ಕರಾವಳಿ

ವಿಟ್ಲದ ಯುವಕ ಬೆಂಗಳೂರಿನಲ್ಲಿ ಸಾವು

ವಿಟ್ಲ: ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಪುಣಚ ನಿವಾಸಿ ಪ್ರದೀಪ್ ಕುಲಾಲ್(25) ಅವರು ಜ.5 ರಂದು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಪ್ರದೀಪ್ ಅವರು ಪುಣಚ ನಿವಾಸಿಯಾಗಿದ್ದು, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪೂರೈಸಿ, ಬೆಂಗಳೂರಿನ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

ವಿಟ್ಲದ ಯುವಕ ಬೆಂಗಳೂರಿನಲ್ಲಿ ಸಾವು Read More »

ಸುಳ್ಯ: ಚಿಲ್ಲರೆಗಾಗಿ‌ ನಿರ್ವಾಹಕನಿಗೆ ಹಲ್ಲೆಗೈದ ಪ್ರಯಾಣಿಕ| ದೂರು ದಾಖಲು

ಸುಳ್ಯ: ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕ ಚಿಲ್ಲರೆ ಕೊಡಲು ವಿಳಂಬ ಮಾಡಿದ ಕಾರಣಕ್ಕೆ ಸಿಟ್ಟಿಗೆದ್ದ ಪ್ರಯಾಣಿಕನೋರ್ವ ಕಂಡಕ್ಟರ್ ಮೇಲೆಯೇ ಹಲ್ಲೆ ನಡೆಸಿದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಸುಳ್ಯದಿಂದ ಬೆಳ್ಳಾರೆ ಕಡೆಗೆ ತೆರಳುತ್ತಿದ್ದ ಬಸ್ ಗೆ ಐವರ್ನಾಡು ಎಂಬಲ್ಲಿ ಪುರುಷೋತ್ತಮ ಎಂಬವರು ಹತ್ತಿ, ಟಿಕೆಟ್ ಶುಲ್ಕವಾಗಿ ನೂರು ರೂಪಾಯಿಯನ್ನು ಕಂಡಕ್ಟರ್ ಗೆ ನೀಡಿದ್ದರು. ಬಳಿಕ ಟಿಕೆಟ್ ಹಿಂದೆ 90 ರೂ. ಎಂದು ಬರೆದು ನಂತರ ಹಿಂತಿರುಗಿಸುವುದಾಗಿ ತಿಳಿಸಿದ್ದರು. ಬಸ್ ಬೆಳ್ಳಾರೆ ತಲುಪಿದಾಗ ಕಂಡಕ್ಟರ್ ಬಳಿ ಪುರುಷೋತ್ತಮ್ ಅವರು

ಸುಳ್ಯ: ಚಿಲ್ಲರೆಗಾಗಿ‌ ನಿರ್ವಾಹಕನಿಗೆ ಹಲ್ಲೆಗೈದ ಪ್ರಯಾಣಿಕ| ದೂರು ದಾಖಲು Read More »

ಉಪ್ಪಿನಂಗಡಿ ಗಲಭೆ ಪ್ರಕರಣ| ಇಬ್ಬರು ಆರೋಪಿಗಳಿಗೆ ಜಾಮೀನು

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ಹಿಂದೂ ಮುಖಂಡರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಇಬ್ಬರು ಎಸ್.ಡಿ.ಪಿ.ಐ ನಾಯಕರಿಗೆ ಜಾಮೀನು ಮಂಜೂರಾಗಿದೆ. ಡಿ.6 ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಹ್ಮಣ್ಯ ಕ್ರಾಸ್ ನ ಅಶೋಕ್ ಶೆಟ್ಟಿ ಮಾಲಕತ್ವದ ಹಸಿ ಮೀನು ಮಾರುಕಟ್ಟೆಗೆ ಆರು ಜನರ ತಂಡ ಬೈಕ್ ನಲ್ಲಿ ಬಂದು ತಲವಾರು ದಾಳಿ ಮಾಡಿದೆ. ಅಂಗಡಿಯಲ್ಲಿದ್ದ ಅಶೋಕ್ ಶೆಟ್ಟಿ ಮೋಹನ್ ದಾಸ್ ಶೆಟ್ಟಿ ಮತ್ತು ಮಹೇಶ್ ಎಂಬ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ತಲವಾರು ದಾಳಿ

ಉಪ್ಪಿನಂಗಡಿ ಗಲಭೆ ಪ್ರಕರಣ| ಇಬ್ಬರು ಆರೋಪಿಗಳಿಗೆ ಜಾಮೀನು Read More »

ವಿಟ್ಲ: ನೇಣುಬಿಗಿದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ವಿಟ್ಲ: 10ನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಳಿಕೆ ಗ್ರಾಮದ ನೆಕ್ಕಿತಪುಣಿ ಎಂಬಲ್ಲಿ ನಡೆದಿದೆ ಅಳಿಕೆ ಗ್ರಾಮದ ನೆಕ್ಕಿತಪುಣಿ ನಿವಾಸಿ ಸವರ್ ಡಿ ಸೋಜ ಅವರ ಪುತ್ರ ಸಂದೀಪ್ ಅನಿಸಿತ್ ಡಿಸೋಜ(15) ಆತ್ಮಹತ್ಯೆಗೆ ಶರಣಾದ ಬಾಲಕ.ಈತ 10ನೇ ತರಗತಿ ಕಲಿಯುತ್ತಿದ್ದು, ಸರಿಯಾಗಿ ಶಾಲೆ ಹೋಗುತ್ತಿರಲಿಲ್ಲ. ನಿನ್ನೆ ರಾತ್ರಿ ಕೋಣೆಯಲ್ಲಿ ಮಲಗಿದ್ದ ಈತ ಬೆಳಿಗ್ಗೆ ಮನೆಯವರು ನೋಡಿದಾಗ ಮೃತದೇಹ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ವಿಟ್ಲ: ನೇಣುಬಿಗಿದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು Read More »

ಆಡಿನ ಮರಿಯ ರಕ್ಷಣೆಗೆಂದು ತೆರಳಿದವನ ಪ್ರಾಣ ಕಸಿದ ರೈಲು| ಏಕೈಕ ಪುತ್ರನ ಕಳೆದುಕೊಂಡ ಕುಟುಂಬ ಅನಾಥ|

ಮಂಗಳೂರು: ಆಡಿನ ಮರಿಯೊಂದನ್ನು ರಕ್ಷಿಸಲು ಹೋಗಿ ಪ್ರಾಣವನ್ನೇ ಯುವಕನೊಬ್ಬ ಕಳೆದುಕೊಂಡಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. 2021 ಆಗಸ್ಟ್ 28ರಂದು ಜೋಕಟ್ಟೆ ಪರಿಸರದಲ್ಲಿ ರೈಲ್ವೆ ಹಳಿಗೆ ಆಡಿನ ಮರಿಯೊಂದು ಸಿಲುಕಿತ್ತು. ಅತ್ತ ಕಡೆಯಿಂದ ರೈಲಿನ ಶಬ್ದವಾಗುತ್ತಿತ್ತು. ಆದರೆ ಹಳಿಯಲ್ಲಿ ಮರಿಯ ಕಾಲು ಸಿಲುಕಿ ಒದ್ದಾಡುತ್ತಿತ್ತು. ಅಲ್ಲಿಂದಲೇ ಹೋಗುತ್ತಿದ್ದ 21 ವರ್ಷದ ಜೋಕಟ್ಟೆ ಯುವಕ ಚೇತನ್ ಇದನ್ನು ನೋಡಿದ್ದಾನೆ. ಅವನಿಗೆ ಆಡಿನ ಮರಿಯ ಮೇಲೆ ಕನಿಕರ ಹುಟ್ಟಿದೆ. ಅದನ್ನು ಕಾಪಾಡಲು ಹೋಗಿದ್ದಾನೆ. ಅದನ್ನು ರಕ್ಷಿಸುತ್ತಿರುವಾಗಲೇ ರೈಲು ಬಂದುಬಿಟ್ಟಿದೆ. ಚೇತನ್‌

ಆಡಿನ ಮರಿಯ ರಕ್ಷಣೆಗೆಂದು ತೆರಳಿದವನ ಪ್ರಾಣ ಕಸಿದ ರೈಲು| ಏಕೈಕ ಪುತ್ರನ ಕಳೆದುಕೊಂಡ ಕುಟುಂಬ ಅನಾಥ| Read More »

ಸುಳ್ಯ: ಅಬಕಾರಿ ಇಲಾಖೆಯ ಭರ್ಜರಿ ಬೇಟೆ| 11.5 ಕೆ.ಜಿ ಗಾಂಜಾ ಪತ್ತೆ, ಆರೋಪಿಗಳು‌ ವಶಕ್ಕೆ|

ಮಂಗಳೂರು: ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಸಾಗಾಟ‌ ಮತ್ತು ವ್ಯಸನ ಜಾಸ್ತಿಯಾಗುತ್ತಿದ್ದು ಇಂದು ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಸುಳ್ಯ ಮತ್ತು ಪುತ್ತೂರು ಅಬಕಾರಿ ಇಲಾಖೆಯವರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸುಳ್ಯ ನಗರದ ಅಂಬಟೆಡ್ಕದ ಬೆನಕ ಹಾಸ್ಟೆಲ್ ನಲ್ಲಿ ಬಾಡಿಗೆದಾರರೊಬ್ಬರು ತಮ್ಮ ಕೊಠಡಿಯಲ್ಲಿ ಸಂಗ್ರಹಿಸಿಟ್ಟ 11 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸುಳ್ಯದ ಬೆನಕ ಹಾಸ್ಟೆಲ್ ನಲ್ಲಿ ಪಲ್ಲತ್ತೂರಿನ ಮೊಯಿದ್ದೀನ್ ಕುಂಞಿ ಎಂಬವರು ಕೊಠಡಿ ಬಾಡಿಗೆ ಪಡೆದು ಕುಟುಂಬದೊಂದಿಗೆ ವಾಸವಿದ್ದರು. ಇಲ್ಲಿ ಗಾಂಜಾ ಸಂಗ್ರಹಿಸಿ‌ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ

ಸುಳ್ಯ: ಅಬಕಾರಿ ಇಲಾಖೆಯ ಭರ್ಜರಿ ಬೇಟೆ| 11.5 ಕೆ.ಜಿ ಗಾಂಜಾ ಪತ್ತೆ, ಆರೋಪಿಗಳು‌ ವಶಕ್ಕೆ| Read More »

ಸುಳ್ಯ : ಕಾಣೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಸುಳ್ಯ : ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ಬಾವಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಜ. 2 ರಂದು ನಡೆದಿದೆ . ಮೃತ ದೇಹವು ಬಾಂಜಿಕೋಡಿ ನಿವಾಸಿ ದಿವಂಗತ ಮಾಧವ ರವರ ಪುತ್ರ ಅರುಣ್ ಕುಮಾರ್ ಬಾಂಜಿಕೋಡಿಯವರದ್ದೆಂದು ಗುರುತಿಸಲಾಗಿದೆ. ಇವರು ಡಿ .31 ರಿಂದ ಮನೆಯಿಂದ ಕಾಣೆಯಾಗಿದ್ದು ಸ್ಥಳೀಯರು ಮತ್ತು ಕುಟುಂಬಸ್ಥರು ಇವರನ್ನು ಹುಡುಕಾಟದಲ್ಲಿ ತೊಡಗಿಕೊಂಡಿದ್ದರು. ಆದರೆ ಇಂದು ಮುಂಜಾನೆ ರವಿಕುಮಾರ್ ರವರ ಮನೆಯ ಮುಂಭಾಗದಲ್ಲಿರುವ ಬಾವಿಯಲ್ಲಿ ಇವರ ಮೃತದೇಹ ಕುಟುಂಬಸ್ಥರಿಗೆ ಕಂಡು ಬಂದಿದೆ. ಅರುಣ್ ಕುಮಾರ್ ರವರು ಉಪ್ಪಿನಂಗಡಿಯಲ್ಲಿ

ಸುಳ್ಯ : ಕಾಣೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ Read More »

ಮಾಣಿ : ಯುವಕನಿಗೆ ಮಾರಣಾಂತಿಕ ಹಲ್ಲೆ

ಮಾಣಿ: ಯುವಕನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಟ್ಲದ ಮಾಣಿಯಲ್ಲಿ ನಡೆದಿದೆ. ಹುಸೇನ್ ಹಲ್ಲೆಗೊಳಗಾದ ಯುವಕ. ಅಂಗಡಿ ಕಟ್ಟಡವನ್ನು ಬಾಡಿಗೆಗೆ ಕೊಟ್ಟ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಈತನ ಮೇಲೆ ಬುಡೋಳಿಯ ಅಶ್ರಫ್ ಅನ್ವರ್, ಖಾದರ್ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಗಾಯಾಳು ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಕುರಿತು ವಿಟ್ಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮಾಣಿ : ಯುವಕನಿಗೆ ಮಾರಣಾಂತಿಕ ಹಲ್ಲೆ Read More »

ಬಂಟ್ವಾಳ: ರಸ್ತೆ ಬದಿ ಕೊಳೆಯುತ್ತಿದೆ ರಾಶಿ ರಾಶಿ ತ್ಯಾಜ್ಯ| ದುರ್ಗಂಧ, ಗಬ್ಬು ವಾಸನೆಯ ತಾಣವಾಗ್ತಿದೆ ಈ ಊರು| ಇದಕ್ಕೆ ಯಾರು ಹೊಣೆ?

ಬಂಟ್ವಾಳ: ಇಲ್ಲಿನ ಚರ್ಚ್ ಬಳಿ ತ್ಯಾಜ್ಯಗಳ ರಾಶಿಯಿಂದ ಗಬ್ಬು ವಾಸನೆ ಬರುತ್ತಿದ್ದು ಸಾರ್ವಜನಿಕರು ಸಂಚರಿಸುವುದಕ್ಕೆ ತೊಂದರೆಯುಂಟಾಗಿದೆ. ಗೋಳ್ತಮಜಲು ಗ್ರಾಮ ಪಂಚಾಯ್ತ ವ್ಯಾಪ್ತಿಯ ಅಮ್ಟೂರು ಚರ್ಚ್ ಬಳಿ ಸಾರ್ವಜನಿಕರು ಸಂಚಾರಿಸುವ ರಸ್ತೆ ಬದಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆದಿದ್ದು ಇಲ್ಲಿನ ಪ್ರದೇಶ ಗಬ್ಬು ವಾಸನೆಯಿಂದ ಬರುತ್ತಿದೆ. ಕಸದ ಬುಟ್ಟಿ ಸೇರಬೇಕಾದ ಗಲೀಜು ವಸ್ತುಗಳು ಸೇರಿದಂತೆ ಎಲ್ಲವನ್ನು ರಸ್ತೆ ಬದಿಯಲ್ಲಿ ಎಸೆಯಲ್ಪಟ್ಟಿದ್ದು ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ಬಹಳ ಹಿಂಜರಿಯುವಂತೆ ಮಾಡಿದೆ. ಇನ್ನೂ ದೇಶದೆಲ್ಲೆಡೆ ಸ್ವಚ್ಚಭಾರತ ಮಂತ್ರ ಪಠಿಸುತ್ತಿದ್ದರೆ ಗೋಳ್ತಮಜಲು ಗ್ರಾಮ

ಬಂಟ್ವಾಳ: ರಸ್ತೆ ಬದಿ ಕೊಳೆಯುತ್ತಿದೆ ರಾಶಿ ರಾಶಿ ತ್ಯಾಜ್ಯ| ದುರ್ಗಂಧ, ಗಬ್ಬು ವಾಸನೆಯ ತಾಣವಾಗ್ತಿದೆ ಈ ಊರು| ಇದಕ್ಕೆ ಯಾರು ಹೊಣೆ? Read More »

ಮಂಗಳೂರು : ಪಾದಚಾರಿಗೆ ಬಸ್ ಢಿಕ್ಕಿ -ದೇಹದ ಭಾಗಗಳು ರಸ್ತೆಯಲ್ಲೆ ಚೆಲ್ಲಾಪಿಲ್ಲಿ

ಮಂಗಳೂರು: ಖಾಸಗಿ‌ ಬಸ್ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಮೂಳೂರಿನಲ್ಲಿ ನಡೆದಿದೆ. ಮೂಳೂರು ಬೀಚ್ ಬಳಿಯ ನಿವಾಸಿ ರಮೇಶ್ ಬಂಗೇರ ಅಲಿಯಾಸ್ ಹರಿ ಓಂ (65) ಎಂಬವರು ಮೃತ ವ್ಯಕ್ತಿ. ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರು ಬಸ್ ನಿಲ್ದಾಣ ದ ಬಳಿ ರಸ್ತೆ ದಾಟುತ್ತಿದ್ದಗ ಅವರಿಗೆ ಮಂಗಳೂರಿನಿಂದ ಉಡುಪಿ‌ ಕಡೆಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ರಮೇಶ್ ಬಂಗೇರ ಅವರ

ಮಂಗಳೂರು : ಪಾದಚಾರಿಗೆ ಬಸ್ ಢಿಕ್ಕಿ -ದೇಹದ ಭಾಗಗಳು ರಸ್ತೆಯಲ್ಲೆ ಚೆಲ್ಲಾಪಿಲ್ಲಿ Read More »