ಕರಾವಳಿ

ಬೆಳ್ತಂಗಡಿ: 1700 ಅಡಿ ಎತ್ತರದ ಗಡಾಯಿಕಲ್ಲು ಏರಿದ ಕೋತಿರಾಜ್| ಎರಡೇ‌ ಗಂಟೆಗಳಲ್ಲಿ ಸಾಹಸ ಪ್ರದರ್ಶನ

ಸಮಗ್ರ ನ್ಯೂಸ್: ಚಿತ್ರದುರ್ಗದ ಜ್ಯೋತಿರಾಜ್ ಯಾನೆ ಕೋತಿರಾಜ್ ಅವರು ಭಾನುವಾರ (ಫೆ.12) ಎರಡೇ ತಾಸುಗಳಲ್ಲಿ ಬರೀ ಕೈಗಳ ಸಹಾಯದಿಂದ ಗಡಾಯಿಕಲ್ಲು (ಜಮಾಲಾಬಾದ್/ ನರಸಿಂಹಗಡ) ಏರಿ ಸಾಹಸ ಮೆರೆದಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಅವರು ಸೊಂಟಕ್ಕೆ ರೋಪ್ ಅಳವಡಿಸಿಕೊಂಡಿದ್ದರು. ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲನ್ನು ಮೆಟ್ಟಿಲುಗಳ ಸಹಾಯವಿಲ್ಲದೆ ನಿರಾತಂಕವಾಗಿ ಅವರು ಏರಿದರು. ಅರಣ್ಯ ಇಲಾಖೆಯ ಸೂಚನೆಯಂತೆ ಸೊಂಟಕ್ಕೆ ಕಟ್ಟಿದ ಬೆಲ್ಟ್ ಹಾಗೂ ಪಕ್ಕದಲ್ಲಿದ್ದ ರೋಪ್‌ಗೆ ಹುಕ್ ಮೂಲಕ ಸಂಪರ್ಕ ಕಲ್ಪಿಸಿ ಸುರಕ್ಷತೆ ದೃಷ್ಟಿಯಿಂದ ಮೇಲೇರಲು ಅವಕಾಶ ನೀಡಲಾಗಿತ್ತು.

ಬೆಳ್ತಂಗಡಿ: 1700 ಅಡಿ ಎತ್ತರದ ಗಡಾಯಿಕಲ್ಲು ಏರಿದ ಕೋತಿರಾಜ್| ಎರಡೇ‌ ಗಂಟೆಗಳಲ್ಲಿ ಸಾಹಸ ಪ್ರದರ್ಶನ Read More »

ಪುತ್ತೂರು: ಹೆಚ್‌ಡಿಕೆ ಬ್ರಾಹ್ಮಣ ಸಿಎಂ ಅಸ್ತ್ರಕ್ಕೆ ಫುಲ್‌ಸ್ಟಾಪ್ ಹಾಕಿದ ಅಮಿತ್ ಶಾ| ಬೊಮ್ಮಾಯಿಯೇ ಮುಂದಿನ ಸಿಎಂ ಎಂಬ ಸುಳಿವು ನೀಡಿದ್ರಾ ಚಾಣಕ್ಯ!?

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹೆಚ್‌ಡಿ ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಅಸ್ತ್ರ ಮುಂದಿಟ್ಟು ಕಟ್ಟಿಹಾಕುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಲಿಂಗಾಯಿತ ಸಮುದಾಯದ ಮತಗಳನ್ನು ಚದುರಿಸುವ ಭಾರಿ ರಣತಂತ್ರ ಹೂಡಿದ್ದರು. ಆದರೆ ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬ್ರಾಹ್ಮಣ ಸಿಎಂ ಚರ್ಚೆಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಮುಂದಿನ ಬಾರಿಯೂ ಬಸವರಾಜ್ ಬೊಮ್ಮಾಯಿ ನಾಯಕತ್ವದಲ್ಲೇ ಬಿಜೆಪಿ ಮುಂದುವರಿಯಲಿದೆ ಅನ್ನೋ ಸುಳಿವನ್ನು ಅಮಿತ್ ಶಾ ನೀಡಿದ್ದಾರೆ. ಭಾಷಣದ

ಪುತ್ತೂರು: ಹೆಚ್‌ಡಿಕೆ ಬ್ರಾಹ್ಮಣ ಸಿಎಂ ಅಸ್ತ್ರಕ್ಕೆ ಫುಲ್‌ಸ್ಟಾಪ್ ಹಾಕಿದ ಅಮಿತ್ ಶಾ| ಬೊಮ್ಮಾಯಿಯೇ ಮುಂದಿನ ಸಿಎಂ ಎಂಬ ಸುಳಿವು ನೀಡಿದ್ರಾ ಚಾಣಕ್ಯ!? Read More »

ಕರಾವಳಿಗೆ ಬರುತ್ತಿರುವ ಅಮಿತ್ ಶಾ ಗೆ ರವಾನೆಯಾಯ್ತು ಮಂಜುನಾಥನ ಪ್ರಸಾದ| ಈಶ್ವರಪ್ಪ ಕೈಯಲ್ಲಿ ಪ್ರಸಾದ ಕಳುಹಿದ ಧರ್ಮಸ್ಥಳ ಧರ್ಮಾಧಿಕಾರಿ

ಸಮಗ್ರ ನ್ಯೂಸ್: ಕರಾವಳಿಗೆ ಬರುತ್ತಿರುವ ಗೃಹ ಸಚಿವ ಅಮಿತ್​​ ಶಾಗೆ ಧರ್ಮಸ್ಥಳ ಪ್ರಸಾದ ನೀಡಲಾಗುತ್ತಿದ್ದು, ಮುಖಂಡರು ಮಂಗಳೂರು ಸಭೆ ವೇಳೆ ಪ್ರಸಾದ ನೀಡಲಿದ್ದಾರೆ. ಅಮಿತ್ ಶಾಗಾಗಿ ಧರ್ಮಸ್ಥಳದಿಂದ ವಿಶೇಷ ಪ್ರಸಾದ ನೀಡಲಾಗುತ್ತಿದೆ. ಬೆಳ್ಳಿ ಬಟ್ಟಲಿನಲ್ಲಿ ಶ್ರೀ ಮಂಜುನಾಥಸ್ವಾಮಿ ಪ್ರಸಾದ ಹಾಗೂ ಒಂದು ಚಿನ್ನಲೇಪಿತ ಶ್ರೀಮಂಜುನಾಥ ಸ್ವಾಮಿಯ ನಾಣ್ಯವನ್ನು ನೀಡಲಾಗುತ್ತಿದೆ. ಸಚಿವ ಈಶ್ವರಪ್ಪ ಅಮಿತ್​ ಶಾಗೆ ಪ್ರಸಾದ ತಲುಪಿಸಲಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭೆ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆ ಅವರು ಮಾಜಿ ಸಚಿವ ಈಶ್ವರಪ್ಪಗೆ ಪ್ರಸಾದ ಕೊಟ್ಟಿದ್ದಾರೆ. ಸಚಿವ

ಕರಾವಳಿಗೆ ಬರುತ್ತಿರುವ ಅಮಿತ್ ಶಾ ಗೆ ರವಾನೆಯಾಯ್ತು ಮಂಜುನಾಥನ ಪ್ರಸಾದ| ಈಶ್ವರಪ್ಪ ಕೈಯಲ್ಲಿ ಪ್ರಸಾದ ಕಳುಹಿದ ಧರ್ಮಸ್ಥಳ ಧರ್ಮಾಧಿಕಾರಿ Read More »

ಮಂಗಳೂರಿನ ಮೀನುಗಾರರಿಗೆ ಕನ್ಯಾಕುಮಾರಿ ಬಳಿ‌ ಕಲ್ಲೇಟು

ಸಮಗ್ರ ನ್ಯೂಸ್: ಮಂಗಳೂರಿನ ಮೀನುಗಾರ ಬೋಟುಗಳ ಮೇಲೆ ಕಲ್ಲು ಎಸೆದು ದಾಳಿ ನಡೆಸಿ ಹಲ್ಲೆಗೈದ ದುರಂತ ಘಟನೆ ಬೆಳಕಿಗೆ ಬಂದಿದೆ. ಕನ್ಯಾಕುಮಾರಿ ಬಳಿ ತಮಿಳುನಾಡು ವೀನುಗಾರರು ಈ ದುಷ್ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದೆ. 7-8 ಅಡಿ ಆಳದಲ್ಲಿ ಮೀನುಗಾರಿಗೆ ತೆರಳಿದ್ದ ಮಂಗಳೂರಿನ ಬೋಟುಗಳನ್ನು ಸುತ್ತುವರಿದು ಹಿಗ್ಗಾಮುಗ್ಗಾ ಕಲ್ಲುಗಳನ್ನು ಎಸೆಯುವ ಮೂಲಕ ಈ ದಾಳಿ ನಡೆಸಿದ್ದಾರೆ. ಕಲ್ಲೇಟಿನಿಂದ ಮಂಗಳೂರಿನ ಮೀನುಗಾರರಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರಿನ ಮೀನುಗಾರರಿಗೆ ಕನ್ಯಾಕುಮಾರಿ ಬಳಿ‌ ಕಲ್ಲೇಟು Read More »

ಪುತ್ತೂರು: ದಿಢೀರ್ ತೇಪೆ ಭಾಗ್ಯ ಪಡೆದ ರಸ್ತೆಗಳು| ಅಮಿತ್ ಶಾ ದೆಹಲಿ ತಲುಪುವವರೆಗೆ ಉಳಿದೀತೇ?

ಸಮಗ್ರ ನ್ಯೂಸ್: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಪುತ್ತೂರಿಗೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರಿನ ರಸ್ತೆಗಳಿಗೆ ತೇಪೆಭಾಗ್ಯ ಲಭಿಸಿದೆ. ರಸ್ತೆಗಳಿಗೆ ತೇಪೆ ಹಚ್ಚುವ ಕಾರ್ಯ ನಡೆದಿದ್ದು, ಒಂದರ್ಥದಲ್ಲಿ ಅಮಿತ ಷಾರಿಗೆ ಹಸಿ ತೇಪೆಯ ಸ್ವಾಗತ ಲಭಿಸಲಿದೆ. ವಿಪರ್ಯಾಸವೆಂದರೆ ತೇಪೆ ಹಾಕಿದರೂ ಎಷ್ಟು ದಿನ ಉಳಿಯಲಿದೆ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ. ಪುತ್ತೂರಿನ ಹನುಮಗಿರಿಯ ದೇವಾಲಯಕ್ಕೆ ಬಳಿಕ ಕ್ಯಾಂಪ್ಕೋ ಕಾರ್ಯಕ್ರಮಕ್ಕೆ ಪುತ್ತೂರಿಗೆ ಫೆ.11ರಂದು ಅಮಿತ್ ಷಾ ಆಗಮಿಸುತ್ತಿರುವ ಕಾರಣ ಹೊಂಡಮಯ ರಸ್ತೆಗಳಿಗೆ ಕಳಪೆ ತೇಪೆಯೊಂದಿಗೆ

ಪುತ್ತೂರು: ದಿಢೀರ್ ತೇಪೆ ಭಾಗ್ಯ ಪಡೆದ ರಸ್ತೆಗಳು| ಅಮಿತ್ ಶಾ ದೆಹಲಿ ತಲುಪುವವರೆಗೆ ಉಳಿದೀತೇ? Read More »

ಮದ್ಯಪ್ರೀಯರೇ ಗಮನಿಸಿ| ಫೆ11 ರಂದು ಮದ್ಯ ಮಾರಾಟ ನಿಷೇಧಿಸಿ‌ ದ.ಕ ಜಿಲ್ಲಾಧಿಕಾರಿ ಆದೇಶ

ಸಮಗ್ರ ನ್ಯೂಸ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಳೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ವಿವಿಧ ಕಾರ್ಯಕ್ರಮಗಳ ನಿಮಿತ್ತ ಪುತ್ತೂರು ವಲಯ ವ್ಯಾಪ್ತಿಗೆ ಭೇಟಿ ನೀಡುವ ಹಿನ್ನಲೆಯಲ್ಲಿ ನಾಳೆ ಪುತ್ತೂರು ವಲಯ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ ಆರ್ ರವಿಕುಮಾರ್ ಆದೇಶ ಹೊರಡಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಲುವಾಗಿ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ

ಮದ್ಯಪ್ರೀಯರೇ ಗಮನಿಸಿ| ಫೆ11 ರಂದು ಮದ್ಯ ಮಾರಾಟ ನಿಷೇಧಿಸಿ‌ ದ.ಕ ಜಿಲ್ಲಾಧಿಕಾರಿ ಆದೇಶ Read More »

ಮಂಗಳೂರು: ಕದ್ರಿ ಪಾರ್ಕ್ ನಲ್ಲಿ ಅನ್ಯಮತೀಯ ಜೋಡಿಯ ವಾಯುವಿಹಾರ| ಸಂಘಟನೆ ಕಾರ್ಯಕರ್ತರಿಂದ ಗೂಸಾ; ಆರೋಪಿಗಳು ಅರೆಸ್ಟ್

ಸಮಗ್ರ ನ್ಯೂಸ್: ಮಂಗಳೂರಿನ ಕದ್ರಿ ಪಾರ್ಕ್‌ಗೆ ವಾಯುವಿಹಾರಕ್ಕೆಂದು ಬಂದಿದ್ದ ಅನ್ಯಮತೀಯ ಜೋಡಿಗೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ನಾಲ್ವರು ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮೂಲತಃ ಉತ್ತರ ಕರ್ನಾಟಕ ಮೂಲದ ಅನ್ಯಕೋಮಿನ ಜೋಡಿಯಾಗಿದ್ದು, ಇವರು ಕದ್ರಿ ಪಾರ್ಕ್‌ಗೆ ಬಂದಿದ್ದು, ಇದನ್ನು ಗಮನಿಸಿದ ಸಂಘಟನೆಯವರು ಅವರನ್ನು ಪ್ರಶ್ನಿಸಿ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ. ಜೋಡಿಯನ್ನು ಕದ್ರಿ ಠಾಣಾ ಪೊಲೀಸರಿಗೆ ಕಾರ್ಯಕರ್ತರು ಒಪ್ಪಿಸಿದ ಬಗ್ಗೆ ವರದಿಯಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಕದ್ರಿ ಠಾಣಾ ಪೊಲೀಸರು

ಮಂಗಳೂರು: ಕದ್ರಿ ಪಾರ್ಕ್ ನಲ್ಲಿ ಅನ್ಯಮತೀಯ ಜೋಡಿಯ ವಾಯುವಿಹಾರ| ಸಂಘಟನೆ ಕಾರ್ಯಕರ್ತರಿಂದ ಗೂಸಾ; ಆರೋಪಿಗಳು ಅರೆಸ್ಟ್ Read More »

ಫೆ.11ರಂದು ಮಂಗಳೂರಿನಲ್ಲಿ ‘ಪಬ್ಲಿಕ್ ಸರ್ವಿಸ್ ಕಮ್ಯುನಿಕೇಶನ್’ ಶುಭಾರಂಭ

ಸಮಗ್ರ ನ್ಯೂಸ್: ಫೆ. 11 ರಂದು ಮಂಗಳೂರಿನಲ್ಲಿ ಬೆಳಗ್ಗೆ 11ಘಂಟೆಗೆ ನೂತನ ‘ಪಬ್ಲಿಕ್ ಸರ್ವಿಸ್ ಕಮ್ಯುನಿಕೇಶನ್’ಯ ಕಚೇರಿ ಉದ್ಘಾಟನೆಗೊಳ್ಳಲಿದೆ. ಇಲ್ಲಿ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳಾದ ಜೆರಾಕ್ಸ್, ಆನ್ ಲೈನ್ ಮತ್ತು ಆಫ್ ಲೈನ್ ಅಪ್ಲಿಕೇಶನ್ ಸೇವೆಗಳನ್ನು ನೀಡಲಾಗುತ್ತದೆ. ವಿಳಾಸ: ಪಬ್ಲಿಕ್ ಸರ್ವಿಸ್ ಕಮ್ಯುನಿಕೇಶನ್, ಓಬರ್ಲಿ ಟವರ್ಸ್. 2ನೇ ಮಹಡಿ. ಹೆಚ್ .ಪಿ ಪಂಪ್ ನ ಹತ್ತಿರ. ಜ್ಯೋತಿ, ಬಲ್ಮಠ. ಮಂಗಳೂರು. 575001 ಮೊ.9886161222ವೆಬ್ ಸೈಟ್:-www.publicservicecommunication.inಇಮೈಲ್:[email protected]

ಫೆ.11ರಂದು ಮಂಗಳೂರಿನಲ್ಲಿ ‘ಪಬ್ಲಿಕ್ ಸರ್ವಿಸ್ ಕಮ್ಯುನಿಕೇಶನ್’ ಶುಭಾರಂಭ Read More »

ಫೆ.11 ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ವ್ಯತ್ಯಯ ಸಾಧ್ಯತೆ| ಮಂಗಳೂರು ವಿವಿ ಪದವಿ ಪರೀಕ್ಷೆಗೆ ಹೊರಟ ವಿದ್ಯಾರ್ಥಿಗಳಿಗೆ ಸಂಕಷ್ಟ

ಸಮಗ್ರ ನ್ಯೂಸ್: ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮ ನಿಮಿತ್ತ ಫೆ.11 ರಂದು ಪುತ್ತೂರಿಗೆ ಅಮಿತ್ ಶಾ ಭೇಟಿ ಹಿನ್ನೆಲೆ ಕೆಎಸ್ಆರ್ ಟಿಸಿ ಬಸ್ ಸಂಚಾರ ವ್ಯತ್ಯಯ ಕಾರಣ ಮಂಗಳೂರು ವಿವಿ ಪದವಿ ಪರೀಕ್ಷೆಗೆ ಹೊರಟ ವಿದ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ. ಪುತ್ತೂರಿನಲ್ಲಿ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಹಾಗೂ ಸಚಿವರುಗಳು ಭಾಗವಹಿಸಲಿದ್ದು, ಈ ಹಿನ್ನೆಲೆಯಲ್ಲಿ KSRTC ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು

ಫೆ.11 ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ವ್ಯತ್ಯಯ ಸಾಧ್ಯತೆ| ಮಂಗಳೂರು ವಿವಿ ಪದವಿ ಪರೀಕ್ಷೆಗೆ ಹೊರಟ ವಿದ್ಯಾರ್ಥಿಗಳಿಗೆ ಸಂಕಷ್ಟ Read More »

ಇಂದಿನಿಂದ ‌ಫೆ.24ರವರೆಗೆ ರಾಜ್ಯ ಬಜೆಟ್ ಅಧಿವೇಶನ| ಫೆ.17ರಂದು ಬಜೆಟ್ ಮಂಡನೆ

ಸಮಗ್ರ ನ್ಯೂಸ್: ಇಂದಿನಿಂದ ಫೆಬ್ರವರಿ 24ರವರೆಗೆ ಅಧಿವೇಶನ ನಡೆಯಲಿದ್ದು, ರಾಜ್ಯಪಾಲರ ಭಾಷಣದ ಮೇಲೆ ಸೋಮವಾರದಿಂದ ಚರ್ಚೆಗಳು ನಡೆಯಲಿವೆ.‌ ಫೆಬ್ರವರಿ 17ರಂದು ಬಜೆಟ್ ಮಂಡನೆಯಾಗಲಿದ್ದು, ಇದೇ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ರಾಜ್ಯದಲ್ಲಿ ಬಜೆಟ್ ಅಧಿವೇಶನ ಶುರುವಾಗಲಿದೆ. ಈ ಹಿನ್ನೆಲೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,ಎಲ್ಲರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದು ಈ ವಿಧಾನಸಭೆಯ 15ನೆಯ ಮತ್ತು ಕೊನೆಯ ಅಧಿವೇಶನ ಆಗಿರುತ್ತದೆ. ಈಗಿನ ಶಾಸಕರು ಐದು ವರ್ಷ ಅವಧಿಯನ್ನು

ಇಂದಿನಿಂದ ‌ಫೆ.24ರವರೆಗೆ ರಾಜ್ಯ ಬಜೆಟ್ ಅಧಿವೇಶನ| ಫೆ.17ರಂದು ಬಜೆಟ್ ಮಂಡನೆ Read More »