ದೇಶ-ವಿದೇಶ

ರಷ್ಯಾ- ಉಕ್ರೇನ್ ಬಿಕ್ಕಟ್ಟು| ಸಂಧಾನಕ್ಕೆ ಒಪ್ಪಿದ ಉಕ್ರೇನ್

ಸಮಗ್ರ ನ್ಯೂಸ್: ಬೈಲೋರಷ್ಯಾದಲ್ಲಿ ಸಂಧಾನ ಮಾತುಕತೆಗೆ ಉಕ್ರೇನ್ ಕೊನೆಗೂ ಒಪ್ಪಿಗೆ ನೀಡಿದೆ. ಈ ಮೂಲಕ ಎರಡು ದೇಶಗಳ ನಡುವಣ ಯುದ್ಧ ಅಂತ್ಯಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ. ಬೈಲೋರಷ್ಯಾದಲ್ಲಿ ನಾಳೆ ಸಂಜೆಯೊಳಗೆ ಸಂಧಾನ ಮಾತುಕತೆಗೆ ಬಾರದೇ ಇದ್ದಲ್ಲಿ ಪರಮಾಣು ಬಳಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ರಷ್ಯಾ ಎಚ್ಚರಿಕೆ ನೀಡಿದ ಬೆನ್ನಲ್ಲೇ ಉಕ್ರೇನ್ ಮಾತುಕತೆಗೆ ಒಪ್ಪಿಗೆ ಸೂಚಿಸಿದೆ. ಇದಕ್ಕೂ ಮುನ್ನ ಉಕ್ರೇನ್ ಮೇಲೆ ದಾಳಿ ಮಾಡಲು ಬೈಲೋರಷ್ಯಾವನ್ನು ರಷ್ಯಾ ಬಳಸಿಕೊಳ್ಳುತ್ತಿದೆ. ಆದ್ದರಿಂದ ಇಲ್ಲಿ ಮಾತುಕತೆಗೆ ಬರುವುದಿಲ್ಲ. ಬೇರೆ ಜಾಗ […]

ರಷ್ಯಾ- ಉಕ್ರೇನ್ ಬಿಕ್ಕಟ್ಟು| ಸಂಧಾನಕ್ಕೆ ಒಪ್ಪಿದ ಉಕ್ರೇನ್ Read More »

ಉಕ್ರೇನ್ ನಿಂದ 240 ಭಾರತೀಯರ ಏರ್ ಲಿಪ್ಟ್| ವಿದೇಶಾಂಗ ಇಲಾಖೆ ಸ್ಪಷ್ಟನೆ|

ಸಮಗ್ರ ನ್ಯೂಸ್: ಆಪರೇಷನ್ ಗಂಗಾ ಅಡಿಯಲ್ಲಿ 240 ಭಾರತೀಯ ಪ್ರಜೆಗಳೊಂದಿಗೆ ದೆಹಲಿಗೆ ಮೂರನೇ ವಿಮಾನವು ಹಂಗೇರಿಯ ಬುಡಾಪೆಸ್ಟ್‌ನಿಂದ ಟೇಕಾಫ್ ಆಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಇಂದು ಬೆಳಿಗ್ಗೆ ಮಾಹಿತಿ ನೀಡಿದ್ದಾರೆ. 240 ಭಾರತೀಯ ಪ್ರಜೆಗಳೊಂದಿಗೆ ಮೂರನೇ ವಿಮಾನವು ಬುಡಾಪೆಸ್ಟ್‌ನಿಂದ ದೆಹಲಿಗೆ ಹೊರಟಿದೆ’ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ. ನಡೆಯುತ್ತಿರುವ ಉಕ್ರೇನ್-ರಷ್ಯಾ ಬಿಕ್ಕಟ್ಟಿನ ಮಧ್ಯೆ, ಗಡಿ ಪೋಸ್ಟ್‌ಗಳಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಹೊಂದಾಣಿಕೆಯಿಲ್ಲದೆ ಯಾವುದೇ ಗಡಿ ಚೆಕ್‌ಪೋಸ್ಟ್‌ಗಳಿಗೆ ತೆರಳದಂತೆ ಕೈವ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ

ಉಕ್ರೇನ್ ನಿಂದ 240 ಭಾರತೀಯರ ಏರ್ ಲಿಪ್ಟ್| ವಿದೇಶಾಂಗ ಇಲಾಖೆ ಸ್ಪಷ್ಟನೆ| Read More »

ಯುದ್ದರಂಗಕ್ಕೆ ಎಂಟ್ರಿ ಕೊಡ್ತಾ ಅಮೇರಿಕ? ಉಕ್ರೇನ್ ಗೆ ನೆರವಿನ ಮಹಾಪೂರ ಹರಿಸಿದ ದೊಡ್ಡಣ್ಣ!

ಸಮಗ್ರ ನ್ಯೂಸ್: ಅಮೆರಿಕಉಕ್ರೇನ್​​ಗೆ ಆರ್ಥಿಕ ನೆರವು ಘೋಷಿಸಿದ್ದು. 350 ಮಿಲಿಯನ್​​ ಡಾಲರ್​​ ನೆರವು ದಾಖಲೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್​​​ ಸಹಿ ಮಾಡಿದ್ದಾರೆ. ರಕ್ಷಣಾ ನೆರವು ನೀಡುವ ದಾಖಲೆಗಳಿಗೆ ಬೈಡನ್​ ಸಹಿ ಮಾಡಿದ್ದು, ಅಮೆರಿಕ ವೈಟ್​ಹೌಸ್​ನಿಂದ ಹೇಳಿಕೆ ರಿಲೀಸ್​ ಮಾಡಲಾಗಿದೆ. 250 ಮಿಲಿಯನ್​ ಡಾಲರ್​​ ರಿಲೀಸ್​ಗೆ ಯುಎಸ್​ ಕಾಂಗ್ರೆಸ್​ ಅನುಮತಿ ಸರ್ಕಾರ ಕೇಳಿದೆ.

ಯುದ್ದರಂಗಕ್ಕೆ ಎಂಟ್ರಿ ಕೊಡ್ತಾ ಅಮೇರಿಕ? ಉಕ್ರೇನ್ ಗೆ ನೆರವಿನ ಮಹಾಪೂರ ಹರಿಸಿದ ದೊಡ್ಡಣ್ಣ! Read More »

‘ಅಧಿಕಾರವನ್ನು ನಿಮ್ಮ ಕೈಗೆ ತಗೊಳ್ಳಿ’ | ಉಕ್ರೇನ್ ಮಿಲಿಟರಿ ಪಡೆಗೆ ಪುಟಿನ್ ಸೂಚನೆ| ಒಡೆದು ಆಳುವ ನೀತಿ ಪ್ರಯೋಗಿಸಿದ ರಷ್ಯಾ|

ಸಮಗ್ರ ನ್ಯೂಸ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮಿಲಿಟರಿಗೆ ದೇಶದ ಅಧಿಕಾರವನ್ನು ವಶಪಡಿಸಿಕೊಳ್ಳಲು ಕರೆ ನೀಡಿದ್ದಾರೆ. ಪುಟಿನ್ ತಮ್ಮ ದೇಶವನ್ನು ಉದ್ದೇಶಿಸಿ ಉಕ್ರೇನ್ ಸೇನೆಗೆ ಈ ಸಂದೇಶವನ್ನು ಕಳುಹಿಸಿದ್ದಾರೆ. ರಷ್ಯಾದ ಅಧ್ಯಕ್ಷರು ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿಲ್ಲ ಮತ್ತು ಉಕ್ರೇನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ನಾವು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ರಷ್ಯಾದ ಅಧ್ಯಕ್ಷರು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಅಧಿಕಾರದಿಂದ ತೆಗೆದುಹಾಕಲು ಮತ್ತು ಅಲ್ಲಿ ಮಿಲಿಟರಿ ಆಡಳಿತವನ್ನು ಸ್ಥಾಪಿಸಲು ಬಯಸುತ್ತಾರೆ. ರಷ್ಯಾ

‘ಅಧಿಕಾರವನ್ನು ನಿಮ್ಮ ಕೈಗೆ ತಗೊಳ್ಳಿ’ | ಉಕ್ರೇನ್ ಮಿಲಿಟರಿ ಪಡೆಗೆ ಪುಟಿನ್ ಸೂಚನೆ| ಒಡೆದು ಆಳುವ ನೀತಿ ಪ್ರಯೋಗಿಸಿದ ರಷ್ಯಾ| Read More »

ಪುಟಿನ್ ಗೆ ಯುದ್ಧ ನಿಲ್ಲಿಸಲು ಮನವಿ ಮಾಡಿದ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ, ಉಕ್ರೇನ್‌ನಲ್ಲಿ ಇಂದು ಬೆಳಿಗ್ಗೆ ಪ್ರಾರಂಭವಾದ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿದರು ಎಂದು ರಾಷ್ಟ್ರೀಯ ಮಾಧ್ಯಮ ಎನ್.ಡಿ ಟಿವಿ ವರದಿ ಮಾಡಿದೆ. ಮಧ್ಯಸ್ಥಿಕೆಗಾಗಿ ಭಾರತಕ್ಕೆ ಉಕ್ರೇನ್ ತುರ್ತು ಮನವಿ ಮಾಡಿದ ಗಂಟೆಗಳ ನಂತರ ಈ ಸಂಭಾಷಣೆ ನಡೆಯಿತು ಎನ್ನಲಾಗಿದೆ. ರಾಜತಾಂತ್ರಿಕ ಮಾತುಕತೆ ಮತ್ತು ಸಂವಾದದ ಹಾದಿಗೆ ಮರಳಲು ಎಲ್ಲಾ ಕಡೆಯಿಂದ ಸಂಘಟಿತ ಪ್ರಯತ್ನಗಳು ನಡೆಸುವ ಕುರಿತು ಪ್ರಧಾನಿ

ಪುಟಿನ್ ಗೆ ಯುದ್ಧ ನಿಲ್ಲಿಸಲು ಮನವಿ ಮಾಡಿದ ಪ್ರಧಾನಿ ಮೋದಿ Read More »

ಉಕ್ರೇನ್‍ನಲ್ಲಿ ಕರ್ನಾಟಕದ 10. ಮಂದಿ ವಿದ್ಯಾರ್ಥಿಗಳು ಲಾಕ್| ವಿದೇಶಾಂಗ ಇಲಾಖೆ ಜೊತೆ ಸಿಎಂ ಬೊಮ್ಮಾಯಿ ಚರ್ಚೆ

ಸಮಗ್ರ ನ್ಯೂಸ್: ರಷ್ಯಾ ಮತ್ತು ಉಕ್ರೇನ್ ನಡುವೆ ದಾಳಿ ನಡೆಯುತ್ತಿದ್ದು, ಈ ಮಧ್ಯೆ ಕರ್ನಾಟಕದ 10 ಮಂದಿ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಉಕ್ರೇನ್ ನಲ್ಲಿ ಬೆಂಗಳೂರು ವಿದ್ಯಾರ್ಥಿ ಲಾಕ್ ಆಗಿದ್ದು, ಪೋಷಕರು ಆತಂಕದಲ್ಲಿ ಇದ್ದಾರೆ. ಪ್ರಸ್ತುತ ದಾಳಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ವಿದ್ಯಾರ್ಥಿಗಳ ಪೋಷಕರು ವಾಟ್ಸ್ ಆ್ಯಪ್ ವೀಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿ ಇದ್ದಾರೆ. ಬೆಳಗ್ಗೆಯಿಂದ ಬಾಂಬ್ ಬ್ಲಾಸ್ಟ್ ಸದ್ದು ಕೇಳಿಬರುತ್ತಿದ್ದು, ನಾವು ಸುರಕ್ಷಿತವಾಗಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಪ್ರಸ್ತುತ ಭಾರತಕ್ಕೆ ಬರಲು

ಉಕ್ರೇನ್‍ನಲ್ಲಿ ಕರ್ನಾಟಕದ 10. ಮಂದಿ ವಿದ್ಯಾರ್ಥಿಗಳು ಲಾಕ್| ವಿದೇಶಾಂಗ ಇಲಾಖೆ ಜೊತೆ ಸಿಎಂ ಬೊಮ್ಮಾಯಿ ಚರ್ಚೆ Read More »

ಪೆಟ್ರೋಲ್ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಕನ್ವರ್ಟ್ ಮಾಡ್ಬಹುದು| ಇಲ್ಲಿದೆ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‍ಗಳ ಮಾಹಿತಿ…

ಸಮಗ್ರ ಡಿಜಿಟಲ್ ಡೆಸ್ಕ್: ಎಲೆಕ್ಟ್ರಿಕ್ ವಾಹನಗಳು ಪ್ರತಿ ದಿನವೂ ಹೆಚ್ಚುತ್ತಿವೆ. ಸರ್ಕಾರದ ಸಬ್ಸಿಡಿಗಳು ಮತ್ತು ಹೆಚ್ಚಿನ ಇಂಧನ ಬೆಲೆಗಳ ಪರಿಣಾಮವಾಗಿ, ಇವಿಗಳು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ. ಆದಾಗ್ಯೂ, ಗ್ರಾಹಕರ ಹೆಚ್ಚಿನ ಬೇಡಿಕೆ ಮತ್ತು ಅರೆವಾಹಕಗಳ ಕೊರತೆಯಿಂದಾಗಿ, ವಾಹನಗಳ ತಯಾರಕರು ಹೆಣಗಾಡುತ್ತಿದ್ದಾರೆ. ತಮ್ಮ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕಾಗಿ ತಿಂಗಳುಗಟ್ಟಲೆ ಕಾಯಲು ಬಯಸದ ಖರೀದಿದಾರರಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‍ಗಳನ್ನು ನೀಡುತ್ತಿದೆ. ಕಳೆದ ಬಾರಿ ಕಂಪನಿಯು ಹೀರೋ ಸ್ಪ್ಲೆಂಡರ್ ಬೈಕ್‍ವೊಂದನ್ನು ತಮ್ಮ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‍ನೊಂದಿಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್

ಪೆಟ್ರೋಲ್ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಕನ್ವರ್ಟ್ ಮಾಡ್ಬಹುದು| ಇಲ್ಲಿದೆ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‍ಗಳ ಮಾಹಿತಿ… Read More »

ರಾಷ್ಟ್ರಮಟ್ಟದಲ್ಲಿ ಪರಿಚಯವಾಗಲಿದೆ ನೀರ್ ದೋಸೆ, ಕೋರಿರೊಟ್ಟಿ| ರಾಷ್ಟ್ರೀಯ ಲೈವ್ ಫುಡ್ ಫೆಸ್ಟ್ ಗೆ ತೆರಳಿದ ಗುತ್ತಿಗಾರಿನ ತಂಡ

ಸಮಗ್ರ ನ್ಯೂಸ್ ಡೆಸ್ಕ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸದಸ್ಯರು ನೋಯ್ಡಾದಲ್ಲಿ ನಡೆಯಲಿರುವ ‘ಲೈವ್ ಫುಡ್ ಫೆಸ್ಟ್’ ನಲ್ಲಿ ಮೊತ್ತಮೊದಲ ಬಾರಿಗೆ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ನೋಯ್ಡಾದಲ್ಲಿ ರಾಷ್ಟ್ರಮಟ್ಟದ 18 ದಿನಗಳ ‘ಸರಸ್ ಮೇಳ’ ದಲ್ಲಿ ಭಾಗವಹಿಸುತ್ತಿರುವ ಕರ್ನಾಟಕದ ಏಕೈಕ ತಂಡದಲ್ಲಿ ಗುತ್ತಿಗಾರು ಸಂಜೀವಿನಿ ಸಂಘದ ದಿವ್ಯ, ಭವ್ಯ,ಅಕ್ಷತಾ, ಪವಿತ್ರ ಮತ್ತು ಕೃಷ್ಣವೇಣಿ ಭಾಗವಹಿಸುತ್ತಿದ್ದು ದಕ್ಷಿಣ ಕನ್ನಡದ ನೀರ್ ದೋಸೆ, ಕೋರಿ ಸುಕ್ಕ, ಕೋರಿ ರೊಟ್ಟಿ ಹಾಗೂ ಶಾವಿಗೆ ರಸಾಯನವನ್ನು

ರಾಷ್ಟ್ರಮಟ್ಟದಲ್ಲಿ ಪರಿಚಯವಾಗಲಿದೆ ನೀರ್ ದೋಸೆ, ಕೋರಿರೊಟ್ಟಿ| ರಾಷ್ಟ್ರೀಯ ಲೈವ್ ಫುಡ್ ಫೆಸ್ಟ್ ಗೆ ತೆರಳಿದ ಗುತ್ತಿಗಾರಿನ ತಂಡ Read More »

ದುಬೈ: ಫೆಬ್ರವರಿ 19ರಂದು ವಿಜಯ್ ಪ್ರಕಾಶ್ ಸಂಗೀತ ಸಂಜೆ ‘ನೀನೇ ರಾಜಕುಮಾರ’!

ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಸ್ವರ ಮಾಂತ್ರಿಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರ ಸ್ಮರಣಾರ್ಥ ವಿಜಯ್ ಪ್ರಕಾಶ್ ಸಂಗೀತ ಸಂಜೆ ಕಾರ್ಯಕ್ರಮ ‘ನೀನೇ ರಾಜಕುಮಾರ’ ದುಬೈನಲ್ಲಿ 2022 ಫೆಬ್ರವರಿ 19 ರಂದು ಸಂಜೆ 6 ಗಂಟೆಗೆ ಸರಿಯಾಗಿ ಅಲ್ ನಸರ್ ಲೀಸರ್ ಲ್ಯಾಂಡ್ ನಲ್ಲಿ ನಡೆಯಲಿದ್ದು. ಪೂರ್ವ ಸಿದ್ಧತೆಗಳು ಭರದಿಂದ ಸಾಗಿದೆ. ಕೋವಿಡ್ ಸಂಕಷ್ಟಗಳ ನಂತರ ನಡೆಯುತ್ತಿರುವ ಪ್ರಥಮ ಕನ್ನಡ ಸಂಗೀತ ಕಾರ್ಯಕ್ರಮದಲ್ಲಿ ಪ್ರಸಿದ್ಧ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಮತ್ತು ಅನುರಾಧ

ದುಬೈ: ಫೆಬ್ರವರಿ 19ರಂದು ವಿಜಯ್ ಪ್ರಕಾಶ್ ಸಂಗೀತ ಸಂಜೆ ‘ನೀನೇ ರಾಜಕುಮಾರ’! Read More »

ಕೆಂಪುಕೋಟೆ ಹಿಂಸಾಚಾರ ಪ್ರಕರಣದ ಆರೋಪಿ, ನಟ ದೀಪ್ ಸಿಧು ಅಪಘಾತದಲ್ಲಿ ಸಾವು

ಸಮಗ್ರ ನ್ಯೂಸ್ ಡೆಸ್ಕ್: ಹರಿಯಾಣದ ಸೋನಿಪತ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಪಂಜಾಬಿ ನಟ ದೀಪ್ ಸಿಧು ಸಾವನ್ನಪ್ಪಿದ್ದಾರೆ ಎಂದು ಸೋನಿಪತ್ ಪೊಲೀಸರು ಖಚಿತಪಡಿಸಿದ್ದಾರೆ. ಕಳೆದ ವರ್ಷ ರೈತರ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರ ಪ್ರಕರಣದಲ್ಲಿ ನಟ ದೀಪ್ ಸಿಧು ಪ್ರಮುಖ ಆರೋಪಿಯಾಗಿದ್ದರು. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ಗಣರಾಜ್ಯೋತ್ಸವ ದಿನದಂದು ಆಯೋಜಿಸಿದ್ದ ಟ್ರ್ಯಾಕ್ಟರ್ ರ್‍ಯಾಲಿ ವೇಳೆಯಲ್ಲಿ ಉಂಟಾದ ಹಿಂಸಾಚಾರ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಫೆಬ್ರವರಿ 9 ರಂದು ಸಿಧುವನ್ನು ಬಂಧಿಸಲಾಗಿತ್ತು.

ಕೆಂಪುಕೋಟೆ ಹಿಂಸಾಚಾರ ಪ್ರಕರಣದ ಆರೋಪಿ, ನಟ ದೀಪ್ ಸಿಧು ಅಪಘಾತದಲ್ಲಿ ಸಾವು Read More »