ಪುತ್ತೂರು: ದಿಢೀರ್ ತೇಪೆ ಭಾಗ್ಯ ಪಡೆದ ರಸ್ತೆಗಳು| ಅಮಿತ್ ಶಾ ದೆಹಲಿ ತಲುಪುವವರೆಗೆ ಉಳಿದೀತೇ?

ಸಮಗ್ರ ನ್ಯೂಸ್: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಪುತ್ತೂರಿಗೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರಿನ ರಸ್ತೆಗಳಿಗೆ ತೇಪೆಭಾಗ್ಯ ಲಭಿಸಿದೆ. ರಸ್ತೆಗಳಿಗೆ ತೇಪೆ ಹಚ್ಚುವ ಕಾರ್ಯ ನಡೆದಿದ್ದು, ಒಂದರ್ಥದಲ್ಲಿ ಅಮಿತ ಷಾರಿಗೆ ಹಸಿ ತೇಪೆಯ ಸ್ವಾಗತ ಲಭಿಸಲಿದೆ.

. Ad Widget . Ad Widget . Ad Widget .

ವಿಪರ್ಯಾಸವೆಂದರೆ ತೇಪೆ ಹಾಕಿದರೂ ಎಷ್ಟು ದಿನ ಉಳಿಯಲಿದೆ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ. ಪುತ್ತೂರಿನ ಹನುಮಗಿರಿಯ ದೇವಾಲಯಕ್ಕೆ ಬಳಿಕ ಕ್ಯಾಂಪ್ಕೋ ಕಾರ್ಯಕ್ರಮಕ್ಕೆ ಪುತ್ತೂರಿಗೆ ಫೆ.11ರಂದು ಅಮಿತ್ ಷಾ ಆಗಮಿಸುತ್ತಿರುವ ಕಾರಣ ಹೊಂಡಮಯ ರಸ್ತೆಗಳಿಗೆ ಕಳಪೆ ತೇಪೆಯೊಂದಿಗೆ ತಾತ್ಕಾಲಿಕ ಮುಕ್ತಿ ಸಿಗುತ್ತಿದೆ‌.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಅಮಿತ್ ಷಾ ಪುತ್ತೂರಿಗೆ ಬಂದು ವಾಪಾಸ್ ದಿಲ್ಲಿಗೆ ತಲುಪುವ ವೇಳೆಗೆ ಈ ರಸ್ತೆ ಮತ್ತೆ ಹಿಂದಿನ ಸ್ಥಿತಿಗೆ ತಲುಪದಿದ್ದರೆ ಸಾಕು ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.

Leave a Comment

Your email address will not be published. Required fields are marked *