ದೇಶ-ವಿದೇಶ

ನೀಲಿಚಿತ್ರ ವೀಕ್ಷಿಸಿದ ಸಂಸದ ಪಕ್ಷದಿಂದ ಉಚ್ಚಾಟನೆ

ಸಮಗ್ರ ನ್ಯೂಸ್: ಸಂಸತ್ ಕಲಾಪದ ವೇಳೆ ತನ್ನ ಫೋನ್ ನಲ್ಲಿ ನೀಲಿಚಿತ್ರ ವೀಕ್ಷಿಸಿದ ಆರೋಪದಲ್ಲಿ ಸಂಸದನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಘಟನೆ ಇಂಗ್ಲೆಂಡ್ ನಿಂದ ವರದಿಯಾಗಿದೆ. ಇಂಗ್ಲೆಂಡ್‌ ಪ್ರಧಾನಮಂತ್ರಿ ಬೋರಿಸ್‌ ಜಾನ್ಸನ್‌ ಅವರ ಕನ್ಸರ್ವೇಟಿವ್ ಪಕ್ಷದ ಸಂಸತ್‌ ಸದಸ್ಯರೊಬ್ಬರು ಹೌಸ್ ಆಫ್ ಕಾಮನ್ಸ್‌ನಲ್ಲಿ ಶನಿವಾರ ತನ್ನ ಫೋನ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ ವಿಚಾರ ವಿವಾದದ ಬಿರುಗಾಳಿ ಎಬ್ಬಿಸುತ್ತಿದ್ದಂತೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂಸತ್ತಿನಲ್ಲಿ ತಾನು ಫೋನ್‌ ನಲ್ಲಿ ಎರಡು ಬಾರಿ ಪೋರ್ನ್‌ ವಿಡಿಯೋ ನೋಡಿದ್ದಾಗಿ ಸಂಸದ ನೀಲ್ ಪ್ಯಾರಿಶ್

ನೀಲಿಚಿತ್ರ ವೀಕ್ಷಿಸಿದ ಸಂಸದ ಪಕ್ಷದಿಂದ ಉಚ್ಚಾಟನೆ Read More »

ಕಾಲುವೆಗೆ ಉರುಳಿದ ಪ್ರಯಾಣಿಕರ ವಾಹನ| ಎಂಟು‌ ಮಕ್ಕಳು ಜಲಸಮಾಧಿ

ಸಮಗ್ರ ನ್ಯೂಸ್: ಪ್ರಯಾಣಿಕರನ್ನು ತ್ರಿಚಕ್ರ ವಾಹನವೊಂದು ಪಲ್ಟಿಯಾಗಿ ನೀರಾವರಿ ಕಾಲುವೆಯಲ್ಲಿ ಮುಳುಗಿದ ಪರಿಣಾಮ ಎಂಟು ಮಕ್ಕಳು ಸಾವನ್ನಪ್ಪಿದ್ದ ಘಟನೆ ಈಜಿಪ್ಟ್ ನ ಡೆಲ್ಟಾ ಪ್ರಾಂತ್ಯದ ಬೆಹೈರಾದಲ್ಲಿ ನಡೆದಿದೆ. 12-15 ವರ್ಷ ವಯಸ್ಸಿನ ಮಕ್ಕಳು ಕೈರೋದ ರಾಜಧಾನಿಯಿಂದ ಉತ್ತರಕ್ಕೆ 140 ಕಿ ಮೀ ದೂರದ ನಗರದ ಕಾರ್ಖಾನೆಯೊಂದರಲ್ಲಿ ಕೆಲಸಗಾರರಾಗಿದ್ದರು. ನಿನ್ನೆ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ತ್ರಿಚಕ್ರ ವಾಹನ ಪಲ್ಟಿಯಾಗಿ ನೀರಾವರಿ ಕಾಲುವೆಗೆ ಬಿದ್ದಿತು. ಪರಿಣಾಮ 2 ಪ್ರಯಾಣಿಕರಲ್ಲಿ 8 ಮಂದಿ ಸಾವನ್ನಪ್ಪಿದ್ದು, ಉಳಿದ ನಾಲ್ವರು ಅಪಘಾತದಿಂದ ಪಾರಾಗಿದ್ದಾರೆ.

ಕಾಲುವೆಗೆ ಉರುಳಿದ ಪ್ರಯಾಣಿಕರ ವಾಹನ| ಎಂಟು‌ ಮಕ್ಕಳು ಜಲಸಮಾಧಿ Read More »

ಇಂದು ವರ್ಷದ ಮೊದಲ ಸೂರ್ಯಗ್ರಹಣ| ಗ್ರಹಣದಂದೇ ಶನಿ ಅಮಾವಾಸ್ಯೆ|

ಸಮಗ್ರ ನ್ಯೂಸ್: ನಭೋಮಂಡಲದ ಕೌತುಕ, ವರ್ಷದ ಮೊದಲ ರಾಹುಗ್ರಸ್ತ ಸೂರ್ಯಗ್ರಹಣ ಏಪ್ರಿಲ್ 30 ರಂದು ಸಂಭವಿಸಲಿದೆ. ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸದೆ ಇದ್ದರೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣವೂ ಕೆಟ್ಟ ಪರಿಣಾಮ ಬೀರುತ್ತದೆ ಅಂತಾರೆ. ಸೂರ್ಯಗ್ರಹಣದ ದಿನವೇ, ಶನಿ ಅಮಾವಾಸ್ಯೆ ಕೂಡ ಬಂದಿರೋದು ಇನ್ನೊಂದು ಕಾಕತಾಳೀಯ. ಏಪ್ರಿಲ್ 30ರಂದು ನಭೋಮಂಡಲದಲ್ಲಿ ಸೂರ್ಯನ ಮೇಲೆ ಗ್ರಹಣದ ಕಾರ್ಮೋಡ ಇರಲಿದೆ. ಆದ್ರೆ ಭಾರತದಲ್ಲಿ ನಭೋಮಂಡಲದ ಈ ವಿಸ್ಮಯ ಗೋಚರಿಸಲ್ಲ. ಚಿಲಿ, ಅರ್ಜೆಂಟೀನಾ, ಉರುಗ್ವೆ, ಆಗ್ನೇಯಾ ಪೆರು, ದಕ್ಷಿಣ ಹಾಗೂ ಪಶ್ಚಿಮ ಅಮೆರಿಕದಲ್ಲಿ ಗೋಚರಿಸಲಿದೆ.

ಇಂದು ವರ್ಷದ ಮೊದಲ ಸೂರ್ಯಗ್ರಹಣ| ಗ್ರಹಣದಂದೇ ಶನಿ ಅಮಾವಾಸ್ಯೆ| Read More »

ರಷ್ಯಾ ಉಕ್ರೇನ್ ಯುದ್ಧ – ಖೆರ್ಸಾನ್ ರಷ್ಯಾ ವಶ| ರುಬೆಲ್ ಖೆರ್ಸಾನ್ ಹೊಸ‌ ಕರೆನ್ಸಿ

ಸಮಗ್ರ ನ್ಯೂಸ್: ಉಕ್ರೇನ್‌ನ ಮೇಲೆ ದಾಳಿ ಮುಂದುವರಿಸಿರುವ ರಷ್ಯಾದ ಗುರುವಾರದ ಘೋಷಣೆಯ ಪ್ರಕಾರ ಖೆರ್ಸಾನ್ ರಷ್ಯಾ ಪಡೆಯ ಸಂಪೂರ್ಣ ನಿಯಂತ್ರಣದಲ್ಲಿದೆ. ಹೀಗಾಗಿ ಮೇ 1ರಿಂದ ರಷ್ಯಾದ ರುಬೆಲ್‌ ಖೆರ್ಸಾನ್‌ನ ಅಧಿಕೃತ ಕರೆನ್ಸಿಯಾಗಿರಲಿದೆ. ಅಲ್ಲಿನ ಜನರಿಗೆ ಕರೆನ್ಸಿ ಬದಲಾವಣೆ ಮಾಡಿಕೊಳ್ಳಲು 4 ತಿಂಗಳ ಕಾಲಾವಕಾಶ ಕೊಡಲಾಗುವುದು ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ ಉಕ್ರೇನ್ ಯುದ್ಧ – ಖೆರ್ಸಾನ್ ರಷ್ಯಾ ವಶ| ರುಬೆಲ್ ಖೆರ್ಸಾನ್ ಹೊಸ‌ ಕರೆನ್ಸಿ Read More »

ಕೋವಿಡ್ ಲಾಕ್ ಡೌನ್ ಎಫೆಕ್ಟ್| ದೇಶದಲ್ಲಿ ದಿಢೀರ್ ಏರಿಕೆಯಾದ ಹೆಚ್ಐವಿ| ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡಿದ ಮಾರಕ ರೋಗ

ಸಮಗ್ರ ನ್ಯೂಸ್: ಕೋವಿಡ್​-19 ಹಾವಳಿಯಿಂದಾಗಿ ಹೇರಲಾಗಿದ್ದ ಲಾಕ್​ಡೌನ್​ ಸಂದರ್ಭದಲ್ಲಿನ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಾಗಿ ಉಂಟಾಗಿರುವ ಮಾರಕ ಸಂಗತಿಯೊಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯಿಂದಾಗಿ ಬಹಿರಂಗಗೊಂಡಿದೆ. ಮಧ್ಯಪ್ರದೇಶದ ಆರ್​ಟಿಐ ಕಾರ್ಯಕರ್ತ ಚಂದ್ರೇಶೇಖರ್​ ಗೌರ್ ಎಂಬಾತ ಕೇಳಿದ್ದ ಪ್ರಶ್ನೆಗೆ ಸಿಕ್ಕ ಉತ್ತರ ಭಯಂಕರ ವಿಷಯವೊಂದನ್ನು ಬೆಳಕಿಗೆ ತಂದಿದೆ. ಈತ ಸಲ್ಲಿಸಿದ್ದ ಅರ್ಜಿಗೆ ರಾಷ್ಟ್ರೀಯ ಏಯ್ಡ್ಸ್​ ತಡೆ ಸಂಸ್ಥೆ ನೀಡಿರುವ ಉತ್ತರ ಚಿಂತೆಗೀಡು ಮಾಡುವಂತಿದೆ. ಲಾಕ್​ಡೌನ್​ ಅವಧಿಯಲ್ಲಿನ ಅಸುರಕ್ಷಿತ ಸಂಭೋಗದಿಂದಾಗಿ ದೇಶದಲ್ಲಿ 85 ಸಾವಿರಕ್ಕೂ ಅಧಿಕ ಮಂದಿ ಏಯ್ಡ್ಸ್​ ಸೋಂಕಿಗೆ

ಕೋವಿಡ್ ಲಾಕ್ ಡೌನ್ ಎಫೆಕ್ಟ್| ದೇಶದಲ್ಲಿ ದಿಢೀರ್ ಏರಿಕೆಯಾದ ಹೆಚ್ಐವಿ| ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡಿದ ಮಾರಕ ರೋಗ Read More »

ಪ್ರಧಾನಿ ನೇತೃತ್ವದಲ್ಲಿ ಸಿಎಂಗಳ ಸಭೆ| ಕೊರೊನಾ ನಡುವೆಯು ಪೆಟ್ರೋಲ್ ಡೀಸೇಲ್ ದರ ಇಳಿಸುವಂತೆ ಪ್ರಧಾನಿ ಮನವಿ|

ಸಮಗ್ರ ನ್ಯೂಸ್: ಕೊರೊನಾ ಸವಾಲು ಇನ್ನೂ ಮುಗಿದಿಲ್ಲ. ಶಾಲೆ ಆರಂಭದ ಹೊತ್ತಲ್ಲಿ ಕರೊನಾ 4ನೇ ಅಲೆಯ ಭೀತಿ ಹುಟ್ಟಿದೆ.ದೇಶದ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ರಾಜ್ಯಗಳಲ್ಲಿ ಪೆಟ್ರೋಲ್​, ಡಿಸೇಲ್​ ದರ ಕಡಿಮೆ ಮಾಡಲೂ ಪ್ರಧಾನಿ ಮನವಿಯನ್ನು ಮಾಡಿಕೊಂಡಿದ್ದಾರೆ.ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಆತಂಕ ಹಿನ್ನೆಲೆ ಬುಧವಾರ ಬೆಳಗ್ಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್​ ಸಭೆ ನಡೆಸಿದ ಪ್ರಧಾನಿ ಮೋದಿ ಈಗಾಗಲೇ ಆರೋಗ್ಯ ಕ್ಷೇತ್ರದಲ್ಲಿ

ಪ್ರಧಾನಿ ನೇತೃತ್ವದಲ್ಲಿ ಸಿಎಂಗಳ ಸಭೆ| ಕೊರೊನಾ ನಡುವೆಯು ಪೆಟ್ರೋಲ್ ಡೀಸೇಲ್ ದರ ಇಳಿಸುವಂತೆ ಪ್ರಧಾನಿ ಮನವಿ| Read More »

ಅಮೇರಿಕಾದ ಉಪಾಧ್ಯಕ್ಷರಿಗೂ ಬಂತು ಕೊರೋನಾ

ಸಮಗ್ರ ನ್ಯೂಸ್: ಭಾರತವು ಕೊರೋನಾ ನಾಲ್ಕನೆಯ‌ ಅಲೆಯ ಭೀತಿಯಲ್ಲಿದ್ದರೆ ಅತ್ತ ವಿಶ್ವದ ಬಲಾಢ್ಯ ಅಮೇರಿಕಕ್ಕೂ ಇದರ ಚಿಂತೆ ಶುರುವಾದಂತೆ ಕಾಣಿಸುತ್ತಿದೆ. ಅಮೇರಿಕಾದ ಉಪಾಧ್ಯಕ್ಷೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಅದು ಲಕ್ಷಣರಹಿತವಾಗಿದ್ದು ಆರೋಗ್ಯಕರವಾಗಿದ್ದಾರೆ. ಇದುವರೆಗಿನ ಮಾಹಿತಿಯ ಪ್ರಕಾರ ಅವರು ಅಮೇರಿಕಾ ಅಧ್ಯಕ್ಷರ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟಿಲ್ಲ ಎಂದು ಶ್ವೇತಭವನ ಪ್ರಕಟಣೆ ತಿಳಿಸಿದೆ

ಅಮೇರಿಕಾದ ಉಪಾಧ್ಯಕ್ಷರಿಗೂ ಬಂತು ಕೊರೋನಾ Read More »

ಕೋವಿಡ್ ಜನಕ ಚೀನಾದಲ್ಲಿ ಮತ್ತೊಂದು ರೋಗ ಪತ್ತೆ?

ಸಮಗ್ರ ನ್ಯೂಸ್: ಜಗತ್ತು ಕೋವಿಡ್ ಭೀತಿಯಿಂದ ಹೊರಬರುವ ಮೊದಲೇ ಚೀನಾದಿಂದ ಬಂದ ಮತ್ತೊಂದು ಆಘಾತಕಾರಿ ಸುದ್ದಿ ಆರೋಗ್ಯದ ಕಾಳಜಿಯನ್ನು ಹೆಚ್ವಿಸುವಂತೆ ಮಾಡಿದೆ. ಕೋವಿಡ್ ಜನಕ ಚೀನಾದಲ್ಲಿ ಹಕ್ಕಿಜ್ವರದ ತಳಿಯಾಗಿರುವ H3N8 ಚೀನಾದಲ್ಲಿ ಮಾನವರಲ್ಲಿ ಪತ್ತೆಯಾಗಿದೆ. ಚೀನಾದ ಆರೋಗ್ಯ ಇಲಾಖೆಯ ವರದಿಗಳ ಪ್ರಕಾರ ನಾಲ್ಕು ವರ್ಷದ ಮಗುವಿನಲ್ಲಿ ಈ ಸೋಂಕು ಪತ್ತೆಯಾಗಿದ್ದು, ಯಾವುದೇ ಪ್ರಾಥಮಿಕ ಸಂಪರ್ಕಕ್ಕೆ ಹರಡಿಲ್ಲ ಎಂಬುದು‌ ತೃಪ್ತಿಕರ ಸಂಗತಿಯಾಗಿದೆ.

ಕೋವಿಡ್ ಜನಕ ಚೀನಾದಲ್ಲಿ ಮತ್ತೊಂದು ರೋಗ ಪತ್ತೆ? Read More »

ಕೇರಳದಲ್ಲಿ ಕಾರು ಚಲಾಯಿಸಲೂ ಹೆಲ್ಮೆಟ್ ಬೇಕಂತೆ; ಚಾಲಕನಿಗೆ ದಂಡ ವಿಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಹೆಲ್ಮೆಟ್ ಧರಿಸದ ಕಾರಣ ಕಾರು ಮಾಲೀಕರಿಗೆ 500 ರೂ.ಗಳ ದಂಡ ವಿಧಿಸಿದ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ. ಮಾರುತಿ ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಾತ್ರ ಅಜಿತ್ ಎ ಎಂಬವರಿಗೆ ಕೇರಳ ಟ್ರಾಫಿಕ್ ಪೊಲೀಸರು 500 ರೂ.ಗಳ ದಂಡ ವಿಧಿಸಿದ್ದು, ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ‘ಡ್ರೈವಿಂಗ್ ಅಥವಾ ಸವಾರ ತಲೆಗೆ ಹೆಲ್ಮೆಟ್ ಧರಿಸಿಲ್ಲ’ ಎಂಬ ಕಾರಣಕ್ಕೆ 500 ರೂ.ಗಳ ದಂಡ ಪಾವತಿಸಿದ್ದು, ಕೇರಳ ಪೊಲೀಸರಿಗೆ ಯಾರು ಹೆಲ್ಮೆಟ್ ಧರಿಸಬೇಕೆಂಬುದೇ ಮರೆತುಹೋಗಿದೆ. ಡಿಸೆಂಬರ್ 7, 2021

ಕೇರಳದಲ್ಲಿ ಕಾರು ಚಲಾಯಿಸಲೂ ಹೆಲ್ಮೆಟ್ ಬೇಕಂತೆ; ಚಾಲಕನಿಗೆ ದಂಡ ವಿಧಿಸಿದ ಪೊಲೀಸರು Read More »

ರಥೋತ್ಸವ ವೇಳೆ ಕರೆಂಟ್ ಶಾಕ್; ಹತ್ತು ಮಂದಿ ಸಾವು|

ಸಮಗ್ರ ನ್ಯೂಸ್: ರಥೋತ್ಸವದ ವೇಳೆ ಘೋರ ದುರಂತವೊಂದು ಸಂಭವಿಸಿದ್ದು, ವಿದ್ಯುತ್ ಹರಿದು 10 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಂಜಾವೂರು ಕಲಿಮೇಡು ದೇವಸ್ಥಾನದಲ್ಲಿ ನಡೆದಿದೆ. ತಂಜಾವೂರಿನ ದೇವಾಲಯದ ರಥೋತ್ಸವದ ವೇಳೆ ವಿದ್ಯುತ್ ಹರಿದು 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ದೇವಾಲಯದ ರಥೋತ್ಸವದ ವಿದ್ಯುತ್ ವೈರ್ ಗೆ ಡಿಕ್ಕಿ ಹೊಡೆದ ಪರಿಣಾಮ 10 ಜನರು ಮೃತಪಟ್ಟಿದ್ದು, ಗಾಯಗೊಂಡ ಮೂವರನ್ನು ತಂಜಾವೂರು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ರಥೋತ್ಸವ ವೇಳೆ ಕರೆಂಟ್ ಶಾಕ್; ಹತ್ತು ಮಂದಿ ಸಾವು| Read More »