ದೇಶ-ವಿದೇಶ

ಬುಡಕಟ್ಟು ಜನಾಂಗದವರ ನಡುವೆ ಮಾರಾಮಾರಿ

ಸಮಗ್ರ ನ್ಯೂಸ್: ಬುಡಕಟ್ಟು ಜನಾಂಗದವರ ಮಧ್ಯೆ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಮಾರಾಮಾರಿಯಲ್ಲಿ ಬರೋಬ್ಬರಿ 175ಕ್ಕೂ ಹೆಚ್ಚು ಜನರ ಬಲಿಯಾಗಿದೆ. ಅರಬ್ಬರು ಮತ್ತು ಆಫ್ರಿಕನ್ ಮಸಲಿತ್ ಬುಡಕಟ್ಟುಗಳ ನಡುವೆ ಉಂಟಾದ ಹಿಂಸಾಚಾರ ಮುಂದುವರೆದಿದ್ದು, ನೂರಾರು ಜನರನ್ನು ಬಲಿ ಪಡೆದಿದೆ. ಐದು ದಿನಗಳಲ್ಲಿ 175ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಬುಡಕಟ್ಟು ಜನಾಂಗದ ಮಾರಾಮಾರಿ ತಡೆಯಲು ಸೂಡಾನ್ ಸರ್ಕಾರ ಪಶ್ಚಿಮ, ಧಾರ್‍ಪುರ್ ಪ್ರಾಂತ್ಯಕ್ಕೆ ಮತ್ತಷ್ಟು ಸೇನಾಪಡೆಗಳನ್ನು ನಿಯೋಜಿಸಿದೆ. ರಾಜಧಾನಿ ಜಿನೇನಾದಿಂದ 80ಕಿ.ಮೀ. ಪೂರ್ವಕ್ಕೆ ಕ್ರೆನಿನ್ ಪಟ್ಟಣದಲ್ಲಿ ಅರಬ್ಬರು ಮತ್ತು ಆಫ್ರಿಕನ್

ಬುಡಕಟ್ಟು ಜನಾಂಗದವರ ನಡುವೆ ಮಾರಾಮಾರಿ Read More »

ನ್ಯೂಯಾರ್ಕ್: ಎಲಾನ್ ಮಸ್ಕ್ ಪಾಲಾದ ಟ್ವಿಟರ್|

ಸಮಗ್ರ ನ್ಯೂಸ್: ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರು ಸಾಮಾಜಿಕ ಜಾಲತಾಣ ಟ್ವೀಟರ್ ಕಂಪನಿಯನ್ನು ಸುಮಾರು 3 ಲಕ್ಷ ಕೋಟಿ ರೂ.ಗೆ ಖರೀದಿ ಮಾಡಿದ್ದು, ಒಪ್ಪಂದ ಅಂತಿಮಗೊಂಡಿದೆ ಎಂದು ಟ್ವೀಟರ್ ಘೋಷಣೆ ಮಾಡಿದೆ. ಮಸ್ಕ್ ಈಗಾಗಲೇ ಶೇ.9.1 ರಷ್ಟು ಷೇರುಗಳನ್ನು ಹೊಂದುವ ಮೂಲಕ ಅತಿ ದೊಡ್ಡ ಷೇರುದಾರ ಎನಿಸಿಕೊಂಡಿದ್ದರು ಹಾಗೂ ಟ್ವೀಟರ್ ಗಳನ್ನು ಖರೀದಿಸಲು ಏಪ್ರಿಲ್ 14 ರಂದು 3 ಲಕ್ಷ ಕೋಟಿ ರೂ. ಮೊತ್ತದ ಆಫರ್ ನೀಡಿದ್ದರು. ಅಲ್ಲದೆ ತಮ್ಮ ಶೇ. 9 ಪಾಲನ್ನು

ನ್ಯೂಯಾರ್ಕ್: ಎಲಾನ್ ಮಸ್ಕ್ ಪಾಲಾದ ಟ್ವಿಟರ್| Read More »

ಮತ್ತೆ 16 ಯೂಟ್ಯೂಬ್ ‌ಚಾನೆಲ್ ಗಳಿಗೆ ಕೇಂದ್ರದಿಂದ ‌ನಿಷೇಧ; ಕಾರಣ?

ಸಮಗ್ರ ನ್ಯೂಸ್: ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆಯು ಇಂದು ಮತ್ತೆ 16 ಯೂಟ್ಯೂಬ್ ಚಾನೆಲ್‌ಗಳ ಪ್ರಸಾರವನ್ನು ನಿಷೇಧಿಸಿದೆ. ರಾಷ್ಟ್ರದ ಸಮಗ್ರತೆ, ಕೋಮು ಸೌಹಾರ್ದ ಕದಡುವ ತಪ್ಪು ಮಾಹಿತಿಯನ್ನು ಹಂಚುವ ಕಾರಣ ನೀಡಿ ಈ ಚಾನೆಲ್‌ಗಳ ಪ್ರಸಾರವನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.

ಮತ್ತೆ 16 ಯೂಟ್ಯೂಬ್ ‌ಚಾನೆಲ್ ಗಳಿಗೆ ಕೇಂದ್ರದಿಂದ ‌ನಿಷೇಧ; ಕಾರಣ? Read More »

ಮತ್ತಷ್ಟು ಹೆಚ್ಚಾಗಲಿದೆ ಅಡುಗೆ ಎಣ್ಣೆ ಬೆಲೆ.

ಸಮಗ್ರ ನ್ಯೂಸ್: ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ ನಡುವೆಯೂ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಹೆಚ್ಚಾಗಿದೆ. ರಷ್ಯಾ ಉಕ್ರೇನ್ ಯುದ್ಧದ ಪರಿಣಾಮ ವಿಶ್ವದ ಎಲ್ಲ ರಾಷ್ಟ್ರಗಳಿಗೂ ತಟ್ಟಿದ್ದು, ಭಾರತದ ಮೇಲೂ ಇದು ಪರಿಣಾಮ ಬೀರಿದೆ. ತಾಳೆಎಣ್ಣೆ ರಫ್ತು ನಿಷೇಧಿಸಲು ಇಂಡೋನೇಷ್ಯಾ ತೀರ್ಮಾನಿಸಿರುವ ಕಾರಣ ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ತೀವ್ರವಾಗಿ ಏರಿಕೆಯಾಗಬಹುದು ಹೇಳಲಾಗಿದೆ. ಈಗಾಗಲೇ ಅಡುಗೆ ಎಣ್ಣೆ ಬೆಲೆ ಹೆಚ್ಚಿದ್ದು, ಈಗ ಮತ್ತಷ್ಟು ಏರಿಕೆಯಾಗಬಹುದು ಎಂಬ ವಿಷಯ ಆತಂಕಕ್ಕೆ ಕಾರಣವಾಗಿದೆ. ಅಡುಗೆ ಎಣ್ಣೆ ಬೆಲೆ

ಮತ್ತಷ್ಟು ಹೆಚ್ಚಾಗಲಿದೆ ಅಡುಗೆ ಎಣ್ಣೆ ಬೆಲೆ. Read More »

ದೇಶದಲ್ಲಿ ಮತ್ತೆ ಹೆಚ್ಚುತ್ತಿರುವ ಕೊರೊನಾ| ಬುಧವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಿಎಂಗಳ ಸಭೆ

ಸಮಗ್ರ ನ್ಯೂಸ್: ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಪರಿಸ್ಥಿತಿ ಕುರಿತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಿಎಂಗಳ ಮಹತ್ವದ ಸಭೆ ನಡೆಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಈ ಸಭೆಯಲ್ಲಿ ದೇಶದ ಕೊರೋನಾ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಅಂಕಿಅಂಶಗಳ

ದೇಶದಲ್ಲಿ ಮತ್ತೆ ಹೆಚ್ಚುತ್ತಿರುವ ಕೊರೊನಾ| ಬುಧವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಿಎಂಗಳ ಸಭೆ Read More »

ಇಂಟರ್ ನ್ಯಾಶನಲ್ ಮಾಡೆಲಿಂಗ್ ಸ್ಪರ್ಧೆ; ಕರ್ನಾಟಕದ ರಾಮು ರನ್ನರ್ ಅಪ್|

ಸಮಗ್ರ ನ್ಯೂಸ್: ವಿಯೆಟ್ನಾಂನಲ್ಲಿ ನಡೆದ ಅಂತಾರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆ-ಪ್ಯಾನ್ ಕಾಂಟಿನೆಂಟಲ್ ಇಂಟರ್ ನ್ಯಾಷನಲ್ 2022ನಲ್ಲಿ ಆಯ್ಕೆಯಾಗಿದ್ದ ಏಕೈಕ ಸ್ಪರ್ಧಾಳು ರಾಮು ಆಗಿದ್ದು, ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಏಪ್ರಿಲ್ 3ರಿಂದ 10ರವರೆಗೆ ಈ ಸ್ಪರ್ಧೆ ನಡೆದಿದ್ದು, ಒಟ್ಟು 14 ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದರು. ಇದರಲ್ಲಿ ಪ್ರಥಮ ಸ್ಥಾನವನ್ನು ಫಿಲಿಪ್ಪೀನ್ಸ್​ ಪಡೆದರೆ, ದ್ವಿತೀಯ ಸ್ಥಾನವನ್ನು ಭಾರತ ಅಲಂಕರಿಸಿತು. ಭಾರತದಿಂದ ಪ್ರತಿನಿಧಿಸಿದ್ದ ರಾಮು ರಾಜಧಾನಿ ಬೆಂಗಳೂರಿನ ವೈಯಾಲಿಕಾವಲ್​ನವರು ಎನ್ನುವುದು ಹೆಮ್ಮೆಯ ವಿಚಾರ. ರಾಮುವಿನ ಈ ಸಾಧನೆಯನ್ನು ಬೆಂಗಳೂರು

ಇಂಟರ್ ನ್ಯಾಶನಲ್ ಮಾಡೆಲಿಂಗ್ ಸ್ಪರ್ಧೆ; ಕರ್ನಾಟಕದ ರಾಮು ರನ್ನರ್ ಅಪ್| Read More »

ಎರಡು ಗುಪ್ತಾಂಗ ಹೊಂದಿರುವ ಗಂಡು ಮಗು ಜನನ‌

ಸಮಗ್ರ ಡಿಜಿಟಲ್ ಡೆಸ್ಕ್: ಒಬ್ಬ ಮನುಷ್ಯ ಎರಡು ತಲೆ, ಎರಡು ಕಾಲು, ಎರಡು ಕೈ ಹೊಂದಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಮಗು ಎರಡು ಗುಪ್ತಾಂಗವನ್ನು ಹೊಂದಿಕೊಂಡು ಜನ್ಮತಳೆದಿದ್ದು ಅಚ್ಚರಿಗೆ ಕಾರಣವಾಗಿದೆ. ಇದು ಪ್ರತಿ ಐದರಿಂದ ಆರು ಮಿಲಿಯನ್ ಗಂಡುಮಕ್ಕಳಲ್ಲಿ ಒಬ್ಬರು ಮಾತ್ರ ಹೆಚ್ಚುವರಿ ಶಿಶ್ನದೊಂದಿಗೆ ಜನಿಸುತ್ತಾರೆ. ಗರ್ಭಾಶಯದಲ್ಲಿ ಜನನಾಂಗ ಬೆಳವಣಿಗೆ ಯಾದಾಗ ಇದು ಕಂಡು ಬರುತ್ತದೆ. ಇದನ್ನ 1609 ರಲ್ಲಿ ಸ್ವಿಸ್ ವೈದ್ಯ ಜೋಹಾನ್ಸ್ ಜಾಕೋಬ್ ವೇಕಾರ್ ವರದಿ ಮಾಡಿದ್ದಾರೆ. ಈ ಘಟನೆ ಬ್ರೇಜಿಲ್ ನಲ್ಲಿ ನಡೆದಿದ್ದು,ಗಂಡು

ಎರಡು ಗುಪ್ತಾಂಗ ಹೊಂದಿರುವ ಗಂಡು ಮಗು ಜನನ‌ Read More »

ಕರ್ನಾಟಕದ ”ಸೇವಾಸಿಂಧು” ಪೋರ್ಟಲ್ ಗೆ ಕೇಂದ್ರ ಪ್ರಶಸ್ತಿಯ ಗರಿ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಸರ್ಕಾರದ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ ದೊರೆತಿದೆ. ಸರ್ಕಾರದ ಸೇವಾ ಸಿಂಧು ಪೋರ್ಟಲ್‌ಗೆ ಕೇಂದ್ರ ಸರ್ಕಾರದ ಉತ್ಕೃಷ್ಟ ಪ್ರಶಸ್ತಿ ದೊರೆತಿದೆ. ಸಾರ್ವಜನಿಕ ಆಡಳಿತಕ್ಕೆ ಕೇಂದ್ರ ಸರ್ಕಾರ ನೀಡುವ ಸುಗಮ ಸೇವೆ ವಿಭಾಗದ ಪ್ರಶಸ್ತಿಗೆ ಕರ್ನಾಟಕ ಆಯ್ಕೆಯಾಗಿದ್ದು, ದೆಹಲಿ ವಿಜ್ಞಾನ ಭವನದಲ್ಲಿ ಪ್ರಧಾನಿ ಮೋದಿ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ರಾಜ್ಯ ಸರ್ಕಾರದ ಪರ ಐಎಎಸ್‌ ಅಧಿಕಾರಿ ದೀಪ್ತಿ ಆದಿತ್ಯ ಕಾನಡೆ ಪ್ರಶಸ್ತಿ ಸ್ವೀಕರಿಸಿದರು. ಉತ್ಕೃಷ್ಟ ಸಾರ್ವಜನಿಕ ಆಡಳಿತಕ್ಕೆ ಕೇಂದ್ರ ನೀಡುವ ಪ್ರಶಸ್ತಿ ಇದಾಗಿದ್ದು,

ಕರ್ನಾಟಕದ ”ಸೇವಾಸಿಂಧು” ಪೋರ್ಟಲ್ ಗೆ ಕೇಂದ್ರ ಪ್ರಶಸ್ತಿಯ ಗರಿ Read More »

‘ಕುಸುಮ ಕರೀತಿದಾಳೆ ಓಡಿ ಹೋಗೋ ವಿಶಾಲ್’!? ನೋಟಿನಲ್ಲೊಂದು ರೋಚಕ ಲವ್ ಕಹಾನಿ

ಸಮಗ್ರ ನ್ಯೂಸ್: ಕೆಲವರ ಕೈಗೆ ಪೆನ್ ಸಿಕ್ಕಿದ್ರೆ ಸಾಕು, ಏನಾದ್ರೂ ಗೀಚ್ತಾ ಇರ್ತಾರೆ. ಇನ್ನು ಕೆಲವರಿಗೆ ಕರೆನ್ಸಿ ನೋಟಿನಲ್ಲಿ ಏನಾದ್ರೂ ಬರೆಯುವ ಹುಚ್ಚಿರುತ್ತದೆ. ಇತ್ತೀಚಿನ ದಿನಗಳಲ್ಲಿ ನೋಟುಗಳಲ್ಲಿ ಯಾರೂ ಸಂದೇಶ ಬರೆಯುವುದಿಲ್ಲ. ಆದರೆ, ಇಲ್ಲೊಂದೆಡೆ 10 ರೂಪಾಯಿಯ ನೋಟಿನಲ್ಲಿ ಯುವತಿಯೊಬ್ಬಳು ತನ್ನ ಪ್ರೇಮಿಗೆ ಬರೆದಿರುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಯುವತಿಯೊಬ್ಬಳು 10 ರೂ. ನೋಟಿನಲ್ಲಿ ವಿಶಾಲ್, ನನ್ನ ಮದುವೆ ಏಪ್ರಿಲ್ 26ರಂದು ನಿಶ್ಚಯವಾಗಿದೆ. ದಯವಿಟ್ಟು ನನ್ನನ್ನು ಕರೆದುಕೊಂಡು ಹೋಗು. ನಾವು ಓಡಿ ಹೋಗೋಣ. ನಾನು

‘ಕುಸುಮ ಕರೀತಿದಾಳೆ ಓಡಿ ಹೋಗೋ ವಿಶಾಲ್’!? ನೋಟಿನಲ್ಲೊಂದು ರೋಚಕ ಲವ್ ಕಹಾನಿ Read More »

ಇಂದು ರಾತ್ರಿ 9-30ಕ್ಕೆ ಕೆಂಪುಕೋಟೆಯಿಂದ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಭಾಷಣ|

ಸಮಗ್ರ ನ್ಯೂಸ್: ಗುರು ತೇಜ್ ಬಹದ್ದೂರ್ ಅವರ 400ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸೂರ್ಯಾಸ್ತದ ನಂತರ ಗುರುವಾರ ರಾತ್ರಿ ಐತಿಹಾಸಿಕ ಕೆಂಪುಕೋಟೆಯಿಂದ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೆಂಪುಕೋಟೆಯ ಲಾನ್ಸ್ ನಿಂದ (ಹಸಿರು ಹೊದಿಕೆ) ಮೋದಿ ಭಾಷಣ ಮಾಡಲಿದ್ದಾರೆ. 1675ರಲ್ಲಿ ಸಿಖ್ ಸಮುದಾಯದ 9ನೇ ಗುರು ಗುರು ತೇಗ್ ಬಹದ್ದೂರ್ ಕೊಲ್ಲಲು ಮೊಘಲ್ ದೊರೆ ಔರಂಗಜೇಬ್ ಆದೇಶ ನೀಡಿದ್ದ ಕಾರಣದಿಂದ ಕೆಂಪುಕೋಟೆಯನ್ನು ವೇದಿಕೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಸಂಸ್ಕೃತಿ

ಇಂದು ರಾತ್ರಿ 9-30ಕ್ಕೆ ಕೆಂಪುಕೋಟೆಯಿಂದ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಭಾಷಣ| Read More »