Editor

ಕ್ರೀಡಾಪಟುಗಳಿಗೆ ಭರ್ಜರಿ ಉದ್ಯೋಗವಕಾಶ

ನವದೆಹಲಿ: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್, ಸಿಐಎಸ್‌ಎಫ್ ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು CISF ನ ಅಧಿಕೃತ ಸೈಟ್ cisfrectt.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾರ್ಚ್ 31, 2022 ರವರೆಗೆ ಅರ್ಜಿ ಸಲ್ಲಿಕೆಯನ್ನು ಮಾಡಬಹುದು. ಈ ನೇಮಕಾತಿ ಡ್ರೈವ್ ಸಂಸ್ಥೆಯಲ್ಲಿ 249 ಪೋಸ್ಟ್‌ಗಳನ್ನು ಭರ್ತಿ ಮಾಡಲಾಗುತ್ತದೆ. 2021 ರ ಕ್ರೀಡಾ ಕೋಟಾದ ವಿರುದ್ಧ ಹೆಡ್ ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ನೇಮಕಾತಿಯನ್ನು ಮಾಡಲಾಗುತ್ತದೆ. ಅರ್ಹತೆ,

ಕ್ರೀಡಾಪಟುಗಳಿಗೆ ಭರ್ಜರಿ ಉದ್ಯೋಗವಕಾಶ Read More »

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷ ಸ್ಥಾನಕ್ಕೆ ವಿದಾಯ ಹೇಳ್ತಾರಾ ಸುಧಾಮೂರ್ತಿ| ಸಮಾಜ ಸೇವೆಯಲ್ಲೇ ಮುಂದುವರೆಯುವ ಬಯಕೆ|

ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಮತ್ತು ಭಾರತದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್‌ನ ಯಶಸ್ಸಿನಲ್ಲಿನ ಪ್ರಮುಖ ಪಾತ್ರಧಾರಿ, ಸುಧಾ ಮೂರ್ತಿ ಅವರು ಶುಕ್ರವಾರ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಹುದ್ದೆಯನ್ನು ಅಂತಿಮವಾಗಿ ತ್ಯಜಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಅವರು ಹಲವು ದಶಕಗಳಿಂದ ಸಲ್ಲಿಸುತ್ತಿರುವ ಸಮಾಜ ಸೇವೆಯನ್ನು ಮುಂದುವರೆಸಿಕೊಂಡು ಹೋಗಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸುಧಾ ಮೂರ್ತಿ ಕನ್ನಡ ಮತ್ತು ಇಂಗ್ಲಿಷ್ ನ ಬರಹಗಾರ್ತಿಯಾಗಿ ಕೂಡ ಗುರುತಿಸಿಕೊಂಡಿದ್ದು, ಸುಧಾ ಮೂರ್ತಿಯವರು ತಮ್ಮ ವೃತ್ತಿಪರ ಜೀವನವನ್ನು

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷ ಸ್ಥಾನಕ್ಕೆ ವಿದಾಯ ಹೇಳ್ತಾರಾ ಸುಧಾಮೂರ್ತಿ| ಸಮಾಜ ಸೇವೆಯಲ್ಲೇ ಮುಂದುವರೆಯುವ ಬಯಕೆ| Read More »

ಮಂಗಳೂರು : ಪಾದಚಾರಿಗೆ ಬಸ್ ಢಿಕ್ಕಿ -ದೇಹದ ಭಾಗಗಳು ರಸ್ತೆಯಲ್ಲೆ ಚೆಲ್ಲಾಪಿಲ್ಲಿ

ಮಂಗಳೂರು: ಖಾಸಗಿ‌ ಬಸ್ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಮೂಳೂರಿನಲ್ಲಿ ನಡೆದಿದೆ. ಮೂಳೂರು ಬೀಚ್ ಬಳಿಯ ನಿವಾಸಿ ರಮೇಶ್ ಬಂಗೇರ ಅಲಿಯಾಸ್ ಹರಿ ಓಂ (65) ಎಂಬವರು ಮೃತ ವ್ಯಕ್ತಿ. ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರು ಬಸ್ ನಿಲ್ದಾಣ ದ ಬಳಿ ರಸ್ತೆ ದಾಟುತ್ತಿದ್ದಗ ಅವರಿಗೆ ಮಂಗಳೂರಿನಿಂದ ಉಡುಪಿ‌ ಕಡೆಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ರಮೇಶ್ ಬಂಗೇರ ಅವರ

ಮಂಗಳೂರು : ಪಾದಚಾರಿಗೆ ಬಸ್ ಢಿಕ್ಕಿ -ದೇಹದ ಭಾಗಗಳು ರಸ್ತೆಯಲ್ಲೆ ಚೆಲ್ಲಾಪಿಲ್ಲಿ Read More »

“ಆಗೋದಾದ್ರೆ ಕೆಲಸ ಮಾಡಿ, ಇಲ್ಲಾಂದ್ರೆ ಬೇರೆ ದಾರಿ ನೋಡಿಕೊಳ್ಳಿ” ಅತಿಥಿ ಉಪನ್ಯಾಸಕರ ವಿರುದ್ಧ ಗರಂ ಆದ ಶಿಕ್ಷಣ ಸಚಿವರು

ಬೆಂಗಳೂರು : ಕೋಲಾರದಲ್ಲಿ ಸಚಿವ ನಾಗೇಶ್‌ ಮತ್ತು ಅತಿಥಿ ಉಪನ್ಯಾಸಕರ ನಡುವೆ ವಾಗ್ವಾದ ನಡೆದಿದ್ದು, ಅತಿಥಿ ಉಪನ್ಯಾಸಕರ ವಿರುದ್ಧ ಗರಂ ಆಗಿದ್ದರೆ. ಕೋಲಾರ ಹೊರ ವಲಯದ ಹೆದ್ದಾರಿಯಲ್ಲಿಯಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಅರ್ಪಿಸಲು ಮುಂದಾದ, ಜಿಲ್ಲೆಯ ಅತಿಥಿ ಉಪನ್ಯಾಸಕರು ಈ ವೇಳೆಯಲ್ಲಿ, ಸಚಿವರ ಮುಂದೆ, ನಮಗೆ ವೇತವನ್ನ ಹೆಚ್ಚಳ ಮಾಡಿ, ನಾವು ಶೋಷಣೆಗೆ ಒಳಗಾಗಿದ್ದೇವೆ ಅಂಥ ಹೇಳಿಕೊಂಡರು. ಮನವಿಯನ್ನ ಕೇಳಿಸಿಕೊಳ್ಳುವ ವೇಳೆಯಲ್ಲಿ ಗರಂ ಆದ ಸಚಿವರು, ಮನವಿಕಾರರ ವಿರುದ್ದ ಕಿಡಿಕಾರಿ ನಿಮಗೆ ಶೋಷಣೆ ಅನ್ನುವ ಪದದ ಅರ್ಥ

“ಆಗೋದಾದ್ರೆ ಕೆಲಸ ಮಾಡಿ, ಇಲ್ಲಾಂದ್ರೆ ಬೇರೆ ದಾರಿ ನೋಡಿಕೊಳ್ಳಿ” ಅತಿಥಿ ಉಪನ್ಯಾಸಕರ ವಿರುದ್ಧ ಗರಂ ಆದ ಶಿಕ್ಷಣ ಸಚಿವರು Read More »

ಪುತ್ತೂರು : ಬಹುನಿರೀಕ್ಷಿತ ಕಿರುಚಿತ್ರ ‘ಯುವ-2’ ವಿನ ಕಿರುದೃಶ್ಯ ಬಿಡುಗಡೆ| ನಟ ಪುನೀತ್ ರಾಜ್ ಕುಮಾರ್ ಗೆ ಅರ್ಪಣೆ ಮಾಡಿದ ಚಿತ್ರತಂಡ

ಪುತ್ತೂರು : ಬಹುನಿರೀಕ್ಷಿತ ಕಿರುಚಿತ್ರ ‘ಯುವ-2’ ಅನ್ನು ನಿರ್ಮಿಸುತ್ತಿರುವ ಪುತ್ತೂರಿನ ತಂಡವು ಹೊಸವರ್ಷದ ಪ್ರಯುಕ್ತ ಈ ಚಿತ್ರದ ಒಂದು ಕಿರುದೃಶ್ಯವನ್ನು Firstfly creations ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿದೆ. ಕರ್ನಾಟಕದ ಕಿರುಚಿತ್ರ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವಿಭಿನ್ನ ಶೈಲಿಯ ಕಥಾಹಂದರದ ಮೂಲಕ ಹೊಸ ದಾಖಲೆ ನಿರ್ಮಿಸುವತ್ತ ಪುತ್ತೂರಿನ ಈ ತಂಡ ಮುನ್ನಡೆಯುತ್ತಿದೆ. ಯುವ-2 ಈಗಾಗಲೇ ಚಿತ್ರೀಕರಣ ಹಂತದಲ್ಲಿದ್ದು, ಇನ್ನು ಕೆಲವು ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ. ಕನ್ನಡ ಚಿತ್ರರಂಗದ ಅನುಭವಿ ಕಲಾವಿದರನ್ನು ಒಳಗೊಂಡಿರುವ ಈ ತಂಡವು

ಪುತ್ತೂರು : ಬಹುನಿರೀಕ್ಷಿತ ಕಿರುಚಿತ್ರ ‘ಯುವ-2’ ವಿನ ಕಿರುದೃಶ್ಯ ಬಿಡುಗಡೆ| ನಟ ಪುನೀತ್ ರಾಜ್ ಕುಮಾರ್ ಗೆ ಅರ್ಪಣೆ ಮಾಡಿದ ಚಿತ್ರತಂಡ Read More »

ಯುವಕನಿಂದ ಬಾಲಕನ ಅತ್ಯಾಚಾರ| ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು|

ವಿಜಯನಗರ: ಯುವಕನೋರ್ವ ಬಾಲಕನ ಮೇಲೆಯೇ ಅತ್ಯಾಚಾರ ಎಸಗಿದ ಪ್ರಕರಣ ವಿಜಯಪುರ ಜಿಲ್ಲೆಯ ಕೂಡ್ಲಿಗಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಏಳು ವರ್ಷದ ಬಾಲಕನ ಮೇಲೆ 18 ವರ್ಷದ ಯುವಕನೋರ್ವ ಅತ್ಯಾಚಾರ ಮಾಡಿದ್ದಾನೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಜಯನಗರ ಎಸ್​ಪಿ ಡಾ.ಕೆ.ಅರುಣ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಯುವಕನಿಂದ ಬಾಲಕನ ಅತ್ಯಾಚಾರ| ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು| Read More »

ಕೋಟ ಎಸ್‌ಐ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾನೆ : ಗೃಹ ಸಚಿವ ಅರಗ ಜ್ಞಾನೇಂದ್ರ‌

ಕೋಟ: ಕೊರಗ ಸಮುದಾಯದವರ ಮೇಲೆ ಪೊಲೀಸ್ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಗೃಹ ಸಚಿವ ಅರಗ ಜ್ಞಾನೆಂದ್ರ ಕೋಟ ಎಸ್‌ಐ ನಾನೇ ಸುಪ್ರೀಂ ಅನ್ನುವಂತೆ ವರ್ತಿಸಿದ್ದಲ್ಲದೆ ಮನುಷ್ಯತ್ವವನ್ನೇ ಕಳೆದುಕೊಂಡು ಹಲ್ಲೆ ಮಾಡಿದ್ದಾರೆ. ಆತ ಪೊಲೀಸ್ ಇಲಾಖೆಗೆ ಸರಿಯಾದ ವ್ಯಕ್ತಿ ಹೌದೋ, ಅಲ್ಲವೋ ಎಂಬ ಬಗ್ಗೆ ಸರ್ಕಾರ ಖಂಡಿತ ಮಾಡುತ್ತೆ ಎಂದು ಹೇಳಿದ್ದಾರೆ. ಪೊಲೀಸರಿಂದ ಹಲ್ಲೆಗೊಳಗಾದ ಕೊರಗರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಗೃಹ ಸಚಿವರು ಬಳಿಕ ಮಾತನಾಡಿದ ಈ ಘಟನೆ ಬಗ್ಗೆ ಯಾರೂ ಹೆದರಬೇಕಾದ ಅವಶ್ಯಕತೆ ಇಲ್ಲ.

ಕೋಟ ಎಸ್‌ಐ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾನೆ : ಗೃಹ ಸಚಿವ ಅರಗ ಜ್ಞಾನೇಂದ್ರ‌ Read More »

ಕೋರ್ಟ್ ಕಲಾಪದಲ್ಲಿ ಕ್ರಾಂತಿಕಾರಿ ಹೆಜ್ಜೆ: ನೇರ ಪ್ರಸಾರಕ್ಕೆ ನಿಯಮ ಜಾರಿ- ಮಾಧ್ಯಮ ಬಳಕೆಗೆ ನಿರ್ಬಂಧ

ನವದೆಹಲಿ : ಹೈಕೋರ್ಟ್ ಕಲಾಪದ ನೇರ ಪ್ರಸಾರ ಹಾಗೂ ಕಲಾಪದ ವಿಡಿಯೋ ರೆಕಾರ್ಡಿಂಗ್ ಮಾಡುವ ಕುರಿತು ನಿಯಮಗಳನ್ನು ರೂಪಿಸಿದ್ದು, ಹೈಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ Karnataka Rules on Live Streaming and Recording of Court Proceedings, 2021 ನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ನ್ಯಾಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೋರ್ಟ್ ಕಲಾಪಗಳನ್ನು ರೆಕಾರ್ಡಿಂಗ್ ಮಾಡುವುದು ಹಾಗೂ ನೇರ ಪ್ರಸಾರ ಮಾಡಬೇಕೆಂಬ ಸಾರ್ವಜನಿಕ ಬೇಡಿಕೆಯನ್ನು ರಾಜ್ಯ ಹೈಕೋರ್ಟ್ ಕೊನೆಗೂ ಈಡೇರಿಸಿದೆ. ನ್ಯಾಯಾಲಯ ಕಲಾಪಗಳ ನೇರಪ್ರಸಾರ ಮತ್ತು

ಕೋರ್ಟ್ ಕಲಾಪದಲ್ಲಿ ಕ್ರಾಂತಿಕಾರಿ ಹೆಜ್ಜೆ: ನೇರ ಪ್ರಸಾರಕ್ಕೆ ನಿಯಮ ಜಾರಿ- ಮಾಧ್ಯಮ ಬಳಕೆಗೆ ನಿರ್ಬಂಧ Read More »

ನ್ಯೂ ಇಯರ್ ಎಫೆಕ್ಟ್| ಸರ್ಕಾರಿ ಶಾಲೆಯಲ್ಲಿ ಕೊಠಡಿಯಲ್ಲಿ ”BP” ಕ್ವಾಟರ್ ಪ್ಯಾಕೆಟ್| ಮಕ್ಕಳಿಗೆ ಕೊಡುವ ಮೊಟ್ಟೆ ಕುಡುಕರ ಹೊಟ್ಟೆಗೆ..!

ರಾಯಚೂರು : ಹೊಸ ವರ್ಷದ ಹಿನ್ನೆಲೆ ಕಿಡಿಕೇಡಿಗಳು ಸರಕಾರಿ ಶಾಲೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ ಘಟನೆಯೊಂದು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ರಬ್ಬಣಕಲ್​ ಕ್ಯಾಂಪ್​​ನ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಾಲೆಯ ಬೀಗ ಒಡೆದು ಕೊಠಡಿಯೊಳಗೆ ನುಗ್ಗಿ ಎಣ್ಣೆ ಪಾರ್ಟಿ ಮಾಡಿದ್ದು ಮಾತ್ರವಲ್ಲದೇ ಬಿಸಿಯೂಟದ ಸಾಮಗ್ರಿಗಳನ್ನು ಬಳಕೆ ಮಾಡಿ ಮೊಟ್ಟೆ ಬೇಯಿಸಿಕೊಂಡು ಮಾಂಸಾಹಾರ ತಯಾರಿಸಿ ದುಷ್ಕೃತ್ಯ ಮೆರೆದಿದ್ದಾರೆ. ಪಾರ್ಟಿಗೆ ಬಳಸಲಾದ ವಸ್ತುಗಳು ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಅಲ್ಲದೇ ಶಾಲೆಗೆ ಸೇರಿದ ದಾಖಲೆಗಳಿಗೂ ಹಾನಿ ಉಂಟು ಮಾಡಿದ್ದಾರೆ. ಬೆಳಗ್ಗೆ ಶಾಲೆಗೆ ಬರುತ್ತಿದ್ದಂತೆಯೇ

ನ್ಯೂ ಇಯರ್ ಎಫೆಕ್ಟ್| ಸರ್ಕಾರಿ ಶಾಲೆಯಲ್ಲಿ ಕೊಠಡಿಯಲ್ಲಿ ”BP” ಕ್ವಾಟರ್ ಪ್ಯಾಕೆಟ್| ಮಕ್ಕಳಿಗೆ ಕೊಡುವ ಮೊಟ್ಟೆ ಕುಡುಕರ ಹೊಟ್ಟೆಗೆ..! Read More »

ಮಂಗಳೂರು:ಸತ್ಯಕ್ಷೇತ್ರಗಳ ಅಪವಿತ್ರಗೊಳಿಸಿದ ದೇಸಾಯಿಗೆ ಶ್ರದ್ಧಾಂಜಲಿ ‌ಬ್ಯಾನರ್ ಅಳವಡಿಸಿದ ಭಜರಂಗದಳ

ಮಂಗಳೂರು: ದೈವ ದೇವಸ್ಥಾನ ಹಾಗೂ ಮಸೀದಿಗಳ ಕಾಣಿಕೆ ಹುಂಡಿಯಲ್ಲಿ ವಿಕೃತಿ ಮೆರೆದ ಆರೋಪಿಯ ಭಾವಚಿತ್ರ ಹಾಕಿ ಬಜರಂಗದಳದ ಶಾಖೆ ಯವರಿಂದ ಶ್ರದ್ಧಾಂಜಲಿ ಬ್ಯಾನರ್ ಹಾಕಲಾಗಿದೆ. ಮಂಗಳೂರು ಹೊರವಲಯದ ಬೀರಿ ಜಂಕ್ಷನ್ ನಲ್ಲಿ ಈ ಬ್ಯಾನರ್ ಅಳವಡಿಸಲಾಗಿದೆ. ಅದೇ ರೀತಿ ದೇವದಾಸ್ ದೇಸಾಯಿ ಹೆಸರನ್ನು ಡೇವಿಡ್ ದೇಸಾಯಿ ಎಂದು ಬ್ಯಾನರ್ ನಲ್ಲಿ ಬಜರಂಗದಳದವರು ಬರೆಸಿದ್ದಾರೆ. ಮಂಗಳೂರು ನಗರದ ಸುಮಾರು 18 ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದ ಆರೋಪಿ ದೇವದಾಸ್ ಕ್ರಿಶ್ಚಿಯನ್ ಧರ್ಮದ ಅನುಯಾಯಿ ಆಗಿದ್ದರು ಎಂದು ತಿಳಿದುಬಂದಿದೆ.

ಮಂಗಳೂರು:ಸತ್ಯಕ್ಷೇತ್ರಗಳ ಅಪವಿತ್ರಗೊಳಿಸಿದ ದೇಸಾಯಿಗೆ ಶ್ರದ್ಧಾಂಜಲಿ ‌ಬ್ಯಾನರ್ ಅಳವಡಿಸಿದ ಭಜರಂಗದಳ Read More »