ರಾಷ್ಟ್ರೀಯ

ಕಾಬೂಲ್ ನ ಆಸ್ಪತ್ರೆ ಮೇಲೆ ಪಾಕ್ ನಿಂದ ವೈಮಾನಿಕ ದಾಳಿ| 400 ಮಂದಿ ಸಾವು, ಹಲವರು ಗಂಭೀರ

ಸಮಗ್ರ ನ್ಯೂಸ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಮಾದಕ ವ್ಯಸನಿಗಳ ಚಿಕಿತ್ಸಾ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಸರ್ಕಾರ ಗಂಭೀರ ಆರೋಪ‌ ಮಾಡಿದೆ. ಕಳೆದ ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ಕಾಬೂಲ್‌ನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ನಗರದ ಶಹರ್-ಎ-ನಾವ್ ಮತ್ತು ವಜೀರ್ ಅಕ್ಬರ್ ಖಾನ್ ಪ್ರದೇಶಗಳಲ್ಲಿ ಹೊಗೆಯ ಮೋಡಗಳು ಕಂಡುಬಂದಿವೆ. ಪಾಕಿಸ್ತಾನದ ಯುದ್ಧ ವಿಮಾನಗಳು ನಡೆಸಿದ ಈ ದಾಳಿಯಲ್ಲಿ ಮಾದಕ […]

ಕಾಬೂಲ್ ನ ಆಸ್ಪತ್ರೆ ಮೇಲೆ ಪಾಕ್ ನಿಂದ ವೈಮಾನಿಕ ದಾಳಿ| 400 ಮಂದಿ ಸಾವು, ಹಲವರು ಗಂಭೀರ Read More »

ಭಾರತಕ್ಕೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ನಲ್ಲಿ ಇರಾನ್ ದಾಳಿ| ಘಟನೆಯನ್ನು ಖಂಡಿಸಿದ ಕೇಂದ್ರ ಸರ್ಕಾರ

ಸಮಗ್ರ ನ್ಯೂಸ್: ವಿಶ್ವದ ಅತ್ಯಂತ ನಿರ್ಣಾಯಕ ಸಮುದ್ರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ಥೈಲ್ಯಾಂಡ್‌ನ ವಾಣಿಜ್ಯ ಹಡಗು ‘ಮಯೂರಿ ನಾರಿ’ ಮೇಲೆ ನಡೆದ ‘ಪ್ರಚೋದನಕಾರಿಯಲ್ಲದ’ ದಾಳಿಯನ್ನು ಭಾರತ ಬುಧವಾರ ಬಲವಾಗಿ ಖಂಡಿಸಿದೆ. ಈ ಹಡಗು ಭಾರತದ ಪಶ್ಚಿಮ ಕರಾವಳಿಯ ಗುಜರಾತ್‌ನಲ್ಲಿರುವ ಪ್ರಮುಖ ಬಂದರಾದ ಕಾಂಡ್ಲಾಗೆ ಪ್ರಯಾಣಿಸುತ್ತಿತ್ತು. “ಭಾರತದ ಕಾಂಡ್ಲಾಗೆ ಬರುತ್ತಿದ್ದ ಹಡಗಿನ ಬಗ್ಗೆ ನಮಗೆ ವರದಿಗಳು ಲಭ್ಯವಾಗಿವೆ. ಮಾರ್ಚ್ 11 ರಂದು ಹಾರ್ಮುಜ್ ಜಲಸಂಧಿಯಲ್ಲಿ ಥೈಲ್ಯಾಂಡ್ ಹಡಗು ‘ಮಯೂರಿ ನಾರಿ’ ಮೇಲೆ ನಡೆದ ದಾಳಿಯನ್ನು ನಾವು ಗಮನಿಸಿದ್ದೇವೆ.

ಭಾರತಕ್ಕೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ನಲ್ಲಿ ಇರಾನ್ ದಾಳಿ| ಘಟನೆಯನ್ನು ಖಂಡಿಸಿದ ಕೇಂದ್ರ ಸರ್ಕಾರ Read More »

ದೊಡ್ಡಣ್ಣನಿಗೆ ಮುಟ್ಟಿ ನೋಡಿಕೊಳ್ಳುವ ಎಚ್ಚರಿಕೆ ನೀಡಿದ ಇರಾನ್| ಭೂಪಟದಲ್ಲಿ ಇಲ್ಲವಾಗದಂತೆ ನೋಡಿಕೊಳ್ಳಿ ಎಂದು ಕೌಂಟರ್

ಸಮಗ್ರ ನ್ಯೂಸ್: ಇಸ್ರೇಲ್ – ಅಮೆರಿಕ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಹರಿವಿಗೆ ಅಡ್ಡಿಪಡಿಸಬೇಡಿ ಎಂದ ಡೊನಾಲ್ಡ್ ಟ್ರಂಪ್ ಗೆ ಕೌಂಟರ್ ಕೊಟ್ಟಿದ್ದ ಇರಾನ್, ಇದೀಗ ಮತ್ತೊಂದು ವಾರ್ನಿಂಗ್ ಅನ್ನು ನೀಡಿದೆ. ಅಮೆರಿಕಾದ ಅಧ್ಯಕ್ಷರ ಬೆದರಿಕೆಗೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದ ಇರಾನ್’ನ ಹಿರಿಯ ಅಧಿಕಾರಿ, ಮೊದಲು ಭೂಪಟದಲ್ಲಿ ನೀವೇ ಇಲ್ಲವಾಗದಂತೆ ಎಚ್ಚರವಹಿಸಿ ಎನ್ನುವ ವಾರ್ನಿಂಗ್’ಅನ್ನು ನೀಡಿದ್ದಾರೆ. ಇರಾನ್ ಅಧಿಕಾರಿ ಅಲಿ ಲಾರಿಜಾನಿ ಸಾಮಾಜಿಕ ಜಾಲತಾಣದಲ್ಲಿ ವಾರ್ನಿಂಗ್ ನೀಡಿದ್ದಾರೆ. “ನಿಮ್ಮ ಖಾಲಿ

ದೊಡ್ಡಣ್ಣನಿಗೆ ಮುಟ್ಟಿ ನೋಡಿಕೊಳ್ಳುವ ಎಚ್ಚರಿಕೆ ನೀಡಿದ ಇರಾನ್| ಭೂಪಟದಲ್ಲಿ ಇಲ್ಲವಾಗದಂತೆ ನೋಡಿಕೊಳ್ಳಿ ಎಂದು ಕೌಂಟರ್ Read More »

ದುಬೈ: ಸಾಕುಪ್ರಾಣಿಗಳನ್ನು ಬಿಟ್ಟು ಪಲಾಯನ ಮಾಡುತ್ತಿರುವ ವಲಸಿಗರು| ಅನಾಥವಾದ ಮೂಕಪ್ರಾಣಿಗಳು

ಸಮಗ್ರ ನ್ಯೂಸ್: ಅಮೆರಿಕದ ಮಿತ್ರತ್ವ ಹಾಗೂ ಸೇನಾ ನೆಲೆ ಹೊಂದಿರುವ ಕಾರಣಕ್ಕೆ ಇರಾನ್‌ನಿಂದ ಯುಎಇ ಭೀಕರ ಕ್ಷಿಪಣಿದಾಳಿ ಎದುರಿಸುತ್ತಿದೆ. ಹೀಗಾಗಿ ಇಲ್ಲಿನ ವಲಸಿಗರು ಜೀವ ಉಳಿಸಿಕೊಳ್ಳಲು ಸ್ವದೇಶಕ್ಕೆ ಪಲಾಯನಗೈಯ್ಯುತ್ತಿದ್ದಾರೆ. ಆದರೆ ತಾವು ಸಾಕಿದ ಪ್ರಾಣಿಗಳನ್ನು ಅನಿವಾರ್ಯವಾಗಿ ಬೀದಿಪಾಲು ಮಾಡಿ ಓಡಿ ಹೋಗುತ್ತಿದ್ದಾರೆ. ಮಿಸೈಲ್‌ಗಳ ಮಳೆಯಿಂದ ಪಾರಾಗಲು ನಗರ ಅಥವಾ ದೇಶವನ್ನೇ ತೊರೆಯಲು ಮುಂದಾಗಿರುವ ಜನ, ಪ್ರಾಣಿದಯಾ ಸಂಘಗಳು ಮತ್ತು ಅವುಗಳಿಗೆ ಆಶ್ರಯ ಒದಗಿಸುವ ಸಂಸ್ಥೆಗಳಿಗೆ ಕರೆ ಮಾಡಿ, ತಾವು ಸಾಕಿದ್ದ ಅಥವಾ ದತ್ತು ಪಡೆದಿದ್ದ ಬೆಕ್ಕು, ನಾಯಿಯಂತಹ

ದುಬೈ: ಸಾಕುಪ್ರಾಣಿಗಳನ್ನು ಬಿಟ್ಟು ಪಲಾಯನ ಮಾಡುತ್ತಿರುವ ವಲಸಿಗರು| ಅನಾಥವಾದ ಮೂಕಪ್ರಾಣಿಗಳು Read More »

ಮಾತುಕತೆ ಮೂಲಕ ಯುದ್ಧ ನಿಲ್ಲಿಸಿ: ಭಾರತ ಕರೆ

ಸಮಗ್ರ‌ ನ್ಯೂಸ್: ‘ಭಾರತ ಶಾಂತಿಯನ್ನು ಬೆಂಬಲಿಸುತ್ತದೆ. ಯುದ್ಧಗ್ರಸ್ತವಾಗಿರುವ ಅಮೆರಿಕ-ಇಸ್ರೇಲ್‌ ಹಾಗೂ ಇರಾನ್‌ ದೇಶಗಳಿಗೆ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಮರಳುವಂತೆ ಒತ್ತಾಯಿಸುತ್ತದೆ. ಉದ್ವಿಗ್ನತೆಯನ್ನು ಕಡಿಮೆ ಮಾಡುವುದು, ಸಂಯಮ ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದನ್ನು ನಾವು ಪ್ರತಿಪಾದಿಸುತ್ತೇವೆ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್‌ ಸೋಮವಾರ ತಿಳಿಸಿದ್ದಾರೆ. ಸಂಸತ್‌ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಮಾತನಾಡಿದ ಅವರು, ‘ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಅನುಸರಿಸಬೇಕು ಎಂದು ನಾವು ನಂಬಿದ್ದೇವೆ. ಮುಂದೆಯೂ ನಂಬುತ್ತೇವೆ. ಭಾರತ ಶಾಂತಿಯನ್ನು

ಮಾತುಕತೆ ಮೂಲಕ ಯುದ್ಧ ನಿಲ್ಲಿಸಿ: ಭಾರತ ಕರೆ Read More »

‘ಅಣ್ವಸ್ತ್ರದ ಬಟನ್ ಯಾವಾಗಲೂ ನನ್ನ ಮೇಜಿನ ಮೇಲಿರುತ್ತೆ’| ಅಮೇರಿಕಾ ವಿರುದ್ಧ ಗುಡುಗಿದ ಕಿಮ್ ಜಾಂಗ್ ಉನ್

ಸಮಗ್ರ ನ್ಯೂಸ್: ‘ಅಣ್ವಸ್ತ್ರದ ಬಟನ್ ಯಾವಾಗಲೂ ನನ್ನ ಮೇಜಿನ ಮೇಲಿರುತ್ತದೆ. ಅಮೆರಿಕದ ಎಲ್ಲಾ ಪ್ರದೇಶಗಳು ನಮ್ಮ ಅಣ್ವಸ್ತ್ರ ವ್ಯಾಪ್ತಿಯಲ್ಲಿವೆ. ನಾವು ಯಾವುದೇ ಎಚ್ಚರಿಕೆ ಇಲ್ಲದೆ ಅಮೆರಿಕದ ಯಾವುದೇ ಸ್ಥಳವನ್ನು ಹೊಡೆಯಬಹುದು’ ಎಂದು ಕಿಮ್ ಜಾಂಗ್ ಉನ್ ಎಚ್ಚರಿಕೆ ನೀಡಿದ್ದಾರೆ. ‘ಶತ್ರುಗಳು ಎಂದೂ ನೋಡಿರದ ಭಯವನ್ನು ಅನುಭವಿಸುತ್ತಾರೆ. ಇದು ಬೆದರಿಕೆಯಲ್ಲ, ಆದರೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಅರ್ಥಮಾಡಿಕೊಳ್ಳಬೇಕಾದ ವಾಸ್ತವ’ ಎಂದು ಹೇಳಿದ್ದಾರೆ. ‘ಈ ಘರ್ಷಣೆ ಇನ್ನು ಮುಂದೆ ಕೊರಿಯನ್ ಪರ್ಯಾಯ ದ್ವೀಪಕ್ಕೆ ಮಾತ್ರ ಸೀಮಿತವಾಗಿಲ್ಲ. ವಾಷಿಂಗ್ಟನ್ ಮತ್ತು

‘ಅಣ್ವಸ್ತ್ರದ ಬಟನ್ ಯಾವಾಗಲೂ ನನ್ನ ಮೇಜಿನ ಮೇಲಿರುತ್ತೆ’| ಅಮೇರಿಕಾ ವಿರುದ್ಧ ಗುಡುಗಿದ ಕಿಮ್ ಜಾಂಗ್ ಉನ್ Read More »

ಇರಾನ್ ನ ನೂತನ ಸರ್ವೋಚ್ಚ ನಾಯಕನಾಗಿ ಖಮೇನಿ ಪುತ್ರ ಮೊಜ್ತಬಾ ಹೊಸೇನಿ‌ ಆಯ್ಕೆ

ಸಮಗ್ರ ನ್ಯೂಸ್: ಅಮೆರಿಕ ಮತ್ತು ಇಸ್ರೇಲ್​ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಅಯತೊಲ್ಲಾ ಖಮೇನಿ ಹತ್ಯೆಯಾದ ಬಳಿಕ ಅವರ ಪುತ್ರ ಮೊಜ್ತಬಾ ಹೊಸೇನಿ ಅವರನ್ನು ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಇರಾನಿನ ಸಂವಿಧಾನದ ಪ್ರಕಾರ, 88 ಹಿರಿಯ ಇಸ್ಲಾಮಿಕ್ ವಿದ್ವಾಂಸರನ್ನು ಒಳಗೊಂಡ ಪ್ರಬಲ ಪಾದ್ರಿ ಸಂಸ್ಥೆಯಾದ ತಜ್ಞರ ಸಭೆಯು ಮೊಜ್ತಬಾ ಹೊಸೇನಿ ಅವರನ್ನು ಅಯತೊಲ್ಲಾ ಖಮೇನಿಯ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದೆ. ಇರಾನ್‌ನ ಸರ್ವೋಚ್ಚ ನಾಯಕ, ಇಸ್ಲಾಮಿಕ್ ಗಣರಾಜ್ಯದ ಅತ್ಯಂತ ಶಕ್ತಿಶಾಲಿ ವ್ಯಕ್ತಿ. ಸಶಸ್ತ್ರ ಪಡೆಗಳು, ಭದ್ರತಾ ಸೇವೆಗಳು ಮತ್ತು

ಇರಾನ್ ನ ನೂತನ ಸರ್ವೋಚ್ಚ ನಾಯಕನಾಗಿ ಖಮೇನಿ ಪುತ್ರ ಮೊಜ್ತಬಾ ಹೊಸೇನಿ‌ ಆಯ್ಕೆ Read More »

ಅಸ್ಸಾಂ: ಪತನಗೊಂಡ ಸುಖೋಯ್ 30 ಯುದ್ಧ ವಿಮಾನ; ಪೈಲಟ್ ಗಳು ಕಣ್ಮರೆ

ಸಮಗ್ರ ನ್ಯೂಸ್: ಅಸ್ಸಾಂನ ಜೋರ್ಹಟ್ ನಿಂದ ಗುರುವಾರ ಸಂಜೆ ಟೇಕಾಫ್ ಆಗಿ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿದುಕೊಂಡಿದ್ದ ಸುಖೋಯ್-30 ಯುದ್ಧವಿಮಾನ ಕರ್ಬಿ ಅಗ್ಲಾಂಗ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಭಾರತೀಯ ವಾಯುಪಡೆ ಪ್ರಕಟಿಸಿದೆ. ಜೋರ್ಹಟ್ ನಿಂದ 60 ಕಿಲೋಮೀಟರ್ ದೂರದಲ್ಲಿ ತರಬೇತಿ ನೀಡುತ್ತಿದ್ದ ಯುದ್ಧವಿಮಾನ ಪತಗೊಂಡಿದ್ದು, ಇಬ್ಬರು ಪೈಲಟ್ ಗಳ ಸುಳಿವು ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಅಸ್ಸಾಂನ ವಾಯುನೆಲೆಯಿಂದ ಟೇಕಾಫ್ ಆದ ಬಳಿಕ ಸುಖೋಯ್-30 ಎಂಕೆಐ ಯುದ್ಧವಿಮಾನ ಗುರುವಾರ ರಾತ್ರಿ ಸಂಪರ್ಕ ಕಡಿದುಕೊಂಡಿತ್ತು. ವ್ಯಾಪಕ ಶೋಧ ಕಾರ್ಯಾಚರಣೆ ಹಾಗೂ

ಅಸ್ಸಾಂ: ಪತನಗೊಂಡ ಸುಖೋಯ್ 30 ಯುದ್ಧ ವಿಮಾನ; ಪೈಲಟ್ ಗಳು ಕಣ್ಮರೆ Read More »

ತೈಲ‌ ಆಮದಿನಲ್ಲಿ ಭಾರತಕ್ಕೆ ಬಿಗ್ ರಿಲೀಫ್ ನೀಡಿದ ಇರಾನ್

ಸಮಗ್ರ ನ್ಯೂಸ್: ಜಗತ್ತಿಗೆ ತೈಲ ಮತ್ತು ಇತರ ಸರಕುಗಳ ಪ್ರಮುಖ ಸಾರಿಗೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಕುರಿತು ಇರಾನ್ ಪ್ರಮುಖ ಹೇಳಿಕೆ ನೀಡಿದೆ. ಈ ಜಲಸಂಧಿಯನ್ನು ನಿಯಂತ್ರಿಸುವ ಅಧಿಕಾರ ನಮಗಿದೆ ಎಂದು ಅದು ಸ್ಪಷ್ಟಪಡಿಸಿದೆ. ಇತ್ತೀಚಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ದೇಶಗಳಿಗೆ ತೈಲ ಸರಬರಾಜನ್ನು ನಿಲ್ಲಿಸಲು ಬಯಸುವುದಿಲ್ಲ ಮತ್ತು ಅಮೆರಿಕ, ಇಸ್ರೇಲ್ ಮತ್ತು ಯುರೋಪ್‌’ಗೆ ಹೋಗುವ ಹಡಗುಗಳಿಗೆ ಮಾತ್ರ ಈ ಮಾರ್ಗದ ಮೂಲಕ ಹಾದುಹೋಗಲು ಅವಕಾಶ ನೀಡುವುದಾಗಿ ಮತ್ತು ಇತರ ದೇಶಗಳಿಗೆ ಸಾರಿಗೆಯನ್ನ ಅನುಮತಿಸುವುದಾಗಿ ಅದು ಹೇಳಿದೆ.

ತೈಲ‌ ಆಮದಿನಲ್ಲಿ ಭಾರತಕ್ಕೆ ಬಿಗ್ ರಿಲೀಫ್ ನೀಡಿದ ಇರಾನ್ Read More »

16ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆ ಬ್ಯಾನ್ – ಸಿಎಂ

ಸಮಗ್ರ ನ್ಯೂಸ್: ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಶಾಲಾ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಅತ್ಯಂತ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದೆ. ವಿಪರೀತವಾಗುತ್ತಿರುವ ಮೊಬೈಲ್ ಗೀಳು ಹಾಗೂ ಸಾಮಾಜಿಕ ಜಾಲತಾಣಗಳ ದಾಸ್ಯದಿಂದ ಎಳೆಯ ಮನಸ್ಸುಗಳನ್ನು ಪಾರುಮಾಡುವ ಉದ್ದೇಶದಿಂದ ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಿತಿಮೀರುತ್ತಿದ್ದು, ಇದು ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಮೇಲೆ ತೀವ್ರ ಸ್ವರೂಪದ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದೆ. ಈ ಗಂಭೀರ ಸಮಸ್ಯೆಯನ್ನು ಮನಗಂಡಿರುವ

16ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆ ಬ್ಯಾನ್ – ಸಿಎಂ Read More »