ದೇಶ-ವಿದೇಶ

ಕ್ಯಾಡ್ ಬರಿ ಚಾಕೋಲೇಟ್ ನಲ್ಲಿ ದನದ ಮಾಂಸ ಬಳಕೆ!? ಭಾರತದಲ್ಲಿ ಅಗ್ರ ಮಾರುಕಟ್ಟೆ ಹೊಂದಿರುವ ಕಂಪನಿ ಏನ್ ಹೇಳ್ತು ಗೊತ್ತಾ?

Cadbury Chocolate ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರ ಫೇವರೆಟ್​​​ ಚಾಕ್​ಲೇಟ್​​. ಬಾಯಿ ಸಿಹಿ ಮಾಡೋಣ ಎಂಬ ಜಾಹೀರಾತು ಕಂಡೊಡನೆ ತಿನ್ನಬೇಕು ಅನಿಸದೆ ಇರಲ್ಲ. ಬಾಯಲ್ಲಿ ಇಟ್ಟೊಡನೆ ಕರಗುವ ಚಾಕ್​​ಲೇಟ್​​​ಗೆ ಎಲ್ಲಿಲ್ಲದ ಬೇಡಿಕೆ. ಮಾರುಕಟ್ಟೆಯಲ್ಲಿ ಎಷ್ಟೇ ಬ್ರ್ಯಾಂಡ್​ಗಳ ಚಾಕ್​ಲೇಟ್​ ಬಂದರೂ ಕ್ಯಾಡ್​ಬರಿ ಡೈರಿ ಮಿಲ್ಕ್​​ ಡಿಮ್ಯಾಂಡ್​ ಎಂದಿಗೂ ಕುಗ್ಗಿಲ್ಲ. ಇನ್ನು ಪ್ರಪೋಸ್ ಮಾಡಲು ಕ್ಯಾಡ್​​ಬರಿ ಚಾಕ್​​ಲೇಟ್ ಗಳೇ ಬೇಕು. ಹುಡುಗಿಯರು ಸೇರಿದಂತೆ ಈ ರಸವತ್ತಾದ ಕಪ್ಪುಸುಂದರಿಗೆ ಮರುಳಾಗದವರು ಯಾರೂ ಇಲ್ಲವೇ ಇಲ್ಲ. ಆದರೆ […]

ಕ್ಯಾಡ್ ಬರಿ ಚಾಕೋಲೇಟ್ ನಲ್ಲಿ ದನದ ಮಾಂಸ ಬಳಕೆ!? ಭಾರತದಲ್ಲಿ ಅಗ್ರ ಮಾರುಕಟ್ಟೆ ಹೊಂದಿರುವ ಕಂಪನಿ ಏನ್ ಹೇಳ್ತು ಗೊತ್ತಾ? Read More »

ವಾಟ್ಸಪ್ ಸಂದೇಶಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಗದು: ಸುಪ್ರೀಮ್ ಕೋರ್ಟ್

ನವದೆಹಲಿ: ವ್ಯಾಪಾರ ಒಪ್ಪಂದಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಾಟ್ಸಪ್ ಸಂದೇಶಗಳನ್ನು ಯಾವುದೇ ಕಾರಣಕ್ಕೂ ಸಾಕ್ಷಿಯಾಗಿ ಪರಿಗಣಿಸಲಾಗದು ಎಂದು ಸುಪ್ರೀಮ್ ಕೋರ್ಟ್ ಹೇಳಿದೆ. 2016 ರ ಡಿಸೆಂಬರ್ ನಲ್ಲಿ ನಡೆದ ಎರಡು ವ್ಯಾಪಾರಿ ಕಂಪನಿಗಳ ನಡುವಿನ ಒಪ್ಪಂದದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ, ವ್ಯಾಪಾರ ಒಪ್ಪಂದಗಳಲ್ಲಿ ವಾಟ್ಸಪ್ ಮೆಸೇಜ್ ಗಳನ್ನು ಸಾಕ್ಷಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಚೀಫ್ ಜಸ್ಟಿಸ್ ಎನ್ ವಿ ರಮಣ, ಜಸ್ಟಿಸ್ ಎ ಎಸ್ ಬೋಪಣ್ಣ ಮತ್ತು ಋಷಿಕೇಶ್ ರಾಯ್ ಅವರುಗಳ ಪೀಠ ಹೇಳಿದೆ. ಇಂದಿನ ಕಾಲದಲ್ಲಿ ವಾಟ್ಸಪ್

ವಾಟ್ಸಪ್ ಸಂದೇಶಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಗದು: ಸುಪ್ರೀಮ್ ಕೋರ್ಟ್ Read More »

ಬಾವಿಗೆ ಬಿದ್ದ ಬಾಲಕಿಯ ರಕ್ಷಣೆ ಕಾರ್ಯಾಚರಣೆ ವೇಳೆ 40 ಮಂದಿ ಬಾವಿಯೊಳಗೆ….!

ಮಧ್ಯಪ್ರದೇಶ: ಇಲ್ಲಿನ ವಿದಿಶಾ ಜಿಲ್ಲೆಯಲ್ಲಿ ಗುರುವಾರ ಸಂಜೆ ಬಾವಿಗೆ ಬಿದ್ದ ಬಾಲಕಿಯನ್ನು ರಕ್ಷಿಸುವ ವೇಳೆ 40 ಮಂದಿ ಬಾವಿಯೊಳಗೆ ಬಿದ್ದ ಘಟನೆ ನಡೆದಿದೆ. ಗುರುವಾರ ಸಂಜೆ ಆಟವಾಡುತ್ತಿದ್ದಾಗ ಬಾಲಕಿ ಒಬ್ಬಳು ಬಾವಿಗೆ ಬಿದಿದ್ದಾಳೆ. ವಿಷಯ ತಿಳಿದು ಹಲವಾರು ಜನರು ಬಾವಿಗೆ ಬಳಿ ತೆರೆಳಿದ್ದರು. ಈ ವೇಳೆ ಈ ಅನಾಹುತ ಸಂಭವಿಸಿದೆ. ಇವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ 19 ಜನರನ್ನು ರಕ್ಷಿಸಲಾಗಿದೆ, ಒಟ್ಟು 40 ಜನರು ಬಾವಿಯಲ್ಲಿ ಸಿಲುಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಾವಿಯಿಂದ ಮೇಲೆತ್ತಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾವಿಯಿಂದ

ಬಾವಿಗೆ ಬಿದ್ದ ಬಾಲಕಿಯ ರಕ್ಷಣೆ ಕಾರ್ಯಾಚರಣೆ ವೇಳೆ 40 ಮಂದಿ ಬಾವಿಯೊಳಗೆ….! Read More »

ಪಾಪಿ ಪಾಕಿಸ್ತಾನಕ್ಕೆ ದೇಶದ ರಹಸ್ಯಗಳನ್ನು ಕೊಡುತ್ತಿದ್ದ ಭಾರತೀಯ ಯೋಧ…!

ನವದೆಹಲಿ: ಭಾರತದ ಸಂಪ್ರದಾಯಿಕ ವೈರಿ ಪಾಕಿಸ್ಥಾನಕ್ಕೆ ದೇಶದ ರಕ್ಷಣೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದ ಆರೋಪದಲ್ಲಿ ಯೋಧ ಸೇರಿದಂತೆ ಇಬ್ಬರನ್ನು ಬಂಡಿಸಲಾಗಿದೆ. ಭಾರತದ ಭದ್ರತೆಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಪಾಕಿಸ್ತಾನದ ಗುಪ್ತಚರ ಇಲಾಖೆ ಕೈಸೇರುತ್ತಿದ್ದವು. ಈ ಹಿನ್ನಲೆಯಲ್ಲಿ ರಾಜಸ್ಥಾನದ ಪೋಖ್ರಾನ್ ಆರ್ಮಿ ಬೇಸ್ ಕ್ಯಾಂಪ್ ಗೆ ತರಕಾರಿ ಸರಬರಾಜು ಮಾಡುತ್ತಿದ್ದ ಹಬೀಬುಲ್ ರೆಹಮಾನ್ ಎಂಬಾತನನ್ನು ಬಂದಿಸಲಾಗಿತ್ತು. ಬಳಿಕ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಆತ ತರಕಾರಿ ಸರಬರಾಜು ಮಾಡುತ್ತಿದ್ದ ಸಂದರ್ಭ ಯೋಧರೊಬ್ಬರಿಂದ ಸೂಕ್ಷ್ಮ ದಾಖಲೆಗಳನ್ನು ಪಡೆದು

ಪಾಪಿ ಪಾಕಿಸ್ತಾನಕ್ಕೆ ದೇಶದ ರಹಸ್ಯಗಳನ್ನು ಕೊಡುತ್ತಿದ್ದ ಭಾರತೀಯ ಯೋಧ…! Read More »

ದಕ್ಷಿಣ ಆಫ್ರಿಕಾದ ಧಗಧಗ | 250ಕ್ಕೂ ಹೆಚ್ಚು ಬಲಿ | ಹಿಂಸಾಚಾರಿಗಳಿಗೆ ಭಾರತೀಯರೇ ಟಾರ್ಗೆಟ್…!

ಡರ್ಬನ್: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜೋಕೋಬ್ ಜೂಮಾ ಬಂಧನದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಸುಮಾರು 250ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಹಿಂಸಾಚಾರಿಗಳು ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದು 70ಕ್ಕೂ ಹೆಚ್ಚು ಭಾರತೀಯ ಮೂಲದವರನ್ನು ಕೊಲ್ಲಲಾಗಿದೆ. ಮಾಜಿ ಅಧ್ಯಕ್ಷ ಜೋಕೋಬ್ ಜೂಮಾ ಅವರು ತಮ್ಮ ಅಧಿಕಾರವಧಿಯಲ್ಲಿ ಮಾಡಿದ ಜನಾಂಗೀಯ ನಿಂದನೆ ಆರೋಪ ಎದುರಿಸುತ್ತಿದ್ದು ಕಳೆದವಾರ ಬಂಧನವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಹಿಂಸಾಚಾರ ಭುಗಿಲೆದ್ದಿದ್ದು ಇಂದು ಆರನೇ ದಿನಕ್ಕೆ ಕಾಲಿಟ್ಟಿದೆ. ಆಕ್ರೋಶಿತ ಜನರು ಅಂಗಡಿ ಮುಂಗಟ್ಟುಗಳನ್ನು ಒಡೆದು ಹಾಕುತ್ತಿದ್ದು

ದಕ್ಷಿಣ ಆಫ್ರಿಕಾದ ಧಗಧಗ | 250ಕ್ಕೂ ಹೆಚ್ಚು ಬಲಿ | ಹಿಂಸಾಚಾರಿಗಳಿಗೆ ಭಾರತೀಯರೇ ಟಾರ್ಗೆಟ್…! Read More »

ಕೃತಕ ಹಲ್ಲು ನುಂಗಿ ಮಹಿಳೆ ಸಾವು

ಚೆನ್ನೈ: ಆಕಸ್ಮಿಕವಾಗಿ ನೀರಿನೊಂದಿಗೆ ಕೃತಕ ಹಲ್ಲನ್ನು ನುಂಗಿದ ಮಹಿಳೆ ಮೃತಪಟ್ಟಿರುವ ಘಟನೆ ಜುಲೈ 4 ರಂದು ಚೆನ್ನೈನಲ್ಲಿ ನಡೆದಿದ್ದು. ವಲಸರವಕ್ಕಂನ 43 ವರ್ಷದ ಮಹಿಳೆ ರಾಜಲಕ್ಷ್ಮಿ ಎಂಬವರು ಮೃತಪಟ್ಟವರು. ಇವರು ನೀರು ಕುಡಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೃತಕ ಹಲ್ಲನ್ನು ನುಂಗಿದ್ದಾರೆ. ಆ ಬಳಿಕ ಮಹಿಳೆಗೆ ತಲೆತಿರುಗುವಿಕೆ ಮತ್ತು ವಾಂತಿ ಉಂಟಾಗಿತ್ತು. ಬಳಿಕ ವೈದ್ಯರು ಆಕೆಯನ್ನು ಪರೀಕ್ಷಿಸಿ ಬಿಡುಗಡೆ ಮಾಡಿದ್ದರು. ಮರುದಿನ, ಪರೀಕ್ಷಿಸಿಸಲು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ನಿಧನರಾದರು. ಶವಪರೀಕ್ಷೆ ನಡೆಸಿ ದೇಹವನ್ನು ಬಿಟ್ಟುಕೊಡಲಾಗಿದೆ. ಕ್ರಿಮಿನಲ್ ಪ್ರೊಸಿಜರ್ನ ಕೋಡ್ನ

ಕೃತಕ ಹಲ್ಲು ನುಂಗಿ ಮಹಿಳೆ ಸಾವು Read More »

ರಾಜ್ಯಸಭೆಯ ಸದನ ನಾಯಕರಾಗಿ ಪಿಯೂಷ್ ಗೋಯಲ್

ನವೆದಹಲಿ : ಪ್ರಸ್ತುತ ರಾಜ್ಯಸಭೆಯ ಉಪ ಮಹಡಿ ನಾಯಕರಾಗಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಭಾರತೀಯ ಜನತಾ ಪಕ್ಷದ ರಾಜ್ಯಸಭೆಯ ಸದನದ ನಾಯಕರಾಗಲಿದ್ದಾರೆ. ಸಧ್ಯ ಕರ್ನಾಟಕದ ರಾಜ್ಯಪಾಲರಾಗಿರುವ ಹಿರಿಯ ನಾಯಕ ಥಾವರ್ ಚಂದ್ ಗೆಹ್ಲೋಟ್ ಅವರ ರಾಜೀನಾಮೆಯ ನಂತರ ತೆರವಾದ ಸ್ಥಾನವನ್ನ ಗೋಯಲ್ ಅಲಂಕರಿಸಲಿದ್ದಾರೆ. ಹಿರಿಯ ಸಂಸದೀಯ ನಾಯಕರಾಗಿರುವ ಗೋಯಲ್ ಅವರು ತ್ರಿವಳಿ ತಲಾಖ್ ಮತ್ತು ಅನುಚ್ಛೇದ 370 ರಂತಹ ನಿರ್ಣಾಯಕ ಮಸೂದೆಗಳನ್ನು ಅಂಗೀಕರಿಸುವ ಸಮಯದಲ್ಲಿ ಸೇರಿದಂತೆ ಪರಿಣಾಮಕಾರಿ ಸನ್ನಿವೇಶಗಳಲ್ಲಿ ಫ್ಲೋರ್ ಮ್ಯಾನೇಜರ್ ಆಗಿದ್ದಾರೆ.ಮಹಾರಾಷ್ಟ್ರ ಮೂಲದ

ರಾಜ್ಯಸಭೆಯ ಸದನ ನಾಯಕರಾಗಿ ಪಿಯೂಷ್ ಗೋಯಲ್ Read More »

ಮುಳುಗಿದ್ದ ಸೇತುವೆ ಮೇಲೆ ಬಸ್ ಚಲಾಯಿಸಿದ ಚಾಲಕ ಅಮಾನತು

ಮಹಾರಾಷ್ಟ್ರ: ಪ್ರವಾಹದಿಂದ ಸಂಪೂರ್ಣವಾಗಿ ಮುಳುಗಿದ್ದು ಸೇತುವೆ ಮೇಲೆ ಚಾಲಕನೊಬ್ಬ ಬಸ್ ಚಲಾಯಿಸಿದ ಘಟನೆ ರಾಯಗಡ ಜಿಲ್ಲೆಯಲ್ಲಿ ನಡೆದಿದೆ. ಜನರ ಜೀವದ ಜೊತೆ ಚೆಲ್ಲಾಟವಾಡಿದ ಚಾಲಕರನ್ನು ಎಂಎಸ್ಆರ್’ಟಿಸಿ ಅಮಾನತು ಮಾಡಿದೆ. ರಾಯಗಡದ ಮಹಾಡ ತಾಲೂಕಿನ ನದಿಯ ಸೇತುವೆ ಭಾರಿ ಮಳೆ ಹಿನ್ನೆಲೆಯಲ್ಲಿ ಮುಳುಗಡೆಯಾಗಿತ್ತು. ಮುಳುಗಿದೆ ಸೇತುವೆ ಮೇಲೆ ಇತರೆ ಯಾವುದೇ ವಾಹನಗಳು ಸಂಚರಿಸಿಲ್ಲ. ಆದರೆ ದುಸ್ಸಾಹಸಕ್ಕೆ ಕೈಹಾಕಿದ ಎಂಎಸ್ಆರ್’ಟಿಸಿ ಬಸ್ ಚಾಲಕ ಬಸ್ಸನ್ನು ನೀರಿನ ಮೇಲೆಯೇ ನದಿಯ ಇನ್ನೊಂದು ಬದಿಗೆ ಕೊಂಡೊಯ್ದಿದ್ದಾನೆ. ನದಿ ದಾಟುತ್ತಿದ್ದಂತೆ ಬಸ್ ಹಡಗಿನಂತೆ ಕಂಡುಬಂದಿದೆ.

ಮುಳುಗಿದ್ದ ಸೇತುವೆ ಮೇಲೆ ಬಸ್ ಚಲಾಯಿಸಿದ ಚಾಲಕ ಅಮಾನತು Read More »

RBI ಮುದ್ರಣಾಲಯದಿಂದಲೇ ಬಂಡಲ್ ಬಂಡಲ್ ಬಿಸಿ ಬಿಸಿ ನೋಟು ಮಾಯ…..!

ಮುಂಬೈ: ಮುಂಬೈನಲ್ಲಿರುವ ನೋಟು ಮುದ್ರಾಣಾಲಯದಿಂದ ಐದು ಬಂಡಲ್ 500 ರೂ ನೋಟು ನಾಪತ್ತೆಯಾಗಿದೆ. ಈ ಬಗ್ಗೆ ನಾಸಿಕ್ ಪೊಲೀಸ್ ಠಾಣೆಯಲ್ಲಿ ಮುದ್ರಣಾಲಯದ ಅಧಿಕಾರಿಗಳು ದೂರು ನೀಡಿದ್ದಾರೆ. ಝೆಡ್ ಪ್ಲಸ್ ಸೆಕ್ಯೂರಿಟಿ ನಡುವೆಯೂ 5 ಲಕ್ಷ ಮೌಲ್ಯದ ನೋಟು ನಾಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ ಮತ್ತು ಅನುಮಾನಕ್ಕೆ ಕಾರಣವಾಗಿದೆ. ವರ್ಷಕ್ಕೆ ಎರಡರಿಂದ ಎರಡೂವರೆ ಸಾವಿರ ಮಿಲಿಯನ್ ರೂಪಾಯಿ ಮೌಲ್ಯದ ನೋಟುಗಳನ್ನು ಇಲ್ಲಿ ಮುದ್ರಿಸಲಾಗುತ್ತದೆ. ಆದರೆ ಇಲ್ಲಿಯ ವರೆಗೆ ಇಂತಹ ಪ್ರಕರಣಗಳು ವರದಿಯಾಗಿಲ್ಲ. ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ದಿನಕ್ಕೆ ಕೋಟಿ-ಕೋಟಿ ಮೌಲ್ಯದ

RBI ಮುದ್ರಣಾಲಯದಿಂದಲೇ ಬಂಡಲ್ ಬಂಡಲ್ ಬಿಸಿ ಬಿಸಿ ನೋಟು ಮಾಯ…..! Read More »

ಪುಲ್ವಾಮದಲ್ಲಿ ಬೆಳ್ಳಂಬೆಳಗ್ಗೆ ಮೂವರು LET ಉಗ್ರರು ಫಿನಿಷ್

ಪುಲ್ವಾಮ: ಜಮ್ಮು ಕಾಶ್ಮೀರದ ಪುಲ್ವಾಮ ದಲ್ಲಿ ಉಗ್ರರಿರುವ ಖಚಿತ ಮಾಹಿತಿ ಪಡೆದ ಸೇನೆ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಹೊಡೆದುರುಳಿಸಿದೆ . ಇಂದು ಮುಂಜಾನೆ ಪುಲ್ವಾಮ ನಗರದಲ್ಲಿ ಉಗ್ರರಿರುವ ಬಗ್ಗೆ ಸೇನಾಧಿಕಾರಿಗಳಿಗೆ ಖಚಿತ ಮಾಹಿತಿ ದೊರೆತಿತ್ತು. ತಕ್ಷಣ ಕಾರ್ಯಪ್ರವೃತವಾದ ಭಾರತೀಯ ಭೂ ಸೇನೆ ಉಗ್ರರಿರುವ ಸ್ಥಳವನ್ನು ಸುತ್ತುವರೆದಿದೆ. ಅದಾಗಲೇ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ತಕ್ಷಣ ಪ್ರತಿದಾಳಿ ನಡೆಸಿದ ಯೋಧರು ಲಷ್ಕರ್-ಇ-ತಾಯ್ಬಾ ಉಗ್ರ ಸಂಘಟನೆಯ ಓರ್ವ ಕಾಮಾಂಡರ್ ಸೇರಿದಂತೆ ಮೂವರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪುಲ್ವಾಮದಲ್ಲಿ ಬೆಳ್ಳಂಬೆಳಗ್ಗೆ ಮೂವರು LET ಉಗ್ರರು ಫಿನಿಷ್ Read More »