ದೇಶ-ವಿದೇಶ

ಶೀಘ್ರದಲ್ಲೇ 12+ ಮಕ್ಕಳಿಗೆ ಲಸಿಕೆ

ನವದೆಹಲಿ: 12 ರಿಂದ 18 ವರ್ಷದ ಮಕ್ಕಳಿಗೆ ಶೀಘ್ರವೇ ಕೊರೋನಾ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಮುಖ ಔಷಧ ಕಂಪನಿ ಜೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿದ ಜೈಕೋವ್ ಡಿ ಲಸಿಕೆಯನ್ನು 12 ರಿಂದ 18 ವರ್ಷದ ಮಕ್ಕಳಿಗೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ. ಭಾರತ್ ಬಯೋಟೆಕ್ ಲಸಿಕೆಯನ್ನು 12 -18 ವರ್ಷದವರ ಮೇಲೆ ಪ್ರಯೋಗಕ್ಕೆ ಕಳೆದ ಮೇ ನಲ್ಲಿ ಅನುಮತಿ ನೀಡಲಾಗಿದೆ. ಅನುಮತಿ ದೊರೆತ ಕೂಡಲೇ ಕ್ಲಿನಿಕಲ್ ಪ್ರಯೋಗ ಮುಗಿಸಿದ ಜೈಡಸ್ […]

ಶೀಘ್ರದಲ್ಲೇ 12+ ಮಕ್ಕಳಿಗೆ ಲಸಿಕೆ Read More »

ಜಾಲತಾಣಗಳಲ್ಲಿ ಕ್ಲಬ್ ಹೌಸ್ ದೇ ಮಾತು | ಹಾಗಿದ್ರೆ ಏನಿದು ಕ್ಲಬ್ ಹೌಸ್? | ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಮಾಜಿಕ ಜಾಲತಾಣಗಳಲ್ಲಿ ಈಗ ಕ್ಲಬ್ ಹೌಸ್ ಬಗ್ಗೆಯೇ ಮಾತು ಹೆಚ್ಚುತ್ತಿದೆ. ಈ ಕ್ಲಬ್‌ನಲ್ಲಿ ಇವತ್ತು ಈ ನಟಿ, ನಿರ್ದೇಶಕ ಬಂದಿದ್ದರು. ಬಹಳ ಚೆನ್ನಾಗಿ ಮಾತನಾಡಿದರು ಎಂಬ ಮಾತುಗಳನ್ನು ನೀವು ಕೇಳಿರಬಹುದು. ಹೀಗಾಗಿ ನಾನು ಕ್ಲಬ್ ಹೌಸ್ ಸೇರಬೇಕು, ಮಾತನಾಡಬೇಕು ಎಂದು ಅನಿಸಿದ್ದರೂ ಜಾಯಿನ್ ಆಗುವುದು ಹೇಗೆ? ಜಾಯಿನ್ ಆದ ನಂತರ ಮಾತನಾಡುವುದು ಹೇಗೆ? ಕ್ಲಬ್ ಸೃಷ್ಟಿ ಮಾಡುವುದು ಹೇಗೆ? ಹೀಗೆ ಹಲವು ಪ್ರಶ್ನೆಗಳು ನಿಮ್ಮಲ್ಲಿ ಮೂಡುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ಇಲ್ಲಿ ಸರಳವಾಗಿ

ಜಾಲತಾಣಗಳಲ್ಲಿ ಕ್ಲಬ್ ಹೌಸ್ ದೇ ಮಾತು | ಹಾಗಿದ್ರೆ ಏನಿದು ಕ್ಲಬ್ ಹೌಸ್? | ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಲಸಿಕೆ ಹಾಕಿಸಿಕೊಳ್ಳದವರಲ್ಲಿ ‘ಡೆಲ್ಟಾ’ದ ಹಾವಳಿ ವೇಗ ಪಡೆದುಕೊಳ್ತಿದೆ – ವಿಶ್ವ ಆರೋಗ್ಯ ಸಂಸ್ಥೆ ಕಳವಳ

ನವದೆಹಲಿ: ಕೋವಿಡ್-19ರ ಡೆಲ್ಟಾ ರೂಪಾಂತರವು ಇಲ್ಲಿಯವರೆಗೆ ಗುರುತಿಸಲಾದ ರೂಪಾಂತರಗಳಲ್ಲಿ ‘ಅತ್ಯಂತ ಟ್ರಾನ್ಸ್ ಮಿಸಿಬಲ್’ ಆಗಿದೆ ಮತ್ತು ಲಸಿಕೆ ಹಾಕದ ಜನರಲ್ಲಿ ವೇಗವಾಗಿ ಹರಡುತ್ತಿದೆ ಎಂದು ಡಬ್ಲ್ಯೂಹೆಚ್‌ಒ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಘೆಬ್ರೆಯೆಸಸ್ ಎಚ್ಚರಿಸಿದ್ದಾರೆ. ಜಿನೀವಾದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಬ್ಲ್ಯೂಹೆಚ್‌ಒ ಮಹಾ ನಿರ್ದೇಶಕ ಘೆಬ್ರೆಯೆಸಸ್ , ‘ಪ್ರಸ್ತುತ ಜಾಗತಿಕವಾಗಿ ಡೆಲ್ಟಾ ರೂಪಾಂತರದ ಬಗ್ಗೆ ಸಾಕಷ್ಟು ಕಾಳಜಿ ಇದೆ ಅನ್ನೋದು ನನಗೆ ತಿಳಿದಿದೆ. ಆದ್ರೆ, ಡಬ್ಲ್ಯೂಹೆಚ್‌ಒ ಕೂಡ ಅದರ ಬಗ್ಗೆ ಕಾಳಜಿ ವಹಿಸಿದೆ’ ಎಂದರು. ‘ಡೆಲ್ಟಾ ಇಲ್ಲಿಯವರೆಗೆ ಗುರುತಿಸಲಾದ

ಲಸಿಕೆ ಹಾಕಿಸಿಕೊಳ್ಳದವರಲ್ಲಿ ‘ಡೆಲ್ಟಾ’ದ ಹಾವಳಿ ವೇಗ ಪಡೆದುಕೊಳ್ತಿದೆ – ವಿಶ್ವ ಆರೋಗ್ಯ ಸಂಸ್ಥೆ ಕಳವಳ Read More »

ಹೊಸ ಸ್ಮಾರ್ಟ್ಫೋನ್ ರಿಲಯನ್ಸ್, ಗೂಗಲ್‌ನ ಸಹಭಾಗಿತ್ವದಿಂದ ಮಾರುಕಟ್ಟೆಗೆ ಬರಲಿದೆ | ಈ ಬಗ್ಗೆ ತಿಳಿದುಕೊಳ್ಳಿ

ದೆಹಲಿ: ರಿಲಯನ್ಸ್ ಜಿಯೋ ಗೂಗಲ್ ಜೊತೆಗೂಡಿ ಜಿಯೋಫೋನ್ ಒಂದನ್ನು ಮಾರುಕಟ್ಟೆಗೆ ತರಲು ಯೋಜನೆ ಹಾಕಿಕೊಂಡಿದೆ. 4ಜಿ ಸಾಮರ್ಥ್ಯದ ಆ್ಯಡ್ರಾಂಯ್ಡ್ ಫೋನ್‌ನ್ನು ಕೈಗೆಟುಕುವ ದರದಲ್ಲಿ ನೀಡಲು ಯೋಜಿಸಿಕೊಂಡಿದೆ. ಜಿಯೋಫೋನ್ ನೆಕ್ಸ್ಟ್ ಎಂಬ ಮಾದರಿಯ ಈ ಮೊಬೈಲ್ ಫೋನ್‌ನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ೪೪ನೇ ವಾರ್ಷಿಕ ಜನರಲ್ ಮೀಟಿಂಗ್‌ನಲ್ಲಿ ಗುರುವಾರ ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ಈ ಹೊಸ ಸ್ಮಾರ್ಟ್ಫೋನ್ ರಿಲಯನ್ಸ್ ಜಿಯೋ ಹಾಗೂ ಗೂಗಲ್‌ನ ಸಹಭಾಗಿತ್ವದಿಂದ ಮಾರುಕಟ್ಟೆಗೆ ಬರಲಿದ್ದು ಕಳೆದ ವರ್ಷವೇ ಮುಕೇಶ್ ಅಂಬಾನಿ ಮತ್ತು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ

ಹೊಸ ಸ್ಮಾರ್ಟ್ಫೋನ್ ರಿಲಯನ್ಸ್, ಗೂಗಲ್‌ನ ಸಹಭಾಗಿತ್ವದಿಂದ ಮಾರುಕಟ್ಟೆಗೆ ಬರಲಿದೆ | ಈ ಬಗ್ಗೆ ತಿಳಿದುಕೊಳ್ಳಿ Read More »

ಗ್ರೂಪ್ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ |ಬಳಕೆದಾರರೇ ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಿ

ಜನಪ್ರಿಯ ಟೆಲಿಗ್ರಾಂ ಅಂತಿಮವಾಗಿ ಗ್ರೂಪ್ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದೀಗ ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಮತ್ತು ಡೆಸ್ಕ್ಟಾಪ್ ಬಳಕೆದಾರರು ಗ್ರೂಪ್ ವಿಡಿಯೋ ಕರೆಯನ್ನು ಮಾಡಬಹುದಾಗಿದೆ. ಟೆಲಿಗ್ರಾಂ ಒಂದು ವರ್ಷಗಳ ಹಿಂದೆಯೇ ವಿಡಿಯೋ ಕರೆಯ ಬಗ್ಗೆ ಹೇಳಿಕೊಂಡಿತ್ತು. ಆದರೀಗ ವೈಶಿಷ್ಟ್ಯಯವನ್ನು ಪರಿಚಯಿಸಿದೆ. ಟೆಲಿಗ್ರಾಂ ಬಳಕೆದಾರರು ಆ್ಯಪ್ ಅಪ್‌ಡೇಟ್ ಮಾಡುವ ಮೂಲಕ ನೂತನ ಫೀಚರ್ ಬಳಕೆಗೆ ಸಿಗಲಿದೆ. ಲಂಡನ್ ಮೂಲದ ಟೆಲಿಗ್ರಾಂ ಆ್ಯಪ್‌ನ ಹೊಸ ಕ್ರಮವು ಫೇಸ್‌ಬುಕ್, ವಾಟ್ಸ್ಪ್ ಮತ್ತು ಆ್ಯಪಲ್‌ನ ಫೇಸ್‌ಟೈಂ ಅನ್ನು ತೆಗೆದುಕೊಳ್ಳುತ್ತದೆ. ಟೆಲಿಗ್ರಾಂ ಗ್ರೂಪ್ ಕರೆ

ಗ್ರೂಪ್ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ |ಬಳಕೆದಾರರೇ ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಿ Read More »

ಮೋದಿ‌ ನೇತೃತ್ವದ ಸರ್ವಪಕ್ಷ ಸಭೆಯಲ್ಲಿ ಸರ್ವನಿಯಮ ಉಲ್ಲಂಘನೆ | ಇವ್ರು ಹೇಳೋದು ಶಾಸ್ತ್ರ, ಇಕ್ಕೋದು ಗಾಳ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಶುಕ್ರವಾರ ಸರ್ವಪಕ್ಷಗಳ ಸಭೆ ನಡೆಸಿದ್ದು, ಈ ಸಭೆಯಲ್ಲಿ ಭಾಗವಹಿಸಿದ್ದ ಅಷ್ಟೂ ಹಿರಿಯ ರಾಜಕಾರಣಿಗಳು ಕೊರೊನಾ ನಿಯಮ ಉಲ್ಲಂಘಿಸಿ‌ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರ ಅವಿವೇಕತನದಿಂದಾಗಿ ಜನಸಾಮಾನ್ಯರು ಇವರಿಗೆ ಕೊರೊನ ಬರಲ್ವೇ? ಅಂತ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.ಸರ್ವ ಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಜಮ್ಮು ಕಾಶ್ಮೀರದ ಮಾಜಿ ಸಿಎಂಗಳಾದ ಓಮರ್ ಅಬ್ದುಲ್ಲಾ, ಮೆಹಬೂಬ ಮುಪ್ತಿ, ಪಾರೂಕ್

ಮೋದಿ‌ ನೇತೃತ್ವದ ಸರ್ವಪಕ್ಷ ಸಭೆಯಲ್ಲಿ ಸರ್ವನಿಯಮ ಉಲ್ಲಂಘನೆ | ಇವ್ರು ಹೇಳೋದು ಶಾಸ್ತ್ರ, ಇಕ್ಕೋದು ಗಾಳ Read More »

ಗರ್ಭಿಣಿಯರಿಗೆ ಲಸಿಕೆ ನೀಡಲು ಗ್ರೀನ್ ಸಿಗ್ನಲ್

ನವದೆಹಲಿ: ದೇಶದ ಎಲ್ಲಾ ಗರ್ಭಿಣಿಯರಿಗೆ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಲಸಿಕೆ ಗರ್ಭಿಣಿಯರಿಗೆ ಉಪಯುಕ್ತವಾಗಲಿದೆ ಮತ್ತು ಅದನ್ನು ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ್ ಹೇಳಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಗರ್ಭಿಣಿಯರಿಗೆ ಲಸಿಕೆ ನೀಡಲು ಅನುಮತಿಸಿತ್ತು. ಆದರೆ ಭಾರತದಲ್ಲಿ ವೈದ್ಯಕೀಯ ಪ್ರಯೋಗ ದತ್ತಾಂಶದ ಕೊರತೆ ಇತ್ತು ಎಂದು ಹೇಳಲಾಗಿತ್ತು. ಇದೀಗ ವೈಜ್ಞಾನಿಕ ಪುರಾವೆ ಗಳನ್ನು ಅಧ್ಯಯನ ಮಾಡುವ

ಗರ್ಭಿಣಿಯರಿಗೆ ಲಸಿಕೆ ನೀಡಲು ಗ್ರೀನ್ ಸಿಗ್ನಲ್ Read More »

ಊಟದ ಬಳಿಕ ತೇಗದ, ಹೂಸು ಬಿಡದ ವರ ಬೇಕಾಗಿದ್ದಾನೆ : ಕಂಡಿಷನ್ಸ್ ಓಕೆ ಆದರೆ ಇಮೇಲ್ ವಿಳಾಸಕ್ಕೆ ನಿಮ್ಮ ವಿವರ ಕಳುಹಿಸಿ!!

ದೆಹಲಿ: ಕಾಲ ಕಳೆದಂತೆ ತಮಗೆ ಬೇಕಾದಂತ ವರನೇ ಗಂಡನಾಗಿ ಬೇಕು, ಮದುವೆಯಾಗುವ ಯುವತಿ ಹೀಗೆ ಇರಬೇಕು ಎಂಬ ಕಂಡಿಷನ್ಸ್ ಹೆಚ್ಚಾಗಿದೆ. ಮದುವೆಗೆ ವರನನ್ನು, ವಧುವನ್ನು ಹುಡುಕುವುದು ಸುಲಭವೂ ಹೌದು ಕಷ್ಟವೂ ಹೌದು. ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ನೂರಾರು ಆಯ್ಕೆಗಳಿವೆ, ಆದರೆ ಅದರಲ್ಲಿ ತಮಗೆ ಒಪ್ಪುವವರನ್ನು ಆಯ್ಕೆ ಮಾಡುವುದು ಒಂದು ಸವಾಲಾಗಿದೆ. ಸುದ್ದಿ ಪತ್ರಿಕೆಗಳಲ್ಲಿ ವರ ಬೇಕಾಗಿದ್ದಾರೆ, ವಧು ಬೇಕಾಗಿದ್ದಾರೆ ಎಂಬ ಜಾಹೀರಾತುಗಳಿಗೇನು ಕಮ್ಮಿ ಇಲ್ಲ. ತಮಗೆ ಬೇಕಾದಂತೆ ನೋಡಲು ಹೇಗಿರಬೇಕು, ವಿದ್ಯಾರ್ಹತೆ ಎಷ್ಟಿರಬೇಕು , ಜಾತಿ, ಮತ ಎಲ್ಲವನ್ನೂ

ಊಟದ ಬಳಿಕ ತೇಗದ, ಹೂಸು ಬಿಡದ ವರ ಬೇಕಾಗಿದ್ದಾನೆ : ಕಂಡಿಷನ್ಸ್ ಓಕೆ ಆದರೆ ಇಮೇಲ್ ವಿಳಾಸಕ್ಕೆ ನಿಮ್ಮ ವಿವರ ಕಳುಹಿಸಿ!! Read More »

ಬೆತ್ತಲಾಗಿ ನಿಂತು ಮಹಿಳೆಯರಿಗೆ ವಿಡಿಯೋ ಕಾಲ್ | ನಿತ್ಯ ಬ್ಲಾಕ್’ಮೇಲ್ ಮಾಡುವುದೇ ಈತನ ಕೆಲಸ

ಲಖನೌ: ಅಪರಿಚಿತ ಮಹಿಳೆಯರಿಗೆ ಬೆತ್ತಲಾಗಿ ನಿಂತು ವಿಡಿಯೋ ಕಾಲ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಯುವಕನೊಬ್ಬನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ನಿರಂತರವಾಗಿ ಯುವಕನ ಉಪಟಳದಿಂದ ಬೇಸತ್ತಿದ್ದ ಮಹಿಳೆಯರು ಉತ್ತರಪ್ರದೇಶದ ಮಹಿಳಾ ಸಹಾಯವಾಣಿಯೊಂದಕ್ಕೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿ ಶುವ್ ಕುಮಾರ್ ವರ್ಮಾ ಎಂಬಾತನನ್ನು ಬಂಧಿಸಿದ್ದಾರೆ. ಬಿಎ ಪದವೀಧರನಾಗಿರುವ ಈತ ಸ್ಟೇಷನರಿ ಅಂಗಡಿಯೊಂದನ್ನು ನಡೆಸುತ್ತಿದ್ದ. ನಿತ್ಯ ಕೆಲಸ ಮುಗಿದ ಮೇಲೆ ಮನೆಗೆ ತೆರಳಿ ಯಾವುದಾದರೂ ಮೊಬೈಲ್ ನಂಬರ್ ಟೈಪ್ ಮಾಡಿ ಟ್ರೂಕಾಲರ್ ಮೂಲಕ ಪರೀಕ್ಷಿಸುತ್ತಿದ್ದ. ನಂಬರ್

ಬೆತ್ತಲಾಗಿ ನಿಂತು ಮಹಿಳೆಯರಿಗೆ ವಿಡಿಯೋ ಕಾಲ್ | ನಿತ್ಯ ಬ್ಲಾಕ್’ಮೇಲ್ ಮಾಡುವುದೇ ಈತನ ಕೆಲಸ Read More »

ಕನಸಿನಲ್ಲಿ ಬಂದು ನಿರಂತರ ಅತ್ಯಾಚಾರ……! | ಪೊಲೀಸರಿಗೆ ದೂರು ನೀಡಿದ ಮಹಿಳೆ

ಔರಂಗಬಾದ್: ಮಂತ್ರವಾದಿಯೊಬ್ಬ ನಿತ್ಯ ಕನಸಿನಲ್ಲಿ ಬಂದು ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದಾನೆ ಎಂದು ಆರೋಪಿಸಿ ಮಹಿಯೊಬ್ಬಳು ಪೊಲೀಸರಿಗೆ ದೂರು ನೀಡಿದ ಘಟನೆ ಜಿಲ್ಲೆಯ ಕುದ್ವ ಎಂಬಲ್ಲಿ ನಡೆದಿದೆ. ನನ್ನ ಮಗನಿಗೆ ಹುಷಾರಿಲ್ಲದೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೂ ಆತ ಗುಣಮುಖವಾಗಿರಲಿಲ್ಲ. ಹಾಗಾಗಿ ಮಂತ್ರವಾದಿ ಪ್ರಶಾಂತ್ ಚತುರ್ವೇದಿ ಬಳಿ ತೆರಳಿ ಖಾಯಿಲೆ ಗುಣಪಡಿಸುವಂತೆ ಕೇಳಿಕೊಂಡಿದ್ದೆ. ಆ ವೇಳೆ ಆತ ಮಗುವಿನ ಚೇತರಿಕೆಗಾಗಿ ಮಂತ್ರ ಒಂದನ್ನು ಹೇಳಿಕೊಟ್ಟಿದ್ದ. ಅದನ್ನು ಪಠಿಸುತ್ತಾ ದಿನನಿತ್ಯ ಶಾಸ್ತ್ರ ಒಂದನ್ನು ಮಾಡಲು ತಿಳಿಸಿದ್ದ. ಆತನ ಸೂಚನೆಯನ್ನು

ಕನಸಿನಲ್ಲಿ ಬಂದು ನಿರಂತರ ಅತ್ಯಾಚಾರ……! | ಪೊಲೀಸರಿಗೆ ದೂರು ನೀಡಿದ ಮಹಿಳೆ Read More »