ಕರಾವಳಿ

ಸಮಾಜಘಾತುಕ ಶಕ್ತಿಯ ಮಣಿಸಲು ಪೊಲೀಸರಿಗೆ ಪರಮಾಧಿಕಾರ – ಸಚಿವ ಅಂಗಾರ

ಸುಳ್ಯ: ಉಪ್ಪಿನಂಗಡಿ ಪರಿಸರದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಸಮಾಜಘಾತುಕ ಶಕ್ತಿಯ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆಯನ್ನು ಸಹಿಸಲು ಸಾಧ್ಯವಿಲ್ಲ. ಘಟನೆಗೆ ಕಾರಣರಾದವರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಸಮರ್ಥವಾಗಿದೆ. ಗಲಭೆಗೆ ಯತ್ನಿಸುವ ಸಂಘಟನೆಗಳ ವಿರುದ್ದ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ, ಈ ಕುರಿತು ‌ಗೃಹಸಚಿವರೂ ಸೂಚನೆ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.

ಸಮಾಜಘಾತುಕ ಶಕ್ತಿಯ ಮಣಿಸಲು ಪೊಲೀಸರಿಗೆ ಪರಮಾಧಿಕಾರ – ಸಚಿವ ಅಂಗಾರ Read More »

“ಪ್ರತಿಭಟನೆ ಉದ್ರೇಕಕಾರಿಯಾಗಿ ಪರಿವರ್ತನೆಗೊಂಡಿತ್ತು, ಠಾಣೆಗೆ ಮುತ್ತಿಗೆ ಹಾಕಿ ಹಾನಿ‌ ಮಾಡಿದ ಕಾರಣ ಲಾಠಿ ಕೈಗೆತ್ತಿಕೊಂಡಿದ್ದೇವೆ”- ಎಸ್ಪಿ ಸೋ‌ನಾವಣೆ

ಪುತ್ತೂರು: ಉಪ್ಪಿನಂಗಡಿ ನಡೆದ ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದು, ಉದ್ರೇಕಕಾರಿಯಾಗಿ ವರ್ತಿಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಅವರು, ‘ಯುವಕರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಡಿಸೆಂಬರ್ 13 ರಂದು ಸಿನಾನ್ ಆರೋಪಿಯನ್ನು ಬಂಧಿಸಲಾಗಿತ್ತು. ಸಿನಾನ್ ನೀಡಿದ ಮಾಹಿತಿ ಪ್ರಕಾರ ಮತ್ತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಮುಸ್ತಫಾ,ಹಮೀದ್,ಝಕಾರಿಯಾ ವಶಕ್ಕೆ‌ ಪಡೆದ ಮೂವರು ಆರೋಪಿಗಳು ಈ ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಪಿಎಫ್‌ಐ ಸಂಘಟನೆ ಕಾರ್ಯಕರ್ತರಿಂದ

“ಪ್ರತಿಭಟನೆ ಉದ್ರೇಕಕಾರಿಯಾಗಿ ಪರಿವರ್ತನೆಗೊಂಡಿತ್ತು, ಠಾಣೆಗೆ ಮುತ್ತಿಗೆ ಹಾಕಿ ಹಾನಿ‌ ಮಾಡಿದ ಕಾರಣ ಲಾಠಿ ಕೈಗೆತ್ತಿಕೊಂಡಿದ್ದೇವೆ”- ಎಸ್ಪಿ ಸೋ‌ನಾವಣೆ Read More »

“ಅಶಾಂತಿ ಸೃಷ್ಟಿಸುವುದೇ ಪೊಲೀಸರ ಉದ್ದೇಶವಾಗಿತ್ತು, ಪರಿಚಯದ ಪೊಲೀಸರೇ ಹೊಡೆದಿದ್ದಾರೆ” ಲಾಠಿ ಏಟು ತಿಂದವರಿಂದ ಪೊಲೀಸರ ಮೇಲೆ ಆರೋಪ

ಮಂಗಳೂರು: ”ಪ್ರತಿಭಟನಾನಿರತ ಕಾರ್ಯಕರ್ತರನ್ನು ಚದುರಿಸುವ ಉದ್ದೇಶ ಪೊಲೀಸರಿಗೆ ಇದ್ದಂತಿರಲಿಲ್ಲ. ನಮಗೆ ಹೊಡೆದು ಅಶಾಂತಿ ಸೃಷ್ಟಿಸುವುದೇ ಅವರ ಉದ್ದೇಶವಾಗಿತ್ತು. ಲಾಠಿ ಬೀಸಿ ಚದುರಿಸುವ ಬದಲು ತಲೆಯನ್ನೇ ಗುರಿಯಾಗಿಸಿಕೊಂಡು ಹೊಡೆದಿದ್ದಾರೆ. ಮೊಳೆ ಜೋಡಿಸಿಟ್ಟಿದ್ದ ಯಾವುದೋ ವಸ್ತುವಿನಿಂದ ಮತ್ತು ರೀಪುವಿನಿಂದಲೂ ಹಲ್ಲೆ ನಡೆಸಿದ್ದಾರೆ. ಬೂಟುಗಾಲಿನಿಂದಲೂ ತುಳಿದಿದ್ದಾರೆ. ಬ್ಯಾರಿಗಳಿಗೆ ಭಾರೀ ಅಹಂಕಾರ ಎಂದು ನಿಂದಿಸುತ್ತಿದ್ದರು. ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದರು. ಪರಿಚಿತ ಪೊಲೀಸರೇ ಈ ಕೆಲಸ ಮಾಡಿದ್ದಾರೆ” ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯೆದುರು ಮಂಗಳವಾರ ನಡೆದ ಪೊಲೀಸ್ ಲಾಠಿಚಾರ್ಜ್ ವೇಳೆ ಗಾಯಗೊಂಡು

“ಅಶಾಂತಿ ಸೃಷ್ಟಿಸುವುದೇ ಪೊಲೀಸರ ಉದ್ದೇಶವಾಗಿತ್ತು, ಪರಿಚಯದ ಪೊಲೀಸರೇ ಹೊಡೆದಿದ್ದಾರೆ” ಲಾಠಿ ಏಟು ತಿಂದವರಿಂದ ಪೊಲೀಸರ ಮೇಲೆ ಆರೋಪ Read More »

ಉಪ್ಪಿನಂಗಡಿ ಲಾಠಿಚಾರ್ಜ್ ಪ್ರಕರಣ| ಕ್ಯಾಂಪಸ್ ಪ್ರಂಟ್ ನಿಂದ ಪ್ರತಿಭಟನೆ|

ಮಂಗಳೂರು: ಮೂವರು ಪಿಎಫ್ ಐ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಉಪ್ಪಿನಂಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿಯ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಸಿರಾಜ್ ಮಂಗಳೂರು, ಉಪ್ಪಿನಂಗಡಿಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಭೀಕರ ಲಾಠಿ ಪ್ರಹಾರ ಪೊಲೀಸರ ತಾರತಮ್ಯ ನೀತಿ, ಕೋಮುವಾದಿ ಮನಸ್ಥಿತಿಯು ಕರ್ನಾಟಕದ ಸೌಹಾರ್ದತೆಯ

ಉಪ್ಪಿನಂಗಡಿ ಲಾಠಿಚಾರ್ಜ್ ಪ್ರಕರಣ| ಕ್ಯಾಂಪಸ್ ಪ್ರಂಟ್ ನಿಂದ ಪ್ರತಿಭಟನೆ| Read More »

ಉಪ್ಪಿನಂಗಡಿ ಲಾಠಿ ಚಾರ್ಜ್ ಪ್ರಕರಣಕ್ಕೆ ಪಿಎಫ್ಐ ಖಂಡನೆ| ಡಿ.17ಕ್ಕೆ ‘ಎಸ್.ಪಿ. ಆಫೀಸ್ ಮಾರ್ಚ್’ ಗೆ ನಿರ್ಧಾರ|

ಮಂಗಳೂರು : ಉಪ್ಪಿನಂಗಡಿ ಪೋಲೀಸರ ಲಾಠಿ ಚಾರ್ಜ್ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಬಲವಾಗಿ ಖಂಡಿಸಿದೆ. ಸಂಘಟನೆಯ ಪ್ರಮುಖರಾದ ಅವರು ಎ.ಕೆ.ಅಶ್ರಫ್, ಇಜಾಜ್ ಅಹ್ಮದ್, ಖಾದರ್ ಕುಳಾಯಿ ಮತ್ತು ಜಾಬೀರ್ ಅರಿಯಡ್ಕ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಕ್ರಮವಾಗಿ ಬಂಧಿಸಿದ ಮೂವರು ಕಾರ್ಯಕರತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೆವು. ಈ ವೇಳೆ ಪೊಲೀಸರು ಯದ್ವಾ ತದ್ವಾ ಲಾಠಿ ಬೀಸಿದ್ದಾರೆ. ನಮ್ಮ ಧಾರ್ಮಿಕ ಗುರುವಿಗೂ ಗಂಭೀರ ಗಾಯವಾಗಿದ್ದು, ಓರ್ವ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ.

ಉಪ್ಪಿನಂಗಡಿ ಲಾಠಿ ಚಾರ್ಜ್ ಪ್ರಕರಣಕ್ಕೆ ಪಿಎಫ್ಐ ಖಂಡನೆ| ಡಿ.17ಕ್ಕೆ ‘ಎಸ್.ಪಿ. ಆಫೀಸ್ ಮಾರ್ಚ್’ ಗೆ ನಿರ್ಧಾರ| Read More »

ಸುಳ್ಯಲಿ ನಡ್ತ್ ವಿಶ್ವ ಅರೆಭಾಷೆ ದಿನಾಚರಣೆ| ‘ದೇಶದ ಮೌಖಿಕ ಜಾನಪದ ಸಂಗತಿಗಳ ಬರ್ದ್ ಇಸೊಕು’ – ಡಾ.ಕರುಣಾಕರ ನಿಡಿಂಜಿ

ಸುಳ್ಯ: ಭಾರತಲಿ ಸುಮಾರ್9500 ಭಾಸೆಗ ಒಳ. ಅಷ್ಟೇ ಸಂಸ್ಕೃತಿಗ ಕೂಡಾ ಉಟ್ಟು. ಹೀಂಗೆ ವೈವಿಧ್ಯ ಸಂಸ್ಕೃತಿ ಇರುವ ಭಾರತ ಪ್ರಪಂಚಕ್ಕೆ ಗುರುಸ್ಥಾನಲಿ ಉಟ್ಟು. ನಮ್ಮ ದೇಶಲಿ ಇರುವ ವೈವಿಧ್ಯಮಯ ಮೌಖಿಕ ಜಾನಪದ ಸಂಸ್ಕೃತಿ ಸಾಹಿತ್ಯನ ಬರ್ದ್ ಇಸಿಕಣಕು, ಇದರ ಉಳ್ಸಕಂಬ ಕೆಲ್ಸ ಆಕು,’ ಅಂತ ಮಡಿಕೇರಿನ ಎಫ್. ಎಂ. ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ. ಕರುಣಾಕರ ನಿಡಿಂಜಿ ಹೇಳ್ಯೊಳ. ಅವ್ ಅರೆಭಾಷೆ ಅಕಾಡೆಮಿ ಲೆಕ್ಕಲಿ ಸುಳ್ಯ ಕನ್ನಡ ಭವನದಲ್ಲಿ ಬುಧವಾರ ನಡ್ದ ಅರೆಭಾಷೆ ದಿನಾಚರಣೆಲಿ ಮುಖ್ಯ ಭಾಷಣಗಾರ‌ನಾಗಿಮಾತಾಡ್ದೊ.

ಸುಳ್ಯಲಿ ನಡ್ತ್ ವಿಶ್ವ ಅರೆಭಾಷೆ ದಿನಾಚರಣೆ| ‘ದೇಶದ ಮೌಖಿಕ ಜಾನಪದ ಸಂಗತಿಗಳ ಬರ್ದ್ ಇಸೊಕು’ – ಡಾ.ಕರುಣಾಕರ ನಿಡಿಂಜಿ Read More »

ಸುಳ್ಯ: ವಿದ್ಯುತ್ ಸ್ಪರ್ಶಿಸಿ ಕೃಷಿಕ ಸಾವು

ಸುಳ್ಯ: ತಮ್ಮ ತೋಟದಲ್ಲಿನ ಕಾಳುಮೆಣಸು ಬಳ್ಳಿಯಿಂದ ಕಾಳುಮೆಣಸು ಕೊಯ್ಯುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಕೃಷಿಕರೋರ್ವರು ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಗ್ರಾಮದ ದಾಸಪ್ಪ ಎಂದು ಗುರುತಿಸಲಾಗಿದೆ. ಇವರು ಕಾಳುಮೆಣಸು ಕೊಯ್ಯಲು ಅಲ್ಯುಮಿನಿಯಮ್ ಏಣಿ ಬಳಸಿದ್ದು ಏಣಿಯು ಪಕ್ಕದಲ್ಲಿ ಹಾದು ಹೋಗುತ್ತಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ಈ ವೇಳೆ ದಾಸಪ್ಪರಿಗೆ ವಿದ್ಯುತ್ ಆಘಾತ ಉಂಟಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ: ವಿದ್ಯುತ್ ಸ್ಪರ್ಶಿಸಿ ಕೃಷಿಕ ಸಾವು Read More »

ಒಕ್ಕಲಿಗರ ಸಂಘದ ಚುನಾವಣೆ| ಡಾ. ರೇಣುಕಾಪ್ರಸಾದ್ ಗೆ ಗೆಲುವು

ಮಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಹುದ್ಧೆಗೆ ನಡೆದ ಚುನಾವಣೆಯಲ್ಲಿ ದಿ. ಕುರುಂಜಿ ವೆಂಕಟರಮಣ ಗೌಡರ ಕಿರಿಯ ಮಗ ಡಾ.ರೇಣುಕಾ ಪ್ರಸಾದ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ರೇಣುಕಾ ಪ್ರಸಾದ್ 3295 ಮತಗಳನ್ನು ಪಡೆದುಕೊಂಡರೆ ಅವರ ಹಿರಿಯ ಸಹೋದರ ಡಾ ಚಿದಾನಂದ ಕೆವಿ 1741 ಮತ ಪಡೆದು ಸೋಲು ಅನುಭವಿಸಿದರು. ಕಣದಲ್ಲಿದ್ದ ಮತ್ತೋರ್ವ ಸ್ಪರ್ಧಿ ಹೇಮಚಂದ್ರ ಹಲ್ದಡ್ಕ 346 ಮತ ಪಡೆಯಲಷ್ಟೇ ಶಕ್ತರಾದರು.

ಒಕ್ಕಲಿಗರ ಸಂಘದ ಚುನಾವಣೆ| ಡಾ. ರೇಣುಕಾಪ್ರಸಾದ್ ಗೆ ಗೆಲುವು Read More »

ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣಾ ಫಲಿತಾಂಶ| 221 ಅಭ್ಯರ್ಥಿಗಳ‌ ಭವಿಷ್ಯ ನಿರ್ಧಾರ

ಬೆಂಗಳೂರು: ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಡಿ.12ರಂದು ನಡೆದಿದ್ದ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಮತ ಎಣಿಕೆ ನಡೆಯಲಿದ್ದು, ಜಿದ್ದಾಜಿದ್ದಿನ ಫೈಟ್​ನಲ್ಲಿ ಗೆಲ್ಲುವರು ಯಾರು ಎಂಬ ಕುತೂಹಲ ಕೆರಳಿಸಿದೆ. ಇಂದು (ಡಿ.15) ಫಲಿತಾಂಶ ಹೊರಬೀಳಲಿದ್ದು, ರಾಜ್ಯ ಒಕ್ಕಲಿಗ ಸಂಘದ ಆಡಳಿತ ಚುಕ್ಕಾಣಿ ಯಾರ ಕೈ ಸೇರಲಿದೆ ಅಂತ ಕಾದು ನೋಡಬೇಕಿದೆ. ಏಕ ಕಾಲದಲ್ಲಿ ಸುಮಾರು 389 ಬೂತ್ ಗಳ ಮತ ಎಣಿಕೆ ನಡೆಯುತ್ತದೆ. ಮತ ಎಣಿಕೆಗೆ

ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣಾ ಫಲಿತಾಂಶ| 221 ಅಭ್ಯರ್ಥಿಗಳ‌ ಭವಿಷ್ಯ ನಿರ್ಧಾರ Read More »

ಡಿ.15,ಅರೆಭಾಷೆ ಅಕಾಡೆಮಿಗೆ ದಶಮಾನೋತ್ಸವ ಸಂಭ್ರಮ| ಊರುಲಿ ಪೊರ್ಲುನ ಕಾರ್ಯಕ್ರಮದ ಗೌಜಿ|

ಮಂಗಳೂರು: ‘ಹೇಂಗೊಳಯಾ ಬಾವ, ಮನೆಯವು ಏನ್ ಮಾಡ್ವೆ?ನೀವ್ ಉಸಾರ್ ಒಳರಿಯಾ…? ಮಲೆನಾಡು- ಕರಾವಳಿಯ ಪ್ರದೇಶಗಳಲ್ಲಿ ನಮಗೆ ನಿತ್ಯ ಕೇಳಿಬರುವ ಉಭಯ ಕುಶಲೋಪರಿಯ ನಿನಾದವಿದು. ಅಂದ ಹಾಗೆ ಈ ಭಾಷೆ ಅರೆಭಾಷೆ. ಡಿ. 15ರಂದು ಅರೆಭಾಷೆ ದಿನ ಆಚರಿಸಲಾಗುತ್ತಿದ್ದು, ಈಗ ಅದಕ್ಕೆ ದಶಮಾನೋತ್ಸವ ಸಂಭ್ರಮ. ‘ಅರೆಭಾಷೆ ಎಂದರೆ ಇತರ ಜನರಿಗೆ ಈ ಮಾತನ್ನು ಕೇಳುವಾಗ ಅರ್ಧಂಬರ್ಧ ಅರ್ಥವಾಗುವಂತೆ ಇದ್ದುದರಿಂದ ಇದನ್ನು ಅರೆಭಾಷೆ, ಅರೆಗನ್ನಡ ಎಂದು ಗುರುತಿಸಬಹುದು’ ಎಂದು ಸಂಶೋಧಕರು ಹೇಳಿದ್ದಾರೆ. ಅರೆಭಾಷೆ ಮತ್ತು ಸಂಸ್ಕೃತಿಯ ಅಭ್ಯುದಯಕ್ಕೆ ರಾಜ್ಯ ಸರ್ಕಾರವು

ಡಿ.15,ಅರೆಭಾಷೆ ಅಕಾಡೆಮಿಗೆ ದಶಮಾನೋತ್ಸವ ಸಂಭ್ರಮ| ಊರುಲಿ ಪೊರ್ಲುನ ಕಾರ್ಯಕ್ರಮದ ಗೌಜಿ| Read More »