Editor

ಶಿವಕಾಶಿ: ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ, ನಾಲ್ವರು ಸಜೀವ ದಹನ

ಚೆನ್ನೈ : ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಪೋಟ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶಿವಕಾಶಿಯ ಪಟಾಕಿ ಕಾರ್ಖಾನೆ ಯೊಂದರಲ್ಲಿ ಸ್ಫೋಟ ಸಂಭವಿಸಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಧ್ವಂಸಗೊಂಡ ಕಾರ್ಖಾನೆ ಬಳಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿವೆ. ಪಟಾಕಿ ಸ್ಪೋಟ ದುರಂತದಲ್ಲಿ ನಾಲ್ವರೂ ಕೂಡ ಸಜೀವ ದಹನಗೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಶಿವಕಾಶಿ: ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ, ನಾಲ್ವರು ಸಜೀವ ದಹನ Read More »

ನಂದಿನಿ ಹಾಲಿನ ಪ್ಯಾಕೆಟ್ ನಲ್ಲಿ ಪುನೀತ್ ಬಾವಚಿತ್ರ| ಬ್ರಾಂಡ್ ಅಂಬಾಸಿಡರ್ ಗೆ ಗೌರವ ಸಲ್ಲಿಸಿದ ಕೆಎಂಎಪ್

ಬೆಂಗಳೂರು : ಕನ್ನಡ ಚಿತ್ರರಂಗದ ರಾಜರತ್ನ ಹಾಗೂ ಅಭಿಮಾನಿಗಳ ನಗು ಮುಖದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಿಧನರಾಗಿ ಎರಡು ತಿಂಗಳು ಕಳೆದಿವೆ. ಆದರೆ, ಅವರಿಗೆ ಇದ್ದ ಪರಿಸರ ಕಾಳಜಿ, ಸಮಾಜದ ಮೇಲೆ ಇದ್ದ ಪ್ರೀತಿ ಹಾಗೂ ದೊಡ್ಡವರ ಮೇಲೆ ಇದ್ದ ಗೌರವ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸುತ್ತೆ.ಅದರಂತೆ ಇದೀಗ ಕೆಎಂಎಫ್ ವತಿಯಿಂದ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ನಂದಿನ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ರಾಜ್​ಕುಮಾರ್ ಭಾವಚಿತ್ರವನ್ನ ಮುದ್ರಿಸುವ ಮೂಲಕ ವಿಶೇಷ ಗೌರವವನ್ನ ತೋರಿಸಲಾಗಿದೆ. ಇನ್ನು

ನಂದಿನಿ ಹಾಲಿನ ಪ್ಯಾಕೆಟ್ ನಲ್ಲಿ ಪುನೀತ್ ಬಾವಚಿತ್ರ| ಬ್ರಾಂಡ್ ಅಂಬಾಸಿಡರ್ ಗೆ ಗೌರವ ಸಲ್ಲಿಸಿದ ಕೆಎಂಎಪ್ Read More »

ಸಿಲಿಂಡರ್ ಬೆಲೆಯಲ್ಲಿ ಕಡಿತಕ್ಕೆ ಇಂಡಿಯನ್ ಆಯಿಲ್ ನಿರ್ಧಾರ

ನವದೆಹಲಿ : ಹೊಸ ವರ್ಷದಂದು ಇಂಡಿಯನ್ ಆಯಿಲ್ ಜನತೆಗೆ ಗುಡ್ ನ್ಯೂಸ್ ನೀಡಿದೆ. ಇಂಡಿಯನ್ ಆಯಿಲ್ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 100 ರೂಪಾಯಿ ಕಡಿತಗೊಳಿಸಲು ನಿರ್ಧರಿಸಿದೆ. ಇದರಿಂದ ಜನತೆಗೆ ನೆಮ್ಮದಿ ದೊರೆಯಲಿದೆ. ಡಿಸೆಂಬರ್ ತಿಂಗಳ ಆರಂಭದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು. ಡಿಸೆಂಬರ್ ನಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ 100 ರೂ. ಆದರೆ, ಆಗ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ ಎಂಬುದು ಜನರ ಪಾಲಿಗೆ ಸಮಾಧಾನದ ಸಂಗತಿಯಾಗಿತ್ತು. ವಾಣಿಜ್ಯ ಸಿಲಿಂಡರ್‌ಗಳ

ಸಿಲಿಂಡರ್ ಬೆಲೆಯಲ್ಲಿ ಕಡಿತಕ್ಕೆ ಇಂಡಿಯನ್ ಆಯಿಲ್ ನಿರ್ಧಾರ Read More »

ದ್ವಾದಶ ರಾಶಿಗಳ ವರ್ಷ ಭವಿಷ್ಯ

ಕಳೆದೆರಡು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕವು ಜಗತ್ತನ್ನು ಕಂಗೆಡಿಸಿದೆ. ಇನ್ನೇನು ಕಡಿಮೆಯಾಯಿತು ಎನ್ನುವಷ್ಟರಲ್ಲಿ ಹೊಸ ರೂಪಾಂತರಿಗಳು ಪ್ರತ್ಯಕ್ಷವಾಗುತ್ತಿವೆ. 2022ರ ವರ್ಷ ಹೇಗಿರಬಹುದು? ಯಾವ ರಾಶಿಯವರಿಗೆ ಹೇಗಿದೆ? ಇಲ್ಲಿದೆ ಸಂಪೂರ್ಣ ‌ಮಾಹಿತಿ. ಮೇಷರಾಶಿ: ಈ ರಾಶಿಯವರಿಗೆ ಈ ವರ್ಷ ಶುಭ ಸುದ್ದಿಗಳು ಸಿಗಲಿದ್ದು, ಸ್ವಲ್ಪ ಹೆಚ್ಚಿನ ಪ್ರಯತ್ನ ಹಾಕುವ ಅವಶ್ಯಕತೆ ಇದೆ. ಕೆಲವೊಂದು ಗೊಂದಲದ ಸಮಯದಲ್ಲಿ ಕುಟುಂಬದ ಸದಸ್ಯರ ಸಲಹೆ ಕೇಳುವುದು ಬಹಳ ಮುಖ್ಯ. ಅವರ ಅನುಭವ ಮತ್ತು ಸಲಹೆ ನಿಮ್ಮ ಕಷ್ಟಗಳನ್ನು ದೂರ ಮಾಡುತ್ತದೆ. ನಿಮ್ಮ ಆಸೆ ಈ

ದ್ವಾದಶ ರಾಶಿಗಳ ವರ್ಷ ಭವಿಷ್ಯ Read More »

ಲೈಂಗಿಕ ಕ್ರೀಯೆ ಮತ್ತು ವೈವಾಹಿಕ ಹಕ್ಕನ್ನು ಪತ್ನಿಯ ಮೇಲೆ ಹೇರುವಂತಿಲ್ಲ| ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು​

ಗುಜರಾತ್ : ವೈವಾಹಿಕ ಸಂಬಂಧದ ಕುರಿತಂತೆ ಗುಜರಾತ್​ ಹೈಕೋರ್ಟ್ ಮಹತ್ವದ ತೀರ್ಪೋಂದನ್ನು ಗುಜರಾತ್​ ಹೈಕೋರ್ಟ್ ಪ್ರಕಟಿಸಿದೆ. ವೈವಾಹಿಕ ಹಕ್ಕುಗಳನ್ನು ಸ್ಥಾಪಿಸಲು ಹಾಗೂ ಲೈಂಗಿಕ ಕ್ರಿಯೆಗಳನ್ನು ನಡೆಸಲು ಪತ್ನಿಯನ್ನು ಒತ್ತಾಯಿಸಲು ಪತಿಗೆ ಯಾವುದೇ ಅಧಿಕಾರ ಇರೋದಿಲ್ಲ ಎಂದು ಹೇಳಿದೆ. ಗುಜರಾತ್​​ನ ಬನಸ್ಕಂದ ಜಿಲ್ಲೆಯ ಗ್ರಾಮವೊಂದರ ಮುಸ್ಲಿಂ ದಂಪತಿಯ ವೈವಾಹಿಕ ಸಂಬಂಧದ ಕುರಿತಂತೆ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ. 2015ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ದಂಪತಿಗೆ ಓರ್ವ ಪುತ್ರ ಕೂಡ ಇದ್ದಾನೆ. ಮಹಿಳೆಯು ಪಾಲನ್​​ಪುರ

ಲೈಂಗಿಕ ಕ್ರೀಯೆ ಮತ್ತು ವೈವಾಹಿಕ ಹಕ್ಕನ್ನು ಪತ್ನಿಯ ಮೇಲೆ ಹೇರುವಂತಿಲ್ಲ| ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು​ Read More »

ಮಡಿಕೇರಿ : ಸಂಘಕ್ಕೆ ಹಣ ಪಾವತಿಸಲು ತೆರಳಿದ ವ್ಯಕ್ತಿ ನಾಲ್ಕು ದಿನದ ಬಳಿಕ ಶವವಾಗಿ ಪತ್ತೆ ಅಪಹರಿಸಿ ಕೊಲೆ ಶಂಕೆ !!

ಮಡಿಕೇರಿ:- ಸಂಘವೊಂದಕ್ಕೆ ಹಣ ಪಾವತಿಸಲು ಹೋಗಿದ್ದ ವ್ಯಕ್ತಿಯೊಬ್ಬರು ನಾಲ್ಕು ದಿನಗಳ ಬಳಿಕ ಶವವಾಗಿ ಪತ್ತೆಯಾದ ಘಟನೆ ಮಡಿಕೇರಿ ತಾಲೂಕಿನ ಪಾಲೂರು ಗ್ರಾಮದಲ್ಲಿ ನಡೆದಿದೆ. ಮೂರ್ನಾಡು ನಿವಾಸಿ ಗಿರೀಶ್(38) ಎಂಬವರೇ ಮೃತಪಟ್ಟ ವ್ಯಕ್ತಿಯಾಗಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುಮಾರು 6 ತಿಂಗಳ ಹಿಂದೆ ಪಾಲೂರು ವ್ಯಾಪ್ತಿಯಲ್ಲಿ ತೋಟ ಕೆಲಸ ಮಾಡುತ್ತಿದ್ದ ಗಿರೀಶ್, ನಂತರದ ದಿನಗಳಲ್ಲಿ ಮೂರ್ನಾಡು ಗ್ರಾಮದಲ್ಲೇ ನೆಲೆಸಿದ್ದರು. ಡಿ.27ರಂದು ಪಾಲೂರು ಗ್ರಾಮಕ್ಕೆ ತೆರಳಿದ ಗಿರೀಶ್ 1,200 ರೂ.ಗಳನ್ನು ಸಂಘವೊಂದಕ್ಕೆ ಪಾವತಿಸಿ ಪತ್ನಿಗೆ ಮೊಬೈಲ್ ಮೂಲಕ ಮಾಹಿತಿ

ಮಡಿಕೇರಿ : ಸಂಘಕ್ಕೆ ಹಣ ಪಾವತಿಸಲು ತೆರಳಿದ ವ್ಯಕ್ತಿ ನಾಲ್ಕು ದಿನದ ಬಳಿಕ ಶವವಾಗಿ ಪತ್ತೆ ಅಪಹರಿಸಿ ಕೊಲೆ ಶಂಕೆ !! Read More »

ವೈಶ್ಣೋದೇವಿ ಮಂದಿರದಲ್ಲಿ ಕಾಲ್ತುಳಿತ | 6 ಕ್ಕೂ ಹೆಚ್ಚು ಸಾವು ಹಲವರು ಗಂಭೀರ

ಜಮ್ಮು ಕಾಶ್ಮೀರಾ: 2022 ರ ಮೊದಲ ದಿನವೇ ಸಂಭವಿಸಿದ ಭೀಕರ ದುರಂತಕ್ಕೆ 6ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡ ಘಟನೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವೈಶ್ಣೋದೇವಿ ಮಂದಿರದಲ್ಲಿ ನಡೆದಿದೆ. ಇಂದು ಮುಂಜಾನೆ ಘಟನೆ ನಡೆದಿದ್ದು, ದೇವಿ ದರ್ಶನಕ್ಕಾಗಿ ಕಿಕ್ಕಿರಿದು ಸೇರಿದ್ದ ಜನರ ನಡುವೆ ಉಂಟಾದ ಗೊಂದಲದಿಂದ ದುರಂತ ನಡೆದಿದೆ. ಸದ್ಯ ಆರು ಜನರು ಮೃತಪಟ್ಟಿದ್ದಾರೆ. ಗಾಯಗೊಂಡ ಹಲವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಇದೆ ಎಂದು ತಿಳಿದುಬಂದಿದೆ.

ವೈಶ್ಣೋದೇವಿ ಮಂದಿರದಲ್ಲಿ ಕಾಲ್ತುಳಿತ | 6 ಕ್ಕೂ ಹೆಚ್ಚು ಸಾವು ಹಲವರು ಗಂಭೀರ Read More »

ತಳಮಟ್ಟದ ಜನರಿಗೆ ತಲುಪದ ಸವಲತ್ತು| ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಕ್ಲಾಸ್| ಭೂ ಮಾಫಿಯಾ ತೊದಗಿಸಿಕೊಂಡ ಡಿಸಿ ಗಳಿಗೆ ಖಡಕ್ ವಾರ್ನಿಂಗ್

ಬೆಂಗಳೂರು: ರಾಜ್ಯದ ಜನರಿಗೆ ಮೂಲ ಸೌಕರ್ಯ ಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವಲ್ಲಿ ಜಿಲ್ಲಾಧಿಕಾರಿಗಳ ವಿಫಲತೆ ಕಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಂಡಾಂಡಮಂಡಲವಾಗಿದ್ದಾರೆ. ಜೊತೆಗೆ ಭೂ ಮಾಫಿಯಗಳಲ್ಲಿ ಭಾಗಿಯಾಗುತ್ತಿರುವ ರಾಜ್ಯದ ಕೆಲವು ಜಿಲ್ಲಾಧಿಕಾರಿಗಳಿಗೆ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಸೇರಿದಂತೆ ಜನರ ಮತ್ತು ಸರ್ಕಾರದ ನಡುವಿನ ಬಹುಮುಖ್ಯ ಕೊಂಡಿ ಜಿಲ್ಲಾಧಿಕಾರಿಗಳು. ಹೀಗಿರುವಾಗ ನೀವು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ನೀವು ಉತ್ತಮವಾಗಿ ಕೆಲಸ ಮಾಡಿದರೆ ಮಾತ್ರ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ. ಹೀಗಾಗಿ ಬಾಸಿಸಂ ಬಿಟ್ಟು ತಳಮಟ್ಟದಲ್ಲಿ

ತಳಮಟ್ಟದ ಜನರಿಗೆ ತಲುಪದ ಸವಲತ್ತು| ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಕ್ಲಾಸ್| ಭೂ ಮಾಫಿಯಾ ತೊದಗಿಸಿಕೊಂಡ ಡಿಸಿ ಗಳಿಗೆ ಖಡಕ್ ವಾರ್ನಿಂಗ್ Read More »

10ನೇ ತರಗತಿ ಬಾಲಕನ ಜೊತೆ ಪರಾರಿಯಾದ 22ರ ಯುವತಿ| ಮದುವೆಯಾಗಿ ಸಿಕ್ಕಿಬಿದ್ದ ಜೋಡಿ ಪೊಲೀಸ್ ವಶಕ್ಕೆ|

ಕೊಟ್ವಾಲಿ: ಫೇಸ್‌ಬುಕ್‌ನಿಂದ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ಸಿಲುಕಿ ಬಾಲಕನ ಜತೆ ಯುವತಿ ಓಡಿಹೋಗಿರುವ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ. ನಾಡಿಯಾದ ಕೃಷ್ಣನಗರ ಕೊಟ್ವಾಲಿಯ 15 ವರ್ಷದ ಬಾಲಕ ಮತ್ತು ಶಾಂತಿನಗರದ 22 ವರ್ಷದ ಯುವತಿ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದು ಮದುವೆಯಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಇವರಿಬ್ಬರೂ ಫೇಸ್‌ಬುಕ್‌ ಮೂಲಕ ಪರಿಚಯವಾಗಿದ್ದರು. ನಂತರ ಮಾತುಕತೆಯ ವೇಳೆ ಪರಸ್ಪರ ಲವ್‌ ಆಗಿದೆ. ಮನೆಯವರಿಗೆ ತಿಳಿಸಿದರೆ ಖಂಡಿತ ಮದುವೆಗೆ ಒಪ್ಪುವುದಿಲ್ಲ ಎಂದುಕೊಂಡು ಇಬ್ಬರೂ ಉತ್ತರ ಪ್ರದೇಶಕ್ಕೆ ಹೋಗುವ

10ನೇ ತರಗತಿ ಬಾಲಕನ ಜೊತೆ ಪರಾರಿಯಾದ 22ರ ಯುವತಿ| ಮದುವೆಯಾಗಿ ಸಿಕ್ಕಿಬಿದ್ದ ಜೋಡಿ ಪೊಲೀಸ್ ವಶಕ್ಕೆ| Read More »

ಸುಳ್ಯ: ವಸತಿಗೃಹದಲ್ಲಿ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ| ಭಜರಂಗದಳದ ಕಾರ್ಯಾಚರಣೆ|

ಸುಳ್ಯ: ಇಲ್ಲಿನ ನಗರದ ವಸತಿಗೃಹವೊಂದರಲ್ಲಿ ಭಿನ್ನ ಕೋಮಿನ ಜೋಡಿಯೊಂದು ಸಿಕ್ಕಿಬಿದ್ದಿದ್ದು, ಭಜರಂಗದಳದ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ವರದಿಯಾಗಿದೆ. ಯುವತಿ ಹಾಗೂ ಯುವಕ ಕೇರಳ ಮೂಲದವರಾಗಿದ್ದು, ಯುವತಿಯ ಕುರಿತು ಕೇರಳದ ಠಾಣೆಯೊಂದರಲ್ಲಿ ಕೆಲ ದಿನಗಳ ಹಿಂದೆ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅದೇ ಯುವತಿ ಇದೀಗ ಯುವಕನೊಂದಿಗೆ ಪತ್ತೆಯಾಗಿದ್ದು, ಈ ಬಗ್ಗೆ ಕೇರಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ಜೋಡಿಯನ್ನು ಕೇರಳ ಪೊಲೀಸರಿಗೆ ಹಸ್ತಾಂತರಿಸುವುದಾಗಿ ಸುಳ್ಯ ಪೊಲೀಸರು ತಿಳಿಸಿದ್ದಾರೆ.

ಸುಳ್ಯ: ವಸತಿಗೃಹದಲ್ಲಿ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ| ಭಜರಂಗದಳದ ಕಾರ್ಯಾಚರಣೆ| Read More »