯಿಸಬೇಕಾ ..?

”ಪುತ್ತೂರು ಕಾಲೇಜಿನ ವಿದ್ಯಾರ್ಥಿನಿಯರೇ ಎಚ್ಚರಿಕೆ” ”ಬ್ಯಾರಿಗಳ ಜೊತೆ ಪೆರ್ಚಿ ಕಟ್ಟುವುದು ಗಮನಿಸುತ್ತಿದ್ದೇವೆ”.. ಕಾಲೇಜು ವಿದ್ಯಾರ್ಥಿಗಳ ಗುರಿಯಾಗಿಸಿ ವಾರ್ನಿಂಗ್ | Read More »

ಉಪ್ಪಿನಂಗಡಿ ಗಲಬೆ ಪ್ರಕರಣ| ಪಿಎಫ್ಐ ಕಾರ್ಯಕರ್ತರ ಮೇಲೆ ಕೇಸ್ ಜಡಿದ ಪೊಲೀಸರು|

ಉಪ್ಪಿನಂಗಡಿ: ಇಲ್ಲಿನ ಠಾಣೆಯ ಮುಂಭಾಗ ನಡೆದ ಪ್ರತಿಭಟನೆಯ ವೇಳೆ ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು 10 ಮಂದಿ ಪಿಎಫ್ಐ ಕಾರ್ಯಕರ್ತರ ಮೇಲೆ ದೂರನ್ನು ಪೊಲೀಸರು ಸ್ವಯಂ ದಾಖಲಿಸಿಕೊಂಡಿದ್ದಾರೆ. ತಾಹಿರ್, ಸಾದಿಕ್, ಅಬ್ದುಲ್ ಮುಬಾರಕ್, ಶರೀನ್, ಮೊಹಮ್ಮದ್ ಜಾಹೀರ್, ಪೈಝಲ್, ಹನೀಫ್, ಕಾಸಿಂ , ಆಸಿಫ್, ತುಪೈಲ್ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಇವರ ವಿರುದ್ಧ ಐಪಿಸಿಯ ವಿವಿಧ ಕಲಂ ಮತ್ತು ಆಸ್ತಿ ನಷ್ಠ ಕಾಯ್ದೆಯಡಿಯಲ್ಲೂ ಕೇಸ್ ದಾಖಲಾಗಿದೆ. ಇವರು ಅಕ್ರಮವಾಗಿ ಠಾಣೆ

ಉಪ್ಪಿನಂಗಡಿ ಗಲಬೆ ಪ್ರಕರಣ| ಪಿಎಫ್ಐ ಕಾರ್ಯಕರ್ತರ ಮೇಲೆ ಕೇಸ್ ಜಡಿದ ಪೊಲೀಸರು| Read More »

ಸಮಾಜಘಾತುಕ ಶಕ್ತಿಯ ಮಣಿಸಲು ಪೊಲೀಸರಿಗೆ ಪರಮಾಧಿಕಾರ – ಸಚಿವ ಅಂಗಾರ

ಸುಳ್ಯ: ಉಪ್ಪಿನಂಗಡಿ ಪರಿಸರದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಸಮಾಜಘಾತುಕ ಶಕ್ತಿಯ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆಯನ್ನು ಸಹಿಸಲು ಸಾಧ್ಯವಿಲ್ಲ. ಘಟನೆಗೆ ಕಾರಣರಾದವರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಸಮರ್ಥವಾಗಿದೆ. ಗಲಭೆಗೆ ಯತ್ನಿಸುವ ಸಂಘಟನೆಗಳ ವಿರುದ್ದ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ, ಈ ಕುರಿತು ‌ಗೃಹಸಚಿವರೂ ಸೂಚನೆ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.

ಸಮಾಜಘಾತುಕ ಶಕ್ತಿಯ ಮಣಿಸಲು ಪೊಲೀಸರಿಗೆ ಪರಮಾಧಿಕಾರ – ಸಚಿವ ಅಂಗಾರ Read More »

“ಪ್ರತಿಭಟನೆ ಉದ್ರೇಕಕಾರಿಯಾಗಿ ಪರಿವರ್ತನೆಗೊಂಡಿತ್ತು, ಠಾಣೆಗೆ ಮುತ್ತಿಗೆ ಹಾಕಿ ಹಾನಿ‌ ಮಾಡಿದ ಕಾರಣ ಲಾಠಿ ಕೈಗೆತ್ತಿಕೊಂಡಿದ್ದೇವೆ”- ಎಸ್ಪಿ ಸೋ‌ನಾವಣೆ

ಪುತ್ತೂರು: ಉಪ್ಪಿನಂಗಡಿ ನಡೆದ ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದು, ಉದ್ರೇಕಕಾರಿಯಾಗಿ ವರ್ತಿಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಅವರು, ‘ಯುವಕರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಡಿಸೆಂಬರ್ 13 ರಂದು ಸಿನಾನ್ ಆರೋಪಿಯನ್ನು ಬಂಧಿಸಲಾಗಿತ್ತು. ಸಿನಾನ್ ನೀಡಿದ ಮಾಹಿತಿ ಪ್ರಕಾರ ಮತ್ತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಮುಸ್ತಫಾ,ಹಮೀದ್,ಝಕಾರಿಯಾ ವಶಕ್ಕೆ‌ ಪಡೆದ ಮೂವರು ಆರೋಪಿಗಳು ಈ ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಪಿಎಫ್‌ಐ ಸಂಘಟನೆ ಕಾರ್ಯಕರ್ತರಿಂದ

“ಪ್ರತಿಭಟನೆ ಉದ್ರೇಕಕಾರಿಯಾಗಿ ಪರಿವರ್ತನೆಗೊಂಡಿತ್ತು, ಠಾಣೆಗೆ ಮುತ್ತಿಗೆ ಹಾಕಿ ಹಾನಿ‌ ಮಾಡಿದ ಕಾರಣ ಲಾಠಿ ಕೈಗೆತ್ತಿಕೊಂಡಿದ್ದೇವೆ”- ಎಸ್ಪಿ ಸೋ‌ನಾವಣೆ Read More »

“ಅಶಾಂತಿ ಸೃಷ್ಟಿಸುವುದೇ ಪೊಲೀಸರ ಉದ್ದೇಶವಾಗಿತ್ತು, ಪರಿಚಯದ ಪೊಲೀಸರೇ ಹೊಡೆದಿದ್ದಾರೆ” ಲಾಠಿ ಏಟು ತಿಂದವರಿಂದ ಪೊಲೀಸರ ಮೇಲೆ ಆರೋಪ

ಮಂಗಳೂರು: ”ಪ್ರತಿಭಟನಾನಿರತ ಕಾರ್ಯಕರ್ತರನ್ನು ಚದುರಿಸುವ ಉದ್ದೇಶ ಪೊಲೀಸರಿಗೆ ಇದ್ದಂತಿರಲಿಲ್ಲ. ನಮಗೆ ಹೊಡೆದು ಅಶಾಂತಿ ಸೃಷ್ಟಿಸುವುದೇ ಅವರ ಉದ್ದೇಶವಾಗಿತ್ತು. ಲಾಠಿ ಬೀಸಿ ಚದುರಿಸುವ ಬದಲು ತಲೆಯನ್ನೇ ಗುರಿಯಾಗಿಸಿಕೊಂಡು ಹೊಡೆದಿದ್ದಾರೆ. ಮೊಳೆ ಜೋಡಿಸಿಟ್ಟಿದ್ದ ಯಾವುದೋ ವಸ್ತುವಿನಿಂದ ಮತ್ತು ರೀಪುವಿನಿಂದಲೂ ಹಲ್ಲೆ ನಡೆಸಿದ್ದಾರೆ. ಬೂಟುಗಾಲಿನಿಂದಲೂ ತುಳಿದಿದ್ದಾರೆ. ಬ್ಯಾರಿಗಳಿಗೆ ಭಾರೀ ಅಹಂಕಾರ ಎಂದು ನಿಂದಿಸುತ್ತಿದ್ದರು. ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದರು. ಪರಿಚಿತ ಪೊಲೀಸರೇ ಈ ಕೆಲಸ ಮಾಡಿದ್ದಾರೆ” ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯೆದುರು ಮಂಗಳವಾರ ನಡೆದ ಪೊಲೀಸ್ ಲಾಠಿಚಾರ್ಜ್ ವೇಳೆ ಗಾಯಗೊಂಡು

“ಅಶಾಂತಿ ಸೃಷ್ಟಿಸುವುದೇ ಪೊಲೀಸರ ಉದ್ದೇಶವಾಗಿತ್ತು, ಪರಿಚಯದ ಪೊಲೀಸರೇ ಹೊಡೆದಿದ್ದಾರೆ” ಲಾಠಿ ಏಟು ತಿಂದವರಿಂದ ಪೊಲೀಸರ ಮೇಲೆ ಆರೋಪ Read More »

ಉಪ್ಪಿನಂಗಡಿ ಲಾಠಿಚಾರ್ಜ್ ಪ್ರಕರಣ| ಕ್ಯಾಂಪಸ್ ಪ್ರಂಟ್ ನಿಂದ ಪ್ರತಿಭಟನೆ|

ಮಂಗಳೂರು: ಮೂವರು ಪಿಎಫ್ ಐ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಉಪ್ಪಿನಂಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿಯ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಸಿರಾಜ್ ಮಂಗಳೂರು, ಉಪ್ಪಿನಂಗಡಿಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಭೀಕರ ಲಾಠಿ ಪ್ರಹಾರ ಪೊಲೀಸರ ತಾರತಮ್ಯ ನೀತಿ, ಕೋಮುವಾದಿ ಮನಸ್ಥಿತಿಯು ಕರ್ನಾಟಕದ ಸೌಹಾರ್ದತೆಯ

ಉಪ್ಪಿನಂಗಡಿ ಲಾಠಿಚಾರ್ಜ್ ಪ್ರಕರಣ| ಕ್ಯಾಂಪಸ್ ಪ್ರಂಟ್ ನಿಂದ ಪ್ರತಿಭಟನೆ| Read More »