ರಾಜ್ಯ

SSLC ಪಾಸಾದವರಿಗೆ ಈಸ್ಟ್​ ಕೋಸ್ಟ್​ ರೈಲ್ವೆಯಲ್ಲಿ ಬಂಪರ್ ಉದ್ಯೋಗಾವಕಾಶ

ಸಮಗ್ರ ನ್ಯೂಸ್ ಡೆಸ್ಕ್: ಈಸ್ಟ್​ ಕೋಸ್ಟ್​ ರೈಲ್ವೆ ತನ್ನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 756 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್​ 7 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತು […]

SSLC ಪಾಸಾದವರಿಗೆ ಈಸ್ಟ್​ ಕೋಸ್ಟ್​ ರೈಲ್ವೆಯಲ್ಲಿ ಬಂಪರ್ ಉದ್ಯೋಗಾವಕಾಶ Read More »

ಕೇಂದ್ರ ಲೋಕ ಸೇವಾ ಆಯೋಗದಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ | ಮಾರ್ಚ್​ 3 ಅರ್ಜಿ ಸಲ್ಲಿಸಲು ಕೊನೆಯ ದಿನ

ಸಮಗ್ರ ನ್ಯೂಸ್ ಡೆಸ್ಕ್: ಕೇಂದ್ರ ಲೋಕ ಸೇವಾ ಆಯೋಗವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಒಟ್ಟು 33 ಅಸಿಸ್ಟೆಂಟ್ ಪ್ರೊಫೆಸರ್, ಸ್ಟೋರ್ ಆಫೀಸರ್, ಅಸಿಸ್ಟೆಂಟ್ ಮಿನರಲ್ ಎಕನಾಮಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 12ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಮಾರ್ಚ್​ 3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ

ಕೇಂದ್ರ ಲೋಕ ಸೇವಾ ಆಯೋಗದಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ | ಮಾರ್ಚ್​ 3 ಅರ್ಜಿ ಸಲ್ಲಿಸಲು ಕೊನೆಯ ದಿನ Read More »

ಬುಧವಾರ(ಫೆ.16)ದಿಂದ ಕಾಲೇಜುಗಳು ಮತ್ತೆ ಆರಂಭ – ಸಚಿವ ಆರಗ ಜ್ಞಾನೇಂದ್ರ

ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಹಿಜಾಬ್ ವಿವಾದದಿಂದ ಮುಚ್ಚಲ್ಪಟ್ಟಿದ್ದ ಕಾಲೇಜುಗಳನ್ನು ಬುಧವಾರದಿಂದ ಮತ್ತೆ ಆರಂಭಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಮುಖ್ಯಮಂತ್ರಿಗಳ ಸಭೆ ಬಳಿಕ ಮಾತನಾಡಿದ ಅವರು ಹೈಕೋರ್ಟ್ ಆದೇಶದಂತೆ ಈಗಿರುವ ವಸ್ತ್ರ ಸಂಹಿತೆ ಆದೇಶ ಕಡ್ಡಾಯಗೊಳಿಸಿ ತರಗತಿಗಳನ್ನು ಪುನರಾರಂಭಗೊಳಿಸಲಾಗುವುದು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಶಾಲಾ ಕಾಲೇಜುಗಳ ಆವರಣದಲ್ಲಿ ಬಿಗಿ ಭದ್ರತೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಹೈಸ್ಕೂಲ್ ವರೆಗಿನ ತರಗತಿಗಳು ಆರಂಭವಾಗಿದ್ದು, ಸುಸೂತ್ರವಾಗಿ ನಡೆಯುತ್ತಿವೆ.

ಬುಧವಾರ(ಫೆ.16)ದಿಂದ ಕಾಲೇಜುಗಳು ಮತ್ತೆ ಆರಂಭ – ಸಚಿವ ಆರಗ ಜ್ಞಾನೇಂದ್ರ Read More »

ಒಬ್ಬನಿಗೆ ನಾಲ್ಕು ಪತ್ನಿಯರು, 28 ಮಕ್ಕಳು, ಡಿವೈಎಸ್ಪಿಯಿಂದ ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಪೋಸ್ಟ್

ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿಯೋರ್ವ ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಪೋಸ್ಟ್ ಹಾಕಿರುವುದು ಬಹಿರಂಗವಾಗಿದೆ. ಪೋಸ್ಟ್ ನೋಡಿ ಈತನ ಮನಸ್ಥಿತಿ ಈಗಿದ್ದರೆ ಇಲಾಖೆಯಲ್ಲಿ ಎಷ್ಟೆಲ್ಲಾ ಅನ್ಯಾಯ ಮಾಡಿರುವ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ‌. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಡಿವೈಎಸ್ ಪಿ ರಂಗಸ್ವಾಮಿ ಸಿ.ಜೆ, ತನ್ನ ಪೋಸ್ಟ್ ನಲ್ಲಿ ಒಬ್ಬನಿಗೆ ನಾಲ್ಕು ಪತ್ನಿಯರು, 28 ಮಕ್ಕಳು, 5 ಕೆಜಿ X 33 ಒಂದೇ ಮನೆಗೆ 165 ಕೆಜಿ ಉಚಿತ ಪಡಿತರ ಅಕ್ಕಿ. ಹಿಂಗಾದರೆ ಬಹುಬೇಗ ಅವರ ಮುಲ್ಲಾ ಹೇಳಿದ ಹಾಗೆ 2050ರ

ಒಬ್ಬನಿಗೆ ನಾಲ್ಕು ಪತ್ನಿಯರು, 28 ಮಕ್ಕಳು, ಡಿವೈಎಸ್ಪಿಯಿಂದ ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಪೋಸ್ಟ್ Read More »

ಹಿಜಾಬ್ ವಿವಾದ ವಿಚಾರಣೆ, ಮಂಗಳವಾರಕ್ಕೆ ಮುಂದೂಡಿಕೆ

ಬೆಂಗಳೂರು: ರಾಜ್ಯದ ಶಾಲಾ ಕಾಲೇಜುಗಳ ಹಿಜಾಬ್- ಕೇಸರಿ ಶಾಲು ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ನ ತ್ರಿಸದಸ್ಯ ವಿಸ್ತ್ರತ ಪೀಠ ಸೋಮವಾರ ವಿಚಾರಣೆ ಮುಂದುವರೆಸಿದೆ. ಮುಖ್ಯ ನ್ಯಾ.ರಿತುರಾಜ್ ಅವಸ್ಥಿ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಜೈಬುನ್ನಿಸಾ ಎಂ.ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದು ಮಧ್ಯಾಹ್ನ 2.30ಕ್ಕೆ ಆರಂಭಿಸಿದ್ದರು. ಬಳಿಕ ವಕೀಲರಾದ ದೇವದತ್ ಕಾಮತ್ ಅವರು ವಾದ ಮಂಡಿಸಿದ್ದರು. ಹೀಗೆ ಹಲವು ವಾದ ವಿವಾದ ನಡೆದಿದ್ದವು. ಆದರೆ ಇನ್ನಷ್ಟು ವಿಚಾರಣೆ ಬಾಕಿ ಇರುವ ಕಾರಣ ಕಾಮತ್ ಅವರು ನಾಳೆಗೆ ಅವಕಾಶ ನೀಡಲು

ಹಿಜಾಬ್ ವಿವಾದ ವಿಚಾರಣೆ, ಮಂಗಳವಾರಕ್ಕೆ ಮುಂದೂಡಿಕೆ Read More »

ನಾನು ಕುರಾನ್ ಬಗ್ಗೆ ಉಲ್ಲೇಖ ಮಾಡಿದನ್ನು ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ತಡೆಯಿರಿ- ವಕೀಲ ಕಾಮತ್, ನೀವು ಇಲ್ಲಿ ಮೊದಲು ವಕೀಲ ಮತ್ತೆ ನಿಮ್ಮ ಧರ್ಮ -ನ್ಯಾಯಾಧೀಶರು

ಬೆಂಗಳೂರು : ಹಿಜಾಬ್ ಬಗ್ಗೆ ಹೈ ಕೋರ್ಟ್ ನಲ್ಲಿ ನಡೆಯುತ್ತಿದ್ದ ವಾದ – ವಿವಾದದ ಮಧ್ಯೆ ವಕೀಲ ದೇವದಾತ್ ಕಾಮತ್ ಅವರು ನಾನು ಕುರಾನ್ ಬಗ್ಗೆ ಉಲ್ಲೇಖ ಮಾಡಿದನ್ನು ಮಾದ್ಯಮದಲ್ಲಿ ಪ್ರಸಾರ ಮಾಡದಂತೆ ತಡೆಯಿರಿ ಎಂದು ಹೇಳಿದ್ದಾರೆ. ವಾದ ವಿವಾದ ನಡೆಯುತಿದ್ದ ಮಧ್ಯೆ ವಕೀಲ ದೇವದಾತ್ ಕಾಮತ್ ಅವರು ಕುರುನ್ ನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಯಾವ ರೀತಿ ಬಟ್ಟೆ ಹಾಕಬೇಕು ಎನ್ನುವ ಬಗ್ಗೆ ಇದೆ. ಹಾಗಾಗಿ ಇಲ್ಲಿಕೂಡ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ಕೊಡಿ ಎಂದು

ನಾನು ಕುರಾನ್ ಬಗ್ಗೆ ಉಲ್ಲೇಖ ಮಾಡಿದನ್ನು ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ತಡೆಯಿರಿ- ವಕೀಲ ಕಾಮತ್, ನೀವು ಇಲ್ಲಿ ಮೊದಲು ವಕೀಲ ಮತ್ತೆ ನಿಮ್ಮ ಧರ್ಮ -ನ್ಯಾಯಾಧೀಶರು Read More »

ರಾಜ್ಯದಲ್ಲಿ ಅನ್ ಲೈನ್ ಗೇಮಿಂಗ್ ಗೆ ಹಸಿರು ನಿಶಾ‌ನೆ

ಬೆಂಗಳೂರು: ರಾಜ್ಯದಲ್ಲಿ ಅನ್ ಲೈನ್ ಗೇಮಿಂಗ್ ನಿಷೇಧಿಸಿ ಜಾರಿಗೆ ತರಲಾಗಿದ್ದ ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯ್ದೆ-2021 ತಿದ್ದುಪಡಿಗಳನ್ನು ಹೈಕೋರ್ಟ್ ರದ್ದುಪಡಿಸಿದೆ. ತಿದ್ದುಪಡಿ ರದ್ದಾದ ಕಾರಣದಿಂದ ರಾಜ್ಯದಲ್ಲಿ ಅನ್ ಲೈನ್ ಗೇಮಿಂಗ್ ಗೆ ಹಸಿರು ನಿಶಾ‌ನೆ ಸಿಕ್ಕಂತಾಗಿದೆ. ಸರ್ಕಾರದ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಆನ್‌ಲೈನ್ ಗೇಮಿಂಗ್ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ರಾಜ್ಯದಲ್ಲಿ ಅನ್ ಲೈನ್ ಗೇಮಿಂಗ್ ಗೆ ಹಸಿರು ನಿಶಾ‌ನೆ Read More »

ಹಿಜಾಬ್ ಗೆ ಅವಕಾಶ ನೀಡದ ಕಾರಣ ಪರೀಕ್ಷೆಯನ್ನೇ ಬಹಿಷ್ಕರಿಸಿದ ವಿದ್ಯಾರ್ಥಿನಿಯರು!

ಶಿವಮೊಗ್ಗ: ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಹಿಜಾಬ್ ವಿವಾದ ಇದೀಗ ಮತ್ತೊಂದು ಹಂತ ತಲುಪಿದೆ. ಶಿವಮೊಗ್ಗದ ಮೇನ್ ಮಿಡ್ಲ್ ಸ್ಕೂಲ್ ನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಪರೀಕ್ಷೆಯನ್ನೇ ಬಹಿಷ್ಕರಿಸಿದ್ದಾರೆ. ಇಂದು ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆ ನಡೆಯುತ್ತಿದೆ. ಆದರೆ ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಬಿಡಲಿಲ್ಲ ಎಂಬ ಕಾರಣಕ್ಕೆ 13 ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ.

ಹಿಜಾಬ್ ಗೆ ಅವಕಾಶ ನೀಡದ ಕಾರಣ ಪರೀಕ್ಷೆಯನ್ನೇ ಬಹಿಷ್ಕರಿಸಿದ ವಿದ್ಯಾರ್ಥಿನಿಯರು! Read More »

ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ|ಡಿಪ್ಲೋಮಾ ಆದವರು Apply ಮಾಡಿ

ಸಮಗ್ರ ಮಾಹಿತಿ: ಟೆಲಿಕಮ್ಯುನಿಕೇಷನ್ಸ್​ ಕನ್ಸಲ್ಟೆಂಟ್ಸ್​ ಇಂಡಿಯನ್ ಲಿಮಿಟೆಡ್(Telecommunications Consultants Indian Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ(Technician Apprentice Trainee) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆನ್​ಲೈನ್​ (Online) ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ dot.gov.in ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ,

ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ|ಡಿಪ್ಲೋಮಾ ಆದವರು Apply ಮಾಡಿ Read More »

ಕಡಬ: ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತ ಹಿಂದೂ ಮಹಿಳೆಯ ಮನೆಯಲ್ಲಿ ಅನ್ಯಧರ್ಮೀಯನ ಕಾರುಬಾರು| ಮತಾಂತರ ಯತ್ನ ಆರೋಪಿಸಿ ಹಿಂದೂ‌ ಸಂಘಟನಾ ಕಾರ್ಯಕರ್ತರಿಂದ ಆಕ್ರೋಶ

ಸಮಗ್ರ ನ್ಯೂಸ್ ಡೆಸ್ಕ್: ದ.ಕ ಜಿಲ್ಲೆಯ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳದ ಕೊಠಾರಿ ಎಂಬಲ್ಲಿ ಹಿಂದೂ ಮಹಿಳೆಯ ಮನೆಯಲ್ಲಿ ಅನ್ಯ ಕೋಮಿನ ವ್ಯಕ್ತಿಯೊಬ್ಬ ಪತ್ತೆಯಾಗಿದ್ದು, ಈತನನ್ನು ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಮುಂಜಾನೆ ವೇಳೆಗೆ ಪತ್ತೆ ಹಚ್ಚಿ ಪೋಲಿಸ್ ವಶಕ್ಕೆ ನೀಡಿದ್ದಾರೆ. ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿ ವಾಸವಿರುವ ಮಹಿಳೆಯ ಮನೆಯಲ್ಲಿ ಅನ್ಯ ಕೋಮಿನ ವ್ಯಕ್ತಿಯೋರ್ವರು ತಂಗಿರುವ ವಿಚಾರ ಬೆಳಕಿಗೆ ಬಂದಿತ್ತು. ಆತ ಮಹಿಳೆಯನ್ನು ಆಸೆ ಆಮಿಷ ಒಡ್ಡಿ ಮತಾಂತರ ಮಾಡುವ ಉದ್ದೇಶದಿಂದ ಹಲವಾರು ಸಮಯಗಳಿಂದ

ಕಡಬ: ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತ ಹಿಂದೂ ಮಹಿಳೆಯ ಮನೆಯಲ್ಲಿ ಅನ್ಯಧರ್ಮೀಯನ ಕಾರುಬಾರು| ಮತಾಂತರ ಯತ್ನ ಆರೋಪಿಸಿ ಹಿಂದೂ‌ ಸಂಘಟನಾ ಕಾರ್ಯಕರ್ತರಿಂದ ಆಕ್ರೋಶ Read More »