ರಾಜ್ಯ

ಕರಾವಳಿ ಯಾಂತ್ರೀಕೃತ ಮೀನುಗಾರಿಕೆಗೆ ಜೂ.1ರಿಂದ ಎರಡು ತಿಂಗಳು ‌ರಜೆ ಘೋಷಿಸಿದ ಡಿಸಿ

ಸಮಗ್ರ ನ್ಯೂಸ್:;ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಯಾಂತ್ರೀಕೃತ ಮೀನುಗಾರಿಕೆ ಚಟುವಟಿಕೆಗಳ ಮೇಲೆ 61 ದಿನಗಳ ನಿಷೇಧ ಹೇರಲಾಗುತ್ತಿದೆ. ಇದೇ ಜೂ.1 ರಿಂದ ಜು.31 ರವರೆಗೆ ಈ ನಿಷೇಧ ಜಾರಿಯಲ್ಲಿರಲಿದ್ದು, ಜಿಲ್ಲಾಧಿಕಾರಿಗಳು ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಎಲ್ಲಾ ಯಾಂತ್ರೀಕೃತ ದೋಣಿಗಳು, ಹತ್ತು ಅಶ್ವಶಕ್ತಿಗಿಂತ ಹೆಚ್ಚು ಸಾಮರ್ಥ್ಯದ ಮೋಟಾರೀಕೃತ ದೋಣಿಗಳಲ್ಲಿ ಮೀನುಗಾರಿಕೆ, ಯಾವುದೇ ಬಲೆ, ಸಾಧನ ಬಳಸಿ ಮೀನುಗಾರಿಕೆ ನಡೆಸುವುದಕ್ಕೆ ಸಂಪೂರ್ಣ ನಿಷೇಧವಿದೆ. ಆಡಳಿತದ ಮೀನುಗಾರಿಕೆ ನಿಷೇಧ ಆದೇಶ ಉಲ್ಲಂಘಿಸುವ ಮೀನುಗಾರರು ಹಾಗೂ ಬೋಟ್ […]

ಕರಾವಳಿ ಯಾಂತ್ರೀಕೃತ ಮೀನುಗಾರಿಕೆಗೆ ಜೂ.1ರಿಂದ ಎರಡು ತಿಂಗಳು ‌ರಜೆ ಘೋಷಿಸಿದ ಡಿಸಿ Read More »

ರಾಜ್ಯದಲ್ಲಿ ಇನ್ಮುಂದೆ ತೆರೆದ ವಾಹನಗಳಲ್ಲಿ ಸಫಾರಿ ನಿಷೇಧ – ಸಚಿವ ಖಂಡ್ರೆ

ಸಮಗ್ರ ನ್ಯೂಸ್: ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶ ಹಾಗೂ ವನ್ಯಜೀವಿಧಾಮಗಳ ಸಫಾರಿಯಲ್ಲಿ ತೆರೆದ ಕ್ಯಾಂಪರ್ ಬದಲಿಗೆ ಸುರಕ್ಷಿತ ಬಸ್ ಬಳಕೆ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ದುಬಾರೆ ಆನೆ ಶಿಬಿರದಲ್ಲಿ ನಿನ್ನೆ ಎರಡು ಸಾಕಾನೆಗಳ ಕಾಳಗದ ವೇಳೆ ಪ್ರವಾಸಿ ಮಹಿಳೆ ಮೃತಪಟ್ಟ ಆಘಾತಕಾರಿ ಘಟನೆ ಹಿನ್ನೆಲೆಯಲ್ಲಿ ಸಫಾರಿಗಳಲ್ಲಿ ಪ್ರವಾಸಿಗರ ಸುರಕ್ಷತೆಗೂ ಹೆಚ್ಚಿನ ಗಮನ ಹರಿಸುವಂತೆ ಅರಣ್ಯ ಸಚಿವರು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ರಾಜ್ಯದಲ್ಲಿ ಇನ್ಮುಂದೆ ತೆರೆದ ವಾಹನಗಳಲ್ಲಿ ಸಫಾರಿ ನಿಷೇಧ – ಸಚಿವ ಖಂಡ್ರೆ Read More »

ಇಟಲಿ ಪ್ರಧಾನಿಗೆ ಮೋದಿ ನೀಡಿದ ₹2ರ ಮೆಲೋಡಿ ಚಾಕೊಲೆಟ್| ಇಂಟರ್ನೆಟ್ ನಲ್ಲಿ ಶುರುವಾಯ್ತು ಹೊಸ ಸೆನ್ಸೇಷನ್

ಸಮಗ್ರ ನ್ಯೂಸ್: ಪ್ರಧಾನಿ ಮೋದಿ ಐದು ರಾಷ್ಟ್ರಗಳ ಪ್ರವಾಸದಲ್ಲಿ ಇಟಲಿ ಭೇಟಿ ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆ ಕೋಲೋಸಿಯಂನಲ್ಲಿ ದ್ವಿಪಕ್ಷೀಯ ಮಾತುಕತೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಮೆಲೋನಿಗೆ ಪ್ರಧಾನಿ ಮೋದಿ ಮೆಲೋಡಿ ಗಿಫ್ಟ್ ಕುರಿತ ಈ ವಿಡಿಯೋ ಭಾರಿ ವೈರಲ್ ಆಗಿದೆ. ಎರಡು ರಾಷ್ಟ್ರಗಳ ಸಂಬಂಧವನ್ನು ಪ್ರಧಾನಿ ಮೋದಿ 2 ರೂಪಾಯಿ ಚಾಕೋಲೋಟ್ ಮೂಲಕ

ಇಟಲಿ ಪ್ರಧಾನಿಗೆ ಮೋದಿ ನೀಡಿದ ₹2ರ ಮೆಲೋಡಿ ಚಾಕೊಲೆಟ್| ಇಂಟರ್ನೆಟ್ ನಲ್ಲಿ ಶುರುವಾಯ್ತು ಹೊಸ ಸೆನ್ಸೇಷನ್ Read More »

‘ನೀವೇಕೆ ಮಾಧ್ಯಮಗಳ ಪ್ರಶ್ನೆಗಳನ್ನು ಬಯಸುವುದಿಲ್ಲ? ಪ್ರಧಾನಿ ಮೋದಿಗೆ ನಾರ್ವೆ ಪತ್ರಕರ್ತೆಯ ಪ್ರಶ್ನೆ

ಸಮಗ್ರ ನ್ಯೂಸ್: ಮಾಧ್ಯಮಗಳು ಪ್ರಶ್ನೆ ಕೇಳುವುದನ್ನು ಯಾಕೆ ಬಯಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ನಾರ್ವೆಯಲ್ಲಿ ಪತ್ರಕರ್ತೆಯೊಬ್ಬರು ಸೋಮವಾರ ಪ್ರಶ್ನಿಸಿರುವುದಾಗಿ ವರದಿಯಾಗಿದೆ. ಓಸ್ಲೋದಲ್ಲಿ ಪ್ರಧಾನಿ ಮೋದಿ ನಾರ್ವೆ ಪ್ರಧಾನಿ ಜೊನಾಸ್ ಸ್ಟೋರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಮಾಧ್ಯಮ ಹೇಳಿಕೆಯನ್ನು ಓದಿ ಹೇಳಿದ ಬಳಿಕ ಇಬ್ಬರೂ ನಾಯಕರು ಸಭಾಂಗಣದಿಂದ ತೆರಳುತ್ತಿದ್ದಾಗ ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್, `ಪ್ರಧಾನಿ ಮೋದಿ, ನೀವು ಯಾಕೆ ವಿಶ್ವದ ಅತ್ಯಂತ ಸ್ವತಂತ್ರ ಮಾಧ್ಯಮದಿಂದ ಪ್ರಶ್ನೆಗಳನ್ನು ಎದುರಿಸಲು ಇಷ್ಟಪಡುವುದಿಲ್ಲ?’ ಎಂದು ಪ್ರಶ್ನಿಸಿದ್ದಾರೆ. (ವಿಶ್ವ ಪತ್ರಿಕಾ

‘ನೀವೇಕೆ ಮಾಧ್ಯಮಗಳ ಪ್ರಶ್ನೆಗಳನ್ನು ಬಯಸುವುದಿಲ್ಲ? ಪ್ರಧಾನಿ ಮೋದಿಗೆ ನಾರ್ವೆ ಪತ್ರಕರ್ತೆಯ ಪ್ರಶ್ನೆ Read More »

ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ಬಿಂಬಿಸಿದ ನಾರ್ವೆಯ ದಿನಪತ್ರಿಕೆ| ವ್ಯಂಗ ಚಿತ್ರದಲ್ಲಿ ಜನಾಂಗೀಯ ನಿಂದನೆ!!

ಸಮಗ್ರ ನ್ಯೂಸ್: ನಾರ್ವೆಯ ಪ್ರಮುಖ ಮತ್ತು ಅತ್ಯಂತ ದೊಡ್ಡ ದಿನಪತ್ರಿಕೆಯಾದ ‘ಆಫ್ಟೆನ್‌ಪೋಸ್ಟನ್’ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಹಾವಾಡಿಗ’ನಂತೆ ಬಿಂಬಿಸುವ ಜನಾಂಗೀಯ ನಿಂದನೆಯ ವ್ಯಂಗ್ಯಚಿತ್ರವನ್ನು ಪ್ರಕಟಿಸಿದ್ದು, ಇದು ಜಾಗತಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಅವರು ಮೇ 18-19 ರವರೆಗೆ ನಾರ್ವೆಗೆ ಅಧಿಕೃತ ರಾಜತಾಂತ್ರಿಕ ಭೇಟಿ ನೀಡಿದ್ದ ಸಂದರ್ಭದಲ್ಲೇ ಪತ್ರಿಕೆಯು ಈ ವಿವಾದಾತ್ಮಕ ಕಾರ್ಟೂನ್ ಪ್ರಕಟಿಸಿದೆ. ಈ ವ್ಯಂಗ್ಯಚಿತ್ರಕ್ಕೆ ಪತ್ರಿಕೆಯು “ಒಬ್ಬ ಚತುರ ಮತ್ತು ಸ್ವಲ್ಪ ಕಿರಿಕಿರಿ ಉಂಟುಮಾಡುವ ವ್ಯಕ್ತಿ” ಎಂಬ ಅವಹೇಳನಕಾರಿ ಶೀರ್ಷಿಕೆಯನ್ನು

ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ಬಿಂಬಿಸಿದ ನಾರ್ವೆಯ ದಿನಪತ್ರಿಕೆ| ವ್ಯಂಗ ಚಿತ್ರದಲ್ಲಿ ಜನಾಂಗೀಯ ನಿಂದನೆ!! Read More »

ಮುಂಜಾನೆ ಕೇವಲ ಐದು ನೆನೆಸಿದ ಬಾದಾಮಿ ಬೀಜ ತಿನ್ನಿ| ನಿಮ್ಮ ಶರೀರದಲ್ಲಿ ಎಂಥಾ ಮ್ಯಾಜಿಕ್ ಆಗುತ್ತೆ ಗೊತ್ತಾ?

ಸಮಗ್ರ ನ್ಯೂಸ್: ಬಾದಾಮಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ ಅದನ್ನು ಹಸಿಯಾಗಿ ತಿನ್ನುವುದಕ್ಕಿಂತ, ರಾತ್ರಿ ಇಡೀ ನೀರಿನಲ್ಲಿ ನೆನೆಸಿ, ಮರುದಿನ ಬೆಳಗ್ಗೆ ಸಿಪ್ಪೆ ಸುಲಿದು ತಿನ್ನುವುದರಿಂದ ಅದರ ಗುಣಮಟ್ಟ ಮತ್ತು ಪೌಷ್ಟಿಕಾಂಶ ದುಪ್ಪಟ್ಟಾಗುತ್ತದೆ. ಒಂದು ವೇಳೆ ನೀವು ಸತತ 30 ದಿನಗಳ ಕಾಲ ದಿನಕ್ಕೆ 5 ನೆನೆಸಿದ ಬಾದಾಮಿಗಳನ್ನು ತಿಂದರೆ ನಿಮ್ಮ ದೇಹದಲ್ಲಿ ಏನೆಲ್ಲಾ ಸಕಾರಾತ್ಮಕ ಬದಲಾವಣೆಗಳಾಗುತ್ತವೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ: 1) ಜೀರ್ಣಕ್ರಿಯೆ ಸುಧಾರಿಸುತ್ತದೆ:ಬಾದಾಮಿಯ ಸಿಪ್ಪೆಯಲ್ಲಿ ‘ಟ್ಯಾನಿನ್’ ಎಂಬ

ಮುಂಜಾನೆ ಕೇವಲ ಐದು ನೆನೆಸಿದ ಬಾದಾಮಿ ಬೀಜ ತಿನ್ನಿ| ನಿಮ್ಮ ಶರೀರದಲ್ಲಿ ಎಂಥಾ ಮ್ಯಾಜಿಕ್ ಆಗುತ್ತೆ ಗೊತ್ತಾ? Read More »

ರಾಜ್ಯಾದ್ಯಂತ ಪೂರ್ವ ಮುಂಗಾರು ಅಬ್ಬರ| ಹಲವು ಜಿಲ್ಲೆಗಳಿಗೆ ‌ಬಿರುಗಾಳಿ, ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಮುಂದಿನ ಒಂದು ವಾರವೂ ಹಲವೆಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ಜೊತೆಗೆ ಗಂಟೆಗೆ 30ರಿಂದ 60 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ

ರಾಜ್ಯಾದ್ಯಂತ ಪೂರ್ವ ಮುಂಗಾರು ಅಬ್ಬರ| ಹಲವು ಜಿಲ್ಲೆಗಳಿಗೆ ‌ಬಿರುಗಾಳಿ, ಭಾರೀ ಮಳೆ ಮುನ್ಸೂಚನೆ Read More »

ಚೆನ್ನೈ:ಅಮ್ಮ ಕ್ಯಾಂಟೀನ್ ಗೆ ಮರುಜೀವ ನೀಡಿದ ಸಿಎಂ ಜೋಸೆಫ್ ವಿಜಯ್

ಸಮಗ್ರ ನ್ಯೂಸ್: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿರುವ ನಟ, ರಾಜಕಾರಣಿ ಸಿಎಂ ಜೋಸೆಫ್ ವಿಜಯ್ ಸೋಮವಾರ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದ ರಾಜ್ಯದ ಹೆಮ್ಮೆಯ ಅಮ್ಮ ಕ್ಯಾಂಟೀನ್​ಗಳ ಮೂಲ ಸೌಕರ್ಯವನ್ನು ನವೀಕರಿಸಲು ಮತ್ತು ಅಲ್ಲಿ ವಿತರಿಸಲಾಗುವ ಆಹಾರದ ಗುಣಮಟ್ಟವನ್ನು ಸುಧಾರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಚೆನ್ನೈನ ಸಚಿವಾಲಯದಲ್ಲಿ ನಡೆದ ಹೈ-ಪ್ರೊಫೈಲ್ ಸಭೆಯಲ್ಲಿ ಕ್ಯಾಂಟೀನ್‌ಗಳ

ಚೆನ್ನೈ:ಅಮ್ಮ ಕ್ಯಾಂಟೀನ್ ಗೆ ಮರುಜೀವ ನೀಡಿದ ಸಿಎಂ ಜೋಸೆಫ್ ವಿಜಯ್ Read More »

ಬಾದಾಮಿ ಗುಹಾಂತರ ದೇವಾಲಯದಲ್ಲಿ ಚಪ್ಪಲಿ‌ ಧರಿಸಿ ಓಡಾಡಿದ ಸಿಬ್ಬಂದಿ| ಪ್ರವಾಸಿಗ ಮಹಿಳೆಯಿಂದ ತರಾಟೆ

ಸಮಗ್ರ ನ್ಯೂಸ್: ಬಾದಾಮಿ ಗುಹಾಲಯದಲ್ಲಿ ಚಪ್ಪಲಿ ಧರಿಸಿ ಕುಳಿತಿದ್ದ ಮುಸ್ಲಿಂ ಯುವತಿಯೊಬ್ಬಳನ್ನು ನೋಡಿ ಕೆಂಡಾಮಂಡಲರಾದ ಪ್ರವಾಸಿಗರು ಆಕೆಯನ್ನು ತರಾಟೆಗೆ ತೆಗೆದುಕೊಂಡ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತಿಹಾಸ ಪ್ರಸಿದ್ಧ ಬಾದಾಮಿ ಗುಹಾಲಯಗಳನ್ನು ವೀಕ್ಷಿಸಲು ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇಲ್ಲಿ ವಿಶ್ವವಿಖ್ಯಾತ ಬಂಡೆಗಲ್ಲು ಗುಹಾ ದೇವಾಲಯಗಳಿವೆ. ಪ್ರವಾಸದ ಜೊತೆಗೆ ಹಿಂದೂಗಳಿಗೆ ಇದು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಇದೇ ರೀತಿ ಇಲ್ಲಿಗೆ ಪ್ರವಾಸ ಬಂದಿದ್ದ ಮಹಿಳೆಯೊಬ್ಬರು ದೇವಾಲಯದ ಆವರಣದಲ್ಲಿ ಚಪ್ಪಲಿ ಧರಿಸಿ ಕುಳಿತಿದ್ದ ಯುವತಿಯನ್ನು ನೋಡಿ

ಬಾದಾಮಿ ಗುಹಾಂತರ ದೇವಾಲಯದಲ್ಲಿ ಚಪ್ಪಲಿ‌ ಧರಿಸಿ ಓಡಾಡಿದ ಸಿಬ್ಬಂದಿ| ಪ್ರವಾಸಿಗ ಮಹಿಳೆಯಿಂದ ತರಾಟೆ Read More »

ದುಬಾರೆ: ಕಾಳಗದಲ್ಲಿ ಗಂಭೀರ ಗಾಯಗೊಂಡಿದ್ದ ಆನೆ ‘ಮಾರ್ತಾಂಡ’ ಸಾವು

ಸಮಗ್ರ ನ್ಯೂಸ್: ಕುಶಾಲನಗರ ಸಮೀಪದ ದುಬಾರೆ ಆನೆ ಶಿಬಿರದಲ್ಲಿ ನಡೆದ ಸಾಕಾನೆಗಳ ನಡುವಿನ ಭೀಕರ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ (35 ವರ್ಷ) ಆನೆಯು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದೆ. ಮೇ 18 ರ ಸೋಮವಾರ ಮಧ್ಯಾಹ್ನ ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದ ವೇಳೆ ಸೌಮ್ಯ ಸ್ವಭಾವದ ‘ಮಾರ್ತಾಂಡ’ ಆನೆ ಮೇಲೆ, ದಸರಾ ಆನೆ ‘ಕಂಜನ್’ (28 ವರ್ಷ) ಭೀಕರವಾಗಿ ದಾಳಿ ನಡೆಸಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ. ಆನೆಗಳ

ದುಬಾರೆ: ಕಾಳಗದಲ್ಲಿ ಗಂಭೀರ ಗಾಯಗೊಂಡಿದ್ದ ಆನೆ ‘ಮಾರ್ತಾಂಡ’ ಸಾವು Read More »