ದೇಶ-ವಿದೇಶ

ಕಾಶ್ಮೀರದಲ್ಲಿ ಭಾರೀ ಅನಾಹುತ| ಕಂದಕಕ್ಕೆ ಬಸ್ ಉರುಳಿ 36 ಮಂದಿ ದುರ್ಮರಣ

ಸಮಗ್ರ ನ್ಯೂಸ್: ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಒಂದು ಸುಮಾರು 200 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಕನಿಷ್ಠ 36 ಮಂದಿ ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸಂಭವಿಸಿದೆ. ಕಿಶ್ತ್ವಾರದಿಂದ ಜಮ್ಮುಗೆ ಪ್ರಯಾಣಿಸುತ್ತಿದ್ದ ಬಸ್, ಅಸ್ಸಾರ್ ಪ್ರದೇಶದಲ್ಲಿನ ತೃಣಾಲ್ ಬಳಿ ಕಡಿದಾದ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದರಿಂದ ಈ ಘಟನೆ ನಡೆದಿದೆ. ಬಸ್‌ನಲ್ಲಿ 55 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಘಟನೆಯ ಕುರಿತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ […]

ಕಾಶ್ಮೀರದಲ್ಲಿ ಭಾರೀ ಅನಾಹುತ| ಕಂದಕಕ್ಕೆ ಬಸ್ ಉರುಳಿ 36 ಮಂದಿ ದುರ್ಮರಣ Read More »

ಕೆಇಎ ಪರೀಕ್ಷೆ| ಮಾಂಗಲ್ಯ, ಕಾಲುಂಗುರ, ಹಿಜಾಬ್ ಗೆ ಅವಕಾಶ

ಸಮಗ್ರ ನ್ಯೂಸ್: ನ.18 ಮತ್ತು 19 ರಂದು ನಡೆಯಲಿರುವ ಕೆಇಎ ಪರೀಕ್ಷೆಗಳಿಗೆ ಮಹತ್ವದ ಮಾಹಿತಿ ಹೊರಡಿಸಲಾಗಿದೆ. ಪರೀಕ್ಷೆಯಲ್ಲಿ ಹಿಜಾಬ್, ಕಾಲುಂಗುರ, ಮಾಂಗಲ್ಯ ಧರಿಸಲು ಪರೀಕ್ಷಾ ಪ್ರಾಧಿಕಾರ ಅನುಮೋದನೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ, ನ. 18 ಮತ್ತು 19 ರಂದು ನಡೆಯಲಿರುವ ಪರೀಕ್ಷೆಗಳಿಗೆ ಈ ಹಿಂದಿನಂತೆ ಹಿಜಾಬ್ ಮುಂದುವರೆಯಲಿದೆ. ಆದರೆ ಎಲ್ಲಾ ಅಭ್ಯರ್ಥಿಗಳು ಪರೀಕ್ಷೆಗಳಿಗೆ ಹಾಜರಾಗುವ ಮೊದಲು ನಿಗದಿತ ಸಮಯಕ್ಕಿಂತ ಎರಡು ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಹಾಜರಿರಬೇಕು

ಕೆಇಎ ಪರೀಕ್ಷೆ| ಮಾಂಗಲ್ಯ, ಕಾಲುಂಗುರ, ಹಿಜಾಬ್ ಗೆ ಅವಕಾಶ Read More »

ಇಸ್ರೇಲ್ ವಶಕ್ಕೆ ಗಾಜಾ/ ಹಮಾಸ್ ಆಳ್ವಿಕೆ ಅಂತ್ಯ

ಸಮಗ್ರ ನ್ಯೂಸ್: ಇಸ್ರೇಲ್-ಹಮಾಸ್ ನಡುವಿನ ಯುದ್ಧ ಮುಂದುವರೆದಿದ್ದು, ಇದೀಗ ಗಾಜಾ ಪಟ್ಟಿಯನ್ನು ಇಸ್ರೇಲ್ ವಸಪಡಿಸಿಕೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಇಸ್ರೇಲ್‍ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, 16 ವರ್ಷಗಳಿಂದ ಹಮಾಸ್ ಗಾಜಾಪಟ್ಟಿಯ ಮೇಲೆ ಆಳ್ವಿಕೆ ನಡೆಸಿದ್ದು, ಈ ಆಳ್ವಿಕೆ ಇಂದು ಅಂತ್ಯವಾಗಿದ್ದು, ಗಾಜಾ ಸಂಪೂರ್ಣವಾಗಿ ಇಸ್ರೇಲ್‍ನ ವಶಕ್ಕೆ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಗಾಜಾ ಮೇಲಿನ ಅಧಿಕಾರವನ್ನು ಹಮಾಸ್ ಕಳೆದುಕೊಂಡಿದ್ದು, ಉಗ್ರರೆಲ್ಲ ದಕ್ಷಿಣದ ಕಡೆಗೆ ಪರಾರಿಯಾಗುತ್ತಿದ್ದಾರೆ. ಹಮಾಸ್ ಪ್ರಾರಂಭಿಸಿದ ಯುದ್ಧಕ್ಕೆ ನಾವು ಅಂತ್ಯ ಹಾಡುತ್ತೇವೆ. ಹಮಾಸ್ ಹಲವಾರು

ಇಸ್ರೇಲ್ ವಶಕ್ಕೆ ಗಾಜಾ/ ಹಮಾಸ್ ಆಳ್ವಿಕೆ ಅಂತ್ಯ Read More »

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ/ ಉಗ್ರ ಸಂಘಟನೆಗಳ ನಿಷೇಧಿಸಿದ ಕೇಂದ್ರ

ಸಮಗ್ರ ನ್ಯೂಸ್: ಮಣಿಪುರದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿನಡೆಸುತ್ತಿರುವ ಒಂಬತ್ತು ಮೈತೇಯಿ ಉಗ್ರ ಸಂಘಟನೆಗಳನ್ನು ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧಿಸಿದೆ. ಪೀಪಲ್ಸ್ ಲಿಬರೇಷನ್ ಆರ್ಮಿ, ಕ್ರಾಂತಿಕಾರಿ ಪೀಪಲ್ಸ್ ಫ್ರಂಟ್, ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್, ಮಣಿಪುರ ಪೀಪಲ್ಸ್ ಆರ್ಮಿ, ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಂಗ್ಲೀಪಾಕ್, ರೆಡ್ ಆರ್ಮಿ, ಕಂಗ್ಲೇಪಾಕ್ ಕಮ್ಯುನಿಸ್ಟ್ ಪಾರ್ಟಿ, ಕಂಗ್ಲೇ ಯೋಲ್ ಕನ್ಬಾ ಲುಪ್ಸ, ಮನ್ವಯ ಸಮಿತಿ ಮತ್ತು ಅಲಯನ್ಸ್ ಫಾರ್ ಸೋಷಿಯಲಿಸ್ಟ್ ಯೂನಿಟಿ ಕಂಗ್ಲೀಪಾಕ್ ಅನ್ನು ನಿಷೇಧಿಸಲಾಗಿದೆ.

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ/ ಉಗ್ರ ಸಂಘಟನೆಗಳ ನಿಷೇಧಿಸಿದ ಕೇಂದ್ರ Read More »

ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಗೆ ಉಚಿತ ಪ್ರವಾಸ..! ಅಮಿತ್ ಶಾ ಭರವಸೆ

ಸಮಗ್ರ ಸಮಾಚಾರ: ಮಧ್ಯಪ್ರದೇಶ ಚುನಾವಣೆಗೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಜನತೆಗೆ ಗುಡ್​ ನ್ಯೂಸ್ ನೀಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ಶ್ರೀರಾಮನ ಉಚಿತ ದರ್ಶನ ವ್ಯವಸ್ಥೆಯ ಭರವಸೆ ನೀಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರಕ್ಕೆ ಹಂತ ಹಂತವಾಗಿ ಮಧ್ಯಪ್ರದೇಶದ ಜನರನ್ನು ಕರೆದುಕೊಂಡು ಹೋಗಲಾಗುವುದು ಎಂದು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಪ್ರಚಾರ ಕಾರ್ಯ ಚುರುಕುಗೊಳಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಗೆ ಉಚಿತ ಪ್ರವಾಸ..! ಅಮಿತ್ ಶಾ ಭರವಸೆ Read More »

ಮೌನ ದೀಪಾವಳಿ ಆಚರಿಸಿ ಮಾದರಿಯಾದ ಏಳು ಹಳ್ಳಿಗಳು

ಸಮಗ್ರ ನ್ಯೂಸ್: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಎಲ್ಲೆಡೆ ಪಟಾಕಿ ಸದ್ದುಗಳೇ ಕೇಳಿ ಬರುತ್ತವೆ. ಇದರ ವಾಯು ಮಾಲಿನ್ಯದ ಜತೆಗೆ ಶಬ್ದ ಮಾಲಿನ್ಯವನ್ನು ತರುತ್ತದೆ. ಇದೇ ರೀತಿ ಎಲ್ಲೆಡೆ ಸಂಭ್ರಮಾಚರಣೆ ನಡೆದರೆ, ತಮಿಳುನಾಡಿನ ಈ 7 ಹಳ್ಳಿಗಳ ಜನರು ಮಾತ್ರ ‘ಮೌನ ದೀಪಾವಳಿ’ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ. ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ಏಳು ಹಳ್ಳಿಗಳು ಕೇವಲ ದೀಪಗಳು ಹಚ್ಚುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸಿದ್ದಾರೆ. ಇಲ್ಲಿ ಹಸಿರು ಪಟಾಕಿಗಳನ್ನು ಹಚ್ಚಲಾಗಿದೆ. ಕಾರಣ ಈ

ಮೌನ ದೀಪಾವಳಿ ಆಚರಿಸಿ ಮಾದರಿಯಾದ ಏಳು ಹಳ್ಳಿಗಳು Read More »

ದೇಶವೇ ಬೆಳಗಿದರೂ ಇಲ್ಲಿ ಮಾತ್ರ 230 ವರ್ಷಗಳಿಂದ ದೀಪಾವಳಿ ಸಂಭ್ರಮವಿಲ್ಲ! ಮೇಲುಕೋಟೆಯ ಅಯ್ಯಂಗಾರ್ ಕುಟುಂಬ ಹೀಗೇಕೆ ಮಾಡುತ್ತಿದೆ?

ಸಮಗ್ರ ನ್ಯೂಸ್: ದೇಶವೇ ದೀಪಗಳಿಂದ ಜಗಮಗಿಸುತ್ತಿದ್ದು, ಎಲ್ಲೆಡೆ ಬೆಳಕಿನ-ಸುಡುಮದ್ದುಗಳ ಸಡಗರ ಕಂಡುಬರುತ್ತಿದ್ದರೆ ಇಲ್ಲೊಂದು ಕಡೆ ಮಾತ್ರ ವರ್ಷಗಟ್ಟಲೆ ಕಾಲದಿಂದ ದೀಪಾವಳಿ ಹಬ್ಬ ಆಚರಣೆಯನ್ನೇ ಮಾಡಿಲ್ಲ. ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆ ಗ್ರಾಮವೇ ಇಂಥದ್ದೊಂದು ಬೆಳವಣಿಗೆಗೆ ಸಾಕ್ಷಿಯಾಗಿದೆ. ಇಲ್ಲಿನ ಅಯ್ಯಂಗಾರ್ ಸಮುದಾಯ ಸುಮಾರು 230 ವರ್ಷಗಳಿಂದ ದೀಪಾವಳಿ ಹಬ್ಬ ಆಚರಿಸುತ್ತಿಲ್ಲ. ನರಕ ಚತುರ್ದಶಿಯ ವಾರ್ಷಿಕ ಹಬ್ಬ ಆಚರಿಸಲು 1790ರಲ್ಲಿ ಶ್ರೀರಂಗಪಟ್ಟಣದ ನರಸಿಂಹ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ 800 ಅಮಾಯಕ ನಿರಾಯುಧ ಅಯ್ಯಂಗಾರ್ ಬ್ರಾಹ್ಮಣರನ್ನು ಟಿಪ್ಪು ಸುಲ್ತಾನ್ ಹತ್ಯೆ ಮಾಡಿಸಿದ್ದನು.

ದೇಶವೇ ಬೆಳಗಿದರೂ ಇಲ್ಲಿ ಮಾತ್ರ 230 ವರ್ಷಗಳಿಂದ ದೀಪಾವಳಿ ಸಂಭ್ರಮವಿಲ್ಲ! ಮೇಲುಕೋಟೆಯ ಅಯ್ಯಂಗಾರ್ ಕುಟುಂಬ ಹೀಗೇಕೆ ಮಾಡುತ್ತಿದೆ? Read More »

ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಅಯ್ಯನ್ ಆ್ಯಪ್/ ಕೇರಳ ಅರಣ್ಯ ಇಲಾಖೆಯಿಂದ ಅಭಿವೃದ್ಧಿ

ಸಮಗ್ರ ನ್ಯೂಸ್: ಕೇರಳ ಅರಣ್ಯ ಇಲಾಖೆಯು ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಮಾರ್ಗದರ್ಶನ ನೀಡುವ ಸಲುವಾಗಿ ‘ಅಯ್ಯನ್’ ಎಂಬ ಹೊಸ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ. ಶಬರಿಮಲೆಗೆ ಬರುವ ಯಾತ್ರಿಕರು ಮುಂಬರುವ ಮಂಡಲ ಪೂಜೆ ಹಾಗೂ ಮಕರ ಸಂಕ್ರಾಂತಿ ಪೂಜೆ ಋತುವಿನಲ್ಲಿ ಈ ಆ್ಯಪ್ ಬಳಸಬಹುದಾಗಿದೆ. ಮಲಯಾಳಂ, ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲ ನಾಲ್ಕು ಭಾಷೆಗಳು ಹಾಗೂ ಹಿಂದಿಯಲ್ಲಿ ಮಾರ್ಗಸೂಚಿಗಳು ಮತ್ತು ಮಾಹಿತಿಯನ್ನು ನೀಡಲಿದೆ. ಪಂಪಾ – ಸನ್ನಿಧಾನಂ ಮಾರ್ಗಗಳಲ್ಲಿ ಲಭ್ಯವಿರುವ ಸೇವೆಗಳ ಕುರಿತು ಈ ಆ್ಯಪ್ ಮೂಲಕ

ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಅಯ್ಯನ್ ಆ್ಯಪ್/ ಕೇರಳ ಅರಣ್ಯ ಇಲಾಖೆಯಿಂದ ಅಭಿವೃದ್ಧಿ Read More »

ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ/ ಜನವರಿ 22ನ್ನು ಹಬ್ಬದಂತೆ ಆಚರಿಸಲು ಆರ್‍ಎಸ್‍ಎಸ್ ಕರೆ

ಸಮಗ್ರ ನ್ಯೂಸ್: 2024ರ ಜನವರಿ 22ರಂದು ಆಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದ್ದು, ಇದು ದೇಶದ ಜನರ ಪಾಲಿಗೆ ಸಂಭ್ರಮದ ಕ್ಷಣವಾಗಲಿದೆ. ಆದ್ದರಿಂದ ಈ ದಿನವನ್ನು ಹಬ್ಬದಂತೆ ಆಚರಣೆ ಮಾಡಬೇಕು ಎಂದು ಆರ್‍ಎಸ್‍ಎಸ್ ದೇಶದ ಜನರಿಗೆ ಕರೆ ನೀಡಿದೆ. ಆಯೋಧ್ಯೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಎಂಬುದು ನಮಗೊಂದು ಹಬ್ಬದ ಕ್ಷಣ. ಎಲ್ಲರಿಗೂ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಹತ್ತಿರದ ದೇವಸ್ಥಾನಗಳಿಗೆ ತೆರಳುವ ಮೂಲಕ ಸಂಭ್ರಮವನ್ನು ಆಚರಿಸಬೇಕು. ಆ ರಾತ್ರಿ ಎಲ್ಲರೂ ಮನೆಯಲ್ಲಿ ದೀಪ ಬೆಳಗಿಸಬೇಕು. ಇದು ದೇಶದ ಪ್ರತಿಯೊಬ್ಬ

ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ/ ಜನವರಿ 22ನ್ನು ಹಬ್ಬದಂತೆ ಆಚರಿಸಲು ಆರ್‍ಎಸ್‍ಎಸ್ ಕರೆ Read More »

ಇಂದು ಅಯೋಧ್ಯೆಯಲ್ಲಿ ಬೃಹತ್ ದೀಪೋತ್ಸವ/ 24 ಲಕ್ಷ ದೀಪಗಳಿಂದ ಬೆಳಗಲಿದೆ ರಾಮ ಜನ್ಮಭೂಮಿ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು ರಾತ್ರಿ ಬೃಹತ್ ದೀಪೋತ್ಸವ ನಡೆಯಲಿದ್ದು, 24 ಲಕ್ಷ ದೀಪಗಳಿಂದ ಸರಯೂ ನದಿ ತೀರ ಕಂಗೊಳಿಸಲಿದೆ. ಜಗತ್ತಿನಲ್ಲೇ ಪ್ರಥಮ ಬಾರಿ 24 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ರಾಮ ಜನ್ಮಭೂಮಿ ಗಿನ್ನಿಸ್ ದಾಖಲೆ ನಿರ್ಮಿಸಲು ಸಜ್ಜಾಗಿದೆ. ಅಯೋಧ್ಯೆಯ ಸರಯೂ ನದಿಯ ತೀರದ ಉದ್ದಕ್ಕೂ ದೀಪಗಳನ್ನು ಬೆಳಗಿಸಲಾಗುತ್ತದೆ. ರಾಮ್ ಮನೋಹರ್ ಲೋಹಿಯಾ ವಿಶ್ವವಿದ್ಯಾನಿಲಯವು ಈ ದೀಪೋತ್ಸವಕ್ಕೆ ಅದ್ಧೂರಿ ವ್ಯವಸ್ಥೆಯನ್ನು ಮಾಡಿದ್ದು, ಸರಯೂ ನದಿ ತೀರದ 51 ಘಾಟ್‍ಗಳಲ್ಲಿ 24 ಲಕ್ಷ ಮಣ್ಣಿನ

ಇಂದು ಅಯೋಧ್ಯೆಯಲ್ಲಿ ಬೃಹತ್ ದೀಪೋತ್ಸವ/ 24 ಲಕ್ಷ ದೀಪಗಳಿಂದ ಬೆಳಗಲಿದೆ ರಾಮ ಜನ್ಮಭೂಮಿ Read More »