ದೇಶ-ವಿದೇಶ

ನಾಪತ್ತೆಯಾದ ರಷ್ಯಾ ವಿಮಾನ ಸಮುದ್ರದಲ್ಲಿ ಪತನ

ರಷ್ಯಾ : ರಷ್ಯಾದ ದೂರದ ಪೂರ್ವದಲ್ಲಿ ಇಳಿಯಲು ಸಿದ್ಧತೆ ನಡೆಸುತ್ತಿದ್ದಾಗ 28 ಜನರಿದ್ದ ವಿಮಾನ ಕಾಣೆಯಾದ ನಂತರ ಕಾಣೆಯಾದ ಎಎನ್-26 ವಿಮಾನ ಸಮುದ್ರಕ್ಕೆ ಅಪ್ಪಳಿಸಿದ ಸ್ಥಳವನ್ನು ರಷ್ಯಾದ ತುರ್ತು ಸೇವೆಗಳು ಪತ್ತೆ ಮಾಡಿವೆ ಎಂದು ಆರ್ ಐಎ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ. ಹಲವಾರು ಹಡಗುಗಳು ಅಪಘಾತದ ಸ್ಥಳಕ್ಕೆ ಹೋಗುತ್ತಿದ್ದವು, ತುರ್ತು ಸೇವೆಗಳನ್ನು ಉಲ್ಲೇಖಿಸಿದೆ. ವಿಮಾನವು ಒಖೋಟ್ಸ್ಕ್ ಸಮುದ್ರ ಕರಾವಳಿಯ ಬಳಿಯ ಪಾಲನಾ ಹಳ್ಳಿಗೆ ಹೋಗುವ ಮಾರ್ಗದಲ್ಲಿತ್ತು ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ನಾಪತ್ತೆಯಾಗಿದ್ದಂತ […]

ನಾಪತ್ತೆಯಾದ ರಷ್ಯಾ ವಿಮಾನ ಸಮುದ್ರದಲ್ಲಿ ಪತನ Read More »

ಕೈದಿಗಳೊಂದಿಗೆ ಕಾಮಕೇಳಿ‌ ನಡೆಸಿದ ಮಹಿಳಾ ಪೊಲೀಸ್…!

ಕ್ಯಾಲಿಫೋರ್ನಿಯಾ(ಅಮೆರಿಕ): ಕರ್ತವ್ಯನಿರತ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬಳು ಜೈಲಿನಲ್ಲಿ ಕೈದಿ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಆ ವೇಳೆ ಇತರ 11 ಕೈದಿಗಳಿದ್ದರೂ ಅವರ ಎದುರೇ ಕಾಮದಾಟ ನಡೆಸಿ ಜೈಲುಶಿಕ್ಷೆಗೆ ಗುರಿಯಾಗಿದ್ದಾಳೆ. ಕೈದಿ ಜತೆ ಸೆಕ್ಸ್​ ಮಾಡಿ ಜೈಲು ಸೇರಿದವಳ ಹೆಸರು ಟೀನಾ ಗೊನ್ಜಾಲೆಜ್​. 26 ವರ್ಷದ ಈಕೆ ಪ್ರೆಸ್ನೊ ಕೌಂಟಿ ಠಾಣೆಯ ಕರೆಕ್ಷನ್​ ಅಧಿಕಾರಿ. 2016ರಿಂದ ಕೌಂಟಿ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ ಟೀನಾ, ತನಗೆ ಮೂಡ್ ಬಂದಾಗಲೆಲ್ಲ ಕೈದಿಗಳ ಜತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಂತೆ. ಕೆಲವರೊಂದಿಗೆ ಲೈಂಗಿಕ ಕ್ರಿಯನ್ನೂ

ಕೈದಿಗಳೊಂದಿಗೆ ಕಾಮಕೇಳಿ‌ ನಡೆಸಿದ ಮಹಿಳಾ ಪೊಲೀಸ್…! Read More »

ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರಚಂದ್ ಗೆಹ್ಲೋಟ್

ನವದೆಹಲಿ: ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ತಾವರ್‌ಚಂದ್‌ ಗೆಹ್ಲೋಟ್‌ ಅವರು ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರು ಮಂಗಳವಾರ ನೇಮಕಾತಿ ಆದೇಶ ಮಾಡಿದ್ದಾರೆ. ಹಾಲಿ ರಾಜ್ಯಪಾಲ ವಜುಭಾಯಿವಾಲಾ ಅವರ ಅವಧಿ ಪೂರ್ಣಗೊಂಡಿದೆ. ಅವರ ಸ್ಥಾನಕ್ಕೆ ತಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸಚಿವ ಸಂಪುಟದ ಪುನರ್‌ರಚನೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಈ ನೇಮಕಾತಿ ಆದೇಶ ಹೊರಬಂದಿದೆ. ಮೂರು ಬಾರಿ ಮಧ್ಯಪ್ರದೇಶ ಶಾಸಕರಾಗಿ, ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ

ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರಚಂದ್ ಗೆಹ್ಲೋಟ್ Read More »

ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ತಗ್ಗಿದ ಸೋಂಕು, _ ತಿಂಗಳಲ್ಲೇ ಅತೀ ಕನಿಷ್ಠ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 34,703 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 111 ದಿನಗಳಲ್ಲೇ ಮೊದಲ ಬಾರಿ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ.ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,06,19,932ಕ್ಕೆ ಏರಿಕೆಯಾಗಿದೆ. ಕೋವಿಡ್ ಸಾವಿನ ಸಂಖ್ಯೆಯೂ ಕಡಿಮೆಯಾಗಿದ್ದು, ಕಳೆದ 24 ಗಂಟೆಯಲ್ಲಿ 553 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದುವರೆಗೂ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 4,03,281ಕ್ಕೆ ಏರಿಕೆಯಾಗಿದೆ.ಇನ್ನು ದೇಶದಲ್ಲಿ 4,64,357ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 2,97,52,294ಜನರು

ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ತಗ್ಗಿದ ಸೋಂಕು, _ ತಿಂಗಳಲ್ಲೇ ಅತೀ ಕನಿಷ್ಠ ಸೋಂಕು ಪತ್ತೆ Read More »

ಮುಸ್ಲಿಮರು ಭಾರತದಲ್ಲಿ ಇರಬಾರದು ಎನ್ನುವವ ಹಿಂದೂ ಅಲ್ಲ- ಮೋಹನ್ ಭಾಗವತ್

ಭಾರತೀಯರ ಡಿಎನ್​ಎ ಒಂದೇ ಅಂತ ಆರ್​ಎಸ್​​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಹಿಂದುಸ್ತಾನಿ ಫಸ್ಟ್​, ಹಿಂದುಸ್ತಾನ್ ಫಸ್ಟ್​ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜನ ಪೂಜೆ ಮಾಡುವ ವಿಧಾನದಿಂದ ಅವರನ್ನು ವಿಂಗಡಿಸಲು ಸಾಧ್ಯವಿಲ್ಲ. ಗೋರಕ್ಷಣೆ ನೆಪದಲ್ಲಿ ಹತ್ಯೆ ಮಾಡುವವರು ಹಿಂದುತ್ವಕ್ಕೆ ವಿರುದ್ಧವಾಗಿದ್ದಾರೆ. ಮುಸ್ಲಿಮರು ಭಾರತದಲ್ಲಿ ಇರಬಾರದು ಅಂತ ಹೇಳುವವನು ಹಿಂದೂನೇ ಅಲ್ಲ. ಭಾರತದಲ್ಲಿ ಇಸ್ಲಾಂ ಅಪಾಯದಲ್ಲಿದೆ ಅನ್ನೋ ಭಯದ ಸುಳಿಯಲ್ಲಿ ಸಿಲುಕಬೇಡಿ..ಐಕ್ಯತೆ ಇದ್ರೆ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ. ಆದ್ರೆ ಆ

ಮುಸ್ಲಿಮರು ಭಾರತದಲ್ಲಿ ಇರಬಾರದು ಎನ್ನುವವ ಹಿಂದೂ ಅಲ್ಲ- ಮೋಹನ್ ಭಾಗವತ್ Read More »

ಸರ್ಕಾರಿ ಕೆಲಸಗಳು ವಿಳಂಬ ಆಗ್ತಿದೆಯಾ? ಮೋದಿಗೆ ಪತ್ರ ಬರೆಯಿರಿ. ಹೇಗೆ ಗೊತ್ತಾ?

ಅನೇಕ ಬಾರಿ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಅಂದರೆ ಸಾರ್ವಜನಿಕರಿಗೆ ಅಲ್ಲಿನ ಸಿಬ್ಬಂದಿಯಿಂದ ಕಿರಿಕಿರಿ ಉಂಟಾಗುವುದು ಇದೆ. ಇಂತಹ ಸಂದರ್ಭಗಳಲ್ಲಿ ಅನೇಕರು ಮೇಲಾಧಿಕಾರಿಗಳಿಗೆ ದೂರನ್ನ ಸಹ ನೀಡುತ್ತಾರೆ. ಆದರೆ ಈ ದೂರುಗಳನ್ನ ಕೆಲವರು ಗಂಭೀರವಾಗಿ ಪರಿಗಣಿಸೋದೇ ಇಲ್ಲ. ಆದರೆ ಇನ್ಮೇಲೆ ನೀವು ಈ ರೀತಿಯ ಸಮಸ್ಯೆಗಳನ್ನ ಎದುರಿಸಬೇಕಾಗಿ ಬರೋದಿಲ್ಲ. ಏಕೆಂದರೆ ಸಾರ್ವಜನಿಕರು ನೇರವಾಗಿ ದೂರುಗಳನ್ನ ಪ್ರಧಾನಮಂತ್ರಿ ಕಾರ್ಯಾಲಯಕ್ಕೇ ತಲುಪಿಸಬಹುದಾಗಿದೆ. ನೀವು ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೇ ದೂರನ್ನ ಸಲ್ಲಿಸಬೇಕು ಎಂದುಕೊಂಡಿದ್ದರೆ ಅನಾಯಾಸವಾಗಿ ಈ ಕೆಲಸವನ್ನ ಮಾಡಬಹುದಾಗಿದೆ. ಮನೆಯಲ್ಲಿ ಕುಳಿತುಕೊಂಡೇ

ಸರ್ಕಾರಿ ಕೆಲಸಗಳು ವಿಳಂಬ ಆಗ್ತಿದೆಯಾ? ಮೋದಿಗೆ ಪತ್ರ ಬರೆಯಿರಿ. ಹೇಗೆ ಗೊತ್ತಾ? Read More »

ಅಪ್ಪ-ಮಗನಿಗೆ ಒಬ್ಬಳೇ ಹೆಂಡತಿ…! ಮಾಹಿತಿ ಹಕ್ಕಿನ ವರದಿ ನೋಡಿ ಇಬ್ಬರೂ ಶಾಕ್

ಲಖನೌ: ಮದುವೆಯಾಗಿದ್ದ ಹೆಂಡತಿ ದೂರವಾದ ಮೇಲೆ ಅಕೆಯನ್ನು ಮತ್ತೆ ಎಲ್ಲೇ ನೋಡಿದರೂ ತಮ್ಮ ಹಳೆ ನೆನಪುಗಳು ಕಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವಕನ ಕಥೆ ಕೇಳಿದರೆ ಅಯ್ಯೋ ಪಾಪ ಎನಿಸದಿರದು. ತಾನು ಮದುವೆಯಾಗಿದ್ದ ಹೆಂಡತಿಯೇ ತನ್ನಿಂದ ದೂರಾಗಿ ತನ್ನ ತಂದೆಯನ್ನೇ ವರಿಸಿದ್ದಾಳೆ ಎಂದು ತಿಳಿದು ಯುವಕ ಕಂಗಾಲಾಗಿದ್ದಾನೆ. ಯುವಕನೊಬ್ಬ 2016ರಲ್ಲಿ ಯುವತಿಯೊಬ್ಬಳನ್ನು ಮದುವೆಯಾಗಿದ್ದನಂತೆ. ಆ ವೇಳೆಗೆ ಇಬ್ಬರೂ ಅಪ್ರಾಪ್ತರಾಗಿದ್ದರಾದರೂ ಅವರು ಆರು ತಿಂಗಳ ಕಾಲ ಸಂಸಾರ ನಡೆಸಿದ್ದರು. ಅದಾದ ಮೇಲೆ ಗಂಡ ಮದ್ಯಪಾನ ಮಾಡುತ್ತಾನೆ ಎನ್ನುವ ಕಾರಣ

ಅಪ್ಪ-ಮಗನಿಗೆ ಒಬ್ಬಳೇ ಹೆಂಡತಿ…! ಮಾಹಿತಿ ಹಕ್ಕಿನ ವರದಿ ನೋಡಿ ಇಬ್ಬರೂ ಶಾಕ್ Read More »

ಒಂದೇ ವಾರದಲ್ಲಿ 700ಕ್ಕೂ ಅಧಿಕ ಸಾವು | ನೋಡನೋಡುತ್ತಿದ್ದಂತೆ ಹೊತ್ತಿ ಉರಿಯಿತು ಹಳ್ಳಿ

ಕೆನಡಾ: ಉಷ್ಣಾಂಶ ಏರಿಕೆಯಿಂದ ಕಳೆದೊಂದು ವಾರದಲ್ಲಿ ಏಳು ನೂರಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆ ಕೆನಡಾದಲ್ಲಿ ನಡೆದಿದೆ. ಬಿಸಿಗಾಳಿಯ ಪ್ರಭಾವದಿಂದ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು ಕಾಡು-ನಾಡು ಹೊತ್ತಿ ಉರಿಯುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಬೆಂಕಿ ಕ್ಷಣಮಾತ್ರದಲ್ಲಿ ಜನವಸತಿ ಪ್ರದೇಶಗಳಲ್ಲಿ ಹಬ್ಬಿಕೊಳ್ಳುತ್ತಿದೆ. ಸಿಡಿಲಿನ ಅಬ್ಬರ ಜಾಸ್ತಿಯಾಗಿದ್ದು ಅದು ಕಾಡ್ಗಿಚ್ಚನ್ನು ಸೃಷ್ಟಿ ಮಾಡುತ್ತಿದೆ. ಕಾಡುಗಿಚ್ಚು ಕಾಡು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿದೆ ಜೊತೆಗೆ ಉಷ್ಣಾಂಶವನ್ನು ಮತ್ತಷ್ಟು ಏರಿಕೆ ಮಾಡುತ್ತಿದೆ. ಇದು ಈ ಪ್ರದೇಶದಲ್ಲಿ ಸರಣಿ ಸಾವನ್ನು ಸೃಷ್ಟಿಸುತ್ತಿದೆ. ಕಳೆದ ಶುಕ್ರವಾರ ಒಂದೇ

ಒಂದೇ ವಾರದಲ್ಲಿ 700ಕ್ಕೂ ಅಧಿಕ ಸಾವು | ನೋಡನೋಡುತ್ತಿದ್ದಂತೆ ಹೊತ್ತಿ ಉರಿಯಿತು ಹಳ್ಳಿ Read More »

ಟೀಚರ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಸಚಿನ್ ತೆಂಡೂಲ್ಕರ್ ಪುತ್ರ ಎಂಎಸ್ ಧೋನಿ….!?

ಛತ್ತಿಸ್’ಗಢ: ಶಿಕ್ಷಕರ ಹುದ್ದೆಗೆ ಎಂಎಸ್ ಧೋನಿ ಎಂಬ ಅಭ್ಯರ್ಥಿ ಹೆಸರಿನ ಅರ್ಜಿ ಸಲ್ಲಿಕೆ ಆದ ಘಟನೆ ಛತ್ತಿಸ್’ಗಢ ರಾಜ್ಯದಲ್ಲಿ ನಡೆದಿದೆ. ಅರ್ಜಿಯಲ್ಲಿ ಎಂಎಸ್ ಧೋನಿ ತಂದೆ ಸಚಿನ್ ತೆಂಡೂಲ್ಕರ್ ಎಂದು ನಮೂದು ಆಗಿರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ. ಅಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಒಟ್ಟು 14,850 ಶಿಕ್ಷಕರ ನೇಮಕಾತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ಲಕ್ಷಾಂತರ ಮಂದಿ ಉದ್ಯೋಗಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸುವಾಗ ಎಂಎಸ್ ಧೋನಿ ಎಂಬ ಅಭ್ಯರ್ಥಿಯ ಹೆಸರು ಇರುವ ಅರ್ಜಿ ಪತ್ತೆಯಾಗಿದೆ.

ಟೀಚರ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಸಚಿನ್ ತೆಂಡೂಲ್ಕರ್ ಪುತ್ರ ಎಂಎಸ್ ಧೋನಿ….!? Read More »

‘ಸಿಡಿ’ಯೊಳಗೆ ಬಿದ್ದರಾ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ? ವರದಿ ಪ್ರಸಾರ ಮಾಡದಂತೆ ಕೋರ್ಟ್ ನಿಂದ ನಿರ್ಬಂಧಕಾಜ್ಞೆ…!

ಬೆಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸಿ.ಡಿ ಭಯ ಶುರುವಾಗಿದ್ದು, ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ನಿಂದ ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ವರದಿ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಪಡೆದಿದ್ದಾರೆ. ಕೇಂದ್ರ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಕೆಲ ಪತ್ರಿಕೆ, ಚಾನಲ್​​ಗಳಲ್ಲಿ ತಮ್ಮ ವಿರುದ್ಧ ಸುಳ್ಳುಸುದ್ದಿ ಪ್ರಸಾರ ಮಾಡುವ ಸಾಧ್ಯತೆ ಇದೆ. ಕಿಡಿಗೇಡಿಗಳು ನಕಲಿ ಸಿ.ಡಿ ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಡುವ ಸಾಧ್ಯತೆಯೂ ಇದೆ ಎಂದು ಕಾರಣ ನೀಡಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು

‘ಸಿಡಿ’ಯೊಳಗೆ ಬಿದ್ದರಾ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ? ವರದಿ ಪ್ರಸಾರ ಮಾಡದಂತೆ ಕೋರ್ಟ್ ನಿಂದ ನಿರ್ಬಂಧಕಾಜ್ಞೆ…! Read More »