ಪ್ರವಾಸಿ ತಾಣ

ಆನ್’ಲಾಕ್ ಆಗುತ್ತಿದ್ದಂತೆ ನಂದಿಬೆಟ್ಟದಲ್ಲಿ ಪ್ರೇಮಿಗಳ ಲಿಪ್’ಲಾಕ್

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪ್ರವಾಸಿ ತಾಣಗಳು ಅನ್‌ಲಾಕ್ ಆಗುತ್ತಿದ್ದಂತೆ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಬೆಟ್ಟದಲ್ಲಿ ಪ್ರೇಮಿಗಳು ಪರಸ್ಪರ ಚುಂಬಿಸಿದ ಫೋಟೋ ಬಾರೀ ವೈರಲ್ ಆಗುತ್ತಿದೆ. ನಂದಿಬೆಟ್ಟ ಆನ್ ಲಾಕ್ ಆದ ಬಳಿಕ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಜೋಡಿಯೊಂದು ಕೊರೊನಾ ರೂಲ್ಸ್ ಬ್ರೇಕ್ ಮಾಡಿ ಸಾರ್ವಜನಿಕವಾಗಿ ಪರಸ್ಪರ ಚುಂಬಿಸಿದ್ದಾರೆ. ನಂದಿಬೆಟ್ಟದಲ್ಲಿ ಜೋಡಿ ಲಿಪ್ ಲಾಕ್ ಮಾಡಿದ ಕ್ಷಣವನ್ನು ಯಾರೋ ಸೀರೆಹಿಡಿದಿದ್ದಾರೆ. ಕ್ಷಣಮಾತ್ರದಲ್ಲಿ ಬಿಸಿ ಬಿಸಿ ಫೋಟೋ ವೈರಲ್ ಆಗಿದೆ. ಮುಂಜಾನೆ ಮೋಡಗಳ ಮಂಜಿನಾಟದ ಜೊತೆ ಪ್ರವಾಸಿಗರು ನಂದಿ […]

ಆನ್’ಲಾಕ್ ಆಗುತ್ತಿದ್ದಂತೆ ನಂದಿಬೆಟ್ಟದಲ್ಲಿ ಪ್ರೇಮಿಗಳ ಲಿಪ್’ಲಾಕ್ Read More »

ಮುಜುರಾಯಿ ಇಲಾಖೆಯ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿ. 13 ವರ್ಷಗಳಿಂದ ಮಳೆನೀರಿಗೆ ಮೈಯೊಡ್ಡುತ್ತಿದ್ದಾನೆ ಕುಕ್ಕೆ ಪುರದೊಡೆಯ ಶ್ರೀಸುಬ್ರಹ್ಮಣ್ಯ

ಮಂಗಳೂರು, ಜುಲೈ 3: ನಂಬಿದವರ ಇಷ್ಟಾರ್ಥವನ್ನು ಸಿದ್ಧಿಗೊಳಿಸುವ, ಅಭೀಷ್ಠೆಗಳನ್ನು ಪೂರೈಸುವ ದಕ್ಷಿಣ ಭಾರತದ ಪರಮ ಪವಿತ್ರ ಪುಣ್ಯಕ್ಷೇತ್ರ ಸುಬ್ರಹ್ಮಣ್ಯ ದೇವರು ಮಳೆಗೆ ಮೈ ಒಡ್ಡಿ 13 ವರ್ಷಗಳೇ ಕಳೆದುಹೋಗಿದೆ. ಅಧಿಕಾರಿಗಳ ಬೇಜವಾಬ್ದಾರಿ, ಮುಜುರಾಯಿ‌ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ರಾಜ್ಯದ ಪ್ರಸಿದ್ಧ ಯಾತ್ರಾಕ್ಷೇತ್ರಕ್ಕೆ ಪ್ರತೀವರ್ಷ ಪ್ಲಾಸ್ಟಿಕ್ ಹೊದಿಕೆ ಹಾಕಲಾಗುತ್ತಿದೆ. ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಹಾಗೂ ರಾಜ್ಯದ ಅತೀ ಶ್ರೀಮಂತ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ದೇವರ ಸನ್ನಿಧಿ ಮಳೆಗಾಲದಲ್ಲಿ ಸೋರಲಾರಂಭಿಸಿ ಹದಿಮೂರು ವರ್ಷಗಳಾಗಿವೆ. ಸುಬ್ರಹ್ಮಣ್ಯ ಸ್ವಾಮಿಯ ದೇವರ

ಮುಜುರಾಯಿ ಇಲಾಖೆಯ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿ. 13 ವರ್ಷಗಳಿಂದ ಮಳೆನೀರಿಗೆ ಮೈಯೊಡ್ಡುತ್ತಿದ್ದಾನೆ ಕುಕ್ಕೆ ಪುರದೊಡೆಯ ಶ್ರೀಸುಬ್ರಹ್ಮಣ್ಯ Read More »

ಜೋಗ ಜಲಪಾತ ಪ್ರವಾಸಿಗರಿಗೆ ಇಲ್ಲಿದೆ ಸಿಹಿ ಸುದ್ದಿ

ಶಿವಮೊಗ್ಗ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಜೋಗ ಜಲಪಾತ ವೀಕ್ಷಣೆ ಪ್ರವಾಸಿಗರಿಗೆ ಅವಕಾಶ ನೀಡದೆ ಎಲ್ಲಾ ಪ್ರವಾಸಿ ತಾಣಗಳು ಬಂದ್ ಆಗಿದ್ದವು. ಇದೀಗ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಇಂದಿನಿಂದ ಮುಕ್ತ ಅವಕಾಶ ನೀಡಲಾಗಿದೆ. ಕೊರೊನಾ ಸೋಂಕು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಅನ್‌ಲಾಕ್ ಘೋಷಿಸಿದ್ದು, ಪ್ರವಾಸಿ ತಾಣಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಹೀಗಾಗಿಯೇ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತ ವೀಕ್ಷಣೆಗೆ ಇಂದಿನಿಂದ ಅವಕಾಶ ಕಲ್ಪಿಸಿದ್ದು, ಮುಂಜಾನೆ 10

ಜೋಗ ಜಲಪಾತ ಪ್ರವಾಸಿಗರಿಗೆ ಇಲ್ಲಿದೆ ಸಿಹಿ ಸುದ್ದಿ Read More »

ಮೊದಲ ರಾತ್ರಿ ಶೋಭನದ ಕೋಣೆಗೆ ಹಾಲನ್ಯಾಕೆ ತಗೊಂಡೋಗ್ತಾರೆ ಗೊತ್ತಾ?

ವಿವಾಹವೆಂಬುದು ಎರಡು ಹೃದಯಗಳ ಬೆಸುಗೆ. ಅದರಲ್ಲು ವಿವಾಹದ ಬಳಿಕದ ಮೊದಲ ರಾತ್ರಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಪ್ರಾಶಸ್ತ್ಯವಿದೆ. ಶೋಭನವನ್ನು ವಧು ವರನ ಜೀವನಕ್ಕೆ ಒಯ್ಯುವ ಅದೃಷ್ಟದ ಸಂಕೇತವೆಂದು ನಂಬಲಾಗಿದೆ. ಅದರಲ್ಲೂ ಮೊದಲ ರಾತ್ರಿಯಲ್ಲಿ ವಧುವಿನ ಕೈಯಲ್ಲಿರುವ ಹಾಲಿನ ಲೋಟಕ್ಕೆ ಅದರದ್ದೇ ಆದ ಮಹತ್ವವಿದೆ.ಪ್ರಾಚೀನ ಭಾರತೀಯರು ಕೃಷಿಕರಾಗಿದ್ದರಿಂದ, ಜಾನುವಾರು ಸಾಕಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ, ಮತ್ತು ಗೋವಿನ ಸಗಣಿಯಿಂದ ತುಪ್ಪದವರೆಗೆ ಪ್ರತಿದಿನ ಬಳಸಲಾಗುತ್ತದೆ. ಆರ್ಥಿಕವಾಗಿ ಸ್ಥಿರವಾದ ರೈತರು ಹೆಚ್ಚು ಜಾನುವಾರುಗಳನ್ನು ಹೊಂದಿದ್ದರು. ಅದಕ್ಕಾಗಿ ಹೈನುಗಾರಿಕೆ ಕೂಡಾ ಭಾರತೀಯರ ಸಂಸ್ಕೃತಿಯೊಳಗೆ

ಮೊದಲ ರಾತ್ರಿ ಶೋಭನದ ಕೋಣೆಗೆ ಹಾಲನ್ಯಾಕೆ ತಗೊಂಡೋಗ್ತಾರೆ ಗೊತ್ತಾ? Read More »

ಸಿಬಿಎಸ್ಇ ಪರೀಕ್ಷೆ ರದ್ದು: ಮಕ್ಕಳ ಆರೋಗ್ಯವೇ ಮುಖ್ಯ ಎಂದ ಕೇಂದ್ರ ಸರ್ಕಾರ

ನವದೆಹಲಿ: ಪರ-ವಿರೋಧಗಳಿಗೆ ಗುರಿಯಾಗಿದ್ದ CBSE 12ನೇ ತರಗತಿ ಪರೀಕ್ಷೆ ವಿಚಾರಕ್ಕೆ ಕೊನೆಗೂ ಮುಕ್ತಿ ಸಿಕ್ಕಿದ್ದು ಪರೀಕ್ಷೆಗಳನ್ನು ರದ್ದು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. CBSE 12ನೇ ತರಗತಿ ಪರೀಕ್ಷೆಗಳನ್ನು ನಡೆಸುವ ವಿಚಾರವಾಗಿ ದೇಶದಾದ್ಯಂತ ದೊಡ್ಡ ಮಟ್ಟದ ಪರ-ವಿರೋಧ ವ್ಯಕ್ತವಾಗಿತ್ತು. ಕೊರೊನಾ ಎರಡನೇ ಅಲೆಯ ಈ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸುವುದು ಉಚಿತವಲ್ಲ ಎಂದು ಹಲವು ರಾಜ್ಯ ಸರ್ಕಾರಗಳು ಹಾಗೂ ವಿರೋಧ ಪಕ್ಷಗಳೂ ಕೇಂದ್ರ ಸರ್ಕಾರದ

ಸಿಬಿಎಸ್ಇ ಪರೀಕ್ಷೆ ರದ್ದು: ಮಕ್ಕಳ ಆರೋಗ್ಯವೇ ಮುಖ್ಯ ಎಂದ ಕೇಂದ್ರ ಸರ್ಕಾರ Read More »

ಉತ್ತರ ಪ್ರದೇಶ ಕಳ್ಳಭಟ್ಟಿ ದುರಂತ | ಏರುತ್ತಲೇ ಇದೆ ಮೃತರ ಸಂಖ್ಯೆ

ಲಖನೌ: ರಾಜ್ಯದ ಅಲಿಗಡದಲ್ಲಿ ಕಳೆದ ವಾರ ವಿಷಕಾರಿ ಮದ್ಯಸೇವಿಸಿ ಆಸ್ಪತ್ರೆ ಸೇರಿದ್ದವರಲ್ಲಿ ನಿನ್ನೆ ಒಂದೇ ದಿನ 11 ಮಂದಿ ಅಸುನೀಗಿದ್ದಾರೆ. ಇದರೊಂದಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 36 ಕ್ಕೆ ಏರಿಕೆಯಾಗಿದೆ. ಘಟನೆ ನಡೆದ ಶುಕ್ರವಾರದಿಂದ ಸೋಮವಾರ ಮುಂಜಾನೆಯವರೆಗೆ ಒಟ್ಟು 71 ಶವಗಳು ಮರಣೋತ್ತರ ಪರೀಕ್ಷೆಗೆ ಬಂದಿವೆ. ಇವುಗಳ ಪೈಕಿ 36 ಜನರ ಸಾವಿಗೆ ವಿಷಕಾರಿ ಮದ್ಯವೇ ಕಾರಣ ಎಂಬುದು ದೃಢಪಟ್ಟಿದೆ. ಉಳಿದ 35 ಶವಗಳ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದ್ದು, ಅವರ ಸಾವಿಗೂ ವಿಷಯುಕ್ತ ಮದ್ಯವೇ ಕಾರಣ ಎಂದು

ಉತ್ತರ ಪ್ರದೇಶ ಕಳ್ಳಭಟ್ಟಿ ದುರಂತ | ಏರುತ್ತಲೇ ಇದೆ ಮೃತರ ಸಂಖ್ಯೆ Read More »

ಸರ್ಕಾರದ ಮೇಲಿನ ಮಾಧ್ಯಮಗಳ ಟೀಕೆಯನ್ನು ದೇಶದ್ರೋಹ ಎಂದು ಪರಿಗಣಿಸಲಾಗದು: ಸುಪ್ರೀಂ

ನವದೆಹಲಿ: ಸರ್ಕಾರದ ಕೆಲಸಗಳು ಅಥವಾ ನೀತಿ-ನಿಯಮಗಳನ್ನು ಟೀಕಿಸಿ ಮಾಧ್ಯಮಗಳು ವರದಿ ಮಾಡಿದರೆ ಅದನ್ನು ದೇಶದ್ರೋಹ ಎಂದು ಪರಿಗಣಿಸಲಾಗದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆಂಧ್ರ ಪ್ರದೇಶ ಸರ್ಕಾರದ ವಿರುದ್ಧ ಅಲ್ಲಿನ ಟಿವಿ5 ಹಾಗೂ ಎಬಿಎನ್ ಆಂಧ್ರಜ್ಯೋತಿ ಸುದ್ದಿವಾಹಿನಿಗಳು ಅಲ್ಲಿನ ಸಂಸದರೊಬ್ಬರ ನಿಲುವನ್ನು ಪ್ರಕಟಿಸಿ, ದೇಶದ್ರೋಹ ಆರೋಪ ಎದುರಿಸುತ್ತಿದ್ದವು. ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ, ಸುಪ್ರೀಂಕೋರ್ಟ್ ಟಿವಿ ಚಾನೆಲ್ ಗಳ ಮೇಲೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಿದೆ. ದೇಶದ್ರೋಹ ಸೇರಿದಂತೆ

ಸರ್ಕಾರದ ಮೇಲಿನ ಮಾಧ್ಯಮಗಳ ಟೀಕೆಯನ್ನು ದೇಶದ್ರೋಹ ಎಂದು ಪರಿಗಣಿಸಲಾಗದು: ಸುಪ್ರೀಂ Read More »

ಜೂ.15ಕ್ಕೆ ಬರಲಿದೆ ಇಪ್ಕೋ ನ್ಯಾನೋ ಯೂರಿಯಾ: ಡಿ.ವಿ

ನವದೆಹಲಿ(ಮೇ 30): ಸಹಕಾರಿ ವಲಯದ ರಸಗೊಬ್ಬರ ಕಂಪನಿ ಇಫ್ಕೋ ಅಭಿವೃದ್ಧಿಸಿರುವ ನ್ಯಾನೋ-ಯೂರಿಯಾ ರಸಗೊಬ್ಬರವು ಕೃಷಿಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.ನ್ಯಾನೋ-ಯುರಿಯಾ ಉಪಯೋಗದ ಬಗ್ಗೆ ಇಫ್ಕೋ ಸಂಸ್ಥೆಯವರು ಶನಿವಾರ ಏರ್ಪಡಿಸಿದ್ದ ವೆಬ್ಬಿನಾರ್ ಚರ್ಚೆಯನ್ನು ಉದ್ಘಾಟಿಸಿ ಮಾತನಾಡಿದ ಸದಾನಂದ ಗೌಡ, ಅವರು ಇದು ಪರಿಸರ ಸ್ನೇಹಿಯಾಗಿದ್ದು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ನ್ಯಾನೋ ರಸಗೊಬ್ಬರದಿಂದ ಸಾಗುವಳಿ ವೆಚ್ಚದಲ್ಲಿ ಸುಮಾರು 15 ಪ್ರತಿಶತ ಕಡಿಮೆಯಾಗಲಿದೆ. ಇನ್ನು ಇಳುವರಿಯಲ್ಲಿ 15ರಿಂದ

ಜೂ.15ಕ್ಕೆ ಬರಲಿದೆ ಇಪ್ಕೋ ನ್ಯಾನೋ ಯೂರಿಯಾ: ಡಿ.ವಿ Read More »

ವಿರುಷ್ಕಾ ಅಭಿಮಾನಿಗಳಿಗೆ ವಮಿಕಾಳ ಮುದ್ದು ಮುಖ ತೋರಿಸೋದ್ಯಾವಾಗ…?

ನವದೆಹಲಿ: ಲಾಕ್ ಡೌನ್ ನಲ್ಲಿ ತಮ್ಮ ಮುದ್ದು ಮಗಳ ಜೊತೆ ಎಂಜಾಯ್ ಮಾಡುತ್ತಿರುವ ವಿರುಷ್ಕಾ ದಂಪತಿಗೆ ಅಭಿಮಾನಿಯೊಬ್ಬರು ಪ್ರಶ್ನೆಯೊಂದನ್ನು ಕೇಳಿದ್ದಾರೆ. ನಿಮ್ಮ ಮಗುವಿನ ಮುದ್ದು ಮುಖವನ್ನು ನಮಗೆಂದು ತೋರಿಸುತ್ತೀರಿ ಎಂದು ಕೇಳಿದ ಅಭಿಮಾನಿಗಳಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮುದ್ದಾದ ಉತ್ತರವೊಂದವೊಂದನ್ನು ನೀಡಿದ್ದಾರೆ. ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರೆ ಅನುಷ್ಕಾ ಶರ್ಮ ಅವರ ಅಸಂಖ್ಯಾತ ಅಭಿಮಾನಿಗಳಿಗೆ, ಮೂರು ತಿಂಗಳ ಹಿಂದೆ ಜನಿಸಿದ ಅವರ ಮುದ್ದಾದ ಮಗಳು ಈಗ ಹೇಗಿದ್ದಾಳೆ ಅನ್ನೋ ಕುತೂಹಲ ಇದೆ. ಲಾಕ್ಡೌನ್

ವಿರುಷ್ಕಾ ಅಭಿಮಾನಿಗಳಿಗೆ ವಮಿಕಾಳ ಮುದ್ದು ಮುಖ ತೋರಿಸೋದ್ಯಾವಾಗ…? Read More »

ಲಾರಿಯನ್ನು ಮೂರು ಕಿಮೀ ರಿವರ್ಸ್ ಚಲಾಯಿಸಿದ ಚಾಲಾಕಿ ಚಾಲಕ…..! | ಇಲ್ಲಿದೆ ವೈರಲ್ ವಿಡಿಯೋ

ಮಹಾರಾಷ್ಟ್ರ: ಚಲಿಸುತ್ತಿರುವ ವಾಹನಗಳು ತಾಂತ್ರಿಕ ವೈಫಲ್ಯಕ್ಕೀಡಾದಾಗ ಚಾಲಕರು ಸಮಯಪ್ರಜ್ಞೆ ಮೆರೆದು ದೊಡ್ಡ ದೊಡ್ಡ ಅನಾಹುತಗಳನ್ನು ತಪ್ಪಿಸಿದ ಹಲವಾರು ಉದಾಹರಣೆಗಳಿವೆ. ಅಂತೆಯೇ ಇಲ್ಲೊಬ್ಬ ಲಾರಿ ಚಾಲಕ, ಬ್ರೇಕ್ ವೈಫಲ್ಯ ಗೊಂಡ ಕಾರಣ ಲಾರಿಯನ್ನು ಹೆದ್ದಾರಿಯಲ್ಲಿ ರಿವರ್ಸ್ ಚಲಾಯಿಸಿ, ಅಪಾಯವನ್ನು ತಪ್ಪಿಸುವಲ್ಲಿ ತನ್ನ ಚಾಲಾಕಿತನ ತೋರಿಸಿದ್ದಾನೆ. ಮಹಾರಾಷ್ಟ್ರದ ಜಲ್ನಾ-ಸಿಲ್ಲೋಡ್ ರಸ್ತೆಯಲ್ಲಿ ಲಾರಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಬ್ರೇಕ್ ವೈಫಲ್ಯಗೊಂಡರಿವುದನ್ನು ಚಾಲಕ ಅರಿತಿದ್ದಾನೆ. ಆತ ತಡ ಮಾಡದೆ ಮಂದೆ ಚಲಿಸಿದರೆ ಹೆಚ್ಚಿನ ಅಪಾಯ ಸಂಭವಿಸಬಹುದು ಎಂದು ರಿವರ್ಸ್ ಗೇರ್ ನಲ್ಲಿ ಸುಮಾರು ಮೂರು

ಲಾರಿಯನ್ನು ಮೂರು ಕಿಮೀ ರಿವರ್ಸ್ ಚಲಾಯಿಸಿದ ಚಾಲಾಕಿ ಚಾಲಕ…..! | ಇಲ್ಲಿದೆ ವೈರಲ್ ವಿಡಿಯೋ Read More »